Tag: ಕೃತಕ ಬುದ್ದಿಮತ್ತೆ

  • ಎಐ ಕ್ಲಾಸ್‌ರೂಮ್ ಫೌಂಡೇಷನ್ ಕೋರ್ಸ್ ಆರಂಭಿಸಿದ ಜಿಯೋ – ಉಚಿತ ಕೊಡುಗೆ

    ಎಐ ಕ್ಲಾಸ್‌ರೂಮ್ ಫೌಂಡೇಷನ್ ಕೋರ್ಸ್ ಆರಂಭಿಸಿದ ಜಿಯೋ – ಉಚಿತ ಕೊಡುಗೆ

    ನವದೆಹಲಿ: ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ಉದ್ಘಾಟನೆಯಂದು ಎಐ ಕ್ಲಾಸ್‌ರೂಮ್ (AI Classroom) ಫೌಂಡೇಷನ್ ಕೋರ್ಸ್ ಆರಂಭಿಸಿರುವುದಾಗಿ ಜಿಯೋ (Jio) ಘೋಷಿಸಿದೆ.

    ಇದನ್ನು ಜಿಯೋಪಿಸಿ ರೂಪಿಸಿದೆ. ಇದು ಉಚಿತ ಹಾಗೂ ಆರಂಭಿಕ ಸ್ನೇಹಿ ಪ್ರೋಗ್ರಾಂ ಆಗಿದ್ದು, ಪ್ರತಿ ಕಲಿಕಾರ್ಥಿಯೂ ಎಐ- ಸಿದ್ಧವಾಗಿರುವಂತೆ ಈ ಪ್ರೋಗ್ರಾಂ ರೂಪಿಸಲಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಮಕ್ಕಳು ಹೇಗೆ ಕಲಿಯುತ್ತಾರೆ? ಕೆಲಸ ಮಾಡುತ್ತಾರೆ ಎಂಬುದರಲ್ಲಿ ಪರಿವರ್ತನೆ ತರುತ್ತಿದೆ. ಸರಿಯಾದ ಜ್ಞಾನ, ಕೌಶಲ ಮತ್ತು ಸಲಕರಣೆ ಮೂಲಕ ಸಬಲಗೊಳಿಸುತ್ತದೆ. ಅವಕಾಶಗಳ ಬಾಗಿಲು ತೆರೆದು, ಭವಿಷ್ಯವನ್ನು ರೂಪಿಸುತ್ತಿದೆ. ಜಿಯೋ ಇನ್‌ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ಜಿಯೋಪಿಸಿ ಎಐ ಕ್ಲಾಸ್‌ರೂಮ್ ಪರಿಚಯಿಸುತ್ತಿದೆ. ಇದು ಒಂದು ಬಗೆಯ, ರಚನಾತ್ಮಕ, ಪ್ರಮಾಣೀಕೃತ ಮತ್ತು ಉಚಿತ ಎಐ ಫೌಂಡೇಷನ್ ಕೋರ್ಸ್ ಆಗಿದ್ದು, ಅದರಲ್ಲೂ ವಿಶೇಷವಾಗಿ ಆರಂಭಿಕ ಹಂತದ ಕಲಿಕೆಗೆ ರೂಪಿಸಲಾಗಿದೆ. ಇದನ್ನೂ ಓದಿ: 2026 ರ ಮೊದಲ ಆರು ತಿಂಗಳಲ್ಲಿ ಜಿಯೋ ಐಪಿಒ ಬಿಡುಗಡೆ: ಮುಕೇಶ್ ಅಂಬಾನಿ

