Tag: ಕೆಜಿಎಫ್

  • ಕೆಜಿಎಫ್ ದೊಡ್ಡ ಕಾಣಿಕೆ ಎಂದ್ರು ಪುನೀತ್- ನಟಸಾರ್ವಭೌಮ ಚಿಂದಿ ಅಂದ ಯಶ್

    ಕೆಜಿಎಫ್ ದೊಡ್ಡ ಕಾಣಿಕೆ ಎಂದ್ರು ಪುನೀತ್- ನಟಸಾರ್ವಭೌಮ ಚಿಂದಿ ಅಂದ ಯಶ್

    ಬೆಂಗಳೂರು: ವಿಶ್ವಾದ್ಯಂತ ತೆರೆಕಂಡು ಸಾಕಷ್ಟು ಸದ್ದು ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ದೊಡ್ಡ ಕಾಣಿಕೆ ಎಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ. ಈ ವೇಳೆ ಯಶ್ ನಟಸಾರ್ವಭೌಮ ಚಿತ್ರ ಚಿಂದಿ ಎಂದು ಪ್ರತಿಕ್ರಿಯಿಸಿದ್ದಾರೆ.

    “ಕನ್ನಡ ಚಿತ್ರರಂಗಕ್ಕೆ ಕೆಜಿಎಫ್ ಮೂಲಕ ದೊಡ್ಡ ಕಾಣಿಕೆಯನ್ನು ಕೊಟ್ಟ ಹೊಂಬಾಳೆ ಫಿಲ್ಮ್ ಹಾಗೂ ಕೆಜಿಎಫ್ ತಂಡಕ್ಕೆ ನನ್ನ ಶುಭಾಶಯಗಳು. ಯಶ್, ಪ್ರಶಾಂತ್ ನೀಲ್ ನಿಮಗೆ ಶುಭಾಶಯಗಳು ಹಾಗೂ ಕನ್ನಡ ಚಿತ್ರರಂಗದ ಸಾಮಥ್ರ್ಯ ಮತ್ತು ಅದರ ವ್ಯಾಪ್ತಿಯನ್ನು ತೋರಿಸಿದ ವಿಜಯ್ ಸರ್ ನಿಮ್ಮ ಮೇಲೆ ನನಗೆ ಹೆಮ್ಮೆಯಿದೆ” ಎಂದು ಪುನೀತ್ ರಾಜ್‍ಕುಮಾರ್ ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.

    ಈ ಟ್ವೀಟ್‍ಗೆ ಯಶ್ ಪ್ರತಿಕ್ರಿಯಿಸಿ, “ಧನ್ಯವಾದಗಳು ಸರ್. ಈ ಮಾತುಗಳು ನನಗೆ ತುಂಬಾ ಮುಖ್ಯವಾಗುತ್ತದೆ. ನಿಮ್ಮ ನಟಸಾರ್ವಭೌಮ ಚಿತ್ರದ ಟೀಸರ್ ನೋಡಿದೆ. ಚಿಂದಿ ಉಡಾಯಿಸುವ ಆಗಿದೆ. ಈ ಚಿತ್ರಕ್ಕಾಗಿ ನಾನು ಕಾಯುತ್ತಿದ್ದೇನೆ” ಎಂದು ಯಶ್ ರೀ-ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ.

    ಕೆಜಿಎಫ್ ಸಿನಿಮಾ ಬಿಡುಗಡೆ ದಿನ ಪುನೀತ್ ರಾಜ್‍ಕುಮಾರ್ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಲೈವ್ ವಿಡಿಯೋ ಮಾಡಿ “ಕೆಜಿಎಫ್ ಚಿತ್ರತಂಡಕ್ಕೆ ಶುಭಾಶಯ. ಅಲ್ಲದೇ ನನ್ನ ಗೆಳೆಯ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ವಿಜಯ್ ಸರ್ ಗೂ ಶುಭಾಶಯ ಕೆಜಿಎಫ್ ಗೆ ಒಳ್ಳೆದಾಗಲಿ” ಎಂದು ಚಿತ್ರಕ್ಕೆ ಶುಭಹಾರೈಸಿದ್ದರು.

    ಕೆಜಿಎಫ್ ಸಿನಿಮಾ ಒಟ್ಟು 5 ಭಾಷೆಯಲ್ಲಿ ಶುಕ್ರವಾರ ಬರೋಬ್ಬರಿ 2000ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ ಸುಮಾರು 30 ಕೋಟಿ ಹಣವನ್ನು ಬಾಕ್ಸ್ ಆಫೀಸ್‍ನಲ್ಲಿ ತುಂಬಿಸಿಕೊಂಡಿದ್ದು, ಕೇವಲ ಮೂರು ದಿನದಲ್ಲಿ 60 ಕೋಟಿ ಗೂ ಹೆಚ್ಚು ಕಲೆಕ್ಷನ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ಚಿತ್ರ ನೋಡಿ ಯಶ್ ನಟನೆಗೆ ಮನಸೋತ ಬಾಲಿವುಡ್ ನಟಿ

    ಕೆಜಿಎಫ್ ಚಿತ್ರ ನೋಡಿ ಯಶ್ ನಟನೆಗೆ ಮನಸೋತ ಬಾಲಿವುಡ್ ನಟಿ

    ಬೆಂಗಳೂರು: ವಿಶ್ವಾದ್ಯಂತ ತೆರೆಕಂಡು ಸಾಕಷ್ಟು ಸದ್ದು ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾಗೆ ಬಾಲಿವುಡ್ ನಟಿ ರವೀನಾ ಟಂಡನ್ ಮನ ಸೋತಿದ್ದಾರೆ.

    ಕೆಜಿಎಫ್ ಸಿನಿಮಾವನ್ನು ನಟಿ ರವೀನಾ ಟಂಡನ್ ಅವರು ವೀಕ್ಷಿಸಿ ರಾಕಿಂಗ್ ಸ್ಟಾರ್ ಯಶ್ ನಟನೆಗೆ ಮನಸೋತು ಟ್ವಿಟ್ಟರಿನಲ್ಲಿ ಮೆಚ್ಚುಗೆಯ ಮತುಗಳನ್ನಾಡಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    ಕೆಜಿಎಫ್ ಚಿತ್ರದ ಪೋಸ್ಟರ್ ಹಾಕಿರುವ ರವೀನಾ, “ಈ ಸಿನಿಮಾವನ್ನು ಎಲ್ಲರೂ ನೋಡಲೇಬೇಕು.  ದೇಶ್ಯಾದ್ಯಂತ ಈ ಸಿನಿಮಾ ಹೆಚ್ಚು ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಯಶ್, ನೀವು ಅದ್ಭುತವಾಗಿ ನಟಿಸಿದ್ದೀರಾ ಎಂದು ಟ್ವೀಟ್ ಮಾಡಿದ್ದಾರೆ.

    ರವೀನಾ ಅವರ ಟ್ವೀಟ್‍ಗೆ ಯಶ್ ಪ್ರತಿಕ್ರಿಯಿಸಿ, ತುಂಬಾ ಧನ್ಯವಾದಗಳು ಮೇಡಂ. ನಿಮ್ಮ ಟ್ವೀಟ್ ಓದಲು ನನಗೆ ಹೆಮ್ಮೆಯಾಗುತ್ತಿದೆ. ಅನಿಲ್ ತದಾನಿ ಸರ್ ಕೆಜಿಎಫ್ ಸಿನಿಮಾವನ್ನು ಸಾಕಷ್ಟು ಸಪೋರ್ಟ್ ಮಾಡಿದ್ದಾರೆ ಎಂದು ರೀ-ಟ್ವೀಟ್ ಮಾಡಿದ್ದಾರೆ.

    ಕೆಜಿಎಫ್ ಸಿನಿಮಾ ಒಟ್ಟು 5 ಭಾಷೆಯಲ್ಲಿ ಶುಕ್ರವಾರ ಬರೋಬ್ಬರಿ 2000ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ ಸುಮಾರು 30 ಕೋಟಿ ಹಣವನ್ನು ಬಾಕ್ಸ್ ಆಫೀಸ್‍ನಲ್ಲಿ ತುಂಬಿಸಿಕೊಂಡಿದ್ದು, ಕೇವಲ ಮೂರು ದಿನದಲ್ಲಿ 60 ಕೋಟಿ ಗೂ ಹೆಚ್ಚು ಕಲೆಕ್ಷನ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಝೀರೋ’ ಗೆ ಭರ್ಜರಿ ಫೈಟ್ ನೀಡಿದ ‘ಕೆಜಿಎಫ್’

    ‘ಝೀರೋ’ ಗೆ ಭರ್ಜರಿ ಫೈಟ್ ನೀಡಿದ ‘ಕೆಜಿಎಫ್’

    – 3 ದಿನದಲ್ಲಿ 60 ಕೋಟಿ ಕಲೆಕ್ಷನ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ದೇಶ-ವಿದೇಶದಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಮಾಡಿದ್ದು, ಬಾಲಿವುಡ್‍ನ ನಟ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾಗೆ ಭರ್ಜರಿ ಫೈಟ್ ನೀಡಿದೆ.

    ‘ಕೆಜಿಎಫ್’ ಸಿನಿಮಾ ಪಂಚಭಾಷೆಯಲ್ಲಿ ಇದೇ ಶುಕ್ರವಾರ ಬಿಡುಗಡೆಗೊಂಡಿತ್ತು. ಅದೇ ದಿನ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾ ಕೂಡ ಬಿಡುಗಡೆಯಾಗಿತ್ತು. ಆದರೆ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ‘ಝೀರೋ’ ಸಿನಿಮಾವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಇದನ್ನೂ ಓದಿ: ಗಲ್ಲಾ ಪೆಟ್ಟಿಗೆಯಲ್ಲೂ ರಾಕಿಯ ಆರ್ಭಟ- ಹಿಂದಿಯಲ್ಲಿ ಫಸ್ಟ್ ಡೇ 2.10 ಕೋಟಿ

    ‘ಕೆಜಿಎಫ್’ ಸಿನಿಮಾ ಬಿಡುಗಡೆಯಾದ ಮೊದಲ ದಿವವೇ ಸುಮಾರು 30 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಬಳಿಕ ಶನಿವಾರ ಮತ್ತು ಭಾನುವಾರ ವೀಕೆಂಡ್ ಇದ್ದ ಕಾರಣ ಮೂರು ದಿನಗಳಲ್ಲಿ ‘ಕೆಜಿಎಫ್’ ಸಿನಿಮಾ 60 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕ ವಿಜಯ ಕಿರಗಂದೂರು ತಿಳಿಸಿದ್ದಾರೆ. ಇದನ್ನೂ ಓದಿ:’ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್

    ಮೊದಲನೇ ದಿನ 24 ಕೋಟಿ ರೂ. ಗಳಿಸಿದರೆ, ಎರಡನೇ ದಿನ ಮತ್ತು ಮೂರನೇ ದಿನ 20-21 ಕೋಟಿ ರೂ. ಗಳಿಸಿದ್ದು, ಮೂರು ದಿನಗಳಲ್ಲಿ ಸುಮಾರು 60 ಕೋಟಿ ರೂ. ಗಳಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೇ ಹಿಂದಿಯಲ್ಲೂ ಕೂಡ ಕಲೆಕ್ಷನ್ ಅಧಿಕವಾಗಿದ್ದು, ಕನ್ನಡ ಸಿನಿಮಾಗೆ ಬೇರೆ ಭಾಷೆಯಲ್ಲೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

    ಕನ್ನಡದ ಕೆಜಿಎಫ್ ಸಿನಿಮಾ ಝೀರೋ ಸಿನಿಮಾಗೆ ತೀವ್ರ ಪೈಪೋಟಿ ಕೊಟ್ಟಿದ್ದು, ಇದರಿಂದ ಝೀರೋ ಸಿನಿಮಾದ ಕಲೆಕ್ಷನ್ ಕಡಿಮೆಯಾಗಿದೆ. ಮೊದಲ ದಿನವೇ ಕೆಜಿಎಫ್ 24 ಕೋಟಿ ರೂ. ಗಳಿಸಿತ್ತು. ಭಾರತದಲ್ಲಿ 18 ಕೋಟಿ, ಕನ್ನಡದಲ್ಲಿಯೇ 12.5 ಕೋಟಿ ರೂ ಗಳಿಸಿತ್ತು. ವೀಕೆಂಡ್ ಇದ್ದ ಕಾರಣ ಸುಮಾರು 40 ಕೋಟಿ ಹಣವನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಝೀರೋ ಸಿನಿಮಾ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಕೇವಲ 38 ಕೋಟಿ ರೂ. ಕೆಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

    ದಿನದಿಂದ ದಿನಕ್ಕೆ ಪ್ರೇಕ್ಷಕರು ಕೂಡ ಹೆಚ್ಚಾಗುತ್ತಿದ್ದಾರೆ. ಆದ್ದರಿಂದ ಪರಭಾಷೆ ಸಿನಿಮಾಗೆ ಕನ್ನಡ ಸಿನಿಮಾ ಪೈಪೋಟಿ ನೀಡಿದೆ. ಹಿಂದಿ ಭಾಷೆಯಲ್ಲಿ ಕೆಜಿಎಫ್ ಮೊದಲ ದಿನವೇ 2.1 ಕೋಟಿ ರೂ. ಗಳಿಸಿದ್ದು, ಎರಡನೇ ದಿನ 3 ಕೋಟಿ ರೂ. ಗಳಿಸಿತ್ತು ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೇರ್‌ಸ್ಟೈಲ್‌ನಲ್ಲೇ `ರಾಕಿ ಭಾಯ್’ ಗೆ ಸಲಾಂ..!

