Tag: ಕಾರ್ಯಕ್ರಮ

  • ಊರು ಇದ್ದ ಕಡೆ ಮಾತು ಇದ್ದೇ ಇರ್ತವೆ- ಪತಿ ವಿರುದ್ಧದ ಟೀಕೆಗಳಿಗೆ ಭವಾನಿ ರೇವಣ್ಣ ತಿರುಗೇಟು

    ಊರು ಇದ್ದ ಕಡೆ ಮಾತು ಇದ್ದೇ ಇರ್ತವೆ- ಪತಿ ವಿರುದ್ಧದ ಟೀಕೆಗಳಿಗೆ ಭವಾನಿ ರೇವಣ್ಣ ತಿರುಗೇಟು

    ಹಾಸನ: ಮಾಜಿ ಸಚಿವ ರೇವಣ್ಣನವರ ಬಗ್ಗೆ ಆಗದವರು ಏನು ಮಾತನಾಡಿಕೊಂಡರು ನಾನು ತಲೆಕೆಡಿಸಿಕೊಳ್ಳಲ್ಲ. ಯಾಕೆಂದರೆ ಊರು ಇದ್ದ ಕಡೆ ಮಾತು ಇದ್ದೇ ಇರುತ್ತವೆ ಎಂದು ರೇವಣ್ಣ ಪತ್ನಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಹೇಳಿದ್ದಾರೆ.

    ಹೊಳೆನರಸೀಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಪತಿ ವಿರುದ್ಧ ಮಾತನಾಡಿದವರಿಗೆ ತಿರುಗೇಟು ನೀಡಿದ್ದಾರೆ. ರೇವಣ್ಣನವರ ಬಗ್ಗೆ ಆಗದವರು ಏನು ಮಾತನಾಡಿಕೊಂಡರು ನಾನು ತಲೆಕೆಡಿಸಿಕೊಳ್ಳಲ್ಲ. ಯಾಕೆಂದರೆ ಊರು ಇದ್ದ ಕಡೆ ಮಾತು ಇದ್ದೇ ಇರುತ್ತವೆ. ಅನುದಾನ ತಂದು ಒಳ್ಳೆಯ ಕೆಲಸ ಮಾಡೋದು ಎಷ್ಟು ಕಷ್ಟ ಗೊತ್ತಾ? ರೇವಣ್ಣ ಅವರು ಒಳ್ಳೆಯ ಕೆಲಸ ಮಾಡಲು ಹೋದರೆ ಆಳಿಗೆ ಒಂದು ಕಲ್ಲು ಎನ್ನುತ್ತಾರೆ. ಏನೇ ಮಾಡಿದರೂ ಮಾತನಾಡುವ ಜನ ಮಾತನಾಡುತ್ತಲೇ ಇರುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳಲ್ಲ ಎಂದು ಪತಿಯನ್ನು ಟೀಕಿಸಿದವರ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಹಿತ್ತಾಳೆ ಕಿವಿ ಆರೋಪ, ಶಿವರಾಮೇಗೌಡರನ್ನು ಕಸದಬುಟ್ಟಿಗೆ ಹೋಲಿಸಿದ ರೇವಣ್ಣ

    ರೇವಣ್ಣ ಅವರು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಲ್ಲ. ಸರ್ಕಾರದಿಂದ ಅನುದಾನ ತಂದು ಕೆಲಸ ಮಾಡಿಸಿದ್ದಾರೆ ಎನ್ನುತ್ತಾರೆ. ಆದರೆ ಅನುದಾನ ತರೋದು ಎಷ್ಟು ಕಷ್ಟ ಎಂದು ಗೊತ್ತಿರಲ್ಲ ಸುಮ್ಮನೆ ಮಾತನಾಡುತ್ತಾರೆ. ಹೊಳೆನರಸಿಪುರದಲ್ಲಿ ಭಾರೀ ಮಳೆಯಾದಾಗ 5 ಕೋಟಿ ಅನುದಾನ ತಂದು ತಡೆಗೋಡೆ ನಿರ್ಮಿಸಲಾಯಿತು. ಆಗ ಹಲವರು ಈಗ ತಡೆಗೋಡೆ ಬೇಕಿತ್ತಾ? ಅನುದಾನದ ಹಣ ಲಪಟಾಯಿಸಲು ತಡೆಗೋಡೆ ಮಾಡುತ್ತಿದ್ದಾರೆ ಎಂದು ಮಾತನಾಡಿದ್ದರು. ಆದರೆ ಆ ತಡೆಗೋಡೆ ಕಟ್ಟದ್ದಿದ್ದರೆ ಮಳೆಗೆ ಹೊಳೆನರಸಿಪುರದಲ್ಲಿ ಪ್ರವಾಹ ಪ್ರತಿಸ್ಥಿತಿ ಬರುತ್ತಿತ್ತು. ಅದರ ಬಗ್ಗೆ ಯಾರು ಯೋಚನೆ ಮಾಡಲ್ಲ ಎಂದು ಕಿಡಿಕಾರಿದರು.

    ರೇವಣ್ಣ ಅವರು ಹಾಸನ ಜಿಲ್ಲೆಯಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಮಾಡಿದ್ದಾರೆ. ಅವರ ಕೆಲಸದಿಂದ ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿ ನಿಂತಿದೆ. ಶಿಕ್ಷಣಕ್ಕೆ ಅವರು ಹೆಚ್ಚು ಒತ್ತುಕೊಟ್ಟು, ಶಿಕ್ಷಣದಲ್ಲಿ ಜಿಲ್ಲೆಯನ್ನು ಮುಂದೆ ಬರುವಂತೆ ಮಾಡಿದ್ದಾರೆ ಎಂದು ಪತಿಯ ಕಾರ್ಯವೈಖರಿಯನ್ನು ಭವಾನಿ ರೇವಣ್ಣ ಹಾಡಿ ಹೊಗಳಿದರು.