    ಪಿಸಿ (ಪರ್ಸನಲ್ ಕಂಪ್ಯೂಟರ್), ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಬಳಸಿಕೊಂಡು ಯಾರು ಬೇಕಾದರೂ ಇದರ ಪ್ರವೇಶ ಪಡೆಯಬಹುದು. ಕಲಿಯುವವರು ಈ ಕೋರ್ಸ್ ಅನ್ನು ತಮ್ಮ ಜಿಯೋ ಸೆಟ್‌ಟಾಪ್ ಬಾಕ್ಸ್‌ನಲ್ಲಿ ಇರುವ ಜಿಯೋಪಿಸಿಯಲ್ಲಿ ತಮ್ಮ ಟಿವಿಗಳ ಮೂಲಕ ಕಲಿತುಕೊಳ್ಳಬಹುದು. ಜಿಯೋಪಿಸಿ ಎಂಬುದು ಮುಂದಿನ ತಲೆಮಾರಿನ ಎಐ ಸಿದ್ಧವಾದ ಕಂಪ್ಯೂಟರ್ ಮತ್ತು ಜೊತೆಗೆ ಚಂದಾದಾರಿಕೆ ವಿಧಾನವನ್ನು ಆರಿಸಿಕೊಂಡರೆ ವಿಶಿಷ್ಟ ಪಾವತಿ ವಿಧಾನ ಸಹ ಇದೆ. ಇದು ಯಾವುದೇ ಸ್ಕ್ರೀನ್ ಅನ್ನು ಸದಾ ಉತ್ಕೃಷ್ಟ ಮಟ್ಟದ, ಸುರಕ್ಷಿತ ಕಂಪ್ಯೂಟರ್ ಮಾಡುತ್ತದೆ. ಅದಕ್ಕೆ ಯಾವುದೇ ರಿಪೇರಿ ಮತ್ತು ನಿರ್ವಹಣೆ ಅಗತ್ಯ ಇರುವುದಿಲ್ಲ. ಪ್ರೊಡಕ್ಟಿವಿಟಿ, ಕಲಿಕೆ, ಶಿಕ್ಷಣ, ಸೃಜನಾತ್ಮಕತೆ, ಡಿಸೈನ್ ಎಲ್ಲದಕ್ಕೂ ಅಪ್ಲಿಕೇಷನ್‌ಗಳು ಇರುತ್ತವೆ.

    ಜಿಯೋಪಿಸಿ ಬಳಕೆದಾರರಿಗೆ ವಿಶಿಷ್ಟವಾದ ಅನುಕೂಲಗಳಿವೆ. ಉನ್ನತ ಮಟ್ಟದ ಎಐ ಸಲಕರಣೆಗಳ ಬಳಕೆ ಮಾಡುವುದಕ್ಕೆ ಹೆಚ್ಚುವರಿಯಾಗಿ ಅವಕಾಶ ಇರುತ್ತದೆ. ಇದು ವಿಸ್ತೃತವಾದ ಕಲಿಕಾ ರೋಡ್ ಮ್ಯಾಪ್ ಆಗಿದ್ದು, ಜಿಯೋ ಇನ್‌ಸ್ಟಿಟ್ಯೂಟ್‌ನಿಂದ ಪ್ರಮಾಣಪತ್ರ ದೊರೆಯುತ್ತದೆ. ಇತರ ಬಳಕೆದಾರರಿಗೆ ಕೋರ್ಸ್ ಪೂರ್ಣಗೊಳಿಸಿದ ನಂತರ ಪೂರ್ಣ ಮಾಡಿರುವಂಥ ಬ್ಯಾಡ್ಜ್ ದೊರೆಯುತ್ತದೆ. ಇದನ್ನೂ ಓದಿ: ಭಾರತಕ್ಕೆ ಶೀಘ್ರವೇ ಸ್ಟಾರ್‌ಲಿಂಕ್‌ ಸ್ಯಾಟಲೈಟ್‌ ಇಂಟರ್ನೆಟ್‌ – ಮಸ್ಕ್‌ ಕಂಪನಿ ಜೊತೆ ಜಿಯೋ, ಏರ್‌ಟೆಲ್‌ ಒಪ್ಪಂದ

    ಈ ಕೋರ್ಸ್ ಎಐ ಬಗ್ಗೆ ಪ್ರಾಥಮಿಕ ಜ್ಞಾನವನ್ನು ನೀಡುತ್ತದೆ. ಮಾಹಿತಿಯನ್ನು ಸಂಕ್ಷಿಪ್ತಗೊಳಿಸುತ್ತದೆ. ತಮ್ಮ ಕಲಿಕಾ ಯೋಜನೆ ಉತ್ತಮವಾಗಿ ಸಂಯೋಜಿಸಲು ಸಹಾಯ ಮಾಡುತ್ತದೆ. ಸ್ಟೋರಿ, ಪ್ರೆಸೆಂಟೇಷನ್‌ಗಳು ಹಾಗೂ ಡಿಸೂನ್ ಸೃಷ್ಟಿಸಲು ಕಲಿತುಕೊಳ್ಳಬಹುದು. ನೈಜ ಸಮಸ್ಯೆಗಳನ್ನು ಎಐ ಬಳಸಿ ಹೇಗೆ ಪರಿಹರಿಸಬಹುದು ಎಂಬುದು ತಿಳಿಯುತ್ತದೆ. ಇದು ಒಟ್ಟು ನಾಲ್ಕು ವಾರದ ಕಲಿಕೆ ಹಾದಿಯಾಗಿದೆ.

    ಕೋರ್ಸ್ ಪಠ್ಯಕ್ರಮ
    ವಾರ 1: ಎಐ ಬೇಸಿಕ್ಸ್ ಹಾಗೂ ಪ್ರಾಂಪ್ಟ್ ಎಂಜಿನಿಯರಿಂಗ್
    ವಾರ 2: ಎಐ ಫಾರ್ ಲರ್ನಿಂಗ್ ಹಾಗೂ ಕ್ರಿಯೇಟಿವಿಟಿ
    ವಾರ 3: ಎಐ ಫಾರ್ ಬಿಲ್ಡಿಂಗ್ ಮತ್ತು ಕಮ್ಯುನಿಕೇಷನ್
    ವಾರ 4: ಎಐ ಕ್ಯಾಪ್ ಸ್ಟೋನ್ ಪ್ರಾಜೆಕ್ಟ್

    ಈ ಪ್ರೋಗ್ರಾಂ ಮೂಲಕ ಎಐ ಅರ್ಥವಾಗುವುದು ಮಾತ್ರವಲ್ಲ, ಅದನ್ನು ವಿಶ್ವಾಸದಿಂದ ಹೇಗೆ ಅನುಷ್ಠಾನಕ್ಕೆ ತರುವುದು ಎಂಬುದು ಸಹ ತಿಳಿದುಕೊಳ್ಳುತ್ತಾರೆ. ಸ್ಮಾರ್ಟ್ ಆಗಿ ವ್ಯಾಸಂಗ ಮಾಡುವುದು ಹಾಗೂ ಪ್ರಾಬ್ಲಮ್ಸ್ ಸಾಲ್ವಿಂಗ್‌ನಿಂದ ಪರಿಣಾಮಕಾರಿ ಡಿಜಿಟಲ್ ಪ್ರಾಜೆಕ್ಟ್‌ಗಳ ಸೃಷ್ಟಿಯ ತನಕ ಎಲ್ಲೆಡೆ ಎಐ ಅನುಷ್ಠಾನದ ಬಗ್ಗೆ ಕಲಿಯುವುದು ಸಾಧ್ಯವಾಗುತ್ತದೆ. ಇದನ್ನೂ ಓದಿ: ಜಿಯೋ ಹಾಟ್‌ಸ್ಟಾರ್‌ ವಿಲೀನ | ಇನ್ಮುಂದೆ ಐಪಿಎಲ್‌ ಉಚಿತ ವೀಕ್ಷಣೆ ಇಲ್ಲ- ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದವರ ಕಥೆ ಏನು?

  • ದೇಶದಲ್ಲೇ ಮೊದಲ ಲಿಥಿಯಂ ಬ್ಯಾಟರಿ ಘಟಕ ಸ್ಥಾಪನೆಗೆ ಡಿಕೆಶಿ ಶಂಕುಸ್ಥಾಪನೆ

    ದೇಶದಲ್ಲೇ ಮೊದಲ ಲಿಥಿಯಂ ಬ್ಯಾಟರಿ ಘಟಕ ಸ್ಥಾಪನೆಗೆ ಡಿಕೆಶಿ ಶಂಕುಸ್ಥಾಪನೆ

    ಚಾಮರಾಜನಗರ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಭಾರತದಲ್ಲೇ ಮೊದಲ ಲಿಥಿಯಂ ಬ್ಯಾಟರಿ (Lithium Battery) ಘಟಕ ಸ್ಥಾಪನೆಗೆ ಡಿಸಿಎಂ ಡಿ.ಕೆ ಶಿವಕುಮಾರ್ (DK Sivakumar) ಶಂಕುಸ್ಥಾಪನೆ ನೆರವೇರಿಸಿದ್ದಾರೆ.

    ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ (Artificial Intelligence) ಸಂಯೋಜಿತ, ಪರಿಸರ ಸ್ನೇಹಿ ಸ್ಮಾರ್ಟ್ ಬ್ಯಾಟರಿ ಉತ್ಪಾದನಾ ಘಟಕ ತಲೆಎತ್ತಲು ಸಜ್ಜಾಗಿದ್ದು, ಡಿಕೆ ಶಿವಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದನ್ನೂ ಓದಿ: ಹನಿಟ್ರ್ಯಾಪ್ ಭೀತಿ – ಯೂನಿಫಾರಂ ಧರಿಸಿ ಫೋಟೊ, ವೀಡಿಯೋ ಅಪ್ಲೋಡ್ ಮಾಡದಂತೆ ಅರೆಸೇನಾ ಪಡೆಗಳಿಗೆ ಸೂಚನೆ

    ತಲಾ 500 ಕೋಟಿ ರೂ. ವೆಚ್ಚದಲ್ಲಿ ಚಾಮರಾಜನಗರ ಸೇರಿದಂತೆ ರಾಜ್ಯದ 4 ಕಡೆ ಖಾಸಗಿ ವಲಯದಿಂದ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪಿಸಲು ಸಜ್ಜಾಗಿದ್ದು, ಮೊದಲ ಹಂತವಾಗಿ ಚಾಮರಾಜನಗರದಲ್ಲಿ ಸ್ಥಾಪಿಸಲಾಗುತ್ತಿದೆ. ಹಿಂದುಳಿದ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಭರವಸೆಯನ್ನ ಡಿ.ಕೆ ಶಿವಕುಮಾರ್ ಅವರು ನೀಡಿದ್ದಾರೆ. ಇದನ್ನೂ ಓದಿ: ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ: ಕಾಂಗ್ರೆಸ್‌ ಗೇಲಿಗೆ ಬಿಜೆಪಿ ತಿರುಗೇಟು

    ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಈಗಾಗಲೇ ಸೋಲಾರ್ ಪಾರ್ಕ್ ರಾಜ್ಯದ ಉದ್ದಗಲಕ್ಕೂ ಮಾಡಿ ವಿಶ್ವದ ಗಮನ ಸೆಳೆದಿದ್ದೇವೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದಾಗ ಸೋಲಾರ್ ಪಾರ್ಕ್ ಯೋಜನೆ ಒಪ್ಪಿ ಎಲ್ಲಾ ತಾಲೂಕುಗಳಲ್ಲಿಯೂ ಸ್ಥಾಪಿಸಲು ಯೋಜನೆ ತಂದಿದ್ದೆ. ಇದೀಗ ಸೌರ ವಿದ್ಯುತ್ ಸಂಗ್ರಹಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಅದಕ್ಕಾಗಿ ಖಾಸಗಿ ಕಂಪನಿಯವರು ೨ ಸಾವಿರ ಕೋಟಿ ವೆಚ್ಚದಲ್ಲಿ ರಾಜ್ಯದ ೪ ಕಡೆ ಲಿಥಿಯಂ ಬ್ಯಾಟರಿ ಘಟಕ ಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಅವರಿಗೆ ಉತ್ತೇಜನ ಕೊಡುತ್ತೇವೆ ಎಂದು ಹೇಳಿದ್ದಾರೆ.

    ಹೊರಗಿಂದ ಬಂದು ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸರ್ಕಾರದಿಂದಲೂ ಅಂತಹವರಿಗೆ ಎಲ್ಲಾ ರೀತಿಯ ಸಹಾಯ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

    ಇದೇ ವೇಳೆ ಆಪರೇಷನ್ ಹಸ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮಗೆ ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ. ಅವರಾಗಿಯೇ ಬಂದರೆ ತಡೆಯಲು ಸಾಧ್ಯವಿಲ್ಲ. ಪಕ್ಷಕ್ಕೆ ಬಲ ತುಂಬುವ ಕಡೆ ಬಂದ್ರೆ ಸೇರಿಸಿಕೊಳ್ತೇವೆ ಎಂದಿದ್ದಾರೆ.

    ಆರ್.ಅಶೋಕ್‌ಗೆ ಪ್ರೋಟೊಕಾಲ್ ವಿಚಾರ ಗೊತ್ತೇಯಿಲ್ಲ. ಅವರ ಕೈಯಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡೋಕ್ಕಾಗ್ತಿಲ್ಲ. ನಾವು ಕಾಂಗ್ರೆಸ್‌ನವರು ಎಲ್ಲಾ ರೀತಿಯ ಪ್ರೋಟೊಕಾಲ್ ಪಾಲಿಸುತ್ತೇವೆ. ಪ್ರಧಾನಿ ಕಚೇರಿಯಿಂದಲೇ ಸಿಎಂ, ಡಿಸಿಎಂ ಯಾರೂ ಬರೋದು ಬೇಡ ಅಂತಾ ನಮಗೆ ಸೂಚನೆ ಬಂದಿದೆ. ನಮಗೆ ಎಲ್ಲಾ ಪರಿಜ್ಞಾನ ಇದೆ. ಪ್ರಧಾನಿ ಮೋದಿಯವರು ಆಗಮಿಸಿದ್ದು ಆರ್.ಅಶೋಕ್ ಅವರಿಗೇ ಗೊತ್ತಿಲ್ಲ. ಏನೋ ಪ್ರಚಾರಕ್ಕೆ ಮಾತಾಡಬೇಕು ಅಂತಾ ಮಾತನಾಡಿದ್ದಾರೆ ಅಷ್ಟೇ ಎಂದು ಕುಟುಕಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]