    ಹೇರ್‌ಸ್ಟೈಲ್‌ನಲ್ಲೇ `ರಾಕಿ ಭಾಯ್’ ಗೆ ಸಲಾಂ..!

    ಬೆಂಗಳೂರು: ಭಾರತೀಯ ಸಿನಿಮಾ ರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಹವಾ ಸಕತ್ ಸೌಂಡ್ ಮಾಡುತ್ತಿದೆ. ಇನ್ನೊಂದು ಕಡೆ ಯಶ್ ಕೆಜಿಎಫ್ ಹೇರ್‌ಸ್ಟೈಲ್‌ ಈಗ ಟ್ರೆಂಡ್ ಆಗಿದೆ.

    ಬೆಂಗಳೂರಿನ ಆರ್.ಟಿ.ನಗರದ ಸ್ಪಿನ್ ಹೇರ್ ಸೆಲೂನ್‍ನಲ್ಲಿ ಅಭಿಲಾಷ್ ಅನ್ನೋರು ಕೆಜಿಎಫ್ ಹೇರ್‌ಸ್ಟೈಲ್‌ ಮಾಡಿ ಕಿಂಗ್ ಅನಿಸಿಕೊಂಡಿದ್ದಾರೆ. ಇದೀಗ ಈ ಸ್ಟೈಲ್ ಟ್ರೆಂಡಿಯಾಗಿದ್ದು, ಯಶ್ ಅಭಿಮಾನಿಗಳು ಡಿಫರೆಂಟ್ ಸ್ಟೈಲ್ ಮಾಡಿಕೊಂಡು ಖುಷಿ ಪಡುತ್ತಿದ್ದಾರೆ.

    ಹುಡುಗಿಯರು ಕೂಡ ತಮ್ಮ ಮೋಟು ಕೂದಲು, ಉದ್ದಗೂದಲಿಗೆ ಕತ್ತರಿ ಹಾಕಿಸಿಕೊಂಡು ಯಶ್ ಗಾಗಿ ರಾಕಿಂಗ್ ಸ್ಟಾರ್ ಅಂತ ಸ್ಟಾರ್ ಸಿಂಬಲ್ ಹೇರ್‌ಸ್ಟೈಲ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇರ್ ಸ್ಟೈಲ್ ಮಾಡಿದ ಅಭಿಲಾಷ್ ಹೇಳಿದ್ದಾರೆ.

    ಕನ್ನಡ ಚಿತ್ರರಂಗದಲ್ಲೇ ಹವಾ ಎಬ್ಬಿಸುತ್ತಿರುವ ಕೆಜಿಎಫ್ ಸಿನಿಮಾ ಶುಕ್ರವಾರ ಬರೋಬ್ಬರಿ 2000ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ ಸುಮಾರು 30 ಕೋಟಿ ಹಣವನ್ನು ಗಲ್ಲಾ ಪೆಟ್ಟಿಯಲ್ಲಿ ತುಂಬಿಸಿಕೊಂಡಿತ್ತು. ಕೆಜಿಎಫ್ ಸಿನಿಮಾ ಪಂಚಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇದು ನನ್ನ ದುನಿಯಾ: ಕೆಜಿಎಫ್ ಸಂಭ್ರಮದ ಫೋಟೋ ಹಂಚಿಕೊಂಡ್ರು ಯಶ್

    ಇದು ನನ್ನ ದುನಿಯಾ: ಕೆಜಿಎಫ್ ಸಂಭ್ರಮದ ಫೋಟೋ ಹಂಚಿಕೊಂಡ್ರು ಯಶ್

    – ರಾಕಿಗೆ ಮುತ್ತಿಟ್ಟ ಡೈರಕ್ಟರ್, ಪ್ರೊಡ್ಯೂಸರ್

    ಬೆಂಗಳೂರು: ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಎರಡು ದಿನಗಳು ಕಳೆದಿವೆ. ಮೂರನೇ ದಿನವೂ ರಾಕಿಯ ಆರ್ಭಟ ಮುಂದುವರಿದಿದ್ದು, ಚಿತ್ರತಂಡ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇದೀಗ ಸಂಭ್ರಮಾಚಾರಣೆ ವೇಳೆಯ ಫೋಟೋವನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಇದೇ ನನ್ನ ದುನಿಯಾ ಎಂದು ಬರೆದುಕೊಂಡಿದ್ದಾರೆ.

    ಫೋಟೋದಲ್ಲಿ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಇಬ್ಬರು ಯಶ್ ಅವರ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಒಂದು ಸಿನಿಮಾ ರೂಪುಗೊಳ್ಳಬೇಕಾದರೆ ನಿರ್ಮಾಪಕ, ನಿರ್ದೇಶಕ ಮತ್ತು ಕಲಾವಿದ ಎಂಬ ಮೂರು ಸ್ತಂಭಗಳ ಬುನಾದಿ ಮುಖ್ಯವಾಗಿರುತ್ತದೆ. ನಿರ್ದೇಶಕನ ಕಥೆಗೆ ನ್ಯಾಯ ನೀಡುವ ಕಲಾವಿದ ಹಾಗು ತೆರೆಯ ಮೇಲೆ ಸಿನಿಮಾ ಆಕರ್ಷಕವಾಗಿ ಕಾಣುವಂತೆ ಮಾಡಲು ಆರ್ಥಿಕ ಬಲ ನೀಡುವ ನಿರ್ಮಾಪಕ ಈ ಮೂವರು ಒಗ್ಗೂಡಿದಾಗ ಮಾತ್ರ ಒಂದು ಯಶ್ವಿಸಿ ಸಿನಿಮಾ ಹೊರ ಬರುತ್ತದೆ. ಯಶ್ ಅಪ್ಲೋಡ್ ಮಾಡಿಕೊಂಡಿರುವ ಫೋಟೋದಲ್ಲಿ ಈ ಮೂವರು ಇದ್ದಾರೆ.

    ಸಿನಿಮಾ ಪ್ರಚಾರದ ಸಂದರ್ಭದ ಸಂದರ್ಶನಗಳಲ್ಲಿ ಯಶ್ ಎಲ್ಲಿಯೂ ನಾನು ಕಷ್ಟಪಟ್ಟು ಕೆಲಸ ಮಾಡಿದೆ ಅಂತಾ ಹೇಳಿಲ್ಲ. ಪ್ರತಿಯೊಂದು ಸಂದರ್ಶನದಲ್ಲಿಯೂ ಚಿತ್ರದ ಸಹ ಕಲಾವಿದರ ಸಹಕಾರ, ತಂತ್ರಜ್ಞರ ಕೈಚಳಕ, ಕಲ್ಪನೆಗೂ ಮೀರಿದ ಸೆಟ್‍ಗಳ ನಿರ್ಮಿಸಿದ ಕಲಾ ನಿರ್ದೇಶಕರ ತಂಡ, ಚಿತ್ರ ನೋಡುಗರನ್ನ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯದ ಸಂಗೀತ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ತಮನ್ನಾ ಮತ್ತು ಮೌನಿ ರಾಯ್, ವಿತರಕರು ಹೀಗೆ ಕೆಜಿಎಫ್ ಎಂಬ ಅದ್ಭುತ ಹೊರ ಬರಲು ನೆರವಾದ ಎಲ್ಲರ ಬಗ್ಗೆ ಯಶ್ ಹೇಳುತ್ತಾ ಬಂದಿದ್ದಾರೆ.

    ಯಾವ ಒಂದು ಸಂದರ್ಶನದಲ್ಲಿ ಯಶ್ ತಮ್ಮ ಬಗ್ಗೆಯೇ ಹೇಳಿಕೊಂಡಿಲ್ಲ. ವಿಶೇಷ ಅಂದ್ರೆ ಚಿತ್ರಕ್ಕಾಗಿ ಯಶ್ ತಮ್ಮನ್ನ ತಾವೇ ಬದಲಿಸಿಕೊಂಡಿರೋದಂತು ಸತ್ಯ. ಸತತ ಎರಡು ವರ್ಷಗಳಿಂದ ಬಿಟ್ಟುಕೊಂಡಿರುವ ಉದ್ದನೆಯ ಗಡ್ಡ. ಯಾವಾಗ್ಲೋ ಕ್ಲೀನ್ ಶೇವ್ ಲವರ್ ಬಾಯ್ ಲುಕ್ ನಿಂದ ಹೊರ ಬಂದ ಯಶ್, ಕೆಜಿಎಫ್ ಗಾಗಿ ಹುರಿ ಹುರಿ ಮೈಕಟ್ಟು, ರಗಡ್ ಲುಕ್, ಬಿಡುವಿಲ್ಲದ ಚಿತ್ರೀಕರಣ ಹೀಗೆ ರಾಕಿಂಗ್ ಸ್ಟಾರ್ ಎರಡು ವರ್ಷಗಳನ್ನೇ ಚಿತ್ರಕ್ಕಾಗಿ ಮುಡಿಪು ಇಟ್ಟಿದ್ದು ಸತ್ಯ.

    ಹೀಗಾಗಿಯೇ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ಧನ್ಯವಾದವನ್ನು ರಾಕಿಯ ಕೆನ್ನೆಗೆ ಮುತ್ತಿಕ್ಕುವ ಮೂಲಕ ನಮ್ಮ ಸ್ನೇಹ ಹೀಗೆ ಇರಲಿ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳ್ಳಿ ಹೈದ ಬರೆದ ‘ಕೆಜಿಎಫ್’ ಹಾಡಿಗೆ ಜನ್ರು ಫುಲ್ ಫಿದಾ

    ಹಳ್ಳಿ ಹೈದ ಬರೆದ ‘ಕೆಜಿಎಫ್’ ಹಾಡಿಗೆ ಜನ್ರು ಫುಲ್ ಫಿದಾ

    ಕೊಪ್ಪಳ: ಹಳ್ಳಿ ಹೈದ ಬರೆದ ‘ಕೆಜಿಎಫ್’ ಹಾಡಿಗೆ ಜನರು ಫುಲ್ ಆಗಿದ್ದಾರೆ. ಚಿತ್ರದ ಸೆಕೆಂಡ್ ಹಾಫ್ ಅಲ್ಲಿ ಬರುವ ಗೀತೆ ಜನರ ಮನಸ್ಸುನ್ನು ಕದ್ದಿದ್ದೆ. ಇದೀಗ ಕೆಜಿಎಫ್ ಚಿತ್ರದ ಈ ಹಾಡಿಗೆ ದೇಶದ್ಯಾದಂತ ಸಕತ್ ರೆಸ್ಪಾನ್ಸ್ ಸಿಗುತ್ತಿದೆ.

    ‘ಕೆಜಿಎಫ್’ ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್ ಇರುವ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡನ್ನು ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕನಿಸುತ್ತದೆ. ಅದಕ್ಕೆ ಕಾರಣ ಹಾಡಿನಲ್ಲಿ ಬರುವ ಆ ಪದಗಳು. ಪ್ರತಿ ಸಾಲಿನಲ್ಲೂ ಜನರನ್ನು ಮೈ ಜುಮ್ಮೆನ್ನಿಸುವ ಶಕ್ತಿ ಅದರಲ್ಲಿದೆ.

    ಈ ಹಾಡು ಬರೆದವರು ಕಿನ್ನಾಳ ರಾಜು ಅಂತಾ. ಇವರು ನೋಡುವುದಕ್ಕೆ ತುಂಬಾನೇ ಸಿಂಪಲ್ ಆಗಿದ್ದು, ಇವರು ಮೂಲತಃ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದವರು. ಕೆಜಿಎಫ್ ಸಿನಿಮಾದ ಈ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ ನಲ್ಲಿ ಲಕ್ಷಾಂತರ ವ್ಯೂವ್ಸ್ ಕಂಡು ದಾಖಲೆ ಸೃಷ್ಟಿ ಮಾಡಿತ್ತು. ಶುಕ್ರವಾರಷ್ಟೇ ಕೆಜಿಎಫ್ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಿದೆ. ಚಿತ್ರಕ್ಕೆ ಸಖತ್ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ.

