Tag: ಕೆಆರ್ ಸರ್ಕಲ್‌

  • KR Circle ಅಂಡರ್ ಪಾಸ್ ದುರಂತ- ಒಂದು ಸಾವಾದ್ರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ

    KR Circle ಅಂಡರ್ ಪಾಸ್ ದುರಂತ- ಒಂದು ಸಾವಾದ್ರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ

    – ಬ್ಯಾರಿಕೇಡ್ ಬಿಟ್ರೆ ಯಾವ ಕ್ರಮವೂ ಇಲ್ಲ

    ಬೆಂಗಳೂರು: ಕೆ.ಆರ್ ಸರ್ಕಲ್ ಅಂಡರ್ ಪಾಸ್ (KR Circle UnderPass) ದುರಂತ ಸಂಭವಿಸಿ ಏಳು ದಿನ ಆಗಿದೆ. ಏಳು ದಿನ ಆದರೂ ಬಿಬಿಎಂಪಿ (BBMP) ಇನ್ನೂ ಮುನ್ನೆಚ್ಚರಿಕೆ ವಹಿಸಿಲ್ಲ. ನೀರು ತಡೆಗೆ ಬೂಮ್ ಬ್ಯಾರಿಯರ್ ಅಳಡಿಕೆನೂ ಮಾಡಿಲ್ಲ. ಹೀಗಾಗಿ ಬಿಬಿಎಂಪಿ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ.

    ಕಳೆದ ವಾರ ಸುರಿದ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿತ್ತು. ಅದರಲ್ಲೂ ಕೆಆರ್ ಸರ್ಕಲ್ ಅಂಡರ್ ಪಾಸ್ ಬಳಿ ಕಾರು ಮುಳುಗಡೆ ಆಗಿ ಯುವತಿ ಸಾವನ್ನಪ್ಪಿದ್ದ ಪ್ರಕರಣ ಬೆಂಗಳೂರನ್ನ ಬೆಚ್ಚಿಬೀಳಿಸಿತ್ತು. ಈ ಘಟನೆ ಬಳಿಕ ಬಿಬಿಎಂಪಿ ಅಂಡರ್ ಪಾಸ್‍ಗಳ ಸರ್ವೆ ಮಾಡಿತ್ತು. ನೀರು ಅಂಡರ್ ಪಾಸ್‍ಗೆ ಹೋಗದಂತೆ ತಡೆಯಲು ಬೂಮ್ ಬ್ಯಾರಿಯರ್ ಅಳವಡಿಕೆ ಮಾಡೋದಾಗಿ ತಿಳಿಸಿದ್ರು. ಜೊತೆಗೆ ಸೈರಾನ್ ಹಾಕುತ್ತೇವೆ ಅಂತಾನು ಹೇಳಿದ್ರು. 7 ದಿನ ಆದರೂ ಇನ್ನೂ ಕ್ರಮವಹಿಸಲ್ಲ. ಕೆ.ಆರ್ ಸರ್ಕಲ್ ಅಂಡರ್ ಪಾಸ್ ಬಳಿ ಬ್ಯಾರಿಕೇಡ್ ಬಿಟ್ಟರೆ ಬೇರೆ ಕ್ರಮ ಇಲ್ಲವೇ ಇಲ್ಲ. ಇದನ್ನೂ ಓದಿ: ಕುಡಿಯುವ ನೀರಿನ ಘಟಕದಲ್ಲಿ ಮೋರಿ ನೀರು ಪೂರೈಕೆ- ಜನರ ಆರೋಗ್ಯದಲ್ಲಿ ಏರುಪೇರು

    ಈ ಘಟನೆ ಬಳಿಕ ಅಂಡರ್ ಪಾಸ್ ಕೆಳಗಡೆ ಓಡಾಡಲು ವಾಹನಸವಾರರು ಭಯ ಪಡುತ್ತಿದ್ದಾರೆ. ನೀರು ನಿಲ್ಲದಂತೆ ಕ್ರಮ ವಹಿಸಿಲ್ಲ ಅಂತಾ ಬಿಬಿಎಂಪಿಗೆ ಛೀಮಾರಿ ಹಾಕ್ತಾ ಇದ್ದಾರೆ. ಒಟ್ಟಾರೆ ಮಳೆಗಾಲ ಆರಂಭ ಆಗ್ತಾ ಇದೆ ಅಷ್ಟರ ಒಳಗಡೆ ಮುಂಜಾಗ್ರತೆ ಅಗತ್ಯ. ಅಂಡರ್ ಪಾಸ್ ಗಳಲ್ಲಂತು ಎಚ್ಚರಿಕೆ ವಹಿಸಲೇ ಬೇಕಾಗುತ್ತೆ. ಬಿಬಿಎಂಪಿ ಮುಂಜಾಗ್ರತೆ ವಹಿಸ್ತೆವೆ ಅಂತಾ ಹೇಳಿ ವಹಿಸಿಲ್ಲ ಆಗಾಗಿ ಏನೆಲ್ಲ ಮುಂಜಾಗ್ರತೆ ವಹಿಸುತ್ತೆ ಕಾದು ನೋಡಬೇಕಿದೆ.

     ‌

  • ಯುವತಿಯ ರಕ್ಷಣೆಗೆ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ: ನೀರಿಗೆ ಧುಮುಕಿ ಐವರನ್ನು ರಕ್ಷಿಸಿದ ‘ಪಬ್ಲಿಕ್’ ಹೀರೋ

    ಯುವತಿಯ ರಕ್ಷಣೆಗೆ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ: ನೀರಿಗೆ ಧುಮುಕಿ ಐವರನ್ನು ರಕ್ಷಿಸಿದ ‘ಪಬ್ಲಿಕ್’ ಹೀರೋ

    ಬೆಂಗಳೂರು: “ಲೋಕಾಯುಕ್ತ (Lokayukta) ಕಚೇರಿ ಬಳಿ ಸಮಸ್ಯೆಯಾಗಿದೆ ಎಂಬ ಮಾಹಿತಿ ತಿಳಿದು ನಾವು ಆ ಜಾಗಕ್ಕೆ ಹೋಗುತ್ತಿದ್ದೆವು. ಕೆಆರ್ ಸರ್ಕಲ್ (K R Circle) ಬಳಿಯ ಅಂಡರ್‌ಪಾಸ್‌ನಲ್ಲಿ (Underpass) ನೀರಿನಲ್ಲಿ ಮುಳುಗುತ್ತಿದ್ದ ಕಾರನ್ನು ನೋಡಿ ಜನ ಕೂಗುತ್ತಿರುವುದು ಕಾಣಿಸಿತು. ನಾನು ಕಾರು ನಿಲ್ಲಿಸಿ ನೋಡಿದಾಗ, ಅರ್ಧ ಅಡಿ ಕಾರ್‌ನ ಟಾಪ್ ಮಾತ್ರ ಕಾಣಿಸುತ್ತಿತ್ತು. ಕೂಡಲೇ ನಾನು ಯೋಚಿಸದೇ ನೀರಿಗೆ ಧುಮುಕಿದೆ” ಇದು ಅಪತ್ಬಾಂದವ ಕೆ.ಆರ್.ಸರ್ಕಲ್‍ನಲ್ಲಿ ಐವರ ಜೀವ ಕಾಪಾಡಿದ ಪಬ್ಲಿಕ್ ಟಿವಿ (Public Tv) ಡ್ರೈವರ್ ವಿಜಯ್ ಕುಮಾರ್ ಮಾತುಗಳು.

    ವಿಜಯ್ ಕುಮಾರ್ ಹೇಳಿದ್ದೇನು?
    ನಾನು ನೀರಿಗೆ ಧುಮುಕಿ ಕಾರ್ ಸಮೀಪಿಸುತ್ತಿದ್ದಂತೆ ಒಳಗಿದ್ದವರು ಕಾರ್ ಗ್ಲಾಸ್ ತೆಗೆದರು. ತಕ್ಷಣ ಕಾರ್ ಮುಳುಗಿ ಹೋಯ್ತು. ಕಾರಿನ ಮೇಲೆ ಎರಡು ಅಡಿಯಷ್ಟು ನೀರು ಏರಿಕೆ ಆಯ್ತು. ನನಗೆ ಏನು ಮಾಡಲು ತೋಚದೆ ಕಾರ್ ಡೋರ್ ತೆಗೆಯಲು ಯತ್ನಿಸಿದೆ ಆದರೆ ಲಾಕ್ ಆದ ಕಾರಣ ಸಾಧ್ಯವಾಗಲಿಲ್ಲ. ಕಾರಿನ ಗ್ಲಾಸ್ ಮಾತ್ರ ತೆಗೆಯಲು ಸಾಧ್ಯವಾಯ್ತು. ಅದರ ಮೂಲಕವೇ ಐವರನ್ನು ಹೊರಗೆಳೆದು ಕಾರ್‌ನ ಟಾಪ್ ಮೇಲೆ ಕೂರಿಸಿದೆ. ಅಷ್ಟರಲ್ಲಾಗಲೇ ಮಹಿಳೆಯೊಬ್ಬರು ಸಹಾಯಕ್ಕಾಗಿ ತಾವು ತೊಟ್ಟಿದ್ದ ಸೀರೆಯನ್ನು ಕೊಟ್ಟರು. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಐವರನ್ನು ರಕ್ಷಿಸಿದ ಪಬ್ಲಿಕ್ ಟಿವಿ ಚಾಲಕನಿಗೆ ಬಿಬಿಎಂಪಿ ಆಯುಕ್ತರಿಂದ ಸನ್ಮಾನ

    ಈ ವೇಳೆಗಾಗಲೇ ನಮ್ಮ ವರದಿಗಾರರಾದ ನಾಗೇಶ್ ಅವರು ರಕ್ಷಣಾ ಕಾರ್ಯ ಮಾಡುವ ವಾಹನವನ್ನು ತಡೆದು ಲೈಫ್ ಜಾಕೆಟ್ ತಂದರು. ಇದರಿಂದ ರಕ್ಷಣಾ ಕಾರ್ಯಕ್ಕೆ ಅನುಕೂಲ ಅಯ್ತು. ನೀರಿನ ಬಣ್ಣ ತುಂಬ ಕಪ್ಪಾಗಿದ್ದ ಕಾರಣ ರಕ್ಷಣಾ ಕಾರ್ಯಕ್ಕೆ ಸ್ವಲ್ಪ ಆಯ್ತು. ನಂತರ ಅಗ್ನಿಶಾಮಕದಳದ ಸಿಬ್ಬಂದಿ ಏಣಿಯ ಮೂಲಕ ಅವರನ್ನೆಲ್ಲ ಸುರಕ್ಷಿತವಾಗಿ ಮೇಲೆ ಕಳುಹಿಸಿದರು. ಕೇವಲ 10 ನಿಮಿಷದಲ್ಲಿ ರಕ್ಷಣಾ ಕಾರ್ಯ ನಡೆದಿದೆ. ಯವತಿಯ ತಲೆ ಹಿಂದಿನ ಸೀಟಿನಲ್ಲಿ ಲಾಕ್ ಆಗಿದ್ದ ಕಾರಣ ರಕ್ಷಣೆ ಕೂಡಲೇ ಮಾಡಲು ಸಾಧ್ಯವಾಗಲಿಲ್ಲ.

    ನಿಮಗೆ ಈ ಸಾಹಸಕ್ಕೆ ಧೈರ್ಯ ಎಲ್ಲಿಂದ ಬಂತು ಎಂದರೆ, ಅಕಸ್ಮಾತ್ ನನ್ನ ಕುಟುಂಬವೇ ಅಪಾಯದಲ್ಲಿ ಸಿಕ್ಕಿದ್ದರೆ? ಹಾಗೇ ಹೋಗಲು ಸಾಧ್ಯವಾಗುತ್ತಿತ್ತೇ? ಎನ್ನುತ್ತಾರೆ ವಿಜಯ್.

    ಕಾರಿನ ಚಾಲಕ ಸ್ವಲ್ಪ ನೀರಿದೆ ಎಂದು ಕಾರು ಇಳಿಸಿದ್ದಾನೆ. ಆದರೆ ಕಾರು ಇಳಿಯುತ್ತಿದ್ದಂತೆ ಪೂರ್ತಿ ಮುಳುಗಿದೆ. ನೀರು ನಿಂತಾಗ ಸರಿಯಾಗಿ ನೋಡಿಕೊಂಡು ಹೋಗಬೇಕು. ಅನಾವಶ್ಯಕವಾಗಿ ದುಸ್ಸಾಹಸಕ್ಕೆ ಮುಂದಾಗಬಾರದು ಎನ್ನುತ್ತಾರೆ ವಿಜಯ್ ಕುಮಾರ್.

