Tag: ಕಾರ್ಯಕ್ರಮ

  • ದೇವಸ್ಥಾನದಲ್ಲಿ ಜಾವಳ ಕಾರ್ಯಕ್ರಮದ ಊಟ ಸೇವಿಸಿ 50 ಮಂದಿ ಅಸ್ವಸ್ಥ

    ದೇವಸ್ಥಾನದಲ್ಲಿ ಜಾವಳ ಕಾರ್ಯಕ್ರಮದ ಊಟ ಸೇವಿಸಿ 50 ಮಂದಿ ಅಸ್ವಸ್ಥ

    ಯಾದಗಿರಿ: ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವನೆ ಮಾಡಿ 50 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಸುರಪುರ ತಾಲೂಕಿನ ಬೆಂಚಿಗಡ್ಡಿ ಗ್ರಾಮದ ಗವಿರಂಗ ಹನುಮಾನ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಬೆಂಚಿಗಡ್ಡಿ ಗ್ರಾಮದ ಗವಿಯಪ್ಪ ಅವರ ಪುತ್ರನ ಜಾವಳ ಕಾರ್ಯಕ್ರಮ ಭಾನುವಾರ ನಡೆದಿತ್ತು. ಕಾರ್ಯಕ್ರಮಕ್ಕೆ ಬಂದವರಿಗಾಗಿ ಹೊಳಿಗೆ, ಅನ್ನ ಸಾಂಬರ್ ಹೀಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜಾವಳ ಕಾರ್ಯಕ್ರಮ ಮುಗಿದ ನಂತರ ಊಟ ಬಡಿಸಲಾಯ್ತು. ಆದರೆ ಊಟ ಮಾಡಿದವರೆಲ್ಲರಿಗೂ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

    ಇದರಿಂದ ಗಾಬರಿಗೊಂಡ ಸ್ಥಳೀಯರು ಊಟವನ್ನು ಅರ್ಧಕ್ಕೆ ಬಿಟ್ಟು, ಅಸ್ವಸ್ಥಗೊಂಡವರನ್ನು ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಸದ್ಯ ವೈದ್ಯರು ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

    ಯಾವ ಕಾರಣಕ್ಕಾಗಿ ಈ ರೀತಿಯಾಗಿದೆ ಎಂದು ತಿಳಿದು ಬಂದಿಲ್ಲ. ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಈ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

  • ಲಾಂಗ್ ಹಿಡಿದು, ಡೈಲಾಗ್ ಹೊಡೆದು ಭರ್ಜರಿ ಸ್ಟೆಪ್ಸ್ ಹಾಕಿದ ವೈದ್ಯ

    ಲಾಂಗ್ ಹಿಡಿದು, ಡೈಲಾಗ್ ಹೊಡೆದು ಭರ್ಜರಿ ಸ್ಟೆಪ್ಸ್ ಹಾಕಿದ ವೈದ್ಯ

    ಚಿಕ್ಕಮಗಳೂರು: ಗೆರೆ ಎಳೆದಾಯ್ತು, ವೃತ್ತ ಬರೆದಾಯ್ತು, ವೃತ್ತದಲ್ಲಿರೋದೆಲ್ಲಾ ನಂದೇ ಎಂದು ಲಾಂಗ್ ಹಿಡಿದು ಚಿಕ್ಕಮಗಳೂರಿನಲ್ಲಿ ವೈದ್ಯರೊಬ್ಬರು ಭರ್ಜರಿ ಡೈಲಾಗ್ ಹೊಡೆಯುತ್ತಾ ಸ್ಟೆಪ್ಸ್ ಹಾಕಿದ್ದಾರೆ.

    ಜಿಲ್ಲೆಯ ಎನ್.ಆರ್ ಪುರದ ಬಾಳೆಹೊನ್ನೂರಿನ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ರಮೇಶ್ ಲಾಂಗ್ ಹಿಡಿದು ಕುಣಿದಿದ್ದಾರೆ. ಶೃಂಗೇರಿಯ ರೋಟರಿ ಕ್ಲಬ್‍ನಲ್ಲಿ ನಡೆದ ಕಲಾ ವೈಭವ ಕಾರ್ಯಕ್ರಮದಲ್ಲಿ ಲಾಂಗ್ ಹಿಡಿದು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಕನ್ನಡದ ‘ಉಗ್ರಂ’ ಚಿತ್ರದ ಡೈಲಾಗ್ ಹೊಡೆದು ವೈದ್ಯ ನಟನೆ ಮಾಡಿದ್ದಾರೆ. ಹಾಗೆಯೇ ‘ವಿಲನ್’ ಚಿತ್ರದ ಅಣ್ಣಾ ನಿನ್ನ ಊರು ಹಾಡಿಗೂ ಭರ್ಜರಿ ಹೆಜ್ಜೆ ಹಾಕಿದ್ದಾರೆ.

    ಲಾಂಗ್ ಹಿಡಿದು ಕುಣಿದ ವೈದ್ಯನ ನೃತ್ಯಕ್ಕೆ ಪ್ರೇಕ್ಷಕರು ಫಿದಾ ಆಗಿಬಿಟ್ಟಿದ್ದಾರೆ. ಈ ವೇಳೆ ಚಪ್ಪಾಳೆ, ಶಿಲ್ಲೆ ಹೊಡೆದು ನೆರೆದಿದ್ದ ಜನರು ವೈದ್ಯನಿಗೆ ಸಾಥ್ ನೀಡಿದ್ದು, ಲಾಂಗಿನೊಂದಿಗೆ ವೈದ್ಯನ ಕುಣಿತದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

  • ಕ್ಯಾಮೆರಾಗೆ ಪೋಸ್ ಕೊಡೋ ಭರದಲ್ಲಿ ಜಾರಿತು ಮಲೈಕಾ ಡ್ರೆಸ್

    ಕ್ಯಾಮೆರಾಗೆ ಪೋಸ್ ಕೊಡೋ ಭರದಲ್ಲಿ ಜಾರಿತು ಮಲೈಕಾ ಡ್ರೆಸ್

    ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಕ್ಯಾಮೆರಾಗೆ ಪೋಸ್ ಕೊಡುವಾಗ ಡ್ರೆಸ್ ಜಾರಿ ಮುಜುಗರಕ್ಕೊಳಗಾಗಿದ್ದಾರೆ.

    ಇತ್ತೀಚೆಗೆ ಮಲೈಕಾ ಅವರು ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರ ಪತ್ನಿ ಗೌರಿ ಖಾನ್ ಕಾಸ್ಟ್ಯೂಮ್ ಡಿಸೈನ್ ಮಾಡಿರುವ ಶಾಪ್ ಲಾಂಚ್ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಕಾರ್ಯಕ್ರಮಕ್ಕೆ ಮಲೈಕಾ ಡೀಪ್ ನೆಕ್ ಡ್ರೆಸ್ ಧರಿಸಿದ್ದರು.

    ಮಲೈಕಾ ಕಾರ್ಯಕ್ರಮಕ್ಕೆ ಆಗಮಿಸಿದಾಗ ಕ್ಯಾಮೆರಾ ಮುಂದೆ ನಿಂತು ಫೋಟೋಗೆ ಪೋಸ್ ಕೊಡುತ್ತಿದ್ದರು. ಈ ವೇಳೆ ಅವರು ಧರಿಸಿದ್ದ ಡ್ರೆಸ್ ಮತ್ತಷ್ಟು ಕೆಳಗೆ ಜಾರಿದೆ. ಡ್ರೆಸ್ ಜಾರುತ್ತಿದೆ ಎಂದು ಗೊತ್ತಾದ ತಕ್ಷಣ ಮಲೈಕಾ ಅಲ್ಲಿಂದ ಬಂದಿದ್ದಾರೆ. ಮಲೈಕಾ ಅವರ ಉಡುಪು ಜಾರಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

    ಇತ್ತೀಚೆಗೆ ಮಲೈಕಾ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಈ ಶರ್ಟ್‍ಗೆ ಅವರು ಪ್ಯಾಂಟ್ ಹಾಕದೆ ಬೂಟ್ಸ್ ಧರಿಸಿ ಅದಕ್ಕೆ ಹ್ಯಾಟ್ ಧರಿಸಿದ್ದರು. ಮಲೈಕಾರ ಈ ಲುಕ್ ಅವರ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಕೆಟ್ಟದಾಗಿ ಕಮೆಂಟ್ಸ್ ಮಾಡಲು ಶುರು ಮಾಡಿದ್ದರು.

    ಈ ಫೋಟೋ ವೈರಲ್ ಆಗುತ್ತಿದ್ದಂತೆ ಕೆಲವರು, “ಮಲೈಕಾ ಪ್ಯಾಂಟ್ ಧರಿಸುವುದನ್ನು ಏಕೆ ಮರೆತು ಹೋಗುತ್ತಾರೆ” ಎಂದು ಕಮೆಂಟ್ ಮಾಡಿದ್ದರು. ಮತ್ತೆ ಕೆಲವರು, “ಮಲೈಕಾ ಅವರ ಮುಖದಲ್ಲಿ ಹೆಚ್ಚಾಗುತ್ತಿರುವ ಅವರ ವಯಸ್ಸು ಕಾಣಿಸುತ್ತಿದೆ”. ಇನ್ನು ಕೆಲವರು ಮಲೈಕಾರಿಗೆ ವಯಸ್ಸಿಗೆ ತಕ್ಕಂತೆ ಉಡುಪು ಹಾಕಿ ಎಂದು ಸಲಹೆ ನೀಡಿದ್ದರು.

