Tag: ಕುದುರೆ ರೇಸ್

  • ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಶೇ.28 ಜಿಎಸ್‌ಟಿ

    ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಶೇ.28 ಜಿಎಸ್‌ಟಿ

    ನವದೆಹಲಿ: ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ (ಜಿಎಸ್‌ಟಿ) ಅಡಿಯಲ್ಲಿ ಶೇ. 28ರಷ್ಟು ತೆರಿಗೆ ವಿಧಿಸಲು ಸಚಿವರ ಸಮಿತಿಯು ಶಿಫಾರಸು ಮಾಡಿದೆ.

    ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಎಷ್ಟು ತೆರಿಗೆ ವಿಧಿಸಬೇಕು ಎಂಬುದನ್ನು ಪರಿಶೀಲಿಸಲು ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

    ಮೇ 2 ರಂದು ಸಮಿತಿ ಸಭೆ ನಡೆಸಿತ್ತು. ಈಗ ಸಮಿತಿ ಶಿಫಾರಸು ಮಾಡಿದ್ದು ಈ ವರದಿಯನ್ನು ಜಿಎಸ್‌ಟಿ ಮಂಡಳಿಯ ಮುಂಬರುವ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಿದೆ. ಇದನ್ನೂ ಓದಿ: ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಎಲೆಕ್ಷನ್- ಒಬಿಸಿ ಕೋಟಾಕ್ಕೆ ಸುಪ್ರೀಂ ಸಮ್ಮತಿ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಒಂದೆರಡು ದಿನಗಳಲ್ಲಿ ಸಮಿತಿಯ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಸಂಗ್ಮಾ ಅವರು ಟ್ವೀಟ್ ಮಾಡಿದ್ದಾರೆ.

    ಪ್ರಸ್ತುತ ಈಗ ಬೆಟ್ಟಿಂಗ್‌ ಅಥವಾ ಗ್ಯಾಬ್ಲಿಂಗ್‌ ಇರುವ ಆನ್‌ಲೈನ್‌ ಆಟಗಳಿಗೆ ಶೇ.28 ರಷ್ಟು ತೆರಿಗೆ, ಬೆಟ್ಟಿಂಗ್‌ ಅಥವಾ ಗ್ಯಾಬ್ಲಿಂಗ್‌ ಇಲ್ಲದ ಆನ್‌ಲೈನ್‌ ಆಟಗಳಿಗೆ ಶೇ.18 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕುದುರೆ ರೇಸ್‌ಗಳ ಒಟ್ಟು ಬೆಟ್‌ ಮೌಲ್ಯದ ಮೇಲೆ ಶೇ.28 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

  • ಕುದುರೆ ರೇಸ್ ಬೆಟ್ಟಿಂಗ್ ದಂಧೆ – 19 ಮಂದಿ ಅರೆಸ್ಟ್

    ಕುದುರೆ ರೇಸ್ ಬೆಟ್ಟಿಂಗ್ ದಂಧೆ – 19 ಮಂದಿ ಅರೆಸ್ಟ್

    ಬೆಂಗಳೂರು: ಕುದುರೆ ರೇಸ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 19 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನಗರದ ಬಸವೇಶ್ವರ ನಗರದ ಠಾಣಾ ವ್ಯಾಪ್ತಿಯಲ್ಲಿರುವ ಕಿಂಗ್ಸ್ ಪೋರಂ, ಸ್ಪೋಟ್ರ್ಸ್, ಕಲ್ಚರಲ್ ಅಸೋಸಿಯೇಷನ್ ಕ್ಲಬ್ ಬೆಟ್ಟಿಂಗ್ ದಂಧೆ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೋಲಿಸರು ದಾಳಿ ನಡೆಸಿದ್ದಾರೆ.

    ಈ ವೇಳೆ ಬುಕ್ ಮೇಕರ್ಸ್ ಲೈಸನ್ಸ್ ಪಡೆಯದೇ ಜೂಜಾಟವಾಡುತ್ತಿದ್ದವರನ್ನು ಸೇರಿದಂತೆ ಜೂಜಾಟವಾಡಿಸುತ್ತಿದ್ದ 19 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆರೋಪಿಗಳ ಬಳಿ ಇದ್ದ 2,56,500 ರೂ. ಗಳನ್ನು ಪೊಲೀರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತಂತೆ ಇದೀಗ ಬಸವೇಶ್ವರ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಟರ್ಫ್ ಕ್ಲಬ್‍ನಲ್ಲಿ ಮುಗ್ಗರಿಸಿದ ಕುದುರೆ- ಬಾಜಿದಾರರಿಂದ ಟರ್ಫ್ ಕ್ಲಬ್‍ನ ಮೇಜು, ಕುರ್ಚಿಗಳು ಪುಡಿ ಪುಡಿ

    ಬೆಂಗಳೂರು: ನಗರದ ಟರ್ಫ್ ಕ್ಲಬ್ ನಲ್ಲಿ ಕುದುರೆ ರೇಸ್ ಆಡಲು ಬಂದ ಕೆಲ ಬಾಜಿದಾರರು ದಾಂಧಲೆ ನಡೆಸಿರುವ ಘಟನೆ ನಡೆದಿದೆ.

    ಇಂದು ಟರ್ಫ್ ಕ್ಲಬ್‍ನಲ್ಲಿ ರೇಸ್ ನಡೆಯುತ್ತಿದ್ದ ಕಾರಣ ಕುದುರೆಗಳ ಮೇಲೆ ಬಾಜಿ ಕಟ್ಟಲು ಆಗಮಿಸಿದ್ದರು. ಆದರೆ ರೇಸ್ ನಡೆಯುತ್ತಿದ್ದ ವೇಳೆ ವಿಲ್ ಟು ವಿನ್ ಹೆಸರಿನ ಕುದುರೆ ಜಾರಿ ಬಿದ್ದಿದ್ದು, ಪರಿಣಾಮ ಕುದುರೆಯ ಕಾಲು ಮುರಿದಿದೆ. ಅಲ್ಲದೇ ರೇಸ್ ವೇಳೆ ಕುದುರೆ ಬಿದ್ದ ಪರಿಣಾಮ ಅದರ ಹಿಂದೆ ಬರುತ್ತಿದ್ದ ಮತ್ತೆರಡು ಕುದುರೆಗಳು ಬಿದ್ದಿದ್ದವು.

    ಮೊದಲು ಬಿದ್ದ ಕುದುರೆ ಸಂಜಯ್ ಆರ್ ಠಕ್ಕರ್ ಅವರ ಮಾಲೀಕತ್ವದಾಗಿದ್ದು, ಪಾರ್ವತಿ ಡಿ ಭೈರಾಂಜಿ ಟ್ರೈನರ್ ಆಗಿದ್ದಾರೆ. ಇಂದು ರೇಸ್‍ನಲ್ಲಿ ವಿಲ್ ಟು ವಿನ್ ಕುದುರೆಯನ್ನು ಜಾಕಿ ಸೂರಜ್ ನೆರಡು ಓಡಿಸುತ್ತಿದ್ದರು. ಇಂದಿನ ರೇಸ್‍ನಲ್ಲಿ ನಯಾಬ್ ಹೆಸರಿನ ಕುದುರೆ ರೇಸ್ ಗೆದ್ದಿದ್ದು, ಪರಿಣಾಮ ವಿಲ್ ಟು ವಿನ್ ಕುದುರೆಗೆ ಬಾಜಿ ಕಟ್ಟಿದ್ದ ಜನ ಆಕ್ರೋಶ ವ್ಯಕ್ತಪಡಿಸಿ ಟರ್ಫ್ ಕ್ಲಬ್ ಮೇಜು, ಕುರ್ಚಿಗಳನ್ನು ಪುಡಿ ಪುಡಿ ಮಾಡಿದ್ದಾರೆ. ಕೂಡಲೇ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲರನ್ನು ಕ್ಲಬ್‍ನಿಂದ ಹೊರಕ್ಕೆ ಕಳುಹಿಸಿದ್ದಾರೆ.

    ಸದ್ಯ ಘಟನೆಗೆ ಟರ್ಫ್ ಕ್ಲಬ್ ಮ್ಯಾನೇಜ್ ಮೆಂಟ್ ನಿರ್ಲಕ್ಷ್ಯವೇ ಎಂಬ ಆರೋಪ ಕೇಳಿ ಬಂದಿದ್ದು, ರೇಸ್ ಜಾಕಿಗಳು ಟ್ರ್ಯಾಕ್ ಸಮಸ್ಯೆ ಕುರಿತು ರಿಪೋರ್ಟ್ ಕೊಟ್ಟಿದ್ದರೂ ಮ್ಯಾನೇಜ್‍ಮೆಂಟ್ ನಿರ್ಲಕ್ಷ್ಯ ವಹಿಸಿದೆ. ಇದರಿಂದ ರೇಸ್ ವೇಳೆ ಕುದುರೆ ಕಾಲು ಮುರಿದುಕೊಂಡಿದೆ ಎಂದು ಬಾಜಿ ಕಟ್ಟಿದವರು ಆರೋಪಿಸಿದ್ದಾರೆ. ಕಳೆದ ವಾರವೇ ರೇಸ್‍ನ ಟ್ರ್ಯಾಕ್ ಸರಿಯಿಲ್ಲ ಎಂದು ಜಾಕಿಗಳು ಟರ್ಫ್ ಕ್ಲಬ್ ಮ್ಯಾನೇಜ್‍ಮೆಂಟ್‍ಗೆ ದೂರು ನೀಡಿದ್ದರು. ಆದರೂ ಜಾಕಿಗಳ ದೂರನ್ನು ನಿರ್ಲಕ್ಷ್ಯ ಮಾಡಿದ್ದ ಕ್ಲಬ್ ರೇಸ್ ನಡೆಸಿ ಅವಘಡಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    https://twitter.com/Surajsn1/status/1195305718821212160

  • ಕುದುರೆ ರೇಸ್ ಹೆಸರಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆಗೆ ಕೊಪ್ಪಳ ಪೊಲೀಸರಿಂದ ಬ್ರೇಕ್!

    ಕುದುರೆ ರೇಸ್ ಹೆಸರಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆಗೆ ಕೊಪ್ಪಳ ಪೊಲೀಸರಿಂದ ಬ್ರೇಕ್!

    ಕೊಪ್ಪಳ: ತಾಲೂಕಿನ ಗಿಣಗೇರಿಯಲ್ಲಿ ಕುದುರೆ ರೇಸ್ ಹೆಸರಿನಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆಗೆ ಪೊಲೀಸರು ತಡೆ ನೀಡಿದ್ದಾರೆ. ಈ ಸಂಬಂಧ ಓರ್ವ ಬೆಟ್ಟಿಂಗ್ ದಂಧೆಕೋರನನ್ನು ಬಂಧಿಸುವಲ್ಲಿಪೊಲೀಸರು ಯಶಸ್ವಿಯಾಗಿದ್ದಾರೆ.

    ತಾಲೂಕಿನ ಗಿಣಗೇರಿಯಲ್ಲಿ ಆಚರಣೆ ಹೆಸರಿನಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕುದುರೆ ರೇಸ್ ನಡೆಯುತ್ತಿತ್ತು. ಕುದುರೆ ರೇಸ್ ನಲ್ಲಿ ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿದ್ದರಿಂದ ವ್ಯಾಪಕವಾಗಿ ಹೆಸರುಗಳಿಸಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕುದುರೆ ರೇಸ್‍ನ್ನು ಆಯೋಜಿಸಲಾಗಿತ್ತು.

    ಕುದುರೆ ರೇಸ್ ಗೆ ಮೊದಲ ಬಾರಿ ಪೊಲೀಸರು ಬಂದೋಬಸ್ತು ಹಾಕಿದ್ದರಿಂದ ಆಯೋಜಕರು ಕುದುರೆ ರೇಸ್ ಅನ್ನು ಸ್ಥಗಿತಗೊಳಿಸಿದ್ದಾರೆ. ಈ ಮೂಲಕ ಕೊಪ್ಪಳ ಪೊಲೀಸರು ಕುದುರೆ ರೇಸ್ ಗೆ ಬ್ರೇಕ್ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಕುದುರೆ ರೇಸನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದ ಪೊಲೀಸರು ಓರ್ವ ಬೆಟ್ಟಿಂಗ್ ದಂಧೆಕೋರನನ್ನು ಬಂಧಿಸಿದ್ದಾರೆ.

    ಕುದುರೆ ರೇಸ್ ಇದೆ ಎಂದು ಗುಂಪು ಗುಂಪಾಗಿ ಬರುತ್ತಿರುವ ಜನರನ್ನು ಪೊಲೀಸರು ಚದುರಿಸಿ ಕಳುಹಿಸಿದ್ದಾರೆ.