Tag: ಕಾರವಾರ

  • ಭಾರತೀಯ ನೌಕಾದಳಕ್ಕೆ ಹೊಸ ಕ್ಷಿಪ್ರ ರಕ್ಷಣಾ ನೌಕೆ ಸಮರ್ಪಣೆ

    ಭಾರತೀಯ ನೌಕಾದಳಕ್ಕೆ ಹೊಸ ಕ್ಷಿಪ್ರ ರಕ್ಷಣಾ ನೌಕೆ ಸಮರ್ಪಣೆ

    ಕಾರವಾರ: ಪಶ್ಚಿಮ ಕರಾವಳಿಯ ಮುಂಬೈನಲ್ಲಿ ಸಮುದ್ರ ಮೂಲಕ ಉಗ್ರಗಾಮಿಗಳು ತಾಜ್ ಹೋಟಲ್ ಮೇಲೆ ಆಕ್ರಮಣ ಮಾಡಿದ ನಂತರ ನೌಕಾದಳದವರು ಎಚ್ಚೆತ್ತುಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೆ ಕೇಂದ್ರ ಗುಪ್ತದಳ ಕಾರವಾರ ಕದಂಬ ನೌಕಾ ನೆಲೆಗೆ ಉಗ್ರಗಾಮಿಗಳು ಟಾರ್ಗೆಟ್ ಮಾಡಿರುವ ಕುರಿತು ವರದಿ ನೀಡಿದ ನಂತರ ಕ್ಷಿಪ್ರ ಕಾರ್ಯಾಚರಣೆಗೆ ಸಜ್ಜಾಗಿದ್ದು ಇಂದು ಹೊಸ ಕ್ಷಿಪ್ರ ಕಾರ್ಯಾಚರಣೆಗಾಗಿ ನೌಕೆಯೊಂದು ಸೇರ್ಪಡೆಯಾಗಿದೆ.

    ಕಾರವಾರ ತಾಲೂಕಿನ ಅರಗ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಕರ್ನಾಟಕದ ನೌಕಾದಳದ ವೈಸ್ ಅಡ್ಮಿರಲ್ ಗಿರೀಶ್ ಲೂಥ್ರಾ ಅವರು ಹೊಸ ಕ್ಷಿಪ್ರ ರಕ್ಷಣಾ ನೌಕೆ `ಐಎನ್‍ಎಸ್ ತಿಲ್ಲಾಂಚಾಂಗ್’ ಸಮರ್ಪಣೆ ಮಾಡಿದರು.

    ಏನಿದರ ವಿಶೇಷತೆ?:
    ಅರಬ್ಬಿ ಸಮುದ್ರದ ಕರಾವಳಿಯ ಭಾಗದಲ್ಲಿ ಶತ್ರುಗಳನ್ನ ಹಿಮ್ಮೆಟಿಸಲು ಸಜ್ಜಾಗಿರುವ ಐಎನ್‍ಎಸ್ ತಿಲ್ಲಾಂಚಾಂಗ್ ಕೋಲ್ಕತ್ತಾದ ಗಾರ್ಡನ್ ರೀಚ್ ಹಡಗು ನಿರ್ಮಾಣ ಕೇಂದ್ರದಲ್ಲಿ ನಿರ್ಮಾಣವಾಗಿದೆ. 48.9 ಮೀಟರ್ ಉದ್ದವಿರುವ ಈ ನೌಕೆ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತೆ. ಅಂಡಮಾನ್ ನಿಕೋಬಾರ ಬಳಿ ಇರುವ ತಿಲ್ಲಾಂಚಾಂಗ್ ಎಂಬ ದ್ವೀಪದ ಹೆಸರನ್ನ ಈ ನೌಕೆಗೆ ಇಡಲಾಗಿದೆ.

    ನೌಕೆ ಚಿಕ್ಕದಾಗಿದ್ರೂ 50 ಜನ ಸಿಬ್ಬಂದಿಗಳು ಅರಾಮವಾಗಿ ಕಾರ್ಯನಿರ್ವಹಿಸಬಹುದಾಗಿದೆ. ಒಂದು ಬಾರಿ ಸಮುದ್ರದಲ್ಲಿ ಸಂಚರಿಸಲು ಪ್ರಾರಂಭಿಸಿದ್ರೆ ಒಂದು ವಾರದಷ್ಟು ಕಾಲ ಅಲ್ಲಿಯೇ ಇರುವಷ್ಟು ಸಾಮರ್ಥ್ಯ ಇದಕ್ಕಿದ್ದು ಸುಸಜ್ಜಿತ ಅಡುಗೆ ಮನೆ, ಡೈನಿಂಗ್ ಹಾಲ್, ರೆಸ್ಟ್ ರೂಮ್ ಸೇರಿದಂತೆ ಎರಡು ರಬ್ಬರ್ ಬೋಟ್ ಗಳು ಇದರಲ್ಲಿವೆ.

    ಇನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಲು ಒಳ ಭಾಗದಿಂದ ವೀಕ್ಷಣೆಗಾಗಿ ಸಿ.ಸಿ ಟಿ.ವಿ ಜೊತೆಯಲ್ಲಿ 30 ಎಂ.ಎಂ. ಮೈನ್ ಗನ್, ಸಣ್ಣ ಹಾಗೂ ದೊಡ್ಡ ಮಿಷನ್ ಗನ್‍ಗಳು ಇದರಲ್ಲಿದ್ದು ಕರಾವಳಿ ಭದ್ರತೆಗಳಿಗಲ್ಲದೇ, ಪ್ರಕೃತಿ ವಿಕೋಪ ಮುಂತಾದ ಕಾರ್ಯಗಳಿಗೂ ಈ ನೌಕೆಯನ್ನು ಬಳಸಿಕೊಳ್ಳಬಹುದು. ಈ ಹೊಸ ನೌಕೆಯನ್ನು ಕರ್ನಾಟಕ ನೇವೆಲ್ ಪ್ಲಾಗ್ ಆಫೀಸರ್ ಕಮಾಂಡೆಂಡ್ ನೋಡಿಕೊಳ್ಳಲಿದ್ದು ಇದರ ನೇತೃತ್ವವನ್ನು ಸಿ.ಡಿ.ಆರ್. ಅದಿತ್ ಪಾಟ್ನಾಯಕ್ ವಹಿಸಿದ್ದಾರೆ. ಕಾರವಾರದ ಕದಂಬ ನೌಕಾ ನೆಲೆಯಿಂದಲೇ ಈ ಸ್ಪೀಡ್ ವಾಟರ್ ಜಟ್ ನೌಕೆ ಕಾರ್ಯ ನಿರ್ವಹಿಸಲಿದೆ.

     

     

     

     

     

     

     

     

     

     

     

  • ಕಾರವಾರ: ಮಲೆನಾಡಿನ ಭಾಗದ ಬೆಲ್ಲ ಉತ್ಪಾದಕರಿಗೆ ಬಂಪರ್ ಲಾಟರಿ

    ಕಾರವಾರ: ಮಲೆನಾಡಿನ ಭಾಗದ ಬೆಲ್ಲ ಉತ್ಪಾದಕರಿಗೆ ಬಂಪರ್ ಲಾಟರಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಭಾಗದ ಬೆಲ್ಲ ಉತ್ಪಾದಕರಿಗೆ ಬಂಪರ್ ಲಾಟರಿ ಹೊಡೆದಿದೆ. ಸದಾ ದರ ಇಳಿತದಿಂದ ಕಂಗಾಲಾಗಿದ್ದ ಬೆಲ್ಲ ಉತ್ಪಾದಕರಿಗೆ ಈ ಬಾರಿ ಬಹು ಬೇಡಿಕೆ ಬಂದಿದ್ದು, ಉತ್ಪಾದಕರ ಮೊಗದಲ್ಲಿ ಸಿಹಿ ನಗುವನ್ನು ಮೂಡಿಸಿದೆ.

    ಹೌದು. ಕಳೆದ ಬಾರಿ 25 ಕೆಜಿ ಡಬ್ಬದ ಬೆಲ್ಲಕ್ಕೆ 500 ರಿಂದ 800 ರೂಪಾಯಿ ಕನಿಷ್ಠ ದರ ನಿಗದಿಯಾಗಿತ್ತು. ಹೀಗಾಗಿ ಕಷ್ಟಪಟ್ಟು ಬೆಳದ ರೈತರು ಲಾಭ ಸಿಗದೆ ಅಲ್ಪ ಮಟ್ಟಕ್ಕೆ ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ರು. ಆದರೆ ಈಗ 25 ಕೆಜಿ ಬೆಲ್ಲಕ್ಕೆ 2 ಸಾವಿರ ರೂ. ಏರಿಕೆಯಾಗಿದ್ದು, 2600 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ.

    ಸದರಿ ಮಾರುಕಟ್ಟೆಯಲ್ಲಿ ಸಿಗುವ 25 ಕೆಜಿ ಅಚ್ಚಿನ ಬೆಲ್ಲ 1200 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಈ ಡಬ್ಬದ ಬೆಲ್ಲಕ್ಕೆ ಮಾತ್ರ ಶುಕ್ರದೆಸೆ ತಿರುಗಿದೆ.

    ಬೆಲೆ ಏರಿಕೆಯಾಗಿದ್ದು ಯಾಕೆ?
    ಕಬ್ಬು ಕಟಾವು ಮಾಡಲು ಒಬ್ಬ ಕೆಲಸಗಾರನಿಗೆ 500 ರೂ. ಕೂಲಿ ನೀಡಬೇಕು. ಇಷ್ಟು ಕೂಲಿ ನೀಡಿದರೂ ಕೆಲಸ ಮಾಡಲು ಕೆಲಸಗಾರರು ಸಿಗುತ್ತಿಲ್ಲ. ಜೊತೆಗೆ ಕಬ್ಬನ್ನು ಅರೆಯಲು ಗಾಣ ಮುಂತಾದ ಕೆಲಸಗಳಿಗೆ ಪ್ರತಿ 25 ಕೆ.ಜಿ. ಡಬ್ಬಕ್ಕೆ 1300 ರೂಪಾಯಿ ತಗಲುತ್ತದೆ. ಅಷ್ಟೇ ಅಲ್ಲದೇ ಬೆಲ್ಲ ತಯಾರಿಸಲು ಲೋಡ್ ಗಟ್ಟಲೆ ಕಟ್ಟಿಗೆ ಬೇಕಾಗುತ್ತದೆ. ಈ ಕಟ್ಟಿಗೆ ಹೊಂದಿಸುವುದೇ ರೈತನಿಗೊಂದು ದೊಡ್ಡ ತಲೆನೋವು. ಹೀಗಾಗಿ ಮೈತುಂಬ ಕೆಲಸವಿರುವ ಈ ಬೆಲ್ಲ ಉತ್ಪಾದನೆಗೆ ಮಲೆನಾಡಿನ ರೈತರು ಮನಸ್ಸು ಮಾಡುತ್ತಿಲ್ಲ. ಇನ್ನು ಈ ಬಾರಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದ ಮಳೆ ಸುರಿದಿದ್ದು ಕಬ್ಬು ಬೆಳೆ ನಷ್ಟವಾಗಿ ಹೋಗಿದೆ. ಈ ಎಲ್ಲ ಕಾರಣದಿಂದಾಗಿ ಬೆಲ್ಲದ ಬೆಲೆಯಲ್ಲಿ ಏರಿಕೆಯಾಗಿದೆ.

    ಮಲೆನಾಡಿನ ಬೆಲ್ಲ ಹೇಗಿರುತ್ತದೆ?: ಕರ್ನಾಟಕದಲ್ಲಿ ಸಂಪ್ರದಾಯಿಕ ಬೆಲ್ಲ ಉತ್ಪಾದನೆಯಲ್ಲಿ ತನ್ನದೇ ಆದ ಸ್ಥಾನವನ್ನ ಗಳಿಸಿಕೊಂಡಿರುವುದು ಮಲೆನಾಡಿನ ಡಬ್ಬಿ ಬೆಲ್ಲ. ಹೆಚ್ಚಾಗಿ ಡಬ್ಬಿಯಲ್ಲಿ ಶೇಖರಿಸಿ ಇಡುವುದರಿಂದ ಇದಕ್ಕೆ ಡಬ್ಬಿ ಬೆಲ್ಲ ಎಂಬ ಹೆಸರು ಬಂದಿದೆ. ಈ ಬೆಲ್ಲ ಹೆಚ್ಚಾಗಿ ಸಾವಯವ ಪದ್ದತಿಯಲ್ಲಿ ತಯಾರಾಗುತ್ತದೆ. ನೋಡಲು ಕಪ್ಪು ಮಿಶ್ರಿತ ಬಣ್ಣದಲ್ಲಿದ್ದು ಹರಳು ಹಾಗೂ ಜೇನಿನಂತೆ ತೆಳುವಾಗಿರುತ್ತದೆ. ಅಚ್ಚಿನ ಬೆಲ್ಲಕ್ಕಿಂತ ಹೆಚ್ಚು ಸಿಹಿಯಾಗಿದ್ದು ಸುಣ್ಣದ ಮಿಶ್ರಣ ಅತ್ಯಲ್ಪ. ಜೊತೆಗೆ ಡಬ್ಬಿ ಬೆಲ್ಲ ನಾಲ್ಕೈದು ವರ್ಷ ಹಾಳಾಗುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಸೇರಿದಂತೆ ವಿದೇಶಗಳಲ್ಲಿಯೂ ಡಬ್ಬಿ ಬೆಲ್ಲಕ್ಕೆ ವಿಶೇಷ ಬೇಡಿಕೆಯಿದೆ.