    1998ರಲ್ಲಿ ಮಲೈಕಾ, ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ಜೋಡಿಗೆ ಒಂದು ಮಗುವಿದೆ. ಆದರೆ 2017ರಲ್ಲಿ ಮಲೈಕಾ ಹಾಗೂ ಅರ್ಬಾಜ್ ಖಾನ್ ವಿಚ್ಛೇದನ ಪಡೆದು, ಬೇರೆಯಾಗಿದ್ದರು. ಈಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರನ್ನು ಮಲೈಕಾ ಪ್ರೀತಿಸುತ್ತಿದ್ದಾರೆ. ಅಲ್ಲದೆ ಇಬ್ಬರು ಸಂದರ್ಶನದಲ್ಲಿ ಪರಸ್ಪರ ಬಹಿರಂಗವಾಗಿ ಮಾತನಾಡುತ್ತಿರುತ್ತಾರೆ.

  • ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್

    ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ದಿ ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

    ದಿ ಜಿಕ್ಯೂ ಇಂಡಿಯಾ ಆಯೋಜಿಸಿದ್ದ, ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು (The GQ 50 Most Influential Young Indians) ಪಟ್ಟಿಯಲ್ಲಿ ಯಶ್ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ.

    ಸೋಮವಾರ ಸಂಜೆ ಮುಂಬೈನಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಮಾಡಿದ ಸಾಧನೆ, ಯುವ ಮನಸ್ಸುಗಳಲ್ಲಿ ಸಂಚಲನ ಸೃಷ್ಟಿಸಿದ, ಅವರ ಯೋಚನೆ, ಯೋಜನೆಯನ್ನು ಪರಿಗಣಿಸಿ, ಭಾರತದ 50 ಶ್ರೇಷ್ಠ ಯುವ ಪ್ರಭಾವಶಾಲಿಗಳಿಗೆ ಜಿಕ್ಯೂ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಿದೆ.

    ದಿ ಜಿಕ್ಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈ 50 ಯುವ ಭಾರತೀಯರು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಈ ಕಾರ್ಯಕ್ರಮವನ್ನು ಮಾಡಿದೆ. 50 ಬೇರೆ ಬೇರೆ ಕ್ಷೇತ್ರಗಳಲ್ಲಿ ಆಯ್ಕೆಯಾದ ಯುವ ವ್ಯಕ್ತಿಗಳ ಸಾಲಲ್ಲಿ ಇಡೀ ಭಾರತೀಯ ಚಿತ್ರರಂಗದಿಂದ ಯಶ್ ಆಯ್ಕೆಯಾಗಿದ್ದರು.

    ಈ ಕಾರ್ಯಕ್ರಮಕ್ಕೆ ಬಾಲಿವುಡ್‍ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕರಣ್ ಜೋಹರ್ ನಟ ಯಶ್ ಅವರಿಗೆ 2019ರ ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವ ಶಾಲಿ ಯುವ ಭಾರತೀಯ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದ್ದಾರೆ.

    ಈ ಬಗ್ಗೆ ಯಶ್ ಟ್ವೀಟ್ ಮಾಡುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರಿನಲ್ಲಿ ಯಶ್, “GQ ಇಂಡಿಯಾ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಗೌರವದಾಯಕವಾಗಿದೆ. ಚಿತ್ರರಂಗದಲ್ಲಿ ನಮ್ಮ ಸಾಧನೆಯನ್ನು ಗುರುತಿಸಿರುವುದಕ್ಕೆ ಧನ್ಯವಾದಗಳು. ನನಗೆ ನಿರಂತರವಾಗಿ ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ಹಾಗೂ ನಮಗೆ ಆಶೀರ್ವಾದಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

  • ಕೋಲಾರಕ್ಕೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಭೇಟಿ

    ಕೋಲಾರಕ್ಕೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಭೇಟಿ

    ಕೋಲಾರ: ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೋಲಾರ ಜಿಲ್ಲೆಗೆ ಆಗಮಿಸಿದ್ದಾರೆ.

    ಪವನ್ ಕಲ್ಯಾಣ್ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಗೌನಿಪಲ್ಲಿ ಗ್ರಾಮಕ್ಕೆ ಬಂದಿದ್ದಾರೆ. ಪವನ್ ಅವರು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ವಿಮಾನ ಗೋಪುರ ಮಹಾಕುಂಬಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಶ್ರೀ ನಂಜಾವದೂತ ಮಹಾಸ್ವಾಮೀಜಿ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮಾಜಿ ವಿಧಾನಸಭಾ ಅಧ್ಯಕ್ಷರು ಕೆ.ಆರ್ ರಮೇಶ್ ಕುಮಾರ್ ಪಾಲ್ಗೊಂಡಿದ್ದಾರೆ. ಪವನ್ ಕಲ್ಯಾಣ್ ಅವರನ್ನು ನೋಡಲು ಸಾವಿರಾರು ಜನರು ಮುಗಿಬಿದ್ದಿದ್ದಾರೆ.

    ಮಹೋತ್ಸವದಲ್ಲಿ ಭಾಗಿಯಾದ ನಂತರ ಪವನ್ ಕಲ್ಯಾಣ್ ವೇದಿಕೆ ಮೇಲೆ ಆಗಮಿಸಿದರು. ಈ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ನೂಕುನುಗ್ಗಲು ಮಾಡಿದ್ದಾರೆ. ಜನರ ನೂಕುನುಗ್ಗಲು ನೋಡಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

  • ನಾನು ಸೆಕ್ಸ್ ಲೈಫ್ ಎಂಜಾಯ್ ಮಾಡ್ತೇನೆ: ನಟಿ ಇಲಿಯಾನಾ

    ನಾನು ಸೆಕ್ಸ್ ಲೈಫ್ ಎಂಜಾಯ್ ಮಾಡ್ತೇನೆ: ನಟಿ ಇಲಿಯಾನಾ

    ಮುಂಬೈ: ಬಹುಭಾಷಾ ನಟಿ ಇಲಿಯಾನಾ ಡಿಕ್ರೂಸ್ ಕಾರ್ಯಕ್ರಮವೊಂದರಲ್ಲಿ ಸೆಕ್ಸ್ ಲೈಫ್ ಬಗ್ಗೆ ಹೇಳಿಕೆಯೊಂದು ನೀಡಿದ್ದು, ಇದೀಗ ಅದು ಸಾಕಷ್ಟು ಚರ್ಚೆಯಾಗುತ್ತಿದೆ.

    ಇತ್ತೀಚೆಗೆ ಇಲಿಯಾನಾ ಖ್ಯಾತ ಗಾಯಕ ಶಿಬಾನಿ ದಾಂಡೇಕರ್ ನಡೆಸಿಕೊಡುವ ‘ದಿ ಲವ್ ಲಾಫ್ ಲಿವ್ ಶೋ’ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಇಲಿಯಾನಾ ಸಿನಿಮಾಗಳ ಹೊರತಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಮಾತನಾಡಿದ್ದಾರೆ.

    ಈ ಹಿಂದೆ ಇಲಿಯಾನಾ ನೀಡಿದ ಒಂದು ಹೇಳಿಕೆಯನ್ನು ಗಾಯಕ ಶಿಬಾನಿ ನೆನಪಿಸುತ್ತಾರೆ. ಈ ಮೊದಲು ಇಲಿಯಾನಾ, ಸೆಕ್ಸ್ ಹಾಗೂ ಪ್ರೀತಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಶಿಬಾನಿ ಈ ಹೇಳಿಕೆಯನ್ನು ನೆನಪಿಸಿ ಇಲಿಯಾನಾ ಅವರಿಗೆ ಸೆಕ್ಸ್ ಲೈಫ್ ಬಗ್ಗೆ ಪ್ರಶ್ನಿಸುತ್ತಾರೆ.

    ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಇಲಿಯಾನಾ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಇಷ್ಟಪಟ್ಟ ಮತ್ತೊಂದು ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದೇನೆ. ನಾನು ಸೆಕ್ಸ್ ಲೈಫ್ ಎಂಜಾಯ್ ಮಾಡುತ್ತೇನೆ. ಇದನ್ನು ವರ್ಕೌಟ್ ರೀತಿ ತೆಗೆದುಕೊಳ್ಳುತ್ತೇನೆ. ನನಗೆ ಇದು ಸರಿ ಎನಿಸುವುದಿಲ್ಲ ಎಂದರು.

    ಬಳಿಕ ತಮ್ಮ ಮಾತಿನ ಬಗ್ಗೆ ಇಲಿಯಾನಾ ವಿವರಣೆ ನೀಡಿದ್ದಾರೆ. ನನ್ನ ಪ್ರಕಾರ ನೀವು ಸೆಕ್ಸ್ ಲೈಫ್ ಎಂಜಾಯ್ ಮಾಡಬೇಕು. ಆದರೆ ಅದಕ್ಕೆ ಸ್ವಲ್ಪ ಭಾವನೆಗಳು ಇರಬೇಕಾಗುತ್ತದೆ. ನೀವು ಪ್ರೀತಿಯಲ್ಲಿದ್ದಾಗ ದೈಹಿಕ ಸಂಪರ್ಕ ಬೆಳೆಸುವುದನ್ನು ಇಷ್ಟಪಡುತ್ತೀರಿ. ಏಕೆಂದರೆ ಇದರಿಂದ ಎರಡು ಆತ್ಮಗಳು ಒಂದಾಗುತ್ತದೆ ಎಂದು ಇಲಿಯಾನಾ ತಿಳಿಸಿದ್ದಾರೆ.

    ಸದ್ಯ ಇಲಿಯಾನಾ `ಪಾಗಲ್‍ಪಂತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಜಾನ್ ಅಬ್ರಾಹಂ, ಅನಿಲ್ ಕಪೂರ್, ಅರ್ಷದ್ ವಾರ್ಸಿ ಹಾಗೂ ನಟಿ ಕೃತಿ ಕರಬಂಧ ಅಭಿನಯಿಸುತ್ತಿದ್ದಾರೆ. ನವೆಂಬರ್ 22ರಂದು ಈ ಚಿತ್ರ ಬಿಡುಗಡೆ ಆಗಲಿದೆ.

  • ನಾನು ಸಿಕ್ಕಾಪಟ್ಟೆ ಕುಡಿಯುತ್ತಿದ್ದೆ, ವಿಸ್ಕಿ ವ್ಯಸನಿಯಾಗಿದ್ದೆ: ಶ್ರುತಿ ಹಾಸನ್

    ನಾನು ಸಿಕ್ಕಾಪಟ್ಟೆ ಕುಡಿಯುತ್ತಿದ್ದೆ, ವಿಸ್ಕಿ ವ್ಯಸನಿಯಾಗಿದ್ದೆ: ಶ್ರುತಿ ಹಾಸನ್

    ಚೆನ್ನೈ: ಕಾಲಿವುಡ್ ನಟಿ ಶ್ರುತಿ ಹಾಸನ್ ಅವರು ಎರಡು ವರ್ಷ ಸಿಕ್ಕಾಪಟ್ಟೆ ಕುಡಿಯುತ್ತಿದ್ದೆ ಎಂಬ ಹೇಳಿಕೆ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

    ಶ್ರುತಿ ಹಾಸನ್ ಅವರಿಗೆ ಆರೋಗ್ಯ ಸರಿಯಿಲ್ಲ, ಹೀಗಾಗಿ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಈ ಬಗ್ಗೆ ಮಾತನಾಡಿದ ಶ್ರುತಿ, “ನಾನು ಸಿಕ್ಕಾಪಟ್ಟೆ ಕುಡಿಯುತ್ತಿದ್ದೆ. ಹೀಗಾಗಿ ಆರೋಗ್ಯ ಕೈಕೊಟ್ಟಿತ್ತು” ಎಂದು ಸ್ಪಷ್ಟನೆ ನೀಡಿದ್ದಾರೆ. ಶ್ರುತಿ ಅವರ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

    ಟಾಲಿವುಡ್ ನಟಿ ಮಂಚು ಲಕ್ಷ್ಮಿ ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರುತಿ ಭಾಗವಹಿಸಿ, “ನಾನು ವಿಸ್ಕಿ ಬಾಟಲಿಗೆ ವ್ಯಸನಿಯಾಗಿದ್ದೆ. ಎರಡು ವರ್ಷ ಸಿಕ್ಕಾಪಟ್ಟೆ ಕುಡಿಯುತ್ತಿದ್ದೆ. ಹೀಗಾಗಿ ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ಆದರೆ ಈಗ ಎಲ್ಲವನ್ನು ನಿಲ್ಲಿಸಲು ನಿರ್ಧರಿಸಿದ್ದೇನೆ. ಜೊತೆಗೆ ನನ್ನ ಜೀವನದಲ್ಲಿ ಹೊಸ ಬದಲಾವಣೆಯಾಗಿದೆ” ಎಂದು ಹೇಳಿದ್ದಾರೆ.

    ನಾನು ಅನಾರೋಗ್ಯದಿಂದ ಬಳಲುತ್ತಿದ್ದದ್ದು ಯಾರಿಗೂ ತಿಳಿದಿಲ್ಲ. ಇದು ನನ್ನ ವೈಯಕ್ತಿಕ ವಿಷಯವಾಗಿದ್ದರಿಂದ ಎಂದು ನನ್ನ ಸ್ನೇಹಿತರಿಗೂ ಹೇಳಿಲ್ಲ. ಕೊನೆಗೆ ನಾನು ಚಿಕಿತ್ಸೆಗೆ ಪಡೆದು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಯಿತು. ಇದರಿಂದ ನಾನು ಸಿನಿಮಾಗಳಿಂದ ದೂರವಾದೆ. ಸದ್ಯಕ್ಕೆ ವೃತ್ತಿ ಬದುಕಿನ ಕಡೆಗೆ ದೃಷ್ಟಿ ಹರಿಸಿದ್ದೇನೆ ಎಂದು ಹೇಳಿದ್ದಾರೆ

    ಶ್ರುತಿ ಹಾಸನ್ ಕೊನೆಯದಾಗಿ `ಕಾಟಮರಾಯುಡು’ ಸಿನಿಮಾದಲ್ಲಿ ನಟಿಸಿದ್ದರು. ಈಗ ನಟ ರವಿತೇಜ ಸಿನಿಮಾ ಮೂಲಕ ರೀ-ಎಂಟ್ರಿ ಕೊಡುತ್ತಿದ್ದಾರೆ. ಇದೇ ವೇಳೆ ತಮ್ಮ ಗೆಳೆಯ ಮೈಕೇಲ್ ಕೋರ್ಸೆಲ್ ಜೊತೆಗಿನ ಸಂಬಂಧ ಮುರಿದುಬಿದ್ದ ಬಗ್ಗೆಯೂ ಮಾತನಾಡಿದ್ದಾರೆ.

  • ಎಲ್ಲರ ಮುಂದೆ ರಣ್‌ವೀರ್‌ಗೆ ಬೈದ ಅನುಷ್ಕಾ- ಕ್ಷಮೆ ಕೇಳಿದ ನಟ: ವಿಡಿಯೋ

    ಎಲ್ಲರ ಮುಂದೆ ರಣ್‌ವೀರ್‌ಗೆ ಬೈದ ಅನುಷ್ಕಾ- ಕ್ಷಮೆ ಕೇಳಿದ ನಟ: ವಿಡಿಯೋ

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಾರ್ಯಕ್ರಮವೊಂದರಲ್ಲಿ ನಟ ರಣ್‌ವೀರ್‌ಗೆ ಎಲ್ಲರ ಮುಂದೆ ಬೈದಿದ್ದಾರೆ. ಬಳಿಕ ರಣ್‍ವೀರ್, ಅನುಷ್ಕಾ ಬಳಿ ಕ್ಷಮೆ ಕೇಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಇತ್ತೀಚೆಗೆ ಅನುಷ್ಕಾ ಶರ್ಮಾ ಹಾಗೂ ರಣ್‍ವೀರ್ ಸಿಂಗ್ ‘ಎಲ್ ಬ್ಯೂಟಿ ಅವಾರ್ಡ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಣ್‍ವೀರ್ ಅವರು ವೇದಿಕೆ ಮೇಲೆ ನಿಂತು ಯಶಸ್ಸಿನ ಅರ್ಥ ಮತ್ತು ಬೇರೆ ಬೇರೆ ಜನರಿಗೆ ಅದು ಹೇಗೆ ಮಹತ್ವ ಆಗುತ್ತದೆ ಎಂದು ಮಾತನಾಡುತ್ತಾರೆ. ಬಳಿಕ ಕೈಯಲ್ಲಿ ಮೈಕ್ ಹಿಡಿದುಕೊಂಡು ವೇದಿಕೆಯಿಂದ ಇಳಿದು ಅನುಷ್ಕಾ ಅವರ ಬಳಿ ಹೋಗುತ್ತಾರೆ. ಈ ಬಗ್ಗೆ ಬ್ಯೂಟಿಫುಲ್ ಹಾಗೂ ಟ್ಯಾಲೆಂಟೆಡ್ ಅನುಷ್ಕಾ ಶರ್ಮಾ ಅವರ ಬಳಿ ಕೇಳೋಣ ಎಂದು ಹೇಳುತ್ತಾರೆ.

    ರಣ್‍ವೀರ್ ಮೈಕ್ ತೆಗೆದುಕೊಂಡು ಹೋಗುತ್ತಿದ್ದಂತೆ ಅನುಷ್ಕಾ, “ರಣ್‍ವೀರ್, ನೀನು ಈ ಕಾರ್ಯಕ್ರಮದ ನಿರೂಪಕ ಅಲ್ಲ” ಎಂದು ಹೇಳುತ್ತಾರೆ. ಇದನ್ನು ಕೇಳಿದ ತಕ್ಷಣ ರಣ್‍ವೀರ್ ‘ಸಾರಿ’ ಎಂದು ಹೇಳಿ ವೇದಿಕೆಗೆ ಹಿಂತಿರುಗುತ್ತಾರೆ. ಈ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗಿದೆ. ಅಲ್ಲದೆ ರಣ್‍ವೀರ್ ಅವರನ್ನು ಬೈದು ಅನುಷ್ಕಾ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ವಿಡಿಯೋಗೆ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ‘ಬ್ಯಾಂಡ್ ಭಾಜಾ ಭಾರತ್’ ಚಿತ್ರದ ಮೂಲಕ ರಣ್‍ವೀರ್ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾದಲ್ಲಿ ರಣ್‍ವೀರ್‍ಗೆ ಅನುಷ್ಕಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಮೂಲಕ ಇಬ್ಬರು ರಿಲೇಷನ್‍ಶಿಪ್‍ನಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದಾದ ಬಳಿಕ ಅನುಷ್ಕಾ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಮದುವೆಯಾದರೆ, ರಣ್‍ವೀರ್ ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಈಗ ನನಗೆ ಪ್ರಿಯಕರ ಬೇಕು: ನಟಿ ರಕುಲ್

    ಈಗ ನನಗೆ ಪ್ರಿಯಕರ ಬೇಕು: ನಟಿ ರಕುಲ್

    ಹೈದರಾಬಾದ್: ಟಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಈಗ ನನಗೆ ಪ್ರಿಯಕರ ಬೇಕು ಎಂದು ಹೇಳಿದ್ದಾರೆ.

    ಇತ್ತೀಚೆಗೆ ರಕುಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ರಿಲೇಷನ್‍ಶಿಪ್ ಬಗ್ಗೆ ಪ್ರಶ್ನಿಸಲಾಯಿತು. ಆಗ ಅವರು “ಈಗ ನನಗೆ ಪ್ರಿಯಕರ ಬೇಕು” ಎಂದಿದ್ದಾರೆ. ಈ ಮೂಲಕ ಅವರು ಮದುವೆಯಾಗುವ ಸೂಚನೆ ಕೊಟ್ಟಿದ್ದು, ಗೆಳೆಯನ ಹುಡುಕಾಟದಲ್ಲಿದ್ದಾರೆ.

    ಎಲ್ಲರೂ ನಾನು ರಿಲೇಷನ್‍ಶಿಪ್ ವಿಷಯದಲ್ಲಿ ದೂರವಿದ್ದೇನೆ ಎಂದುಕೊಂಡಿದ್ದಾರೆ. ಈ ವಿಚಾರ ತಿಳಿದು ನನಗೆ ಭೀತಿ ಉಂಟಾಯಿತು. ಹೀಗಾಗಿ ನಾನು ತುಂಬಾ ದಿನಗಳಿಂದ ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಈಗ ನಾನು ಒಬ್ಬಂಟಿ ಆಗಿದ್ದು, ನನ್ನ ಹುಡುಗನಿಗಾಗಿ ಹುಡುಕಾಟದಲ್ಲಿ ಇದ್ದೇನೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ರಕುಲ್ ಭೇಟಿ ಆಗುತ್ತಿದ್ದರು. ಆಗ ಇಬ್ಬರು ರಿಲೇಷನ್‍ಶಿಪ್‍ನಲ್ಲಿ ಇದ್ದಾರೆ ಎಂಬ ಗಾಸಿಪ್ ಟಿ-ಟೌನ್‍ನಲ್ಲಿ ಹರಿದಾಡುತ್ತಿತ್ತು. ಆಗ ನಾವಿಬ್ಬರೂ ಸ್ನೇಹಿತರಷ್ಟೇ ಎಂದು ರಕುಲ್ ಸ್ಪಷ್ಟನೆ ನೀಡಿದ್ದರು.

    ಸದ್ಯ ರಕುಲ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಕುಲ್ `ಮರ್ಜಾವಾ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕಮಲ್ ಹಾಸನ್-ಸಿದ್ಧಾರ್ಥ್ ಅಭಿನಯದ `ಇಂಡಿಯನ್ 2′ ಮತ್ತು ಶಿವ ಕಾರ್ತಿಕೇಯನ್ ಜೊತೆ ಇನ್ನೂ ಟೈಟಲ್ ನಿಗದಿಯಾಗದ ಸಿನಿಮಾಗಳ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ.

  • ನವರಾತ್ರಿಯ ಮೆರುಗು ಹೆಚ್ಚಿಸ್ತಿದೆ ಯುವದಸರಾ – ಬಾಲಿವುಡ್ ಗಾಯಕನ ಹಾಡಿಗೆ ವಿದ್ಯಾರ್ಥಿಗಳು ಫಿದಾ

    ನವರಾತ್ರಿಯ ಮೆರುಗು ಹೆಚ್ಚಿಸ್ತಿದೆ ಯುವದಸರಾ – ಬಾಲಿವುಡ್ ಗಾಯಕನ ಹಾಡಿಗೆ ವಿದ್ಯಾರ್ಥಿಗಳು ಫಿದಾ

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಕ್ಷರಶಃ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತದೆ. ಇದಕ್ಕೆ ಮೂಲಕ ಕಾರಣ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾ ವೇದಿಕೆ.

    ಎರಡನೇ ದಿನದ ಯುವ ದಸರಾ ವೇದಿಕೆ ಸಂಗೀತ ಹಾಗೂ ನೃತ್ಯ ಪ್ರಕಾರಗಳಿಂದ ಚಿಂದಿ ಮಾಡಿತು. ಕಾರ್ಯಕ್ರಮದ ಮೊದಲಿಗೆ ಕಾಲೇಜು ವಿದ್ಯಾರ್ಥಿಗಳ ಜಾನಪದ ನೃತಗಳು ಸಂಸ್ಕೃತಿ ಹಾಗೂ ಪರಂಪರೆಯ ವೈಭವವನ್ನು ಧರೆಗಿಳಿಸಿದರು. ನಂತರ ಗಾಯಕಿ ಸಂಗೀತ ರವೀಂದ್ರನಾಥ್ ಅವರ ಗಾಯನ ಯುವ ದಸರಾ ವೇದಿಕೆಗೆ ರಂಗು ತಂದಿತು. ಇದಾದ ಬಳಿಕ ಬಾಂಬೆ ಮತ್ತು ರಷ್ಯನ್ ಟೀಂ ಮಾಡಿದ ಡ್ಯಾನ್ಸ್ ಯುವಕರನ್ನು ಬೆರಗುಗೊಳಿಸುವುದರ ಜೊತೆಗೆ ಕುಣಿದು ಕುಪ್ಪಳಿಸುವಂತೆ ಮಾಡಿತು.

    ಇದಾದ ಬಳಿಕ ವೇದಿಕೆಗೆ ರಾಕ್ ಮ್ಯೂಸಿಕ್ ಹಾಗೂ ಮೆಲೋಡಿ ಸಾಂಗ್ ಮೂಲಕ ಎಂಟ್ರಿ ಕೊಟ್ಟ ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಗಾಯನಕ್ಕೆ ಎಲ್ಲರೂ ಫುಲ್ ಫಿದಾ ಆದರು. ಮೋಹಿತ್ ಚೌಹಾಣ್ ರಾಕ್ ಮ್ಯೂಸಿಕ್ ಹಾಡುತ್ತಿದ್ರೆ, ಯುವಕರು ಕುಣಿದು ಕುಪ್ಪಳಿಸಿದ್ದರು. ರೊಮ್ಯಾಂಟಿಕ್ ಸಾಂಗ್ ಹೇಳಿದಾಗ ತಲೆದೂಗಿಸಿ ಸಂಗೀತದ ಮಜಲನ್ನು ಆನಂದಿಸಿದರು.

    ಎರಡನೇ ದಿನದ ಯುವ ದಸರಾ ಎಲ್ಲಾ ಪ್ರಕಾರದ ಸಂಗೀತ ಹಾಗೂ ನೃತ್ಯಗಳನ್ನು ವೇದಿಕೆ ಮೇಲೆ ಚೆಲ್ಲುವ ಮೂಲಕ ಸಾಂಸ್ಕೃತಿಕ ವೈಭವದ ಕಲೆಯನ್ನು ಚೆಲ್ಲಿತು. ಇಂದು ಯುವ ದಸರಾ ವೇದಿಕೆಯಲ್ಲಿ ಗಾಯಕಿ ಮೊನಾಲಿ ಠಾಕೂರ್‍ರ ಗಾಯನವಿದ್ದು, ಇದಕ್ಕಾಗಿ ಯುವಸ್ತೋಮ ಕಾದು ಕುಳಿತಿದೆ.