    ಕಿನ್ನಾಳ ರಾಜು ಅವರು ಶನಿವಾರ ಬೆಂಗಳೂರಿನಲ್ಲಿ ಚಿತ್ರ ವೀಕ್ಷಿಸಿದ ಬಳಿಕ ಕೊಪ್ಪಳದ ಶಾರದಾ ಚಿತ್ರ ಮಂದಿರಕ್ಕೆ ಬಂದು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ನಮ್ಮ ಜನತೆ ಜೊತೆ ಚಿತ್ರ ನೋಡುವುದು ರೋಮಾಂಚನ ತಂದಿದೆ ಎಂದು ಕಿನ್ನಾಳ ರಾಜು ಅವರು ಹೇಳಿದ್ದಾರೆ.

    ಕೆಜಿಎಫ್ ಚಿತ್ರದ ಸೆಂಕೆಡ್ ಹಾಫ್ ಅಲ್ಲಿ ಬರುವ ಈ ಗೀತೆ ಸಿನಿಮಾವನ್ನು ನೋಡುವರಿಗೆ ಒಂದು ರೀತಿಯ ರೋಮಾಂಚನದ ಅನುಭವ ನೀಡುತ್ತದೆ. ಒಂದು ಕ್ಷಣ ಕಣ್ಣಲ್ಲಿ ನೀರು ಬರವಂತೆ ಮಾಡುತ್ತೆ ಅಷ್ಟರ ಮಟ್ಟಿಗೆ ಕಿನ್ನಾಳ ರಾಜು ಅವರ ಈ ಗೀತೆಗೆ ಶಕ್ತಿ ಇದೆ. ಇದಕ್ಕೆ ಸಾಕ್ಷಿನೆ ಕಿನ್ನಾಳ ರಾಜು ಅವರು ಬರೆದ ಈ ಗೀತೆ ಸಿನಿಮಾ ರಿಲೀಸ್‍ಗೂ ಮುನ್ನ ಯೂಟ್ಯೂಬ್ ಅಲ್ಲಿ ಸಖತ್ ಸೌಂಡ್ ಮಾಡಿತ್ತು. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವ್ಯೂವ್ಸ್ ಪಡೆದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಕೂಡ ಆಗಿತ್ತು. ಇನ್ನೂ ಕಿನ್ನಾಳ ರಾಜು ಅವರ ಗೀತೆಗೆ ಕೊಪ್ಪಳ ಜನತೆ ಹೆಮ್ಮೆ ಪಡುತ್ತಿದ್ದಾರೆ. ಕಿನ್ನಾಳ ರಾಜು ಅವರು ನಮ್ಮ ಜಿಲ್ಲೆಯವರು ಅವರು ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂದು ಅಭಿಮಾನಿಗಳು ಹಾರೈಸಿದ್ದಾರೆ.

    ಕೆಜಿಎಫ್ ಚಾಪ್ಟರ್ ಒನ್ ಅಲ್ಲಿ ತಮ್ಮ ಹಾಡಿನ ಮೂಲಕ ಕಮಾಲ್ ಮಾಡಿರುವ ಕಿನ್ನಾಳ ರಾಜು ಅವರು ಚಾಪ್ಟರ್-2 ಅಲ್ಲೂ ನನ್ನದೊಂದು ಹಾಡು ಇರುತ್ತೆ ಎಂದು ಹೇಳುವ ಮೂಲಕ ಜಿಲ್ಲೆಯ ಚಿತ್ರ ರಸಿಕರಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಲ್ಲಾ ಪೆಟ್ಟಿಗೆ ತುಂಬಿಸಿದ ಕೆಜಿಎಫ್ – ಥಿಯೇಟರ್ ಸಂಖ್ಯೆ ಹೆಚ್ಚಿಸಲು ಪ್ಲಾನ್

    ಗಲ್ಲಾ ಪೆಟ್ಟಿಗೆ ತುಂಬಿಸಿದ ಕೆಜಿಎಫ್ – ಥಿಯೇಟರ್ ಸಂಖ್ಯೆ ಹೆಚ್ಚಿಸಲು ಪ್ಲಾನ್

    ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ವರ್ಲ್ಡ್ ವೈಡ್ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಷ್ಟೇ ಅಲ್ಲದೇ ಬಾಕ್ಸ್ ಆಫೀಸ್‍ನಲ್ಲೂ ಧೂಳೆಬ್ಬಿಸುತ್ತಿದೆ.

    ಬರೋಬ್ಬರಿ 2000ಕ್ಕೂ ಅಧಿಕ ಸ್ಕ್ರೀನ್‍ಗಳಲ್ಲಿ ಸಿನಿಮಾ ತೆರೆಕಂಡಿದ್ದು, ಬಿಡುಗಡೆಯಾದ ಒಂದೇ ದಿನಕ್ಕೆ ಕೋಟಿ ಕೋಟಿ ಕೊಳ್ಳೆಹೊಡೆದಿದೆ. ಪಂಚಭಾಷೆಯಲ್ಲಿ ತೆರೆಕಂಡ ಕೆಜಿಎಫ್ ಮೊದಲ ದಿನವೇ 25 ಕೋಟಿ ಗಳಿಕೆ ಕಂಡಿದೆ. ವೀಕೆಂಡ್ ಆದ ಶನಿವಾರ ಸಹ ಹೆಚ್ಚು ಕಡಿಮೆ ಇಷ್ಟೇ ಗಳಿಕೆ ಕಂಡಿದೆ. ಥಿಯೇಟರ್ ಅಖಾಡದಲ್ಲಿ ಕೆಜಿಎಫ್ ಅಬ್ಬರ ನೋಡುತ್ತಿದ್ದರೆ ಇಂದು ಭಾನುವಾರ ಮತ್ತು ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಇನ್ನೂ ಒಂದು ವಾರ ದಾಟುವುದರೊಳಗೆ 100 ಕೋಟಿ ಗಳಿಕೆ ಮಾಡುವ ಎಲ್ಲಾ ನಿರೀಕ್ಷೆಗಳು ಕಂಡು ಬರುತ್ತಿದೆ. ಇದನ್ನೂ ಓದಿ: ಎಫ್‍ಬಿ ಲೈವ್ ಬಂದ ರಾಕಿಂಗ್ ಸ್ಟಾರ್-ಅಭಿಮಾನಿಗಳಿಗೆ ಸಲಹೆ ನೀಡಿದ ರಾಕಿ

    ನಟ ಯಶ್ ಕೂಡ ಮೂರು ವರ್ಷಗಳ ಶ್ರಮಕ್ಕೆ ಪ್ರತಿಫಲ ಸಿಕ್ಕ ಖುಷಿಯಲ್ಲಿ ಅಭಿಮಾನಿಗಳ ಜೊತೆ ಕೆಜಿಎಫ್ ಸಕ್ಸಸ್‍ನ್ನು ಹಂಚಿಕೊಂಡಿದ್ದರು. ಫೇಸ್‍ಬುಕ್ ಲೈವ್ ಬಂದು ಕೆಜಿಎಫ್ ಸಕ್ಸಸ್‍ಗೆ ಕಾರಣರಾದ ಪ್ರತಿಯೊಬ್ಬರಿಗೂ ಯಶ್ ಧನ್ಯವಾದ ಅರ್ಪಿಸಿದ್ದರು.