    ಕಳೆದ ಬಾರಿ ಬೆಲ್ಲ ತಯಾರಿಸಿ ಕೈ ಸುಟ್ಟುಕೊಂಡಿದ್ದ ಉತ್ಪಾದಕರು ತಮ್ಮ ಮನೆಗಳಿಗೆ ಬೇಕಾಗುವಷ್ಟು ಮಾತ್ರ ತಯಾರಿಸಿಕೊಂಡಿದ್ದಾರೆ. ಹೀಗಾಗಿ ಮಲೆನಾಡಿನ ಬೆಲ್ಲ ಅಥವಾ ಡಬ್ಬಿ ಬೆಲ್ಲ ಗ್ರಾಹಕರ ಕೈಗೆ ಸುಲಭವಾಗಿ ಸಿಗುತ್ತಿಲ್ಲ. ಆದರೆ ಯಾರೆಲ್ಲ ತಯಾರಿಸಿ ಮಾರಾಟ ಮಾಡುತ್ತಿದ್ದಾರೋ ಅವರೆಲ್ಲರಿಗೆ ಈಗ ಬಂಪರ್ ಲಾಟರಿ ಹೊಡೆದಿದೆ.

     

  • ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿಯಿತು ಬೋಟ್!

    ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿಯಿತು ಬೋಟ್!

    ಕಾರವಾರ: ಆಕಸ್ಮಿಕವಾಗಿ ಅರಬಿ ಸಮುದ್ರದಲ್ಲಿದ್ದ ಬೋಟ್‍ಗೆ ಬೆಂಕಿ ತಗುಲಿ ಬೋಟ್ ಹೊತ್ತಿ ಉರಿದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ಘಟನೆ ನಡೆದಿದೆ.

    ಖಾದರ್ ಸಾಬ್ ಅಬ್ದುಲ್ ರಜಾಕ್ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು, ಅಡುಗೆ ತಯಾರಿಸುವ ವೇಳೆ ಬೋಟ್‍ನ ಡಿಸೇಲ್ ಟ್ಯಾಂಕ್‍ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದಾಗಿ ಬೋಟ್‍ನಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಈ ಬೋಟ್‍ನಿಂದ ಅನತಿ ದೂರದಲ್ಲಿದ್ದ ಮತ್ತೊಂದು ಬೋಟ್‍ನಲ್ಲಿದ್ದವರು ಬೆಂಕಿಗಾಹುತಿಯಾಗುತ್ತಿದ್ದ ಬೋಟ್‍ನತ್ತ ಧಾವಿಸಿದ್ದಾರೆ. ಈ ವೇಳೆ ಬೋಟ್‍ನಲ್ಲಿದ್ದ ಇಬ್ಬರನ್ನ ರಕ್ಷಿಸಲಾಗಿದೆ.

    ಅಲ್ಲದೆ ಇನ್ನೊಂದು ಬೋಟ್‍ನ ಸಹಾಯದಿಂದ ಬೆಂಕಿಯನ್ನು ನಂದಿಸುವ ಕಾರ್ಯವನ್ನೂ ಮಾಡಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=vY4lPJ-cl38&feature=youtu.be

  • ಆಪ್ತರ ಆಸ್ತಿ ರಕ್ಷಣೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯ ಮಾರ್ಗವನ್ನೇ ಬದಲಿಸಿದ ಸಚಿವ ದೇಶಪಾಂಡೆ?

    ಕಾರವಾರ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ ದೇಶಪಾಂಡೆಯವರು ತಮ್ಮ ಆಪ್ತರ ಮನೆಗಳನ್ನ ಉಳಿಸಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದುಹೋಗುವ ಮಂಗಳೂರಿನಿಂದ ಗೋವಾದವರೆಗಿನ ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪತ ರಸ್ತೆಯ ಮಾರ್ಗವನ್ನ ಬದಲಿಸಿದ ಆರೋಪ ಕೇಳಿಬಂದಿದೆ.

    ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಚತುಷ್ಪಥ ರಸ್ತೆ ಅಗಲೀಕರಣ ಕಾಮಗಾರಿ ನೆಡೆಯುತ್ತಿದೆ. ಜಿಲ್ಲೆಯ ಕುಮಟಾದ ಮಾನಿರ್ ನಿಂದ ಹಂದಿಗೋಣದವರೆಗೆ ಬೈಪಾಸ್ ನಿರ್ಮಾಣ ಮಾಡುತ್ತಿರುವ ಬಗ್ಗೆ ಸ್ಥಳಿಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಕೇಂದ್ರ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿಗದಿ ಮಾಡಿದಂತೆ ರಸ್ತೆ ಅಗಲೀಕರಣ ಕಾಮಗಾರಿ ನೆಡೆಯುತಿತ್ತು. ಆದ್ರೆ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಕುಮಟಾ ಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಪ್ರಾಧಿಕಾರ ಹೊರಟಿದ್ದು ಇದರಿಂದಾಗಿ ಮೂರು ಸಾವಿರ ಜನರು ತಮ್ಮ ಮನೆ ಹಾಗೂ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.

    ಈ ಹಿಂದೆ ನಿಗದಿ ಮಾಡಿದ ಸ್ಥಳದಲ್ಲಿ ಸಾಕಷ್ಟು ಜಾಗಗಳಿದ್ದರೂ ಈ ಭಾಗದಲ್ಲಿ ಸಚಿವರ ಆಪ್ತರ ಹೋಟೆಲ್ ಮತ್ತು ಮನೆಗಳಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಇವುಗಳ ರಕ್ಷಣೆಗೆ ನಿಲ್ಲುವ ಮೂಲಕ ಸಾವಿರಾರು ಬಡ ಜನರನ್ನ ನಿರಾಶ್ರಿತರನ್ನಾಗಿ ಮಾಡುತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈಗಾಗಲೇ ಹೆದ್ದಾರಿ ಪ್ರಾಧಿಕಾರ ವಶಪಡಿಸಿಕೊಂಡ ಜಾಗದಲ್ಲಿ ಚತುಷ್ಪತ ರಸ್ತೆ ಕಾಮಗಾರಿ ನೆಡೆಸಲು ಅವಕಾಶಗಳಿವೆ. ಈ ಬಗ್ಗೆ ಸ್ವತಃ ಪ್ರಾಧಿಕಾರ ಹೆಚ್ಚಿನ ಸ್ಥಳವಿರವ ಬಗ್ಗೆ ಮಾಹಿತಿ ನೀಡಿದೆ. ಆದ್ರೆ ಕುಮಟಾ ತಾಲೂಕಿನ ಹಂದಿಗೋಣ, ಸೋಕನಮಕ್ಕಿ, ಬಗ್ಗೋಣ ಸೇರಿದಂತೆ ಒಟ್ಟು ಎಂಟು ಗ್ರಾಮಗಳನ್ನೊಳಗೊಂಡ ಈ ಭಾಗದಲ್ಲಿ ಬೈಪಾಸ್ ನಿರ್ಮಿಸಲು ಪ್ರಾಧಿಕಾರ ಹೊಸದಾಗಿ ಸರ್ವೇಗೆ ಮುಂದಾಗಿದೆ. ಹೀಗಾಗಿ ಇದನ್ನ ಕೂಡಲೇ ಕೈಬಿಟ್ಟು ಹಿಂದೆ ಗುರುತಿಸಿದ ಜಾಗದಲ್ಲೇ ರಸ್ತೆ ನಿರ್ಮಾಣ ಮಾಡಿ ಈ ಗ್ರಾಮದ ರೈತರನ್ನ ರಕ್ಷಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

    ಈ ಹಿಂದೆ ಗುರುತಿಸಲ್ಪಟ್ಟ ಜಾಗದಲ್ಲಿ ಹೋಟೆಲ್ ಸೇರಿದಂತೆ ವಾಣಿಜ್ಯ ಕಟ್ಟಡಗಳಿವೆ. ಇವು ಸಚಿವರ ಆಪ್ತ ವಲಯದವರದ್ದಾಗಿದೆ. ಹೀಗಾಗಿ ತಮ್ಮ ಪ್ರಭಾವ ಬಳಸಿ ಸಚಿವರಿಗೆ ಒತ್ತಡ ತಂದು ಹೆದ್ದಾರಿಯ ಮಾರ್ಗವನ್ನ ಬದಲಿಸಿದ್ದಾರೆಂಬುದು ಸ್ಥಳೀಯರ ಆರೋಪ. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಮನವಿ ಕೂಡ ಮಾಡಿಕೊಂಡಿದ್ದಾರೆ ಅಲ್ಲಿನ ಗ್ರಾಮಸ್ಥರು. ಜಿಲ್ಲಾಡಳಿತ ಮುಂದೆ ಯಾವ ಕ್ರಮ ಕೈಗೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.