Tag: ಕೆಂಪೇಗೌಡ ಪ್ರಶಸ್ತಿ

  • 100 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

    100 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

    ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಬಿಬಿಎಂಪಿ ಅದ್ದೂರಿಯಾಗಿ ಆಚರಿಸಿದೆ. ಬಿಬಿಎಂಪಿಯ ಗಾಜಿನ ಮನೆಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪಬ್ಲಿಕ್ ಟಿವಿ ಕಾರ್ಯನಿರ್ವಾಹಕ ಸಂಪಾದಕ ಸಿ ದಿವಾಕರ್ ಸೇರಿದಂತೆ ನೂರು ಮಂದಿ ಸಾಧಕರಿಗೆ ಸಿಎಂ ಯಡಿಯೂರಪ್ಪ ಮತ್ತು ಡಿಸಿಎಂ ಅಶ್ವಥ್‍ನಾರಾಯಣ್ ಪ್ರಶಸ್ತಿ ಪ್ರದಾನ ಮಾಡಿದರು.

    ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಐಪಿಎಸ್ ಅಧಿಕಾರಿ ಡಿ.ರೂಪಾ, ಗಾಯಕಿ ಮಂಜುಳಾ ಗುರುರಾಜ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಪ್ರಶಸ್ತಿ ಸ್ವೀಕರಿಸಿದ್ರು. ಇದೇ ವೇಳೆ, ಲಕ್ಷ್ಮಿದೇವಿ ಪ್ರಶಸ್ತಿ, ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು ವಿತರಿಸಲಾಯ್ತು.

    ಈ ಬಾರಿ ಶಿವೈಕ್ಯರಾದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಹೆಸರಿನಲ್ಲಿ 5 ಸಂಸ್ಥೆಗಳಿಗೆ ಪ್ರಶಸ್ತಿ ನೀಡಿದರೆ 10 ಮಂದಿ ಸಾಧಕಿಯರಿಗೆ ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮೀದೇವಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

  • ಗುರುರಾಜ ಕರ್ಜಗಿ, ರೂಪಾ ಸೇರಿದಂತೆ 100 ಮಂದಿಗೆ ಕೆಂಪೇಗೌಡ ಪ್ರಶಸ್ತಿ

    ಗುರುರಾಜ ಕರ್ಜಗಿ, ರೂಪಾ ಸೇರಿದಂತೆ 100 ಮಂದಿಗೆ ಕೆಂಪೇಗೌಡ ಪ್ರಶಸ್ತಿ

    ಬೆಂಗಳೂರು: ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ಐಪಿಎಸ್ ಅಧಿಕಾರಿ ರೂಪಾ ಸೇರಿದಂತೆ 100 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿಯನ್ನು ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

    ಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ದಿವಾಕರ್ ಕೆ, ಚಲನ ಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಸಾಹಿತಿ ಚಂದ್ರಶೇಖರ್ ಪಾಟೀಲ್ ಸೇರಿದಂತೆ 100 ಮಂದಿ ಗಣ್ಯರಿಗೆ ಈ ಬಾರಿ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ.

    ಈ ಬಾರಿ ಶಿವೈಕ್ಯರಾದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ 5 ಸಂಸ್ಥೆಗಳು ಆಯ್ಕೆಯಾಗಿವೆ. ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮೀದೇವಿ ಪ್ರಶಸ್ತಿಗೆ 10 ಮಂದಿ ಸಾಧಕಿಯರು ಆಯ್ಕೆಯಾಗಿದ್ದಾರೆ.

    ಪರಮಪೂಜ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಪುರಸ್ಕೃತ ಸಂಸ್ಥೆಗಳು: ಶ್ರೀರಮಣಮಹರ್ಷಿ ಅಕಾಡೆಮಿ ಫಾರ್ ಬ್ಲೈಂಡ್ಸ್, ಬಾಸ್ಕೋ ಮನೆ, ಸುಮಂಗಲಿ ಸೇವಾಶ್ರಮ ಟ್ರಸ್ಟ್, ಮುಸ್ಲಿಂ ಅನಾಥಾಶ್ರಮ, ಮನೋನಂದನ ಬುದ್ಧಿಮಾಂದ್ಯ ಮಕ್ಕಳ ಶಾಲೆ.

