Tag: ಕುರುಬ ಸಮಾವೇಶ

  • ನಮ್ಮ ಜನರಿಗೆ ಸಿದ್ದರಾಮಯ್ಯ ಅವಶ್ಯಕತೆ ಇದೆ, ಅವರೇ ಸಿಎಂ ಆಗಬೇಕು: ಬೈರತಿ ಸುರೇಶ್

    ನಮ್ಮ ಜನರಿಗೆ ಸಿದ್ದರಾಮಯ್ಯ ಅವಶ್ಯಕತೆ ಇದೆ, ಅವರೇ ಸಿಎಂ ಆಗಬೇಕು: ಬೈರತಿ ಸುರೇಶ್

    ತುಮಕೂರು: ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಎದ್ದಿದೆ. ಜಮೀರ್ ಬಳಿಕ ಈಗ ಸಿದ್ದು ಆಪ್ತ ಬೈರತಿ ಸುರೇಶ್ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಹೇಳಿದ್ದಾರೆ.

    ನಮ್ಮ ಜನರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಶ್ಯಕತೆ ಇದೆ. ಮುಂದಿನ ಚುನಾವಣೆಯಲ್ಲಿ ಅವರೇ ಸಿಎಂ ಆಗಬೇಕು ಎಂದು ಬೆಂಗಳೂರಿನ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಪ್ರವೇಶಿಸುವಂತಿಲ್ಲ – ವೈರಲ್ ಆಯ್ತು ಬ್ಯಾನರ್

    ಜಮೀರ್ ಅಹಮದ್ ಖಾನ್ ಅವರು ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಕೇಳಿದ ಬೆನ್ನಲ್ಲೆ ತುಮಕೂರು ಕುರುಬ ಸಮಾವೇಶದಲ್ಲಿ ಬೈರತಿ ಸುರೇಶ್ ಸಹ ಅದೇ ರೀತಿ ಪತಿಕ್ರಿಯೆ ಕೊಟ್ಟಿದ್ದಾರೆ. ವೇದಿಕೆಯನ್ನು ಉದ್ದೇಶಿ ಮಾತನಾಡಿದ ಅವರು, ಕುರುಬ ಸಮಾವೇಶದಲ್ಲಿ ಭಾಗವಹಿಸಲು ಬಂದ ಎಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ಮಾತು ಪ್ರಾರಂಭಿಸಿದರು.

    ವೇದಿಕೆ ಮೇಲೆ ಕುಳಿತಿರುವ ಕೇಂದ್ರ ಬಿಂದು, ರಾಜ್ಯದ ಧೀಮಂತ ನಾಯಕ, ದೇಶ ಕಟ್ಟಿದ ಅಪ್ರತಿಮ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಜೊತೆಗೆ ಇದ್ದಾರೆ. ಇಂದು ಕುರುಬ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿರುವುದು ಬಹಳ ಸಂತೋಷವಾಗುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಕೈ ಹಿಡಿದು ಬಲ ಕೊಂಡುತ್ತಿದ್ದಿರಾ ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಇದೇ ರೀತಿ ಇಡೀ ರಾಜ್ಯದಲ್ಲಿ ಮುಂದುವರೆಯಬೇಕು ಎಂಬುದು ನಮ್ಮ ಆಸೆ. 2023ರಲ್ಲಿ ಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂಬುದು ಅವರ ಮನಸ್ಸಿನಲ್ಲಿ ಇಲ್ಲ. ಆದರೆ ನಿಮ್ಮ ಮನಸ್ಸಿನಲ್ಲಿದೆ. ಈ ನಾಡಿದ ಜನತೆಯ ಮನಸ್ಸಿನಲ್ಲಿದೆ ಎಂದು ಒತ್ತಿ ಹೇಳಿದರು.

    SIDDARAMAIAH

    ಮತ್ತೆ ಸಿದ್ದರಾಮಯ್ಯ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದರೆ ನೀವೆಲ್ಲ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಬೆಂಬಲಕೊಡಬೇಕು. ಎಲ್ಲರೂ ನಮ್ಮವರೆ ಆದ್ರೆ ಯಾರು ಸಿದ್ದರಾಮಯ್ಯ ಅವರ ಜೊತೆಗೆ ಇರುತ್ತಾರೆ, ರಾಜ್ಯ ಬೆಳೆಯಬೇಕು ಎಂದು ಇಷ್ಟಪಡುತ್ತೀರಾ ಅವರು ಸಿದ್ದರಾಮಯ್ಯ ಅವರು ಸಿಎಂ ಆಗಲು ಬೆಂಬಲ ಕೊಡಿ ಎಂದು ಕೇಳಿಕೊಂಡರು. ಇದನ್ನೂ ಓದಿ: ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಚುನಾವಣೆ ಸಮಿತಿ ಇದೆಯೇ? – ಡಿಕೆಶಿಗೆ ಪತ್ರ ಬರೆದ ಸ್ಥಾನ ವಂಚಿತರು 

    ಕ್ಷೀರ ಭಾಗ್ಯ, ಅಕ್ಕಿ ಭಾಗ್ಯ, ವಿದ್ಯಾರ್ಥಿ ವೇತನ, ರೈತರ ಸಾಲ ಮನ್ನಾ ಇದೇ ರೀತಿ ರಾಜ್ಯದ ಹಲವು ಸಮಸ್ಯೆಗಳಿಗೆ ಪರಿಹಾರ ಕೊಟ್ಟ ಏಕೈಕ ಮುಖ್ಯಮಂತ್ರಿ ನಮ್ಮ ಸಿದ್ದರಾಮಯ್ಯ ಎಂದು ಹೊಗಳಿದರು.

  • ಪ್ರಯಾಣಿಕರೇ ಗಮನಿಸಿ: ಕುರುಬ ಸಮಾವೇಶ – ಮಾರ್ಗ ಬದಲಾವಣೆ

    ಪ್ರಯಾಣಿಕರೇ ಗಮನಿಸಿ: ಕುರುಬ ಸಮಾವೇಶ – ಮಾರ್ಗ ಬದಲಾವಣೆ

    ಬೆಂಗಳೂರು: ಶನಿವಾರ ಹೆದ್ದಾರಿ ಬಂದ್ ಆಯ್ತು. ಇವತ್ತು ಕುರುಬ ಸಮಾವೇಶ. ಬೆಂಗಳೂರಿಗರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿದ್ದಲ್ಲ. ಇವತ್ತೂ ಅಪ್ಪಿತಪ್ಪಿ ಮೈಮರೆತು ರಸ್ತೆಗಿಳಿದ್ರೆ ಅಲ್ಲಲ್ಲಿ ಲಾಕ್ ಆಗ್ತೀರಾ. ಹಾಗಿದ್ರೆ ಬೆಂಗಳೂರಲ್ಲಿಂದು ಎಲ್ಲೆಲ್ಲಿ ಟ್ರಾಫಿಕ್ ಬಿಸಿ ತಟ್ಟಲಿದೆ, ಮಾರ್ಗ ಬದಲಾವಣೆ ಮಾಡಲಾಗಿದೆ.

    ಎಸ್.ಟಿ. ಮೀಸಲಾತಿಗಾಗಿ ಕುರುಬ ಸಮಾವೇಶಕ್ಕೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಬಿಐಇಸಿ ಮೈದಾನದಲ್ಲಿ ವೇದಿಕೆ ಸಜ್ಜಾಗಿದೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ರಾಜ್ಯದ ಮೂಲೆಮೂಲೆಯಿಂದ ಕುರುಬ ಸಮಾಜದ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಈ ಸಮಾವೇಶಕ್ಕೆ ರಾಜ್ಯದ ಮೂಲೆಮೂಲೆಯಿಂದ ಎರಡು ಸಾವಿರ ಬಸ್, ಒಂದು ಸಾವಿರಕ್ಕೂ ಹೆಚ್ಚು ಟ್ರಕ್ಸ್, ಸಾವಿರಾರು ಕಾರುಗಳು ಬರುವ ನಿರೀಕ್ಷೆ ಇದೆ. ಹೀಗಾಗಿ, ಬೆಂಗಳೂರು-ತುಮಕೂರು, ನೈಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಲಿದೆ.

    ಲಘು ವಾಹನಗಳಿಗೆ ಯಾವುದೇ ನಿರ್ಭಂಧ ಇಲ್ಲ, ಭಾರಿ ವಾಹನಗಳಿಗೆ ಮಾತ್ರ ಮಾರ್ಗ ಬದಲಾವಣೆ ಮಾಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ವರೆಗೆ ಮಾರ್ಗ ಬದಲಾವಣೆ ಮಾಡಿದ್ದಾರೆ. ತುಮಕೂರು ಬೆಂಗಳೂರು ರಸ್ತೆಯಲ್ಲಿ ಐದು ಕಡೆ ಮಾರ್ಗ ಬದಲಿಸಿ ಆದೇಶ ಹೊರಡಿಸಿದ್ದಾರೆ.

    ಎಲ್ಲೆಲ್ಲಿ ಮಾರ್ಗ ಬದಲು?
    * ದಾಬಸ್‍ಪೇಟೆ – ದೊಡ್ಡಬಳ್ಳಾಪುರ ಮಾರ್ಗ
    * ದಾಬಸ್‍ಪೇಟೆ – ಮಾಗಡಿ ಶಿವಗಂಗೆ ರಸ್ತೆ
    * ನೈಸ್ ರೋಡ್- ಮಾಗಡಿ, ಮಂಗಳೂರು, ಹಾಸನ, ಕುಣಿಗಲ್ ಮಾರ್ಗ
    * ನೈಸ್ ರೋಡ್ – ಮಾಗಡಿ, ಶಿವಗಂಗೆ, ಹೊಸೂರು, ಮೈಸೂರು, ತುಮಕೂರು, ಬೆಂಗಳೂರು
    * ನೆಲಮಂಗಲ – ದೊಡ್ಡಬಳ್ಳಾಪುರ, ರೈಲ್ವೆ ಗೊಲ್ಲಹಳ್ಳಿ, ಬೆಂಗಳೂರು, ಹೈದರಾಬಾದ್, ಹೊಸಕೋಟೆ, ಹೊಸೂರು

    ಭದ್ರತೆಗಾಗಿ ಬೆಂಗಳೂರು ಗ್ರಾಮಾಂತರ ಎಸ್‍ಪಿ ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಲಕ್ಷಾಂತರ ಮಂದಿ ಸೇರುವ ಸಾಧ್ಯತೆ ಹಿನ್ನೆಲೆ, ತುಮಕೂರು ಬೆಂಗಳೂರು ರಸ್ತೆ ಹಾಗೂ ನೈಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ. ಟ್ರಾಫಿಕ್ ನಿಯಂತ್ರಿಸಲು ಪೊಲೀಸರ ಸಜ್ಜಾಗಿದ್ದಾರೆ. ಒಟ್ಟಾರೆ ವಿಕೇಂಡ್ ಎಂದು ಹೋಗುವ ಜನರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ.

  • ಕುರುಬ ಸಮಾವೇಶದಲ್ಲಿ ಸಿಎಂಗೆ ಕುರಿ, ಕಂಬಳಿ ಗಿಫ್ಟ್!

    ಕುರುಬ ಸಮಾವೇಶದಲ್ಲಿ ಸಿಎಂಗೆ ಕುರಿ, ಕಂಬಳಿ ಗಿಫ್ಟ್!

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು ಸೂಪರ್ ಆಗಿರೋ ಒಂದು ಗಿಫ್ಟ್ ಸಿಕ್ಕಿದೆ.

    ಕುರುಬ ಸಂಘದಿಂದ ಅರಮನೆ ಮೈದಾನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ರಾಯಚೂರಿನ ಆಂಜನೇಯ ಅನ್ನೋರು ಜೀವಂತ ಕುರಿ ಗಿಫ್ಟ್ ಮಾಡಿದ್ದಾರೆ. ಅಲ್ಲದೇ ಕುರಿ ಕಂಬಳಿ ಕೊಟ್ಟು, ಕುರುಬ ಪೇಟ ತೊಡಿಸಿ ಜೈ ಕುರುಬ ಅಂತ ಘೋಷಣೆ ಹಾಕಿದ್ದಾರೆ.

    ಸಮಾರಂಭದಲ್ಲಿ ಐಎಎಸ್, ಕೆಎಎಸ್, ಪಿಯುಸಿ ಎಸ್‍ಎಸ್‍ಎಲ್‍ಸಿ ಪ್ರತಿಭಾವಂತರಿಗೆ ಸನ್ಮಾನ ಮಾಡಿದ ಬಳಿಕ ಸಿಎಂ ವಿರೋಧಗಳಿಗೆ ತಮ್ಮ ಭಾಷಣದಲ್ಲೆ ಟಾಂಗ್ ನೀಡಿದ್ರು.

    ಜಾತಿ ಸಮಿಕ್ಷೆ ರಿಲೀಸ್ ಮಾಡುವಂತೆ ಸಿಎಂ ಭಾಷಣದ ವೇಳೆ ಸಮಾಜದ ವ್ಯಕ್ತಿಯೊಬ್ಬರು ಪತ್ರ ಕಳಿಸಿದ್ರು. ಇದಕ್ಕೆ ವೇದಿಕೆ ಮೇಲೆ ಉತ್ತರಿಸಿದ ಸಿಎಂ, ಮೀಸಲಾತಿ ಹೆಚ್ಚಿಸಲಿಕ್ಕೆ ಅವಕಾಶ ಇದೀಯ ಅಂತ ಕಾನೂನು ಸಲಹೆ ಕೇಳಿದ್ದೇವೆ. ಅವರಿಂದ ಉತ್ತರ ಬಂದ ಬಳಿಕ ವರದಿ ಬಿಡುಗಡೆ ಮಾಡುತ್ತೇವೆ ಅಂದ್ರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧವೂ ಸಿಎಂ ವಾಗ್ದಾಳಿ ನಡೆಸಿದ್ರು.

    ಸಮಾಜಕ್ಕೆ ನಾನೇನು ಮಾಡಿದೆ ಅನ್ನೋದನ್ನ ಎಲ್ಲರು ಪ್ರಶ್ನೆ ಮಾಡಿಕೊಳ್ಳಬೇಕು. ಇಲ್ಲವಾದರೆ ಬದುಕು ಸಾರ್ಥಕವಾಗೊಲ್ಲ. ಹುಟ್ಟು ಆಕಸ್ಮಿಕ, ಸಾವು ಖಚಿತ. ಯಾರು ಯಾವ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿಕೊಂಡಿರೋಲ್ಲ. ಸಮಾಜಕ್ಕೆ ನಾವು ಏನಾದ್ರು ಕೊಡುಗೆ ಕೊಟ್ಟು ಹೋಗಬೇಕು. ಶೋಷಣೆಗೊಳಗಾದವರು, ತುಳಿತಕ್ಕೆ ಒಳಗಾದವರು ಇದನ್ನ ನೆನಪಿನಲ್ಲಿ ಇಡಬೇಕು. ಅವಕಾಶ ಸಿಕ್ಕಾಗ, ಅವಕಾಶ ವಂಚಿತರ ಬಗ್ಗೆ ಆಲೋಚನೆ ಮಾಡಬೇಕು ಅಂತ ಸಲಹೆಯಿತ್ತರು.

    ಆಕಸ್ಮಿಕವಾಗಿ ನಾನು ಕುರುಬ ಜಾತಿಯಲ್ಲಿ ಹುಟ್ಟಿದೆ. ಆದ್ರೆ ನಾನು ಆರೂವರೆ ಕೋಟಿ ಜನಕ್ಕೆ ಮುಖ್ಯಮಂತ್ರಿ. ನಾನು ಸಿಎಂ ಆದ ಮೇಲೆ ಕರ್ನಾಟಕದ ಆರೂವರೆ ಕೋಟಿ ಜನಕ್ಕೆ ಒಂದಲ್ಲ ಒಂದು ಕಾರ್ಯಕ್ರಮ ಕೊಟ್ಟಿದ್ದೇನೆ. ಕೆಲವರು ನನ್ನನ್ನ ಅಹಿಂದ ಪರವಾಗಿದ್ದಾರೆ ಅಂತ ಮೂದಲಿಸುತ್ತಾರೆ. ಅದು ತಪ್ಪು. ನಾನು ಅಹಿಂದ ಪರ ಇದ್ದೇನೆ. ಅಷ್ಟೆ ಅಲ್ಲ ನಾನು ಎಲ್ಲ ಜನರ ಪರವಾಗಿ ಇದ್ದೇನೆ ಅಂತ ವಿರೋಧಿಗಳಿಗೆ ಭಾಷಣದಲ್ಲೆ ಸಿಎಂ ಟಾಂಗ್ ನೀಡಿದ್ರು.

    ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡ್ತಿನಿ ಅಂತ ಹೋದ್ರು. ಕೇಂದ್ರ ಸರ್ಕಾರ ಸಮಾಜಿಕ ನ್ಯಾಯ ದೊಡ್ಡ ಪೆಟ್ಟು ಕೊಡಲು ಮುಂದಾಗಿದೆ. ಹಿಂದುಳಿದ ವರ್ಗಗಳ ಮೇಲಿನ ನಿಯಂತ್ರಣಕ್ಕೆ ಮುಂದಾಗಿದೆ. ಹಾಗಾಗಿ ಎಲ್ಲರಿಗೂ ಚಪ್ಪಾಳೆ ಹೊಡೆಯುವುದು ಬೇಡ. ಯಾರು ನಮ್ಮ ಪರವಾಗಿ ಕೆಲಸ ಮಾಡ್ತಾರೆ ಅನ್ನೋದನ್ನ ತಿಳಿದುಕೊಳ್ಳಬೇಕು ಅಂತ ಅವರು ಹೇಳಿದ್ರು.