    ಖುಷಿ ಸುದ್ದಿ ಅಂದರೆ ಪರಭಾಷೆಗಳಲ್ಲಿ ಯಶ್ ಸಿನಿಮಾಗೆ ಬೇಡಿಕೆ ಹೆಚ್ಚಿದೆ. ತಮಿಳುನಾಡಿನಲ್ಲಿ ಕೆಜಿಎಫ್ ಪ್ರದರ್ಶನದ ಥಿಯೇಟರ್‍ಗಳ ಸಂಖ್ಯೆ ಹೆಚ್ಚು ಮಾಡಲಿಕ್ಕೆ ವಿತರಕರು ಪ್ಲಾನ್ ಮಾಡುತ್ತಿದ್ದಾರೆ. ಬರೀ ತಮಿಳುನಾಡಿನಲ್ಲಿ ಮಾತ್ರ ಅಲ್ಲ, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಇದೇ ಸ್ಥಿತಿ ಇದೆ. ದಿನ ದಿನಕ್ಕೆ ಕೆಜಿಎಫ್ ಕ್ರೇಜ್ ಹೆಚ್ಚಾಗುತ್ತಿದೆ.

    ಈ ಹಿಂದೆ ಅನೇಕ ಸ್ಟಾರ್ ಸಿನಿಮಾಗಳು ಅಲ್ಲಿ ಥಿಯೇಟರ್ ಸಿಗದೇ ಒದ್ದಾಡುತ್ತಿದ್ದವು. ನಮಗೆ ಅವರು ಥಿಯೇಟರ್ ಕೊಡಲ್ಲ, ಮತ್ತೆ ನಾವ್ಯಾಕೆ ಕೊಡಬೇಕು ಎಂದು ನಮ್ಮವರು ಕುದಿಯುತ್ತಿದ್ದರು. ಇದೀಗ ಕೆಜಿಎಫ್ ನಮಗೆ ಸಿನಿಮಾ ಕೊಡಿ ಎನ್ನುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಫ್‍ಬಿ ಲೈವ್ ಬಂದ ರಾಕಿಂಗ್ ಸ್ಟಾರ್-ಅಭಿಮಾನಿಗಳಿಗೆ ಸಲಹೆ ನೀಡಿದ ರಾಕಿ

    ಎಫ್‍ಬಿ ಲೈವ್ ಬಂದ ರಾಕಿಂಗ್ ಸ್ಟಾರ್-ಅಭಿಮಾನಿಗಳಿಗೆ ಸಲಹೆ ನೀಡಿದ ರಾಕಿ

    ಬೆಂಗಳೂರು: ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಸಿನಿಮಾ ಭಾರತದಾದ್ಯಂತ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ ಅಂದಾಜು 30 ಕೋಟಿ ಗಳಿಸಿರುವ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂಬಂಧ ಯಶ್ ಇಂದು ಫೇಸ್‍ಬುಕ್ ಲೈವ್ ಬಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

    ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಿದ್ದರಿಂದ ಎಲ್ಲ ರಾಜ್ಯದ ಅಭಿಮಾನಿಗಳು ಮಾತೃಭಾಷೆಯಲ್ಲಿ ಪ್ರಶ್ನೆ ಕೇಳುತ್ತಿದ್ದರು. ಯಶ್ ಸಹ ಅವರ ಭಾಷೆಯಲ್ಲಿ ಪ್ರಯತ್ನ ಮಾಡಿದರು. ಸಿನಿಮಾ ಪೈರೆಸಿ ಮಾಡದೇ ಚಿತ್ರಮಂದಿರಗಳಲ್ಲಿಯೇ ನೋಡಿ. ಪೈರೆಸಿ ತಡೆಯಲು ಒಂದು ಟೀಂ ರಚನೆಯಾಗಿದೆ. ಆನ್‍ಲೈನ್ ಬರುವ ಪೈರೆಸಿ ವಿಡಿಯೋಗಳನ್ನು ಅಲ್ಲಿಯೇ ಕಟ್ ಮಾಡಲಾಗುತ್ತಿದೆ ಎಂದು ಹೇಳಿದರು.

    ಚಿತ್ರಮಂದಿರಗಳ ಸಂಭ್ರಮಿಸುವಾಗ ಎತ್ತರದ ಸ್ಥಳದಲ್ಲಿ ನಿಂತು ಫೋಟೋ ತೆಗೆದುಕೊಳ್ಳಬೇಡಿ. ಕಟೌಟ್ ಮೇಲೆ ಹೋಗಿ ಹಾಲು, ಹಾರ ಹಾಕುವಾಗ ಎಚ್ಚರಿಕೆ ಇರಲಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದರು. ಸಿನಿಮಾ ಮಾಡಿ ನಿಮ್ಮ ಮುಂದೆ ಇಟ್ಟಿದ್ದು, ನೀವು ಅದನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ. ನಿಮ್ಮ ಸಿನಿಮಾ ಅಂತಾ ಅಪ್ಪಿಕೊಂಡು ಆಶೀರ್ವಾದ ನೀಡಿದ್ದೀರಿ. ಸಿನಿಮಾಗಾಗಿ ಕೆಲಸ ಮಾಡಿದ ಎಲ್ಲ ವಿತರಕರಿಗೂ, ಚಿತ್ರ ಕಲಾವಿದರು ಮತ್ತು ತಂತ್ರಜ್ಞರಿಗೂ ಧನ್ಯವಾದ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಟ್ಟ ಮಾತಿನಂತೆ ಛಲ ಬಿಡದೆ ಗುರಿ ಸೇರಿದ್ರು ಯಶ್