    ವಿಜಯ್ ಕುಮಾರ್ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂಚಾರಿ ಪೊಲೀಸ್ ಇಲಾಖೆ (Traffic Police) ಹತ್ತು ಸಾವಿರ ರೂ. ಬಹುಮಾನ ಘೋಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಟೆಕ್ಕಿ ಸಾವು – ದುರ್ಘಟನೆ ಬಳಿಕ ಎಚ್ಚೆತ್ತ BBMP

  • ಅಂಡರ್ ಪಾಸ್‌ನಲ್ಲಿ ಐವರನ್ನು ರಕ್ಷಿಸಿದ ಪಬ್ಲಿಕ್ ಟಿವಿ ಚಾಲಕನಿಗೆ ಬಿಬಿಎಂಪಿ ಆಯುಕ್ತರಿಂದ ಸನ್ಮಾನ

    ಅಂಡರ್ ಪಾಸ್‌ನಲ್ಲಿ ಐವರನ್ನು ರಕ್ಷಿಸಿದ ಪಬ್ಲಿಕ್ ಟಿವಿ ಚಾಲಕನಿಗೆ ಬಿಬಿಎಂಪಿ ಆಯುಕ್ತರಿಂದ ಸನ್ಮಾನ

    ಬೆಂಗಳೂರು: ಕೆಆರ್ ಸರ್ಕಲ್‌ನ (KR Circle) ಅಂಡರ್ ಪಾಸ್‌ನಲ್ಲಿ (Under Pass) ಸಿಲುಕಿದ್ದ ಐವರನ್ನು ರಕ್ಷಿಸಿದ್ದ ಪಬ್ಲಿಕ್ ಟಿವಿಯ ಚಾಲಕ (Public TV Driver) ವಿಜಯ್ ಕುಮಾರ್ (Vijay Kumar) ಅವರನ್ನು ಬಿಬಿಎಂಪಿ (BBMP) ಕಮಿಷನರ್ ತುಷಾರ್ ಗಿರಿನಾಥ್ ಸನ್ಮಾನಿಸಿ ಪ್ರಶಂಸಿಸಿದ್ದಾರೆ.

    ಭಾನುವಾರ ಸುರಿದ ಭಾರೀ ಮಳೆಯ ಹಿನ್ನೆಲೆ ಕೆಆರ್ ಸರ್ಕಲ್‌ನ ಅಂಡರ್ ಪಾಸ್‌ನಲ್ಲಿ ಕುಟುಂಬವೊಂದು ಕಾರಿನಲ್ಲಿ ಸಿಲುಕಿಕೊಂಡಿತ್ತು. ಘಟನೆಯಲ್ಲಿ ಪಬ್ಲಿಕ್ ಟಿವಿಯ ಚಾಲಕ ವಿಜಯ್ ಕುಮಾರ್ ತಮ್ಮ ಪ್ರಾಣದ ಹಂಗನ್ನು ತೊರೆದು, ನೀರಲ್ಲಿ ಈಜಿ ಐವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.

    ಪಬ್ಲಿಕ್ ಟಿವಿ ಚಾಲಕನ ಸಾಹಸಕ್ಕೆ ಅಭಿನಂದನೆ ಸಲ್ಲಿಸಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ವಿಜಯ್ ಕುಮಾರ್ ಅವರು ಸಹಾಸದ ಕೆಲಸ ತೋರಿಸಿದ್ದಾರೆ. ಬಹಳ ಶ್ರಮಪಟ್ಟು ಜೀವ ಉಳಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅವರ ಕೆಲಸ ಶ್ಲಾಘನೀಯ. ಸಾರ್ವಜನಿಕರು ಸಹ ಇತಂಹ ಸಮಯದಲ್ಲಿ ಜನರ ನೆರವಿಗೆ ಬರಬೇಕು ಎಂದಿದ್ದಾರೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್‌ಗೆ ಬಹುಮಾನ ಘೋಷಣೆ