  • ಒಂದೇ ನಿಮಿಷದಲ್ಲಿ 6 ಇಡ್ಲಿ ತಿಂದು ಮೊದಲ ಸ್ಥಾನ ಪಡೆದ 60 ವರ್ಷದ ಅಜ್ಜಿ

    ಒಂದೇ ನಿಮಿಷದಲ್ಲಿ 6 ಇಡ್ಲಿ ತಿಂದು ಮೊದಲ ಸ್ಥಾನ ಪಡೆದ 60 ವರ್ಷದ ಅಜ್ಜಿ

    -ಅತ್ತೆ-ಸೊಸೆಯರಿಂದ ಅಡುಗೆ, ಬ್ಯಾನರ್ ನೋಡಿ ಗರಂ ಆದ ಸೋಮಣ್ಣ

    ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇಂದು ದಸರಾದ ಎರಡನೇ ದಿನ ಅರಮನೆ ನಗರಿಯಲ್ಲಿ ವಿವಿಧ ಕಾರ್ಯಕ್ರಮಗಳು ಜನರಿಗೆ ಮಸ್ತ್ ಮನರಂಜನೆ ನೀಡಿತು.

    ಭಾನುವಾರ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾಗೆ ವಿದ್ಯುಕ್ತವಾದ ಚಾಲನೆ ಸಿಕ್ಕಿದೆ. ಇಂದು ಎರಡನೇ ದಿನದ ದಸರೆಯನ್ನು ಸ್ತ್ರೀಯರ ಕಲಾನೈಪುಣ್ಯತೆಯಾದ ರಂಗೋಲಿ ಸ್ಪರ್ಧೆಯಿಂದ ಆರಂಭಗೊಳಿಸಲಾಯಿತು. ಅಂಬಾ ವಿಲಾಸ ಅರಮನೆಯ ಮುಂಭಾಗ ಆಯೋಜಿಸಿದ್ದ, ದಸರಾ ರಂಗೋಲಿ ಸ್ಪರ್ಧೆಗೆ ಶಾಸಕ ಆರ್. ರಾಮದಾಸ್ ಚಾಲನೆ ನೀಡಿದರು. ಇಲ್ಲಿ ಮಹಿಳೆಯರು ಚಿತ್ತಾರಗಳನ್ನು ತುಂಬಿದ ರಂಗೋಲಿಗಳನ್ನು ಬಿಡಿಸುವ ಮೂಲಕ ಅರಮನೆಯ ಆವರಣವನ್ನು ವರ್ಣರಂಚಿತಗೊಳಿಸಿದರು.

    ಇನ್ನೊಂದೆಡೆ ಜಗನ್ಮೋಹನ ಅರಮನೆಯಲ್ಲಿ ಮಕ್ಕಳಿಗಾಗಿ ನಡೆಯುತ್ತಿರುವ ಚಿಣ್ಣರ ದಸರಾಗೆ ವಿ.ಸೋಮಣ್ಣ ಚಾಲನೆ ನೀಡಿದರು. ಮಹಿಳಾ ದಸರಾಗೆ ಬಂದರೆ ಅಲ್ಲಿ ಹಾಲಿ ಮಾಜಿ ಎಂದು ಬಿಜೆಪಿಯ ಮಹಿಳೆಯರು ಹಾಗೂ ಸಚಿವರು ಗರಂ ಆಗಿದರು. ಜೆಕೆ ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ದಸರಾದ ಬ್ಯಾನರ್ ಅಲ್ಲಿ ಮಾಜಿ ಸಚಿವೆ ಉಮಾಶ್ರೀ ಫೋಟೋ ಇದ್ದ ಕಾರಣ ಸಚಿವ ಸೋಮಣ್ಣ ಮತ್ತು ಬಿಜೆಪಿಯ ಮಹಿಳೆಯರು ಗರಂ ಆಗಿದರು.

    ಒಂದು ಕಡೆ ಮೈಸೂರಿನಲ್ಲಿ ದಸರಾ ಕಾರ್ಯಕ್ರಮಗಳ ಮೂಲಕ ಮನರಂಜನೆ ದೊರೆಯುತ್ತಿದ್ರೆ, ಇನ್ನೊಂದೆಡೆ ಆಹಾರ ಮೇಳದಲ್ಲಿ ನೋಡುಗರ ಬಾಯಲ್ಲಿ ನೀರೂರಿಸುವ ಹಾಗೂ ಬಿದ್ದು ನಕ್ಕು ನಲಿಯುವ ಸ್ಪರ್ಧೆಗಳು ನಡೆದವು. ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಅತ್ತೆ-ಸೊಸೆ ಜೋಡಿ ಅಡುಗೆ ಮಾಡುವ ಸ್ಪರ್ಧೆ ಕಮಾಲ್ ಮಾಡಿತು. ಅತ್ತೆ-ಸೊಸೆಯರಿಬ್ಬರು ಕೂಡಿಗೊಂಡು ಅಕ್ಕಿ ರೊಟ್ಟಿ ಮತ್ತು ಎಣಗಾಯಿ ಪಲ್ಯ ಮಾಡುತ್ತಿದ್ದು, ಎಲ್ಲರ ಬಾಯಲ್ಲಿ ನೀರೂರಿಸುವಂತೆ ಇತ್ತು.

    ಮಹಿಳೆಯರಿಗಾಗಿಯೇ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆ ನೋಡುಗರು ನಕ್ಕು ನಲಿಯುವುದರ ಜೊತೆಗೆ ಬಾಯಿಯ ಮೇಲೆ ಬೆರಳಟ್ಟುಕೊಳ್ಳುವ ಹಾಗೆ ಮಾಡಿತು. ಈ ಸ್ಪರ್ಧೆಯಲ್ಲಿ 60 ವರ್ಷದ ಅಜ್ಜಿ ಸರೋಜಮ್ಮ ಒಂದೇ ನಿಮಿಷದಲ್ಲಿ 6 ಇಡ್ಲಿ ತಿನ್ನುವ ಮೂಲಕ ಮೊದಲ ಸ್ಥಾನ ಪಡೆದುಕೊಂಡರು.