    ಕೊಟ್ಟ ಮಾತಿನಂತೆ ಛಲ ಬಿಡದೆ ಗುರಿ ಸೇರಿದ್ರು ಯಶ್

    – ಕನಸಿನ ದಾರಿಗೆ ಮುನ್ನುಡಿ ಬರೆದ ರಾಕಿಂಗ್ ಸ್ಟಾರ್

    ಬೆಂಗಳೂರು: ರಾಜ್ಯ, ದೇಶ ಮಾತ್ರವಲ್ಲದೇ ಹೊರದೇಶದಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಅಬ್ಬರದಿಂದ ಮುನ್ನುಗ್ಗುತ್ತಿದ್ದು, ಈ ಮೂಲಕ ಯಶ್ ತಾನು ಈ ಹಿಂದೆ ಕೊಟ್ಟ ಮಾತನ್ನು ಉಳಿಸಿಕೊಂಡು, ಕಟ್ಟಿಕೊಂಡ ಕನಸನ್ನು ನನಸು ಮಾಡಿಕೊಂಡು ಛಲ ಬಿಡದೆ ಗುರಿ ಸೇರಿದ್ದಾರೆ.

    ಹೌದು. ಯಾವುದೇ ಒಂದು ಕೆಲಸ ಪ್ರಾರಂಭಿಸುವ ಮೊದಲು ಯಶ್ ತುಂಬಾನೇ ಯೋಚನೆ ಮಾಡುತ್ತಾರೆ. ಅಲ್ಲದೇ ಆ ಕೆಲಸ ಮಾಡಿ ಮುಗಿಸುವ ಛಲ ಹೊಂದಿದ್ದಾರೆ. ಇದಕ್ಕೆ ಅವರ ‘ಯಶೋಮಾರ್ಗ’ವೇ ಸಾಕ್ಷಿ. ಈ ಬೆನ್ನಲ್ಲೇ ಅವರಿಗೆ ಗಾಂಧಿನಗರದಲ್ಲಿ ತನ್ನದೊಂದು ಕಟೌಟ್ ರಾರಾಜಿಸಬೇಕು ಅಂತ ಗುರಿ ಹೊಂದಿದ್ದರು. ಅಲ್ಲದೇ ಕನ್ನಡದ ಚಿತ್ರವೊಂದು ಇಡೀ ಚಿತ್ರರಂಗವನ್ನೇ ತಲ್ಲಣಗೊಳಿಸುವಂತೆ ಮಾಡಬೇಕೆಂಬ ಬಹುದೊಡ್ಡ ಕನಸನ್ನು ಹೊಂದಿದ್ದರು. ಯಶ್ ಅವರ ಈ ಕನಸು ಇದೀಗ ನನಸಾಗಿದೆ.

    ಈ ಹಿಂದೆ ಖಾಸಗಿ ಚಾನೆಲೊಂದರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಯಶ್ ತಮ್ಮ ಮುಂದಿನ ಕನಸನ್ನು ಬಿಚ್ಚಿಟ್ಟಿದ್ದರು. ನಾನು ಸ್ಟಾರ್ ಆಗಬೇಕು. ಈ ಗಾಂಧಿನಗರದ ಟಾಪ್ ನಲ್ಲಿ ನಿಂತುಕೊಳ್ಳಬೇಕು ಹಠ ಬಂತು ಅಂದಿದ್ದರು. ಅವರ ಕನಸಿನಂತೆಯೇ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿಯೇ ಬಿಟ್ಟರು. ಅಂದು ಧಾರವಾಹಿಯ ಮುಖಾಂತರ ಮನೆಮಾತಾಗಿದ್ದ ಯಶ್ ಇಂದು ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟರಾಗಿ ಅಭಿಮಾನಿಗಳ ಮನಗಳಲ್ಲಿ ಆಳವಾಗಿ ಬೇರೂರಿದ್ದಾರೆ.

    ಆ ನಂತರ ಇನ್ನೊಂದು ಬಾರಿ ಕಾರ್ಯಕ್ರಮೊಂದರಲ್ಲಿ ಭಾಗಿಯಾಗಿದ್ದ ಯಶ್, ತನ್ನ ಮತ್ತೊಂದು ಕನಸನ್ನು ಹಂಚಿಕೊಂಡಿದ್ದರು. ಕನ್ನಡ ಚಿತ್ರರಂಗ, ಕನ್ನಡ ಸಿನಿಮಾವನ್ನು ಇಡೀ ಭಾರತ ತಿರುಗಿ ನೋಡಬೇಕು. ಬರೀ ಸುಮ್ನೆ ನೋಡೋದಲ್ಲ. ಚಪ್ಪಾಳೆ ಹೊಡೆದು ಸೆಲ್ಯೂಟ್ ಹೊಡೀಬೇಕು ಅದು ನನ್ನ ಮುಂದಿನ ಗುರಿ ಅಂತ ಹೇಳಿದ್ದರು. ಯಶ್ ಮಾತಿನಂತೆ ಅವರ ಕೆಜಿಎಫ್ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡಿತ್ತು.

    ಇದೀಗ ಡಿ.21ರಂದು ಚಿತ್ರ ರಾಜ್ಯ, ದೇಶ ಹಾಗೂ ಹೊರದೇಶದಲ್ಲೂ ಬಿಡುಗಡೆಯಾಗಿದೆ. ಯಶ್ ಅಭಿಮಾನಿಗಳಂತೂ ಮಧ್ಯರಾತ್ರಿ ಚಳಿಯನ್ನೂ ಲೆಕ್ಕಿಸದೇ ಚಿತ್ರ ಬಿಡುಗಡೆಗೋಸ್ಕರ ಕಾಯುತ್ತಿದ್ದರು. ಅಲ್ಲದೇ ಹೆಚ್ಚಿನ ಚಿತ್ರಮಂದಿರಗಳಲ್ಲಿ ಯಶ್ ಅವರ ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕಿ ಹಾಲಿನ ಅಭಿಷೇಕವನ್ನು ಮಾಡಿದ್ದಾರೆ. ಕೆಲ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿಲಿಕಾನ್ ಸಿಟಿಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಯಶ್ ಅವರ ಬೃಹದಾಕಾರದ ಕಟೌಟ್ ನಿಲ್ಲಿಸಿದ್ದಾರೆ. ಮಾತ್ರವಲ್ಲದೇ ಈ ಕಟೌಟ್ ಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದ್ರೆ ಇಡೀ ಕನ್ನಡ ಚಿತ್ರರಂಗದಲ್ಲಿ ಯಶ್ ತಮ್ಮದೇ ಹವಾ ಸೃಷ್ಟಿಸಿರೋದಂತು ಸುಳ್ಳಲ್ಲ. ಸಾಮಾಜಿಕ ಜಾಲತಾಣಗಳಲ್ಲಂತೂ ಯಶ್ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.

    ಚಿತ್ರ ನೋಡಿದ ಪ್ರತಿಯೊಬ್ಬರು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಂತದ್ದೊಂದು ಚಿತ್ರ ಮೂಡಿ ಬಂದಿದ್ದು ಪ್ರಪಥಮ ಬಾರಿಗೆ ಅಂತ ಹೇಳುವಷ್ಟರ ಮಟ್ಟಿಗೆ ಇದೀಗ ಕೆಜಿಎಫ್ ಎಲ್ಲಾ ಥಿಯೇಟರ್ ಗಳಲ್ಲೂ ಅಬ್ಬರಿಸುತ್ತಿದೆ. ಒಟ್ಟಿನಲ್ಲಿ ಯಶ್ ತಾನು ಕಟ್ಟಿದ್ದ ಕನಸಿನ ಗೋಪುರಕ್ಕೆ ಬಣ್ಣ ಹಚ್ಚಿದ್ದು ದೇಶ, ಹೊರದೇಶದಲ್ಲೂ ಮಿಂಚುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಲ್ಲಾ ಪೆಟ್ಟಿಗೆಯಲ್ಲೂ ರಾಕಿಯ ಆರ್ಭಟ- ಹಿಂದಿಯಲ್ಲಿ ಫಸ್ಟ್ ಡೇ 2.10 ಕೋಟಿ

    ಗಲ್ಲಾ ಪೆಟ್ಟಿಗೆಯಲ್ಲೂ ರಾಕಿಯ ಆರ್ಭಟ- ಹಿಂದಿಯಲ್ಲಿ ಫಸ್ಟ್ ಡೇ 2.10 ಕೋಟಿ

    ಬೆಂಗಳೂರು: ದೇಶದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಉಘೇ, ಉಘೇ ಎಂದು ಹರ್ಷೊದ್ಘಾರ ಹೊರ ಹಾಕುತ್ತಿದ್ದಾರೆ. ಮೊದಲ ದಿನವೇ 2 ಸಾವಿರ ತೆರೆಗಳಲ್ಲಿ ಮಿಂಚಿದ ರಾಕಿ ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು ಮಾಡಿದ್ದಾನೆ. ಎಲ್ಲ ಚಿತ್ರಮಂದಿರಗಳಲ್ಲಿಯೂ ಸಿನಿಮಾ ಬಿಡುಗಡೆಗೂ ಮುನ್ನವೇ ಅಭಿಮಾನಿಗಳು ಸಿನಿಮಾ ಟಿಕೆಟ್ ಕಾಯ್ದಿರಿಸಿದ್ದರು.

    ಬಿಡುಗಡೆಯಾದ ಮೊದಲ ದಿನವೇ ಅಂದಾಜು 30 ಕೋಟಿ ಬಾಚಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ 80ರಿಂದ 90 ಕೋಟಿ ಬೊಕ್ಕಸ ಸೇರುವ ಸಾಧ್ಯತೆ ಇದೆ. ಕೆನಾಡದಲ್ಲೂ ಕೆಜಿಎಫ್ ಫಿವರ್ ಜೋರಾಗಿದೆ. ಅಭಿಮಾನಿಗಳು ಯಶ್ ಟಿ ಷರ್ಟ್ ಹಾಕ್ಕೊಂಡು ಕೆಜಿಎಫ್‍ಗೆ ಸ್ವಾಗತಿಸಿರೋ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ.

    ಎರಡನೇ ದಿನವೂ ಕರುನಾಡಿನ ಎಲ್ಲ ಚಿತ್ರಮಂದಿರಗಳ ಮುಂದೆ ಹೌಸ್‍ಫುಲ್ ಎಂಬ ಬೋರ್ಡ್ ಕಾಣುತ್ತಿದೆ. ಹಿಂದಿ ಡಬ್ ಸಿನಿಮಾ 1,500 ತೆರೆಗಳಲ್ಲಿ ತೆರೆಕಂಡಿದ್ದು, ಮೊದಲ ದಿನವೇ 2.10 ಕೋಟಿ ರೂ. ಗಳಿಸಿದೆ ಎಂದು ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಹಿಂದಿ ಕೆಜಿಎಫ್ ಇದೇ ರೀತಿ ಯಶಸ್ವಿ ಪ್ರದರ್ಶನ ಕಾಣಲಿದೆ ಅಂತಾನೂ ತಿಳಿಸಿದ್ದಾರೆ.

    ಶಾರೂಖ್ ಖಾನ್ ಅಭಿನಯದ ಝೀರೋ ಒಟ್ಟು 4380 ಸ್ಕ್ರೀನ್ ಗಳಲ್ಲಿ ತೆರೆಕಂಡಿದ್ದು, ಮೊದಲ ದಿನ 20.14 ಕೋಟಿ ಹಣವನ್ನು ಗಲ್ಲಾ ಪೆಟ್ಟಿಗೆಯಲ್ಲಿ ಭರ್ತಿ ಮಾಡಿಕೊಂಡಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಜನ ಟಿಕೆಟ್ ಕಾಯ್ದಿರಿಸಿದ್ದರಿಂದ ಶನಿವಾರ ಮತ್ತು ಭಾನುವಾರ ಚಿತ್ರಮಂದಿರಗಳು ಭರ್ತಿಯಾಗಲಿದೆ. ತರಣ್ ಆದರ್ಶ್ ಅವರು ಝೀರೋ ಸಿನಿಮಾಗೆ ಅರ್ಧ ಪಾಯಿಂಟ್ ನೀಡಿ ಚಿತ್ರ ನಿಷ್ಪ್ರಯೋಜಕ ಎಂದು ಹೇಳುವ ಮೂಲಕ ಚಿತ್ರದ ವಿಮರ್ಶೆ ಮಾಡಿದ್ದರು.

    ಕೆಜಿಎಫ್ ಒಟ್ಟು 2460 ಥಿಯೇಟರ್ ಗಳಲ್ಲಿ ತೆರೆಕಂಡಿದೆ. ಹಿಂದಿ 1500, ಕನ್ನಡ 400, ತೆಲುಗು 400, ತಮಿಳ 100, ಮಲಯಾಳಂ 60 ತೆರೆಗಳಲ್ಲಿ ಬಿಡುಗಡೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv