Tag: ಕಾವ್ಯಾ ಶಾಸ್ತ್ರಿ

  • ವಿಲನ್ ಆಗಿ ಮತ್ತೆ ಕಿರುತೆರೆಗೆ ಕಾವ್ಯಾ ಶಾಸ್ತ್ರಿ ಎಂಟ್ರಿ

    ವಿಲನ್ ಆಗಿ ಮತ್ತೆ ಕಿರುತೆರೆಗೆ ಕಾವ್ಯಾ ಶಾಸ್ತ್ರಿ ಎಂಟ್ರಿ

    ‘ಬಿಗ್ ಬಾಸ್’ ಖ್ಯಾತಿಯ ಕಾವ್ಯಾ ಶಾಸ್ತ್ರಿ (Kavya Shastry) ಮತ್ತೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ರಾಧಿಕಾ ಸೀರಿಯಲ್‌ಗೆ ಗುಡ್ ಬೈ ಹೇಳಿದ ಬಳಿಕ ಈಗ ಮತ್ತೆ ‘ಜಾನಕಿ ಸಂಸಾರ’ (Janaki Samsara) ಎಂಬ ಸೀರಿಯಲ್ ಮೂಲಕ ಬರಲಿದ್ದಾರೆ. ಹೀರೋಯಿನ್ ಆಗಿ ಮಿಂಚಿದ್ದ ನಟಿ ಈಗ ವಿಲನ್ ಆಗಿ ಅಬ್ಬರಿಸಲಿದ್ದಾರೆ.

    ‘ಕೃಷ್ಣ ರುಕ್ಮಿಣಿ’ ಖ್ಯಾತಿಯ ನಟಿ ಅಂಜನಾ ಶ್ರೀನಿವಾಸ್ ನಟನೆಯ ‘ಜಾನಕಿ ಸಂಸಾರ’ಕ್ಕೆ ಕಾವ್ಯಾ ಕಾಲಿಟ್ಟಿದ್ದಾರೆ. ಸಾಕಷ್ಟು ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದ್ದ ಕಾವ್ಯಾ ಈಗ ವಿಲನ್ ಆಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದನ್ನೂ ಓದಿ:ಬಂಪರ್ ಆಫರ್ ಬಾಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ವಿನಯ್ ಗೌಡ

    ಕಾವ್ಯಾ ಶಾಸ್ತ್ರಿ ಅದ್ಭುತ ನಟಿ ಎಂಬುದರಲ್ಲಿ ಮಾತಿಲ್ಲ. ಹಲವು ವರ್ಷಗಳಿಂದ ಚಿತ್ರರಂಗಲ್ಲಿ ನಿರೂಪಕಿ, ನಟಿಯಾಗಿ ಪಳಗಿದ್ದಾರೆ. ವಿಲನ್ ಆಗಿ ಬರುತ್ತಿರುವ ಕಾವ್ಯಾರನ್ನು ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಅಂದಹಾಗೆ, ಮೇ 6ರಂದು 8 ಗಂಟೆಗೆ ಜಾನಕಿ ಸಂಸಾರ ಪ್ರಸಾರವಾಗಲಿದೆ.

    ಈ ಹಿಂದೆ ಶುಭವಿವಾಹ, ಬಿಗ್ ಬಾಸ್ ಸೀಸನ್- 4 (Bigg Boss Kannada 4) ಸೇರಿದಂತೆ ಹಲವು ಸೀರಿಯಲ್, ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ಕಾವ್ಯಾ ಶಾಸ್ತ್ರಿ ಕಳೆದ ವರ್ಷ ರಾಧಿಕಾ ಸೀರಿಯಲ್‌ಗೆ ಕಾರಣಾಂತರಗಳಿಂದ ಅರ್ಧಕ್ಕೆ ಕೈಬಿಟ್ಟಿದ್ದಾರೆ.

  • ಪ್ರೊಡಕ್ಷನ್ ಹೌಸ್ ದುಡಿಸಿಕೊಳ್ಳುತ್ತಿದ್ದ ರೀತಿಗೆ ‘ರಾಧಿಕಾ’ ಸೀರಿಯಲ್‌ ಬಿಟ್ಟೆ- ನಟಿ ಕಾವ್ಯಾ ಶಾಸ್ತ್ರಿ

    ಪ್ರೊಡಕ್ಷನ್ ಹೌಸ್ ದುಡಿಸಿಕೊಳ್ಳುತ್ತಿದ್ದ ರೀತಿಗೆ ‘ರಾಧಿಕಾ’ ಸೀರಿಯಲ್‌ ಬಿಟ್ಟೆ- ನಟಿ ಕಾವ್ಯಾ ಶಾಸ್ತ್ರಿ

    ಟಿ ಕಾವ್ಯಾ ಶಾಸ್ತ್ರಿ (Kavya Shastry) ಅವರು ರಾಧಿಕಾ (Radhika) ಸೀರಿಯಲ್‌ನಿಂದ ಹೊರಬಂದಿದ್ದು ಯಾಕೆ ಎಂಬ ಪ್ರಶ್ನೆ ಇದೀಗ ಉತ್ತರ ನೀಡಿದ್ದಾರೆ. ಸೀರಿಯಲ್, ಸಿನಿಮಾ, ರಿಯಾಲಿಟಿ ಶೋ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸಿದ ಕಾವ್ಯಾ ಶಾಸ್ತ್ರಿ ಅವರು ರಾಧಿಕಾ ಸೀರಿಯಲ್ ಅರ್ಧಕ್ಕೆ ಕೈ ಬಿಟ್ಟಿದ್ಯಾಕೆ ಎಂದು ಮೌನ ಮುರಿದ್ದಾರೆ.

     

    View this post on Instagram

     

    A post shared by Kaavya Shastry (@kaavya.shastry)

    ‘ರಾಧಿಕಾ’ ಧಾರಾವಾಹಿಯ ಮುಖ್ಯಪಾತ್ರಧಾರಿ ರಾಧಿಕಾ ಆಗಿ ಕಾವ್ಯಾ ಶಾಸ್ತ್ರಿ ನಟಿಸುತ್ತಿದ್ದರು. 400 ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿದ್ದರು. ನರ್ಸ್ ಪಾತ್ರಕ್ಕೆ ಕಾವ್ಯ ಜೀವತುಂಬಿದ್ದರು. ಸಡನ್ ಆಗಿ ಈ ಸೀರಿಯಲ್ ಕೈಬಿಟ್ಟಿದ್ಯಾಕೆ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡಿತ್ತು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನಟಿ ರಿಯಾಕ್ಟ್ ಮಾಡಿದ್ದಾರೆ.

     

    View this post on Instagram

     

    A post shared by Prashanth Agari (@agari_photo_studio)

    ನನಗೆ ‘ರಾಧಿಕಾ’ ಸೀರಿಯಲ್‌ನ ಬಿಟ್ಟೆ ಅಂತ ಅನೇಕರು ಕೇಳುತ್ತಿದ್ದಾರೆ. ಇದು ವಾಹಿನಿ, ಪ್ರೊಡಕ್ಷನ್ ಹೌಸ್, ನಾನು ಸೇರಿ ತೆಗೆದುಕೊಂಡ ನಿರ್ಧಾರವಿದು. ಎಲ್ಲೋ ಒಂದು ಕಡೆ ಪ್ರೊಡಕ್ಷನ್ ಹೌಸ್ ದುಡಿಸಿಕೊಳ್ಳುತ್ತಿದ್ದ ರೀತಿ, ಚಾನೆಲ್, ಪ್ರೊಡಕ್ಷನ್ ಹೌಸ್, ಕಲಾವಿದರ ನಡುವಿನ ಸಾಮರಸ್ಯದಲ್ಲಿ ಒಂದಷ್ಟು ತಕರಾರು ಇತ್ತು. ಎಲ್ಲ ಸೇರಿ ಈ ಪಾತ್ರಕ್ಕೆ ನನ್ನ ಅಗತ್ಯತೆ ಮುಗಿದಿದೆ. ರಾಧಿಕಾ ಪಾತ್ರಕ್ಕೆ ಮುಂದೆ ಬರುವವರು ಸಮರ್ಥವಾಗಿ ನಟಿಸ್ತಾರೆ ಅಂತ ನಮ್ಮೆಲ್ಲರಿಗೂ ಅನಿಸಿತು. ಹಾಗಾಗಿ ನಾನು ಧಾರಾವಾಹಿ ಬಿಟ್ಟೆ. ಇರಲಿ ಇನ್ನೊಂದು ಪಾತ್ರ, 20 ವರ್ಷಗಳಿಂದ ನೀವು ನನ್ನನ್ನು ನೋಡುತ್ತಿದ್ದೀರಿ, ಇನ್ಮುಂದೆಯೂ ನೋಡ್ತೀರಿ ಎಂದು ಅಭಿಮಾನಿಗಳ ಪ್ರಶ್ನೆಗೆ ನಟಿ ಕಾವ್ಯಾ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ವೀಕೆಂಡ್ ವಿತ್ ರಮೇಶ್ ಮುಕ್ತಾಯ : ಡಿಕೆಶಿ ಎಪಿಸೋಡ್ ಲಾಸ್ಟ್

     

    View this post on Instagram

     

    A post shared by Kaavya Shastry (@kaavya.shastry)

    ಒಮ್ಮೊಮ್ಮೆ ಕಲಾವಿದರಿಗೆ ರೂಮ್, ಬಾತ್‌ರೂಮ್ ವ್ಯವಸ್ಥೆ ಇರೋದಿಲ್ಲ. ನಿತ್ಯ ಮೂರು ಕ್ಯಾಮೆರಾ ಇಟ್ಟುಕೊಂಡು ಶೂಟಿಂಗ್ ಮಾಡೋದು ತುಂಬ ಕಷ್ಟ ಆಗತ್ತೆ. ಕಲಾವಿದರು ಈ ರೀತಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಹೀರೋಯಿನ್‌ಗಳನ್ನು ಬದಲಾಯಿಸಿದರೆ, ಟಿಆರ್‌ಪಿ ಚೆನ್ನಾಗಿ ಬರುತ್ತದೆ ಅಂತ ಕೆಲವರು ಅಂದುಕೊಂಡಿರುತ್ತಾರೆ. ನಮ್ಮ ಸಮಸ್ಯೆಗಳನ್ನು ಕೇಳದೆ ಪ್ರೊಡಕ್ಷನ್ ಹೌಸ್, ವಾಹಿನಿಯವರು ಕಲಾವಿದರನ್ನು ಕೈಬಿಡುವ ನಿರ್ಧಾರಕ್ಕೆ ಬಂದಿರುತ್ತಾರೆ ಎಂದು ನಟಿ ಮಾತನಾಡಿದ್ದಾರೆ.

    ಈ ಧಾರಾವಾಹಿಯಲ್ಲಿಯೂ ಕೂಡ ನನ್ನ ಸಮಸ್ಯೆಯನ್ನು ಯಾರೂ ಕೇಳಲಿಲ್ಲ. ನನಗೆ ಒಂದು ಮಾತು ಹೇಳದೆ ನನ್ನ ಪಾತ್ರಕ್ಕೆ ಬೇರೆ ಕಡೆ ಆಡಿಷನ್ ಮಾಡುತ್ತಿರೋದು ನನಗೆ ತಿಳಿಯಿತು. ಅದನ್ನು ನೋಡಿ ನನಗೆ ಅವಮಾನ ಆಯ್ತು. ಹಾಗಾಗಿ ‘ರಾಧಿಕಾ’ ಸೀರಿಯಲ್‌ನಿಂದ ಹೊರ ಬಂದೆ ಎಂದಿದ್ದಾರೆ.