    ನಾಡಪ್ರಭು ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮೀದೇವಿ ಪ್ರಶಸ್ತಿ ಪುರಸ್ಕೃತ: ಲೀಲಾದೇವಿ.ಆರ್. ಪ್ರಸಾದ್(ಸಮಾಜ ಸೇವೆ), ಧನಭಾಗ್ಯಮ್ಮ(ಕನ್ನಡ ಸೇವೆ), ಕವನ ಬಸವಕುಮಾರ್(ಸಮಾಜ ಸೇವೆ), ಅನುಸೂಯ.ಎ(ಕ್ರೀಡೆ), ಡಾ.ಲಕ್ಷ್ಮಿ.ಬಿ.ಆರ್.(ನೃತ್ಯ), ಕು.ಪ್ರಾಚಿಗೌಡ(ಸಮಾಜ ಸೇವೆ), ಭಾರತಿ.ವಿ(ಸಮಾಜ ಸೇವೆ), ನಾರಂಗಿ ಭಾಯಿ(ಸಮಾಜ ಸೇವೆ), ಡಾ.ಗೌರಿಶ್ರೀ(ರಂಗಭೂಮಿ), ಕು.ಸೌಜನ್ಯ ವಸಿಷ್ಠ(ಸಮಾಜ ಸೇವೆ).

    ಕೆಂಪೇಗೌಡ ಪ್ರಶಸ್ತಿ:
    ಚಂದ್ರಶೇಖರ್ ಪಾಟೀಲ್ (ಕನ್ನಡ ಸೇವೆ), ಲೀಲಾವತಿ (ಚಲನಚಿತ್ರ), ಅಲ್ಮಿತ್ರಾ ಪಟೇಲ್ (ಸಮಾಜ ಸೇವೆ), ಮುಖ್ಯಮಂತ್ರಿ ಚಂದ್ರು (ಚಲನಚಿತ್ರ), ಪ್ರೋ.ಶಿವರಾಮಯ್ಯ (ಸಾಹಿತ್ಯ), ಕೇಶವರೆಡ್ಡಿ ಹಂದ್ರಾಳ (ಸಾಹಿತ್ಯ), ಪ್ರೊ.ಅಬ್ದುಲ್ ಬಷೀರ್ ಜಿ. (ಸಾಹಿತ್ಯ), ರವಿವರ್ಮ ಕುಮಾರ್ (ಸಮಾಜ ಸೇವೆ), ಮಾವಳ್ಳಿ ಶಂಕರ್ (ಸಾಮಾಜ ಸೇವೆ), ವೀರಸಂಗಯ್ಯ (ಸಮಾಜ ಸೇವೆ), ಸುಮಾ ಸುಧೀಂದ್ರ (ಸಂಗೀತ), ಕನಕಮೂರ್ತಿ (ಶಿಲ್ಪಕಲೆ), ಪ್ರೋ.ಡಿ.ಮಂಚೇಔಡ (ಸಮಾಜ ಸೇವೆ), ಅನಿಲ್ ಕುಮಾರ್ (ಚಿತ್ರಕಲೆ), ಆಂಜಿನಪ್ಪ ಶಂಖನಾದ (ರಂಗಭೂಮಿ), ರೂಪಾ ಡಿ, ಐಪಿಎಸ್ (ಸರ್ಕಾರಿ ಸೇವೆ), ಅನುಚೇತ್ ಎಂಎಸ್,, ಐಪಿಎಸ್ ಹಾಗೂ 6 ಸದಸ್ಯರನ್ನೊಳಗೊಂಡ ಗೌರಿ ಲಂಕೇಶ್ ಪ್ರಕರಣ ಬೇಧಿಸಿದ ತಂಡ (ಸಮಾಜ ಸೇವೆ), ಬಿಂದುರಾಣಿ. ಜಿ (ಕ್ರೀಡೆ), ಭೈರೇಗೌಡ ಎಸ್ (ಶಿಕ್ಷಣ), ಚಂದ್ರಕಲಾ ಗಂ.ಸಂಗಪ್ಪ ಹಾರಕೂಡ (ಸಾಂಸ್ಕೃತಿಕ), ಚಿದಂಬರ ಎನ್.ಎ (ಸಮಾಜ ಸೇವೆ).

    ದೇವನಾಥ್.ಎಸ್. (ಮಾಧ್ಯಮ), ಗೋವಿಂದರಾಜು (ಸಾಂಸ್ಕೃತಿಕ), ಪ್ರತಿಭಾ ನಂದಕುಮಾರ್ (ಸಾಹಿತ್ಯ), ಕುಶಲ ಡಿಮೊಲೊ (ಮಾಧ್ಯಮ), ಲಕ್ಷ್ಮಣ್ ಎಂ (ಸಂಗೀತ), ಮಧುಲಿತ ಮೊಹಪಾತ್ರ (ನೃತ್ಯ), ಮಣಿ ಎನ್.ವಿ. (ಶಿಕ್ಷಣ), ಮಂಜುಳಾ ಶಿವಾನಂದ್ (ಕನ್ನಡ ಸೇವೆ), ಮಂಜುಳಮ್ಮ (ರಂಗಭೂಮಿ), ಮಯಾ ಬ್ರಹ್ಮಚಾರ್ (ರಂಗಭೂಮಿ), ಪೂರ್ಣಿಮಾ ಗುರುರಾಜ್ (ನೃತ್ಯ), ಪ್ರಕಾಶ್ ಅರಸ್ (ವಿವಿಧ), ಪ್ರಮೀಳಾ ಶಂಕರ್ (ವಿವಿಧ), ಪ್ರತ್ಯಕ್ಷ (ಬಾಲ ಪ್ರತಿಭೆ), ರಾ.ನಂ.ಚಂದ್ರಶೇಖರ್ (ಕನ್ನಡ ಸೇವೆ), ರಾಜಲಕ್ಷ್ಮಿ.ಜಿ.ಎಸ್. (ನೃತ್ಯ), ರತ್ನಂ.ಆರ್ (ಚಲನಚಿತ್ರ), ಸದಾಶಿವಪ್ಪ.ಎಂ (ಸಮಾಜ ಸೇವೆ), ಸಂಜಯ್ ಶಾಂತಾರಾಮ್ (ನೃತ್ಯ), ಶಾಂತ ರಾಮಮೂರ್ತಿ (ಕ್ರೀಡೆ), ಶಿವಾನಂದ (ವೈದ್ಯಕೀಯ), ಸಿದ್ಧರಾಮರಾವ್.ಎಸ್.ಪಿ (ವಿವಿಧ), ಮೀನಾಕ್ಷಿ (ರಂಗಭೂಮಿ), ಸುಬ್ರಮಣ್ಯ .ಬಿ.ಎನ್ (ಚಲನಚಿತ್ರ), ರಾಮಚಂದ್ರಪ್ಪ ಎಸ್.ಟಿ. (ವಿವಿಧ), ಶಿವರಾಜು ಬಿ.ಬಿ. (ಸಮಾಜ ಸೇವೆ), ವಿದುಷಿ ರಮಾ.ಪಿ (ಸಂಗೀತ).

    ನಾಗೇಶ್ ಬೆಟ್ಟಕೋಟೆ (ರಂಗಭೂಮಿ), ರೇಣುಕಾರಾಧ್ಯ ಆರ್ (ಸಾಂಸ್ಕøತಿಕ), ಸುಧಾಕರ ದರ್ಬೆ (ಚಿತ್ರಕಲೆ), ರಾಜಯೋಗೀಂದ್ರ ಶ್ರೀ ವೀರಯ್ಯಸ್ವಾಮಿ ಬಿ.ಶಾಸ್ತ್ರಿಮಠ್ (ವಿವಿಧ), ಮಹೇಂದ್ರನಾಥ್ ಕೆ.ಎನ್. (ವೈದ್ಯಕೀಯ), ವಿಕ್ರಂ ಸೂರಿ (ವಿವಿಧ), ಶಾಂತಿ ತುಮ್ಮಲ (ವೈದ್ಯಕೀಯ), ಮುನಿತಿಮ್ಮಯ್ಯ (ಕ್ರೀಡೆ), ಉಸ್ಮಾನ್ (ಸಂಗೀತ), ಶಂಕರ್ ಟಿ.ಜಿ. (ಕ್ರೀಡೆ), ನಿಸರ್ಗ ಜಗದೀಶ್ (ಸಮಾಜ ಸೇವೆ), ಶಿವಕುಮಾರ್.ಡಿ. (ಸಮಾಜ ಸೇವೆ), ಯೋಗೇಂದ್ರ.ಎಂ (ಕ್ರೀಡೆ), ಹರ್ಷಿಣಿ.ಪಿ (ಕ್ರೀಡೆ), ನವೀನ್ ತಿವಾರಿ (ವಿವಿಧ), ಶರದ್ ಶರ್ಮಾ (ವಿವಿಧ), ತಮ್ಮಣ್ಣ ಗೌಡ (ಸಮಾಜ ಸೇವೆ), ಚಿಕ್ಕಂ (ಶಿಕ್ಷಣ), ಕೇಶವ್ ಕುಮಾರ್ (ಸಮಾಜ ಸೇವೆ), ಕಿರಣ್ ಹೆಚ್.ವಿ (ಮಾಧ್ಯಮ), ದಿವಾಕರ್ (ಮಾಧ್ಯಮ), ರಜನಿ ಎಂ.ಜಿ. (ಮಾಧ್ಯಮ), ಸುಭಾಸ್ ಹೂಗಾರ್ (ಮಾಧ್ಯಮ), ಗಣೇಶ್ ಕೆ.ಎಸ್ (ಮಾಧ್ಯಮ)

    ಅರುಣ್.ಬಿ.ಎ.(ಮಾಧ್ಯಮ), ಸೂರಜ್ ಮಹಾವೀರ್ ಉತ್ರೆ(ಮಾಧ್ಯಮ), ಶ್ರೀನಾಥ್ ಜೋಷಿ (ಮಾಧ್ಯಮ), ಚಂದನ್ ಶರ್ಮಾ(ಮಾಧ್ಯಮ), ಸಿದ್ದು ಕಾಳೋಜಿ(ಮಾಧ್ಯಮ), ಶ್ರೀನಿವಾಸ ಪ್ರಸಾದ್.ಎಚ್.ಎನ್(ಮಾಧ್ಯಮ), ಅಶೋಕ್ ರಾಮ್(ಮಾಧ್ಯಮ), ನಾಗರಾಜ್ ಭಟ್(ಮಾಧ್ಯಮ), ಪ್ರವೀಣ್ ಹಕ್ಕಿ(ಮಾಧ್ಯಮ), ವಿಜಯಲಕ್ಷ್ಮಿ(ಸಮಾಜ ಸೇವೆ), ಕೇಶವ್ ಮೂರ್ತಿ(ಸಮಾಜ ಸೇವೆ), ಶಿವಣ್ಣ.ಟಿ.(ಶಿಕ್ಷಣ), ಪೈಲ್ವಾನ್ ನಾಗರಾಜ್(ಕ್ರೀಡೆ), ಸುನೀಲ್ ರಾಜು(ಕ್ರೀಡೆ), ಹೇಮಾ ಭಾರತ್(ನೃತ್ಯ), ಅರ್ಜುನಪ್ಪ.ಜಿ.ಎನ್.(ಕ್ರೀಡೆ), ಭರತ್ ಕುಮಾರ್(ಕ್ರೀಡೆ), ಸಂಪತ್.ಡಿ.ಎನ್.(ಸ್ವಾತಂತ್ರ್ಯ ಹೋರಾಟಗಾರರು), ವಿನೋದ್.ಬಿ.ಆರ್.(ಶಿಕ್ಷಣ), ಡಾ.ಸುರೇಂದ್ರ.ವಿ.ಎಸ್.(ಶಿಕ್ಷಣ), ಕುಮಾರ್.ಎನ್(ಕ್ರೀಡೆ), ಹೆಗ್ಡೆ.ಜಿ.ಎಸ್.(ಸಂಗೀತ), ಡಾ.ಆಶು ಶಾ(ಸಮಾಜ ಸೇವೆ), ಹೇಮಲತಾ ಚಿದಾನಂದ್(ಸಮಾಜ ಸೇವೆ), ಸೈಯದ್ ಗುಲಾಬ್(ಸಮಾಜ ಸೇವೆ).

  • ಅನಾಥ ಮಗುವಿಗೆ ಹಾಲುಣಿಸಿದ ಮಹಿಳಾ ಪೊಲೀಸ್ ಪೇದೆಗೆ ಕೆಂಪೇಗೌಡ ಪ್ರಶಸ್ತಿ

    ಅನಾಥ ಮಗುವಿಗೆ ಹಾಲುಣಿಸಿದ ಮಹಿಳಾ ಪೊಲೀಸ್ ಪೇದೆಗೆ ಕೆಂಪೇಗೌಡ ಪ್ರಶಸ್ತಿ

    ಬೆಂಗಳೂರು: ಜೂನ್ 1 ರಂದು ಕಸದ ತೊಟ್ಟಿಯಲ್ಲಿ ಸಿಕ್ಕ ನವಜಾತ ಶಿಶುವಿಗೆ ಹಾಲುಣಿಸಿ ಮೆಚ್ಚುಗೆಗೆ ಪಾತ್ರವಾಗಿದ್ದ ಪೊಲೀಸ್ ಮಹಿಳಾ ಪೇದೆ ಅರ್ಚನಾ ಅವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದಾಗಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.

    ಇಂದು ಅರ್ಚನಾರನ್ನು ಸನ್ಮಾನಿಸಿ ಬಳಿಕ ಮಾತನಾಡಿದ ಅವರು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೇದೆ ಅರ್ಚನಾ ಅವರ ಮಾನವೀಯತೆ ಕಾರ್ಯ ಮೆಚ್ಚುವಂತಹದ್ದು. ಅದ್ದರಿಂದ ಅವರಿಗೆ ಸನ್ಮಾನ ಮಾಡಿ ಸೀರೆ ಹಾಗೂ ಕೆಂಪೇಗೌಡ ಪದಕ ನೀಡಲಾಗಿದೆ. ಅಲ್ಲದೇ ಈ ಬಾರಿಯ ಕೆಂಪೇಗೌಡ ಪ್ರಶಸ್ತಿಯನ್ನ ಮೊದಲು ಅರ್ಚನಾ ಅವರಿಗೆ ನೀಡಲು ಪಕ್ಷಾತೀತವಾಗಿ ತೀರ್ಮಾನ ಮಾಡಿದ್ದೇವೆ. ಈಗಾಗಲೇ ಸಿಎಂ ಹಾಗೂ ಡಿಸಿಎಂ ಜೊತೆ ಈ ಕುರಿತು ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಏನಿದು ಘಟನೆ?
    ಜೂನ್ 1 ರಂದು ಅನೈತಿಕ ಸಂಬಂಧಕ್ಕೋ ಅಥವಾ ಮದುವೆಗೆ ಮುಂಚೆ ಹುಟ್ಟಿದ್ದಕ್ಕೋ ತಾಯಿಯೊಬ್ಬಳು ತನ್ನ ಮಗುವನ್ನು ಪೊದೆಯೊಂದರ ಬಳಿ ಎಸೆದು ಹೋಗಿದ್ದಳು. ರಸ್ತೆಯಲ್ಲಿ ಓಡಾಡೋ ಜನ ಮಗುವಿನ ಅಳುವಿನ ಶಬ್ಧ ಕೇಳಿ ಮಗುವನ್ನು ರಕ್ಷಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಒಪ್ಪಿಸಿದ್ದರು.

    ಹೊಟ್ಟೆ ಹಸಿವಿನಿಂದ ಅಳುತ್ತಿದ್ದ ಮಗುವಿನ ಕೂಗಿಗೆ ಕೆಲವು ದಿನಗಳ ಹಿಂದಷ್ಟೇ ಬಾಣಂತನ ಮುಗಿಸಿ ಕೆಲಸಕ್ಕೆ ಬಂದಿದ್ದ ಮಹಿಳಾ ಪೇದೆ ಅರ್ಚನಾ ಹಿಂದು-ಮುಂದು ನೋಡದೆ ಹಾಲುಣಿಸಿ ಮಗುವನ್ನು ಬಾಲವಿಹಾರಕ್ಕೆ ಕಳುಹಿಸಿದ್ದರು. ಆದರೆ ಕೆಲ ದಿನಗಳ ಬಳಿಕ ಬಾಲ ವಿಹಾರದಲ್ಲಿದ್ದ ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅರ್ಚನಾ, ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಮುಂದಿನ ಜನ್ಮದಲ್ಲಾದ್ರೂ ಮಗುವಿಗೆ ಒಳ್ಳೆ ತಾಯಿ ಸಿಗಲಿ ಎಂದು ಹೇಳಿದ್ದರು. ಅಲ್ಲದೇ ಒಂದು ಬಾರಿ ಹಾಲುಣಿಸಿದ್ದ ಮಗುವಿನ ಸಾವನ್ನು ತನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾತನಾಡುತ್ತಲೇ, ದುಃಖ ತಡೆಯಲಾರದೆ ಅಳುತ್ತಾ ತೆರಳಿದ್ದರು.