Tag: ಕಿರೀಟ

  • 2019ರ ಮಿಸ್ ಇಂಡಿಯಾ ಕಿರೀಟ ಗೆದ್ದ ರಾಜಸ್ಥಾನದ ಯುವತಿ

    2019ರ ಮಿಸ್ ಇಂಡಿಯಾ ಕಿರೀಟ ಗೆದ್ದ ರಾಜಸ್ಥಾನದ ಯುವತಿ

    ಮುಂಬೈ: ಫೆಮಿನಾ ಮಿಸ್ ಇಂಡಿಯಾ 2019 ಪ್ರಕಟವಾಗಿದ್ದು, ರಾಜಸ್ಥಾನ ಮೂಲದ ಸುಮನ್ ರಾವ್ ಮಿಸ್ ಇಂಡಿಯಾ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಶನಿವಾರ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯನ್ನು ಮುಂಬೈನ ಸರ್ದಾರ್ ವಲ್ಲಬಾ ಭಾಯ್ ಪಟೇಲ್ ಇಂಡೋರ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಸುಮನ್ ರಾವ್ ಮಿಸ್ ಇಂಡಿಯಾ ಕಿರೀಟವನ್ನು ಗೆದಿದ್ದಾರೆ. ಕಳೆದ ವರ್ಷ ವಿನ್ನರ್ ಆಗಿದ್ದ ಅನುಕೃತಿ ವಾಸ್, ಸುಮನ್ ಅವರಿಗೆ ಕಿರೀಟ ತೊಡಿಸಿದ್ದಾರೆ.

    ಶನಿವಾರ 8 ಗಂಟೆಗೆ ಶುರುವಾದ ಈ ಕಾರ್ಯಕ್ರಮದಲ್ಲಿ ಹಲವು ಬಾಲಿವುಡ್ ಕಲಾವಿದರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಕರಣ್ ಜೋಹರ್, ಮನೀಶ್ ಪಾಲ್ ಹಾಗೂ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ನಿರೂಪಣೆ ಮಾಡಿದ್ದರು. ಅಲ್ಲದೆ ಹುಮಾ ಖುರೇಶಿ, ಚಿತ್ರಾಂಗದ ಸಿಂಗ್, ರೆಮೋ ಡಿಸೋಜಾ, ಆಯೂಷ್ ಶರ್ಮಾ, ಮುಕೇಶ್ ಛಾಬ್ರಾ, ದಿಯಾ ಮಿರ್ಜಾ ಹಾಗೂ ನೇಹಾ ದುಪಿಯಾ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಒಟ್ಟು 30 ಸುಂದರಿಯರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಛತ್ತಿಸ್‍ಗಡದ ಶಿವಾನಿ ಜಾಧವ್ ಪಡೆದಿದ್ದಾರೆ. ಶಿವಾನಿ ಈ ವರ್ಷ ಗ್ರ್ಯಾಂಡ್ ಇಂಟರ್ ನ್ಯಾಶನಲ್‍ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮೂರನೇ ಸ್ಥಾನವನ್ನು ಬಿಹಾರ್ ಮೂಲದ ಶ್ರೇಯಾ ರಂಜನ್ ಪಡೆದಿದ್ದಾರೆ. ಶ್ರೇಯಾ ಈ ವರ್ಷ ಮಿಸ್ ಯನೈಟೆಡ್ ಕಾಂಟಿನೆಂಟ್ ಬ್ಯೂಟಿ ಕಂಟೆಸ್ಟ್ ನಲ್ಲಿ ಭಾಗವಹಿಸಲಿದ್ದಾರೆ. ತೆಲಂಗಾಣ ಮೂಲದ ಸಂಜನಾ ವಿಜ್ ಈ ಬಾರಿ ರನ್ನರ್ ಅಪ್ ಆಗಿದ್ದಾರೆ.

    ಮಿಸ್ ಇಂಡಿಯಾ 2019 ವಿಜೇತೆ ಸುಮನ್ ರಾವ್ ಡಿಸೆಂಬರ್ 7ರಂದು ಥೈಲ್ಯಾಂಡ್‍ನಲ್ಲಿ ಆಯೋಜಿಸಲಾಗಿರುವ ಮಿಸ್ ವರ್ಲ್ಡ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಿಸ್ ಇಂಡಿಯಾ ಫಿನಾಲೆಯಲ್ಲಿ ಟಾಪ್ ಫೈನಲಿಸ್ಟ್ ನಲ್ಲಿ ಯುಪಿಯ ಶಿನಂತಾ ಚೌಹಾನ್, ಛತ್ತಿಸ್‍ಗಡದ ಶಿವಾನಿ ಜಾದವ್, ಅಸ್ಸಾಂನ ಜ್ಯೋತಿಸ್ಮಿತಾ ಬರೂವಾ, ಬಿಹಾರದ ಶ್ರೇಯಾ ಶಂಕರ್, ತೆಲಂಗಾಣದ ಸಂಜನಾ ವಿಜ್ ಹಾಗೂ ರಾಜಸ್ಥಾನದ ಸುಮನ್ ರಾವ್ ಇದ್ದರು.

  • ಮಿಸ್ ಎಲಿಗೆಂಟ್ ಏಷ್ಯಾ ಆದ ಮಂಡ್ಯ ಹುಡ್ಗಿ- ಅರಬ್ ದೇಶದಲ್ಲಿ ರನ್ನರಪ್ ಕಿರೀಟ ತೊಟ್ಟ ಹಳ್ಳಿ ಕುವರಿ

    ಮಿಸ್ ಎಲಿಗೆಂಟ್ ಏಷ್ಯಾ ಆದ ಮಂಡ್ಯ ಹುಡ್ಗಿ- ಅರಬ್ ದೇಶದಲ್ಲಿ ರನ್ನರಪ್ ಕಿರೀಟ ತೊಟ್ಟ ಹಳ್ಳಿ ಕುವರಿ

    ಮಂಡ್ಯ: ಅರಬ್ ದೇಶದ ಓಮನ್ನಿನ ಮಸ್ಕತ್‍ನಲ್ಲಿ ನಡೆದ ಮಿಸ್ ಎಲಿಗೆಂಟ್ ಏಷ್ಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಂಡ್ಯದ ಹುಡುಗಿ ಸ್ನೇಹಗೌಡ ರನ್ನರಪ್ ಆಗಿ ಆಯ್ಕೆಯಾಗಿದ್ದಾರೆ. ವಿವಿಧ ದೇಶದ ಸ್ಪರ್ಧಿಗಳು ಪಾಲ್ಗೊಂಡಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ಸ್ನೇಹ ಅಂತಿಮವಾಗಿ ಮಿಸ್ ಎಲಿಗೆಂಟ್ ಏಷ್ಯಾದ ರನ್ನರಪ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

    ಇದೇ ತಿಂಗಳು 14ರಂದು ಅರಬ್ ದೇಶದ ಓಮಾನ್ನಿನ ಮಸ್ಕತ್ ನಲ್ಲಿ ಝಿ ಈವೆಂಟ್ ಆಯೋಜಿಸಿದ್ದ ಮಿಸ್ ಎಲಿಗೆಂಟ್ ಏಷ್ಯಾ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಮಂಡ್ಯ ಬೆಡಗಿ ಸ್ನೇಹಗೌಡ ರನ್ನರಪ್ ಆಗಿದ್ದಾರೆ. ವಿವಿಧ ದೇಶಗಳಿಂದ ಆಗಮಿಸಿದ್ದ ಒಟ್ಟು 12 ಜನರಲ್ಲಿ ಸ್ನೇಹ ಅಂತಿಮವಾಗಿ ರನ್ನರಪ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

    ಸುಮಾರು 2 ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸ್ನೇಹಗೌಡ ಮೈಸೂರಿನಲ್ಲಿ ನಡೆದ ಮಿಸ್ ಕರ್ನಾಟಕ, ಮಿಸ್ ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆದ ಮಿಸ್ ಇಂಡಿಯಾ ಎಲಿಗೆಂಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಸ್ನೇಹ ಮಿಸ್ ಎಲಿಗೆಂಟ್ ಏಷ್ಯಾ ಸ್ಪರ್ಧೆಯಲ್ಲಿ ರನ್ನರಪ್ ಆಗುತ್ತಿದ್ದಂತೆ ಮಂಡ್ಯದಲ್ಲಿ ಉತ್ತಮ ಬೆಂಬಲ ದೊರಕಿದೆ. ಮಂಡ್ಯದಂತಹ ಹಳ್ಳಿಯ ಹೆಣ್ಣು ಮಗಳು ದೂರದ ಅರಬ್ ದೇಶದ ಸೌಂದರ್ಯ ಸ್ಪರ್ಧೆಯನ್ನು ಗೆದ್ದಿರೋದು ಹೆಮ್ಮೆಯ ವಿಚಾರ ಎಂದು ಹೇಳುತ್ತಿದ್ದಾರೆ. ಇದರ ಜೊತೆಗೆ ಸ್ನೇಹ ಪೋಷಕರು ಕೂಡ ಮಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ನೇಹಾಗೆ ಸಿನಿಮಾ ರಂಗದಲ್ಲಿ ಒಳ್ಳೆಯ ಆಫರ್ ಗಳು ಬರುತ್ತಿದ್ದು, ಮಗಳ ಯಶಸ್ಸಿಗೆ ಸಹಕರಿಸುತ್ತೇವೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಬಲಿಗರಿಂದ ಸಚಿವರಿಗೆ ಬೆಳ್ಳಿ ಕಿರೀಟ- ಸಂತ್ರಸ್ತರ ನಿಧಿಗೆ ಹಣ ನೀಡಲೆಂದು ಯಶ್ ಮುಂದೆಯೇ ಹರಾಜು

    ಬೆಂಬಲಿಗರಿಂದ ಸಚಿವರಿಗೆ ಬೆಳ್ಳಿ ಕಿರೀಟ- ಸಂತ್ರಸ್ತರ ನಿಧಿಗೆ ಹಣ ನೀಡಲೆಂದು ಯಶ್ ಮುಂದೆಯೇ ಹರಾಜು

    ಮಂಡ್ಯ: ಬೆಂಬಲಿಗರು ಪ್ರೀತಿಯಿಂದ ನೀಡಿದ ಬೆಳ್ಳಿಯ ಕಿರೀಟವನ್ನು ರಾಕಿಂಗ್ ಸ್ಟಾರ್ ಯಶ್ ಸಮ್ಮುಖದಲ್ಲಿಯೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸಿ.ಎಸ್.ಪುಟ್ಟರಾಜು ಹರಾಜು ಹಾಕಿದ್ದು, ಹರಾಜಿನಿಂದ ಬಂದ ಹಣವನ್ನು ಕೊಡಗು ಸಂತ್ರಸ್ತರ ನಿಧಿಗೆ ದಾನ ಮಾಡುವುದಾಗಿ ತಿಳಿಸಿದ್ದಾರೆ.

    ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹುಲ್ಕೆರೆಕೊಪ್ಪಲು ಗ್ರಾಮದಲ್ಲಿ ಸಚಿವ ಪುಟ್ಟರಾಜು ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದ ಬೆಂಬಲಿಗರು, ಸಚಿವರಿಗೆ ಸನ್ಮಾನ ಮಾಡಿ ಬೆಳ್ಳಿ ಕಿರೀಟವನ್ನು ನೀಡಿದರು. ಬೆಳ್ಳಿ ಕಿರೀಟ ಸ್ವೀಕರಿಸಲು ನಿರಾಕರಿಸಿದ ಸಚಿವ ಪುಟ್ಟರಾಜು ನೀವು ಅಭಿನಂದಿಸಿ ನೀಡಿದ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೇನೆ. ಆದರೆ ಬೆಳ್ಳಿ ಕಿರೀಟವನ್ನು ಮಾತ್ರ ಹರಾಜು ಹಾಕಿ, ಆ ಹಣವನ್ನು ಕೊಡಗು ಸಂತ್ರಸ್ತರ ನಿಧಿಗೆ ನೀಡೋದಾಗಿ ತಿಳಿಸಿದರು.

    ಸುಮಾರು 35 ಸಾವಿರ ಮೌಲ್ಯದ ಬೆಳ್ಳಿ ಕಿರೀಟವನ್ನು ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು 58 ಸಾವಿರ ರೂಪಾಯಿಗಳಿಗೆ ಹಾರಾಜು ಕೂಗಿದರು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಯಶ್, ಸಚಿವ ಪುಟ್ಟರಾಜು ಅವರನ್ನು ಹಾಡಿಹೊಗಳಿದರು.

    ಪಾಂಡವಪುರ ತಾಲೂಕಿನ ಜನತೆ ಸಿ.ಎಸ್.ಪುಟ್ಟರಾಜು ಅವರನ್ನು ಸರಿಯಾದ ಸಮಯದಲ್ಲಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದೀರಾ. ನಿಮ್ಮಲ್ಲರ ಆಶೀರ್ವಾದದಿಂದ ಸಿ.ಎಸ್.ಪುಟ್ಟರಾಜು ರಾಜ್ಯದ ಸಣ್ಣ ನೀರಾವರಿ ಸಚಿವರಾಗಿದ್ದರೆ. ಅವರು ಕ್ಷೇತ್ರವನ್ನು ಅಭಿವೃದ್ಧಿಪಡಿಸಲಿದ್ದಾರೆ ಎಂದರು. ಪಾಂಡವಪುರ ಜನತೆ ನನ್ನ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಯಶ್ ಸಂತಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 900 ಅಡಿ ಕೊಳವೆ ಬಾವಿಯಲ್ಲಿ ಸಿಕ್ಕ ಕಿರೀಟದಿಂದ ನಿರಾಸೆ!

    900 ಅಡಿ ಕೊಳವೆ ಬಾವಿಯಲ್ಲಿ ಸಿಕ್ಕ ಕಿರೀಟದಿಂದ ನಿರಾಸೆ!

    ಕೋಲಾರ: ಎರಡು ದಿನದ ಹಿಂದೆ ಜಿಲ್ಲೆಯ ಮಾಲೂರು ತಾಲೂಕು ತೊತಹಳ್ಳಿ ಗ್ರಾಮದ ಕೊಳವೆ ಬಾವಿಯೊಂದರಲ್ಲಿ ನೀರು ಪರೀಕ್ಷೆ ವೇಳೆ 900 ಅಡಿ ಆಳದಲ್ಲಿ ದೇವರ ಕಿರೀಟವೊಂದು ಪತ್ತೆಯಾಗಿತ್ತು. ಆದರೆ ಅದರಿಂದ ಜನರಿಗೆ ಈಗ ನಿರಾಸೆಯಾಗಿದೆ.

    ತೊತಹಳ್ಳಿ ಗ್ರಾಮದ ಚಿಕ್ಕವೆಂಕಟರಮಣಪ್ಪ ಎಂಬವರ ಕೊಳವೆ ಬಾವಿಯಲ್ಲಿ ಪುರಾತನ ಕಿರೀಟ ಪತ್ತೆಯಾಗಿತ್ತು. ಒಂದು ವರ್ಷದಿಂದ ಕೆಟ್ಟು ಹೋಗಿದ್ದ ಕೊಳವೆ ಬಾವಿಯಲ್ಲಿ ನೀರಿಗಾಗಿ ಸ್ಕ್ಯಾನಿಂಗ್ ಮಷೀನ್ ಅಳವಡಿಸಿ ಪರೀಕ್ಷೆ ಮಾಡುವ ವೇಳೆ ಕಿರೀಟ ಪತ್ತೆಯಾಗಿದೆ. ಸ್ಕ್ಯಾನರ್ ನಲ್ಲಿ ದೇವರ ಕಿರೀಟ ಕಂಡ ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದು, ಪುರಾತನ ಚಿನ್ನದ ಕಿರೀಟ ಪತ್ತೆಯಾಗಿದೆ ಎಂದು ಸಾಕಷ್ಟು ಕುತೂಹಲ ಮೂಡಿಸಿತ್ತು.

    ಚಿಕ್ಕವೆಂಕಟರಮಣಪ್ಪ ಎರಡು ವರ್ಷದ ಹಿಂದೆ ಕೊಳವೆ ಬಾವಿಯನ್ನ 900 ಅಡಿ ಕೊರೆಸಿದ್ದರು. ಒಂದು ವರ್ಷದಿಂದ ನೀರಿಲ್ಲದ ಕಾರಣ ಕೊಳವೆ ಬಾವಿ ಬಂದ್ ಮಾಡಲಾಗಿತ್ತು. ಇತ್ತೀಚೆಗೆ ಜೋರು ಮಳೆ ಬಂದ ಹಿನ್ನೆಲೆ ರೀ ಬೋರ್ ಮಾಡಲು ರೈತ ಚಿಕ್ಕವೆಂಕರಮಣಪ್ಪ ಸ್ಕ್ಯಾನ್ ಮಾಡಲು ಮುಂದಾದಾಗ ಕಿರೀಟ ಕಾಣಿಸಿಕೊಂಡಿತ್ತು. ಕಿರೀಟ ನೋಡಿದವರಂತೂ ದೊಡ್ಡ ವಿಗ್ರಹ, ಅದರ ಮತ್ತಷ್ಟು ಭಾಗಗಳು ಒಳಗಡೆ ಮಣ್ಣಿನಲ್ಲಿ ಸೇರಿದೆ ಎಂದು ಮಾತಾಡಿಕೊಳ್ಳುತ್ತಿದ್ದರು. ಪೊಲೀಸರು ಬೋರ್ ವೆಲ್ ಬಳಿ ಬಂದೋಬಸ್ತ್ ಹಾಕಬೇಕಾಗುತ್ತೆ. ಮೇಲಕ್ಕೆ ಎತ್ತೋದು ಹೇಗೆ ಅನ್ನೋ ಲೆಕ್ಕಾಚಾರದಲ್ಲಿ ಇದ್ದರು.

    ಆದರೆ ಪತ್ತೆಯಾಗಿರುವ ಕಿರೀಟ ಚಿನ್ನದ್ದೋ ಅಥವಾ ನಕಲಿಯೋ ಎಂದು ತಿಳಿದು ಬಂದಿರಲಿಲ್ಲ. ಈ ಸಂದರ್ಭದಲ್ಲಿ ಸ್ಕ್ಯಾನಿಂಗ್ ಮಾಡುತ್ತಿದ್ದ ವೆಂಕಟೇಶ್ ಮೆಷೀನನ್ನು ಸ್ವಲ್ಪ ಒಳಗೆ ಬಿಟ್ಟು ಮೇಲೆತ್ತುತ್ತಿದ್ದಂತೆ ಅಲ್ಲಿದ್ದ ಕಿರೀಟ ಉಲ್ಟಾ ಹೊಡೆದಿದೆ. ಆಗ ಅದು ಸುವರ್ಣ ಲೇಪಿತ ಪಿಓಪಿಯ ಅಥವಾ ಫೈಬರ್ ನ  ಕಿರೀಟ ಎಂದು ತಿಳಿದು ಬಂದಿದೆ.

    ಇದರಿಂದ ಅಲ್ಲಿದ್ದ ಜನರಿಗೆ ನಿರಾಸೆ ಉಂಟಾಗಿದೆ ಎಂದು ಸ್ಥಳೀಯರಾದ ಮಂಜುನಾಥ್ ತಿಳಿಸಿದ್ದಾರೆ.

  • ಕೊಳವೆ ಬಾವಿಯ 900 ಅಡಿ ಆಳದಲ್ಲಿ ದೇವರ ಕಿರೀಟ ಪತ್ತೆ

    ಕೊಳವೆ ಬಾವಿಯ 900 ಅಡಿ ಆಳದಲ್ಲಿ ದೇವರ ಕಿರೀಟ ಪತ್ತೆ

    ಕೋಲಾರ: ಕೊಳವೆ ಬಾವಿ ಒಂದರಲ್ಲಿ ನೀರು ಪರೀಕ್ಷೆ ವೇಳೆ 900 ಅಡಿ ಆಳದಲ್ಲಿ ದೇವರ ಕಿರೀಟ ಪತ್ತೆಯಾಗಿರುವ ಅಪರೂಪದ ಘಟನೆ ಕೋಲಾರದಲ್ಲಿ ಎರಡು ದಿನದ ಹಿಂದೆ ನಡೆದಿದೆ.

    ಕೋಲಾರ ಜಿಲ್ಲೆ ಮಾಲೂರು ತಾಲೂಕು ತೊತಹಳ್ಳಿ ಗ್ರಾಮದ ಚಿಕ್ಕವೆಂಕಟರಮಣಪ್ಪ ಎಂಬವರ ಕೊಳವೆ ಬಾವಿಯಲ್ಲಿ ಈ ಪುರಾತನ ಕಿರೀಟ ಪತ್ತೆಯಾಗಿದೆ. ಒಂದು ವರ್ಷದಿಂದ ಕೆಟ್ಟು ಹೋಗಿದ್ದ ಕೊಳವೆ ಬಾವಿಯಲ್ಲಿ ನೀರಿಗಾಗಿ ಸ್ಕ್ಯಾನಿಂಗ್ ಅಳವಡಿಸಿ ಪರೀಕ್ಷೆ ಮಾಡುವ ವೇಳೆ ಈ ಕಿರೀಟ ಪತ್ತೆಯಾಗಿದೆ. ಸ್ಕ್ಯಾನರ್ ನಲ್ಲಿ ದೇವರ ಕಿರೀಟ ಕಂಡ ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದು, ಪುರಾತನ ಚಿನ್ನದ ಕಿರೀಟ ಪತ್ತೆಯಿಂದ ಸಾಕಷ್ಟು ಕುತೂಹಲ ಮೂಡಿದೆ.

    ಒಂದು ವರ್ಷದಿಂದ ನೀರಿಲ್ಲದ ಕಾರಣ ಕೊಳವೆ ಬಾವಿ ಬಂದ್ ಮಾಡಲಾಗಿತ್ತು. ಇತ್ತೀಚೆಗೆ ಜೋರು ಮಳೆ ಬಂದ ಹಿನ್ನೆಲೆ ರೀ ಬೋರ್ ಮಾಡಲು ರೈತ ಚಿಕ್ಕವೆಂಕರಮಣಪ್ಪ ಸ್ಕ್ಯಾನ್ ಮಾಡಲು ಮುಂದಾದಾಗ ಕಿರೀಟ ಕಾಣಿಸಿದೆ. ಆದರೆ ಪತ್ತೆಯಾಗಿರುವ  ಕಿರೀಟ  ಚಿನ್ನದೋ ಅಥವಾ ನಕಲಿ ಎಂದು ತಿಳಿದು ಬಂದಿಲ್ಲ.

  • ವಿಶ್ವಸುಂದರಿ ಮಾನುಷಿ ಚಿಲ್ಲರ್ ಮುಡಿಗೇರಿದ ಕಿರೀಟದ ಬೆಲೆ ಎಷ್ಟು ಗೊತ್ತಾ?

    ವಿಶ್ವಸುಂದರಿ ಮಾನುಷಿ ಚಿಲ್ಲರ್ ಮುಡಿಗೇರಿದ ಕಿರೀಟದ ಬೆಲೆ ಎಷ್ಟು ಗೊತ್ತಾ?

    ಬೆಂಗಳೂರು: ವಿಶ್ವ ಸುಂದರಿ ಆದರೆ ಸಾಕು ಎಲ್ಲರೂ ಅವರನ್ನೇ ನೋಡುತ್ತಾರೆ. ಅದರಲ್ಲೂ ಅವರು ಧರಿಸುವ ಕಿರೀಟದ ಮೇಲೆಯೇ ಪ್ರೇಕ್ಷಕರ ಕಣ್ಣು ಇರುತ್ತದೆ. ಸುಂದರಿಯರು ಧರಿಸುವ ಕೀರಿಟದ ಬೆಲೆ ಎಷ್ಟು? ಅದನ್ನು ಯಾವುದರಿಂದ ತಯಾರಿಸುತ್ತಾರೆ? ಹೇಗೆಲ್ಲಾ ವಿನ್ಯಾಸಗೊಳಿಸುತ್ತಾರೆ? ಎನ್ನುವ ಕುತೂಹಲಕಾರಿ ಪ್ರಶ್ನೆಗಳು ನಿಮಗೆ ಮೂಡುವುದು ಸಹಜ. ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಎನ್ನುವುಂತೆ ಕೆಲ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

    ಮಿಸ್ ವರ್ಲ್ಡ್:

    ಬರೋಬ್ಬರಿ 4.95 ಕೋಟಿ ರೂ. ಮೌಲ್ಯದ ಕಿರೀಟವನ್ನು ಮಾನುಷಿ ಚಿಲ್ಲರ್ ಮುಡಿಗೇರಿಸಿಕೊಂಡಿದ್ದಾರೆ. ವಿಶ್ವಸುಂದರಿಗೆ ತೊಡುವ ಕಿರೀಟಗಳನ್ನು ಚಿನ್ನ, ವಜ್ರ ಹಾಗೂ ಪ್ಲಾಟಿನಂ ನಿಂದ ವಿಶೇಷವಾಗಿ ತಯಾರಿಸಲಾಗುತ್ತದೆ.

    ಮಿಸ್ ಯೂನಿವರ್ಸ್:

    ಈ ಕಿರೀಟವನ್ನು ಝೆಕ್ ಜ್ಯುವೆಲರ್ ನವರು ವಿನ್ಯಾಸ ಮಾಡುತ್ತಾರೆ. ಇದರಲ್ಲಿ ನ್ಯೂಯಾರ್ಕ್ ಸ್ಕೈಲೈನ್ ಪ್ರತಿನಿಧಿಸುವಂತಹ ಉದ್ದನೆಯ ಕ್ರಿಸ್ಟಲ್ ಹರಳುಗಳನ್ನು ಕಿರೀಟದ ಡಿಸೈನ್‍ನೊಳಗೆ ಸೇರಿಸಲಾಗುತ್ತದೆ. ಸಫೈರ್‍ನೊಂದಿಗೆ ವಜ್ರ ಖಚಿತವಾಗಿರುತ್ತದೆ. ಇದರ ಮೌಲ್ಯ ರೂ.1.98 ಕೋಟಿ ರೂ.

    ಮಿಸ್ ಇಂಟರ್‍ನ್ಯಾಷನಲ್:

    ಇದು ನೋಡಲು ಸಿಂಪಲ್ ಆಗಿದ್ದು, ಸುಂದರವಾಗಿರುತ್ತದೆ. ಇದರಲ್ಲಿ ಶುದ್ಧ ಬೆಳ್ಳಿ ಹಾಗೂ ವಜ್ರದ ಹರಳು ಹಾಕಿ ವಿನ್ಯಾಸ ಮಾಡಲಾಗುತ್ತದೆ. ಇದರ ಮೌಲ್ಯ ರೂ.2.30 ಕೋಟಿ ರೂ.

    ಮಿಸ್ ಗ್ರ್ಯಾಂಡ್ ಇಂಟರ್‍ನ್ಯಾಷನಲ್:

    ಸಂಪೂರ್ಣವಾಗಿ ಬಂಗಾರದಿಂದ ಕಿರೀಟವನ್ನು ತಯಾರಿಸಲಾಗುತ್ತದೆ. ಇದು ನೋಡಲು ಯುದ್ಧದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಹಾಗೆ ಇರುತ್ತದೆ. ಇದರ ತಯಾರಿಕೆಗೆ ಹಾರ್ಟ್ ಶೇಪ್‍ನ ಜೇಡ್ ಜೆಮ್ ಸ್ಟೋನ್ ಬಳಸಲಾಗುತ್ತದೆ. ಜೊತೆಗೆ ಹೊಸ ಬ್ಯೂಟಿ ಪೇಜೆಂಟ್‍ನ ಕ್ರೌನ್ ಬಳಸಿ ಚಿನ್ನದಿಂದ ಮಾಡಲಾಗಿರುತ್ತದೆ. ಇದರ ಬೆಲೆ ರೂ.1.98 ಕೋಟಿ ರೂ.

    ಮಿಸ್ ಅರ್ಥ್:

    ಈ ಕಿರೀಟವನ್ನು ಸ್ಟೆರ್ಲಿಂಗ್ ಬೆಳ್ಳಿ ಮತ್ತು ಡೈಮಂಡ್‍ನಿಂದ ರೂಪಿಸಲಾಗುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಬೆಲೆ ಬಾಳುವ ರತ್ನಗಳನ್ನು ಕಿರೀಟದಲ್ಲಿ ಜೋಡಿಸಿರುತ್ತದೆ. ಇದರ ಮೌಲ್ಯ ರೂ. 3.55 ಕೋಟಿ ರೂ.