Tag: ಕಾಂಗ್ರೆಸ್ ಸಭೆ

  • ಇಲ್ಲಿ ಯಾರ್ಯಾರು ಮದ್ಯ ಕುಡಿಯುತ್ತೀರಿ- ರಾಹುಲ್ ಗಾಂಧಿ ಪ್ರಶ್ನೆಗೆ ಕೈ ನಾಯಕರು ಕಕ್ಕಾಬಿಕ್ಕಿ!

    ಇಲ್ಲಿ ಯಾರ್ಯಾರು ಮದ್ಯ ಕುಡಿಯುತ್ತೀರಿ- ರಾಹುಲ್ ಗಾಂಧಿ ಪ್ರಶ್ನೆಗೆ ಕೈ ನಾಯಕರು ಕಕ್ಕಾಬಿಕ್ಕಿ!

    ನವದೆಹಲಿ: ಕಾಂಗ್ರೆಸ್ ಪಕ್ಷದ ಸದಸ್ಯರು ಮದ್ಯಪಾನ ತ್ಯಜಿಸಬೇಕು, ಖಾದಿ ಬಟ್ಟೆ ತೊಡಬೇಕು ಎಂಬ ಹಳೆಯ ನಿಯಮಗಳ ಬಗ್ಗೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮತ್ತೆ ಪ್ರಸ್ತಾಪಿಸಲಾಯಿತು. ಈ ಪ್ರಸ್ತಾಪವು ಸಭೆಯಲ್ಲಿ ಪಾಲ್ಗೊಂಡಿದ್ದ ಹಲವರ ಕೆಂಗಣ್ಣಿಗೂ ಗುರಿಯಾಯಿತು.

    ರಾಹುಲ್ ಗಾಂಧಿ ಅವರು ಇದೇ ವಿಚಾರವನ್ನು 2007ರಲ್ಲಿ ಪ್ರಸ್ತಾಪಿಸಿದ್ದರು. ಪಕ್ಷದ ಸದಸ್ಯತ್ವ ಅಭಿಯಾನಕ್ಕಾಗಿ ನಡೆದ ಸಭೆಯಲ್ಲಿ ಮತ್ತೆ ಪ್ರಸ್ತಾಪಿಸಿದರು. ಇದನ್ನು ಓದಿ: ಯಾರನ್ನೋ ಮೆಚ್ಚಿಸಲು ಜಮೀರ್ ಮಾತಾಡ್ತಿದ್ದು, ಮುಂದುವರಿಸಿಕೊಂಡು ಹೋದ್ರೆ ನಗೆಪಾಟಲಾಗುತ್ತೆ: ನಿಖಿಲ್

    “ಇಲ್ಲಿ ಯಾರ್ಯಾರು ಮದ್ಯಪಾನ ಮಾಡುವವರಿದ್ದೀರಿ” ಎಂದು ಸಭೆಗೆ ಆಗಮಿಸಿದ್ದ ನಾಯಕರನ್ನು ರಾಹುಲ್ ಗಾಂಧಿ ಪ್ರಶ್ನಿಸಿದರು. ಈ ಪ್ರಶ್ನೆ ಅನೇಕ ಸದಸ್ಯರ ಮುಜುಗರಕ್ಕೆ ಕಾರಣವಾಯಿತು. ಈ ವೇಳೆ ಮೌನ ಮುರಿದ ನವಜೋತ್ ಸಿಂಗ್ ಸಿಧು, “ನಮ್ಮ ರಾಜ್ಯದಲ್ಲಿ ಬಹುಪಾಲು ಮಂದಿ ಮದ್ಯಪಾನ ಮಾಡುತ್ತಾರೆ” ಎಂದು ಹೇಳಿದರು.

    RAHUL GANDHI

    ಈ ರೀತಿಯ ನಿಯಮಗಳನ್ನು ಕಾರ್ಯಕಾರಿ ಸಮಿತಿಯಿಂದ ಮಾತ್ರ ಬದಲಾಯಿಸಬಹುದು. ಆದರೆ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಮತ್ತು ಮಹಾತ್ಮ ಗಾಂಧಿ ಅವರ ಕಾಲದಿಂದಲೂ ಮದ್ಯಪಾನ ಮಾಡಬಾರದು ಎಂಬ ನಿಯಮವು ಪುಸ್ತಕಗಳಲ್ಲಿ ಉಳಿದಿದೆ. ಈ ನಿಯಮದ ಪ್ರಸ್ತುತತೆ ಮತ್ತು ಪ್ರಾಯೋಗಿಕ ಅಂಶವನ್ನು 2007ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ರಾಹುಲ್ ಗಾಂಧಿ ಪ್ರಶ್ನಿಸಿದ್ದರು.

    ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 1ರಿಂದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಲಿದ್ದು, ಸದಸ್ಯತ್ವ ಅರ್ಜಿಗಳಲ್ಲಿ ಮದ್ಯಪಾನದ ಕುರಿತು ಸಹ ಮಾಹಿತಿ ನೀಡಬೇಕಿದೆ. ಇದನ್ನು ಓದಿ: ಅಲ್ಪಸಂಖ್ಯಾತ ಮುಖಂಡರನ್ನ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಲಿ – ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲು

    ಪಕ್ಷದ ಸದಸ್ಯರಾಗ ಬಯಸುವವರು ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯನ್ನು ವಿಸರ್ಜಿಸುವುದು ಸೇರಿದಂತೆ 10 ಅಂಶಗಳನ್ನು ಸದಸ್ಯತ್ವ ಅರ್ಜಿಯು ಒಳಗೊಂಡಿದೆ. ಹೊಸ ಸದಸ್ಯರು ಪಕ್ಷದ ನಿಯಮಗಳು ಹಾಗೂ ಕಾರ್ಯಕ್ರಮಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಟೀಕಿಸುವಂತಿಲ್ಲ ಎಂಬ ಷರತ್ತು ಕೂಡ ಇದೆ.

    ALCOHOL

    “ಮುದ್ರಣ ಹಾಗೂ ಡಿಜಿಟಲ್ ರೂಪದಲ್ಲಿ ಸದಸ್ಯತ್ವದ ಅರ್ಜಿಗಳು ಲಭ್ಯವಿವೆ. ದೇಶಾದ್ಯಂತ ಸದಸ್ಯರಾಗಬಯಸುವವರಿಗೆ ಅಗತ್ಯ ತರಬೇತಿ ಕೂಡ ನೀಡಲಾಗುವುದು” ಎಂದು ಪಕ್ಷದ ಹಿರಿಯ ನಾಯಕ ರಂದೀಪ್ ಸುರ್ಜೇವಾಲ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

    “ದೇಶವ್ಯಾಪಿ ತಳಮಟ್ಟದಿಂದಲೂ ಈ ಆಂದೋಲನ ನಡೆಯಬೇಕಿದೆ. ಇದನ್ನು ನವೆಂಬರ್ 14ರಿಂದ ಆರಂಭಿಸಲಾಗುವುದು” ಎಂದು ರಾಹುಲ್ ಗಾಂಧಿ ಅವರು ಸಭೆಯಲ್ಲಿ ತಿಳಿಸಿದ್ದಾರೆಂದು ಸುರ್ಜೇವಾಲ ಹೇಳಿದರು.

  • ಕಾಂಗ್ರೆಸ್‌ ಸಭೆಯಲ್ಲಿ ಪತ್ರ ಬಂಡಾಯ – ನಾಯಕರ ವಿರುದ್ಧ ರಾಹುಲ್‌ ಆಕ್ರೋಶ

    ಕಾಂಗ್ರೆಸ್‌ ಸಭೆಯಲ್ಲಿ ಪತ್ರ ಬಂಡಾಯ – ನಾಯಕರ ವಿರುದ್ಧ ರಾಹುಲ್‌ ಆಕ್ರೋಶ

    ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬ ಮೂಲ ವಿಷಯವನ್ನುಇಟ್ಟುಕೊಂಡು ನಡೆಯುತ್ತಿರುವ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪತ್ರ ಬಂಡಾಯದ ಬಗ್ಗೆ ಈಗ ಭಾರೀ ಚರ್ಚೆ ಆಗುತ್ತಿದೆ.

    ಝೂಮ್‌ ಅಪ್ಲಿಕೇಶನ್‌ ಮೂಲಕ ನಡೆಯುತ್ತಿದ್ದು ಹಿರಿಯ ನಾಯಕರು ಭಾಗವಹಿಸಿದ್ದಾರೆ. ಸಭೆಯ ಆರಂಭದಲ್ಲೇ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ “ಹೊಸ ಅಧ್ಯಕ್ಷರನ್ನು ಹುಡುಕಿ. ನಾನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಿಲ್ಲ” ಎಂದು ಹೇಳಿದ್ದಾರೆ.

    ಈ ವೇಳೆ ನಿಮ್ಮ ನಿರ್ಧಾರವನ್ನು ಮತ್ತೊಮ್ಮೆ ಮರುಪರಿಶೀಲಿಸಿ. ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಮನಮೋಹನ್ ಸಿಂಗ್ ಮನವಿ ಮಾಡಿಕೊಂಡರು. ಆದರೆ ಸೋನಿಯಾ ಗಾಂಧಿ ಅನಾರೋಗ್ಯದ ಕಾರಣ ನೀಡಿ ನಾನು ಮುಂದುವರಿಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಈ ವೇಳೆ 20 ಪ್ರಮುಖರ ನಾಯಕರು ಪತ್ರ ಬರೆದ ವಿಚಾರಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್‌ 19, ಮಧ್ಯಪ್ರದೇಶ, ರಾಜಸ್ಥಾನ ಬಿಕ್ಕಟ್ಟಿನ ಸಮಯದಲ್ಲಿ ಹಿರಿಯ ನಾಯಕರಾದವರು ಈ ರೀತಿ ಪತ್ರ ಬರೆಯುವುದು ಸರಿಯಲ್ಲ ಎಂದು ರಾಹುಲ್‌ ಆಕ್ಷೇಪ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗಾಂಧಿಯೇತರ ವ್ಯಕ್ತಿಗಳು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಲೇಬೇಕು – ಪ್ರಿಯಾಂಕಾ ಗಾಂಧಿ

    ಸೋನಿಯಗಾಂಧಿ ಗೆ ಆರೋಗ್ಯ ಸಮಸ್ಯೆ ಇದೆ. ಅವರು ಆಸ್ಪತ್ರೆ ದಾಖಲಾದ ವೇಳೆ ಪತ್ರ ಬರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.

    20 ಪ್ರಮುಖ ನಾಯಕರು ಕಾಂಗ್ರೆಸ್ಸಿಗೆ ಪೂರ್ಣಾವಧಿ ನಾಯಕತ್ವ ಬೇಕು. ಅಧ್ಯಕ್ಷರಾದವರು ಸಕ್ರೀಯವಾಗಿ ಕೆಲಸ ಮಾಡಬೇಕು. ಸಾಮೂಹಿಕ ನಾಯಕತ್ವದೊಂದಿಗೆ ಕೆಲಸ ಮಾಡಬೇಕು. ಪಕ್ಷದ ಒಳಗಡೆ ಚುನಾವಣೆ ನಡೆಸಬೇಕು ಇತ್ಯಾದಿ ವಿಚಾರಗಳನ್ನು ಪ್ರಸ್ತಾಪಿಸಿ ಪತ್ರ ಬರೆದಿದ್ದರು.

    2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋತಿದ್ದಕ್ಕೆ ನೈತಿಕ ಹೊಣೆಯನ್ನು ಹೊತ್ತು ರಾಹುಲ್‌ ಗಾಂಧಿ ಮೇ 25 ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಕಳೆದ ವರ್ಷ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್‌ ಗಾಂಧಿ, ಕೆಲ ನಾಯಕರಿಗೆ ಪಕ್ಷಕ್ಕಿಂತ ಮಕ್ಕಳ ಮೇಲಿನ ಆಸಕ್ತಿಯೇ ಹೆಚ್ಚಾದ ಪರಿಣಾಮ ನಮಗೆ ಸೋಲಾಗಿದೆ. ಸರಿಯಾಗಿ ಕೆಲಸ ಮಾಡದ್ದಕ್ಕೆ ಗೆಲ್ಲಬಹುದಾಗಿದ್ದ ಹಿರಿಯ ನಾಯಕರು ಸೋತಿದ್ದಾರೆ ಎಂದು ಟೀಕಿಸಿದ್ದರು.

    ಸದ್ಯ ಕಾಂಗ್ರೆಸ್‌ ನಾಯಕರ ಮಧ್ಯೆ ಅಧ್ಯಕ್ಷರು ಯಾರಾಗಬೇಕು ಎಂಬುದರ ಬಗ್ಗೆ ಗೊಂದಲವಿದೆ. ಪಂಜಾಬ್‌ ಸಿಎಂ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌, ತಿರುವನಂತಪುರದದ ಸಂಸದ ಶಶಿ ತರೂರ್‌ ಪ್ರಿಯಾಂಕಾ ಪರ ಒಲವು ವ್ಯಕ್ತಪಡಿಸಿದ್ದಾರೆ.

    ಮನೀಶ್‌ ತಿವಾರಿ ಸೇರಿದಂತೆ ಕೆಲ ನಾಯಕರು ಪಕ್ಷದ ಒಳಗಡೆ ಒಂದು ಚುನಾವಣೆ ನಡೆಸಿ ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸೋನಿಯಾ ಗಾಂಧಿ ಅವರು ನಾನು ಪೂರ್ಣಾವಧಿಗೆ ಅಧ್ಯಕ್ಷೆ ಸ್ಥಾನದಲ್ಲಿ ಇರುವುದಿಲ್ಲ. ಮುಂದಿನ ಅಧ್ಯಕ್ಷರ ನೇಮಕದವರೆಗೆ ಹಂಗಾಮಿಯಾಗಿ ಮುಂದುವರಿಯುತ್ತೇನೆ ಎಂದು ತಿಳಿಸಿದ್ದರು.

  • ಡಿಕೆಶಿ ನೀಡಿದ್ದ ಸಲಹೆಯನ್ನು ತಿರಸ್ಕರಿಸಿದ್ದಕ್ಕೆ ಮಾಜಿ ಸಿಎಂ ವಿರುದ್ಧ ಸುಧಾಕರ್ ಕಿಡಿ

    ಡಿಕೆಶಿ ನೀಡಿದ್ದ ಸಲಹೆಯನ್ನು ತಿರಸ್ಕರಿಸಿದ್ದಕ್ಕೆ ಮಾಜಿ ಸಿಎಂ ವಿರುದ್ಧ ಸುಧಾಕರ್ ಕಿಡಿ

    – ಡಿಕೆ ಶಿವಕುಮಾರ್ ನಿಜವಾದ ರಾಜಕಾರಣಿ
    – ನಿಮ್ಮಿಂದ ಕೀಳುಮಟ್ಟದ ರಾಜಕಾರಣ ನಿರೀಕ್ಷಿಸಿರಲಿಲ್ಲ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಶಾಸಕರನ್ನು ಅನರ್ಹರನ್ನಾಗಿ ಮಾಡುವುದು ಬೇಡ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸಲಹೆ ನೀಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳ ಜೊತೆ ಸುಧಾಕರ್ ಮಾತನಾಡಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನವನ್ನು ಹೊರಹಾಕಿದರು. ಈ ವೇಳೆ, ನಾವು ಕಾಂಗ್ರೆಸ್ ಪಕ್ಷ ಹಾಗೂ ನಿಮ್ಮ ನಾಯಕತ್ವವನ್ನ ಆರು ವರ್ಷಗಳ ಕಾಲ ಹೆಗಲ ಮೇಲೆ ಹೊತ್ತು ನಿಮ್ಮನ್ನ ರಕ್ಷಣೆ ಮಾಡಿದ್ದೇವೆ. ಸಿದ್ದರಾಮಯ್ಯನವರ ವಿರುದ್ಧ ಯಾರನ್ನ ಮಾತನಾಡಲು ಬಿಡುತ್ತಿರಲಿಲ್ಲ ನಾನು. ನಿಮಗಾಗಿ ಆ ರೀತಿಯ ಹೋರಾಟ ಮಾಡಿದ್ದೇವೆ. ನಮ್ಮನ್ನೇ ಅನರ್ಹ ಮಾಡಿಸ್ತೀರಲ್ಲ ನಿಮಗೆ ಹೃದಯ ಇದ್ಯಾ ಮನಸ್ಸು ಇದೆಯೇ ಎಂದು ಪ್ರಶ್ನಿಸಿದರು.

    ಡಿಕೆ ಶಿವಕುಮಾರ್ ಸಭೆಯೊಂದರಲ್ಲಿ ಅನರ್ಹರನ್ನಾಗಿ ಮಾಡಿಸೋದು ಬೇಡ. ನಮ್ಮ ಜೊತೆ ಕಷ್ಟ ಸುಖ ಹಂಚಿಕೊಂಡವರು ಅವರು ಅಂತ ಅವರು ಹೇಳಿದರು. ಅವರು ನಿಜವಾದ ರಾಜಕಾರಣಿ. ಒಂದು ಬಾರಿ ಶಾಸಕರಾಗಬೇಕಾದರೆ ಪುನರ್ಜನ್ಮ ಪಡೆದಂತೆ ಹೀಗಾಗಿ ಅಂತವರನ್ನ ಅನರ್ಹ ಮಾಡಬೇಡಿ ಅಂತ ಹೇಳಿದ್ರಂತೆ. ಆದರೆ ಅವರ ಮಾತನ್ನು ಕೇಳದೆ ಅನರ್ಹ ಮಾಡಿಸಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದರು.

    ನಿಮ್ಮ ಬಗ್ಗೆ ಬಹಳ ಗೌರವ ಇತ್ತು. ಇಂತಹ ತೀರ್ಮಾನ ಕೀಳು ಮಟ್ಟದ ರಾಜಕಾರಣ ನಿಮ್ಮಿಂದ ನೀರೀಕ್ಷಿಸರಲಿಲ್ಲ. ನಾನು ಜನರನ್ನು ನಂಬಿದ್ದೀನಿ ಹೀಗಾಗಿ ನನಗೆ ಸುಪ್ರೀಂಕೋರ್ಟ್ ನಲ್ಲಿ ನನಗೆ ನ್ಯಾಯ ಸಿಗಲಿದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ನಾಯಕರು ಕ್ರೌರ್ಯ ಹಾಗೂ ವಿಕೃತ ಮನಸ್ಸಿನಿಂದ ತಮ್ಮ ರಾಜಕೀಯ ದಿವಾಳಿತನವನ್ನ ರಾಜ್ಯದ ಜನರ ಮುಂದೆ ಪ್ರದರ್ಶನ ಮಾಡ್ತಿದ್ದಾರೆ. ಹಿಂದೆ ಕಾಂಗ್ರೆಸ್ ನಲ್ಲಿರೋರು ಬೇರೆ ಪಕ್ಷದಿಂದ ಬಂದಿರೋರಲ್ವಾ? ರಾಜೀನಾಮೆ ಕೊಟ್ಟೇ ತಾನೇ ಕಾಂಗ್ರೆಸ್ಸಿಗೆ ಬಂದಿರೋದು? ಅವರ್ಯಾದರೂ ಅನರ್ಹರಾಗಿದ್ದಾರಾ? ರಾಜೀನಾಮೆಯನ್ನ ಎರಡೇ ಗಂಟೆಯಲ್ಲಿ ಸ್ವೀಕಾರ ಮಾಡಿಲ್ವಾ? ಇತ್ತೀಚೆಗೆ ರಾಜ್ಯಸಭೆಯ ಸದಸ್ಯರ ರಾಜೀನಾಮೆ ಅರ್ಧ ಗಂಟೆಯಲ್ಲಿ ಸ್ವೀಕಾರ ಮಾಡಿಲ್ವಾ? ಹೀಗಾಗಿ ರಾಜ್ಯಸಭೆಗೆ, ಲೋಕಸಭೆ, ವಿಧಾನಸಭೆಗೊಂದು ನೀತಿ ಇದ್ಯಾ ಎಂದು ಖಾರವಾಗಿ ಪ್ರಶ್ನಿಸಿದರು.

    ಬಹಳ ಪೌರುಷ ತೋರಿಸುವ ನೀವು ರಣರಂಗದಲ್ಲಿ ನಮ್ಮನ್ನ ಎದುರಿಸಿ. ಜನರ ಮುಂದೆ ಹೇಳಿ. ೨೨೪ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ ೭೯ ಗೆದ್ದಿದ್ದು ಯಾಕೆ? ಸಿಎಂ ಹಾದಿಯಾಗಿ ೧೭ ಮಂದಿ ಮಂತ್ರಿಗಳು ಸೋತ್ರಲ್ಲಾ? ೩೨ ಸಾವಿರ ಮತಗಳಿಂದ ಗೆದ್ದ ನನಗೆ ನೀವು ಯಾವ ಅಧಿಕಾರ ಕೊಟ್ಟಿದ್ದೀರಿ ಎಂದು ಖಾರವಾಗಿ ಕೈ ನಾಯಕರನ್ನು ಪ್ರಶ್ನಿಸಿದರು.

    ಜನಪರವಾಗಿ ಕೆಲಸ ಮಾಡಿದ್ದಕ್ಕೆ ನಾನು ಗೆದ್ದೆ. ಜನರಿಗೆ ತೊಂದರೆ ಕೊಟ್ಟಿದ್ದ ಕಾರಣ ನೀವು ಅವತ್ತೇ ಚುನಾವಣೆಗೂ ಮುನ್ನವೇ ಜೆಡಿಎಸ್ ಜೊತೆ ಹೋಗ್ತೀವಿ ಅಂತ ಹೇಳಿದ್ದರೆ ಅವತ್ತೇ ನಾನು ಕಾಂಗ್ರೆಸ್ ಪಕ್ಷ ದಿಂದ ಸ್ಪರ್ಧೆ ಮಾಡುತ್ತಿರಲಿಲ್ಲ. ನಾನು ಕ್ಷೇತ್ರದಲ್ಲಿ ಹಗಲಿರುಳು ಜೆಡಿಎಸ್ ಜೊತೆ ಹೋರಾಡಿದ್ದೇನೆ. ನನ್ನ ಆತ್ಮಸಾಕ್ಷಿಗೆ ವಿರುದ್ದವಾಗಿ ಜೆಡಿಎಸ್ ಜೊತೆ ಸೇರಿದ್ದೀರಿ. ಬಿಜೆಪಿ ಹೊರಗಿಡಬೇಕು ಅಂತ ಸುಳ್ಳು ಹೇಳಿ ಅಧಿಕಾರದ ಆಸಗೆ ಜೆಡಿಎಸ್ ಜೊತೆ ಸೇರಿದ್ದೀರಿ. ಜನರಿಗೆ ಇದರಿಂದ ಒಳ್ಳೆಯದಾಯಿತೇ ಎಂದು ಪ್ರಶ್ನಿಸಿದರು.

  • ಕಾಂಗ್ರೆಸ್ ಸಭೆಯಲ್ಲಿ ಕೈ-ಕೈ ಮಿಲಾಯಿಸಿದ ಕಾರ್ಯಕರ್ತರು

    ಕಾಂಗ್ರೆಸ್ ಸಭೆಯಲ್ಲಿ ಕೈ-ಕೈ ಮಿಲಾಯಿಸಿದ ಕಾರ್ಯಕರ್ತರು

    ಮಡಿಕೇರಿ: ಪಕ್ಷ ಸಂಘಟನೆಗೆ ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎದುರೇ ಪಕ್ಷದ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಕೊಡಗು ಜಿಲ್ಲೆಯ ಕುಶಾಲಗರದಲ್ಲಿ ನಡೆದಿದೆ.

    ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕೆಪಿಸಿಸಿ ವೀಕ್ಷಕ ವೆಂಕಪ್ಪಗೌಡ ಉಪಸ್ಥಿತಿಯಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಘಟಕದ ಸಭೆ ಆಯೋಜನೆಗೊಂಡಿತ್ತು. ಈ ವೇಳೆ ಕೆಲವರು ಬ್ಲಾಕ್ ಅಧ್ಯಕ್ಷ ಸ್ಥಾನವನ್ನು ಹೆಬ್ಬಾಲೆ ಮಂಜು ಎಂಬವರಿಗೆ ನೀಡಬೇಕೆಂದು ಆಗ್ರಹಿಸಿದ್ದರು.

    ಈಗ ಅಧ್ಯಕ್ಷರಾಗಿರುವ ವಿ.ಪಿ. ಶಶಿಧರ್ ಅವರೇ ಮುಂದುವರಿಯಲಿ ಎಂದು ಶಶಿಧರ್ ಕಡೆಯವರು ಹೇಳುತ್ತಿದ್ದಂತೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ, ನೂಕಾಟ ತಳ್ಳಾಟ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ವೇಳೆ ವೇದಿಕೆಯಲ್ಲಿದ್ದ ವೆಂಕಪ್ಪ ಗೌಡ ಹಾಗೂ ಇತರರು ಮೂಕ ಪ್ರೇಕ್ಷಕರಂತೆ ಕುಳಿತಿದ್ದರು. ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ತಮ್ಮ ಸ್ಥಾನ ತ್ಯಜಿಸುತ್ತಿರುವುದಾಗಿ ಘೋಷಿಸಿದರು.

    ಪಕ್ಷ ದ್ರೋಹಿಗಳನ್ನು ಸಂಬಾಳಿಸಿಕೊಂಡು ಮುನ್ನಡೆಯಲು ಸಾಧ್ಯವಿಲ್ಲ. ಇಂಥ ಅವಮಾನವನ್ನು ಸಹಿಸಿಕೊಂಡು ಇರಲು ಸ್ವಾಭಿಮಾನ ಒಪ್ಪೋದಿಲ್ಲ. ಹೀಗಾಗಿ ಸ್ಥಾನ ತ್ಯಜಿಸುತ್ತಿದ್ದೇನೆ. ಯಾರನ್ನಾದರೂ ನೇಮಕ ಮಾಡಿಕೊಳ್ಳಿ ಎಂದು ಹೇಳಿ ವೇದಿಕೆಯಿಂದ ಹೊರ ನಡೆದರು. ಅವರ ಜತೆಗೆ ಬೆಂಬಲಿಗರು ಕೂಡ ಹೊರ ಹೋದರು.

  • ಲೋಕಸಭೆ ಸೋಲಿಗೆ ನಾನೇ ಕಾರಣ ಅಂತಿದ್ರೆ ನನ್ನನ್ನು ಶೂಟ್ ಮಾಡಿ ಎಂದ ಕಾಂಗ್ರೆಸ್ ನಾಯಕ

    ಲೋಕಸಭೆ ಸೋಲಿಗೆ ನಾನೇ ಕಾರಣ ಅಂತಿದ್ರೆ ನನ್ನನ್ನು ಶೂಟ್ ಮಾಡಿ ಎಂದ ಕಾಂಗ್ರೆಸ್ ನಾಯಕ

    ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹರ್ಯಾಣದಲ್ಲಿ ಸೋಲಲು ನಾನು ಕಾರಣವಾಗಿದ್ದರೆ ನನ್ನನ್ನು ಶೂಟ್ ಮಾಡಿ ಎಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಅಧ್ಯಕ್ಷ ಅಶೋಕ್ ತನ್ವರ್ ಸಿಡಿದೆದ್ದಿದ್ದಾರೆ.

    ಲೋಕಸಭಾ ಚುನಾವಣಾ ಸೋಲಿನ ಸಂಬಂಧ ದೆಹಲಿಯಲ್ಲಿ ಕಾಂಗ್ರೆಸ್ ಸಭೆ ನಡೆಸಲಾಗಿತ್ತು. ಈ ಸಭೆಯ ನೇತೃತ್ವವನ್ನು ಸೋನಿಯಾ ಗಾಂಧಿ ಆಪ್ತ ಗುಲಾಂ ನಬಿ ಆಜಾದ್ ವಹಿಸಿಕೊಂಡಿದ್ದರು. ಸಭೆ ನಡೆಯುತ್ತಿದ್ದ ವೇಳೆ ಹರ್ಯಾಣದಲ್ಲಿ ಸೋಲಿಗೆ ಅಧ್ಯಕ್ಷ ಅಶೋಕ್ ತನ್ವರ್ ಕಾರಣವೆಂದು ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಬಣದಿಂದ ಆರೋಪಿಸಿಲಾಯಿತು. ಈ ಆರೋಪಕ್ಕೆ ಸಿಟ್ಟಿಗೆದ್ದ ಅಶೋಕ್ ತನ್ವರ್ ಅವರು ಈ ನನ್ನನ್ನ ಮುಗಿಸಬೇಕು ಅಂತಿದ್ದರೆ ನನಗೆ ಶೂಟ್ ಮಾಡಿ, ಹರ್ಯಾಣದಲ್ಲಿ ಕೈ ಸೋಲಿಗೆ ನಾನು ಕಾರಣವಾಗಿದ್ದರೆ ನನ್ನನ್ನು ಶೂಟ್ ಮಾಡಿ ಕೊಂದು ಬಿಡಿ ಎಂದು ಆರ್ಭಟಿಸಿದ್ದಾರೆ.

    ನಾಯಕರ ಈ ಜಟಾಪಟಿಕೆ ಬೇಸತ್ತ ಗುಲಾಂ ನಬಿ ಆಜಾದ್ ಅವರು ಸಭೆಯ ಅರ್ಧದಲ್ಲೇ ಎದ್ದು ಹೋದರು ಎಂದು ವರದಿಯಾಗಿದೆ. ಇದರಿಂದ ಲೋಕಸಭೆಯಲ್ಲಿ ಕೈ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಿಯಂತ್ರಣ ಕಳೆದುಕೊಳ್ತಿದಿಯಾ ಎಂಬ ಅನುಮಾನ ಹುಟ್ಟುಕೊಂಡಿದೆ.

    ಇದೇ ಅಕ್ಟೋಬರ್ ತಿಂಗಳಲ್ಲಿ ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್ ಸಭೆಯಲ್ಲಿ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಮಾತನಾಡುವಾಗ ನಾಯಕರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಸಭೆಯಲ್ಲಿ ಆಜಾದ್ ಅವರು ಹರ್ಯಾಣದಲ್ಲಿ ನಡೆಯುವ ಚುನಾವಣೆಗೆ ಹೇಗೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬ ಚರ್ಚೆ ನಡೆಯುತಿತ್ತು. ಅಲ್ಲದೆ ಹರ್ಯಾಣದ ಪ್ರತಿ ಜಿಲ್ಲೆಯಲ್ಲೂ ಪಕ್ಷದ ಸಭೆ ನಡೆಸಿ ಮತದಾರರನ್ನು ಸೆಳೆಯುವ ಕೆಲಸವಾಗಬೇಕು ಎಂದು ನಿರ್ಧರಿಸಲಾಗಿತ್ತು ಎನ್ನಲಾಗಿದೆ.

    ಈ ವೇಳೆ ಸಭೆ ಮಧ್ಯೆ ಹರ್ಯಾಣ ನಾಯಕರ ನಡುವೆ ಜಗಳ ಆರಂಭವಾಯ್ತು. ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆ ಸುರಿಸಿದರು. ಆಗ ಹರ್ಯಾಣದಲ್ಲಿ ಕಾಂಗ್ರೆಸ್ ಸೋಲಲು ತನ್ವರ್ ಅವರೇ ಕಾರಣ ಎಂದು ಹೂಡಾ ಬಣದಿಂದ ಆರೋಪ ಕೇಳಿಬಂದಿದೆ. ಹೀಗಾಗಿ ರೊಚ್ಚಿಗೆದ್ದ ತನ್ವರ್ ಅವರು ನಾನು ಒಬ್ಬಂಟಿಯಾಗಿಯೇ ನಿಮ್ಮೆಲ್ಲರನ್ನು ಎದುರಿಸುತ್ತೇನೆ. ಒಂದುವೇಳೆ ನನ್ನನ್ನು ಸಾಯಿಸಬೇಕಾದರೆ ನನಗೆ ಗುಂಡು ಹೊಡೆಯಿರಿ ಎಂದು ಸಭೆಯಿಂದ ಹೊರನಡೆದರು.

    ಬಳಿಕ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಎಲ್ಲರಿಗೂ ಕಿವಿ ಮಾತು ಹೇಳಿದರು. ನೀವು ಈ ರೀತಿ ಒಬ್ಬರ ಮೇಲೋಬ್ಬರು ಆರೋಪ ಮಾಡಿಕೊಂಡು ದ್ವೇಷ ಸಾಧಿಸಿದರೆ ಎನೂ ಲಾಭವಾಗುವುದಿಲ್ಲ. ನಾವು ಚುನಾವಣೆಯನ್ನು ಗೆದ್ದು ಆಡಳಿತಕ್ಕೆ ಬರಬೇಕೆಂದರೆ ಒಗ್ಗಟ್ಟಿನಿಂದ ಇರಬೇಕು ಎಂದರು. ಬಳಿಕ ಎಲ್ಲರೂ ಆಜಾದ್ ಅವರಿಗೆ ಕ್ಷಮೆ ಕೇಳಿ ಮತ್ತೆ ಸಭೆಯನ್ನು ಮುಂದುವರಿಸಿದರು. ಆದರೆ ಅಧಿಕೃತವಾಗಿ ಯಾವುದೇ ತಿರ್ಮಾನಗಳನ್ನು ಕೂಡ ಸಭೆಯಲ್ಲಿ ತೆಗೆದುಕೊಂಡಿಲ್ಲ ಎಂದು ಕೈ ನಾಯಕರು ತಿಳಿಸಿದರು.

  • ಪಾಪ ಸಜ್ಜನ ವ್ಯಕ್ತಿ ಮುದ್ದಹನುಮೇಗೌಡರನ್ನು ರಾಜಕೀಯವಾಗಿ ಸಾಯಿಸಿದ್ರು: ಹೆಚ್‍ಡಿಡಿಗೆ ರಾಜಣ್ಣ ಟಾಂಗ್

    ಪಾಪ ಸಜ್ಜನ ವ್ಯಕ್ತಿ ಮುದ್ದಹನುಮೇಗೌಡರನ್ನು ರಾಜಕೀಯವಾಗಿ ಸಾಯಿಸಿದ್ರು: ಹೆಚ್‍ಡಿಡಿಗೆ ರಾಜಣ್ಣ ಟಾಂಗ್

    ತುಮಕೂರು: ಕಾಂಗ್ರೆಸ್- ಜೆಡಿಎಸ್ ಮೈತ್ರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ಬಂದಿದ್ದಾರೆ. ಯಾಕೆ ಅವರಿಗೆ ಹಾಸನದಲ್ಲಿ ಜಾಗ ಇರಲಿಲ್ವಾ? ಇಲ್ಲಿಗೆ ಬಂದು ಪಾಪ ಸಜ್ಜನ ವ್ಯಕ್ತಿ ಮುದ್ದಹನುಮೇಗೌಡರನ್ನು ರಾಜಕೀಯವಾಗಿ ಸಾಯಿಸಿದರು ಎಂದು ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.

    ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಮುದ್ದಹನುಮೇಗೌಡರಿಗೆ ಮೋಸ ಆಗಿದೆ. ಲೋಕಸಭಾ ಚುನಾವಣೆಗೆ ಪಕ್ಷದಲ್ಲಿ 44ರಲ್ಲಿ 43 ಜನರಿಗೆ ಟಿಕೆಟ್ ಕೊಟ್ಟಿದ್ದಾರೆ ಆದ್ರೆ ಮುದ್ದಹನುಮೇಗೌಡರಿಗೆ ಮಾತ್ರ ಕೊಡಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಮೈತ್ರಿ ಧರ್ಮ ಅನ್ನುತ್ತಾರೆ. ಮೈತ್ರಿಯಲ್ಲಿ ದೇವೇಗೌಡರು ತುಮಕೂರಿಗೆ ಬಂದಿದ್ದಾರೆ. ಯಾಕೆ ಹಾಸನದಲ್ಲಿ ಜಾಗ ಇರಲಿಲ್ವಾ? ದೇವೇಗೌಡರು ಇಲ್ಲಿ ಸ್ಪರ್ಧೆಗಿಳಿಯುವ ಮೂಲಕ ಪಾಪ ಸಜ್ಜನ ವ್ಯಕ್ತಿ ಮುದ್ದಹನುಮೇಗೌಡರನ್ನು ರಾಜಕೀಯವಾಗಿ ಸಾಯಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದೇವೇಗೌಡರು ದೇಶಕ್ಕಾಗಿ ದುಡಿದಿದ್ದಾರೆ. ಆದರೆ ಹೇಮಾವತಿ ನೀರು ಬಿಟ್ಟಿಲ್ಲ. ನಾಡಿದ್ದು ನಡೆಯುವ ಸಿದ್ದರಾಮಯ್ಯರ ನೇತೃತ್ವದ ಸಭೆಗೆ ನಾನೂ ಮುದ್ದಹನುಮೇಗೌಡ ಹೋಗುತ್ತೀವಿ ಎಂದರು. ಬಳಿಕ ನಾನು ಪರಮೇಶ್ವರ್ ಬೆನ್ನಿಗೆ ನಿಂತು ಕಳೆದ ಬಾರಿ ಗೆಲ್ಲಿಸಿಕೊಂಡು ಬಂದಿದ್ದೇನೆ. ನಾನೂ ಸೋತರೂ ಪರವಾಗಿಲ್ಲ ಎಂದು ಅವರಿಗಾಗಿ ದುಡಿದೆ ಎಂದರು.

  • 15 ವರ್ಷಗಳಿಂದ ನಾನು ಬಲ್ಲೆ, ಆಕೆ ಸೋದರಿ ಸಮಾನ – ಸಿದ್ದರಾಮಯ್ಯ

    15 ವರ್ಷಗಳಿಂದ ನಾನು ಬಲ್ಲೆ, ಆಕೆ ಸೋದರಿ ಸಮಾನ – ಸಿದ್ದರಾಮಯ್ಯ

    ಬೆಂಗಳೂರು: ಮಹಿಳೆಯ ಕೈಯಿಂದ ಮೈಕ್ ಎಳೆದ ಘಟನೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಟೀಕೆ ಕೇಳಿ ಬಂದ ನಂತರ ಎಚ್ಚರಗೊಂಡ ಸಿದ್ದರಾಮಯ್ಯ ಆಕೆ ನನ್ನ ಸೋದರಿ ಸಮಾನ ಎಂದು ಹೇಳಿದ್ದಾರೆ.

    ಈ ಘಟನೆಯ ಬಗ್ಗೆ ಟ್ವಿಟ್ಟರಿನಲ್ಲಿ ಸ್ಪಷ್ಟನೆ ನೀಡಿದ ಅವರು, ಇಂದು ವರುಣ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತೆಯೊಬ್ಬರ ದೀರ್ಘ ಭಾಷಣವನ್ನು ನಿಲ್ಲಿಸಲು ಪ್ರಯತ್ನಿಸುವಾಗ ನಡೆದ ಘಟನೆ ಆಕಸ್ಮಿಕವಾದುದು, ಅದರಲ್ಲಿ ದುರುದ್ದೇಶ ಇರಲಿಲ್ಲ. 15 ವರ್ಷಗಳಿಂದ ನಾನು ಬಲ್ಲ ಆ ಕಾರ್ಯಕರ್ತೆ ನನ್ನ ಸೋದರಿ ಸಮಾನ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಬಿಜೆಪಿಗೆ ತಿರುಗೇಟು: ವರುಣಾ ಕ್ಷೇತ್ರದಲ್ಲಿ ನಡೆದ ಘಟನೆ ಬಗ್ಗೆ ಪಕ್ಷದ ಕಾರ್ಯಕರ್ತೆ ಜಮಲಾರ್ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ನಾಯಕರು ಘಟನೆಗೆ ರಾಜಕೀಯ ಬಣ್ಣ ಬಳಿಯುವ ಮೂಲಕ ಆ ಹೆಣ್ಣುಮಗಳನ್ನು ಅವಮಾನಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಮಹಿಳೆಯರ ಮೇಲೆ ಇರುವ ಗೌರವ ಲೋಕಕ್ಕೆ ಗೊತ್ತು. ಇವರಿಂದ ನಾನು ಕಲಿಯುವುದೇನಿಲ್ಲ.

    ನಡೆದಿದ್ದು ಏನು?
    ವರುಣಾ ವಿಧಾನಸಭಾ ವ್ಯಾಪ್ತಿಯ ಗರ್ಗೇಶ್ವರಿ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಬಳಿಕ  ಸಭೆ ನಡೆಯಿತು. ಈ ವೇಳೆ ಜಮಾಲರ್ ಅವರು ನಿಮ್ಮ ಮಗ ಎಂಎಲ್‍ಎ ಆಗಿದ್ದಾರೆ. ಆದ್ರೆ ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ ಎಂದು ಶಾಸಕ ಯತೀಂದ್ರ ಅವರ ವಿರುದ್ಧ ಟೇಬಲ್ ಕುಟ್ಟಿ ಏರು ಧ್ವನಿಯಲ್ಲಿ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಕೋಪಗೊಂಡ ಸಿದ್ದರಾಮಯ್ಯ ಎಲ್ಲರ ಎದುರೇ  ಜಮಾಲರ್  ಕೈಯಲ್ಲಿದ್ದ  ಮೈಕನ್ನು ಕಿತ್ತುಕೊಂಡು ಸಿಡಿಮಿಡಿಗೊಂಡಿದ್ದಾರೆ.
    ಇದನ್ನೂ ಓದಿ: ಸಿದ್ದರಾಮಯ್ಯ ಒಳ್ಳೆಯವ್ರು, ಒಳ್ಳೆಯವ್ರು: ಮಹಿಳೆ ಸ್ಪಷ್ಟನೆ

    ನಿಮ್ಮ ಮಗ ಕೈಗೆ ಸಿಗಲ್ಲ ಎಂದು ದೂರು ಹೇಳಿದಕ್ಕೆ ಕೆಂಡಮಂಡಲರಾದ ಸಿದ್ದರಾಮಯ್ಯ, ಮಹಿಳೆಯನ್ನು ತರಾಟೆಗೆ ತೆಗೆದುಕೊಂಡು ಬಾಯಿ ಮುಚ್ಚಿಸಿದರು. ಅಷ್ಟೇ ಅಲ್ಲದೆ ಏನಮ್ಮ ನಾವು ದೇಶಕ್ಕೆ ಅನ್ಯಾಯ ಮಾಡಿರುವ ಥರ ಮಾತಾಡ್ತಿದ್ದೀಯಾ. ನನ್ನ ಮುಂದೆಯೇ ಟೇಬಲ್ ಕುಟ್ಟಿ ಮಾತನಾಡುತ್ತಿದ್ದಿಯಾ? ಕೂತ್ಕೊಳಮ್ಮ ಸುಮ್ಮನೆ ಎಂದು ಕೊನೆಗೆ ಮಹಿಳೆ ಬಳಿ ಇದ್ದ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶಿಸಿದ್ದರು.

    ವರುಣಾ ವಿಧಾನಸಭಾ ವ್ಯಾಪ್ತಿಯ ಗರ್ಗೇಶ್ವರಿ ಗ್ರಾಮದಲ್ಲಿ ಮಹಿಳೆ ಜಮಲಾರ್ ಮಾಜಿ ಸಿಎಂ ಸಿದ್ದರಾಮಯ್ಯ ಮುಂದೆ ಹೇಳಿದ್ದು ಏನು? ಸಿದ್ದರಾಮಯ್ಯ ಎಳೆದು ಮೈಕ್ ಕಿತ್ತುಕೊಂಡಿದ್ದು ಯಾಕೆ? ಸಭೆಯ ಬಳಿಕ ಏನಾಯ್ತು? ಎಲ್ಲ ಘಟನೆಗಳನ್ನು ಈ ವಿಡಿಯೋದಲ್ಲಿ ನೋಡಿ.

    https://www.youtube.com/watch?v=PSJHRv9TPRc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಜಾತಿಗಣತಿ, ಸದಾಶಿವ ವರದಿ ಜಾರಿಯಾಗುತ್ತಾ? – ಸಿಎಂ ನೇತೃತ್ವದಲ್ಲಿಂದು ಶಾಸಕಾಂಗ ಸಭೆ

    ಜಾತಿಗಣತಿ, ಸದಾಶಿವ ವರದಿ ಜಾರಿಯಾಗುತ್ತಾ? – ಸಿಎಂ ನೇತೃತ್ವದಲ್ಲಿಂದು ಶಾಸಕಾಂಗ ಸಭೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

    ದಲಿತ ಎಡಗೈ ಸಮುದಾಯಕ್ಕೆ ಹೆಚ್ಚುವರಿ ಮೀಸಲಾತಿ ಕಲ್ಪಿಸುವಂತೆ ಶಿಫಾರಸ್ಸು ಮಾಡಲಾಗಿರುವ ಸದಾಶಿವ ಅವರ ವರದಿ ಜಾರಿ ವಿಚಾರ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ನ ಎಡಗೈ ಸಮುದಾಯದ ಶಾಸಕರು ಸದಾಶಿವ ಆಯೋಗದ ವರದಿ ಜಾರಿಯಾದರೆ ರಾಜಕೀಯವಾಗಿ ಲಾಭವಾಗುತ್ತೆ ಅನ್ನೋ ಒತ್ತಡ ತರುತ್ತಿದ್ದರು. ಆದ್ದರಿಂದ ಇಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ.

    ಸಾಮಾಜಿಕ ಆರ್ಥಿಕ ಗಣತಿ ಮತ್ತು ಜಾತಿ ಜನಗಣತಿ ವರದಿ ಬಿಡುಗಡೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಇದರ ಲಾಭ ನಷ್ಟಗಳ ಬಗ್ಗೆಯೂ ಗಂಭೀರ ಚರ್ಚೆ ನಡೆಯಲಿದೆ. ಚುನಾವಣಾ ಸಂದರ್ಭದಲ್ಲಿ ಬಿಡುಗಡೆ ಆಗುವುದರಿಂದ ಆಗುವ ಲಾಭ-ನಷ್ಟದ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ. ಎರಡು ವಿಚಾರದಲ್ಲಿ ಶಾಸಕರು ವ್ಯಕ್ತಪಡಿಸುವ ಅಭಿಪ್ರಾಯದ ಬಳಿಕ ಮುಂದಿನ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಕೈಗೊಳ್ಳಲಿದ್ದಾರೆ. ಎರಡು ವರದಿಗಳ ಜಾರಿ ಹಿಂದೆ ದಲಿತ ಪಾಲಿಟಿಕ್ಸ್ ನ ಲಾಭ ನಷ್ಟದ ಲೆಕ್ಜಾಚಾರವಿದೆ ಎನ್ನುವುದು ಸ್ಪಷ್ಟವಾಗಿದೆ.

    ಇನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ವಿಚಾರದಲ್ಲಿ ರಮೇಶ್ ಕುಮಾರ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಏನು ಉತ್ತರ ಕೊಡಲಿದ್ದಾರೆ ಎಂಬ ಕುತೂಹಲ ಸಹಜವಾಗಿದೆ. ಈ ತಿದ್ದುಪಡಿ ಕಾಯ್ದೆ ಜಾರಿ ಆಗದಿದ್ದರೆ ತಾವು ರಾಜೀನಾಮೆಗೂ ಸಿದ್ಧ ಎಂದು ರಮೇಶ್ ಕುಮಾರ್ ಈಗಾಗಲೇ ಸಿಎಂಗೆ ತಿಳಿಸಿದ್ದಾರೆ.

    ಮೌಢ್ಯ ಪ್ರತಿಬಂಧಕ ಕಾಯ್ದೆ ಬಗ್ಗೆಯೂ ಚರ್ಚೆ ನಡೆಯಲಿದೆ. ಸದನದಲ್ಲಿ ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರದ ಬಗ್ಗೆಯೂ ಚರ್ಚೆ ನಡೆಯಲಿದ್ದು, ಚುನಾವಣೆ ಸಮೀಪ ಬರುತ್ತಿದ್ದಂತೆ ಕ್ಷೇತ್ರದಲ್ಲಿ ಸಕ್ರಿಯವಾಗಿರುವಂತೆ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡುವ ಸಾಧ್ಯತೆ ಇದೆ.