Tag: ಕಿಂಗ್ಸ್ ಇಲೆವೆನ್ ಪಂಜಾಬ್

  • ಪ್ರತಿ ಐಪಿಎಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಿ: ಪಂಜಾಬ್ ಮಾಲೀಕ ಮನವಿ

    ಪ್ರತಿ ಐಪಿಎಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಿ: ಪಂಜಾಬ್ ಮಾಲೀಕ ಮನವಿ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ರತಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುವಂತೆ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಬಿಸಿಸಿಐಗೆ ಮನವಿ ಮಾಡಿದ್ದಾರೆ.

    ಈ ವಿಚಾರವಾಗಿ ಬಿಸಿಸಿಐಗೆ ಪತ್ರ ಬರೆದಿರುವ ವಾಡಿಯಾ, ಐಪಿಎಲ್ ಟೂರ್ನಿಯ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿದಕ್ಕೆ ಬಿಸಿಸಿಐ ನಡೆಯನ್ನು ಶ್ಲಾಘಿಸಿದ್ದಾರೆ. ಈ ವೇಳೆ 2020 ರ ಐಪಿಎಲ್ ಆವೃತ್ತಿಯ ಪ್ರತಿ ಪಂದ್ಯಕ್ಕೂ ಮುನ್ನ ನಮ್ಮ ಹೆಮ್ಮೆಯ ರಾಷ್ಟ್ರಗೀತೆಯನ್ನು ಹಾಡಿಸಬೇಕು ಎಂದು ಬಿಸಿಸಿಐಗೆ ಒತ್ತಾಯ ಮಾಡಿದ್ದಾರೆ.

    ಸಾಮಾನ್ಯವಾಗಿ ಅಂತಾರಾಷ್ಟೀಯ ಮಟ್ಟದ ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುತ್ತಾರೆ. ಆದರೆ ಐಪಿಎಲ್ ಕೂಡ ವಿಶ್ವದ ನಂಬರ್ ಒನ್ ಕ್ರಿಕೆಟ್ ಲೀಗ್ ಆಗಿದೆ. ಆದ್ದರಿಂದ ಐಪಿಎಲ್ ಪ್ರತಿ ಪಂದ್ಯದ ಆರಂಭಕ್ಕೂ ಮುಂಚೆ ರಾಷ್ಟ್ರಗೀತೆ ಹಾಡಿಸಬೇಕು. ಉದ್ಘಾಟನಾ ಕಾರ್ಯಕ್ರಮವನ್ನು ರದ್ದು ಮಾಡಿದ್ದು ಅತ್ಯುತ್ತಮ ನಡೆ. ಸಮಾರಂಭಕ್ಕೆ ಅಪಾರ ಪ್ರಮಾಣದ ಹಣ ಖರ್ಚು ಮಾಡುವ ಬದಲು ಪಂದ್ಯ ಮತ್ತು ಕ್ರೀಡಾ ಕೂಟದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಬೇಕು ಎಂದು ವಾಡಿಯಾ ಹೇಳಿದ್ದಾರೆ.

    ನಾನು ಈ ವಿಚಾರವಾಗಿ ಈ ಮುಂಚೆಯೇ ಬಿಸಿಸಿಐಗೆ ಪತ್ರ ಬರೆದಿದ್ದೆ. ಆದರೆ ಈಗ ನೇರವಾಗಿ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಅವರಿಗೆ ಪತ್ರ ಬರೆದಿದ್ದೇನೆ. ರಾಷ್ಟ್ರಗೀತೆಯನ್ನು ನಮ್ಮ ದೇಶದಲ್ಲಿ ಇಂಡಿಯನ್ ಸೂಪರ್ ಲೀಗ್ (ಫುಟ್ಬಾಲ್) ಮತ್ತು ಪ್ರೊ-ಕಬ್ಬಡಿ ಲೀಗ್ ಪಂದ್ಯಗಳ ಆರಂಭಕ್ಕೂ ಮುನ್ನ ಹಾಡಿಸುತ್ತಾರೆ. ಹೊರ ದೇಶಗಳಲ್ಲೂ ಕೂಡ ಈ ವಿಧಾನ ಜಾರಿಯಲ್ಲಿದೆ. ಆದ್ದರಿಂದ ಐಪಿಎಲ್ ಲೀಗ್‍ನಲ್ಲೂ ಈ ವಿಧಾನ ಜಾರಿಗೆ ತರಬೇಕು ಎಂದು ವಾಡಿಯಾ ಮನವಿ ಮಾಡಿದ್ದಾರೆ.

    ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ನಂತರ ಭಾರತೀಯ ಕ್ರಿಕೆಟ್‍ನಲ್ಲಿ ಹಲವಾರು ಮಹತ್ವದ ಬದಲಾವಣೆಯನ್ನು ತರುತ್ತಿದ್ದಾರೆ. ಪ್ರತಿ ಐಪಿಎಲ್ ಆವೃತ್ತಿ ಆರಂಭದ ಸಮಯದಲ್ಲಿ ಉದ್ಘಾಟನಾ ಸಮಾರಂಭ ಆಯೋಜನೆ ಆಗುತಿತ್ತು. ಈ ಉದ್ಘಾಟನಾ ಸಮಾರಂಭಕ್ಕೆ ಸೌರವ್ ಗಂಗೂಲಿ ಬ್ರೇಕ್ ಹಾಕಿದ್ದಾರೆ. ಇಲ್ಲಿಯವರೆಗೆ ಬಿಸಿಸಿಐ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿರಲಿಲ್ಲ. ಗಂಗೂಲಿ ಅಧ್ಯಕ್ಷರಾದ ಬಳಿಕ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಒಪ್ಪಿಗೆ ಸಿಕ್ಕಿದೆ. ಮೊದಲ ಹಗಲು ರಾತ್ರಿ ಪಂದ್ಯ ಬಾಂಗ್ಲಾ ವಿರುದ್ಧ ನ.22 ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

  • ದೆಹಲಿಗೆ ಅಶ್ವಿನ್, ಕಿಂಗ್ಸ್​​ಗೆ ಕನ್ನಡಿಗ ರಾಹುಲ್ ಕ್ಯಾಪ್ಟನ್?

    ದೆಹಲಿಗೆ ಅಶ್ವಿನ್, ಕಿಂಗ್ಸ್​​ಗೆ ಕನ್ನಡಿಗ ರಾಹುಲ್ ಕ್ಯಾಪ್ಟನ್?

    ನವದೆಹಲಿ: 2020ರ ಐಪಿಎಲ್ ಆವೃತ್ತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕನಾಗುವ ಸಾಧ್ಯತೆಯಿದೆ.

    ಕಿಂಗ್ಸ್ ಇಲೆವೆಲ್ ಪಂಜಾಬ್ ತಂಡದ ಆಡಳಿತ ಮಂಡಳಿ, ಕಳೆದ ಆವೃತ್ತಿಯಲ್ಲಿ ಆರಂಭಿಕನಾಗಿ ಉತ್ತಮವಾಗಿ ಬ್ಯಾಟ್ ಬೀಸಿದ ಕೆ.ಎಲ್ ರಾಹುಲ್ ಅವರಿಗೆ ನಾಯಕ ಸ್ಥಾನವನ್ನು ನೀಡಲು ತೀರ್ಮಾನ ಮಾಡಿದೆ. ಕಳೆದ ವರ್ಷ ಪಂಜಾಬ್ ತಂಡದ ನಾಯಕನಾಗಿದ್ದ ಅಶ್ವಿನ್ ದೆಹಲಿ ತಂಡಕ್ಕೆ ಹೋಗಲಿದ್ದಾರೆ ಎಂದು ವರದಿಯಾಗಿದೆ.

    ದೆಹಲಿ ತಂಡ, ನಾಯಕ ಶ್ರೇಯಸ್ ಅಯ್ಯರ್, ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ಮಾರ್ಗದರ್ಶಕ ಸೌರವ್ ಗಂಗೂಲಿಯವರ ನೇತೃತ್ವದಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಆದರೆ ದೆಹಲಿ ತಂಡದಲ್ಲಿ ಅನುಭವಿ ಸ್ಪಿನ್ನರ್‍ ಗಳ ಕೊರತೆ ಇದ್ದು, ಆರ್ ಅಶ್ವಿನ್ ಅವರಿಗೆ ಅ ಸ್ಥಾನ ನೀಡಲು ದೆಹಲಿ ಕ್ಯಾಪಿಟಲ್ ತಂಡದ ಆಡಳಿತ ಮಂಡಳಿ ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.

    ಈಗ ಸದ್ಯ ದೆಹಲಿ ತಂಡದಲ್ಲಿ 36 ವರ್ಷದ ಸ್ಪಿನ್ನರ್ ಅಮಿತ್ ಮಿಶ್ರಾ ಇದ್ದು, ಅವರಿಂದ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ಕಂಡು ಬಂದಿಲ್ಲ. ಅದ್ದರಿಂದ ಭಾರತ ತಂಡದಲ್ಲಿ ಹೆಚ್ಚು ಅನುಭವ ಇರುವ ಆರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ತೀರ್ಮಾನವನ್ನು ದೆಹಲಿ ಕ್ಯಾಪಿಟಲ್ ಮಾಡಿದೆ. ಈ ಮೂಲಕ ಬೌಲಿಂಗ್ ವಿಭಾಗವನ್ನು ಬಲಪಡಿಸುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

    ಕಳೆದ ಎರಡು ಆವೃತ್ತಿಯಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ ಅಶ್ವಿನ್ ಅವರು, ತಂಡವನ್ನು ಫ್ಲೇ ಆಫ್ ಹಂತಕ್ಕೆ ಕರೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಬದಲಾವಣೆಯ ಯೋಜನೆ ಮಾಡಿರುವ ಪಂಜಾಬ್ ತಂಡ ಆರಂಭಿಕನಾಗಿ ಉತ್ತಮ ಪ್ರದರ್ಶನ ನೀಡಿರುವ ಯುವ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್‍ಗೆ ಅ ಸ್ಥಾನವನ್ನು ನೀಡಲು ಮುಂದಾಗಿದೆ ಎಂದು ಹೇಳಲಾಗಿದೆ.

    ಅಶ್ವಿನ್ ಐಪಿಎಲ್‍ನಲ್ಲಿ ಒಟ್ಟು 139 ಪಂದ್ಯಗಳನ್ನು ಆಡಿ 26.48 ಸರಾಸರಿಯಲ್ಲಿ 125 ವಿಕೆಟ್ ಪಡೆದಿದ್ದಾರೆ. 2018 ರಲ್ಲಿ ಚೆನ್ನೈ ತಂಡ ಇವರನ್ನು ಕೈಬಿಟ್ಟ ಮೇಲೆ ಪಂಜಾಬ್ 7.6 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಖರೀದಿ ಮಾಡಿ ನಾಯಕ ಸ್ಥಾನ ನೀಡಿತ್ತು. ಆದರೆ ತಂಡವನ್ನು ಮುನ್ನಡೆಸುವಲ್ಲಿ ವಿಫಲರಾದ ಅಶ್ವಿನ್ ಕೆಳದ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ ಕಿತ್ತು ಕೇವಲ 42 ರನ್ ಗಳಿಸಿದ್ದರು. ಈ ಮೂಲಕ ಪಂಜಾಬ್ ತಂಡ ಅಂಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿತ್ತು.

  • ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್‍ವಾಡಿಯಾಗೆ ಜೈಲು ಶಿಕ್ಷೆ

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್‍ವಾಡಿಯಾಗೆ ಜೈಲು ಶಿಕ್ಷೆ

    ನವದೆಹಲಿ: ಉದ್ಯಮಿ ಹಾಗೂ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕರಾಗಿರುವ ನೆಸ್ ವಾಡಿಯಾ ಅವರಿಗೆ ಜಪಾನ್ ಕೋರ್ಟ್ 2 ವರ್ಷ ಜೈಲಿ ಶಿಕ್ಷೆ ವಿಧಿಸಿದೆ.

    ನೆಸ್ ವಾಡಿಯಾ ಮಾದಕ ವಸ್ತು ಸಾಗಾಣೆ ಆರೋಪದಲ್ಲಿ ಮಾರ್ಚ್ ನಲ್ಲಿ ಉತ್ತರ ಜಪಾನಿನ ದ್ವೀಪದ ಹೊಕ್ಕೈಹೋಡ ಚಿಟೋಸ್ ವಿಮಾನ ನಿಲ್ದಾಣದಲ್ಲಿ ಬಂಧನವಾಗಿದ್ದರು. ಈ ಸಂದರ್ಭದಲ್ಲಿ ಅವರ ಜೇಬಿನಲ್ಲಿ ಸುಮಾರು 25 ಗ್ರಾಂ ಗಾಂಜಾ ಪತ್ತೆಯಾಗಿತ್ತು.

    ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ತಮ್ಮ ಬಳಿ ಇದ್ದ ಮಾದಕ ವಸ್ತು ವೈಯಕ್ತಿಕ ಬಳಕೆಗೆ ಎಂದು ವಾಡಿಯಾ ಹೇಳಿಕೆ ನೀಡಿದ್ದರು. ನಂತರ ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಸಪ್ಪೊರೊ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

    ವಾಡಿಯಾ ಸಂಸ್ಥೆ ಭಾರತ ಬಹುದೊಡ್ಡ ಉದ್ಯಮ ಸಂಸ್ಥೆಯಾಗಿದ್ದು, 47 ವರ್ಷದ ನೆಸ್ ವಾಡಿಯಾ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. 2014ರ ಜೂನ್ ಐಪಿಎಲ್ ಟೂರ್ನಿಯ ವೇಳೆ ಪ್ರೀತಿ ಜಿಂಟಾ ನೆಸ್ ವಾಡಿಯಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯದ ವೇಳೆ ತಮ್ಮ ಮೇಲೆ ವಾಡಿಯಾ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

    2020ರ ಟೋಕಿಯೋ ಒಲಂಪಿಕ್ಸ್ ಹಿನ್ನೆಲೆಯಲ್ಲಿ ಜಪಾನ್ ಮಾದಕ ವಸ್ತುಗಳ ಸಾಗಾಣೆ ಮಾಡುವವರ ವಿರುದ್ಧ ಕಠಿಣ ನಿಯಮಗಳನ್ನು ಜಾರಿ ಮಾಡಿದೆ.

  • ಬೌಂಡರಿ ಗೆರೆ ಬಳಿ ಅದ್ಭುತ ಕ್ಯಾಚ್ – ಇನ್‍ಗ್ರಾಮ್, ಅಕ್ಷರ್ ಮೋಡಿಗೆ ಗೇಲ್ ಔಟ್ : ವಿಡಿಯೋ

    ಬೌಂಡರಿ ಗೆರೆ ಬಳಿ ಅದ್ಭುತ ಕ್ಯಾಚ್ – ಇನ್‍ಗ್ರಾಮ್, ಅಕ್ಷರ್ ಮೋಡಿಗೆ ಗೇಲ್ ಔಟ್ : ವಿಡಿಯೋ

    – ನಿಯಮ ಬದಲಿಸಿ ಎಂದ ನೆಟ್ಟಿಗರು

    ನವದೆಹಲಿ: ಕಿಂಗ್ಸ್ ಇಲೆವನ್ ವಿರುದ್ಧದ ಪಂದ್ಯವನ್ನು ದೆಹಲಿ ತಂಡ ಕೊನೆಯ ಎರಡು ಎಸೆತ ಬಾಕಿ ಇರುವಾಗ ಗೆದ್ದುಕೊಂಡರೂ ಈ ಪಂದ್ಯದಲ್ಲಿ ಕಾಲಿನ್ ಇನ್‍ಗ್ರಾಮ್ ಕ್ಯಾಚ್ ಹಿಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

    ಸದ್ಯ ಸೂಪರ್ ಫಿಟ್ ಫೀಲ್ಡರ್ ಗಳ ಸಂಖ್ಯೆ ಸದ್ಯ ಹೆಚ್ಚಾಗುತ್ತಲೇ ಇದ್ದು, ಪಂಜಾಬ್ ವಿರುದ್ಧ ಪಂದ್ಯದಲ್ಲೂ ಕಾಲಿನ್ ಇನ್‍ಗ್ರಾಮ್ ಸೂಪರ್ ಕ್ಯಾಚ್ ಪಡೆದಿದ್ದಾರೆ. ಕಾಲಿನ್, ಅಕ್ಷರ್ ಇಬ್ಬರ ಜೋಡಿ ಕ್ಯಾಚ್ ಪಡೆಯುವಲ್ಲಿ ಮೋಡಿ ಮಾಡಿದ್ದು, ಪಂದ್ಯದ 12ನೇ ಓವರಿನ 2ನೇ ಎಸೆತದಲ್ಲಿ ಗೇಲ್ ಬೀಸಿದ ಸಿಕ್ಸರ್ ರನ್ನು ಬೌಂಡರಿ ಗೆರೆ ಬಳಿ ಕ್ಯಾಚ್ ಪಡೆದ ಇನ್‍ಗ್ರಾಮ್ ನಾನು ಬೌಂಡರಿ ಗೆರೆ ದಾಟುತ್ತಿದ್ದೇನೆ ಎಂದು ಅರಿವಾಗುತ್ತಿದಂತೆ ಅಲ್ಪ ದೂರದಲ್ಲಿದ್ದ ಅಕ್ಷರ್ ಗೆ ಬಾಲ್ ಪಾಸ್ ಮಾಡಿ ಕ್ಯಾಚ್ ಪೂರ್ಣಗೊಳಿಸುವಂತೆ ಮಾಡಿದ್ರು.

    ಅಕ್ಷರ್ ಕ್ಯಾಚ್ ಪೂರ್ಣಗೊಳಿಸಿದ ಪರಿಣಾಮ 37 ಎಸೆತಗಳಲ್ಲಿ 69 ರನ್ ಗಳಿಸಿ ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಗೇಲ್ ಪೆವಿಲಿಯನ್ ಸೇರಿದರು. ಅಲ್ಲದೇ ಕ್ಯಾಚ್ ಪಡೆಯುವ ವೇಳೆ ಇನ್‍ಗ್ರಾಮ್ ತೋರಿದ ಸಮಯ ಪ್ರಜ್ಞೆಯ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕ್ಯಾಚ್ ಪಡೆಯಲು ಇನ್‍ಗ್ರಾಮ್ ಶ್ರಮವಹಿಸಿದ್ದರೂ ಕೂಡ ನಿಯಮಗಳಂತೆ ಈ ಕ್ಯಾಚ್ ಅಕ್ಷರ್ ಪಟೇಲ್ ಖಾತೆಗೆ ಸೇರಿತ್ತು. ಈ ನಿಯಮಗಳ ಬಗ್ಗೆಯೂ ಹಲವರು ಪ್ರಶ್ನೆ ಮಾಡಿದ್ದು, ನಿಯಮಗಳ ಬದಲಾವಣೆ ಅಗತ್ಯ ಇದೆ ಎಂದಿದ್ದಾರೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ ಗಳಲ್ಲಿ 163 ರನ್ ಸಿಡಿಸಿದ ಪಂಜಾಬ್ ಡೆಲ್ಲಿಗೆ 164 ರನ್ ಗಳ ಗುರಿ ನೀಡಿತು. ಸವಾಲಿನ ಗುರಿ ಬೆನ್ನತ್ತಿದ ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ 19.4 ಓವರಿನಲ್ಲೇ ಗೆಲುವಿನ ರನ್ ಗಳಿಸಿ 5 ವಿಕೆಟ್ ಜಯ ಪಡೆಯಿತು. ಪಂದ್ಯಲ್ಲಿ ಧವನ್ 56 ರನ್ (41 ಎಸೆತ, 7 ಬೌಂಡರಿ, 1 ಸಿಕ್ಸರ್), ಶ್ರೇಯಸ್ 58 ರನ್ (49 ಎಸೆತ, 5 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮುಂಬೈ 2ನೇ ಸ್ಥಾನದಲ್ಲಿದ್ದರೆ, ಅಷ್ಟೇ ಅಂಕ ಪಡೆದಿರುವ ಡೆಲ್ಲಿ ಕಡಿಮೆ ರನ್ ರೇಟ್ ಕಾರಣದಿಂದ 3ನೇ ಸ್ಥಾನ ಪಡೆದುಕೊಂಡಿದೆ.

  • ರಾಹುಲ್‍ಗೆ ಮಹಿಳೆಯರೆಂದರೆ ಅಪಾರ ಗೌರವವಿದೆ: ಪ್ರೀತಿ ಜಿಂಟಾ

    ರಾಹುಲ್‍ಗೆ ಮಹಿಳೆಯರೆಂದರೆ ಅಪಾರ ಗೌರವವಿದೆ: ಪ್ರೀತಿ ಜಿಂಟಾ

    ನವದೆಹಲಿ: ಕೆಎಲ್ ರಾಹುಲ್ ಮಹಿಳೆಯರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ, ನಟಿ ಪ್ರೀತಿ ಜಿಂಟಾ ಹೇಳಿದ್ದಾರೆ.

    ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಕೆಎಲ್ ರಾಹುಲ್ ಹಾಗೂ ಪಾಂಡ್ಯ ಹಾಡಿದ ವಿವಾದಾತ್ಮಾಕ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಉತ್ತಮ ವ್ಯಕ್ತಿತ್ವವನ್ನು ಹೊಂದಿರುವ ಆಟಗಾರ. ಆದರೆ ಟಿವಿ ಶೋ ವಿವಾದ ಎಂಬುವುದು ಮುಗಿದ ಭಾಗವಾಗಿದೆ. ಆದರೆ ಇಂತಹ ಘಟನೆಗಳು ಜೀವನದಲ್ಲಿ ಸಾಕಷ್ಟು ಸಂಗತಿಗಳನ್ನು ಕಲಿಸುತ್ತವೆ ಎಂದಿದ್ದಾರೆ.

    ಇದೇ ವೇಳೆ ತಂಡದ ಒಡತಿಯಾಗಿ ಆರ್ಥಿಕತೆ ಕುರಿತು ಉತ್ತರಿಸಿದ ಜಿಂಟಾ, ಈಗಾಗಲೇ ನಾವು ಹೂಡಿಕೆ ಮಾಡಿರುವ ಹಣ ವಾಪಸ್ ಆಗಿದ್ದು, ಟೈಟಲ್ ಗೆಲುವು ಪಡೆಯುವುದು ಮಾತ್ರ ನಮ್ಮ ಗುರಿಯಾಗಿದೆ. ಟೂರ್ನಿಯಲ್ಲಿ ರಾಹುಲ್ ಫಾರ್ಮ್ ಗೆ ಮರಳಿರುವುದು ನಮಗೆ ಮತ್ತಷ್ಟು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

    ಟೂರ್ನಿಯಲ್ಲಿ ಆರ್ ಅಶ್ವಿನ್ ನಾಯಕತ್ವದಲ್ಲಿ ಕಣಕ್ಕೆ ಇಳಿದಿರುವ ಪಂಜಾಬ್ ಕ್ರಿಕೆಟ್ ತಂಡ ಇದುವರೆಗೂ ಆಡಿರುವ 4 ಪಂದ್ಯಗಳಲ್ಲಿ 3 ರಲ್ಲಿ ಗೆಲುವು ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. ಇಷ್ಟೇ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಹೈದರಾಬಾದ್ ಹಾಗೂ ಕೆಕೆಆರ್ ತಂಡದ ಮೊದಲ ಎರಡು ಸ್ಥಾನಗಳಲ್ಲಿವೆ.

  • ‘ಕರ್ಮ’ವನ್ನು ಅನುಭವಿಸಿದ ಅಶ್ವಿನ್ – ನೆಟ್ಟಿಗರಿಂದ ಟ್ರೋಲ್

    ‘ಕರ್ಮ’ವನ್ನು ಅನುಭವಿಸಿದ ಅಶ್ವಿನ್ – ನೆಟ್ಟಿಗರಿಂದ ಟ್ರೋಲ್

    ಕೋಲ್ಕತ್ತಾ: ಕೆಕೆಆರ್ ಪಂದ್ಯದಲ್ಲಿ ತಂಡದ ನಾಯಕನಾಗಿ ತಪ್ಪು ಫೀಲ್ಡ್ ಸೆಟ್ ಮಾಡಿದ್ದ ಕಿಂಗ್ಸ್ ಇಲೆವೆನ್ ಪಂಬಾಜ್ ತಂಡದ ನಾಯಕ ಆರ್ ಅಶ್ವಿನ್ ಅವರನ್ನ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

    ಹಿಂದಿನ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ‘ಮಂಕಡ್’ ರನೌಟ್ ಮಾಡಿ ಭಾರೀ ಚರ್ಚೆಗೆ ಕಾರಣರಾಗಿದ್ದ ಆರ್ ಅಶ್ವಿನ್, ಕ್ರಿಕೆಟ್ ನಿಯಮಗಳ ಅಡಿಯಲ್ಲೇ ರನೌಟ್ ಮಾಡಿದ್ದಾಗಿ ಸಮರ್ಥನೆ ನೀಡಿದ್ದರು. ಆದರೆ ಮರು ಪಂದ್ಯದಲ್ಲೇ ಅದೇ ನಿಯಮಗಳನ್ನು ಮರೆತು ಫೀಲ್ಡಿಂಗ್ ನಿರ್ವಹಿಸಿ ಟ್ರೋಲ್ ಆಗಿದ್ದಾರೆ.

    ಪಂದ್ಯದ 16.5 ಓವರಿನ ಎಸೆತದಲ್ಲಿ ಕೆಕೆಆರ್ ತಂಡ ರಸೆಲ್ ಔಟಾಗಿದ್ದರು. ಈ ವೇಳೆ ನಿಮಯಗಳ ಅನ್ವಯ ಇನ್ ಸೈಡ್ ಸರ್ಕಲ್ ನಲ್ಲಿ 4 ಆಟಗಾರರು ಕಡ್ಡಾಯವಾಗಿ ಫೀಲ್ಡಿಂಗ್ ಮಾಡಬೇಕಿತ್ತು. ಆದರೆ ಅಶ್ವಿನ್ 3 ಆಟಗಾರನ್ನು ಮಾತ್ರ ನಿಯೋಜಿಸಿದ್ದರು. ಪರಿಣಾಮ ರಸೆಲ್ ಕ್ಲೀನ್ ಬೌಲ್ಡ್ ಆಗಿದ್ದರೂ ಕೂಡ ಜೀವದಾನ ಪಡೆದರು.

    ಬಳಿಕ ಸ್ಫೋಟಕ ಆಟ ಪ್ರದರ್ಶಿಸಿದ ರಸೆಲ್ 19 ಎಸೆತಗಳಲ್ಲಿ 48 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಕೊನೆಯ ಓವರಿನಲ್ಲಿ ರಸೆಲ್ ಕ್ಯಾಚ್ ನೀಡಿ ಪೆವಿಲಿಯನ್‍ಗೆ ತೆರಳಿದರು. ಪಂದ್ಯದ ಬಳಿಕ ನಾಯಕನ ತಪ್ಪನ್ನೇ ಗುರಿ ಮಾಡಿ ಟ್ವೀಟ್ ಮಾಡಿರುವ ನೆಟ್ಟಿಗರು, ಅಶ್ವಿನ್ ‘ಕರ್ಮ’ವನ್ನು ಅನುಭವಿಸಿದ್ದಾರೆ ಎಂದು ಹೇಳಿ ಕಾಲೆಳೆಯುತ್ತಿದ್ದಾರೆ.

    https://twitter.com/Gowthaman_Rockz/status/1110953803245719553

  • ಪಾದಾರ್ಪಣೆ ಪಂದ್ಯದ ಮೊದಲ ಓವರಿನಲ್ಲೇ 25 ರನ್ ಕೊಟ್ಟ ಬೌಲರ್: ಯಾರು ಈ ‘ವರುಣ್ ಚಕ್ರವರ್ತಿ’?

    ಪಾದಾರ್ಪಣೆ ಪಂದ್ಯದ ಮೊದಲ ಓವರಿನಲ್ಲೇ 25 ರನ್ ಕೊಟ್ಟ ಬೌಲರ್: ಯಾರು ಈ ‘ವರುಣ್ ಚಕ್ರವರ್ತಿ’?

    ಕೋಲ್ಕತ್ತಾ: 2019ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಪಾದಾರ್ಪಣೆ ಮಾಡಿದ ವರುಣ್ ಚಕ್ರವರ್ತಿ ಮೊದಲ ಓವರಿನಲ್ಲೇ 25 ರನ್ ನೀಡಿ ದುಬಾರಿ ಬೌಲಿಂಗ್ ಮಾಡಿದ್ದಾರೆ.

    ವರುಣ್ ಐಪಿಎಲ್ ಟೂರ್ನಿಯ ಚೊಚ್ಚಲ ಪಂದ್ಯ ಇದಾಗಿದ್ದು, ಇನ್ನಿಂಗ್ಸ್ ನ 2ನೇ ಓವರ್ ಬೌಲ್ ಮಾಡಲು ಅವಕಾಶ ಪಡೆದಿದ್ದರು. ಸ್ಟ್ರೈಕ್ ನಲ್ಲಿದ್ದ ಕೆಕೆಆರ್ ತಂಡದ ಸುನೀಲ್   ನರೇನ್ ಭರ್ಜರಿ ಬೌಂಡರಿ, ಸಿಕ್ಸರ್ ಗಳೊಂದಿಗೆ 25 ರನ್ ಸಿಡಿಸಿದ್ದಾರೆ.

    27 ವರ್ಷದ ವರುಣ್ ಕರ್ನಾಟಕದ ಬೀದರ್ ನಲ್ಲಿ 1991 ರಲ್ಲಿ ಜನಿಸಿದ್ದು, ತಮಿಳುನಾಡಿನ ಪರ ಕ್ರಿಕೆಟ್ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ವರುಣ್ ರನ್ನು 8.4 ಕೋಟಿಗೆ ಕಿಂಗ್ಸ್ ಇಲೆವೆನ್ ಖರೀದಿ ಮಾಡಿತ್ತು.

    ತಮಿಳುನಾಡು ಟಿ20 ಲೀಡ್, ಟಿಎನ್‍ಪಿಎಲ್ ನಲ್ಲಿ ಉತ್ತಮ ಅವಕಾಶ ಪಡೆದಿದ್ದರು. ಒಟ್ಟು 7 ಪಂದ್ಯಗಳಲ್ಲಿ 31 ವಿಕೆಟ್ ಕಬಳಿಸಿದ್ದರು. ಟೂರ್ನಿಯಲ್ಲಿ 4 ಓವರ್ ಗಳಲ್ಲಿ 28 ರನ್ ಮಾತ್ರ ನೀಡಿದ್ದರು. ಅಲ್ಲದೇ ವಿಜಯ್ ಹಜಾರೆ ಟ್ರೋಫಿಯಲ್ಲೂ 22 ವಿಕೆಟ್ ಕಬಳಿಸಿದ್ದರು. ಐಪಿಎಲ್ ಆರಂಭ 1 ಓವರಿನಲ್ಲೇ 25 ರನ್ ನೀಡಿ ನಿರಾಸೆ ಅನುಭವಿಸಿದರು. ಆದರೆ ಇದೇ ಪಂದ್ಯದಲ್ಲಿ ಮತ್ತೆ ತಿರುಗೇಟು ನೀಡಿದ ವರುಣ್ ತಮ್ಮ 3ನೇ ಓವರಿನಲ್ಲಿ ಕೇವಲ 1 ರನ್ ನೀಡಿ ವಿಕೆಟ್ ಕಬಳಿಸಿ ತಿರುಗೇಟು ನೀಡಿದರು. ಅಂತಿಮವಾಗಿ 3 ಓವರ್ ಗಳಲ್ಲಿ 35 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.

  • ಐಪಿಎಲ್ ಅಚ್ಚರಿ: ಮಿಲಿಯನ್ ಡಾಲರ್ ಬೇಬಿ ವರುಣ್ ಚಕ್ರವರ್ತಿ!

    ಐಪಿಎಲ್ ಅಚ್ಚರಿ: ಮಿಲಿಯನ್ ಡಾಲರ್ ಬೇಬಿ ವರುಣ್ ಚಕ್ರವರ್ತಿ!

    ಜೈಪುರ: 2019ರ ಐಪಿಎಲ್ ಭಾರತೀಯ ಕ್ರಿಕೆಟರ್‍ಗಳ ಪಾಲಿನ ಅತ್ಯುತ್ತಮ ಅವಕಾಶಗಳನ್ನು ತೆರೆದಿಟ್ಟಿದೆ ಎಂದು ಕರೆಯಬಹುದಾಗಿದ್ದು, ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಹೆಚ್ಚು ಯುವ ಆಟಗಾರು ಕೋಟಿ ಕೋಟಿ ರೂ. ಮೊತ್ತಕ್ಕೆ ಹರಾಜು ಆಗುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

    ಐಪಿಎಲ್ ಅಚ್ಚರಿಯ ಸಾಲಿಗೆ ಸೇರಿದ ಮತ್ತೊಬ್ಬ ಯುವ ಆಟಗಾರ ವರುಣ್ ಚಕ್ರವರ್ತಿ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬರೋಬ್ಬರಿ 8.4 ಕೋಟಿ ರೂ.ಗೆ ಖರೀದಿ ಮಾಡಿದೆ. 27 ವರ್ಷದ ವರುಣ್ ತಮಿಳುನಾಡು ತಂಡದ ಆಟಗಾರರಾಗಿದ್ದು, ಕಳೆದ ವರ್ಷದ ವಿಜಯ್ ಹಜರೆ ಟ್ರೋಫಿ ಹಾಗೂ ಈ ವರ್ಷದ ತಮಿಳುನಾಡು ಪ್ರೀಮಿಯರ್ ಲೀಗ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿ ಸಂತಸ ವ್ಯಕ್ತಪಡಿಸಿರುವ ವರುಣ್ ಚಕ್ರವರ್ತಿ, ಪ್ರೀಮಿಯರ್ ಲೀಗ್ ಬಳಿಕ ನನಗೆ ಹೆಚ್ಚಿನ ಅವಕಾಶಗಳು ಲಭಿಸುವ ಬಗ್ಗೆ ಆತ್ಮವಿಶ್ವಾಸ ಇತ್ತು. ಆದರೆ ಪಂಜಾಬ್ ತಂಡ ಇಷ್ಟು ಮೊತ್ತಕ್ಕೆ ನನ್ನನ್ನು ಪಡೆದುಕೊಳ್ಳುತ್ತದೆ ಎಂಬುವುದನ್ನು ನಾನು ಊಹೆ ಕೂಡ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

    ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಬೌಲರ್ ಎಂದು ಗುರುತಿಸಿಕೊಂಡಿದ್ದ ವರುಣ್, 22 ವಿಕೆಟ್ ಪಡೆಯುವ ಮೂಲಕ 4.23 ಎಕಾನಮಿಯಲ್ಲಿ ಟೂರ್ನಿಯ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದರು. ಅಲ್ಲದೇ ವರುಣ್ 8 ಶೈಲಿಯಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

    ಸದ್ಯ ನಾನು ಐದು ಶೈಲಿಗಳನ್ನು ಮಾತ್ರ ಇದುವರೆಗೂ ಆಟದಲ್ಲಿ ಪ್ರಯೋಗ ಮಾಡಿದ್ದು, ಸ್ಟ್ರೈಟ್, ಇನ್ ಸ್ವಿಂಗ್, ಔಟ್ ಸ್ವಿಂಗ್, ಫ್ಲಿಪರ್, ಝೂಟರ್ ಶೈಲಿಗಳಲ್ಲಿ ಎಸೆದಿದ್ದೇನೆ. ಮತ್ತು ಕೆಲ ಬದಲಾವಣೆಗಳನ್ನು ನನ್ನ ಬೌಲಿಂಗ್‍ನಲ್ಲಿ ಕಾಣಬಹುದು. ಕಳೆದ 2 ವರ್ಷಗಳಲ್ಲಿ ನನ್ನ ಬೌಲಿಂಗ್‍ನಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಸಿಕ್ಕ ಎಲ್ಲಾ ಜವಾಬ್ದಾರಿಗಳನ್ನು ಸಾಮರ್ಥವಾಗಿ ನಿಭಾಯಿಸಿದ್ದಾಗಿ ವರುಣ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರ ನೆಟ್ ಬೌಲರ್ ಆಗಿಯೂ ವರುಣ್ ಕಾರ್ಯನಿರ್ವಹಿಸಿದ್ದರು. ಹರಾಜು ಪ್ರಕ್ರಿಯೆ ವೇಳೆ ಇತ್ತಂಡಗಳು ಪಂಜಾಬ್ ತಂಡಕ್ಕೆ ಪೈಪೋಟಿ ನೀಡಿದ ಕಾರಣ ವರುಣ್ ಕೋಟಿ ಕೋಟಿ ರೂ. ಹಣಗಳಿಸಲು ಕಾರಣವಾಯಿತು.

    ಆರ್ ಅಶ್ವಿನ್ ಮುಂದಾಳತ್ವದ ಪಂಜಾಬ್ ಅಂತಿಮವಾಗಿ ವರುಣ್‍ರನ್ನು ಪಡೆಯಲು ಸಫಲವಾಯಿತು. 1991 ರಲ್ಲಿ ಜನಿಸಿರುವ ವರುಣ್ 9 ಲಿಸ್ಟ್ `ಎ’ ಪಂದ್ಯಗಳನ್ನು ಆಡಿದ್ದು, 22 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಏಕೈಕ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದಾರೆ. ಅಂದಹಾಗೇ ಈ ಬಾರಿ ಪಂಜಾಬ್ ಪರ ದುಬಾರಿ ಪ್ಲೇಯರ್ ಕೂಡ ಆಗಿದ್ದಾರೆ.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲಿವುಡ್ ನಟಿಯೊಂದಿಗೆ ಕಾಣಿಸಿಕೊಂಡ ಕ್ರಿಕೆಟಿಗ ಕೆಎಲ್ ರಾಹುಲ್

    ಬಾಲಿವುಡ್ ನಟಿಯೊಂದಿಗೆ ಕಾಣಿಸಿಕೊಂಡ ಕ್ರಿಕೆಟಿಗ ಕೆಎಲ್ ರಾಹುಲ್

    ಮುಂಬೈ: ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್, ಬಾಲಿವುಟ್ ನಟಿ ನಿಧಿ ಅಗರ್‍ವಾಲ್ ಅವರೊಂದಿಗೆ ಮುಂಬೈನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.instagram.com/p/BjY127NAXBE/?utm_source=ig_embed

    ಕೆಎಲ್ ರಾಹುಲ್ ಅವರ ಅಭಿಮಾನಿ ಬಳಗದ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನನ್ನು ಪೋಸ್ಟ್ ಮಾಡಲಾಗಿದೆ. ಬೆಂಗಳೂರಿನ ಹುಡುಗಿ ಮಾಡೆಲ್ ಕಮ್ ನಟಿ ನಿಧಿ ಅಗರ್ ವಾಲ್ ಬಾಲಿವುಡ್ ನ `ಮುನ್ನ ಮೈಕೆಲ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ರಾಹುಲ್ ಪಂಜಾಬ್ ತಂಡದ ಪರ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದರು. ಸದ್ಯ ಜೂನ್ 14 ರಂದು ಬೆಂಗಳೂರಿನಲ್ಲಿ ನಡೆಯುವ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಭಾಗವಹಿಸಲಿದ್ದಾರೆ.

    https://www.instagram.com/p/BjZ2T-YgW_3/?utm_source=ig_embed

    ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 54.91 ಸರಾಸರಿಯಲ್ಲಿ 14 ಪಂದ್ಯಗಳಿಂದ 659 ರನ್ ಗಳಿಸಿ ರಾಹುಲ್ ಟೂರ್ನಿಯ ಟಾಪ್ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಟೂರ್ನಿಯ ಆರಂಭಿಕ ಪಂದ್ಯದಲ್ಲೇ ರಾಹುಲ್ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಟೂರ್ನಿಯ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ರಾಹುಲ್ ಟೂರ್ನಿಯ ಅತ್ಯಂತ ರೋಚಕ ಕ್ಷಣ ತನ್ನದಾಗಿತ್ತು. ತನಗೆ ಈ ಕುರಿತು ಹೆಮ್ಮೆ ಇದೆ. ಟೂರ್ನಿಯಲ್ಲಿ ಭಾಗವಹಿಸಿದ ಕಾರಣ ಹಲವು ಸ್ನೇಹಿತರು ದೊರೆತಿದ್ದಾರೆ. ಅಲ್ಲದೇ ಇನ್ನೂ ಸಾಕಷ್ಟು ಕಲಿಯುವುದು ಬಾಕಿ ಇದೆ ಎಂದು ತಿಳಿಸಿದ್ದರು.

    https://www.instagram.com/p/BjZxMiNBl9d/?utm_source=ig_embed

  • ಪರ್ಪಲ್ ಕ್ಯಾಪ್ ವಿನ್ನರ್ ಒಂದು ವಿಕೆಟ್‍ಗೆ ಪಡೆದ ಹಣವೆಷ್ಟು ಗೊತ್ತೆ?

    ಪರ್ಪಲ್ ಕ್ಯಾಪ್ ವಿನ್ನರ್ ಒಂದು ವಿಕೆಟ್‍ಗೆ ಪಡೆದ ಹಣವೆಷ್ಟು ಗೊತ್ತೆ?

    ಮುಂಬೈ: 2018 ಐಪಿಎಲ್ ಪರ್ಪಲ್ ಕ್ಯಾಪ್ ವಿನ್ನರ್ ಪಂಜಾಬ್ ತಂಡದ ಆಸೀಸ್ ಆಟಗಾರ ಅಂಡ್ರ್ಯೂ ಟೈ ಒಂದು ವಿಕೆಟ್ ಗೆ 30 ಲಕ್ಷ ರೂ. ಪಡೆದಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜಿನ ವೇಳೆ ಟೈ ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ 7.2 ಕೋಟಿ ನೀಡಿ ಖರೀದಿಸಿತ್ತು. 31 ವರ್ಷದ ಆಸೀಸ್ ಆಟಗಾರ ಟೈ ಟೂರ್ನಿಯಲ್ಲಿ 14 ಪಂದ್ಯಗಳಿಂದ 24 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರತಿ ವಿಕೆಟ್ ಗೆ 30 ಲಕ್ಷ ರೂ. ನೀಡಿದಂತಾಗಿದೆ.

    ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಹೊರ ಹೊಮ್ಮಿರುವ ಟೈ ಐಪಿಎಲ್ ನಲ್ಲಿ ಪರ್ಪಲ್ ಕ್ಯಾಪ್ ಪಡೆದ ಮೊದಲ ಆಸೀಸ್ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಒಟ್ಟಾರೆ ಟೂರ್ನಿಯಲ್ಲಿ ಟೈ 56 ಓವರ್ ಬೌಲಿಂಗ್ ಮಾಡಿದ್ದು, 18.66 ಸರಾಸರಿಯಲ್ಲಿ 24 ವಿಕೆಟ್ ಪಡೆದಿದ್ದಾರೆ.

    ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ರಶೀದ್ ಖಾನ್, ಸಿದ್ದಾರ್ಥ್ ಕೌಲ್, ಉಮೇಶ್ ಯಾದವ್, ಬೌಲ್ಟ್ ಕ್ರಮವಾಗಿ 21, 21, 20, 18 ವಿಕೆಟ್ ಪಡೆಯುವ ಮೂಲಕ ಟಾಪ್ 5ರ ಒಳಗಡೆ ಸ್ಥಾನ ಪಡೆದಿದ್ದಾರೆ.

    ಯಾರಿಗೆ ಯಾವ ಪ್ರಶಸ್ತಿ:
    ಟೂರ್ನಿಯ ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಶೇನ್ ವಾಟ್ಸನ್ ಗೆ ಸಿಕ್ಕಿದರೆ ಸನ್ ರೈಸರ್ಸ್ ಹೈದರಾಬಾದ್ ನ ಕೇನ್ ವಿಲಿಯಮ್ಸ್ ಗೆ ಆರೆಂಜ್ ಕ್ಯಾಪ್ ಸಿಕ್ಕಿದೆ.

    ಉದಯೋನ್ಮುಖ ಆಟಗಾರ ಹಾಗೂ ಸ್ಟೈಲಿಶ್ ಆಟಗಾರ ಪ್ರಶಸ್ತಿಗಳನ್ನು ಡೆಲ್ಲಿ ತಂಡದ ರಿಷಬ್ ಪಂತ್ ಪಡೆದುಕೊಂಡರೆ, ಉತ್ತಮ ಕ್ಯಾಚ್ ಪ್ರಶಸ್ತಿ ಟ್ರೇನ್ಟ್ ಬೌಲ್ಟ್ ಗೆ ಸಿಕ್ಕಿದೆ. ಸೂಪರ್ ಸ್ಟ್ರೈಕರ್ ಮತ್ತು ಮೌಲ್ಯಯುತ ಆಟಗಾರ ಪ್ರಶಸ್ತಿ ಕೋಲ್ಕತ್ತಾದ ಸುನೀಲ್ ನರೇನ್ ಹಾಗೂ ಫೇರ್ ಪ್ಲೇ ಪ್ರಶಸ್ತಿಯನ್ನು ಮುಂಬೈ ತಂಡ ಪಡೆದುಕೊಂಡಿದೆ.