Tag: ಕೀರ್ತಿಗೌಡ

  • ಇದೂವರೆಗೂ ಪತ್ತೆಯಾಗದ ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ

    ಇದೂವರೆಗೂ ಪತ್ತೆಯಾಗದ ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ

    ಬೆಂಗಳೂರು: ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣ ಸಂಬಂಧ ಮೊದಲ ಪತ್ನಿ ನಾಗರತ್ನ ಇಲ್ಲಿವರೆಗೂ ಪತ್ತೆಯಾಗಿಲ್ಲ. ಇವತ್ತಿಗೆ ಎರಡು ದಿನವಾದರೂ ನಾಗರತ್ನ ಪತ್ತೆಯಾಗದೇ ಇರೋದು ಗಿರಿನಗರ ಪೊಲೀಸರಿಗೆ ತಲೆನೋವಾಗಿದೆ.

    ನಾಗರತ್ನ ಎಲ್ಲಿದ್ದಾರೆ ಅಂತಾ ಪತ್ತೆಯಾದರೆ ಯಾವುದೇ ಕ್ಷಣದಲ್ಲೀ ಬಂಧಿಸುವ ಸಾಧ್ಯತೆಗಳಿವೆ. ನಾಗರತ್ನ ಪರ ವಕೀಲರು ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದ್ದು, ಬಳಿಕ ನಾಗರತ್ನ ಪತ್ತೆಯಾಗುವ ಮುನ್ಸೂಚನೆಗಳು ಹೆಚ್ಚಿವೆ.

    ಇತ್ತ ಸೋಮವಾರ ದುನಿಯಾ ವಿಜಯ್ ತಮ್ಮ ಮೊದಲ ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆಯೂ ಗಲಾಟೆ ನಡೆದ ವೇಳೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ವಿಜಯ್, ಬಳಿಕ ಸಂಧಾನ ನಡೆದ ಪರಿಣಾಮ ಪತ್ನಿ ನಾಗರತ್ನ ಅವರಿಗೆ ನೀಡಬೇಕಾದ ಆಸ್ತಿಯನ್ನು ನೀಡಿದ್ದರು. ಅಲ್ಲದೇ ತಮ್ಮ ಮಕ್ಕಳ ಹೆಸರಿನಲ್ಲೂ ಆಸ್ತಿಯನ್ನು ನೀಡಿದ್ದರು.

    ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಘಟನೆಗಳಿಂದ ಬೇಸತ್ತಿರುವ ವಿಜಯ್ ಅವರು ಸದ್ಯ ಕಾನೂನಿನ ಮೂಲಕ ಅಧಿಕೃತವಾಗಿ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಪತ್ನಿಯಿಂದ ವಿಚ್ಛೇದನ ಪಡೆಯಲು ಕಾರಣವನ್ನು ನೀಡಬೇಕಾಗುತ್ತದೆ. ಇದಕ್ಕೆ ಪತ್ನಿ ನಾಗರತ್ನ ಅವರ ಕೌರ್ಯ ಕಾರಣ ನೀಡಿದ್ದಾರೆ.

    ಕೀರ್ತಿ ಗೌಡ ಅವರ ಮೇಲಿನ ಹಲ್ಲೆ ವಿಡಿಯೋ ಬಿಡುಗಡೆಯಾಗುತ್ತಿದಂತೆ ನಾಗರತ್ನ ಅವರು ನಾಪತ್ತೆಯಾಗಿದ್ದಾರೆ. ಕೀರ್ತಿ ಅವರ ಹಲ್ಲೆ ವಿರುದ್ಧ ಸದ್ಯ ನಾಗರತ್ನ ಅವರ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದರ ನಡುವೆ ಕೀರ್ತಿ ತಮ್ಮ ದೂರಿನಲ್ಲಿ ವಿಜಯ್ ಅವರ ಪುತ್ರಿಯರ ಮೇಲಿನ ಹೆಸರನ್ನು ಹಿಂಪಡೆದ ಹಿನ್ನೆಲೆಯಲ್ಲಿ ಪೊಲೀಸರು ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಧ್ಯಮಗಳ ಮುಂದೇ ಕಣ್ಣೀರಿಟ್ಟ ಕೀರ್ತಿಗೌಡ

    ಮಾಧ್ಯಮಗಳ ಮುಂದೇ ಕಣ್ಣೀರಿಟ್ಟ ಕೀರ್ತಿಗೌಡ

    ಬೆಂಗಳೂರು: ನಾಗರತ್ನ ಅವರು ದುನಿಯಾ ವಿಜಿ ಅವರ ಎರಡನೇ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ಮೋನಿಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಗಿರಿನಗರ ಪೊಲೀಸ್ ಠಾಣೆಯ ಪೊಲೀಸರು ನಾಗರತ್ನ ಮನೆಯಲ್ಲಿ ಇಲ್ಲದ ಕಾರಣ ಅವರ ಮಗಳು ಮೋನಿಕಾರನ್ನು ವಶಕ್ಕೆ ಪಡೆದಿದ್ದರು. ಆದ್ದರಿಂದ ದುನಿಯಾ ವಿಜಿ ಮತ್ತು ಎರಡನೇ ಪತ್ನಿ ಕೀರ್ತಿಗೌಡ ಗಿರಿನಗರ ಪೊಲೀಸ್ ಠಾಣೆಯ ಬಳಿ ಬಂದಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಇಬ್ಬರು ಮಗಳ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.

    ಕೀರ್ತಿಗೌಡ ಅವರು ಮಾತನಾಡಿ, ಏನೇ ಪರಿಸ್ಥಿತಿ ಇರಬಹುದು ಇದೆಲ್ಲವನ್ನು ಮೀರಿ, ಯಾವುದೇ ಹೆಣ್ಣಿಗಾದರೂ ಈ ರೀತಿ ಹಲ್ಲೆ ಮಾಡಬಾದರು ಎಂದು ಮೋನಿಕಾ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದ್ದಾರೆ. ಅವರ ತಾಯಿ ಮಾಡಿದ ತಪ್ಪಿಗೆ, ಅಷ್ಟು ಚಿಕ್ಕ ಹುಡುಗಿಗೆ ಶಿಕ್ಷೆಯಾಗುವುದು ಬೇಡ. ಇಷ್ಟೆಲ್ಲಾ ನಡೆದಿದ್ದಕ್ಕೆ ಬೇಜಾರಿದೆ. 2-3 ವರ್ಷದಿಂದ ಒಟ್ಟಿಗೆ ಇದ್ದೆವು. ಆದರೆ ನಮ್ಮ ಮೇಲೆ ಹೊಡೆಸುವಷ್ಟು ದ್ವೇಷ ಇದೆ ಅಂತ ಗೊತ್ತಿರಲಿಲ್ಲ. ಈಗ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳಿ ಗಳಗಳನೇ ಅಳುತ್ತಾ ಹೋಗಿದ್ದಾರೆ.