    ದಸರಾ ಮಹೋತ್ಸವ ಮೈಸೂರಿಗೆ ವಿಶೇಷ ಮೆರಗನ್ನು ನೀಡುತ್ತಿದ್ದು, ಹಗಲಿನ ವೇಳೆ ವಿವಿಧ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸುತ್ತಿದ್ರೆ, ರಾತ್ರಿಯ ವೇಳೆ ವಿದ್ಯುತ್ ಅಲಂಕಾರದ ಮೂಲಕ ಕೈಲಾಸವೇ ಧರೆಗಿಳಿದಂತೆ ಬಾಸವಾಗುತ್ತಿದೆ. ಈ ರಂಗು ಇನ್ನೂ ಎಂಟು ದಿನಗಳ ಕಾಲ ಮೈಸೂರನ್ನು ಗತಕಾಲಕ್ಕೆ ಕರೆದೊಯ್ಯಲಿದೆ.

  • ನಿಮಗೆ ಸೆಕ್ಸ್ ಬೇಕೆಂದರೆ ಮಾಡಿಬಿಡಿ, ಸುಮ್ಮನೆ ಕೊರಗುತ್ತಿರಬೇಡಿ: ನಟಿ ಕಂಗನಾ

    ನಿಮಗೆ ಸೆಕ್ಸ್ ಬೇಕೆಂದರೆ ಮಾಡಿಬಿಡಿ, ಸುಮ್ಮನೆ ಕೊರಗುತ್ತಿರಬೇಡಿ: ನಟಿ ಕಂಗನಾ

    ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ನಿಮಗೆ ಸೆಕ್ಸ್ ಬೇಕೆಂದರೆ ಮಾಡಿಬಿಡಿ, ಸುಮ್ಮನೆ ಕೊರಗುತ್ತಿರಬೇಡಿ ಎಂದು ಹೇಳಿಕೆಯೊಂದನ್ನು ನೀಡಿದ್ದಾರೆ.

    ಇತ್ತೀಚೆಗೆ ಕಂಗನಾ ಅವರು ಖಾಸಗಿ ವಾಹಿನಿಯಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಕಂಗನಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ, ತಮ್ಮ ಮೊದಲ ಕ್ರಶ್ ಹಾಗೂ ಮೊದಲ ರಿಲೇಷನ್‍ಶಿಪ್ ಬಗ್ಗೆ ರಿವೀಲ್ ಮಾಡಿದ್ದಾರೆ. ಇದೇ ವೇಳೆ ನಿಮಗೆ ಸೆಕ್ಸ್ ಬೇಕೆಂದರೆ ಮಾಡಿಬಿಡಿ, ಸುಮ್ಮನೆ ಕೊರಗುತ್ತಿರಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಡೇಟಿಂಗ್ ಆ್ಯಪ್ ಮೂಲಕ ಗೆಳೆಯನ ಹುಡುಕಾಟದಲ್ಲಿದ್ದಾರೆ 83ರ ವೃದ್ಧೆ

    ಕಾರ್ಯಕ್ರಮದಲ್ಲಿ ಮಾತನಾಡಿದ ಕಂಗನಾ, “ಪ್ರತಿಯೊಬ್ಬರ ಜೀವನದಲ್ಲೂ ಸೆಕ್ಸ್ ಒಂದು ಪ್ರಮುಖ ಅಂಶವಾಗಿದೆ. ನಿಮಗೆ ಸೆಕ್ಸ್ ಬೇಕೆಂದರೆ ಮಾಡಿಬಿಡಿ, ಸುಮ್ಮನೆ ಕೊರಗುತ್ತಾ ಕೂರಬೇಡಿ ಒಂದು ಕಾಲದಲ್ಲಿ ನಿಮಗೆ ಮದುವೆ ಮಾಡಿಕೋ ಎಂದು ಹೇಳುತ್ತಿದ್ದರು. ಅಲ್ಲದೆ ನಿಮ್ಮ ಭಾವನೆಗಳನ್ನು ಆ ವ್ಯಕ್ತಿ ಜೊತೆಗೆ ಹಂಚಿಕೊಳ್ಳಿ ಎಂದು ಹೇಳಲಾಗುತ್ತಿತ್ತು” ಎಂದು ಹೇಳಿದ್ದಾರೆ.

    ನಮ್ಮ ಶಾಸ್ತ್ರಗಳು ಲೈಂಗಿಕತೆಗೆ ಅನುಮತಿಯನ್ನು ನೀಡುವುದಿಲ್ಲ. ಮಕ್ಕಳು ಲೈಂಗಿಕವಾಗಿರುವುದರಿಂದ ಸಂತೋಷವಾಗಿರಬೇಕು. ಮಕ್ಕಳು ಜವಾಬ್ದಾರಿಯುತ ಲೈಂಗಿಕತೆಯನ್ನು ಹೊಂದಬೇಕು. ನಾನು ಲೈಂಗಿಕವಾಗಿ ಸಕ್ರಿಯನಾಗಿದ್ದೇನೆ ಎಂದು ತಿಳಿದಾಗ ನನ್ನ ಪೋಷಕರು ಆಘಾತಕ್ಕೊಳಗಾಗಿದ್ದರು. ಪೋಷಕರು ಮಕ್ಕಳನ್ನು ಲೈಂಗಿಕವಾಗಿ ಪ್ರೋತ್ಸಾಹಿಸಬೇಕು ಎಂದರು ಎಂದು ತಿಳಿಸಿದ್ದಾರೆ.

    ಕಂಗನಾ ಅವರು ಕೊನೆಯದಾಗಿ ‘ಮಣಿಕರ್ಣಿಕಾ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತ್ತು. ಸದ್ಯ ಕಂಗನಾ ಈಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿಎಂ ಜಯಾಲಲಿತಾ ಅವರ ಜೀವನಚರಿತ್ರೆಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಎ.ಎಲ್ ವಿಜಯ್ ಅವರು ನಿರ್ದೇಶಿಸಿದ್ದಾರೆ.

  • ಯುವ ದಸರಾದಲ್ಲಿ ಮೋಡಿ ಮಾಡಲಿದ್ದಾರೆ ರಾನು ಮೊಂಡಲ್

    ಯುವ ದಸರಾದಲ್ಲಿ ಮೋಡಿ ಮಾಡಲಿದ್ದಾರೆ ರಾನು ಮೊಂಡಲ್

    ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಯುವ ದಸರಾದಲ್ಲಿ ತೇರಿಮೇರಿ ಸ್ಟಾರ್ ರಾನು ಮೊಂಡಲ್ ಕಾರ್ಯಕ್ರಮ ನೀಡುವ ಮೂಲಕ ಮಿಂಚಲಿದ್ದಾರೆ. ನಮ್ಮ ಸುಮಧುರ ಕಂಠಸಿರಿಯಿಂದ ಎಲ್ಲರ ಮನ ಗೆಲ್ಲಲಿದ್ದಾರೆ.

    ನಾಡಹಬ್ಬಕ್ಕೆ ಇಂದು ಚಾಮುಂಡಿ ಬೆಟ್ಟದಲ್ಲಿ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸದಾನಂದ ಗೌಡ, ಜೆಡಿಎಸ್ ನಾಯಕ ಜಿ.ಟಿ ದೇವೇಗೌಡ, ಸಚಿವ ವಿ. ಸೋಮಣ್ಣ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಭಾಗಿಯಾಗಿದ್ದು, ಸಾಂಸ್ಕೃತಿಕ ನಾಡಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಅ.1 ರಿಂದ ಅ.6ರವರೆಗೆ ಯುವದಸರಾ ನಡೆಯಲಿದ್ದು, ಉದ್ಘಾಟನಾ ದಿನ ಅಂದರೆ ಅ.1ರಂದು ರಾನು ಮೊಂಡಲ್ ಕಾರ್ಯಕ್ರಮ ನೀಡಿ ಎಲ್ಲರನ್ನು ರಂಜಿಸಲಿದ್ದಾರೆ. ಇದನ್ನೂ ಓದಿ: ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾಗೆ ಎಸ್.ಎಲ್ ಭೈರಪ್ಪ ಚಾಲನೆ

    ಇದೇ ವೇಳೆ ರಾನು ಮೊಂಡಲ್‍ಗೆ ಯುವ ದಸರಾ ಉಪಸಮಿತಿ ಸನ್ಮಾನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದೆ. ಯುವಜನತೆಗೆ ಸಾಧನೆಯ ಸಂದೇಶ ಸಾರುವ ಸಲುವಾಗಿ ರಾನು ಮೊಂಡಲ್ ಅವರಿಗೆ ಯುವದಸರಾಗೆ ಕಾರ್ಯಕ್ರಮ ನೀಡಲು ಆಮಂತ್ರಿಸಲಾಗಿದೆ. ಇದನ್ನೂ ಓದಿ:ಇಂದಿನಿಂದ ಮೈಸೂರು ದಸರಾ ವೈಭವ – ಎಸ್.ಎಲ್ ಬೈರಪ್ಪರಿಂದ ಉತ್ಸವಕ್ಕೆ ಚಾಲನೆ

    ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡಿ, ಹಾಡು ಹಾಡಿ ಜೀವನ ನಡೆಸುತ್ತಿದ್ದ ರಾನು ಮೊಂಡಲ್ ಹಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿತ್ತು. ಆ ಬಳಿಕ ರಾನು ಅವರಿಗೆ ಹಿಮೇಶ್ ರೇಶ್ಮಿಯಾ ಅವರು ತೇರಿ ಮೇರಿ ಕಹಾನಿ ಎಂಬ ಹಾಡನ್ನು ಹಾಡಲು ಅವಕಾಶ ನೀಡಿದರು. ಈ ಮೂಲಕ ರಾನು ಸ್ಟಾರ್ ಆದರು. ಸದ್ಯ ರಾನು ಅವರಿಗೆ ಬಾಲಿವುಡ್ ಹಾಗೂ ಇತರೆ ಸಿನಿಮಾದಲ್ಲಿ ಹಾಡಲು ಅವಕಾಶಗಳು ದೊರೆಯುತ್ತಿದ್ದು, ಸಖತ್ ಮಿಂಚುತ್ತಿದ್ದಾರೆ.

  • ಹೌಡಿ ಮೋದಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಕನ್ನಡಿಗ ಕಿಶೋರ್ ಮಲಾನಿ

    ಹೌಡಿ ಮೋದಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಕನ್ನಡಿಗ ಕಿಶೋರ್ ಮಲಾನಿ

    ಬೀದರ್: ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಬೀದರ್ ನ ಕನ್ನಡಿಗರೊಬ್ಬರು ಮಹತ್ವದ ಪಾತ್ರವವಹಿಸಿದ್ದಾರೆ.

    ಬೀದರ್ ನ ಜುಗಲ್ ಕಿಶೋರ್ ಮಲಾನಿ ಅವರು ಈ ಕಾರ್ಯಕ್ರಮ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿ 600 ಸಂಘಟನೆಯ ಸದಸ್ಯರುಗಳನ್ನು ಒಂದೆಡೆ ಸೇರಿಸಿದ್ದರು. ಮಲಾನಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಮಲಾನಿ ಫ್ಯಾಮಿಲಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

    ಬೀದರ್ ನ ಉಸ್ಮಾನ್ ಗಂಜ್‍ನಲ್ಲಿ ಕಿಶೋರ್ ಮಲಾನಿಯ ನಿವಾಸವಿದ್ದು ಸಹೋದರ, ಸಹೋದರಿ ಸೇರಿದಂತೆ ಸಂಬಂಧಿಕರು ಇಲ್ಲೇ ವಾಸವಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಬೀದರ್ ನಲ್ಲಿ ಮುಗಿಸಿರುವ ಮಲಾನಿ 23 ವರ್ಷಗಳ ಹಿಂದೆ ಅಮೆರಿಕಾಗೆ ಹೋಗಿ ಅಲ್ಲೇ ವಾಸವಾಗಿದ್ದಾರೆ. ವರ್ಷಕ್ಕೆ ಎರಡು ಬಾರಿ ಬೀದರ್ ಗೆ ಬಂದು ಹೋಗುತ್ತಾರೆ.

