Tag: ಕೀರ್ತಿ ಗೌಡ

  • ನಿರ್ಮಾಪಕಿಯಾದ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ

    ನಿರ್ಮಾಪಕಿಯಾದ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ

    ದುನಿಯಾ ವಿಜಯ್ (Duniya Vijay)  ನಟನೆಯಿಂದ ನಿರ್ದೇಶಕರ ಭಡ್ತಿ ಪಡೆದಿದ್ದರೆ, ಇದೀಗ ಅವರ 2ನೇ ಪತ್ನಿ ಕೀರ್ತಿ ಗೌಡ (Keerthi Gowda) ನಿರ್ಮಾಪಕಿಯಾಗುತ್ತಿದ್ದಾರೆ. ಅರ್ಜುನ್ ಎಂಟರ್ ಟೇನ್ಮೆಂಟ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯೊಂದನ್ನು ಶುರು ಮಾಡಿದ್ದಾರೆ. ಈ ಸಂಸ್ಥೆಯ ಮೂಲಕ ಮೊದಲ ಬಾರಿಗೆ ಕಿರುಚಿತ್ರವೊಂದನ್ನು ನಿರ್ಮಾಣ ಮಾಡಿದ್ದಾರೆ.

    ಕೀರ್ತಿ ಗೌಡ ಅವರಿಗೆ ಸಿನಿಮಾ ರಂಗ ಹೊಸದೇನೂ ಅಲ್ಲ. ನಾಯಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು. ಹಲವಾರು ಚಿತ್ರಗಳಲ್ಲೂ ನಟಿಸಿದ್ದಾರೆ. ಮದುವೆ ನಂತರ ನಟನೆಯಿಂದ ದೂರ ಉಳಿದಿದ್ದರು. ವಿಜಯ್ ಅವರ ಸಿನಿಮಾಗಳಿಗೆ ಸಹಾಯ ಮಾಡುತ್ತಿದ್ದರು. ಇದೀಗ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಮೊದಲ ನಿರ್ಮಾಣದ ಕಿರುಚಿತ್ರದಲ್ಲಿ ಬುಡಕಟ್ಟು ಮಕ್ಕಳ ಶಿಕ್ಷಣದ ಕುರಿತು ವಿಷಯ ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ಮೂಲಕ ಸಮಾಜಕ್ಕೆ ಒಂದು ಸಂದೇಶವನ್ನು ನೀಡುವಂತಹ ಕೆಲಸಕ್ಕೆ ಅವರು ಮುಂದಾಗಿದ್ದಾರೆ.

     

    ಕೀರ್ತಿ ಗೌಡ ಕೇವಲ ನಟಿ ಮಾತ್ರವಲ್ಲ, ಸಂಗೀತದಲ್ಲೂ ಅವರಿಗೆ ಆಸಕ್ತಿಯಿದೆ. ಈ ಹಿಂದೆ ಹಿಂದೂಸ್ತಾನಿ ಸಂಗೀತ ಕಲಿಯುತ್ತಿರುವ ಕುರಿತು ಅವರು ಬರೆದುಕೊಂಡಿದ್ದರು. ಜೊತೆಗೆ ವಿಜಯ್ ಅವರ ಕಷ್ಟ, ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ  ವಿಜಯ್ ಅಭಿಮಾನಿಗಳ ಪಾಲಿಗೆ ನೆಚ್ಚಿನ ಅತ್ತಿಗೆ ಕೂಡ ಆಗಿದ್ದಾರೆ.

  • ವಿಜಿ ಮೊದಲ ಪತ್ನಿ ನಾಗರತ್ನಗೆ ಮಧ್ಯಂತರ ನಿರೀಕ್ಷಣಾ ಜಾಮೀನು

    ವಿಜಿ ಮೊದಲ ಪತ್ನಿ ನಾಗರತ್ನಗೆ ಮಧ್ಯಂತರ ನಿರೀಕ್ಷಣಾ ಜಾಮೀನು

    ಬೆಂಗಳೂರು: ನಟ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಹಾಗೂ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನಗೆ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ನಗರದ ಸಿಟಿ ಸಿವಿಲ್ ಕೋರ್ಟ್ 50 ಸಾವಿರ ರೂ. ಬಾಂಡ್ ಷರತ್ತು ವಿಧಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಪ್ರಕರಣವನ್ನು ನ.12ಕ್ಕೆ ಮುಂದೂಡಿದೆ.

    ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನಾಗರತ್ನ ಅವರ ಪರ ವಕೀಲರು ಇನ್ನು 2 ದಿನದಲ್ಲಿ ದೀಪಾವಳಿ ಹಬ್ಬ ಇರುವುದರಿಂದ ಮಕ್ಕಳೊಂದಿಗೆ ತಾಯಿ ಇರಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಇದರ ಹಿನ್ನೆಲೆಯಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ನೀಡಿದೆ.

    ನ್ಯಾಯಾಲಯಕ್ಕೆ 2 ದಿನ ರಜೆ ಇದ್ದು ಕೋರ್ಟ್ ಆದೇಶ ಪೊಲೀಸರಿಗೆ ತಲುಪವರೆಗೂ ನಾಗರತ್ನ ಬಂಧನ ಮಾಡಬಹುದಾಗಿದೆ.

    ನಾಗರತ್ನ ನಾಪತ್ತೆ: ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ಬಳಿಕ ನಾಗರತ್ನ ಪೊಲೀಸರ ಕೈಗೆ ಸಿಗದೇ ನಾಪತ್ತೆಯಾಗಿದ್ದಾರೆ. ಗಿರಿನಗರ ಪೊಲೀಸರು ನಾಗರತ್ನಗಾಗಿ ತೀವ್ರ ಹುಡುಕಾಟ ನಡೆಸಿದ್ದರೂ ಬಂಧಿಸುವಲ್ಲಿ ವಿಫಲವಾಗಿದ್ದರು.