    ಈ ವೇಳೆ ಮಾತನಾಡಿದ ವಿಜಿ ಪರ ವಕೀಲ ಶಿವಕುಮಾರ್, ನಾಗರತ್ನ ಅವರು ಇಷ್ಟಾದರೂ ಮಕ್ಕಳ ಭವಿಷ್ಯದ ಬಗ್ಗೆ ಲೆಕ್ಕಿಸದೆ ಈ ರೀತಿ ವರ್ತಿಸುತ್ತಿದ್ದಾರೆ. ಆದರೆ ನಾಗರತ್ನ ಅವರ ವಿರುದ್ಧ ಕೀರ್ತಿ ಅವರು ದೂರು ನೀಡಿದ್ದು, ವಿಜಯ್ ಅವರು ನೀಡಿಲ್ಲ. ಪ್ರಕರಣದಲ್ಲಿ ಮೋನಿಕಾ ಆರೋಪಿ ಆಗಿದ್ದರೆ. ಆದರೆ ದೂರಿನಲ್ಲಿ ಹೆಸರು ಕೈಬಿಟ್ಟರು ಪೊಲೀಸರು, ಕಾನೂನು ಅದನ್ನು ಬಿಡಲು ಸಾಧ್ಯವಿಲ್ಲ. ಒಂದೊಮ್ಮೆ ನಾಗರತ್ನ ಅವರು ಎಲ್ಲಿದ್ದಾರೆ ಎಂದು ಮಾಹಿತಿ ಲಭಿಸಿದರೆ ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಕಾನೂನು ನಿಯಮ ಅಡಿ ಎಲ್ಲವೂ ನಡೆಯಲಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=H0T715sdeFM

  • ನಾಗರತ್ನ ಹಲ್ಲೆ ಪ್ರಕರಣ ದುನಿಯಾ ವಿಜಿ ಸ್ಪಷ್ಟನೆ

    ನಾಗರತ್ನ ಹಲ್ಲೆ ಪ್ರಕರಣ ದುನಿಯಾ ವಿಜಿ ಸ್ಪಷ್ಟನೆ

    ಬೆಂಗಳೂರು: ನಾಗರತ್ನ ಅವರು ತಮ್ಮ ಎರಡನೇ ಪತ್ನಿ ಕೀರ್ತಿಗೌಡ ಅವರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

    ನಟ ದುನಿಯಾ ವಿಜಯ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಹೆಣ್ಣು ಮಗು ಅಂತ ಹೇಳಿ ಸಿಂಪತಿ ಗಿಟ್ಟಿಸುತ್ತಿದ್ದರು. ನಾವು ಯಾರು ನೆಮ್ಮದಿಯಾಗಿ ಇರಬಾರದು ಎಂದು ಈ ರೀತಿ ಮಾಡುತ್ತಿದ್ದಾರೆ. ಸದ್ಯ ಕೊನೆಗೆ ಸತ್ಯ ಗೊತ್ತಾಗಿದೆ. ಸುಮ್ಮನೆ ಅವಳಂತೆ ನಾನು ನಾಯಿಯಂತೆ ಮಾತನಾಡಲು ಇಷ್ಟ ಇಲ್ಲ. ಏನಾಗಿದೆ ಅದಕ್ಕೆ ನ್ಯಾಯ ಕೊಡಿಸಿ ಅಷ್ಟೆ. ಒಂದು ಫೇಕ್ ಕಂಪ್ಲೇಂಟ್ ಕೊಟ್ಟರೆ ನಮ್ಮ ಮೇಲೆ ಕೇಸ್ ಹಾಕುತ್ತಾರೆ ಎಂದು ಬೇಸರದಿಂದ ವಿಜಿ ಹೇಳಿದ್ದಾರೆ. ಇದನ್ನೂ ಓದಿ: ನಾಗರತ್ನ ದಾದಾಗಿರಿ ಪ್ರಕರಣ- ನಿಜವಾಗಿ ಅಲ್ಲಿ ನಡೆದಿದ್ದೇನು: ಕೀರ್ತಿಗೌಡ ಮಾತು

    ನನಗೂ ತುಂಬಾ ಕೆಲಸ ಇದೆ. ಆದರೆ ಈ ಸಮಸ್ಯೆಯಿಂದ ಏನು ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ. ನಾನು ನಾಗರತ್ನ ವಿರುದ್ಧ ದೂರು ಕೊಡುತ್ತೇನೆ. ಈ ಬಗ್ಗೆ ಸಂಪೂರ್ಣವಾಗಿ ಸಂಜೆ ಸುದ್ದಿಗೋಷ್ಠಿ ಮಾಡಿ ಮಾತನಾಡುತ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬ್ಲಾಕ್ ಕೋಬ್ರಾ’ ಮನೆಯಲ್ಲಿ ಪತ್ನಿ ನಾಗರತ್ನ ದಾದಾಗಿರಿ!

    ಇಷ್ಟು ವರ್ಷ ದುನಿಯಾ ವಿಜಿ ಸರಿಯಿಲ್ಲ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಸಿಂಪತಿ ಪಡೆದುಕೊಂಡಿದ್ದರು. ಜನರ ನಂಬಿಕೆಯಿಂದ ಈ ರೀತಿ ಮಾಡಿದ್ದಾರೆ ಎಂದು ಇದೇ ವೇಳೆ ಕೀರ್ತಿಗೌಡ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=alaw833_NkQ

  • ನಾಗರತ್ನ ಪ್ರಕರಣದ ಪ್ರತ್ಯಕ್ಷದರ್ಶಿಯಿಂದ ಎಸ್‍ಪಿ ಅಣ್ಣಾಮಲೈಗೆ ಮನವಿ

    ನಾಗರತ್ನ ಪ್ರಕರಣದ ಪ್ರತ್ಯಕ್ಷದರ್ಶಿಯಿಂದ ಎಸ್‍ಪಿ ಅಣ್ಣಾಮಲೈಗೆ ಮನವಿ

    ಬೆಂಗಳೂರು: ದುನಿಯಾ ವಿಜಿ ಜೈಲಿಗೆ ಹೋದ ಸಂದರ್ಭದಲ್ಲಿ ನಾಗರತ್ನ ಅವರು ಕೀರ್ತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದು, ಈ ಘಟನೆಯ ಪ್ರತ್ಯಕ್ಷದರ್ಶಿ ಮಂಜು ಅವರು ಸಂಪೂರ್ಣ ವಿವರವನ್ನು ನೀಡಿದ್ದಾರೆ.

    ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಮಂಜು ಅವರು, ನಾಗರತ್ನ ಹಾಗೂ ಮಕ್ಕಳು ಕಾನೂನಿನ ದಾರಿ ತಪ್ಪಿಸಿ ಅವರಿಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಯಾರೋ ಕಾಣದ ಕೈ ಇಲ್ಲಿ ಆಟ ಆಡುತ್ತಿದೆ. ಈ ಮೂಲಕ ನಾನು ಎಸ್‍ಪಿ ಅಣ್ಣಾಮಲೈ ಅವರಿಗೆ ಕೈ ಮುಗಿದು, ಎಸ್‍ಪಿ ಅಣ್ಣಾಮಲೈ ನಿಮ್ಮ ಬಗ್ಗೆ ನಾನು ತುಂಬಾ ಕೇಳಿದ್ದೇನೆ. ನಾನು ನಿಮ್ಮ ಅಭಿಮಾನಿ ಸರ್, ಚಿಕ್ಕಮಗಳೂರಿನಲ್ಲಿ ಸಿಂಗಂ ಎಂದು ಹೇಳಿದ್ದಾರೆ. ಇಂತಹವರು ನಮ್ಮ ಬೆಂಗಳೂರಿಗೆ ಬಂದಿದ್ದಾರೆ. ನಾಗರತ್ನ ಅವರಿಂದ ನಮಗೆ ನ್ಯಾಯ ಕೊಡಿಸಬೇಕು. ಇಲ್ಲವೆಂದರೆ ನಿಮ್ಮನ್ನು ಫಾಲೋ ಮಾಡುತ್ತಿರುವ ನಮಗೆ ಅನ್ಯಾಯ ಮಾಡಿದ ರೀತಿ ಆಗುತ್ತದೆ. ನಿಮ್ಮಿಂದ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ, ಭರವಸೆ ಇದೆ. ಶೀಘ್ರವೇ ನಾಗರತ್ನ ಅವರನ್ನು ಹಿಡಿಯಿರಿ. ಒಂದು ವೇಳೆ ಅವರನ್ನು ಬಂಧಿಸಿಲ್ಲ ಎಂದರೆ ನಾವು ಧರಣಿ ಮಾಡುತ್ತೇವೆ. ದುನಿಯಾ ವಿಜಯ್ ಬಗ್ಗೆ ಎಲ್ಲರಿಗೂ ಗೊತ್ತು. ನಿಮ್ಮ ಮೇಲೆ ತುಂಬಾ ಗೌರವಿದೆ. ದಯವಿಟ್ಟು ಅವರಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

    ನಡೆದ ಘಟನೆಯೇನು?:
    ಮೊದಲೇ ಮಗಳು ಮೊನಿಕಾ ಬಂದು ಅಮ್ಮನಿಗೆ ನೇರವಾಗಿ ಬರುವಂತೆ ದಾರಿ ಕೊಟ್ಟು ಹೋಗಿದ್ದರು. ನಾವು ಊಹಿಸಿರಲಿಲ್ಲ ಏಕಾಏಕಿ ಬಂದು ಹಲ್ಲೆ ಮಾಡಿದ್ದಾರೆ. ಇಷ್ಟು ಸಣ್ಣ ಹುಡುಗಿ ತನ್ನ ತಂದೆಯ ವಿರುದ್ಧ ಮಾಡುತ್ತೀನಿ ಎಂದು ಯೋಚನೆಯನ್ನೂ ಮಾಡದೇ ಕ್ರಿಮಿನಲ್ ಪ್ಲ್ಯಾನ್ ಮಾಡಿದ್ದಾರೆ. ಹಲ್ಲೆ ಮಾಡುವ ಮೊದಲೇ ಅಮ್ಮನ ಜೊತೆ ಮಾತನಾಡಿ ಇಬ್ಬರು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಹಲ್ಲೆ ಮಾಡಿದ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಇವರು ಈಗ ಮಾತ್ರವಲ್ಲ ನಿರಂತರವಾಗಿ ದುನಿಯಾ ವಿಜಿ ಅವರಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಎಲ್ಲರ ಮುಂದೇ ಇವರು ನಾನು ಮೊದಲನೇ ಹೆಂಡತಿ ಎಂದು ಸಿಂಪತಿ ಪಡೆಯುತ್ತಿದ್ದಾರೆ. ಮನೆಗೆ ಬಂದಾಕ್ಷಣ ಅವರು ಅವಾಚ್ಯ ಪದಗಳಿಂದ ಬೈದಿದ್ದಾರೆ. ಆಗ ಬೈಗುಳವನ್ನು ನಾವು ಹೇಳಲು ಸಾಧ್ಯವಿಲ್ಲ ಅಷ್ಟು ಅಸಭ್ಯವಾಗಿತ್ತು. ಅವರು ಮಾಡುವ ಸುಳ್ಳುಗಳು. ಈ ಸುಳ್ಳು ಆರೋಪದಿಂದ ನಮಗೆ ತುಂಬಾ ನೋವಾಗಿದೆ. ಅದಕ್ಕೆ ಈಗ ಮಾತನಾಡಲು ಧೈರ್ಯವಾಗಿ ಮಾಧ್ಯಮಗಳ ಮುಂದೇ ಬಂದಿದ್ದೇನೆ ಎಂದ್ರು.

    ದುನಿಯಾ ವಿಜಿ ಅವರು ಮಕ್ಕಳನ್ನು ತುಂಬಾ ಪ್ರೀತಿ ಮಾಡುತ್ತಾರೆ. ಆದರೆ ಮಗಳು ನಮ್ಮ ಮುಂದೇ ಸಿಸಿಟಿವಿಯನ್ನ ತೆಗೆದಿದ್ದಾರೆ. ಆದರೆ ನಾವು ಏನು ಮಾತನಾಡಲು ಆಗಲಿಲ್ಲ. ಪ್ರತಿದಿನ ಮಗಳು ಮೊನಿಕಾಳನ್ನು ನೋಡಿ ಹುಟ್ಟಿದರೆ ಇಂತಹ ಮಕ್ಕಳು ಹುಟ್ಟಬೇಕು ಎಂಬಂತೆ ಇದ್ದರು. ಈಗ ನೇರವಾಗಿ ನೋಡಿದ ಮೇಲೆ ಅವರ ಬಣ್ಣ ಬಯಲಾಗಿದೆ. ಸ್ವಲ್ಪ ಹೊತ್ತು ಹಲ್ಲೆ ಮಾಡಿದ ಬಳಿಕ ಮಗಳು ನೀರು ಕೊಡುತ್ತಾಳೆ. ಬಳಿಕ ಮತ್ತೆ ಅವರ ಮಾವನ ಮೇಲೆ ಹಲ್ಲೆ ಮಾಡಿದ್ದಾರೆ. ಪತಿಯ ಮೇಲೆ ಪ್ರೀತಿ ಇಲ್ಲ. ಅವರಿಗೆ ಶಿಕ್ಷೆ ಕೊಡಬೇಕು ಎಂಬ ಉದ್ದೇಶ ಮಾತ್ರವಿದೆ ಎಂದು ಮಂಜು ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI

  • ವಿಜಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ: ನಾಗರತ್ನ

    ವಿಜಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ: ನಾಗರತ್ನ

    ಬೆಂಗಳೂರು: ದುನಿಯಾ ವಿಜಯ್ ಅವರಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ. ಯಾರ ಜೀವನ ಹಾಳಾಗುತ್ತದೆ ಎನ್ನುವುದು ತಿಳಿಯುತ್ತದೆ. ಅವರ ಬಳಿ ಸಿನಿಮಾ ಇಲ್ಲದಿದ್ದರೆ ಬೇಕಾದರೆ ನಾನೇ ಸಿಡಿ ತರಿಸಿ ಕೊಡುತ್ತೇನೆ ಎಂದು ವಿಜಯ್ ಮೊದಲ ಪತ್ನಿ ನಾಗರತ್ನ ಹೇಳಿದ್ದಾರೆ.

    ಕತ್ರಿಗುಪ್ಪೆಯ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಇಂದು ಮಾತನಾಡಲು ನಿಮ್ಮ ಮುಂದೆ ಬಂದಿದ್ದು, ನನ್ನ ಕುಟುಂಬ ಬೀದಿಗೆ ಬರಲು ಕಾರಣರಾಗಿರುವ ಕೀರ್ತಿ ಬಗ್ಗೆ ಮಾತನಾಡಲು ಬಂದಿದ್ದೇನೆ. ಆಕೆ ಬಗ್ಗೆ ನನಗೆ ಎಲ್ಲಾ ಗೊತ್ತಿದೆ. ಏನಕ್ಕೆ ವಿಜಯ್ ಆಕೆ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾಳೆ ಎನ್ನುವುದು ತಿಳಿದಿದೆ. ಆಕೆ ಸ್ಲಂ ನಿಂದ ಬಂದಿದ್ದಾಳೆ. ಆದರೆ ನಾನು ವಿಜಯ್ ಅವರಿಗೆ ಡಿವೋರ್ಸ್ ಕೊಟ್ಟಿಲ್ಲ.  ವರ್ಷಕ್ಕೆ ಒಬ್ಬರೂ ಬರುತ್ತಾರೆ, ಹೋಗುತ್ತಾರೆ ಎಂದು ಸುಮ್ಮನಿದ್ದೆ. ಅದಕ್ಕೆ ಕೀರ್ತಿ ಜೊತೆ ಇದ್ದಾಗಲೂ ನಾನು ಪ್ರಶ್ನೆ ಮಾಡಿಲ್ಲ. ಕೀರ್ತಿ ಯಾರ ಯಾರ ನಿರ್ಮಾಪಕ ಜೊತೆ ಓಡಾಡಿದ್ದಾಳೆ ಎನ್ನುವುದರ ಬಗ್ಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ನನ್ನ ಮಕ್ಕಳು, ಕುಟುಂಬವನ್ನು ಬೀದಿಪಾಲು ಮಾಡಲೆಂದೇ ಕೀರ್ತಿ ಆಗಮಿಸಿದ್ದು, ವಿಜಯ್ ವರ್ಷಕ್ಕೆ ಒಬ್ಬರಂತೆ ಕರೆದುಕೊಂಡು ಬರುತ್ತಿದ್ದರು. ಈಕೆಯೂ ಹಾಗೇ ಎಂದುಕೊಂಡಿದ್ದೆ. ಆದರೆ ಮಾಧ್ಯಮಗಳಲ್ಲಿ 2ನೇ ಹೆಂಡತಿ ಎಂದು ಹೇಳುತ್ತಿದ್ದರೆ ಸುಮ್ಮನೆ ಇರುವುದು ಹೇಗೆ? ವಿಜಯ್ ಅವರಿಗೆ ಈ ಕುರಿತು ಸಾಕಷ್ಟು ಬಾರಿ ಹೇಳಿದರೂ ಅವರು ಮಾತು ಕೇಳಲಿಲ್ಲ. ಕೀರ್ತಿ ಕುರಿತು ಎಲ್ಲಾ ದಾಖಲೆ ಇದ್ದು, ಅವುಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ನನ್ನ ಮಕ್ಕಳಿಗೆ ಅಪ್ಪ-ಅಮ್ಮ ಇಬ್ಬರು ಬೇಕು. ನಾನು ನನ್ನ ಮಕ್ಕಳು ಬೀದಿಗೆ ಬರೋ ಪರಿಸ್ಥಿತಿಯಲ್ಲಿದ್ದೇವೆ. ನಾನು ಆಸ್ತಿಗೆ ಬಂದವಳಲ್ಲ, ನನಗೆ ವಿಜಯ್ ಬೇಕಷ್ಟೇ ಎಂದರು.

    ಇದೇ ವೇಳೆ ವಿಜಯ್ ಮಾಡಿರುವ ಆರೋಪಗಳ ಕುರಿತು ಉತ್ತರಿಸಿದ ಅವರು, ಮಕ್ಕಳ ಹೆಸರಲ್ಲಿ ಯಾವುದೇ ಆಸ್ತಿ ಇಲ್ಲ. ಮನೆ ಮಾತ್ರ ನನ್ನ ಹೆಸರಿನಲ್ಲಿದೆ. ಆದರೆ ನಮ್ಮ ಕುಟುಂಬದ ಹೆಸರಿನಲ್ಲಿ ಮೂರು ಮನೆ ಇದ್ದು, ಅವೆಲ್ಲಾ ಏನಾಗಿದೆ ಗೊತ್ತಿಲ್ಲ. ಈಗ ಬಾಡಿಗೆ ಮನೆಯಲ್ಲಿ ಯಾಕೆ ಇದ್ದಾರೆ ಎನ್ನುವುದು ಗೊತ್ತಿಲ್ಲ. ನನ್ನ ಗಂಡ ಅಮಾಯಕ ಈ ಕುರಿತು ಅವರಿಗೆ ಏನು ಗೊತ್ತಿಲ್ಲ. ಅತ್ತೆ ಮಾವ ಅವರನ್ನು ನೋಡಿಕೊಳ್ಳೋಕೆ ಬಂದೆ ಎಂದು ಹೇಳುವ ಕೀರ್ತಿ ಈಗ ಎಲ್ಲಿದ್ದಾಳೆ ಎಂದು ಪ್ರಶ್ನಿಸಿದರು.

    ಮಾಧ್ಯಮದ ಮುಂದೇ ವಿಜಯ್ ನನ್ನ ಪತಿ ಎಂದು ಪೋಸ್ ನೀಡಲು ಕೀರ್ತಿಗೆ ನಾಚಿಕೆ ಆಗಲ್ವಾ? ಅವಳ ನಡೆ ಮೀತಿ ಮೀರುತ್ತಿದೆ. ವಿಜಯ್ ಬಾಡಿಗೆ ಮನೆಗೆ ಹೋಗಲು ಕೀರ್ತಿಗೌಡ ಕಾರಣ. ಅಲ್ಲದೇ ಜೈಲಿಗೆ ಹೋಗಲು ಅವಳೇ ಕಾರಣ. ಅವಳು ದುಡ್ಡು ಮಾಡಲು ಬಂದಿದ್ದಾಳೆ. ಈ ಕುರಿತು ಎಲ್ಲಾ ದಾಖಲೆ ಸಂಗ್ರಹಿಸುತ್ತಿದ್ದೇನೆ. ಈ ಎಲ್ಲಾ ವಿಚಾರಗಳ ಸತ್ಯ ಇವತ್ತು ಅಲ್ಲದಿದ್ದರೂ ನಾಳೆ ವಿಜಿ ಅವರಿಗೆ ಗೊತ್ತಾಗುತ್ತೆ. ಅದಕ್ಕಾಗಿ ನಾನು ಕಾಯುತ್ತೇನೆ ಎಂದು ತಿಳಿಸಿದರು.

    ನನಗೆ ಇಬ್ಬರು ಎರಡು ಎರಡು ಹೆಣ್ಣು ಮಕ್ಕಳಿದ್ದಾರೆ. ಅವರ ಭವಿಷ್ಯ ಹಾಳಾಗಬಾರದೆಂದು ಸುಮ್ಮನಿದ್ದೆ. ಆದರೆ ನನಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮಾಧ್ಯಮದ ಮುಂದೆ ಬರಬೇಕಾಯಿತು. ಕೀರ್ತಿ ಜೊತೆ ಇರುವ ಮಗು ಬಾಡಿಗೆ ಮಗು ಅದು ವಿಜಯ್ ಅವರದ್ದು ಅಲ್ಲ. ಈ ಕುರಿತು ವಿಜಯ್ ಅವರಿಗೆ ಅರ್ಥವಾದರೆ ಅವರೇ ನನ್ನ ಬಳಿ ಬಂದು ಮಾತನಾಡುತ್ತಾರೆ. ಯಾರಾದರು ವಿಜಯ್ 2ನೇ ಮದುವೆಗೆ ಹೋಗಿದ್ದೀರಾ? ಗಂಡ ಅಂತಾ ಹೇಗೆ ಹೇಳುತ್ತಾಳೆ? ಏನ್ ದಾಖಲೆ ಇದೆ? ಕೀರ್ತಿಗೌಡ ತಂದೆ ಯಾರು ಎಂದು ಮೊದಲು ಕೇಳಿ? ಯಾವತ್ತು ಕೀರ್ತಿಗೌಡ ನನ್ನ ಮಕ್ಕಳಿಗೆ ಚಿಕ್ಕಮ್ಮ ಅಲ್ಲ. ಏಕೆಂದರೆ ಇಟ್ಟುಕೊಂಡವರು ಎಲ್ಲರು ಚಿಕ್ಕಮ್ಮಂದಿರಲ್ಲ ಎಂದು ಕಿಡಿಕಾರಿದರು.

    ನನ್ನ ಗಂಡ ಹೇಗೆ ಮತ್ತೆ ನನ್ನ ಬಳಿ ಬರುತ್ತಾರೆ ಎಂಬುವುದು ನನಗೆ ಗೊತ್ತಿದೆ. ಅವರ ಮೇಲೆ ಈಗಲೂ ನನಗೆ ನಂಬಿಕೆ ಇದೆ. ಆದರೆ ಅವರು ಕಳೆದ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಮಾತಿನಂತೆ ವಕೀಲರ ದಾಖಲೆ ಬಿಡುಗಡೆ ಮಾಡಲು ತಿಳಿಸಿ. ಈ ಕುರಿತು ಎಲ್ಲಾ ಮಾಹಿತಿ ಲಭ್ಯವಾದ ಬಳಿಕ ದಾಖಲೆ ಸಮೇತ ಉತ್ತರಿಸುತ್ತೇನೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿ ವೇಳೆ ವಿಜಯ್ ಹಾಗೂ ಕೀರ್ತಿ ಕುರಿತ ದಾಖಲೆ, ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಸುದ್ದಿಗೋಷ್ಠಿಯಲ್ಲಿ ಯಾವುದೇ ದಾಖಲೆ ಬಿಡುಗಡೆ ಮಾಡದೇ ಜಾರಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೈಲಿನಿಂದ ಹೊರಬರ್ತಿದ್ದಂತೆ ಅಪ್ಪಿಕೊಂಡು ಸ್ವೀಟ್ಸ್ ತಿಂದ ಜಂಗ್ಲಿ ದಂಪತಿ

    ಜೈಲಿನಿಂದ ಹೊರಬರ್ತಿದ್ದಂತೆ ಅಪ್ಪಿಕೊಂಡು ಸ್ವೀಟ್ಸ್ ತಿಂದ ಜಂಗ್ಲಿ ದಂಪತಿ

    ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ನಟ ದುನಿಯಾ ವಿಜಿ ರಿಲೀಸ್ ಆಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಂದ ಹೊರಗೆ ಕಾಲಿಟ್ಟ ಕೂಡಲೇ ತನ್ನನ್ನು ಕರೆದುಕೊಂಡು ಹೋಗಲು ಬಂದಿದ್ದ ಎರಡನೇ ಪತ್ನಿ ಕೀರ್ತಿಗೌಡರನ್ನು ಜಂಗ್ಲಿ ಅಪ್ಪಿಕೊಂಡರು.

    ಇದೇ ವೇಳೆ ಜೈಲಿನ ಬಳಿ ನೆರೆದಿದ್ದ ಅಭಿಮಾನಿಗಳು ಜೈಕಾರ ಕೂಗಿದರು. ನಂತರ ಗಾಳಿ ಆಂಜನೇಯ ದೇವಸ್ಥಾನ ಮತ್ತು ದರ್ಗಾಕ್ಕೆ ಪತ್ನಿ ಸಮೇತ ಭೇಟಿ ನೀಡಿದರು. ಬಳಿಕ ಪರಸ್ಪರ ಸ್ವೀಟ್ಸ್ ತಿನ್ನಿಸಿಕೊಂಡು ದಂಪತಿ ಸಂಭ್ರಮಿಸಿದರು.

    ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಎಲ್ಲೂ ಕೇಸಿನ ಬಗ್ಗೆ ಮಾತನಾಡಬಾರದು ಎಂದು ನಿಬಂಧನೆಯಿದೆ. ಹೀಗಾಗಿ ನಾನು ಮಾತನಾಡುವುದಿಲ್ಲ. ನನಗೆ ಹಾಗೂ ನನ್ನ ಸ್ನೇಹಿತರಿಗೆ ಜಾಮೀನು ನೀಡಿದಂತಹ ಮ್ಯಾಜಿಸ್ಟ್ರೇಟರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಏಕೆಂದರೆ ಎಷ್ಟೋ ಹಿತಶತ್ರುಗಳು ಜಾಮೀನು ಸಿಗಬಾರದು ಎಂದು ಕಾದುಕುಳಿತಿದ್ದರು. ಆದ್ರೆ ಮ್ಯಾಜಿಸ್ಟ್ರೇಟರ್ ನ್ಯಾಯವನ್ನು ಪರಿಶೀಲಿಸಿ ದೇವರ ಸಮಾನರಾಗಿದ್ದಾರೆ ಎಂದರು.

    ಅಧಿಕಾರಿಗಳ ಕೈವಾಡದ ಬಗ್ಗೆ ಕುರಿತು ನಾನು ಮುಖಾಮುಖಿ ಮಾತನಾಡಲು ರೆಡಿಯಾಗಿದ್ದೇನೆ. ಮಾಧ್ಯಮಗಳು ಅವಕಾಶ ಮಾಡಿಕೊಟ್ಟರೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.

    ಪತ್ನಿ ವಿರುದ್ಧದ ಹಲವು ಆರೋಪದ ವಿಚಾರದ ಕುರಿತು ಮಾತನಾಡಿದ ಅವರು, ನಾಗರತ್ನ ನಾಲ್ಕು ವರ್ಷದ ಹಿಂದೆ ನನ್ನ ಮರ್ಯಾದೆ ತೆಗೆದರು. ಅವರು ನನ್ನ ತಂದೆ-ತಾಯಿನ ಚೆನ್ನಾಗಿ ನೋಡಿಕೊಂಡಿಲ್ಲ. ನಾಗರತ್ನಗೆ ದೊಡ್ಡ ಮನೆಯನ್ನು ಕೊಟ್ಟು ನಾನು ಬಾಡಿಗೆ ಮನೆಯಲ್ಲಿದ್ದೇನೆ. ಮಗ ಮತ್ತು ಮಗಳಂದಿರ ಹೆಸರಿಗೆ ಆಸ್ತಿ ಬರೆದಿದ್ದೇನೆ. ನಾನು, ನನ್ನ ತಂದೆ-ತಾಯಿ ಸತ್ತರೆ ಮಣ್ಣಾಕೋಕೆ ಬರಬೇಡ ಅಂತ ವಿಲ್ ಮಾಡಿಟ್ಟಿದ್ದೇವೆ. ಆದರೆ ನಾಗರತ್ನ ಬಾಯಿಬಿಟ್ಟರೆ ಸುಳ್ಳೇ ಹೇಳೋದು ಎಂದರು.

    ಜಂಗ್ಲಿ ಜೈಲು ಮುಕ್ತನಾಗುತ್ತಿದ್ದಂತೆಯೇ ರಾತ್ರಿ 11 ಗಂಟೆಗೆ ಎರಡನೇ ಪತ್ನಿ ಕೀರ್ತಿ ಜೊತೆ ಸುದ್ದಿಗೋಷ್ಠಿ ನಡೆಸಿದರು. ನನ್ನ ಮಗನಿಗೆ ಹೊಡೆದರು. ಇದಾದ ಬಳಿಕ ಗಲಾಟೆ ಆಯಿತು. ಆದರೆ ನಾನು ಮಾರುತಿ ಗೌಡಗೆ ಹೊಡೆದೇ ಇಲ್ಲ. ಅಲ್ಲದೇ ಮಾರುತಿ ಗೌಡನನ್ನು ನಾನು ಕಿಡ್ನಾಪ್ ಕೂಡ ಮಾಡಿಲ್ಲ. ನಾನು ಸ್ಟೇಷನ್‍ಗೆ ಹೋದ ಮೇಲೆ ಅವರ ಕಡೆಯ ಹುಡುಗರೇ ನನ್ನ ಮೇಲೆ ಮುಗಿಬಿದ್ದರು ಅಂತ ದುನಿಯಾ ವಿಜಿ ಹೇಳಿದ್ದಾರೆ. ಇದರಲ್ಲಿ ಕಾಣದ ಕೈಗಳ ಕೈವಾಡ ಇದೆ ಅಂತ ನೇರವಾಗಿ ಮಾಧ್ಯಮಗಳ ಮುಂದೆ ಅವರು ಆರೋಪಿಸಿದ್ರು. ಒಂದು ವೇಳೆ ಮಾರುತಿ ಗೌಡ, ಕಿಟ್ಟಿ ಬಂದರೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೂರಲ್ಲ, ಹತ್ತು ಮಕ್ಕಳಿದ್ರೂ ದುನಿಯಾ ವಿಜಿಯನ್ನೇ ಮದ್ವೆಯಾಗ್ತಿದ್ದೆ: ಕೀರ್ತಿ ಗೌಡ

