Tag: ಕೂಡಲಸಂಗಮದೇವ

  • ವಚನಗಳಲ್ಲಿ ‘ಲಿಂಗದೇವ’ ಬದಲಾಗಿ ‘ಕೂಡಲಸಂಗಮದೇವ’ ವಚನಾಂಕಿತ ಬಳಸಲು ನಿರ್ಧಾರ: ಗಂಗಾದೇವಿ

    ವಚನಗಳಲ್ಲಿ ‘ಲಿಂಗದೇವ’ ಬದಲಾಗಿ ‘ಕೂಡಲಸಂಗಮದೇವ’ ವಚನಾಂಕಿತ ಬಳಸಲು ನಿರ್ಧಾರ: ಗಂಗಾದೇವಿ

    ಬಾಗಲಕೋಟೆ: ವಚನಗಳಲ್ಲಿ ಲಿಂಗದೇವ ಬದಲಾಗಿ ಕೂಡಲಸಂಗಮದೇವ ವಚನಾಂಕಿತ ಬಳಸಲು ನಿರ್ಧಾರ ಮಾಡಲಾಗಿದೆ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದರು.

    25 ವರ್ಷಗಳ ಹಿಂದಿನ ವಚನಗಳ ಅಂಕಿತನಾಮ ವಿವಾದಕ್ಕೆ ಇತಿಶ್ರೀ ಹಾಡಿದ ಗಂಗಾದೇವಿ ಅವರು, ಇಂದು ಸುದ್ದಿಗೋಷ್ಠಿಯಲ್ಲಿ ಬಸವಣ್ಣನವರ ವಚನಗಳ ಅಂಕಿತ ನಾಮ ಗೊಂದಲ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು.

    ಈ ವೇಳೆ ಅವರು, ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಬದಲಾಗಿ, ಲಿಂಗದೇವ ಎಂದು ಅಂಕಿತನಾಮ ಬಳಸಲಾಗುತ್ತಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿದಾಗಲೂ ಕೂಡಲ ಸಂಗಮ ದೇವ ಎಂದು ವಚನಾಂಕಿತ ಬಳಸುವಂತೆ ಆದೇಶಿಸಲಾಗಿತ್ತು. ಈ ಬಗ್ಗೆ ಯಾವುದೇ ಗೊಂದಲ ಬೇಡ. ಇನ್ಮುಂದೆ ವಚನಗಳಲ್ಲಿ ಲಿಂಗದೇವ ಬದಲಾಗಿ ಕೂಡಲಸಂಗಮ ದೇವ ವಚನಾಂಕಿತ ಬಳಸಲು ನಿರ್ಧಾರ ಮಾಡಲಾಗಿದೆ ಎಂದು ಅಂಕಿತನಾಮದ ಗೊಂದಲಕ್ಕೆ ತೆರೆ ಎಳೆದರು. ಇದನ್ನೂ ಓದಿ: ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

    ಮಾತೆ ಮಹಾದೇವಿಯವರು ಬರೆದಿದ್ದ ‘ಬಸವ ವಚನ ದೀಪ್ತಿ’ ಪುಸ್ತಕದಲ್ಲಿ ಬಸವಣ್ಣನವರ ವಚನಾಂಕಿತವನ್ನು ಕೂಡಲಸಂಗಮ ದೇವ ಬದಲಾಗಿ ಲಿಂಗದೇವ ಎಂದು ಬಳಸಲಾಗಿತ್ತು. ಬಸವಣ್ಣನವರ ವಚನಗಳ ಅಂಕಿತನಾಮದಲ್ಲಿ ಕೂಡಲಸಂಗಮ ಬಳಸಬೇಕಾ ಅಥವಾ ಲಿಂಗದೇವ ಬಳಸಬೇಕಾ ಎಂಬ ಗೊಂದಲ ವಚನಗಾರರಲ್ಲಿ ಏರ್ಪಟ್ಟಿತ್ತು. ಹಲವು ಸ್ವಾಮೀಜಿಗಳ ವಿರೋಧದ ಮಧ್ಯೆ 25 ವರ್ಷಗಳ ಹಿಂದೆ ಈ ವಿವಾದ ಹೈಕೋರ್ಟ್ ನಂತರ ಸುಪ್ರಿಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಇಂದು ಅದಕ್ಕೆಲ್ಲ ಮುಕ್ತಿ ಸಿಕ್ಕಿದೆ. ಇನ್ನು ಮುಂದೆ ಹೈಕೋರ್ಟ್ ಆದೇಶದಂತೆ ವಚನಗಳಿಗೆ ಕೂಡಲಸಂಗಮದೇವ ಎಂದು ಬಳಸುತ್ತೇವೆ ಎಂದು ಮಾತೆ ಗಂಗಾದೇವಿ ಸ್ಪಷ್ಟಪಡಿಸಿದ್ದಾರೆ.

  • ಸಚಿವ ಡಿ.ಕೆ ಶಿವಕುಮಾರ್ ಗೆ ಮಾತೆ ಮಹಾದೇವಿ ತಿರುಗೇಟು

    ಸಚಿವ ಡಿ.ಕೆ ಶಿವಕುಮಾರ್ ಗೆ ಮಾತೆ ಮಹಾದೇವಿ ತಿರುಗೇಟು

    ಬಾಗಲಕೋಟೆ: ಧರ್ಮವನ್ನು ಒಡೆಯೋಕೆ ಮುಂದಾಗಿದ್ದು ತಪ್ಪು. ನಮ್ಮನ್ನು ಕ್ಷಮಿಸಿ ಬಿಡಿ ಎಂಬ ಸಚಿವರ ಹೇಳಿಕೆ ವಿಚಾರ ಸಂಬಂಧ ಡಿಕೆ ಶಿವಕುಮಾರ್ ಅವರು ಲಿಂಗಾಯತ ಸಮಾಜದವರ ಕ್ಷಮೆ ಕೇಳಬೇಕು ಅಂತ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಒತ್ತಾಯಿಸಿದ್ದಾರೆ.

    ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಡಿಕೆಶಿಗೆ ತಿರುಗೇಟು ನೀಡಿದ್ದಾರೆ. ಲಿಂಗಾಯತ ಧರ್ಮವನ್ನು ಒಡೆದಿದ್ದಾರೆ. ಸಮಾಜವನ್ನು ಒಡೆದಿದ್ದಾರೆ ಅನ್ನೋದು ತಪ್ಪು. 12 ನೇ ಶತಮಾನದಲ್ಲಿ ಬಸವಣ್ಣನವರು ಸಂಪ್ರದಾಯಬದ್ಧವಾದ ಕಂದಾಚಾರಗಳನ್ನು ಬಿಟ್ಟು ಅವರು ಲಿಂಗಾಯತ ಧರ್ಮವನ್ನು ಕಟ್ಟಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರು ಮಾನ್ಯತೆ ಕೊಟ್ಟಿದ್ದಾರೆ. ಅದಕ್ಕೆ ನಾವು ಅಭಿನಂದಿಸಬೇಕು. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಡಿಕೆಶಿ ಹೇಳಿದ್ದು ತಪ್ಪು, ಇದು ಶುದ್ಧ ಸುಳ್ಳು ಅಂತ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾವು ತಪ್ಪು ಮಾಡಿದ್ದೇವೆ, ನನ್ನ ಹೇಳಿಕೆಗೆ ಈಗಲೂ ಬದ್ಧ: ಡಿಕೆ ಶಿವಕುಮಾರ್

    ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಬೇರೆ ಕಾರಣಗಳಿವೆ. ಆದರೆ ಅದಕ್ಕೆ ಲಿಂಗಾಯತ ಧರ್ಮದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಲಿಂಗಾಯತ ಧರ್ಮ ಪ್ರತ್ಯೇಕ ಮಾನ್ಯತೆ ವಿಚಾರಕ್ಕಾಗಿಯೇ ಈ ಬಾರಿ ಕಾಂಗ್ರೆಸ್‍ಗೆ ಹೆಚ್ಚು ಮತಗಳು ಬಿದ್ದಿವೆ. ಬೀದರ್‍ನಲ್ಲಿ ಐದು ಶಾಸಕರಲ್ಲಿ ನಾಲ್ವರು ಕಾಂಗ್ರೆಸ್‍ನಿಂದಲೇ ಆಯ್ಕೆಯಾಗಿದ್ದಾರೆ. ಡಿಕೆ ಶಿವಕುಮಾರ್ ಈ ಬಗ್ಗೆ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕು ಅಂದ್ರು.

    ಡಿಕೆ ಶಿವಕುಮಾರ್ ಅವರು ಬಹಳ ವಿಚಿತ್ರವಾದ ಮಾತುಗಳನ್ನಾಡಿದ್ದಾರೆ. ಇದು ಸರಿಯಲ್ಲ ಖಂಡನಾರ್ಹ. ರಾಜಕೀಯ ಏಳು ಬೀಳುಗಳೇನೆ ಇರಲಿ. ಸಿದ್ದರಾಮಯ್ಯ ಮಾಡಿದ ಕಾರ್ಯ ಉತ್ತಮ ನಿರ್ಣಯವಾಗಿದೆ. ಡಿಕೆಶಿ ಅವರ ಹೇಳಿಕೆ ಬಾಲಿಷತನ. ಇದರ ಹಿಂದೆ ರಾಜಕೀಯ ಉದ್ದೇಶವಿದೆ. ಲೋಕಸಭೆ ಚುನಾವಣೆ, ಉಪಚುನಾವಣೆಯಲ್ಲಿ ಮತದಾರರ ಸೆಳೆಯುವ ಉದ್ದೇಶವಿದೆ. ಸಿದ್ದರಾಮಯ್ಯ ತಪ್ಪು ಮಾಡಿದರು ಎಂದು ಬಿಂಬಿಸುವ ಕುತಂತ್ರ ಇದರಲ್ಲಿದೆ ಅಂತ ಕಿಡಿಕಾರಿದ್ರು. ಇದನ್ನೂ ಓದಿ: ಶಿವಕುಮಾರ್ Vs ಎಂಬಿ ಪಾಟೀಲ್ – ಕಾಂಗ್ರೆಸ್‍ನಲ್ಲಿ ಮತ್ತೆ ಧರ್ಮ ಯುದ್ಧ ಶುರು

    ಸಿದ್ದರಾಮಯ್ಯ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಶಿಫಾರಸ್ಸು ಮಾಡಿದ್ದು ಐತಿಹಾಸಿಕ ನಿರ್ಣಯವಾಗಿತ್ತು. ಮೊದಲು ಸಚಿವ ಸಂಪುಟದಲ್ಲಿ ಡಿಕೆ ಶಿವಕುಮಾರ ಇದ್ದು ಇದನ್ನು ಒಪ್ಪಿಕೊಂಡಿದ್ದಾರೆ. ಆದರೆ ಈಗ ವಿಭಿನ್ನ ಹೇಳಿಕೆ ನೀಡಿದ್ದಾರೆ. ಇದಕ್ಕಾಗಿ ಡಿಕೆ ಶಿವಕುಮಾರ ಲಿಂಗಾಯತ ಸಮಾಜದ ಕ್ಷಮೆ ಕೇಳಬೇಕು ಅಂತ ಇದೇ ವೇಳೆ ಮಹಾದೇವಿ ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv