Tag: ಕೆ

  • ಕೊಚ್ಚೆ ನೀರೇ ಕುಡಿದಿದ್ದೇನೆ – ಹೆಚ್‍ಡಿಕೆಗೆ ಜೆಡಿಎಸ್ ಶಾಸಕ ಟಾಂಗ್

    ಕೊಚ್ಚೆ ನೀರೇ ಕುಡಿದಿದ್ದೇನೆ – ಹೆಚ್‍ಡಿಕೆಗೆ ಜೆಡಿಎಸ್ ಶಾಸಕ ಟಾಂಗ್

    ಕೋಲಾರ: ನಾನು ಕೊಚ್ಚೆ ನೀರನ್ನೇ ಕುಡಿದಿದ್ದೇನೆ ಎಂದು ಹೇಳುವ ಮೂಲಕ ಜೆಡಿಎಸ್ ಶಾಸಕ ಕೆ. ಶ್ರೀನಿವಾಸಗೌಡ ಅವರು ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.

    ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆ 2 ನೇ ಬಾರಿಗೆ ತುಂಬಿದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದ ಬಳಿಕ ಕುಮಾರಸ್ವಾಮಿಗೆ ನೇರ ಟಾಂಗ್ ನೀಡಿದರು. ಕೊಚ್ಚೆ ನೀರನ್ನ ನಾನು ಕುಡಿದಿದ್ದೇನೆ, ನಾನು ಸತ್ತಿದ್ದರೆ ಅದು ಕೊಚ್ಚೆ ನೀರು. ನಾವು ರೈತರು ನಮಗೆ ನೀರು ಮುಖ್ಯ ಯಾವ ನೀರು ಅನ್ನೋದಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದರು. ಇದನ್ನೂ ಓದಿ: ಎತ್ತಿನಹೊಳೆ ಹಣ ಮಾಡುವ ಯೋಜನೆ: ಕುಮಾರಸ್ವಾಮಿ

    ಆಗಸ್ಟ್ 18 ರಂದು ಕೋಲಾರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ವೇಳೆ ಶಾಸಕ ರಮೇಶ್ ಕುಮಾರ್ ವಿರುದ್ಧ ಹೆಚ್‍ಡಿಕೆ ಹರಿಹಾಯ್ದಿದಿದ್ದರು. ಕೆ.ಸಿ.ವ್ಯಾಲಿ ಕೊಚ್ಚೆ ನೀರು ಕೊಟ್ಟು ಮಹಾನ್ ಕಾರ್ಯ ಎಂದುಕೊಂಡಿದ್ದಾರೆ ಎಂದು ಕಿಡಿಕಾರಿದ್ರು. ಇದಕ್ಕೆ ಇಂದು ರಮೇಶ್ ಕುಮಾರ್ ಎದುರಿಗೆ ತಮ್ಮ ನಾಯಕನಿಗೆ ಟಾಂಗ್ ನೀಡಿದ ಕೋಲಾರ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಎಂದಿನಂತೆ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರನ್ನು ಕೊಂಡಾಡಿದ್ರು. ಇನ್ನೂ ಬಳಿಕ ಮಾತನಾಡಿದ ರಮೇಶ್ ಕುಮಾರ್ ಗಾಳಿಯಲ್ಲಿ ಬಂದು ಮಾತನಾಡಿ ಹೋಗುವವರ ಬಗ್ಗೆ ನಾನು ಮಾತನಾಡುವುದಿಲ್ಲ, ಅವರೆಲ್ಲಾ ಹಾಗೆ ಇರಲಿ ದೊಡ್ಡವರು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ರು.

  • ಕುಮಾರಸ್ವಾಮಿಯವರನ್ನ ಎಸ್‍ಐಟಿ ವಿಚಾರಣೆ ಮಾಡಬೇಕು: ಕೆ.ಎನ್ ರಾಜಣ್ಣ

    ಕುಮಾರಸ್ವಾಮಿಯವರನ್ನ ಎಸ್‍ಐಟಿ ವಿಚಾರಣೆ ಮಾಡಬೇಕು: ಕೆ.ಎನ್ ರಾಜಣ್ಣ

    – ಸಿಎಂ ಪುತ್ರ ವಿಜಯೇಂದ್ರರರೇ ‘ಆ’ ಮಹಾನಾಯಕ

    ತುಮಕೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರನ್ನ ಎಸ್‍ಐಟಿಯವರು ವಿಚಾರಣೆ ಮಾಡಬೇಕು ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಅಲ್ಲಿ ಇಲ್ಲಿ ಹುಡುಕಾಡುವ ಬದಲಾಗಿ ಕುಮಾರಸ್ವಾಮಿಯವರೇ ಹೇಳಿದ್ದಾರಲ್ಲ, ನನಗೆ ಐದು ಕೋಟಿ ಡೀಲ್ ಮಾಡಿರೋದು ಗೊತ್ತಿದೆ ಅಂತ. ಆ ಮಹಾನಾಯಕ ಯಾರೆಂದು ಗೊತ್ತಿದೆ ಅಂತ ಅವರೇ ಹೇಳಿದ್ಮೇಲೆ ಎಸ್ ಐಟಿಯವರು ಕುಮಾರಸ್ವಾಮಿ ಹೇಳಿಕೆ ತಗೆದುಕೊಳ್ಳಬೇಕು. ತನಿಖೆಗೆ ಸಹಕಾರ ಕೊಟ್ರು ಅನ್ನುವ ಕೀರ್ತಿ ಕುಮಾರಸ್ವಾಮಿಗೆ ಸಿಗುತ್ತೆ. ಕುಮಾರಸ್ವಾಮಿಯವರ ಅಧಿಕೃತ ಹೇಳಿಕೆ ಪಡೀಬೇಕು. ಅವರ ಹೇಳಿಕೆ ಪಡೆದ್ರೆ ತನಿಖೆ ಬೇಗ ಮುಗಿಸಲು ಸಹಕಾರವಾಗುತ್ತದೆ ಎಂದರು.

    ಸಿಎಂ ಪುತ್ರ ವಿಜಯೇಂದ್ರರರೇ ಆ ಮಹಾನಾಯಕ. ರಾಜ್ಯದಲ್ಲಿ ಸಿಎಂ ಹೊರತುಪಡಿಸಿದರೆ ಮಹಾನಾಯಕ ಯಾರು..? ಸಿಎಂ ಪುತ್ರ ವಿಜಯೇಂದ್ರರೇ ಆ ಮಹಾನಾಯಕ ಇರಬಹುದು. ಸತ್ಯ ಹೊರಗೆ ಬಾರದೇ ನಾವು ಆರೋಪ ಮಾಡಿ ಚಾರಿತ್ಯ ವಧೆ ಮಾಡಬಾರದು. ಎಲ್ಲರೂ ವಿಜಯೇಂದ್ರರ ಮೇಲೆ ಊಹೆ ಮಾಡುತ್ತಾರೆ. ಕಾಂಗ್ರೆಸ್ಸಿನಿಂದ ಬಂದವರು ಪುನಃ ಕಾಂಗ್ರೆಸ್ಸಿಗೆ ಹೋಗಬಹುದು ಎಂದು ಬ್ಲಾಕ್ ಮೇಲ್ ಮಾಡಲು ಹೀಗೆ ಮಾಡಿರಬಹುದು. ತನಿಖೆಯಾಗಲಿ ಸತ್ಯ ಹೊರಗೆ ಬರಲಿ ಎಂದು ಆಗ್ರಹಿಸಿದರು.

    ಸಿಡಿ ಅಪ್ ಲೋಡ್ ಆಗುವ ಎರಡು ದಿನ ಮುಂಚೆ ಮಹಾರಾಷ್ಟ್ರ ಮಾಜಿ ಸಿಎಂ ಫಡ್ನವಿಸ್ ಅವರು ಜಾರಕಿಹೊಳಿಗೆ ಫೋನ್ ಮಾಡಿ ತಿಳಿಸಿದ್ರು. ನಾಳೆ ನಾಡಿದ್ದು ಸಿಡಿ ಅಪ್ಲೋಡ್ ಆಗುತ್ತೆ ಅಂತ ಫೋನ್ ಮಾಡಿ ತಿಳಿಸಿದ್ದಾರೆ. ಹಿಂಗೆಲ್ಲಾ ಸಿಡಿ ಅಪ್ಲೋಡ್ ಮಾಡ್ತಾರೆ ಬೇಜಾರ್ ಮಾಡ್ಕೋಬೇಡ ನಿಮ್ಮ ಜೊತೆ ನಾವೆಲ್ಲಾ ಇರ್ತಿವಿ ಬೇಜಾರ್ ಮಾಡ್ಕೋಬೇಡ ಅಂತ ಫಡ್ನವೀಸ್ ಹೇಳಿದ್ದಾರೆ. ನನಗೆ ಒಂದು ಆಶ್ಚರ್ಯ ಅಂದ್ರೆ ಮಹಾರಾಷ್ಟ್ರದ ಸಿಎಂಗೆ ಮಾಹಿತಿ ಇರುತ್ತೆ. ನಮ್ಮಲ್ಲಿರುವ ಇಂಟೆಲಿಜೆನ್ಸ್ ಕತ್ತೆ ಕಾಯ್ತಾರಾ? ಎಂದು ರಾಜಣ್ಣ ಕಿಡಿಕಾರಿದರು.

  • ಕೊರೊನಾ ಮಧ್ಯೆ ಆಯುಧ ಪೂಜೆ ಸಂಭ್ರಮ – ಬೆಂಗಳೂರಲ್ಲಿ ಹಬ್ಬದ ಖರೀದಿ ಜೋರು

    ಕೊರೊನಾ ಮಧ್ಯೆ ಆಯುಧ ಪೂಜೆ ಸಂಭ್ರಮ – ಬೆಂಗಳೂರಲ್ಲಿ ಹಬ್ಬದ ಖರೀದಿ ಜೋರು

    ಬೆಂಗಳೂರು: ರಾಜ್ಯಾದ್ಯಂತ ಇಂದು ಆಯುಧ ಪೂಜೆಯ ಸಂಭ್ರಮ ಕಳೆಗಟ್ಟಿದೆ. ಕೊರೊನಾ ಮಧ್ಯೆ ಆಯುಧ ಪೂಜೆ ಆಚರಣೆ ಭರದಿಂದ ಸಾಗುತ್ತಿದೆ.

    ಆಯುಧ ಪೂಜೆಯ ಪ್ರಯುಕ್ತ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ನಲ್ಲಿ ಬೆಳ್ಳಂಬೆಳಗ್ಗೆ ಜನಜಾತ್ರೆ ಕಂಡುಬಂದಿದೆ. ಹೂ, ಹಣ್ಣು, ಬಾಳೆ ಕಂದು, ಬೂದಗುಂಬಳ ಖರೀದಿ ಭರಾಟೆ ಜೋರಾಗಿದೆ. ಸಾವಿರಾರು ಜನ ಒಟ್ಟಿಗೆ ಸೇರಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ. ಕಾಲಿಡಲು ಜಾಗವಿಲ್ಲದಷ್ಟು ಜನ ತುಂಬಿಕೊಂಡಿದ್ದು, ಹಬ್ಬದ ಹಿನ್ನಲೆಯಲ್ಲಿ ಹೂ ಹಣ್ಣು ಖರೀದಿಸಲು ಜನಸಾಗರವೇ ಮುಗಿಬಿದ್ದಿದೆ.

    ಕೊರೊನಾ ನಿಯಮಗಳು ಸಂಪೂರ್ಣ ಉಲ್ಲಂಘನೆಯಾಗಿವೆ. ಸಾಮಾಜಿಕ ಅಂತರವಿಲ್ಲದೇ ಜನ ವ್ಯಾಪಾರದಲ್ಲಿ ತಲ್ಲೀನರಾಗಿದ್ದು, ಕೊರೊನಾ ಸ್ಫೋಟವಾಗುವುದಕ್ಕೆ ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೆ ಸಿಗಲಾರದು ಎನ್ನುವಂತಾಗಿದೆ.

    ಸರ್ಕಲ್ ಮಾರಮ್ಮ ದೇವಾಲಯದಲ್ಲಿ ಭಕ್ತಾದಿಗಳೇ ಪೂಜೆ ಸಲ್ಲಿಸುತ್ತಿದ್ದಾರೆ. ವಾಹನಗಳ ಪೂಜೆಯಿಂದ ಅರ್ಚಕರು ದೂರ ಉಳಿದಿದ್ದಾರೆ. ಸದಾ ವಾಹನಗಳ ಪೂಜೆಯಲ್ಲಿ ಬಿಸಿ ಇರುತ್ತಿದ್ದ ಅರ್ಚಕರು, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದಾರೆ.

    ಬಿಜಿಎಸ್ ಫ್ಲೈ ಓವರ್ ಮೇಲೆ ವೆಹಿಕಲ್ ಪಾರ್ಕಿಂಗ್ ಮಾಡಲಾಗಿದೆ. ಕಿಲೋಮೀಟರ್ ವರೆಗೆ ಜನ ತಮ್ಮ ತಮ್ಮ ವಾಹನ ನಿಲುಗಡೆ ಮಾಡಿದ್ದಾರೆ. ಬಿಜಿಎಸ್ ಪ್ಲೈಓವರ್ ನ ಎರಡೂ ಬದಿಯಲ್ಲಿ ವೆಹಿಕಲ್ ಪಾರ್ಕಿಂಗ್ ಮಾಡಿ ಶಾಪಿಂಗ್ ಗೆ ಹೋಗಿರುವುದು ಕಂಡುಬಂದಿದೆ.

  • ಕಾಂಗ್ರೆಸ್ಸಿನವರು ಬೆಂಕಿ ಹಚ್ಚಲು ಮಂಗ್ಳೂರು ಹೊರಟಿದ್ದು: ಈಶ್ವರಪ್ಪ

    ಕಾಂಗ್ರೆಸ್ಸಿನವರು ಬೆಂಕಿ ಹಚ್ಚಲು ಮಂಗ್ಳೂರು ಹೊರಟಿದ್ದು: ಈಶ್ವರಪ್ಪ

    ಹಾವೇರಿ: ಕಾಂಗ್ರೆಸ್ಸಿನವರಿಗೆ ದೇಶ ಒಂದಾಗೋದು ಬೇಕಾಗಿಲ್ಲ. ಅವರು ಮಂಗಳೂರಿಗೆ ಹೊರಟಿದ್ದು ಸಾಂತ್ವನ ಹೇಳಲು ಅಲ್ಲ, ಬದಲಾಗಿ ಬೆಂಕಿ ಹಚ್ಚಲು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಖಾದರ್ ಸೇರಿ ಕೆಲವರು ಬೆಂಕಿ ಹಚ್ಚಬೇಕಾಗುತ್ತೆ ಅನ್ನೋ ಮಾತನಾಡುತ್ತಿದ್ದಾರೆ. ಮನಸ್ಸಿನಲ್ಲಿ ಗಲಭೆ ಹಚ್ಚೋ ತೀರ್ಮಾನ ಕಾಂಗ್ರೆಸ್ ನವರು ಮಾಡಿದ್ದಾರೆ. ಈಗಾಗಲೇ ಎರಡು ಹೆಣಗಳು ಬಿದ್ದಿವೆ. ಇನ್ನೆಷ್ಟು ಹೆಣಗಳು ಬೀಳಬೇಕು ಎಂದು ಕಿಡಿಕಾರಿದರು.

    ಬ್ರಿಟಿಷರು ಭಾರತ ಮತ್ತು ಪಾಕಿಸ್ತಾನ ಒಡೆದು ಛಿದ್ರಛಿದ್ರ ಮಾಡಿದರು. ಈಗಿನ ಕಾಂಗ್ರೆಸ್ಸಿನವರು ಹಿಂದೂ-ಮುಸ್ಲಿಂ ಧರ್ಮವನ್ನ ಒಡೆದು ಛಿದ್ರ ಛಿದ್ರ ಮಾಡೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗರಂ ಆದರು.

    ಪೌರತ್ವ ಕಾಯ್ದೆ ಇಡೀ ದೇಶವನ್ನ ಒಂದು ಮಾಡುತ್ತದೆ. ಕಾಂಗ್ರೆಸ್ಸಿನವರು ಇದನ್ನ ದುರುಪಯೋಗ ಮಾಡಿಕೊಂಡು ಗಲಭೆ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

     

  • ಡಿಸಿಎಂ ಮಾಡದ್ದಕ್ಕೆ ಈಶ್ವರಪ್ಪ, ಶ್ರೀರಾಮುಲು ಬೆಂಬಲಿಗರ ಆಕ್ರೋಶ

    ಡಿಸಿಎಂ ಮಾಡದ್ದಕ್ಕೆ ಈಶ್ವರಪ್ಪ, ಶ್ರೀರಾಮುಲು ಬೆಂಬಲಿಗರ ಆಕ್ರೋಶ

    ಬೆಂಗಳೂರು: ಖಾತೆ ಹಂಚಿಕೆಯಲ್ಲಿ ಆರ್ ಅಶೋಕ್, ಜಗದೀಶ್ ಶೆಟ್ಟರ್, ಸಿಟಿ ರವಿ ಹಾಗೂ ಸೋಮಣ್ಣ ಅಸಮಾಧಾನ ಹೊರ ಹಾಕುತ್ತಿದ್ದಂತೆಯೇ ಇತ್ತ ಈಶ್ವರಪ್ಪ ಮತ್ತು ಶ್ರೀರಾಮುಲು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಸ್ಥಾನ ಪಡೆದಿದ್ದ ಕೆ.ಎಸ್.ಈಶ್ವರಪ್ಪ ಅವರಿಗೆ ಈ ಬಾರಿ ನಿರಾಸೆಯಾಗಿದೆ. ಈಶ್ವರಪ್ಪಗೆ ಡಿಸಿಎಂ ಪೋಸ್ಟ್ ನೀಡದ್ದಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮತ್ತೆ ಆಕ್ಟೀವ್ ಆಗಿದೆ.

    ಇಂಧನ ಖಾತೆ ಕೇಳಿದ್ದ ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ ಖಾತೆ ನೀಡಿದ್ದಾರೆ. ಈ ಮೂಲಕ ಹಿಂದುಳಿದ ವರ್ಗಕ್ಕೆ ಅಪಮಾನ ಮಾಡಿದ್ದಾರೆಂದು ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈಶ್ವರಪ್ಪರಿಗೆ ಡಿಸಿಎಂ ಹುದ್ದೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಭಾರೀ ಹೊಡೆತ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಇತ್ತ ಶ್ರೀರಾಮುಲು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಶ್ರೀರಾಮುಲು ಒಬ್ಬರೇ ಡಿಸಿಎಂ ಹುದ್ದೆ ಬೇಡಿದ್ದರು. ಆದರೆ ಡಿಸಿಎಂ ಪಟ್ಟ ಕೇಳದವರಿಗೆ ನೀಡಲಾಗಿದೆ. 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶ್ರೀರಾಮುಲು ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಶ್ರೀರಾಮುಲು ಅವರೇ ದಯಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇವಲ ಶಾಸಕರಾಗಿರಿ. ಇಡೀ ವಾಲ್ಮೀಕಿ, ಎಸ್‍ಸಿ, ಎಸ್‍ಟಿ, ಓಬಿಸಿ ಸಮುದಾಯ ನಿಮ್ಮ ಬೆಂಬಲಕ್ಕಿದೆ ಎಂದು ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ.

    ಸಿಎಂ ಯಡಿಯೂರಪ್ಪ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಅಭಿಮಾನಿಗಳು, ವಾಲ್ಮೀಕಿ ಸಮುದಾಯಕ್ಕೆ ಕೇವಲ ಒಂದು ಸಚಿವ ಸ್ಥಾನವನ್ನು ನೀಡಿದ್ದೀರಿ. ಈ ಜಾತಿ ರಾಜಕಾರಣ ಹೆಚ್ಚು ದಿನ ನಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧವೂ ಶ್ರೀರಾಮುಲು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬೆಂಗ್ಳೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ- ಗಗನ ಸಖಿ ಎದೆ ಮೇಲಿನ ಬಟ್ಟೆ ಎಳೆದು ಎಸ್ಕೇಪ್ ಆದ್ರು!

    ಬೆಂಗ್ಳೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ- ಗಗನ ಸಖಿ ಎದೆ ಮೇಲಿನ ಬಟ್ಟೆ ಎಳೆದು ಎಸ್ಕೇಪ್ ಆದ್ರು!

    ಬೆಂಗಳೂರು:  ಕಮ್ಮನಹಳ್ಳಿಯಲ್ಲಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆ ಮಾಸುವ ಮುನ್ನವೇ ನಗರದ ಹೆಚ್ ಆರ್ ಬಿಆರ್ ಲೇಔಟ್ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

    ಭಾನುವಾರ ರಾತ್ರಿ ಹೆಚ್ ಬಿಆರ್ ಲೇಔಟ್‍ನ 99 ದೋಸಾ ಹೋಟೆಲ್ ನಿಂದ ಊಟ ಮುಗಿಸಿದ ಯುವತಿ ತನ್ನ ಗೆಳೆಯ ಅನೀಶ್ ಜೊತೆ ನಡೆದುಕೊಂಡು ಬರುತ್ತಿದ್ದಾಗ ಎರಡು ಬೈಕಿನಲ್ಲಿ ಬಂದಂತಹ ಹೆಲ್ಮೆಟ್ ಧಾರಿ ದುಷ್ಕರ್ಮಿಗಳು ಗಗನಸಖಿಯ ಎದೆಯ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತನೆ ಮಾಡಿದ್ದಾರೆ.

    ಕೂಡಲೇ ಯುವತಿ ಕಿರಿಚಿಕೊಂಡಿದ್ದರಿಂದ ಬೈಕ್‍ನಲ್ಲಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಅಲ್ಲದೇ ಆಕೆಯ ಸ್ನೇಹಿತ ಅನೀಶ್ ಕೂಡ ದುಷ್ಕರ್ಮಿಗಳನ್ನು ತಡೆದಿದ್ದರಿಂದ ಹೆಚ್ಚಿನ ಅನಾಹುತವಾಗಲಿಲ್ಲ. ಇನ್ನು ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.