Tag: ಕಾಫಿ ಶಾಪ್

  • ಬೆಂಗಳೂರಲ್ಲಿ ಮಳೆ ಅವಾಂತರ – ಡೆಸ್ಕ್‌ಟಾಪ್ ಹೊತ್ತೊಯ್ದು ಕಾಫಿ ಶಾಪ್‍ನೇ ಆಫೀಸ್‌ ಮಾಡ್ಕೊಂಡ

    ಬೆಂಗಳೂರಲ್ಲಿ ಮಳೆ ಅವಾಂತರ – ಡೆಸ್ಕ್‌ಟಾಪ್ ಹೊತ್ತೊಯ್ದು ಕಾಫಿ ಶಾಪ್‍ನೇ ಆಫೀಸ್‌ ಮಾಡ್ಕೊಂಡ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತಗೊಂಡು ಜನ ಪರದಾಡುತ್ತಿದ್ದಾರೆ. ಹೀಗಿದ್ದರೂ ಜನ ತಮ್ಮ ಜೀವನ ಸಾಗಿಸಲು ಒಂದಲ್ಲ ಒಂದು ಕಸರತ್ತು ನಡೆಸುತ್ತಲೇ ಇದ್ದಾರೆ. ಅನೇಕ ಮಂದಿ ತಮ್ಮ ಸೃಜನಾಶೀಲತೆಯಿಂದಾಗಿ ಕೆಲಸ ಮಾಡುತ್ತಿದ್ದಾರೆ.

    ಇದಕ್ಕೆ ಸಾಕ್ಷಿ ಎಂಬಂತೆ ಕಾಫಿ ಶಾಪ್‍ಗೆ ವ್ಯಕ್ತಿಯೊಬ್ಬ ಡೆಸ್ಕ್‌ಟಾಪ್ ಅನ್ನು ತೆಗೆದುಕೊಂಡು ಬಂದು ಕೆಲಸ ಮಾಡಿದ್ದಾನೆ. ಈ ಫೋಟೋವನ್ನು ಕಾಫಿ ಶಾಪ್‍ನ ಸಿಬ್ಬಂದಿ ಸಂಕೇತ್ ಸಾಹು ಅವರು ಸೆಪ್ಟೆಂಬರ್ 7ರಂದು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ಮಾಜಿ ಮೇಯರ್

    ಫೋಟೋ ಜೊತೆಗೆ ತಮ್ಮ ಆಫೀಸ್‌ ಜಲಾವೃತಗೊಂಡಿದ್ದರಿಂದ ಗುಂಪೊಂದು ಬೆಂಗಳೂರಿನ ಥರ್ಡ್ ವೇವ್ ಕಾಫಿ ಶಾಪ್‍ನಲ್ಲಿ ಟೇಬಲ್ ಮೇಲೆ ಡೆಸ್ಕ್‌ಟಾಪ್ ಸೆಟಪ್ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಮಳೆಗಾಲದ ಅಧಿವೇಶನ- ಕಾಂಗ್ರೆಸ್ ವಿರುದ್ಧ ರೀ ಡೂ ಅಸ್ತ್ರಕ್ಕೆ ಬಿಜೆಪಿ ಸಿದ್ಧತೆ

    ಇದೀಗ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಾರೀ ಚರ್ಚೆ ನಡೆಯುತ್ತಿದ್ದು, ಅನೇಕ ಮಂದಿ ವ್ಯಕ್ತಿ ತನ್ನ ಡೆಸ್ಕ್‌ಟಾಪ್ ಮತ್ತು ಸಿಪಿಯುವನ್ನು ಕಾಫಿ ಶಾಪ್‍ಗೆ ಹೊತ್ತೊಯ್ದಿದ್ದಾನೇ? ಬದಲಾಗಿ ಅವನು ಮನೆಯಿಂದಲೇ ಏಕೆ ಕೆಲಸ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಈತನಿಗೆ ಕೆಲಸ ಮಾಡುವ ವೇಳೆ ಸಾಕಷ್ಟು ಅನುಮಾನಗಳ ಬರಬಹುದು, ಕೆಲಸ ಮಾಡುವ ಸಾಮರ್ಥ್ಯವನ್ನು ಕಳೆದುಕೊಂಡಿರಬಹುದು ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯೂಟ್ಯೂಬ್ ನೋಡಿ ಅಪ್ರಾಪ್ತನಿಂದ ಕೆಫೆಯ ಪೇಮೆಂಟ್ ಸಿಸ್ಟಮ್ ಹ್ಯಾಕ್

    ಯೂಟ್ಯೂಬ್ ನೋಡಿ ಅಪ್ರಾಪ್ತನಿಂದ ಕೆಫೆಯ ಪೇಮೆಂಟ್ ಸಿಸ್ಟಮ್ ಹ್ಯಾಕ್

    – ದ್ವಿತೀಯ ಪಿಯುನಲ್ಲಿ ಶೇ.80 ಅಂಕ ಪಡೆದಿದ್ದ ವಿದ್ಯಾರ್ಥಿ

    ಮುಂಬೈ: ಅಪ್ರಾಪ್ತನೋರ್ವ ಯೂಟ್ಯೂಬ್ ವಿಡಿಯೋ ನೋಡಿ ಕೆಫೆಯ ಪೇಮೆಂಟ್ ಸಿಸ್ಟಮ್ ಹ್ಯಾಕ್ ಮಾಡಿದ್ದು, ಗ್ರಾಹಕರು ಕೆಫೆಗೆ ಪಾವತಿಸುವ ಹಣವನ್ನು ತನ್ನ ಖಾತೆಗೆ ಬರುವಂತೆ ಮಾಡುತ್ತಿದ್ದ ಪ್ರಕರಣ ಮುಂಬೈನಲ್ಲಿ ನಡೆದಿದೆ.

    17 ವರ್ಷದ ವಿದ್ಯಾರ್ಥಿ ಯೂಟ್ಯೂಬ್ ವಿಡಿಯೋ ನೋಡಿ ಈ ಕೃತ್ಯ ಎಸಗಿದ್ದು, ಬಾಲಾಪರಾಧಿ ನ್ಯಾಯಾಲಯ ಎರಡು ವರ್ಷಗಳ ಕಾಲ ಕೌನ್ಸಲಿಂಗ್‍ಗೆ ಒಳಪಡಿಸುವಂತೆ ಸೂಚಿಸಿದೆ. ವಿದ್ಯಾರ್ಥಿ 12ನೇ ತರಗತಿಯಲ್ಲಿ ಶೇ.80ರಷ್ಟು ಅಂಕ ಗಳಿಸಿ ಉತ್ತೀರ್ಣನಾದ ಬಳಿಕ ಚಾರ್ಟೆಡ್ ಅಕೌಂಟೆನ್ಸಿ ಮಾಡುತ್ತಿದ್ದಾನೆ. ಸೆಪ್ಟೆಂಬರ್ 28ರಂದು ಕಾಫೀ ಶಾಪ್ ಮಾಲೀಕ ಸೈಬರ್ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಕಾಫಿ ಕುಡಿದ ಬಳಿಕ ಶಾಪ್‍ನಿಂದ ಗ್ರಾಹಕರಿಗೆ ಮೆಂಬರ್‍ಶಿಪ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಬಳಸಿ ಗ್ರಾಹಕರು ಏನಾದರೂ ಕೊಳ್ಳಬಹುದು, ಇಲ್ಲವೆ ರಿವಾರ್ಡ್ ಪಡೆಯಬಹುದಾಗಿದೆ. ಕಾರ್ಡ್ ಬಳಸದಿದ್ದರೂ ಹಣ ಖಾಲಿಯಾಗಿರುವುದನ್ನು ಕಂಡ ಗ್ರಾಹಕರು ಕಾಫೀ ಶಾಪ್ ಮಾಲೀಕರನ್ನು ಪ್ರಶ್ನಿಸಿದ್ದಾರೆ. ಬಳಿಕ ಮಾಲೀಕ ತನ್ನ ಪೇಮೆಂಟ್ ಸಿಸ್ಟಮ್ ಪರಿಶೀಲಿಸಿದ್ದಾರೆ. ಅಲ್ಲದೆ ಇತರ ಗ್ರಾಹಕರನ್ನು ವಿಚಾರಿಸಿದ್ದಾರೆ. ಅವರೂ ಸಹ ಇದೇ ರೀತಿಯ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಬಳಿಕ ಮಾಲೀಕ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

    ಪೊಲೀಸರು ಐಪಿ ಅಡ್ರೆಸ್ ಟ್ರೇಸ್ ಮಾಡಿದ್ದು, ಒಡಿಶಾ ಎಂದು ತಿಳಿದಿದೆ. ಆದರೆ ಅದೂ ಸಹ ಸುಳ್ಳಾಗಿತ್ತು. ನಂತರ ಪೊಲೀಸರು ಟೆಕ್ನಿಕಲ್ ಸರ್ವಲೆನ್ಸ್ ಮೂಲಕ ಆತನ ಮನೆಯನ್ನು ಪತ್ತೆ ಹಚ್ಚಿದರು. ಆದರೆ 36 ಫ್ಲ್ಯಾಟ್‍ಗಳಲ್ಲಿ ಆರೋಪಿ ವಾಸಿಸುತ್ತಿರುವುದು ಯಾವ ಮನೆ ಎಂದು ಪೊಲೀಸರಿಗೆ ತಿಳಿಯಲಿಲ್ಲ.

    ಪೊಲೀಸರು ನಾಲ್ಕು ದಿನಗಳ ಕಾಲ ಫ್ಲ್ಯಾಟ್ ಬಳಿ ಕ್ಯಾಂಪ್ ಹಾಕಿ 17 ವರ್ಷದ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಬಳಿಕ ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಯೂಟ್ಯೂಬ್ ವಿಡಿಯೋ ನೋಡಿ ಕೆಫೆಯ ಪೇಮೆಂಟ್ ಸಿಸ್ಟಮ್ ಹ್ಯಾಕ್ ಮಾಡಿರುವುದು ಈ ವೇಳೆ ಬೆಳಕಿಗೆ ಬಂದಿದೆ.

    ಡಿಸಿಪಿ ರಶ್ಮಿ ಕರಂದಿಕರ್ ಈ ಕುರಿತು ಮಾಹಿತಿ ನೀಡಿದ್ದು, ಬಾಲಕ ಮಧ್ಯಮ ವರ್ಗದ ಕುಟುಂಬದವನಾಗಿದ್ದು, ಅವರು ವಾಸಿಸುತ್ತಿರುವ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ ತಕ್ಷಣ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಮಗ ಈ ರೀತಿಯ ಕೆಲಸ ಮಾಡಿರುವ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಡಾರ್ಕ್ ವೆಬ್ ಬಗ್ಗೆ ಜ್ಞಾನ ಹೊಂದಿದ್ದ ಬಾಲಕ, ಅಂತರ್ಜಾಲದ ಮೂಲಕ ಹೆಸರು ಮರೆಮಾಚಿ, ನಕಲಿ ಸಿಮ್ ಕಾರ್ಡ್ ಬಳಸಿ ಯಾಮಾರಿಸಿದ್ದಾನೆ ಎಂದು ತಿಳಿಸಿದ್ದಾರೆ.

  • ಕಾಫಿ ಶಾಪ್ ಮಾಲೀಕ ಅಂದರ್ – ಜನ್ರಿಗೆ ವಂಚಿಸಿ ಬರೋಬ್ಬರಿ 100 ಕೋಟಿ ಆಸ್ತಿ ಮಾಡ್ದ!

    ಕಾಫಿ ಶಾಪ್ ಮಾಲೀಕ ಅಂದರ್ – ಜನ್ರಿಗೆ ವಂಚಿಸಿ ಬರೋಬ್ಬರಿ 100 ಕೋಟಿ ಆಸ್ತಿ ಮಾಡ್ದ!

    ಬೆಂಗಳೂರು: ಪ್ರತಿಷ್ಠಿತ ಕಲ್ಮನೆ ಕಾಫಿ ಶಾಪ್ ಗಳ ಮಾಲೀಕ, ಜೊತೆಗೆ ನೂರಾರು ಕೋಟಿ ಆಸ್ತಿಯ ಒಡೆಯ. ಆದರೆ ಇಷ್ಟೆಲ್ಲಾ ಆಸ್ತಿಯನ್ನ ಈತ ಜನರಿಗೆ ವಂಚಿಸಿ ಮಾಡಿದ್ದಾನೆ.

    ಅವಿನಾಶ್ ಪ್ರಭು ಜನರಿಗೆ ವಂಚಿಸಿದ ಉದ್ಯಮಿ. ಬೆಂಗಳೂರು ನಗರದಲ್ಲೇ ಈತನ 11 ಕಾಫಿ ಶಾಪ್ ಗಳಿವೆ. ಇದ್ಯಾವುದನ್ನು ಆತ ಸಂಪಾದನೆ ಮಾಡಿಲ್ಲ. ಅರ್ಧಂಬರ್ಧ ಫ್ಲ್ಯಾಟ್ ಗಳನ್ನ ಕಟ್ಟಿ ಜನರಿಂದ ನೂರಾರು ಕೋಟಿ ಆಸ್ತಿ ಮಾಡಿದ್ದಾನೆ.

    ಬೆಂಗಳೂರಿನ ವಿವಿಧೆಡೆ ಸ್ಕೈ ಲೈನ್ ಔರಾ, ಸ್ಕೈ ಲೈನ್ ರಿಟ್ರೀಟ್, ಸ್ಕೈ ಲೈನ್ ಅಕೇಶಿಯಾ ಸೇರಿದಂತೆ ಹಲವಾರು ಪ್ರಾಜೆಕ್ಟ್ ಗಳ ಹೆಸರಲ್ಲಿ ವಂಚಿಸಿದ್ದಾನೆ. ಫ್ಲ್ಯಾಟ್ ಗಳನ್ನು ಕೇವಲ 10% ಅಷ್ಟು ಕಟ್ಟಿ ಜನರಿಂದ 90% ಹಣ ವಸೂಲಿ ಮಾಡಿದ್ದಾನೆ ಎಂದು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹೇಳಿದ್ದಾರೆ.

    200 ಜನರಿಗೆ ಸುಮಾರು ನೂರು ಕೋಟಿಯಷ್ಟು ಹಣ ವಂಚಿಸಿದ್ದಾನೆ. ಈತನ ಲ್ಯಾವೆಲ್ಲೆ ರಸ್ತೆಯ ಮನೆ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಖತರ್ನಾಕ್ ವಂಚಕ ಅವಿನಾಶ್ ಪ್ರಭುವನ್ನ ಅರೆಸ್ಟ್ ಮಾಡಿದ್ದಾರೆ. ಜನರ ದುಡ್ಡಲ್ಲಿ ತುಂಬಾ ಆಸ್ತಿ ಮಾಡಿದ್ದಾನೆ.

    14 ಬ್ಯಾಂಕ್ ಗಳಲ್ಲಿ ಬ್ಯಾಲೆನ್ಸ್, ಅಲ್ಲದೇ ಕೆಂಗೇರಿಯಲ್ಲಿ 5 ಎಕರೆ ಜಮೀನು, ಅಲ್ಲಾಳಸಂದ್ರದಲ್ಲಿ 3 ಎಕರೆ ಜಮೀನು, ಹೆಣ್ಣೂರಿನಲ್ಲಿ ಮೂರು ಎಕರೆ, ಕನಕಪುರ ಬಳಿ 7 ಎಕರೆ, ಮಂಗಳೂರಿನಲ್ಲಿ 8.5 ಎಕರೆ, ಚೆನ್ನೈನ ಮಾಣಿಕ್ಯ ರಸ್ತೆಯಲ್ಲಿ ಅರ್ಧ ಎಕರೆ ಜಮೀನು ಮಾಡಿದ್ದಾನೆ. ಸದ್ಯ ಈತನ ಮನೆಯಲ್ಲಿದ್ದ ರೇಂಜ್ ರೋವರ್ ಮತ್ತು ಆಡಿ ಕಾರ್ ಸಮೇತ ಎಲ್ಲವನ್ನೂ ಸೀಜ್ ಮಾಡಿದ್ದಾರೆ ಸಿಸಿಬಿ ಪೊಲೀಸರು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv