Tag: ಕುರಿ ಮರಿ

  • ಮೂಢನಂಬಿಕೆಗೆ ಜಿಲ್ಲಾಡಳಿತದಿಂದ ತಿಲಾಂಜಲಿ – 1 ಸಾವಿರ ಕುರಿ ಮರಿ ರಕ್ಷಣೆ

    ಮೂಢನಂಬಿಕೆಗೆ ಜಿಲ್ಲಾಡಳಿತದಿಂದ ತಿಲಾಂಜಲಿ – 1 ಸಾವಿರ ಕುರಿ ಮರಿ ರಕ್ಷಣೆ

    ಯಾದಗಿರಿ: ಪ್ರಸಿದ್ಧ ಯಾದಗಿರಿ ಮಲ್ಲಯ್ಯ ಸ್ವಾಮಿಯ ಜಾತ್ರಾ ಮಹೋತ್ಸವ ಇಂದು ಅದ್ಧೂರಿಯಾಗಿ ಜರುಗಿತು. ಮಕರ ಸಂಕ್ರಾಂತಿಯಂದು ನಡೆಯುವ ಜಾತ್ರೆಗೆ ಭಕ್ತರಸಾಗರವೇ ಹರಿದು ಬಂದಿತ್ತು. ಈ ಜಾತ್ರೆಯಲ್ಲಿ ನಡೆಯುವ ವಿಚಿತ್ರ ಪದ್ಧತಿ, ಮೂಢನಂಬಿಕೆಗೆ ಈ ಬಾರಿ ಜಿಲ್ಲಾಡಳಿತ ತಿಲಾಂಜಲಿ ಹಾಡಿದ್ದು ವಿಶೇಷವಾಗಿದೆ.

    ಈ ಹಿಂದೆ ದೇವರಿಗೆ ಹರಕೆ ಹೊತ್ತ ಭಕ್ತರು ಕುರಿ ಮರಿಗಳನ್ನು ದೇವರ ಪಲ್ಲಕ್ಕಿ ಮೇಲೆ ಎಸೆಯುತ್ತಿದ್ದರು. ಆದರೆ ಇದು ಪ್ರಾಣಿ ಹಿಂಸೆಯಾದ ಕಾರಣ ಈ ಮೂಢನಂಬಿಕೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಹೀಗಾಗಿ ಭಕ್ತರು ತರುವ ಕುರಿ ಮರಿಗಳನ್ನು ದಾರಿಯಲ್ಲಿಯೇ ತಡೆದು ಅವುಗಳನ್ನು ಪಶುಪಾಲನಾ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ. ಈ ಬಾರಿಯ ಜಾತ್ರೆಯಲ್ಲಿ ಒಟ್ಟು 1 ಸಾವಿರ ಕುರಿ ಮರಿಗಳನ್ನು ರಕ್ಷಿಸಲಾಗಿದೆ. ಹೀಗೆ ವಶಪಡಿಸಿಕೊಂಡ ಕುರಿ ಮರಿಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕ ಕುರಿ ಸಾಕಾಣಿಕೆ ಮಾಡುವವರಿಗೆ ಮತ್ತೆ ನೀಡಲಾಗುತ್ತಿದೆ.

    ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಕಳ್ಳಕಾಕರಿಂದ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೆರೆ ಮತ್ತು ದೇವಸ್ಥಾನ ಸುತ್ತಲೂ ಈ ಬಾರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅಲ್ಲದೆ ಒಟ್ಟು 550 ಪೊಲೀಸ್ ಸಿಬ್ಬಂದಿ ಈ ಜಾತ್ರೆಯಲ್ಲಿ ಗಸ್ತು ಕಾಯುತ್ತಿದ್ದಾರೆ.

  • ಕೆರೆಗೆ ಬೀಳುತ್ತಿದ್ದ ಕುರಿಮರಿಗಳನ್ನ ರಕ್ಷಿಸಿದ ಕುರಿಗಾಹಿಗಳು: ವಿಡಿಯೋ ವೈರಲ್

    ಕೆರೆಗೆ ಬೀಳುತ್ತಿದ್ದ ಕುರಿಮರಿಗಳನ್ನ ರಕ್ಷಿಸಿದ ಕುರಿಗಾಹಿಗಳು: ವಿಡಿಯೋ ವೈರಲ್

    ಕೊಪ್ಪಳ: ಕೆರೆಗೆ ಬೀಳುತ್ತಿದ್ದ ಕುರಿಮರಿಗಳನ್ನು ರಕ್ಷಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಪ್ಪಳ ತಾಲೂಕು ಅಳವಂಡಿ ಗ್ರಾಮದ ಹೊರ ವಲಯದಲ್ಲಿರುವ ಕರೆಯಲ್ಲಿ ಘಟನೆ ನಡೆದಿದ್ದು, ಮೂವರು ಮಹಿಳೆಯರು ಹಾಗೂ ಒಬ್ಬ ಯುವಕ ಸೇರಿ ಕೆರೆಗೆ ಬೀಳುತ್ತಿದ್ದ ಎರಡು ಕುರಿ ಮರಿಗಳನ್ನು ರಕ್ಷಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ:
    ಕೆರೆಯ ದಂಡೆಯಿಂದ ಮೇಲೆ ಬರಲು ಸಾಧ್ಯವಾದೆ ಎರಡು ಕುರಿಮರಿಗಳು ಕಷ್ಟಪಡುತ್ತಿದ್ದವು. ಕುರಿಗಾಹಿ ಮಹಿಳೆಯೊಬ್ಬರು ಕುರಿ ಮರಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಸಾಧ್ಯವಾಗದಿದ್ದಾಗ ಯುವಕನೊಬ್ಬನನ್ನು ಕರೆಯುತ್ತಾರೆ. ಯುವಕನಿಂದಲೂ ಮರಿಗಳನ್ನು ರಕ್ಷಿಸಲು ಆಗದಿದ್ದಾಗ ಇಬ್ಬರು ಮಹಿಳೆಯರ ಜೊತೆಗೆ ಬಲೆ ಹಿಡಿದುಕೊಂಡು ಬಂದು, ಕುರಿ ಮರಿಗಳಿಗೆ ಬಲೆ ಹಾಕಿ ಮೇಲೆತ್ತಿದ್ದಾರೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

    https://www.youtube.com/watch?v=rOeujtnzlkU