    ಮೂರಲ್ಲ, ಹತ್ತು ಮಕ್ಕಳಿದ್ರೂ ದುನಿಯಾ ವಿಜಿಯನ್ನೇ ಮದ್ವೆಯಾಗ್ತಿದ್ದೆ: ಕೀರ್ತಿ ಗೌಡ

    ಬೆಂಗಳೂರು: ಮೂರು ವರ್ಷದ ಹಿಂದೆ ಮದುವೆಯಾಗಿದೆ. ನನ್ನ ಪತಿಗೆ ಮೂವರು ಅಲ್ಲ, ಹತ್ತು ಮಕ್ಕಳಿದ್ದರೂ ನಾನು ಮದುವೆಯಾಗುತ್ತಿದ್ದೆ ಎಂದು ವಿಜಯ್ ಎರಡನೇ ಪತ್ನಿ ಕೀರ್ತಿಗೌಡ ಹೇಳಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದುನಿಯಾ ವಿಜಯ್ ಏನು ಅಂತ ಗೊತ್ತಿದ್ದು, ನಾನು ಮದುವೆ ಆಗಿದ್ದೇನೆ. ನಾನು ತುಂಬಾ ತ್ಯಾಗ ಮಾಡಿ ಮದುವೆಯಾಗಿದ್ದೇನೆ. ನಾಗರತ್ನ ಅವರಿಗೆ ಗಂಡ ಮಕ್ಕಳು ಬೇಕು ಅಷ್ಟೇ. ಇದರಿಂದ ಅವರು ಜನರಿಂದ ಸಿಂಪತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

    ನನ್ನ ಪತಿ, ಅತ್ತೆ, ಮಾವ ಎಲ್ಲರು ಅವರ ಬಗ್ಗೆ ಹೇಳಿದ್ದರು. ಆದರೆ ಇಷ್ಟೊಂದು ಸುಳ್ಳು ಹೇಳುತ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ಮೂರು ಮಕ್ಕಳಿರುವವರನ್ನು ಮದುವೆಯಾಗುವುದಕ್ಕೆ ಒಳ್ಳೆಯ ಮನಸ್ಸು ಬೇಕು. ಅವರ ಮಕ್ಕಳಿಗೂ ನಾನು ಪ್ರೀತಿಕೊಟ್ಟು ಸಾಕುತ್ತಿದ್ದೇನೆ. ನನಗೆ ಅವರ ಬಗ್ಗೆ ಗೊತ್ತು. ಈ ಪ್ರಪಂಚ ತಲೆಕೆಳಗಾದರೂ ಸರಿ. ನನಗೆ ನನ್ನ ಗಂಡನೇ ಸರ್ವಸ್ವ. ನನ್ನ ಪತಿ ನೀನು ಬೇಡ ಎಂದು ಹೇಳುವರೆಗೂ ನಾನು ಹೋಗುವುದಿಲ್ಲ ಎಂದು ಕೀರ್ತಿಗೌಡ ಗುಡುಗಿದ್ದಾರೆ.

    ಮೂರು ದಿನಗಳ ಹಿಂದಷ್ಟೇ ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ ಮಾತನಾಡಿ, ಕೀರ್ತಿ ದುಡ್ಡು, ಬಂಗಾರ ಎಲ್ಲಾ ಎತ್ತಿಕೊಂಡು ಮನೆಯಿಂದ ಓಡಿಹೋಗಿದ್ದಾರೆ ಅಂತ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಸಿದ ಕೀರ್ತಿಗೌಡ ಅವರು, ನಾನು ದುಡ್ಡು, ಒಡವೆ ತಗೊಂಡು ಓಡಿಹೋಗಿಲ್ಲ. ಕಳ್ಳತನ ಮಾಡುವಷ್ಟು ಬರ್ಬಾದ್ ಆಗಿಲ್ಲ. ನನ್ನ ಗಂಡ ನನಗೆ ಬೇಜಾನ್ ಕೊಟ್ಟಿದ್ದಾರೆ. ನಾನು ನನ್ನ ತಾಯಿ ಮನೆಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ.

    ಅವರು ಮಗನನ್ನ ನೋಡುವುದಕ್ಕೆ ಬಂದಾಗ ನಾನು ಅವರ ಮೇಲೆ ಹಲ್ಲೆ ಮಾಡಿಲ್ಲ. ಅವರು ನೂರಕ್ಕೆ ನೂರು ಸುಳ್ಳು ಹೇಳುತ್ತಾರೆ. ಅವರೇ ಜಗಳ ಮಾಡಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಅಂತವರ ಜೊತೆ ಇರಲು ಸಾಧ್ಯವಿಲ್ಲ. ಮನೆ ವಿಚಾರವನ್ನು ಬೀದಿಗೆ ತರಲು ನನಗೆ ಇಷ್ಟ ಇಲ್ಲ. ನನ್ನ ಅತ್ತೆ, ಮಾವ ನಾದಿನಿ ಎಲ್ಲರ ಸಪೋರ್ಟ್ ನನಗಿದೆ. ಎಲ್ಲೋ ಪುಟ್ಟ ಸಂಸಾರ ಮಾಡಿಕೊಂಡು ನೆಮ್ಮದಿಯಾಗಿದ್ವಿ ಒಂದು ಕ್ಷಣದಲ್ಲಿ ನಾಗರತ್ನ ಅವರು ಹಾಳು ಮಾಡಿದ್ದಾರೆ. ನನ್ನ ಪತಿ ಜೈಲಿನಿಂದ ಹೊರಬರಲಿ ಅಂತ ಕಾಯುತ್ತಿದ್ದೆ. ನನಗೆ ಅವರನ್ನು ಬಿಟ್ಟು ಬೇರೇನು ಬೇಡ. ಅವರೆ ನನ್ನ ಪ್ರಪಂಚ ಎಂದು ಕೀರ್ತಿ ಗೌಡ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ವಿಜಿ 2ನೇ ಪತ್ನಿಗೆ ಜೀವ ಬೆದರಿಕೆ!

    ದುನಿಯಾ ವಿಜಿ 2ನೇ ಪತ್ನಿಗೆ ಜೀವ ಬೆದರಿಕೆ!

    -ಪಬ್ಲಿಕ್ ಟಿವಿಗೆ ಕೀರ್ತಿಗೌಡ ಹೇಳಿದ್ದೇನು..?

    ಬೆಂಗಳೂರು: ಕನ್ನಡದ ನಟ ದುನಿಯಾ ವಿಜಯ್ ಜೈಲು ಸೇರಿದಂತೆ 2ನೇ ಪತ್ನಿ ಕೀರ್ತಿಗೌಡ ಮನೆ ಖಾಲಿ ಮಾಡಿದ್ದರು. ಮೊದಲ ಪತ್ನಿ ನಾಗರತ್ನ ಮತ್ತು ಕೀರ್ತಿಗೌಡ ಇಬ್ಬರ ನಡುವಿನ ಜಡೆಜಗಳ ಬಳಿಕ ಒಬ್ಬರ ಮೇಲೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸ್ ವಿಚಾರಣೆ ಬಳಿಕ ಕೀರ್ತಿಗೌಡ ತವರು ಮನೆ ಸೇರಿಕೊಂಡಿದ್ದರು. ದಿಢೀರ್ ಅಂತಾ ತಾಯಿ ಮನೆ ಸೇರಿದ್ದು ಯಾಕೆ ಅಂತಾ ಕೀರ್ತಿಗೌಡ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ಕೀರ್ತಿಗೌಡ ಹೇಳಿದ್ದೇನು..?
    ನಾನು ಎಲ್ಲಿಯೂ ಹೋಗಿಲ್ಲ. ನಾನು ಜೈಲಿನಿಂದ ಹಿಂದಿರುಗಿ ಬರೋವರೆಗೂ ತಾಯಿ ಮನೆಯಲ್ಲಿ ಇರಲು ಹೇಳಿದ್ದಾರೆ. ನನಗೆ ಕತ್ರಿಗುಪ್ಪೆಯ ಮನೆಯಲ್ಲಿರಲು ಸೇಫ್ಟಿ ಇಲ್ಲ. ಪತಿ ದುನಿಯಾ ವಿಜಯ್ ಬಂದ ಮೇಲೆ ನನ್ನ ಮೇಲಿರುವ ಆರೋಪಗಳಿಗೆ ಸ್ಪಷ್ಟನೆಯನ್ನು ಇಬ್ಬರು ನೀಡುತ್ತೇವೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದ್ರೆ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ ಎಂದು ಕೀರ್ತಿಗೌಡ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.


    ಕೀರ್ತಿ ಅವರ ಮಾತು ಕೇಳಿದ ಮೇಲೆ ಜೀವ ಬೆದರಿಕೆ ಏನಾದರೂ ಇದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಜೈಲಿನಲ್ಲಿರುವ ವಿಜಯ್ ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಜಾಮೀನಿಗಾಗಿ ವಿಜಿ ಸೆಷನ್ಸ್ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಅಕ್ಟೋಬರ್ 1ಕ್ಕೆ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.

    ಕೀರ್ತಿ ಗೌಡ ಅವರು ಕಳೆದು ನಾಲ್ಕು ದಿನಗಳಿಂದ ಮನೆಯಲ್ಲಿ ಇಲ್ಲ. ನಾವು ಕಾಲೇಜಿನಿಂದ ಬಂದ ಮೇಲೆ ಕೀರ್ತಿ ಅವರು ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಚಿನ್ನಾಭರಣ ಏನೂ ಇಲ್ಲ ಎಂದು ದುನಿಯಾ ವಿಜಯ್ ಮಗಳು ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=YjxBslBdbNU&t=0s&index=2&list=PL96D6827AB409C8A9

  • ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ನಾಪತ್ತೆ!

    ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ನಾಪತ್ತೆ!

    ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ದುನಿಯಾ ವಿಜಿ ಅವರ ಹಲ್ಲೆ ಪ್ರಕರಣ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಎರಡನೇ ಪತ್ನಿ ಕೀರ್ತಿ ಗೌಡ ನಾಲ್ಕು ದಿನಗಳಿಂದ ಮನೆಯಲ್ಲಿ ಇಲ್ಲ. ಮನೆಯಲ್ಲಿದ್ದ ಹಣ, 1 ಲಕ್ಷ ಬೆಲೆ ಬಾಳುವ ಒಡವೆ ದೋಚಿ ಪರಾರಿಯಾಗಿದ್ದಾರೆ ಎಂದು ದುನಿಯಾ ವಿಜಯ್ ಕುಟುಂಬದ ಆಪ್ತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ಕೀರ್ತಿ ಕತ್ರಿಗುಪ್ಪಿಯಲ್ಲಿರುವ ಮನೆಗೆ ಬರುತ್ತಿಲ್ಲ. ಅಷ್ಟೇ ಅಲ್ಲದೇ ನಾಗರತ್ನ ಅವರು ಕೂಡ ನನಗೆ ನನ್ನ ಮಕ್ಕಳಿಗೆ ಜೀವ ಬೆದರಿಕೆ ಇದೆ ಎಂದು ಹೇಳುತ್ತಿದ್ದಾರೆ. ವಿಜಯ್ ಅವರ ಮಕ್ಕಳಾದ ಮೋನಿಕ ಹಾಗೂ ಇನ್ನಿಬ್ಬರು, ಕೀರ್ತಿ ಅವರು ನಮಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

    ಈ ಬಗ್ಗೆ ದುನಿಯಾ ವಿಜಿ ಮಗಳು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಕೀರ್ತಿಗೌಡ ಅವರು 4-5 ದಿನಗಳಿಂದ ಮನೆಯಲ್ಲಿ ಇಲ್ಲ. ಅವರು ಯಾವಾಗ ಹೋದರೋ ಗೊತ್ತಿಲ್ಲ. ನಾವು ಕಾಲೇಜಿಗೆ ಹೋಗಿದ್ದೇವು. ಮನೆಗೆ ಬಂದಾಗ ಮನೆಯಲ್ಲಿ ಅವರು ಮತ್ತು ಹಣ. ಒಡವೆ ಏನೂ ಇರಲಿಲ್ಲ. ನಿಮಗೆ ಎಷ್ಟು ವಿಷಯ ಗೊತ್ತಿದೆಯೋ ನನಗೂ ಅಷ್ಟೇ ಗೊತ್ತಿರುವುದು ಎಂದು ಸ್ಪಷ್ಟಪಡಿಸಿದ್ದಾರೆ.

    ಕೀರ್ತಿಗೌಡ ಸೋಮವಾರ ವಿಜಯ್ ಅವರನ್ನು ನೋಡಲು ಹೋಗಿದ್ದರು. ಈ ವೇಳೆ ಮಕ್ಕಳು ಶಾಲೆ-ಕಾಲೇಜಿಗೆ ಹೋಗಿರುತ್ತಾರೆ. ಶಾಲೆ, ಕಾಲೇಜು ಮುಗಿಸಿಕೊಂಡು ಬರುವಷ್ಟರಲ್ಲಿ ಕೀರ್ತೀಗೌಡ ಮನೆಯಲ್ಲಿ ಇರಲಿಲ್ಲ. ಜೀವ ಬೆದರಿಕೆಯಿಂದ ಇರುವುದಕ್ಕೆ ಭಯದಿಂದ ಎಲ್ಲಾದರೂ ಹೋಗಿರಬಹುದು ಅಥವಾ ವಿಜಿ ಅವರು ಇಲ್ಲದ ಕಾರಣ ಇವರ ಬಳಿ ಇರುವುದು ಬೇಡ ಎಂದು ಹೋಗಿರಬಹುದು, ವಿಜಯ್ ಅವರು ಬಂದ ಬಳಿಕ ಬರಬಹುದು ಎಂಬ ಮಾತುಗಳು ಕೇಳಿಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv