ಚಿಕ್ಕಮಗಳೂರು: ತಮ್ಮದೇ ಸರ್ಕಾರ ವಿದ್ಯುತ್ ಫ್ರೀ (Free Electricity) ಕೊಟ್ಟರೂ ಗ್ರಾಮ ಪಂಚಾಯಿತಿ ಸದಸ್ಯೆ ಕರೆಂಟ್ ಕದ್ದು ಸಿಕ್ಕಿಬಿದ್ದಿದ್ದಾರೆ.
ಚಿಕ್ಕಮಗಳೂರು (Chikkamagaluru) ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕಡಬಗೆರೆಯ ತಮ್ಮ ಮೂರು ಮನೆಗಳಿಗೆ ಪಂಚಾಯ್ತಿ ಸದಸ್ಯೆ ಆಶಾ ನಾರಾಯಣ್ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದರು. ವಿಷಯ ತಿಳಿದು ದಾಳಿ ನಡೆಸಿದ ಮೆಸ್ಕಾಂ ಅಧಿಕಾರಿಗಳು 1 ಲಕ್ಷಕ್ಕೂ ಹೆಚ್ಚು ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರಿಗೆ ನಿಂದನೆ; ಕಾಂಗ್ರೆಸ್ ನಾಯಕರ ವಿರುದ್ಧ ಡಿಜಿಪಿಗೆ ಬಿಜೆಪಿ ದೂರು

ಎನ್.ಆರ್.ಪುರ ತಾಲೂಕಿನ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ಆಶಾ ನಾರಾಯಣ್, ಕಡಬಗೆರೆಯಲ್ಲಿ ಮೂರು ಮನೆಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದರು. ವಿಷಯ ತಿಳಿದು ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಮನೆ ಮೇಲೆ ಮೆಸ್ಕಾಂ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದರು.
ಮೆಸ್ಕಾಂ ಅಧಿಕಾರಿಗಳ ತಂಡ ಮಂಗಳೂರಿನಿಂದ ಆಗಮಿಸಿತ್ತು. ಕಾಂಗ್ರೆಸ್ ನಾಯಕಿಗೆ 1 ಲಕ್ಷಕ್ಕೂ ಹೆಚ್ಚು ದಂಡ ವಿಧಿಸಿದೆ ಎಂದು ತಿಳಿದುಬಂದಿದೆ. ಅಕ್ರಮ ಗೊತ್ತಿದ್ದರೂ ಪ್ರಭಾವಿ ಎನ್ನುವ ಕಾರಣಕ್ಕೆ ಸ್ಥಳೀಯ ಅಧಿಕಾರಿಗಳು ಸುಮ್ಮನಾಗಿದ್ದರು ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಕವರ್ಗೆ ಹೀಲಿಯಂ ಗ್ಯಾಸ್ ತುಂಬಿಸಿಕೊಂಡು ಟೆಕ್ಕಿ ಆತ್ಮಹತ್ಯೆ
ಇದೀಗ ಮಂಗಳೂರು ಅಧಿಕಾರಿಗಳಿಂದಲೇ ವಂಚನೆ ಬೆಳಕಿಗೆ ಬಂದಿದೆ. ಆಶಾ ನಾರಾಯಣ್ ಅವರು ದೇವದಾನ ಗ್ರಾಮ ಪಂಚಾಯಿತಿ ಸದಸ್ಯೆಯೂ ಆಗಿದ್ದಾರೆ.


ಟಿವಿ ಲೋಕದ ಬಿಗ್ ಶೋ ಅಂದ್ರೆ ಬಿಗ್ ಬಾಸ್ ಕಾರ್ಯಕ್ರಮವನ್ನ ಇಡೀ ಕರುನಾಡೆ ಕಾಯುತ್ತಿದೆ. ಬಿಗ್ ಬಾಸ್ ಕಾರ್ಯಕ್ರಮ ನೋಡಲು ಟಿವಿ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ನವ್ಯಶ್ರೀ ರಾವ್ ಹೆಸರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ. ಈ ಬಗ್ಗೆ ನವ್ಯ ಅವರನ್ನ ಕೇಳಲಾಗಿದೆ. ಇದನ್ನೂ ಓದಿ:
ಬಿಗ್ ಬಾಸ್ ಶೋನಿಂದ ಕರೆ ಬಂದರೆ ನಾನು ಯಾಕೆ ಬಿಗ್ ಬಾಸ್ಗೆ ಹೋಗಬಾರದು ಎಂದು ನವ್ಯಶ್ರೀ ಪ್ರಶ್ನಿಸಿದ್ದಾರೆ. ಕಾಂಟ್ರವರ್ಸಿಯಿಂದ ಗುರುತಿಸಿಕೊಂಡಿರುವ ಅದೆಷ್ಟೋ ಜನ ಬಿಗ್ ಬಾಸ್ಗೆ ಹೋಗಿದ್ದಾರೆ. ತಾವು ಎನೆಂಬುದು ಪ್ರೂವ್ ಕೂಡ ಮಾಡಿದ್ದಾರೆ. ನವ್ಯಶ್ರೀಯಲ್ಲಿರುವ ಮತ್ತೊಂದು ಪ್ರತಿಭೆ, ನಿಜವಾದ ವ್ಯಕ್ತಿತ್ವ ಎನು ಎಂಬುದು ತಿಳಿಯಲಿದೆ. ಬಿಗ್ ಬಾಸ್ ಅವಕಾಶ ಕೊಟ್ಟಾಗ ಯಾಕೆ ಹೋಗಬಾರದು ಎಂದು ನವ್ಯಶ್ರೀ ಪ್ರಶ್ನಿಸಿದ್ದಾರೆ. ನನಗೆ ಸಂಬಂಧಿಸಿದ ದಾಖಲೆ ಆ ವಾಹಿನಿಯ ಕಛೇರಿಗೆ ಹೋಗಿವೆ. ಕೆಲವು ಚರ್ಚೆ ಆಗಿದೆ ಎಂದು ತಿಳಿಸಿದ್ದಾರೆ. ನವ್ಯಶ್ರೀ ನಿಜಕ್ಕೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುತ್ತಾರಾ ಎಂಬುದು ಮುಂದಿನ ದಿನಗಳವರೆಗೆ ಕಾದುನೋಡಬೇಕಿದೆ.



