Tag: ಕಾಂಗ್ರೆಸ್ ಸಂಸದ

  • `ಕಾಂಗ್ರೆಸ್ ಪ್ರೆಸೆಂಟ್ಸ್-ದಿ ಮನಿ ಹೀಸ್ಟ್ʼ- ಭಾರತವನ್ನೇ ಲೂಟಿ ಮಾಡುವ ಪಕ್ಷ ಇರುವಾಗ ʻಮನಿ ಹೀಸ್ಟ್‌ʼ ಯಾರಿಗೆ ಬೇಕು? – ಮೋದಿ ವ್ಯಂಗ್ಯ

    `ಕಾಂಗ್ರೆಸ್ ಪ್ರೆಸೆಂಟ್ಸ್-ದಿ ಮನಿ ಹೀಸ್ಟ್ʼ- ಭಾರತವನ್ನೇ ಲೂಟಿ ಮಾಡುವ ಪಕ್ಷ ಇರುವಾಗ ʻಮನಿ ಹೀಸ್ಟ್‌ʼ ಯಾರಿಗೆ ಬೇಕು? – ಮೋದಿ ವ್ಯಂಗ್ಯ

    ನವದೆಹಲಿ: ಕಾಂಗ್ರೆಸ್ ಸಂಸದ ಧೀರಜ್ ಸಾಹು (Dhiraj Sahu) ಅವರ ಮನೆಯಿಂದ ಆದಾಯ ತೆರಿಗೆ ಇಲಾಖೆ 350 ಕೋಟಿಗೂ ಅಧಿಕ ಹಣ ಮತ್ತು ಸುಮಾರು 3 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಜನಪ್ರಿಯ ‘ಮನಿ ಹೀಸ್ಟ್’ (Money Heist) ವೆಬ್ ಸೀರೀಸನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಕಳೆದ 70 ವರ್ಷಗಳಿಂದ ದೇಶವನ್ನು ಲೂಟಿ ಮಾಡುತ್ತಿದೆ. ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಸಾಹುಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿ ಆದಾಯ ತೆರಿಗೆ ಇಲಾಖೆ (Income Tax Department) ದಾಖಲೆಯ 353 ಕೋಟಿ ರೂ. ನಗದು ವಶಪಡಿಸಿಕೊಂಡಿರುವುದೇ ಇದಕ್ಕೆ ತಾಜಾ ಉದಾಹರಣೆಯಾಗಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ರಾಜಮನೆತನದಿಂದ ರಾಜಕೀಯಕ್ಕೆ; ರಾಜಸ್ಥಾನದ ನೂತನ ಡಿಸಿಎಂ ದಿಯಾ ಕುಮಾರಿ – ಯಾರು ಈ ರಾಜಕುಮಾರಿ?

    ಕಾಂಗ್ರೆಸ್‌ ಪಕ್ಷ ಕಳೆದ 70 ವರ್ಷಗಳಿಂದಲೂ ಭಾರತವನ್ನೂ ಲೂಟಿ ಮಾಡುತ್ತಾ ಬಂದಿದೆ. ಇಂತಹ ಪಕ್ಷವನ್ನೇ ಭಾರತ ಹೊಂದಿರುವ ಮನಿ ಹೀಸ್ಟ್‌ ಸಿರೀಸ್‌ ಯಾರಿಗೆ ಬೇಕಾಗಿದೆ? ಎಂದು ಕುಟುಕಿದ್ದಾರೆ. ಅಷ್ಟೇ ಅಲ್ಲದೇ ʻಕಾಂಗ್ರೆಸ್ ಪ್ರೆಸೆಂಟ್ಸ್ – ದಿ ಮನಿ ಹೀಸ್ಟ್ʼಹೆಸರಿನಲ್ಲಿ ಬಿಜೆಪಿ ಹಂಚಿಕೊಂಡಿರುವ ವಿಶೇಷ ವೀಡಿಯೋವನ್ನೂ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಕಾಂಗ್ರೆಸ್‌ ಸಂಸದರ ಮನೆ ಮೇಲೆ ನಡೆದ ಐಟಿ ದಾಳಿ ವಿಷಯವಾಗಿ ಇದು ಮೋದಿ ಅವರ 2ನೇ ಪ್ರತಿಕ್ರಿಯೆಯಾಗಿದೆ. ಇತ್ತೀಚೆಗೆ ಜನರಿಂದ ಲೂಟಿ ಮಾಡಿದ ಪ್ರತಿಯೊಂದು ಪೈಸೆಯನ್ನೂ ವಾಪಸ್ ಪಡೆಯುವುದು ಮೋದಿಯವರ ಗ್ಯಾರಂಟಿ ಎಂದು ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ ಸ್ಕಂದಗಿರಿ – ಇಲ್ಲಿದೆ ಸಂಪೂರ್ಣ ಮಾಹಿತಿ

    ಇನ್ನೂ ಹೆಚ್ಚುತ್ತಲೇ ಇದೆ ಕಾಂಚಾಣ: ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ ಸಂಸದ ಧೀರಜ್‌ ಸಾಹು ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಐಟಿ ದಾಳಿ ನಡೆದಿದ್ದು, ಈವರೆಗೆ 353 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದೆ. ಇದು ಭಾರತದಲ್ಲಿ ಅತಿದೊಡ್ಡ ಐಟಿ ದಾಳಿ ಎಂದು ಕೆಲವರು ಹೇಳಿದ್ದಾರೆ. ಓವರೆಗೆ 28 ಮಿಷಿನ್‌ಗಳನ್ನು ಹಣ ಎಣಿಕೆ ಕಾರ್ಯಕ್ಕೆ ಬಳಸಲಾಗಿದೆ. ಹಣ ಬಚ್ಚಿಟ್ಟಿರುವ ಬಗ್ಗೆ ಇನ್ನಷ್ಟು ಮಾಹಿತಿ ಪತ್ತೆಯಾಗಿದ್ದು, ಪರಿಶೀಲಿಸಬೇಕಾದ ಸ್ಥಳಗಳು ಬಾಕಿಯಿವೆ. ತಪಾಸಣೆ ಬಳಿಕ ಹಣದ ಮೌಲ್ಯ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಐಟಿ ಅಧಿಕಾರಿ ಮೂಲಗಳು ತಿಳಿಸಿವೆ. ಸದ್ಯ ಧೀರಜ್ ಸಾಹು ಅವರ ನಿವಾಸ, ಕಚೇರಿಯ ಮೇಲೆ ನಡೆದ ಐಟಿ ದಾಳಿ ಬಗ್ಗೆ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡದೇ ಅಂತರ ಕಾಯ್ದುಕೊಂಡಿದೆ.

  • ಬಿಜೆಪಿಯೇತರ ಪ್ರತಿಪಕ್ಷಗಳ ಆಧಾರ ಸ್ತಂಭ ಮಮತಾ ಬ್ಯಾನರ್ಜಿ: ಕಾಂಗ್ರೆಸ್‌ ಸಂಸದ ಬಣ್ಣನೆ

    ಬಿಜೆಪಿಯೇತರ ಪ್ರತಿಪಕ್ಷಗಳ ಆಧಾರ ಸ್ತಂಭ ಮಮತಾ ಬ್ಯಾನರ್ಜಿ: ಕಾಂಗ್ರೆಸ್‌ ಸಂಸದ ಬಣ್ಣನೆ

    ಲಕ್ನೋ: ಮಮತಾ ಬ್ಯಾನರ್ಜಿ ಅವರು ದೇಶದ ಬಿಜೆಪಿಯೇತರ ಪ್ರತಿಪಕ್ಷಗಳ ಆಧಾರ ಸ್ತಂಭ ಎಂದು ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಬಣ್ಣಿಸಿದ್ದಾರೆ.

    ಈ ಕುರಿತು ಟ್ವೀಟ್‌ ಮಾಡಿರುವ ಅವರು, ಬಿಜೆಪಿಯೇತರ ಪ್ರತಿಪಕ್ಷ ಇಂದಿನ ಅಗತ್ಯವಾಗಿದೆ. ಈ ಪ್ರತಿಪಕ್ಷಕ್ಕೆ ಮಮತಾ ಬ್ಯಾನರ್ಜಿ ಅವರೇ ಆಧಾರ ಸ್ತಂಭ. 2024ರ ಲೋಕಸಭಾ ಚುನಾವಣೆಯಲ್ಲಿ ಮತ ವಿಭಜನೆಯಾಗುವುದನ್ನು ತಡೆಗಟ್ಟಲು ಪ್ರತಿ ರಾಜ್ಯಗಳಲ್ಲೂ ಪ್ರತಿಪಕ್ಷಗಳು ಒಂದಾಗಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಮೋದಿ ಫೋಟೋ ಹಾಕಿದ ಮುಸ್ಲಿಂ ವ್ಯಕ್ತಿಗೆ ಮಾಲೀಕ ಬೆದರಿಕೆ

    ಬಿಜೆಪಿಯ ಅತ್ಯುತ್ತಮ ಗೆಲುವು ಶೇ.39 ಮತಗಳನ್ನು ಮೀರುವುದಿಲ್ಲ. ಬಿಜೆಪಿಯೇತರ ಜಾಗವನ್ನು ಒಗ್ಗೂಡಿಸಲು ಮಮತಾ ಮತ್ತು ಉಳಿದವರೆಲ್ಲರೂ ಮುಂದಾಗಬೇಕು ಎಂದು ಟ್ವೀಟ್‌ ಮಾಡಿ ಅಭಿಪ್ರಾಯಪಟ್ಟಿದ್ದಾರೆ.

    ಬಿರ್‌ಭೂಮ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಬಿಜೆಪಿ ಗಧಾಪ್ರಹಾರ ನಡೆಸುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿಯನ್ನು ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಂದಾಗಬೇಕು ಎಂದು ಎಲ್ಲಾ ಪ್ರತಿಪಕ್ಷಗಳಿಗೆ ಮಮತಾ ಬ್ಯಾನರ್ಜಿ ಅವರು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ

  • ಡಿ.ಕೆ.ಸುರೇಶ್‍ಗಾಗಿ ಕನ್ನಡ ಕಲಿತ ಲಡಾಖ್ ಬಿಜೆಪಿ ಸಂಸದ

    ಡಿ.ಕೆ.ಸುರೇಶ್‍ಗಾಗಿ ಕನ್ನಡ ಕಲಿತ ಲಡಾಖ್ ಬಿಜೆಪಿ ಸಂಸದ

    -‘ಬಿಜೆಪಿ ಸೇರ್ಕೊಳ್ಳಿ’ ಅಂತ ಬರೆದು ಟ್ಟೀಟ್

    ನವದೆಹಲಿ: ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರನ್ನು ಬಿಜೆಪಿ ಸೇರಿಸಿಕೊಳ್ಳಲು ಲಡಾಖ್ ಸಂಸದ ಜಮ್‍ಯಾಂಗ್ ಟ್ಸೆರಿಂಗ್ ನಮ್‍ಯಾಂಗ್ ಕನ್ನಡ ಕಲಿತಿದ್ದಾರೆ.

    ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರದ ಬಗ್ಗೆ ಭಿನ್ನಾಭಿಪ್ರಾಯದಿಂದಾಗಿ ಮಂಗಳವಾರ ಸಂಸತ್ತಿನ ಪ್ರಕ್ರಿಯೆಗಳು ಅಸ್ತವ್ಯಸ್ತಗೊಂಡವು. ಆದರೆ ರಾಜಕೀಯ ಪ್ರತಿಸ್ಪರ್ಧಿಗಳಲ್ಲಿ ಇನ್ನೂ ಸ್ನೇಹ ಇದೆ ಎಂದು ಬಿಜೆಪಿ ಸಂಸದರು ತೋರಿಸಿದ್ದಾರೆ. ಲಡಾಖ್ ಸಂಸದ ಜಮ್‍ಯಾಂಗ್ ಟ್ಸೆರಿಂಗ್ ನಮ್‍ಯಾಂಗ್ ಅವರು ಕರ್ನಾಟಕದ ಮೂವರು ಸಂಸದರೊಂದಿಗೆ ಇರುವ ಫೋಟೋವನ್ನು ಮಂಗಳವಾರ ಟ್ವೀಟ್ ಮಾಡಿದ್ದಾರೆ.

    ಸಂಸದ ನಮ್‍ಯಾಂಗ್ ಅವರಿಗೆ ಕರ್ನಾಟಕದ ಮೂವರು ಸಂಸದರು ಕನ್ನಡ ಕಲಿಸಿದ್ದಾರೆ. ಆದರೆ ಕನ್ನಡ ಕಲಿತ ನಮ್‍ಯಾಂಗ್ ಡಿಕೆ ಸುರೇಶ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಫೋಟೋದಲ್ಲಿ ನಮ್‍ಯಾಂಗ್ ಅವರು ಕರ್ನಾಟಕದ ಬಿಜೆಪಿ ಸಂಸದರಾದ ಪ್ರತಾಪ್ ಸಿಂಹಾ, ತೇಜಸ್ವಿ ಸೂರ್ಯ ಹಾಗೂ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರು ಎಷ್ಟು ಕನ್ನಡ ಕಲಿತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಕಾಂಗ್ರೆಸ್ ಸಂಸದರಿಗೆ ಹೇಳಲು ಸಾಕಷ್ಟು ಕಲಿತಿದ್ದೇನೆ ಎಂದು ನಮ್‍ಯಾಂಗ್ ಹೇಳಿದ್ದಾರೆ. ನಾನು ಡಿ.ಕೆ.ಸುರೇಶ್ ಅವರಿಗೆ ‘ಬಿಜೆಪಿ ಸೇರಿಕೊಳ್ಳಿ’ ಅಂತ ಹೇಳಿದೆ ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ವಿಶೇಷವೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಗೆದ್ದ ಏಕೈಕ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಆಗಿದ್ದಾರೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25 ಕ್ಷೇತ್ರ, ಪಕ್ಷೇತರ ಅಭ್ಯರ್ಥಿ ಹಾಗೂ ಜೆಡಿಎಸ್ ಅಭ್ಯರ್ಥಿ ತಲಾ ಒಂದು ಕ್ಷೇತ್ರದಲ್ಲಿ ಗೆದ್ದಿದ್ದರು.

    ಸಂಸದ ನಮ್‍ಯಾಂಗ್ ಅವರ ಟ್ವೀಟ್ ಭಾರೀ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದು, ಕೆಲ ನೆಟ್ಟಿಗರು ಸೂಪರ್ ಸರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು, ‘ಈ ಪುಣ್ಯಾತ್ಮ ಪೂರ್ತಿ ಕನ್ನಡ ಕಲಿಯೋದು ಬೇಡ ದೇವ್ರೇ. ಮಾತಾಡಿ ಮಾತಾಡಿನೇ ಎಲ್ಲರನ್ನೂ ಬಿಜೆಪಿಗೆ ಸೇರಿಸುವ ಹಾಗೆ ಮಾಡಿ ಬಿಡ್ತಾನೆ’ ಎಂದು ಪ್ರತಿಕ್ರಿಯಿಸಿದ್ದಾರೆ.