    ಘಟನೆಯೇನು?
    ಕಳೆದ ದಿನ ರಾಜ್ಯ ರಾಜಧಾನಿಯಲ್ಲಿ ಸುರಿದ ಭಾರೀ ಮಳೆಗೆ ಕುಟುಂಬವೊಂದು ಕಾರಿನಲ್ಲಿ ಕೆಆರ್ ಸರ್ಕಲ್‌ನ ಅಂಡರ್ ಪಾಸ್‌ನಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದ ಪಬ್ಲಿಕ್ ಟಿವಿಯ ಚಾಲಕ ವಿಜಯ್ ಕುಮಾರ್ ಹಾಗೂ ಇತರರು ಈಜಿಕೊಂಡು ಹೋಗಿ ಐವರನ್ನು ರಕ್ಷಿಸಿದ್ದಾರೆ. ದುರಾದೃಷ್ಟವಶಾತ್ ಘಟನೆಯಲ್ಲಿ ಇನ್ಫೋಸಿಸ್ ಉದ್ಯೋಗಿ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಕ್ಯಾಬ್ ಚಾಲಕ ಸೇರಿದಂತೆ ಐವರನ್ನು ರಕ್ಷಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಣ ಮಳೆ – ಎಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ?

  • ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್‌ಗೆ ಬಹುಮಾನ ಘೋಷಣೆ

    ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್‌ಗೆ ಬಹುಮಾನ ಘೋಷಣೆ

    ಬೆಂಗಳೂರು: ಭಾನುವಾರ ಸುರಿದ ಭಾರೀ ಮಳೆಯ ಹಿನ್ನೆಲೆ ಕೆಆರ್ ಸರ್ಕಲ್‌ನ (KR Circle) ಅಂಡರ್ ಪಾಸ್‌ನಲ್ಲಿ  (Under Pass) ಕುಟುಂಬವೊಂದು ಕಾರಿನಲ್ಲಿ (Car) ಸಿಲುಕಿಕೊಂಡಿತ್ತು. ಘಟನೆಯಲ್ಲಿ ಪಬ್ಲಿಕ್ ಟಿವಿಯ ಚಾಲಕ (Public TV Driver) ವಿಜಯ್ ಕುಮಾರ್ (Vijay Kumar) ತಮ್ಮ ಪ್ರಾಣದ ಹಂಗನ್ನು ತೊರೆದು, ನೀರಲ್ಲಿ ಈಜಿ ಐವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕಳೆದ ದಿನ ರಾಜ್ಯ ರಾಜಧಾನಿಯಲ್ಲಿ ಸುರಿದ ಭಾರೀ ಮಳೆಗೆ ಕುಟುಂಬವೊಂದು ಕಾರಿನಲ್ಲಿ ಕೆಆರ್ ಸರ್ಕಲ್‌ನ ಅಂಡರ್ ಪಾಸ್‌ನಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದ ಪಬ್ಲಿಕ್ ಟಿವಿಯ ಚಾಲಕ ವಿಜಯ್ ಕುಮಾರ್ ಹಾಗೂ ಇತರರು ಈಜಿಕೊಂಡು ಹೋಗಿ ಐವರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಟೆಕ್ಕಿ ಸಾವು – ದುರ್ಘಟನೆ ಬಳಿಕ ಎಚ್ಚೆತ್ತ BBMP

    ದುರಾದೃಷ್ಟವಶಾತ್ ಘಟನೆಯಲ್ಲಿ ಇನ್ಫೋಸಿಸ್ ಉದ್ಯೋಗಿ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಕ್ಯಾಬ್ ಚಾಲಕ ಸೇರಿದಂತೆ ಐವರನ್ನು ರಕ್ಷಿಸಲಾಗಿದೆ.

    ಇದೀಗ ವಿಜಯ್ ಕುಮಾರ್ ಹಾಗೂ ಪಬ್ಲಿಕ್ ಟಿವಿಯ ಕಾರ್ಯಕ್ಷಮತೆಗೆ ಮೆಚ್ಚಿ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಬೆಂಗಳೂರು ಸಂಚಾರಿ ಜಂಟಿ ಆಯುಕ್ತ ಅನುಚೇತನ್ ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಣ ಮಳೆ – ಎಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ?