Tag: ಕಾಫಿ ನಾಡು

  • ಉತ್ತಮ ಗಾಳಿ ಗುಣಮಟ್ಟದಲ್ಲಿ ದೇಶದಲ್ಲಿಯೇ ಮಡಿಕೇರಿ ಅಗ್ರ ಸ್ಥಾನ

    ಉತ್ತಮ ಗಾಳಿ ಗುಣಮಟ್ಟದಲ್ಲಿ ದೇಶದಲ್ಲಿಯೇ ಮಡಿಕೇರಿ ಅಗ್ರ ಸ್ಥಾನ

    ಮಡಿಕೇರಿ: ಪ್ರಕೃತಿ ಸೌಂದರ್ಯದಿಂದ ಅಚಾರ-ವಿಚಾರಗಳಿಂದ ಗಮನ ಸೆಳೆಯುತ್ತಿದ್ದ ಕೊಡಗು ಜಿಲ್ಲೆ ಈಗ ಒಂದು ಹೆಜ್ಜೆ ಮುಂದೆ ಹೋಗಿ ದೇಶದಲ್ಲಿ ಉತ್ತಮ ವಾಯುಗುಣ ಹೊಂದಿದ ನಂ 1 ಜಿಲ್ಲೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಕೊಡಗಿನ ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಸುದ್ದಿ ಮತ್ತಷ್ಟು ಗರಿಮೆಯನ್ನು ಕೊಟ್ಟಿದೆ.

    ಕೊಡಗಿನಲ್ಲಿ ಎಲ್ಲಿ ನೊಡಿದ್ರು ಬ್ರಹ್ಮಗಿರಿ, ಪುಷ್ಪಗಿರಿಯ ಸುಂದರ ಬೆಟ್ಟಗುಡ್ಡಗಳ ಸಾಲು, ಹಸಿರ ವನರಾಶಿ, ನಡುವೆ ಆಚಾರ-ವಿಚಾರಗಳಿಂದ ವಿಶಿಷ್ಟವಾದ ಸಂಸ್ಕøತಿ ಹೊಂದಿದ ಜಿಲ್ಲೆಯಾಗಿದೆ. ಈಗ ಕೊಡಗಿನಲ್ಲಿ ಉತ್ತಮ ವಾಯುಗುಣ ಹೊಂದಿದ್ದು, ದೇಶದ ಜನ ಕೊಡಗಿನ ಕಡೆ ನೋಡುವಂತಾಗಿದೆ. ಇಲ್ಲಿನ ಉತ್ತಮ ಜಲ, ನೆಲ, ಗಾಳಿ ಉತ್ತಮ ವಾಯುಗುಣ ಹೊಂದುವಂತೆ ಮಾಡಿದೆ. ದೇಶದಲ್ಲಿ ಕೊಡಗು ಪ್ರಥಮ ಸಾಲಿನಲ್ಲಿದ್ದು, ಗದಗ ಎರಡನೇ ಸ್ಥಾನದಲ್ಲಿದೆ. ಕೇಂದ್ರ ವಾಯುಮಾಲಿನ್ಯ ಇಲಾಖೆ ದೈನಂದಿನ ಬುಲೆಟಿನ್ ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ ಪ್ರಥಮಸ್ಥಾನ ಬಂದಿದೆ.  ಇದನ್ನೂ ಓದಿ: ಹೋರಾಟ ನಿಲ್ಲಿಸಿ ಮನೆಗೆ ಹೋಗಬೇಕೆಂದು ರೈತರಿಗೆ ಒತ್ತಾಯಿಸಿದ ನರೇಂದ್ರ ಸಿಂಗ್

    ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇತರ ರಾಜ್ಯದಲ್ಲಿ ವಾಯು ಗುಣಮಟ್ಟ ತೀವ್ರ ಹದಗೆಡುತ್ತಿರುವ ಬಗ್ಗೆ ದಿನೇ ದಿನೇ ನಾನಾ ವರದಿಗಳು ಬರುತ್ತಿವೆ. ಇಂತಹ ವಾಯುಗುಣಮಟ್ಟದಲ್ಲಿ ಏರುಪೇರು ಆಗಿ ಜನರು ಸಾಕಷ್ಟು ತೊಂದರೆ ಎದುರಿಸುವಂತೆ ಆಗಿದೆ. ಹೆಚ್ಚುತ್ತಿರುವ ವಾಹನಗಳು, ಕಾರ್ಖಾನೆಗಳ ಮಧ್ಯೆ ನಾವು ಉಸಿರಾಡುತ್ತಿರುವ ಗಾಳಿ ಹೇಗಿದೆ ಎಂಬುದು ಮುಖ್ಯ. ಈ ಸಂಬಂಧ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಬಿಡುಗಡೆಯಾಗಿದ್ದು, ರಾಜ್ಯದ ಪ್ರವಾಸಿಗರ ಸ್ವರ್ಗ ಮಡಿಕೇರಿಯ ವಾಯುಗುಣ ಮಟ್ಟ ಅತ್ಯುತ್ತಮವಾಗಿದೆ.

    ದೇಶದಲ್ಲೇ ಉತ್ತಮ ವಾಯುಗುಣಮಟ್ಟ ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹಿನ್ನೆಲೆ ಜಿಲ್ಲೆಯ ಜನರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ನೂರಾರು ವರ್ಷಗಳಿಂದ ಕಾಫಿ ಬೆಳೆಯುವಾಗಲೂ ಮರಗಳ ಆಶ್ರಯ ಮಾಡಿದರಿಂದ ವಾಯುಗುಣದ ಮಟ್ಟ ಉತ್ತಮವಾಗಿದೆ ಎನ್ನುತ್ತಾರೆ ಪರಿಸರವಾದಿಗಳು.ಇದನ್ನೂ ಓದಿ:  ಹೊಸ ರೂಪಾಂತರಿ ವೈರಸ್ ಪೀಡಿತ ದೇಶಗಳಿಂದ ವಿಮಾನ ಹಾರಾಟ ನಿಲ್ಲಿಸಿ – ಮೋದಿಗೆ ಕೇಜ್ರಿವಾಲ್ ಮನವಿ 

    ಕೊಡಗು ಜಿಲ್ಲೆಯಲ್ಲಿ ಹೆಚ್ಚು ಕೃಷಿ ಮಾಡುವುದರಿಂದ ಕಾಫಿ ತೋಟ, ಭತ್ತದ ಗದ್ದೆಗಳು, ನದಿಗಳು, ಬೆಟ್ಟಗಳು ಹೆಚ್ಚಾಗಿವೆ. ವಾಹನಗಳ ಸಂಚಾರದ ಸಂಖ್ಯೆ ಕಡಿಮೆ ಇದೆ. ವಾಹನಗಳ ಹೊಗೆ ಇರುವುದಿಲ್ಲ. ಇನ್ನೂ ಕಾರ್ಖಾನೆಗಳು ಇಲ್ಲ. ಮಲೆನಾಡು ಪ್ರದೇಶವಾದರಿಂದ ಮಳೆಯ ಪ್ರಮಾಣ ಕೂಡ ಹೆಚ್ಚಾಗಿದೆ. ಇದರಿಂದ ವಾಯುಮಾಲಿನ್ಯ ಕಡಿಮೆ ಮಟ್ಟದಲ್ಲಿ ಆಗುತ್ತದೆ.

    ಗಾಳಿಯೂ ಕೂಡ ಉತ್ತಮವಾಗಿದ್ದು, ಈ ರೀತಿಯ ಪ್ರಕೃತಿ ಸೌಂದರ್ಯವನ್ನು ನೋಡಲು ಪ್ರವಾಸಿಗರು ಬರುತ್ತಿರುತ್ತಾರೆ. ಕೊಡಗಿಗೆ ಉತ್ತಮ ವಾಯುಗುಣ ಹೊಂದಿದ್ದ ಜಿಲ್ಲೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಹಿನ್ನೆಲೆ ಸ್ಥಳೀಯರು ಹರ್ಷವ್ಯಕ್ತಪಡಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಪ್ರವಾಸಿಗರ ಸ್ವರ್ಗ ಎಂದು ಕರೆಯುವ ಕೊಡಗಿಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.

