Tag: ಕೆನರಾ ಬ್ಯಾಂಕ್

  • ಮತ್ತೊಮ್ಮೆ ಬ್ಯಾಂಕ್ ಗಳ ವಿಲೀನ: ಯಾವ ಬ್ಯಾಂಕ್ ಜೊತೆ ಯಾವ ಬ್ಯಾಂಕ್ ಗಳು ವಿಲೀನ?

    ಮತ್ತೊಮ್ಮೆ ಬ್ಯಾಂಕ್ ಗಳ ವಿಲೀನ: ಯಾವ ಬ್ಯಾಂಕ್ ಜೊತೆ ಯಾವ ಬ್ಯಾಂಕ್ ಗಳು ವಿಲೀನ?

    ನವದೆಹಲಿ: ಸಾರ್ವಜನಿಕ ವಲಯದಲ್ಲಿರುವ 21 ಬ್ಯಾಂಕ್ ಗಳನ್ನು 12ಕ್ಕೆ ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮತ್ತೊಂದು ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ 5 ಬ್ಯಾಂಕ್ ಗಳು ವಿಲೀನ ಪ್ರಕ್ರಿಯೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮತ್ತಷ್ಟು ಬ್ಯಾಂಕ್ ಗಳನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

    ಮೂರು ಬ್ಯಾಂಕ್ ಗಳನ್ನು ಒಂದು ಬ್ಯಾಂಕಿನಲ್ಲಿ ವಿಲೀನಗೊಳಿಸುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಝೀ ಬಿಸಿನೆಸ್ ವಾಹಿನಿಯು ಯಾವೆಲ್ಲ ಬ್ಯಾಂಕ್ ಗಳು ಯಾವ ಬ್ಯಾಂಕ್ ಜೊತೆ ವಿಲೀನಗೊಳ್ಳಲಿದೆ ಎನ್ನುವ ವರದಿಯನ್ನು ಪ್ರಕಟಿಸಿದೆ.

    21 ಸಣ್ಣ ಪುಟ್ಟ ಬ್ಯಾಂಕ್ ಗಳ ಬದಲಿಗೆ 12 ದೊಡ್ಡ ಬ್ಯಾಂಕ್ ಗಳನ್ನು ಸೃಷ್ಟಿಸಲು ಸರ್ಕಾರ ಮುಂದಾಗಿದೆ. ಎಸ್‍ಬಿಐ ವಿಲೀನದಂತೆ ಮತ್ತಷ್ಟು ಬ್ಯಾಂಕ್ ಗಳನ್ನು ಮುಂದೆ ವಿಲೀನ ಮಾಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಜೂನ್ ಮೊದಲ ವಾರದಲ್ಲಿ ಹೇಳಿಕೆ ನೀಡಿದ್ದರು.

    ಯಾವ ಬ್ಯಾಂಕ್ ಯಾವ ಬ್ಯಾಂಕ್ ಜೊತೆ ವಿಲೀನ
    1. ಯುನೈಟೆಡ್ ಬ್ಯಾಂಕ್ + ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ —-> ಬ್ಯಾಂಕ್ ಆಫ್ ಬರೋಡಾ
    2. ಸಿಂಡಿಕೇಟ್ ಬ್ಯಾಂಕ್ + ಇಂಡಿಯನ್ ಓವರ್‍ಸೀಸ್ ಬ್ಯಾಂಕ್ + ಯುಕೋ ಬ್ಯಾಂಕ್ —-> ಕೆನರಾ ಬ್ಯಾಂಕ್
    3. ಐಡಿಬಿಐ ಬ್ಯಾಂಕ್ + ಸೆಂಟ್ರಲ್ ಬ್ಯಾಂಕ್ + ದೆನಾ ಬ್ಯಾಂಕ್ —-> ಯೂನಿಯನ್ ಬ್ಯಾಂಕ್
    4. ಆಂಧ್ರ ಬ್ಯಾಂಕ್ + ಬ್ಯಾಂಕ್ ಆಫ್ ಮಹಾರಾಷ್ಟ್ರ+ ವಿಜಯ ಬ್ಯಾಂಕ್ —-> ಬ್ಯಾಂಕ್ ಆಫ್ ಇಂಡಿಯಾ