    ಕೀರ್ತಿಗೌಡ ಅವರು ತಮ್ಮ ಮೇಲೆ ನಡೆದ ಹಲ್ಲೆ ಸಂಬಂಧಿಸಿದಂತೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಲ್ಲೆ ಮತ್ತು ಅಂಗಾಂಗ ಊನಗೊಳಿಸಿದ ಆರೋಪದಡಿ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿತ್ತು. ಹಲ್ಲೆ ವಿಡಿಯೋ ಲಭ್ಯವಾಗುವುದಕ್ಕೂ ಮೊದಲು ಕೀರ್ತಿ ಅವರು ದೂರು ದಾಖಲಿಸಿದ್ದರು. ಆ ವೇಳೆ ನಾಗರತ್ನ ವಿರುದ್ಧ ಐಪಿಸಿ ಸೆಕ್ಷನ್ 306 ಮತ್ತು 309 ಅಡಿ ಮಾತ್ರ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ 326 ಸೆಕ್ಷನ್ ಹೆಚ್ಚುವರಿಯಾಗಿ ಹಾಕಲು ಪೊಲೀಸರು ನಿರ್ಧಾರ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಂದೆ ವಿಜಿ ವಿರುದ್ಧವೇ ಮಹಿಳಾ ಆಯೋಗದ ಮೆಟ್ಟಿಲೇರಿದ ಮೋನಿಷಾ

    ತಂದೆ ವಿಜಿ ವಿರುದ್ಧವೇ ಮಹಿಳಾ ಆಯೋಗದ ಮೆಟ್ಟಿಲೇರಿದ ಮೋನಿಷಾ

    ಬೆಂಗಳೂರು: ನಟ ದುನಿಯಾ ವಿಜಯ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಇದೀಗ ವಿಜಿ ಪುತ್ರಿ ಮೋನಿಷಾ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ.

    ಅಪ್ಪ-ಅಮ್ಮನ ಗಲಾಟೆಯಲ್ಲಿ ನಮಗೆ ತೊಂದರೆಯಾಗುತ್ತಿದೆ. ಆರ್ಥಿಕವಾಗಿಯೂ ಅಪ್ಪನಿಂದ ಸಹಾಯ ಸಿಗುತ್ತಿಲ್ಲ. ಹೀಗಾಗಿ ಕೂಡಲೇ ಆಯೋಗ ಮಧ್ಯಪ್ರವೇಶ ಮಾಡಿ ಇದನ್ನು ಬಗೆಹರಿಸಬೇಕು ಅಂತಾ ಮನವಿ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಸಮಸ್ಯೆ ಬಗೆಹರಿಸಿ ಕೊಡಿ ಅಂತ ದುನಿಯಾ ವಿಜಿ ಎರಡನೇ ಮಗಳು ಮಕ್ಕಳು ಆಯೋಗಕ್ಕೆ ಮಂಗಳವಾರ ರಾತ್ರಿ ದೂರು ಸಲ್ಲಿಸಿದ್ದಾರೆ.

    ಇನ್ನೆರಡು ದಿನದಲ್ಲಿ ವಿಜಿಗೆ ಹಾಗೂ ನಾಗರತ್ನಗೆ ನೋಟಿಸ್ ಆಯೋಗ ನೀಡುವ ಸಾಧ್ಯತೆಯಿದೆ. ವಿಜಿ ಕುಟುಂಬದ ವೈಮನಸ್ಸಿನಿಂದ ಮಕ್ಕಳ ಬದುಕು ಮೂರಾಬಟ್ಟೆಯಾಗಲು ಬಿಡಲ್ಲ ಅಂತ ಆಯೋಗ ಹೇಳಿದೆ. ವಿಜಿ ಮಗಳ ಲಿಖಿತ ದೂರಿನನ್ವಯ ನೋಟಿಸ್ ನೀಡಿ ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚ, ಮಕ್ಕಳಿಗೆ ಆರ್ಥಿಕ ನೆರವಿನ ಬಗ್ಗೆ ಆಯೋಗ ಒಂದಿಷ್ಟು ಷರತ್ತು ವಿಧಿಸುವ ಸಾಧ್ಯತೆಗಳಿವೆ.

    ಕೀರ್ತಿ ಗೌಡ ಮೇಲೆ ಹಲ್ಲೆ ನಡೆದಿರುವ ಸಿಸಿಟಿವಿ ದೃಶ್ಯಾವಳಿ ಮಾಧ್ಯಮಗಳಿಗೆ ಸಿಗುತ್ತಿದ್ದಂತೆಯೇ ವಿಜಯ್ ಮೊದಲನೇ ಪತ್ನಿ ನಾಗರತ್ನ ಪರಾರಿಯಾಗಿದ್ದು ಇದೂವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಗಿರಿನಗರ ಪೊಲೀಸರು ನಾಗರತ್ನಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಹೊಸೂರು ಸುತ್ತಮುತ್ತ ಕಳೆದ ರಾತ್ರಿಯೂ ಗಿರಿನಗರ ಪೊಲೀಸರು ಹುಡುಕಾಡಿದ್ದಾರೆ. ಆದ್ರೆ ನಾಗರತ್ನ ಸುಳಿವು ಮಾತ್ರ ಸಿಕ್ಕಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇನ್ನೂ ಪತ್ತೆಯಾಗದ ನಾಗರತ್ನ- ಪೊಲೀಸರಿಂದ ತೀವ್ರ ಹುಡುಕಾಟ

    ಇನ್ನೂ ಪತ್ತೆಯಾಗದ ನಾಗರತ್ನ- ಪೊಲೀಸರಿಂದ ತೀವ್ರ ಹುಡುಕಾಟ

    ಬೆಂಗಳೂರು: ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಮೊದಲ ಪತ್ನಿ ನಾಗರತ್ನ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಹೀಗಾಗಿ ಪೊಲೀಸರು ನಾಗರತ್ನಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

    ಹಲ್ಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾಗರತ್ನ ಪೊಲೀಸರ ಕಣ್ಣು ತಪ್ಪಿಸಿದ್ದು, ಇದೂವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಗಿರಿನಗರ ಪೊಲೀಸರು ನಾಗರತ್ನಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಹೊಸೂರು ಸುತ್ತಮುತ್ತ ಕಳೆದ ರಾತ್ರಿಯೂ ನಾಗರತ್ನಗಾಗಿ ಗಿರಿನಗರ ಪೊಲೀಸರ ಹುಡುಕಾಡಿದ್ದಾರೆ.

    ಇಂದು ನಾಗರತ್ನ ಪರ ವಕೀಲರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸೋ ಸಾಧ್ಯತೆಗಳಿವೆ. ಜಾಮೀನು ರಹಿತ ಕೇಸ್ ಹಾಕಿದ್ದ ಕಾರಣಕ್ಕೆ ಯಾರ ಕೈಗೂ ಸಿಗದೆ ನಾಗರತ್ನ ಎಸ್ಕೇಪ್ ಆಗಿದ್ದಾರೆ. ಕೆಲವು ಮೂಲಗಳ ಪ್ರಕಾರ ನ್ಯಾಯಾಧೀಶರ ಮುಂದೆ ನಾಗರತ್ನ ಸರೆಂಡರ್ ಆಗೋ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದ್ರೆ ಸರೆಂಡರ್ ಆಗೋಕು ಮುಂಚೆಯೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಜಾಮೀನು ನಿರಾಕರಣೆ ಆದ ಪಕ್ಷದಲ್ಲಿ ನ್ಯಾಯಾಧೀಶರ ಮುಂದೆ ಸರೆಂಡರ್ ಆಗಲು ನಾಗರತ್ನ ಚಿಂತನೆ ನಡೆಸಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI

    https://www.youtube.com/watch?v=lxI7qMTcO28

  • ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣ: ಇನ್ನೂ ಪತ್ತೆಯಾಗಿಲ್ಲ ನಾಗರತ್ನ, ಇಂದು ಶರಣಾಗೋದು ಅನಿವಾರ್ಯ

    ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣ: ಇನ್ನೂ ಪತ್ತೆಯಾಗಿಲ್ಲ ನಾಗರತ್ನ, ಇಂದು ಶರಣಾಗೋದು ಅನಿವಾರ್ಯ

    ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪತ್ನಿ ನಾಗರತ್ನ ಇಲ್ಲಿವರೆಗೂ ಪತ್ತೆಯಾಗಿಲ್ಲ.

    ಗಿರಿನಗರ ಪೊಲೀಸರು, ನಾಗರತ್ನ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಇನ್ನೊಂದು ಮಾಹಿತಿ ಪ್ರಕಾರ ರಾತ್ರಿಯೇ ನಾಗರತ್ನ ಎಲ್ಲಿದ್ದಾರೆ ಅನ್ನೋ ಖಚಿತ ಮಾಹಿತಿ ಇದ್ದು, ಯಾವುದೇ ಕ್ಷಣದಲ್ಲೀ ವಶಕ್ಕೆ ಪಡೆಯುವ ಸಾಧ್ಯತೆ ಕೂಡ ಇದೆ. ಇತ್ತ ನಾಗರತ್ನ ಪರ ವಕೀಲರು ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದು, ಅಲ್ಲಿವರೆಗೆ ನಾಗರತ್ನರನ್ನು ಪೊಲೀಸರಿಗೆ ಸಿಗದಂತೆ ಎಚ್ಚರಿಕೆ ವಹಿಸಿದ್ದಾರೆ ಅನ್ನೋದು ಮತ್ತೊಂದು ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನಾಪತ್ತೆಯಾಗಿದ್ದು ಯಾಕೆ?:
    ನಾಗರತ್ನ ಅವರು ತನ್ನ ಮೇಲೆ ಕೀರ್ತಿ ಗೌಡ ಹಲ್ಲೆ ಮಾಡಿದ್ದಾಳೆ ಅಂತ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ವಿಜಿಯ ಮನೆಯ ಸಿಸಿಟಿವಿ ದೊರೆತಿದ್ದು, ಮೇಜರ್ ಟ್ವಿಸ್ಟ್ ಸಿಕ್ಕಿತ್ತು.

    ವಿಡಿಯೋದಲ್ಲಿ ದುನಿಯಾ ವಿಜಿ ಅವರು ಜೈಲಿಗೆ ಸೇರಿದ ದಿನದಂದು ಮನೆಯವರೆಲ್ಲರೂ ಸೇರಿ ಕುಳಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ನಾಗರತ್ನ ಅವರು ತನ್ನ ಚಪ್ಪಲಿಯೊಂದಿಗೆ ಏಕಾಏಕಿ ಮನೆಗೆ ನುಗ್ಗಿ ಕೀರ್ತಿ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಕೀರ್ತಿ ಗೌಡ ಅವರು ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಿಸಿಟಿವಿ ಆಧರಿಸಿದ ಪೊಲೀಸರು ನಾಗರತ್ನ ಹಾಗೂ ಅವರ ಮಕ್ಕಳನ್ನು ಬಂಧಿಸಲು ಮನೆಗೆ ತೆರಳಿದ್ದರು. ಆದ್ರೆ ಅದಾಗಲೇ ನಾಗರತ್ನ ಅವರು ಬಾಗಿಲು ಹಾಕಿಕೊಂಡು ಮನೆಯೊಳಗಿದ್ದು, ಪೊಲೀಸರು ಅವರನ್ನು ಹೊರಗೆ ಬರುವಂತೆ ಮಾಡಲು ಹರಸಾಹಸ ಪಟ್ಟರು ವಿಫಲವಾಯಿತು. ಕೊನೆಗೆ ವಕೀಲರ ಮುಖಾಂತರ ಇಬ್ಬರು ಮಕ್ಕಳು ಪೊಲೀಸ್ ಠಾಣೆಗೆ ಹಾಜರಾಗಿದ್ದರು, ಆದ್ರೆ ಮಕ್ಕಳ ಭವಿಷ್ಯ ದೃಷ್ಟಿಯಿಂದ ವಿಜಿ ಅವರ ಮೇಲಿನ ಕೇಸನ್ನು ಹಿಂಪಡೆದಿದ್ದಾರೆ.

    ಸದ್ಯ ನಾಗರತ್ನ ಮೇಲೆ ಹೆಚ್ಚುವರಿಯಾಗಿ ಐಪಿಸಿ ಸೆಕ್ಷನ್ 326 ಸೇರಿಸಲಾಗಿದೆ. 326 ಸೆಕ್ಷನ್ ರಕ್ತಗಾಯವಾಗುವಂತೆ ಹಲ್ಲೆ ನಡೆಸುವುದಾಗಿದೆ. ಇದು ನಾನ್ ಬೇಲಬಲ್ ಸೆಕ್ಷನ್ ಆಗಿದ್ದು, ಅಷ್ಟು ಸುಲಭವಾಗಿ ಬೇಲ್ ಸಿಗೋದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI

    https://www.youtube.com/watch?v=_3zrCvoaIR4

  • ನಾಗರತ್ನ ವಿರುದ್ಧ ಕೀರ್ತಿ ಗೌಡ ದೂರು

    ನಾಗರತ್ನ ವಿರುದ್ಧ ಕೀರ್ತಿ ಗೌಡ ದೂರು

    ಬೆಂಗಳೂರು: ತನ್ನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ವಿರುದ್ಧ ಎರಡನೇ ಪತ್ನಿ ಕೀರ್ತಿ ಗೌಡ ಅವರು ದೂರು ದಾಖಲಿಸಿದ್ದಾರೆ.

    ಸೆ. 23 ರಂದು ತನಗೆ ಹಾಗೂ ತನ್ನ ಮಾವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಾಗರತ್ನ ಹಲ್ಲೆ ಮಾಡಿದ್ದಾರೆ ಅಂತ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೀರ್ತಿಗೌಡ ಅವರು 4 ಪುಟಗಳ ದೂರು ಸಲ್ಲಿಸಿದ್ದಾರೆ.

    ದೂರುನಲ್ಲೇನಿದೆ?:
    ಸೆ.23ರಂದು ದುನಿಯಾ ವಿಜಿಯವರು ಹೈಗ್ರೌಂಡ್ ಪೊಲೀಸ್ ಠಾಣೆಯ್ಲಲಿ ಅರೆಸ್ಟ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಅತ್ತೆ-ಮಾವನನ್ನು ಸಂತೈಸಲೆಂದು ವಿಜಿ ಸ್ನೇಹಿತರಿಬ್ಬರು ಮನೆಗೆ ಬಂದಿದ್ದರು. ಹೀಗಾಗಿ ನಾವೆಲ್ಲ ಮನೆಯಲ್ಲಿ ಕುಳಿತು ಮಾತುಕತೆ ನಡೆಸುತ್ತಿದ್ದೆವು. ಇದೇ ವೇಳೆ ನಾಗರತ್ನ ಅವರು ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಮನೆಗೆ ನುಗ್ಗಿ ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಬಾಯಿಗೆ ಬಂದಂತೆ ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.

    ಇಷ್ಟು ಮಾತ್ರವಲ್ಲದೇ ನನ್ನ ತಲೆಕೂದಲನ್ನು ಎಳೆದಾಡಿ, ಮನಬಂದಂತೆ ಹಲ್ಲೆಗೈದು ನಿನ್ನನ್ನು ಈಗಲೇ ಮುಗಿಸಿಬಿಡುತ್ತೇನೆ ಕಿರುಚಿತ್ತಾ ಕೊಲೆ ಮಾಡುವ ಉದ್ದೇಶದಿಂದ ಕರಿಮಣಿಯನ್ನು ಕುತ್ತಿಗೆಗೆ ಬಿಗಿಹಿಡಿದುಕೊಂಡರು. ಇದರಿಂದಾಗಿ ನನಗೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿದಂತಾಯಿತು. ಕುತ್ತಿಗೆ ಹಾಗೂ ತಲೆಗೆ ಗಾಯಗಳಾಯಿತು. ಈ ವೇಳೆ ನಮ್ಮ ಮನೆಯವರು ಹಾಗೂ ನಾಗರತ್ನ ಮಧ್ಯೆ ಜಟಾಪಟಿಯೇ ನಡೆದು ಹೋಯಿತು. ವಯಸ್ಸಾಗಿರುವ ನನ್ನ ಅತ್ತೆ-ಮಾವನ ಮೇಲೂ ಕೈ ಮಾಡಿದ್ದಾರೆ. ಹೀಗಾಗಿ ಮಾವನಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ.

    ನಾಗರತ್ನ ಅವರ ಜೊತೆ ತಮ್ಮ ಸಂಪತ್ ಕೂಡ ಬಂದಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಡ್ರೈವರನ್ನು ಹೆದರಿಸಿ, ಹಲ್ಲೆಗೈದು, ಅವಾಚ್ಯವಾಗಿ ಬೈದು ಬಲವಂತವಾಗಿ ಕಾರ್ ಕಿತ್ತುಕೊಂಡು ಹೋಗಿದ್ದಾರೆ. ಆದ್ರೆ ನನ್ನ ಪತಿ ಜೈಲಿನಲ್ಲಿದ್ದ ಕಾರಣ ಆ ಚಿಂತೆಯಲ್ಲಿದ್ದ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಒಟ್ಟಿನಲ್ಲಿ ನಾಗರತ್ನ ಅವರ ಕೃತ್ಯದಿಂದ ನನಗೂ- ನನ್ನ ಮಾವನಿಗೂ ಗಾಯಗಳಾಗಿದ್ದು, ವೈದ್ಯರ ಬಳಿ ತೋರಿಸಿ, ಸದ್ಯ ವಿಶ್ರಾಂತಿ ಪಡೆಯುತ್ತಿದ್ದೇವೆ. ಘಟನೆಯಿಂದ ಅತ್ತೆಗೂ ದಿಗ್ಭ್ರಮೆಯಾಗಿದ್ದು, ಅವರೂ ಚಿಕಿತ್ಸೆ ಪಡೆದಿರುತ್ತಾರೆ.

    ಈ ಮೊದಲು ಅಂದರೆ ಸೆ.22ರಂದು ನನ್ನ ಗಂಡ ಹಾಗೂ ಸ್ನೇಹತರ ಜೊತೆ ಮಾತನಾಡುತ್ತಿದ್ದ ವೇಳೆ ಮೋನಿಕಾ ಮನೆ ಕಂಪೌಂಡ್ ಗೇಟನ್ನು ಒದ್ದು ಒಳಗೆ ಬಂದು ನನ್ನನ್ನು ಅವಾಚ್ಯವಾಗಿ ನಿಂದಿಸಿದ್ದಾಳೆ. ಅಲ್ಲದೇ ಕಲ್ಲು ತೆಗೆದುಕೊಂಡು ಮನೆ ಬಾಗಿಲಿಗೆ ಹಾನಿ ಮಾಡಿದ್ದಾಳೆ. ಈ ವೇಳೆ ಬಾಗಿಲು ತೆಗೆಯದ ಕಾರಣ ನಿಮಗೆ ತಕ್ಕ ಪಾಠ ಕಲಿಸುತ್ತೇನೆ ಅಂತ ಎಚ್ಚರಿಕೆ ನೀಡಿ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ಸುಳ್ಳು ದೂರು ನೀಡಿದ್ದಾಳೆ. ಅಲ್ಲದೇ ನಾಗರತ್ನ ಹಾಗೂ ಮಕ್ಕಳು ಸೇರಿ ವಿಜಯ್ ವಿರುದ್ಧ ಸುಖಾಸುಮ್ಮನೆ ದೂರುಗಳನ್ನು ದಾಖಲಿಸುವ ಮೂಲಕ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ.

    ಒಟ್ಟಿನಲ್ಲಿ ಘಟನೆಗೆ ಸಂಬಂಧಿಸಿದಂತೆ ನಾಗರತ್ನ ಹಾಗೂ ಆಕೆಯ ತಮ್ಮ ಸಂಪತ್ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಕೀರ್ತಿ ಗೌಡ ತಮ್ಮ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI

  • ನಾಗರತ್ನ ದಾದಾಗಿರಿ ಪ್ರಕರಣ- ಕೀರ್ತಿ ಗೌಡ ಪ್ರತಿಕ್ರಿಯೆ

    ನಾಗರತ್ನ ದಾದಾಗಿರಿ ಪ್ರಕರಣ- ಕೀರ್ತಿ ಗೌಡ ಪ್ರತಿಕ್ರಿಯೆ

    ಬೆಂಗಳೂರು: ನಟ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರು ಎರಡನೇ ಪತ್ನಿ ಕೀರ್ತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.  ಘಟನೆ ಸೆ. 23ರಂದು ಭಾನುವಾರ ನಡೆದಿತ್ತು. ಈ ಸಂಬಂಧ ಕೀರ್ತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ನಾಗರತ್ನ ಅವಳಿಗೆ ಮನುಷತ್ವ ಇಲ್ಲ. ದುನಿಯಾ ವಿಜಿ ಹಾಗೂ ಅವರ ತಂದೆ-ತಾಯಿಯ ಮಧ್ಯೆ ಹೋಗುವುದಿಲ್ಲ ಎಂದು ನಾಗರತ್ನ ಮ್ಯೂಚಲ್ ಅಗ್ರಿಮೆಂಟ್ ಮಾಡಿಕೊಂಡಿದ್ದಳು. ಆಗ ನಾಗರತ್ನ ತನ್ನ ಪತಿ ದುನಿಯಾ ವಿಜಿ ದೂರ ಹೋಗುತ್ತಾರೆಂದು ನೋಡಿ ಅವರ ಬಳಿಯಿದ್ದ ಹಣವನ್ನೆಲ್ಲಾ ಪಡೆದಳು. ಅವರು ಕಷ್ಟಪಟ್ಟು ದುಡಿದ ಹಣವೆಲ್ಲ ನಾಗರತ್ನ ತೆಗೆದುಕೊಂಡು ಹೋಗಿದ್ದಳು. ವಿಜಿ ಕೂಡ ತಮ್ಮ ಪ್ರೀತಿಗಾಗಿ ಹಣವನ್ನು ಎಲ್ಲ ಬಿಟ್ಟು ಬಂದರು ಎಂದು ಕೀರ್ತಿಗೌಡ ಹೇಳಿದರು.

    ನಾಗರತ್ನ ಓದಿರುವುದು 3ನೇ ತರಗತಿ. ವಿಜಿ ರಿಜಿಸ್ಟ್ರೇಷನ್ ಆಫೀಸ್‍ಗೆ ಹೋಗಿ ಎಲ್ಲವನ್ನೂ ಚೆಕ್ ಮಾಡಿಸಿ, ಸಂಪಾದನೆ ಮಾಡಿದ ಎಲ್ಲವನ್ನೂ ಕೊಟ್ಟಿದ್ದಾರೆ. ಆಕೆ ರಿಜಿಷ್ಟ್ರೇಶನ್ ಆಫೀಸ್‍ಗೆ ಹೋಗಿ ವಿಜಿ ಹಣ ನೀಡಿರುವುದು ಸುಳ್ಳು ಎಂದು ಹೇಳಿದ್ದಾಳೆ. ನಾಗರತ್ನ ಎಂದರೆ ವಿಜಿಗೆ ಆಗುವುದ್ದಿಲ್ಲ. ದುನಿಯಾ ವಿಜಿಗೆ ನಿನ್ನ ಮೇಲೆ ಪ್ರೀತಿ ಇದರೆ ಕರೆಸಿಕೋ. ಯಾಕೆ ಹೀಗೆ ಸಾಯ್ತೀಯಾ? ಕೀರ್ತಿ ಗೌಡ ನನ್ನ ಸಂಸಾರ ಹಾಳು ಮಾಡಿದ್ದಾಳೆ ಎಂದು ಹೇಳಿದ್ದಳು. ಆದರೆ ಆಕೆಯ ಸಂಸಾರನೇ ಚೆನ್ನಾಗಿರಲಿಲ್ಲ. ಅವರ ಮಧ್ಯೆ ಸಾಕಷ್ಟು ವರ್ಷಗಳಿಂದ ಸಮಸ್ಯೆಯಿತ್ತು. ನಾನು ವಿಜಿ ಅವರನ್ನು ಮದುವೆಯಾಗಿ ಮೂರು ತಿಂಗಳಲ್ಲೇ ನಾಗರತ್ನ ತನ್ನ ಅಸಲಿ ಬುದ್ಧಿಯನ್ನು ತೋರಿಸಿದ್ದಳು ಎಂದರು.

    ಯಾರೂ ಏನೇ ಹೇಳಿದ್ದರು ನಾನು ವಿಜಿ ಜೊತೆನೇ ಸಾಯೋವರೆಗೂ ಇರುತ್ತೇನೆ. ದುನಿಯಾ ವಿಜಿ ಅವರ ತಂದೆ-ತಾಯಿ ನನಗೆ ಸಪೋರ್ಟ್ ಮಾಡುತ್ತಾರೆ. ನಾಗರತ್ನ ನನ್ನ ಮೇಲೆ ಹಲ್ಲೆ ನಡೆಸಿದ್ದಾಗ ಅವರು ನನ್ನನ್ನು ಸಹಾಯ ಮಾಡಿದ್ದರು. ವಿಜಿ ಅವರು ತಂದೆ-ತಾಯಿ ಇಷ್ಟು ವರ್ಷ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದರು. ನಾಗರತ್ನ ಹಲ್ಲೆ ನಡೆಸಿದ ನಂತರ ನನ್ನ ಕುತ್ತಿಗೆ ಭಾಗಕ್ಕೆ ಗಾಯಗೊಂಡಿತ್ತು. ಅಲ್ಲದೇ ನನ್ನ ಕುತ್ತಿಗೆಯಲ್ಲದ್ದ ಮಾಂಗಲ್ಯ ಸರ ಅರ್ಧ ಮುರಿಯಿತು. ನಾಗರತ್ನ ನನ್ನ ಮೇಲೆ ಹಲ್ಲೆ ನಡೆಸಿದ ನಂತರ ಡ್ರೈವರ್ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ಕಾರು ತೆಗೆದುಕೊಂಡು ಹೋದಳು. ನಾಗರತ್ನ ನನ್ನ ಮೇಲೆ ಹಲ್ಲೆ ನಡೆಸುವ ಮೊದಲು ಆಕೆಯ ಮಕ್ಕಳು ಮನೆಯಲ್ಲಿದ್ದ ಸಿಸಿಟಿವಿಯನ್ನು ಒಡೆದು ಹಾಕಿದ್ದಾರೆ ಎಂದು ಕೀರ್ತಿಗೌಡ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI

  • ವಿಜಿ ಜೈಲಿಗೆ ಹೋಗೋದಕ್ಕೆ ಕೀರ್ತಿ ದರಿದ್ರ ಕಾಲ್ಗುಣವೇ ಕಾರಣ- ಮೊದಲ ಪತ್ನಿ ಗುಡುಗು

    ವಿಜಿ ಜೈಲಿಗೆ ಹೋಗೋದಕ್ಕೆ ಕೀರ್ತಿ ದರಿದ್ರ ಕಾಲ್ಗುಣವೇ ಕಾರಣ- ಮೊದಲ ಪತ್ನಿ ಗುಡುಗು

    ಬೆಂಗಳೂರು: `ಜಯಮ್ಮನ ಮಗ’ ದುನಿಯಾ ವಿಜಿ ಬಾಳಲ್ಲಿ ಪತ್ನಿಯರ ಫೈಟ್ ಆರಂಭವಾಗಿದೆ. ಇದೀಗ ಎರಡನೇ ಪತ್ನಿ ಕೀರ್ತಿ ಗೌಡ ವಿರುದ್ಧ ಮೊದಲ ಪತ್ನಿ ನಾಗರತ್ನ ಗುಡುಗಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೊದಲ ಪತ್ನಿ ನಾಗರತ್ನ, ಕೀರ್ತಿ ಗೌಡ ಯಾವಾಗ ವಿಜಿ ಜೀವನದಲ್ಲಿ ಬಂದಳೋ ಅವತ್ತಿಂದ್ಲೇ ನಮ್ಮ ಮನೆಯಲ್ಲಿ ದರಿದ್ರ ಆರಂಭವಾಗಿದೆ. ಖಳನಟರಿಬ್ಬರು ನೀರು ಪಾಲಾದ್ರು. ಅವಾಗ ದೊಡ್ಡ ಸುದ್ದಿಯೇ ಆಗೋಯ್ತು. ಹೀಗೆ ಅವತ್ತಿಂದ ಬರೀ ಕೇಸ್ ಗಳೇ ಆಗಿ ಹೋಯಿತು. ಬರೀ ರಗಳೆಗಳೇ ಆಗಿ ಹೋಗಿದೆ. ಇದು ಮಕ್ಕಳ ಮೇಲೆ ಪರಿಣಾಮ ಬೀಳುತ್ತದೆ. ಕೀರ್ತಿ ಗೌಡ ಹೆಂಡತಿಯಲ್ಲ, ನಾನು ವಿಜಿ ಹೆಂಡತಿ. ಅವಳು ವಿಜಿ ಹೆಂಡತಿಯಾಗಲು ಯಾವುದೇ ಸಾಕ್ಷಿಯಿಲ್ಲ. ನಾನು ನನ್ನ ಮಕ್ಕಳ ಬಳಿ ಯಾಕೆ ಹೋಗಬಾರದು? ನಿನ್ನೆ ನನ್ನ ಮಕ್ಕಳನ್ನು ನೋಡಲು ಹೋಗಿದ್ದೆ. ಆವಾಗ ಆಕೆ ನನ್ನ ಮೇಲೆ ರೇಗಾಡಿದಳು, ಇದರಿಂದ ಸಿಟ್ಟುಗೊಂಡು ನಾನು ಆಕೆಗೆ ಎರಡೇಟು ಹೊಡೆದೆ ಅಂದ್ರು.

    ನನಗೆ ಹಾಗೂ ನನ್ನ ಮಕ್ಕಳಿಗೆ ಕೊಲೆ ಬೆದರಿಕೆ ಇದೆ. ಇದರಿಂದ ನಮಗೆ ಓಡಾಡಲು ಭಯ ಆಗ್ತಿದೆ. ನಮಗೆ ಏನಾದ್ರೂ ಆದರೆ ವಿಜಿಯೇ ಜವಾಬ್ದಾರಿ. ಹೀಗಾಗಿ ಕೀರ್ತಿ ಗೌಡ ನ್ನ ಮೇಲೆ ಕೈ ಮಾಡಿದ ಕೂಡಲೇ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದೇನೆ ಅಂತ ಹೇಳಿದ್ರು.

    ಸುಮಾರು 2 ವರ್ಷದಿಂದ ಬರೀ ಕೇಸ್, ಕಂಪ್ಲೆಂಟ್, ಸ್ಟೇಷನ್ ಇದೇ ಆಗಿದೆ. ಒಬ್ರೂ ಬುದ್ಧಿ ಹೇಳುವವರು ಇಲ್ಲ. ನಾನೂ ಕೂಡ ಹೇಳಲು ತುಂಬಾನೇ ಪ್ರಯತ್ನಪಟ್ಟೆ. ಆದ್ರೆ ನಾನೇ ಕೆಟ್ಟವಳಾದೆ. ಮನೆಯಲ್ಲಿ ದೊಡ್ಡವರಿರುತ್ತಾರೆ. ಅವರಾದ್ರೂ ಸ್ವಲ್ಪ ತಿಳುವಳಿಕೆ ಹೇಳಬೇಕು. ಅವರು ಹೇಳುತ್ತಿಲ್ಲ. ದಾರಿ ತಪ್ಪಿಸಿ ಹಾಳು ಮಾಡುತ್ತಿದ್ದಾರೆ. ಒಂದು ಕಡೆ ನಾನು, ಇನ್ನೊಂದು ನನ್ನ ಮಕ್ಕಳು. ಈಗ ಯಾರೋ ಬಂದವಳು ಸ್ವಲ್ಪ ದಿವಸ ಇರುತ್ತಾಳೆ ಹೋಗುತ್ತಾಳೆ. ಅವರೆಲ್ಲ ಬರೋದು ದುಡ್ಡಿಗೆ. ಇರೋದ್ದಿಕ್ಕೆ ಸಂಸಾರ ಮಾಡವುದಿಕ್ಕೆ ಯಾರೂ ಬರಲ್ಲ. ನಮಗೆ ಮೂರು ಮಕ್ಕಳಿದ್ದಾರೆ. ನಮಗೆ ವಿಧಿಯಿಲ್ಲ ಹೀಗಾಗಿ ನಾವು ಸಂಸಾರ ಮಾಡಲೇಬೇಕು. ನಮಗೆ ಅವರು ಕೊನೆಯವರೆಗೆ ಬೇಕೇ ಬೇಕು ಅಂತ ಹೇಳಿದ್ರು.

    ಇವರೆಲ್ಲ ಎಂಜಾಯ್ ಮಾಡ್ಕೊಂಡು ಎರಡು ದಿವಸ ಇದ್ದು ಹೋಗುತ್ತಾರೆ. ಇವರೆಲ್ಲ ಬುದ್ಧಿ ಹೇಳಲ್ಲ. ಬದಲಾಗಿ ಹಾದಿ ತಪ್ಪಿಸಿ ಜೈಲಿಗೆ ಕಳುಹಿಸುತ್ತಾರೆ. ಬುದ್ಧಿ ಹೇಳಲು ಒಳ್ಳೆ ಫ್ರೆಂಡ್ಸ್ ಒಬ್ಬರೂ ಬರಲ್ಲ. ಎಲ್ಲಾ ಈ ಖಚಡಗಳೇ ಬರೋದು. ಹೀಗಾಗಿ ಈ ತರ ಬೀದಿಗೆ ಬಂದು ನಿಂತುಕೊಳ್ಳುತ್ತಾರೆ. ವಿಜಿಯವರಿಗೂ ಬುದ್ಧಿ ಇಲ್ಲ. ಅವರಿಗೂ ಯಾವುದು ಸರಿ ಯಾವುದು ಸರಿ ಎನ್ನುವುದು ಗೊತ್ತಿಲ್ಲ. ನಾನು ಸರಿಯಾಗೇ ಮಾತಾಡ್ತೀನಿ. ನಾನು ಇರೋದೇ ಹೀಗೆ. ವಿಜಿಯೇನು ಚಿಕ್ಕಮಗುವೇ? ಇವತ್ತು ಹೋಗಿ ಜೈಲಿನಲ್ಲಿ ಕುಳಿತ್ತಿದ್ದಾರೆ ಅಲ್ವಾ? ಇಂದು ನನಗೆ ಹಾಗೂ ನನ್ನ ಮಕ್ಕಳಿಗೆ ಯಾರು ಗತಿ? ಒಟ್ಟಿನಲ್ಲಿ ನನ್ನ ಸಂಸಾರವೇ ಹಾದಿ ತಪ್ಪಿಸಿಬಿಟ್ಟರು ಅಂತ ಅಳಲು ತೋಡಿಕೊಂಡರು.

    ಅತ್ತೆ-ಮಾವನ ವಿರುದ್ಧ ಕಿಡಿ:
    ನಾನು ಡೈವರ್ಸ್ ಮಾಡಿಕೊಂಡಿಲ್ಲ. ಎಲ್ಲೂ ಒಂದು ಸಹಿ ಮಾಡಿಕೊಟ್ಟಿಲ್ಲ. 1 ರೂಪಾಯಿ ಅವರಿಂದ ದುಡ್ಡು ಇಸ್ಕೊಂಡಿಲ್ಲ. ಯಾವ ಆಸ್ತಿಗೂ ಕಾಂಪ್ರಮೈಸ್ ಆಗಿಲ್ಲ. ಏನೂ ಇಲ್ಲದೇ ಇರೋವಾಗ ಅವರ ಜೊತೆ ಬಂದಿದ್ದೀನಿ. ಏನೂ ಇಲ್ಲದೇ ಇದ್ರೂ ನಾನು ಜೀವನ ಮಾಡ್ತೀನಿ. ನನ್ನ ಮಾವ ನನ್ನ ವಿರುದ್ಧ, ನಾಗರತ್ನ ಏನಕ್ಕೂ ಬರಲ್ಲ. ಯಾಕಂದ್ರೆ ಅವಳಿಗೆ ಈಗಾಗಲೇ ಹಣ, ಆಸ್ತಿ ಎಲ್ಲ ಕೊಟ್ಬಿಟ್ಟಿದ್ದೀವಿ ಎಂದು ಸುಳ್ಳು ಹೇಳಿಕೊಂಡು ಬಂದಿದ್ದಾರೆ ಎಂದು ವಿಜಯ್ ತಂದೆಯ ವಿರುದ್ಧ ಕಿಡಿಕಾರಿದ್ರು.

    ನಾನು ವಿಜಿಯವರನ್ನು ಒಳ್ಳೆಯ ಸ್ಟೇಜಲ್ಲಿ ನೋಡಬೇಕು ಅಂದುಕೊಂಡಿದ್ದೆ. ಆದ್ರೆ ಅದನ್ನು ಅವರ ಕೈಯಾರೆ ಅವರೇ ಹಾಳು ಮಾಡಿಕೊಂಡ್ರು. ಆದ್ರೆ ಅವರಿಗೆ ಬುದ್ಧಿ ಇದ್ಯೋ ಇಲ್ಲವೋ ಗೊತ್ತಿಲ್ಲ. ಅವರ ಜೊತೆಯಲ್ಲಿರೋರೇ ಅವರನ್ನು ಹಾಳು ಮಾಡಿದ್ರು. ಅವರಿಗೆ ಇರೋ ಫ್ರೆಂಡ್ಸ್ ಎಲ್ಲರೂ ಮನೆ ಹಾಳರೇ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಸಂಸಾರವನ್ನು ಸರಿಪಡಿಸೋಣ ಅಂತ ತಿಳುವಳಿಕೆ ಹೇಳೋ ಒಬ್ಬೇ ಒಬ್ಬ ಫ್ರೆಂಡ್ ಕೂಡ ಅವರಲ್ಲಿಲ್ಲ ಅಂತ ಅಂತ ವಿಜಿ ಫ್ರೆಂಡ್ಸ್ ಬಗ್ಗೆ ನಾಗರತ್ನ ಗರಂ ಆದ್ರು.