  • ಕಾಫಿನಾಡಲ್ಲಿ ಕಣ್ಮನ ತಣಿಸಿದ ಬೈಕ್ ರೇಸ್

    ಕಾಫಿನಾಡಲ್ಲಿ ಕಣ್ಮನ ತಣಿಸಿದ ಬೈಕ್ ರೇಸ್

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಮುಗುಳುವಳ್ಳಿಯಲ್ಲಿ ನಡೆದ ಮನಮೋಹಕ ಬೈಕ್ ರೇಸ್ ನೋಡುಗರ ಮನ ತಣಿಸ್ತು. ಕಳೆದ 10 ವರ್ಷಗಳಿಂದ ನಿಂತಿದ್ದ ಬೈಕ್ ರೇಸ್‍ಗೆ ಇಂದು ಚಾಲನೆ ಸಿಕ್ಕಂತಾಗಿದ್ದು ಮುಂದಿನ ದಿನಗಳಲ್ಲಿ ಕಾರ್ ರೇಸ್‍ನಂತೆ ಬೈಕ್ ರೇಸನ್ನೂ ಪ್ರತಿವರ್ಷ ನಡೆಸೋದಾಗಿ ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ರು. ಇಷ್ಟು ದಿನಗಳ ಕಾಲ ಕಾಫಿನಾಡಿನ ಕಾರ್ ರೇಸನ್ನೇ ನೋಡಿ ಎಂಜಾಯ್ ಮಾಡ್ತಿದ್ದ ಕಾಫಿನಾಡಿಗರು ಇಂದು ಬೈಕ್ ರೇಸ್ ನೋಡಿ ಪುಳಕಗೊಂಡ್ರು.

    ಚಿಕ್ಕಮಗಳೂರು 13 ತಂಡದ ನೇತೃತ್ವದಲ್ಲಿ ನಡೆದ ಬೈಕ್ ರೇಸ್‍ಗೆ ಚಿಕ್ಕಮಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ, ಬೆಂಗಳೂರು, ತುಮಕೂರು, ಉಡುಪಿ ಸೇರಿದಂತೆ ಕೇರಳ, ಕೊಚ್ಚಿ, ತಿರುವನಂತಪುರ, ಮುಂಬೈ ಸೇರಿದಂತೆ ಅಂತಾರಾಷ್ಟ್ರೀಯ ರೈಡರ್‍ಗಳು ಭಾಗವಹಿಸಿ ನೋಡುಗರನ್ನು ರಂಜಿಸಿದ್ರು. ರೇಸ್‍ನಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಈ ರೇಸ್‍ಗೆ ಕಾರ್ ರೇಸ್ ನಡೆಸಿ ಅನುಭವವಿರೋ ಚಿಕ್ಕಮಗಳೂರು ಮೋಟರ್ ಸ್ಪೋರ್ಟ್ಸ್  ಕ್ಲಬ್ ಕೂಡ ಸಾಥ್ ನೀಡಿತ್ತು.

    ಒಟ್ಟು 150ಕ್ಕೂ ಹೆಚ್ಚು ಬೈಕ್‍ಗಳು ಭಾಗವಹಿಸಿದ್ವು. ಓರ್ವ ರೈಡರ್‍ಗಿಂತ ಮತ್ತೊಬ್ಬ ಚಾಣಾಕ್ಷನಂತೆ ಡ್ರೈವ್ ಮಾಡ್ತಿದ್ದಿದ್ದನ್ನ ಕಂಡ ನೋಡುಗರಿಗೆ ಮಿಂಚಿನ ವೇಗದಲ್ಲಿ ಓಡ್ತಿರೋ ಬೈಕಿನ ರೈಡ್‍ಗಳು ತಮ್ಮ ಎದೆಮೇಲೆ ಓಡಿದಂತಹ ಅನುಭವವಾಗ್ತಿತ್ತು. ಒಂದೇ ಬಾರಿಗೆ 10ಕ್ಕೂ ಹೆಚ್ಚು ಬೈಕ್‍ಗಳು ಟ್ರ್ಯಾಕ್ ಇಳಿದಾಗ ಗೆಲುವಿನ ಜಿದ್ದಾಜಿದ್ದಿಗೋಸ್ಕರ ನಾಮುಂದು-ತಾಮುಂದು ಅಂತಾ ರೈಡರ್‍ಗಳು ರೈಡ್ ಮಾಡುವಾಗ ನೋಡುಗರು ಕೂಡ ಈ ಟ್ರ್ಯಾಕ್‍ನಿಂದ ಆ ಟ್ರ್ಯಾಕ್‍ಗೆ ಓಡಿ ಚಪ್ಪಾಳೆ, ಶಿಳ್ಳೆ ಹೊಡೆದು ರೈಡರ್‍ಗಳಿಗೆ ಸಾಥ್ ನೀಡಿದ್ರು. ರೈಡರ್‍ಗಳು ಕೂಡ ನೋಡುಗರಿಗೆ ರಂಜಿಸೋಕೆ ಕೆಲಸ ಸಾಹಸದ ಸ್ಟಂಟ್‍ಗಳನ್ನ ಮಾಡಿದ್ರು.

    ಸದಾ ತಂಪೆರೆಯೋ ಕಾಫಿನಾಡಿನ ವಾತಾವರಣ ಬೈಕ್ ರೇಸ್‍ಗೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈ ಬಾರಿಯ ಭೀಕರ ಬರಗಾಲದಿಂದ ಬೈಕ್ ರೇಸ್‍ಯ ಟ್ರ್ಯಾಕ್ ನೋಡಿದ್ರೆ ಇದು ಚಿಕ್ಕಮಗಳೂರೋ ಇಲ್ಲ ಉತ್ತರಕರ್ನಾಟಕವೋ ಎಂದು ನೋಡುಗರಿಗೆ ಭಾಸವಾಗ್ತಿತ್ತು. ಆದ್ರೆ, ಈ ಟ್ರ್ಯಾಕ್ ಬೈಕ್ ರೇಸ್‍ಗೆ ಹೇಳಿ ಮಾಡಿಸಿದಂತಿತ್ತು. 10ಕ್ಕೂ ಹೆಚ್ಚು ಬೈಕ್‍ಗಳು ಗೆಲುವಿಗಾಗಿ ಟ್ರ್ಯಾಕ್‍ಗೆ ಇಳಿದಾಗ ಮುನ್ನುಗ್ಗೋ ವೇಗದಲ್ಲಿ ರೈಡರ್‍ಗಳು ಎಕ್ಸಲೇಟರ್ ರೈಸ್ ಮಾಡಿದಂತೆ ಕ್ರೀಡಾಂಗಣವೆಲ್ಲಾ ಧೂಳುಮಯವಾಗ್ತಿತ್ತು. ನೋಡುಗರಿಗೆ ಯಾವ ಬೈಕ್ ಎಲ್ಲಿದೆ ಎಂಬುದೇ ಅರ್ಥವಾಗದಂತ ಪರಿಸ್ಥಿತಿ ನಿರ್ಮಾಣವಾಗ್ತಿತ್ತು. ಆದ್ರೂ, ಉರಿಯೋ ಬಿಸಿಲಲ್ಲೂ ಜನ ಬೈಕ್ ರೇಸ್ ಕಂಡು ಖುಷಿ ಪಟ್ರು.

    ಮೂರು ವಿಭಾಗದಲ್ಲಿ ನಡೆಯುತ್ತಿರೋ ರೇಸ್‍ಯಲ್ಲಿ ಒಂದೊಂದು ವಿಭಾಗಕ್ಕೂ ಪ್ರತ್ಯೇಕ ಬಹುಮಾನವಿದ್ದು, ಇಲ್ಲಿ ಗೆದ್ದೋರು ರಾಷ್ಟ್ರ ಮಟ್ಟದಲ್ಲೂ ಭಾಗವಹಿಸೋ ಅವಕಾಶ ಸಿಗಬಹುದು ಅನ್ನೋದು ಆಯೋಜಕರ ಅಭಿಲಾಷೆ. ರೇಸ್‍ಯಲ್ಲಿ ಲೋಕಲ್ ರೈಡರ್‍ಗಳಿಗೂ ಉತ್ತೇಜಿಸೋ ದೃಷ್ಟಿಯಿಂದ ಅವರಿಗೂ ಒಂದು ಹಂತದಲ್ಲಿ ಭಾಗವಹಿಸೋ ಅವಕಾಶ ಕಲ್ಪಿಸಿದ್ರು ಆಯೋಜಕರು. ಯಾಕಂದ್ರೆ, ದಾರಿ, ಜನವಸತಿ ಪ್ರದೇಶದಲ್ಲಿ ವೇಗವಾಗಿ ಅಥವಾ ವಿಭಿನ್ನವಾಗಿ ಬೈಕ್ ಓಡಿಸಿ ಅನಾಹುತ ಮಾಡೋದಕ್ಕಿಂತ ಇಂತಹಾ ರೇಸ್‍ಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನ ಇಲ್ಲಿ ತೋರಿಸಲಿ ಎಂಬ ಕಾರಣಕ್ಕೆ ಅವಕಾಶ ನೀಡಿದ್ವಿ, ಇಂತಹಾ ರೇಸ್‍ಗಳು ಪ್ರತಿವರ್ಷ ನಡೆದ್ರೆ ರಸ್ತೆಯಲ್ಲಿ ಬೈಕ್ ರೇಸ್ ನಡೆಸೋರ ಸಂಖ್ಯೆ ಕಡಿಮೆಯಾಗಲಿದೆ ಅನ್ನೋ ನಂಬಿಕೆ ಇದೆ, ನಮ್ಮ ಈ ಉದ್ದೇಶ ಶೇ.50 ರಷ್ಟು ಈಡೇರುತ್ತೆ ಅಂತಾರೆ ಆಯೋಜಕರು. ರೇಸ್‍ನಲ್ಲಿ ರಾಷ್ಟ್ರಮಟ್ಟದ ರೈಡರ್‍ಗಳಿಗೂ ಸ್ಥಳಿಯ ರೈಡರ್‍ಗಳು ಸೆಡ್ಡು ಹೊಡೆಯೋ ರೀತಿಯಲ್ಲಿ ರೈಡ್ ಮಾಡಿ ನೋಡುಗರ ಮನಸೂರೆಗೊಳಿಸಿದ್ರು.

    ಇನ್ನು ಬೈಕ್ ರೇಸ್‍ಗೆ ತಕ್ಕಂತೆ ಟ್ರ್ಯಾಕ್ ಕೂಡ ನಿರ್ಮಾಣವಾಗಿತ್ತು. ಹಾವು ಬಳುಕಿನ ಮೈಕಟ್ಟಿನ ಟ್ರ್ಯಾಕ್‍ನಲ್ಲಿ ಅದೇ ಆಕಾರದಲ್ಲಿ ವೇಗವಾಗಿ ಬೈಕ್‍ಗಳು ಓಡ್ತಿದ್ರೆ ನೋಡುಗರ ದೃಷ್ಟಿ ಕೂಡಾ ಅಷ್ಟೇ ವೇಗವಾಗಿರ್ತಿತ್ತು. ಟ್ರ್ಯಾಕ್‍ನ ಒಂದು ಸುತ್ತು ಬರುವಷ್ಟರಲ್ಲಿ ಅಂದಾಜು ಒಂದರಿಂದ ಒಂದೂವರೆ ಕಿ.ಮೀ. ಸಾಗಿದಂತಾಗ್ತಿತ್ತು. ಒಂದು ಸುತ್ತನ್ನ ಮುಗಿಸಲು ಈ ಟ್ರ್ಯಾಕ್‍ನಲ್ಲಿ ಐದು ಬಾರಿ ರೌಂಡ್ ಹೊಡೆಯಬೇಕಿತ್ತು. ಟ್ರ್ಯಾಕ್‍ನಲ್ಲಿ ಅಲ್ಲಲ್ಲೇ ಹಾಕಿದ್ದ ಸಣ್ಣ-ಸಣ್ಣ ಹಂಪ್‍ಗಳು, ಚಿಕ್ಕ-ಚಿಕ್ಕ ಗುಂಡಿಗಳಲ್ಲಿ ಬೈಕ್ ಹಾರುವಾಗ ನೋಡುಗರು ಕುಣಿದು ಕುಪ್ಪಳಿಸಿ ಕೇಕೆ ಹಾಕಿ ಸಂಭ್ರಮಿಸಿದ್ರು.

    ರಾಜ್ಯದೆದುರು ಕಾಫಿನಾಡು ಹಲವು ವಿಚಾರಗಳಲ್ಲಿ ಉಳಿದೆಲ್ಲಾ ಜಿಲ್ಲೆಗಳಿಗಿಂತ ತುಸು ಭಿನ್ನ ಎಂದೇ ಹೇಳಬಹುದು. ಯಾಕಂದ್ರೆ, ಕ್ರೀಡೆಯನ್ನೇ ಕೇಂದ್ರೀಕೃತವಾಗಿ ಹೇಳೋದಾದ್ರೆ ಕಾಫಿನಾಡಲ್ಲಿ ಆಗಾಗ ಕೆಸರುಗದ್ದೆ ಓಟ, ಕೆಸರುಗದ್ದೆ ವಾಲಿಬಾಲ್, ಎತ್ತಿನಗಾಡಿ ಸ್ಫರ್ದೆ, ಕಬ್ಬಡ್ಡಿ, ಕುಸ್ತಿ ಸೇರಿದಂತೆ ಪುರಾತನವಾದ ಸಾಂಪ್ರದಾಯಿಕ ಕ್ರೀಡೆಗಳು ಕಾಫಿನಾಡಲ್ಲಿ ಇಂದಿಗೂ ಜೀವಂತ. ಇದ್ರ ಜೊತೆ ಆಗಾಗ್ಗೆ ಕ್ರಿಕೆಟ್, ವಾಲಿಬಾಲ್‍ನಂತಹಾ ಆಧುನಿಕ ಕ್ರೀಡೆಗಳು ನಡೆಯುತ್ತಿರುತ್ವೆ. ಕಾಫಿನಾಡು ಚಿಕ್ಕಮಗಳೂರು ಆಧುನಿಕ ಜಗತ್ತಿಗೂ ಒಗ್ಗಿಕೊಂಡು ಬದುಕ್ತಾ, ಪುರಾತನ ಕ್ರೀಡೆಯನ್ನೂ ಉಳಿಸಿ-ಬೆಳೆಸಿ ಪೋಷಿಸ್ತಿದೆ ಅಂದ್ರೆ ತಪ್ಪಿಲ್ಲ.