    ಬ್ಯಾಂಕ್ ಗಳು ಎಸ್‍ಬಿಐ ಜೊತೆ ವಿಲೀನವಾಗಿದ್ದು ಯಾಕೆ?
    ವಿಶ್ವದ ಟಾಪ್ 50 ಪಟ್ಟಿಯಲ್ಲಿ ಭಾರತದ ಯಾವೊಂದು ಬ್ಯಾಂಕ್ ಸ್ಥಾನ ಪಡೆದಿಲ್ಲ. ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಎಸ್‍ಬಿಐ ಮುಂದಾಗುತ್ತಿದ್ದು, ಕೇಂದ್ರದ ಒಪ್ಪಿಗೆಯ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳ ವಿಲೀನ ಪ್ರಕ್ರಿಯೆ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್‍ಬಿಎಂ), ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಹಾಗೂ ಜೈಪುರ್ (ಎಎಸ್‍ಬಿಜೆ), ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್(ಎಸ್‍ಟಿ), ಸ್ಟೇಟ್ ಬ್ಯಾಂಕ್ ಪಟಿಯಾಲಾ (ಎಎಸ್‍ಬಿಪಿ), ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಎಸ್‍ಬಿಎಚ್)ಹಾಗೂ ಭಾರತೀಯ ಮಹಿಳಾ ಬ್ಯಾಂಕ್ (ಬಿಬಿಎಂ)ಗಳು ಎಸ್‍ಬಿಐ ಜೊತೆ ಏಪ್ರಿಲ್ 1ರಂದು ವಿಲೀನವಾಗಿತ್ತು.

  • ಕುರಾನ್ ಪ್ರತಿ ಹರಿದು ಬ್ಯಾಂಕ್ ಚಲನ್ ಮುದ್ರಣ – ಆರೋಪಿ ಪೊಲೀಸರ ವಶಕ್ಕೆ

    ಕುರಾನ್ ಪ್ರತಿ ಹರಿದು ಬ್ಯಾಂಕ್ ಚಲನ್ ಮುದ್ರಣ – ಆರೋಪಿ ಪೊಲೀಸರ ವಶಕ್ಕೆ

    ಮೈಸೂರು: ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ನ ಪ್ರತಿಗಳನ್ನು ಹರಿದು ಅದರಲ್ಲಿ ರಾಷ್ಟ್ರೀಕೃತ ಬ್ಯಾಂಕಿನ ಚಲನ್ ಮುದ್ರಿಸಿರುವ ಪ್ರಕರಣ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಕೆ.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನ ಶಾಖೆಯಲ್ಲಿ ಇಂತಹ ಚಾಲನ್ ಪ್ರತಿಗಳು ಲಭ್ಯವಾಗಿವೆ.

    ಕುರಾನ್ ಹಾಳೆಗಳ ಒಂದು ಭಾಗ ಖಾಲಿ ಇರುತ್ತೆ. ಆ ಹಾಳೆ ಕತ್ತರಿಸಿ ಅದರಲ್ಲಿ ಬ್ಯಾಂಕ್ ಚಾಲನ್ ಮುದ್ರಿಸಿರುವ ಘಟನೆ ನಡೆದಿದೆ. ಹಣ ತುಂಬುವ ಚಲನ್‍ಗಳ ಹಿಂಭಾಗ ಪವಿತ್ರ ಖುರಾನ್ ನ ಸಂದೇಶಗಳ ಪ್ರಿಂಟ್ ಇರುವುದು ಕಂಡ ಮುಸ್ಲಿಂ ಸಮುದಾಯದ ಜನ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎನ್.ಆರ್.ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ ಬ್ಯಾಂಕ್ ನ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಚಲನ್ ಗಳನ್ನ ಒದಗಿಸಿದ ನವೀನ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮುದ್ರಣಕ್ಕೆ ಬಳಸುವ ಹಾಳೆಯ ವೆಚ್ಚ ಉಳಿಸಲು ನವೀನ್ ಹೀಗೆ ಕುರಾನ್ ಪ್ರತಿಗಳನ್ನು ಹರಿದು ಅದರಲ್ಲೇ ಬ್ಯಾಂಕ್ ಚಲನ್ ಮುದ್ರಿಸಿದ್ದಾನೆ ಎಂದು ಹೇಳಲಾಗಿದೆ.

    ಇದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಕೃತ್ಯವೆಂದು ಆರೋಪಿಸಿದ ಕೆಲ ಯುವಕರು ಬ್ಯಾಂಕಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.