    “ಹೌಡಿ ಮೋದಿ” ಕಾರ್ಯಕ್ರಮ ಯಶಸ್ವಿಯಾಗಲು ಮಲಾನಿ ಪ್ರಮಖ ಪಾತ್ರ ವಹಿಸಿದ್ದು, ಜಿಲ್ಲೆಯಲ್ಲಿ ಜನರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದಕ್ಕೆ ಮಲಾನಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

  • ಸಾಯಿ ಪಲ್ಲವಿಯನ್ನು ಮದ್ವೆಯಾಗಿ ಪೂಜಾ ಹೆಗಡೆ ಜೊತೆ ಸುತ್ತಾಡಬೇಕೆಂದ ನಟ

    ಸಾಯಿ ಪಲ್ಲವಿಯನ್ನು ಮದ್ವೆಯಾಗಿ ಪೂಜಾ ಹೆಗಡೆ ಜೊತೆ ಸುತ್ತಾಡಬೇಕೆಂದ ನಟ

    ಹೈದರಾಬಾದ್: ಟಾಲಿವುಡ್ ನಟ ವರುಣ್ ತೇಜ್ ಅವರು ನಟಿ ಸಾಯಿ ಪಲ್ಲವಿ ಅವರನ್ನು ಮದುವೆ ಆಗಬೇಕೆಂದು ಹೇಳಿದ್ದಾರೆ.

    ಇತ್ತೀಚೆಗೆ ನಟ ವರುಣ್ ತೇಜ್ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಫೀಟ್ ಅಪ್ ವಿತ್ ಸ್ಟಾರ್ಸ್ ತೆಲುಗು” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ಲಕ್ಷ್ಮಿ ಮಂಚು, ವರುಣ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

    ನಿರೂಪಕಿ ಲಕ್ಷ್ಮಿ ಅವರು, ನೀವು ಯಾವ ನಟಿಯನ್ನು ಕೊಲೆ ಮಾಡುತ್ತೀರಾ, ಯಾವ ನಟಿಯನ್ನು ಮದುವೆ ಆಗುತ್ತೀರಾ ಹಾಗೂ ಯಾವ ನಟಿ ಜೊತೆ ಸುತ್ತಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಪ್ರಶ್ನೆಗಳಿಗೆ ನಟಿಯರಾದ ರಾಶಿ ಖನ್ನಾ, ಸಾಯಿ ಪಲ್ಲವಿ ಹಾಗೂ ಪೂಜಾ ಹೆಗಡೆ ಹೆಸರನ್ನು ಹೇಳುತ್ತಾರೆ.

    ಈ ವೇಳೆ ವರುಣ್ ಅವರು, ನಾನು ನಟಿ ರಾಶಿ ಖನ್ನಾ ಅವರನ್ನು ಕೊಲೆ ಮಾಡುತ್ತೇನೆ. ನಟಿ ಸಾಯಿ ಪಲ್ಲವಿಯನ್ನು ಮದುವೆ ಆಗುತ್ತೇನೆ ಹಾಗೂ ಪೂಜಾ ಹೆಗಡೆ ಜೊತೆ ಸುತ್ತಾಡಲು ಇಷ್ಟಪಡುತ್ತೇನೆ ಎಂದು ಉತ್ತರಿಸಿದ್ದಾರೆ.

    ಈ ಹಿಂದೆ ನಟಿ ಸಮಂತಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ನಿಮ್ಮ ಬೆಡ್‍ರೂಂ ಸೀಕ್ರೆಟ್ ಹೇಳಿ ಎಂದು ಪ್ರಶ್ನಿಸಿದ್ದಾರೆ. ಮೊದಲು ಸಮಂತಾ ಇದಕ್ಕೆ ನಿರಾಕರಿಸುತ್ತಾರೆ. ನಂತರ ಚೈತನ್ಯ ಅವರ ಮೊದಲ ಪತ್ನಿ ದಿಂಬು. ನಾನು ಚೈತನ್ಯ ಅವರಿಗೆ ಕಿಸ್ ಮಾಡಬೇಕು ಎಂದರೆ ದಿಂಬು ಯಾವಾಗಲೂ ನಮ್ಮಿಬ್ಬರ ನಡುವೆ ಬರುತ್ತದೆ ಎಂದು ಹೇಳಿದ್ದಾರೆ.

  • ಪತಿಯ ಮೊದಲ ಪತ್ನಿಯ ರಹಸ್ಯ ಬಿಚ್ಚಿಟ್ಟ ಸಮಂತಾ

    ಪತಿಯ ಮೊದಲ ಪತ್ನಿಯ ರಹಸ್ಯ ಬಿಚ್ಚಿಟ್ಟ ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಕಾರ್ಯಕ್ರಮವೊಂದರಲ್ಲಿ ತಮ್ಮ ಪತಿಯ ಮೊದಲ ಪತ್ನಿಯ ರಹಸ್ಯ ಬಿಚ್ಚಿಟ್ಟಿದ್ದಾರೆ.

    ಇತ್ತೀಚೆಗೆ ನಟಿ ಸಮಂತಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ನಿರೂಪಕಿ ಲಕ್ಷ್ಮಿ ಮಂಚು ಅವರು ಸಮಂತಾ ಅವರನ್ನು ಬೆಡ್‍ರೂಂ ಸೀಕ್ರೆಟ್ ಹಂಚಿಕೊಳ್ಳುವಂತೆ ಕೇಳುತ್ತಾರೆ. ಆದರೆ ಸಮಂತಾ ಇದಕ್ಕೆ ನಿರಾಕರಿಸುತ್ತಾರೆ.

    ಸಮಂತಾ ನಿರಾಕರಿಸುತ್ತಿದ್ದಂತೆ ನಿರೂಪಕಿ ಲಕ್ಷ್ಮಿ ಅವರು, ನೀವು ಈಗ ನಿಮ್ಮ ಎಲ್ಲ ರಹಸ್ಯ ಬಿಚ್ಚುಡುವಂತೆ ಮಾಡುತ್ತಿದ್ದೀರಾ. ಮದುವೆಗೂ ಮೊದಲು ನೀವು ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿ ಇದ್ದೀರಿ ಎಂಬ ವಿಷಯ ನನಗೆ ಗೊತ್ತು ಎಂದು ಹೇಳಿದ್ದಾರೆ. ಬಳಿಕ ಮದುವೆ ನಂತರ ನಿಮ್ಮ ಬೆಡ್‍ರೂಂನಲ್ಲಿ ಬದಲಾದ ಮೂರು ವಿಷಯ ತಿಳಿಸಿ ಎಂದು ಪ್ರಶ್ನಿಸಿದ್ದಾರೆ.

    ಈ ವೇಳೆ ಸಮಂತಾ ಅವರು, “ಚೈತನ್ಯ ಅವರ ಮೊದಲ ಪತ್ನಿ ದಿಂಬು. ನಾನು ಚೈತನ್ಯ ಅವರಿಗೆ ಕಿಸ್ ಮಾಡಬೇಕು ಎಂದರೆ ದಿಂಬು ಯಾವಾಗಲೂ ನಮ್ಮಿಬ್ಬರ ನಡುವೆ ಬರುತ್ತದೆ” ಎಂದರು. ಸ್ವಲ್ಪ ಹೊತ್ತಿನ ಬಳಿಕ ಸಮಂತಾ, “ನಾನು ಈಗ ಸಾಕಷ್ಟು ವಿಷಯ ಹೇಳಿದ್ದೇನೆ ಅನಿಸುತ್ತೆ. ಈಗ ಇಷ್ಟು ಸಾಕು” ಎಂದು ಹೇಳಿದ್ದಾರೆ.

    ಸಮಂತಾ ಅವರು 2017, ಅಕ್ಟೋಬರ್ ತಿಂಗಳಲ್ಲಿ ನಟ ನಾಗಚೈತನ್ಯ ಅವರ ಜೊತೆ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಿದ್ದರು. ಮೊದಲು ಇಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ನಂತರ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ನಾನು ಯಾವ ಕಾರಣಕ್ಕೂ ದಸರಾದಲ್ಲಿ ಭಾಗವಹಿಸುವುದಿಲ್ಲ  _ ಶ್ರೀನಿವಾಸ್ ಪ್ರಸಾದ್

    ನಾನು ಯಾವ ಕಾರಣಕ್ಕೂ ದಸರಾದಲ್ಲಿ ಭಾಗವಹಿಸುವುದಿಲ್ಲ _ ಶ್ರೀನಿವಾಸ್ ಪ್ರಸಾದ್

    ಚಾಮರಾಜನಗರ: ರಾಜ್ಯದಲ್ಲಿ ಪ್ರವಾಹ ಉಂಟಾಗಿದ್ದರೂ ಅದ್ಧೂರಿ ದಸರಾ ಆಚರಣೆ ಮಾಡುತ್ತಿರುವುದಕ್ಕೆ ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ.

    ಇಂದು ಕೊಳ್ಳೇಗಾಲದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ ಜನರು ಸಂಕಷ್ಟದಲ್ಲಿರುವಾಗ ಅದ್ಧೂರಿ ದಸರಾದ ಅವಶ್ಯಕತೆ ಇರಲಿಲ್ಲ. ಆಹಾರ ಮೇಳ ಮಾಡಿ ತಿಂದು ತೇಗುವುದು. ಯುವ ದಸರಾ ನಡೆಸಿ ಕುಣಿದು ಕುಪ್ಪಳಿಸುವುದು ಸಂಪ್ರದಾಯಿಕ ದಸರಾವಲ್ಲ. ಇವನ್ನೆಲ್ಲ ಬಿಡಬೇಕು ಎಂದು ಅಸಮಾಧಾನ ಹೊರ ಹಾಕಿದರು.

    ಸರಳವಾಗಿ ದಸರಾ ಆಚರಿಸುವಂತೆ ನಾನು ಹೇಳಿದ್ದೆ. ಆದರೆ ಉಸ್ತುವಾರಿ ಸಚಿವರು ಕೇಳಲಿಲ್ಲ. ದಸರಾ ಕಾರ್ಯಕ್ರಮಕ್ಕೆ ನನ್ನನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಾನು ಕೂಡ ಓರ್ವ ಜನಪ್ರತಿನಿಧಿ. ದಸರಾ ಕಾರ್ಯಕ್ರಮಗಳಿಗೆ ನಾನು ಯಾವ ಕಾರಣಕ್ಕೂ ಭಾಗವಹಿಸುವುದಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

  • ದಸರಾದ ಮೊದಲ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಚಾಲನೆ

    ದಸರಾದ ಮೊದಲ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಚಾಲನೆ

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಮೊದಲ ಕಾರ್ಯಕ್ರಮ ಯುವ ಸಂಭ್ರಮಕ್ಕೆ ಚಾಲನೆ ಸಿಕ್ಕಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ಯುವ ಸಂಭ್ರಮಕ್ಕೆ ಚಾಲನೆ ನೀಡಿದ್ದಾರೆ.

    ಯುವ ಸಂಭ್ರಮದ ಕಾರ್ಯಕ್ರಮದ ಮೂಲಕ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಶುರುವಾಗುತ್ತದೆ. ಈ ಮೊದಲ ಕಾರ್ಯಕ್ರಮಕ್ಕೆ ನಟ ಗೋಲ್ಡನ್ ಸ್ಟಾರ್ ಗಣೇಶ್ ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದ್ದಾರೆ.

    ನಟ ಗಣೇಶ್ ಅವರಿಗೆ ಸಚಿವ ವಿ.ಸೋಮಣ್ಣ, ಶಾಸಕ ನಾಗೇಂದ್ರ, ಸಂದೇಶ್ ನಾಗರಾಜ್ ಸೇರಿ ಹಲವು ಅಧಿಕಾರಿ ವರ್ಗ ಸಾಥ್ ನೀಡಿತು. ಇದಾದ ಬಳಿಕ ನಟ ಗಣೇಶ್ ಯುವ ಮನಸ್ಸುಗಳಿಗೆ ತಮ್ಮ ಚಿತ್ರದ ಡೈಲಾಗ್ ಹಾಗೂ ಹಾಡುಗಳನ್ನು ಹಾಡಿ ರಂಜಿಸಿದರು.

    ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಯುವ ಸಂಭ್ರಮದ ದರ್ಬಾರ್ ಶುರುವಾಗಿದೆ. ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡುವ ನೃತ್ಯ ರೂಪಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತ್ತು. ವಿಶೇಷ ಮಕ್ಕಳ ಪ್ರವಾಹದ ಥೀಮ್ ಹಾಗೂ ಜಾನಪದ ಸಾಹಿತ್ಯದ ಮಹದೇಶ್ವರ ಸ್ವಾಮಿಯ ಗೀತೆಯೊಂದಿಗಿನ ಕಂಸಾಳೆ ನೃತ್ಯ ಯುವಕ ಯುವತಿಯರು ಭಕ್ತಿಭಾವದಲ್ಲಿ ತೇಲುವಂತೆ ಮಾಡಿತು.

    ಮೊದಲ ದಿನದ ದಸರಾ ಯುವ ಸಂಭ್ರಮಕ್ಕೆ ಗೋಲ್ಡನ್ ಟಚ್ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಇಂದು ದಸರಾ ಯುವ ಸಂಭ್ರಮದ ವಿಶೇಷ ವಿಭಿನ್ನ ಕಾರ್ಯಕ್ರಮಗಳು ನಡೆಯಲಿದ್ದು, ಯುವಮನಸ್ಸುಗಳನ್ನ ಮತ್ತಷ್ಟು ರಂಜಿಸಲಿದೆ.

  • ಕನ್ನಡದ ಕುವರನಿಗೆ ಅವಮಾನ- ಹಿಂದಿ ಬರಲ್ಲ ಅಂತ ಮೈಕ್ ಕಸಿದುಕೊಂಡ್ರು

    ಕನ್ನಡದ ಕುವರನಿಗೆ ಅವಮಾನ- ಹಿಂದಿ ಬರಲ್ಲ ಅಂತ ಮೈಕ್ ಕಸಿದುಕೊಂಡ್ರು

    ಕಲಬುರಗಿ: ರಾಜ್ಯದಲ್ಲಿ ನಮ್ಮ ಹಾವೇರಿಯ ಕುರಿಗಾಹಿ, ಗಾಯಕ ಹನುಮಂತ ಹವಾ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇಂತಹ ಹನುಮಂತರನ್ನು ಕಲಬುರಗಿಯ ಓರ್ವ ಆಯೋಜಕರು ಕಾರ್ಯಕ್ರಮಕ್ಕೆ ಕರೆಸಿ ಅವಮಾನ ಮಾಡಿದ್ದಾರೆ. ಇದು ಇದೀಗ ಕಲಬುರಗಿ ಸೇರಿದಂತೆ ರಾಜ್ಯದ ಜನರಲ್ಲಿ ಆಯೋಜಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹನುಮಂತು ಅಂದ್ರೆ ಸಾಕು ಕಲಬುರಗಿ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಅವರ ಅಭಿಮಾನಿಗಳಿದ್ದಾರೆ. ಹೀಗಾಗಿಯೇ ಕಲಬುರಗಿಯಲ್ಲಿ ಶನಿವಾರ ಖಾಸಗಿ ಕಾರ್ಯಕ್ರಮ ಆಯೋಜಿಸಿ (ದಿ ಸ್ಟಾರ್ ವರ್ಲ್ಡ್  ಹಾನರ್ಸ್ ದಿ ಬ್ರೇವ್ ಹಾರ್ಟ್ಸ್) ಆಯೋಜಕರು ಹನುಮಂತರನ್ನು ಕರೆಸಿದ್ದರು. ಹೀಗಾಗಿ ಅವರ ಅಪಾರ ಅಭಿಮಾನಿಗಳು ಜವಾರಿ ಸಾಂಗ್ ಕೇಳಲು ಕಾಯುತ್ತಿದ್ದರು. ಅಷ್ಟರಲ್ಲಿ ಅಲ್ಲಿ ನಿರೂಪಣೆ ಮಾಡುತ್ತಿದ್ದ ವ್ಯಕ್ತಿ ಹನುಮಂತ ಅವರ ವೇಷ ಭೂಷಣ ಕಂಡು ಜೋಕ್ ಮಾಡಿದ್ದು, ಹಿಂದಿಯಲ್ಲಿ ಮಾತನಾಡಲು ಹೇಳಿ ಹನುಮಂತನಿಗೇ ಕಿಂಡಲ್ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಆ ನಿರೂಪಕ ನಿನಗೆ ಹಿಂದಿ ಬರಲ್ಲ ನನಗೇ ಕನ್ನಡ ಬರಲ್ಲ ಅಂತಾ ಹನುಮಂತನ ಕೈಯಲ್ಲಿದ್ದ ಮೈಕ್ ಕಸಿದುಕೊಂಡಿದ್ದಾರೆ. ಆ ಮೈಕ್‍ನ್ನು ಕಸಿದು ಹಿಂದಿ ಬಿಗ್‍ಬಾಸ್-9ರ ಸೀಸನ್‍ನ ಖ್ಯಾತಿಯ ನಟಿ ಸೋನಾಲಿ ರಾವತ್‍ಗೆ ನೀಡಿದ್ದಾರೆ. ಇದನ್ನೂ ಓದಿ: ಸರಿಗಮಪ ವೇದಿಕೆಯಲ್ಲಿ ಹನುಮಂತ ತಂಗಿಗೆ ಸಿಕ್ತು ಅಚ್ಚರಿಯ ಉಡುಗೊರೆ

    ಈ ಕಾರ್ಯಕ್ರಮಕ್ಕೆ ಡಬ್ಲೂಡಬ್ಲೂಇ ಖ್ಯಾತಿಯ ದಿ ಗ್ರೇಟ್ ಖಲಿ ಸಹ ಆಗಮಿಸಿದ್ದು, ಖಲೀ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಇತರೆ ಕಲಾವಿದರನ್ನು ವೇದಿಕೆಗೆ ಕರೆಯಲಾಗಿತ್ತು. ಆದರೆ ಮುಗ್ಧ ಮನಸ್ಸಿನ ಹನುಮಂತನನ್ನು ಮೈಕ್ ಕಸಿದು ಕೆಳಗೆ ಕಳುಹಿಸಿದ ನಂತರ ಸೌಜನ್ಯಕ್ಕೂ ಸಹ ವೇದಿಕೆಗೆ ಕರೆಯಲಿಲ್ಲ. ಅದೇ ವೇದಿಕೆಯಲ್ಲಿ ಹಿಂದಿಯ ಸರಿಗಮಪ ಸಿಂಗರ್, ಜಯಶ್ ಕುಮಾರ್ ಕನ್ನಡದ ಚುಟು ಚುಟು ಅಂತೈದೇ ಅಂತಾ ಹಾಡು ಹಾಡಲು ಮುಂದಾದ್ರೆ, ಆತನ ಹಾಡಿಗೆ ಮ್ಯೂಸಿಕ್ ಹಾಕದೇ ಅರ್ಧದಲ್ಲಿಯೇ ಆತನ ಹಾಡು ನಿಲ್ಲಿಸಲಾಯ್ತು. ಆತನನ್ನು ಸಹ ವೇದಿಕೆಯಿಂದ ಕರೆಸಿ ಮತ್ತೆ ಕನ್ನಡಕ್ಕೆ ಅವಮಾನ ಮಾಡಲಾಯಿತು. ಇದನ್ನೂ ಓದಿ: ಅಂದುಕೊಂಡಿದ್ದೆ ಆಯ್ತು, ಖುಷಿ ತಡೆಯಲು ಆಗ್ತಿಲ್ಲ: ರನ್ನರ್ ಅಪ್ ಹನುಮಂತ

    ಹನುಮಂತ ಬರ್ತಾರೆ ಅಂತ ಬಹುತೇಕರು ಕಾರ್ಯಕ್ರಮಕ್ಕೆ ಬಂದಿದ್ದರು. ಹಿಂದಿ ನಟರು ಬಂದ ಕೂಡಲೇ ಹನುಮಂತರ ಮೈಕ್ ಕಸಿದುಕೊಂಡರು. ಹಿಂದಿ ಗಾಯಕರಿಂದಲೇ ಹಾಡುಗಳನ್ನು ಹಾಡಿಸಿದರು. ಹನುಮಂತ ಅವರಿಗೆ ಹಿಂದಿ, ಇಂಗ್ಲಿಷ್ ಬರಲ್ಲ ಎಂದು ಕಾರ್ಯಕ್ರಮ ನಿರೂಪಕ ಅವಮಾನ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಹಾಡಿಸಲು ಆಯೋಜಕರು ಹಿಂದೇಟು ಹಾಕಿದ್ದು ಕನ್ನಡಕ್ಕೆ ಅವಮಾನವಾಗಿದೆ. ಇಲ್ಲಿ ಕೇವಲ ಹನುಮಂತ ಅವರಿಗೆ ಮಾತ್ರ ಅವಮಾನವಾಗಿಲ್ಲ, ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲ ಕನ್ನಡಿಗರು ಅವಮಾನವಾದಂತೆ ಎಂದು ಕರವೇ ಸದಸ್ಯ ರವಿ ಖಂಡಿಸಿದ್ದಾರೆ. ಇದನ್ನೂ ಓದಿ: ಮೈ ಮರೆತು ಹಾಡು ಹೇಳ್ತಿದ್ದ ಹನುಮಂತನ ಮೊಬೈಲ್ ಕದ್ದ ಕಳ್ಳರು

    ಹನುಮಂತನನ್ನು ವೇದಿಕೆಯೇ ಅವಮಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಮಳೆ ಬಂದಿರುವ ಹಿನ್ನೆಲೆ, ಕಾರ್ಯಕ್ರಮವನ್ನು ಆಯೋಜಕರು ಸ್ಥಗಿತ ಮಾಡಿ ಸ್ಥಳದಿಂದ ಕಾಲ್ಕಿತ್ತರು. ಈ ಮೂಲಕ ಹನುಮಂತು ಹಾಡಿಗಾಗಿ ಬಂದಿದ್ದ ಅಭಿಮಾನಿಗಳು ಗಾಯಕನಿಗೆ ಅವಮಾನ ಹಾಗೂ ಹಾಡು ಕೇಳದ ಹಿನ್ನೆಲೆ ಆಕ್ರೋಶ ಹೊರಹಾಕಿದರು. ನೂರಾರು ಕಿಮೀನಿಂದ ದೂರ ಕರೆಸಿ ಈ ರೀತಿ ಅವಮಾನ ಮಾಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಒಂದೇ ಒಂದು ಚಾನ್ಸ್ ಕೊಡಿ – ಹನುಮಂತ ಅಭಿಮಾನಿ ಮನವಿ