    ಎದೆ ಉದ್ದ ಬೆಳೆದು ನಿಂತಿರೋ ಮಕ್ಕಳ ಅಪ್ಪ ಇಂದು ಜೈಲಿಗೆ ಹೋಗಿದ್ದಾರೆ. ಈ ಸಮಯದಲ್ಲಿ ನಾನೂ ಇಲ್ಲ ಅಂದಿದ್ದರೆ ನನ್ನ ಮಕ್ಕಳಿಗೆ ಸಮಾಧಾನ ಹೇಳೋರು ಯಾರಿದ್ದಾರೆ? ನಮಗೂ ನೋವಾಗುತ್ತೆ. ಕಾಲೇಜಿಗೆ ಹೋಗಿ ಬರುತ್ತಾರೆ. ನಾಳೆ ಅವರ ಫ್ರೆಂಡ್ಸ್ ಕೇಳುತ್ತಾರೆ. ಆವಾಗ ಅವರಿಗೂ ಬೇಸರವಾಗಲ್ವ ಅಂತ ಪ್ರಶ್ನಿಸಿದ ಅವರು, ವಿಜಯ್ ನನ್ನ ಅರ್ಥ ಮಾಡಿಕೊಳ್ಳಲಿ. ಮೊದಲಿನಂತೆ ಸಿನಿಮಾಗಳನ್ನು ಮಾಡಿ ಅವರು ಎತ್ತರಕ್ಕೆ ಬೆಳೆಯಲಿ. ಅವರಿಗೆ ನಾನು ಸಪೋರ್ಟ್ ಮಾಡುತ್ತೇನೆ. ಹಾರೈಸುತ್ತೇನೆ. ಸಂತೋಷ ಪಡುತ್ತೇನೆ ಅಂತ ಹೇಳಿದ್ರು.

    ನಾನು ಅತ್ತೆ, ಮಾವ ಯಾರನ್ನೂ ನಂಬಲ್ಲ. ಯಾಕಂದ್ರೆ ಅವರೆಲ್ಲರಿಗೂ ನನ್ನ ಮಕ್ಕಳನ್ನು ಕಂಡ್ರೆ ಆಗಲ್ಲ. ಹೀಗಾಗಿ ಅವರು ನನಗೆ ಹಾಗೂ ನನ್ನ ಮಕ್ಕಳಿಗೆ ಏನ್ ಬೇಕಾದ್ರೂ ಮಾಡಬಹುದು. ಅಜ್ಜಿ-ತಾತ ಏನೂ ಕೊಡದೇ ಇದ್ರು ಪರವಾಗಿಲ್ಲ. ಅವರು ಮಕ್ಕಳಿಗೆ ಪ್ರೀತಿ ಕೊಡಬೇಕು. ಆದ್ರೆ ಅವರು ದ್ವೇಷ ಸಾಧಿಸುತ್ತಾರೆ ಅಂತ ಅವರು ದುಃಖ ತೋಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=CXoYbpWrkoU

    https://www.youtube.com/watch?v=ALFMC4BI448

  • ದುನಿಯಾ ವಿಜಿಯ ಮೊದಲ, ಎರಡನೇ ಹೆಂಡತಿ ನಡುವೆ ಫೈಟ್

    ದುನಿಯಾ ವಿಜಿಯ ಮೊದಲ, ಎರಡನೇ ಹೆಂಡತಿ ನಡುವೆ ಫೈಟ್

    ಬೆಂಗಳೂರು: ದುನಿಯಾ ವಿಜಯ್ ಇಂದು ಒಂದೆಲ್ಲಾ ಒಂದು ತೊಂದರೆಗಳು ಶುರುವಾಗಿವೆ. ಶನಿವಾರ ರಾತ್ರಿ ಮಾರುತಿ ಗೌಡ ಎಂಬವರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದರು. ಇದೀಗ ದುನಿಯಾ ವಿಜಿ ಜೊತೆಗೆ ಅವರ 2ನೇ ಪತ್ನಿ ಕೀರ್ತಿಗೂ ಸಂಕಷ್ಟ ಶುರುವಾಗಿದೆ.

    ದುನಿಯಾ ವಿಜಯ್ ಇಬ್ಬರು ಪತ್ನಿಯರು ಪರಸ್ಪರ ಕೈ ಕೈಮಿಲಾಯಿಸಿಕೊಂಡಿದ್ದಾರೆ. ಈ ಸಂಬಂಧ ವಿಜಯ್ ಮೊದಲ ಪತ್ನಿ ನಾಗರತ್ನ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಮೂವರು ಮಕ್ಕಳನ್ನ ನನ್ನಿಂದ ದೂರ ಮಾಡಿ ಹಾಳು ಮಾಡುತ್ತಿದ್ದಾರೆ. ನನ್ನ ಮಗ ಹೇಗಿದ್ದಾನೆ ಅಂತಾ ನೋಡಲು ಹೋದಾಗ, 2ನೇ ಪತ್ನಿ ಕೀರ್ತಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಗೂಂಡಾಗಳನ್ನ ಛೂ ಬಿಟ್ಟು ಬೆದರಿಸಿದ್ದಾರೆ. ನನಗೆ ನ್ಯಾಯ ಬೇಕು, ಮಕ್ಕಳು ಬೇಕು ಎಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

    ನಾಗರತ್ನ ಅವರ ದೂರಿನ ಆಧಾರದ ಮೇಲೆ ಕೀರ್ತಿ ವಿರುದ್ಧ ಪೊಲೀಸರು 323, 504 ,506 34 ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡರು. ಹಲ್ಲೆ, ಬೆದರಿಕೆ ಆರೋಪದಡಿ ಕೇಸ್ ಫೈಲ್ ಆಗಿದೆ. ಕೂಡಲೇ ಕೀರ್ತಿಯನ್ನ ಕರೆಸಿಕೊಂಡ ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ನಾಗರತ್ನಾ ಅವರೇ ನನ್ನ ಮೇಲೆ ಹಲ್ಲೆ ನಡೆಸಿದ್ರು ಅಂತಾ ಕೀರ್ತಿ ಆರೋಪಿಸಿದರು. ನಂತರ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಕೀರ್ತಿಯನ್ನು ಕಳಿಸಿಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv