Tag: ಕಾಳಾ ಕರಿಕಾಳನ್

  • ರಜಿನಿಕಾಂತ್ ನಟನೆಯ ಕಾಳಾ ಸಿನಿಮಾಗೆ ಕರುನಾಡಲ್ಲಿ ನಿಷೇಧ

    ರಜಿನಿಕಾಂತ್ ನಟನೆಯ ಕಾಳಾ ಸಿನಿಮಾಗೆ ಕರುನಾಡಲ್ಲಿ ನಿಷೇಧ

    ಬೆಂಗಳೂರು: ಕಾವೇರಿ ವಿಚಾರದಲ್ಲಿ ರಜಿನಿಕಾಂತ್ ಪದೇ ಪದೇ ಕನ್ನಡಿಗರ ವಿರುದ್ಧ ಮಾತನಾಡಿ ಕನ್ನಡಿಗರ ಮುನಿಸಿಗೆ ಕಾರಣರಾಗಿದ್ದಾರೆ. ಇದರಿಂದ ಜೂನ್ 7ರಂದು ಬಿಡುಗಡೆಗೊಳ್ಳುವ ಅವರ ಅಭಿನಯದ ತಮಿಳಿನ ‘ಕಾಳಾ ಕರಿಕಾಳನ್’ ಚಿತ್ರಕ್ಕೆ ನಿರ್ಬಂಧ ಹೇರುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಮೂಲತಃ ಕನ್ನಡಿಗರಾಗಿರುವ ನಟ ರಜಿನಿಕಾಂತ ವರು ತಮಿಳುನಾಡಿನಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದು ಕನ್ನಡಿಗರ ಹೆಮ್ಮೆಗೆ ಕಾರಣವಾಗಿತ್ತು. ಆದರೆ ಅವರು ಕಾವೇರಿ ವಿಚಾರದಲ್ಲಿ ಕನ್ನಡಿಗರ ವಿರುದ್ಧವಾಗಿ ಹೇಳಿಕೆ ನೀಡಿ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕರ್ನಾಟಕಕ್ಕೆ ಮಾರಕವಾಗಿರುವ ಕಾವೇರಿ ನಿರ್ವಹಣಾ ಮಂಡಳಿಯ ರಚನೆಗೆ ಪಟ್ಟು ಹಿಡಿದಿರುವ ಅವರಿಗೆ ಕರ್ನಾಟಕದಲ್ಲಿನ ಪರಿಸ್ಥಿತಿ ಅರ್ಥವಾಗದೆ ಇರುವುದು ನೋವಿನ ಸಂಗತಿಯಾಗಿದೆ.

    ರಜಿನಿಕಾಂತ್ ಹೇಳಿಕೆಗೆ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜ್‍ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಜಿನಿಕಾಂತ್ ರವರು ಮೂಲತಃ ಕನ್ನಡಿಗರಾಗಿದ್ದು ಕರ್ನಾಟಕ ವಿರುದ್ಧ ಯಾವುದೇ ಹೇಳಿಕೆಯನ್ನು ಅವರು ನೀಡಬಾರದಾಗಿತ್ತು. ಮುಂದಿನ ದಿನಗಳಲ್ಲಿ ಅವರು ಅಭಿನಯಿಸಿದ ತಮಿಳಿನ ಕಾಳಾ ಚಿತ್ರ ಕರ್ನಾಟಕದಲ್ಲಿ ತೆರೆ ಕಾಣದಂತೆ ಕರ್ನಾಟಕ ಚಲನಚಿತ್ರ ಮಂಡಳಿಗೆ ದೂರು ನೀಡುವುದಾಗಿ ತಿಳಿಸಿದ್ದು. ಒಂದು ವೇಳೆ ಕಾಳಾ ಚಿತ್ರ ತೆರೆಕಂಡರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗೆಯೇ ಕಮಲ್ ಹಾಸನ್‍ರವರ ಚಿತ್ರವು ಕೂಡ ತೆರೆಕಾಣಬಾರದೆಂದು ಹೇಳಿಕೆ ನೀಡಿದ್ದಾರೆ.

    ಕಾಲ ಚಿತ್ರವು ತಮಿಳಿನ ಬಹು ನಿರೀಕ್ಷಿತ ಚಿತ್ರವಾಗಿದ್ದು, ಸ್ವತಃ ರಜಿನಿಕಾಂತ್ ರವರ ಅಳಿಯ ಧನುಷ್‍ರವರು ನಿರ್ಮಿಸಿದ್ದಾರೆ. ಕಬಾಲಿ ಚಿತ್ರದ ನಿರ್ದೇಶಕರಾದ ಪ.ರಂಜಿತ್‍ರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂತೋಷ್ ನಾರಾಯಣ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾನಾ ಪಾಟೇಕರ್, ಹುಮಾ ಕ್ವಿರೇಷಿ, ಈಶ್ವರಿ ರಾವ್ ಸೇರಿದಂತೆ ಬಹು ತಾರಾಂಗಣವನ್ನು ಹೊಂದಿದೆ. ಕಾಳಾ ಚಿತ್ರವು ಜೂನ್ 7ರಂದು ವಿಶ್ವಾದ್ಯಾಂತ ತೆರೆಕಾಣಲಿದೆ.

  • ರಜನಿಕಾಂತ್ `ಕಾಳಾ ಕರಿಕಾಳನ್’ ಪಾತ್ರದ ಬಗ್ಗೆ ಎಕ್ಸ್ ಕ್ಲೂಸಿವ್ ನ್ಯೂಸ್!

    ರಜನಿಕಾಂತ್ `ಕಾಳಾ ಕರಿಕಾಳನ್’ ಪಾತ್ರದ ಬಗ್ಗೆ ಎಕ್ಸ್ ಕ್ಲೂಸಿವ್ ನ್ಯೂಸ್!

    ಚೆನ್ನೈ: ಸಿನಿಮಾರಂಗದ ತಲೈವಾ ರಜನಿಕಾಂತ್ `ಕಾಳಾ ಕರಿಕಾಳನ್’ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ರಜನಿ ಅಥವಾ ಚಿತ್ರತಂಡ ಸಿನಿಮಾದ ಕಥೆ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ರಜಿನಿ ಸಿನಿಮಾದಲ್ಲಿ ಯಾವ ರೀತಿ ಕಾಣಲಿದ್ದಾರೆ ಎಂಬುದನ್ನು ನಟ ಪಂಕಜ್ ತ್ರಿಪಾಠಿ ರಿವೀಲ್ ಮಾಡಿದ್ದಾರೆ.

    ಕಬಾಲಿ ಸಿನಿಮಾದ ಬಳಿಕ ರಜನಿ ಅವರ ಯಾವುದೇ ಸಿನಿಮಾಗಳು ತೆರೆಕಂಡಿಲ್ಲ. ರೋಬೋಟ್ ಚಿತ್ರದ ಮುಂದುವರೆದ ಭಾಗವಾಗಿರುವ 2.0 ಸಿನಿಮಾ ತೆರೆಕಾಣಬೇಕಿದೆ. ಆದರೆ ಈ ಸಿನಿಮಾದಲ್ಲಿ ರಜನಿ ಹೇಗೆ ಮತ್ತು ಯಾವ ಪಾತ್ರಗಳಲ್ಲಿ ಅಭಿಮಾನಿಗಳು ಒಂದು ಕಲ್ಪನೆಯನ್ನು ಹೊಂದಿದ್ದಾರೆ. ಆದರೆ ಕಾಳಾ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾದ ನಂತರ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ. ಕಾಳಾ ಸಿನಿಮಾದಲ್ಲಿ ರಜಿನಿ ಜೊತೆಯಲ್ಲಿ ನಾನಾ ಪಾಟೇಕರ್, ಪಂಕಜ್ ತ್ರಿಪಾಠಿ, ಹುಮಾ ಖುರೇಷಿ ಸೇರಿದಂತೆ ಹಲವು ಹಿರಿಯ ನಟರು ನಟಿಸಿದ್ದಾರೆ.

    ಇತ್ತೀಚಿಗೆ ಸಂದರ್ಶನವೊಂದರಲ್ಲಿ ಪಂಕಜ್ ತ್ರಿಪಾಠಿ `ಕಾಳಾ’ ಸಿನಿಮಾದ ಬಗ್ಗೆ ಎಕ್ಸ್ ಕ್ಲೂಸಿವ್ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ನನಗೆ ರಜಿನಿ ಅವರನ್ನು ನೋಡಬೇಕು, ಅವರ ಜೊತೆ ಮಾತನಾಡಬೇಕು, ಪಕ್ಕದಲ್ಲಿ ಕುಳಿತುಕೊಳ್ಳಬೇಕು ಎಂಬುದು ದೊಡ್ಡ ಆಸೆ ನನ್ನದಾಗಿತ್ತು. ಕಾರಣ ದೇಶದ ತುಂಬೆಲ್ಲಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದು ನಾನು ಅವರ ಜೊತೆ ಸಿನಿಮಾ ಮಾಡುತ್ತಿದ್ದು, ಪ್ರತಿ ದಿನ ಅವರನ್ನು ಭೇಟಿಯಾಗಿ ಮಾತನಾಡುತ್ತಿದ್ದೇನೆ. ಸಿನಿಮಾ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇನೆ. ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ಸಂತೋಷವನ್ನು ತಂದಿದೆ.

    ಸಿನಿಮಾದಲ್ಲಿ ನಾನು ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ರಜನಿಕಾಂತ್ ಇದೂವರೆಗೂ ಕಾಣಿಸಿಕೊಳ್ಳದ ಕೊಂಚ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೆಚ್ಚಾಗಿ ನೆಗಟಿವ್ ಶೇಡ್‍ನಲ್ಲಿ ರಜಿನಿ ಅವರ ಪಾತ್ರವಿದೆ. ಹೀಗಾಗಿ ಸಿನಿಮಾದಲ್ಲಿ ನಮ್ಮಿಬ್ಬರ ಹಲವು ಸನ್ನಿವೇಶಗಳು ಬರುತ್ತದೆ ಎಂದು ತಿಳಿಸಿದ್ದಾರೆ.

    ಫಸ್ಟ್ ಲುಕ್‍ನಲ್ಲಿ ರಜಿನಿ ಪಕ್ಕಾ ರಗಡ್ ಮತ್ತು ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ರಜಿನಿ ಅವರು ನಟಿಸುತ್ತಿರುವ ಪಾತ್ರಗ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲವನ್ನು ಹುಟ್ಟು ಹಾಕಿದೆ.