Tag: ಕಾಂಗ್ರೆಸ

  • ಸಿಎಂ ಭಾವುಕ ಭಾಷಣಕ್ಕೆ ಸಿ.ಎಂ ಇಬ್ರಾಹಿಂ ಲೇವಡಿ

    ಸಿಎಂ ಭಾವುಕ ಭಾಷಣಕ್ಕೆ ಸಿ.ಎಂ ಇಬ್ರಾಹಿಂ ಲೇವಡಿ

    ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಭಾವುಕ ಭಾಷಣ ಮಾಡಿದ್ದು, ಈ ಕುರಿತು ಇಂದು ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

    ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂಗೆ ಅಧಿಕಾರದಿಂದ ಕೆಳಗಿಳಿಯುವ ಮುನ್ಸೂಚನೆ ಸಿಕ್ಕಿದೆ. ಅದಕ್ಕೇ ನಿನ್ನೆ ಹಾಗೆ ಮಾತಾಡಿದ್ದಾರೆ. ಅಧಿಕಾರ ಶಾಶ್ವತ ಅಲ್ಲ ಎಂದು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಈ ಬದುಕು ಶಾಶ್ವತವಲ್ಲ, ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ: ಸಿಎಂ ವೈರಾಗ್ಯದ ಮಾತು

    ಮುಂದೆ ಜಾಗ ಖಾಲಿ ಮಾಡುವ ಸೂಚನೆ ಸಿಕ್ಕಿದೆ. ಅಧಿಕಾರ ಶಾಶ್ವತವಲ್ಲ ಅಂತ ಹೇಳ್ತಾರೆ. ಜೀವನವೇ ಶಾಶ್ವತವಲ್ಲ, ಕುರ್ಚಿ ಯಾವಾಗ ಶಾಶ್ವತ ಹೇಳಿ. ಅದನ್ನ ನೋಡಿ ಬಸವ ಕೃಪದವರು ಬಸವಕೃಪದಲ್ಲೇ ಇರಿ. ಕೇಶವ ಕೃಪ ನಂಬಿಹೋದ್ರೆ ಅಲ್ಲೂ ಇಲ್ಲ, ಇಲ್ಲೂ ಇಲ್ಲ. ನಾ ಘರ್ ಕಾ, ನಾ ಘಾಟ್ ಕಾ… ಬಸ್ ಸ್ಟಾಂಡ್ ಕಾ ಆಗುತ್ತೆ ಎಂದು ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.

    ಇದೇ ವೇಳೆ ಎಂಇಎಸ್ ಪುಂಡಾಟಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಿಗೆ ಎಂಇಎಸ್ ಬಗ್ಗೆ ಮಾತನ್ನಾಡಲು ಧಮ್ ಇಲ್ಲ. ವಾಟಾಳ್ ನಾಗರಾಜ್ ಗೆ ಇರುವ ಧೈರ್ಯ ಇಲ್ಲಿನ ನಾಯಕರಿಗ ಇಲ್ಲ ಎಂದು ವಾಗ್ದಾಳಿ ನಡೆಸಿದರು.

  • ಸಾಲ ಮಾಡಿದ್ದೇ ಸಿದ್ದರಾಮಯ್ಯ ಸಾಧನೆ – ಬಿಜೆಪಿ ಗೇಲಿ

    ಸಾಲ ಮಾಡಿದ್ದೇ ಸಿದ್ದರಾಮಯ್ಯ ಸಾಧನೆ – ಬಿಜೆಪಿ ಗೇಲಿ

    ಬೆಂಗಳೂರು: ಒಂದೆಡೆ ಅಭಿವೃದ್ಧಿ ವಿಷಯದ ಚರ್ಚೆ ಆದರೆ ಮತ್ತೊಂದೆಡೆ ಅಕ್ಕಿ ಸಮರ. ಬಿಜೆಪಿ ಟ್ವಿಟರ್‍ನಲ್ಲಿ ಸರಣಿ ಟ್ವೀಟ್ ಮಾಡಿ ಟೀಕಿಸಿದೆ.

    ತಾವು ಮುಖ್ಯಮಂತ್ರಿಯಾಗಿದ್ದಾಗ ಕೇವಲ 4 ವರ್ಷದ ಅವಧಿಯಲ್ಲಿ ಸಾಲ ಎತ್ತುವಳಿಯನ್ನು 4 ಲಕ್ಷ ಕೋಟಿಗೆ ತಲುಪಿಸಿದ್ದೇ ಸಿದ್ದರಾಮಯ್ಯ ಸಾಧನೆ. ಅಕ್ಕಿ ಕೊಟ್ಟೆ, ಎಣ್ಣೆ ಕೊಟ್ಟೆ ಎಂದು ರಾಜ್ಯದ ಜನತೆಯ ಮೇಲೆ ಮಂಕು ಬೂದಿ ಎರಚುತ್ತಾ ಪ್ರತಿ ಪ್ರಜೆ ಮೇಲೆ 44 ಸಾವಿರಕ್ಕೂ ಹೆಚ್ಚು ಸಾಲದ ಹೊರೆ ಹೇರಿದ್ದೀರಿ. ನೀವು ಘೋಷಣೆ ಮಾಡಿದ 15 ಲಕ್ಷ ಮನೆ ಎಲ್ಲಿದೆ..? ಭೂಮಿಯ ಮೇಲಿದೆಯೋ, ಮಂಗಳ ಗ್ರಹದಲ್ಲಿದೆಯೋ? ಘೋಷಣೆ ಮಾಡಿದ ಮಾತ್ರಕ್ಕೆ ಮನೆ ರ್ಮಾಣವಾಗುತ್ತದೆಯೇ..? ಇನ್ನೆಷ್ಟು ದಿನ ಸಂತೆ ಭಾಷಣ ಹೊಡೆಯುತ್ತೀರಿ .. ಬುರುಡೆರಾಮಯ್ಯ ಅಂತ ಬಿಜೆಪಿ ಛೇಡಿಸಿದೆ. ಇದನ್ನೂ ಓದಿ: ತಂದೆಯಂತೆ ಮಧು ಬಂಗಾರಪ್ಪ ನಾಯಕರಾಗಿ ಬೆಳೆಯುತ್ತಾರೆ: ಸಿದ್ದರಾಮಯ್ಯ

    ಈ ಬೆನ್ನಲ್ಲೇ ಸಿದ್ದರಾಮಯ್ಯ ಪ್ರತಿಕಾ ಪ್ರಕಟಣೆಯನ್ನೇ ಹೊರಡಿಸಿದ್ದಾರೆ. 2013ರಲ್ಲಿ ಅನ್ನಭಾಗ್ಯ ಯೋಜನೆ ತಂದು, ಪ್ರತಿ ಕುಟುಂಬಕ್ಕೆ 35 ಕೆಜಿ ಅಕ್ಕಿಯನ್ನು ಕೆಜಿಗೆ ಕೇವಲ 1 ರೂ.ಗೆ ನೀಡಿದ್ದೇವೆ. 2017 ಏಪ್ರಿಲ್‍ನಿಂದ ಕುಟುಂಬಗಳ ಪ್ರತಿ ಸದಸ್ಯರಿಗೆ 7 ಕೆಜಿ ಅಕ್ಕಿ, 2 ಕೆಜಿ ಗೋಧಿ, 1 ಕೆಜಿ ಬೇಳೆ ವಿತರಿಸಿದ್ವಿ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗ ಅಕ್ಕಿಯನ್ನು 2 ಕೆಜಿಗೆ ಇಳಿಸಿದೆ ಅಂತ ವಿವರಣೆ ನೀಡಿದ್ದಾರೆ. ಜೊತೆಗೆ ಹಾನಗಲ್‍ನಲ್ಲಿ ಮಾತಾಡಿ, ನನ್ನ ಯೋಜನೆ ಜನರಿಗೆ ತಲುಪಿಲ್ಲ ಅಂತಾರೆ. ನಾನು ಕೊಟ್ಟ 7 ಕೆಜಿ ಅಕ್ಕಿ ನಿಮಗೆ ತಲುಪಿಲ್ವಾ..? ಅಂತ ಹಾನಗಲ್ ಜನಕ್ಕೆ ಸಿದ್ದರಾಮಯ್ಯ ಪ್ರಶ್ನಿಸಿದಾಗ.. ನಮಗೆ ಸಿಕ್ಕಿದೆ ಅಂತ ಜನ ಉತ್ತರ ಹೇಳಿದ್ದಾರೆ. ಇದನ್ನೂ ಓದಿ:  ಬಸ್ ಓಡಿಸಿಕೊಂಡಿದ್ದವನನ್ನು ಕರ್ಕೊಂಡು ಬಂದು ಶಾಸಕ ಮಾಡಿದೆ -ಜಮೀರ್ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

  • ನಾನು ಮೋದಿಗಿಂತ ಸೀನಿಯರ್: ಸಿದ್ದರಾಮಯ್ಯ

    ನಾನು ಮೋದಿಗಿಂತ ಸೀನಿಯರ್: ಸಿದ್ದರಾಮಯ್ಯ

    – ಬಿಜೆಪಿಗರು ಸ್ವತಂತ್ರಕ್ಕೆ ಯಾವುದೇ ತ್ಯಾಗ ಮಾಡಿಲ್ಲ

    ಬೆಂಗಳೂರು: ನಾನು ಸ್ವಾತಂತ್ರ್ಯ ಬರೋಕೆ ಮುಂಚೆ ಹುಟ್ಟಿದ್ದೇನೆ. ಸ್ವತಂತ್ರ್ಯ ಬಂದ ಮೇಲೆ ಮೋದಿ ಹುಟ್ಟಿದ್ದು, ನಾನು ಮೋದಿಗಿಂತ ಸೀನಿಯರ್ ಎಂದು ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯ ಚಳುವಳಿ ದಿನಾವರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ 60 ವರ್ಷ ಅಧಿಕಾರ ಕೊಟ್ಟಿದ್ದೀರಾ? ನಮಗೆ ಅರವತ್ತು ತಿಂಗಳು ಕೊಡಿ ಅಂತ ಮೋದಿ ಹೇಳಿದ್ರು, ಏಳು ವರ್ಷದಲ್ಲಿ ಏನಾದ್ರು ಬದಲಾವಣೆ ಆಗಿದೆಯಾ? ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಜಿಡಿಪಿ ಮೈನಸ್ ಆಗಿದೆ. ಇದು ಮೋದಿಯವರ ಸಾಧನೆಯಾಗಿದೆ ಎಂದು ಕಿಡಿಕಾರಿದ್ದಾರೆ.

    ಸಾಮಾನ್ಯ ಜನರ ಲಿವಿಂಗ್ ಕಾಸ್ಟ್ ಹೆಚ್ಚಾಗಿದೆ. ಸಾಮನ್ಯ ಜನರು ಹೇಗೆ ಬದುಕುತ್ತಾರೆ? ಉದ್ಯೋಗ ಕಳೆದುಕೊಂಡಿದ್ದರೆ, ಏಳು ವರ್ಷ ಬರೀ ಸುಳ್ಳು ಮಾತ್ರ ಹೇಳಿದ್ದು, ಮೋದಿ ಬಿಜೆಪಿಯವರಷ್ಟು ಸುಳ್ಳುಗಾಗರು ಇಲ್ಲ. ಬಿಜೆಪಿಗರು ಸ್ವತಂತ್ರಕ್ಕೆ ಯಾವುದೇ ತ್ಯಾಗ ಮಾಡಿಲ್ಲ, ಕಾಂಗ್ರೆಸ್ ಮಾತ್ರ ಸ್ವಾತಂತ್ರಕ್ಕೆ ತ್ಯಾಗ ಮಾಡಿದ್ದು, ವಲಸೆ ಹೋದರಲ್ಲ ಅವರೆಲ್ಲ ನಿಜವಾದ ಕಾಂಗ್ರೆಸ್ಸಿಗರಲ್ಲ ಪಕ್ಷ ನಿಷ್ಠೆ ಇಲ್ಲದವರು ಈಗಲೂ ಇದ್ದಾರೆ ಅವರ ಹೆಸರು ಹೇಳುವುದು ಬೇಡ ಎಂದಿದ್ದಾರೆ. ಇದನ್ನೂ ಓದಿ: ಓರ್ವ ವಿದ್ಯಾರ್ಥಿನಿ ಬಿಟ್ಟು ಎಲ್ಲಾ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಪಾಸ್

    ಯಡಿಯೂರಪ್ಪ ಒಬ್ಬ ಭ್ರಷ್ಟ ಮುಖ್ಯಮಂತ್ರಿ. ಇವಾಗ ಮತ್ತೊಬ್ಬ ಸಿಎಂ ಬಂದಿದ್ದಾರೆ. ಯಡಿಯೂರಪ್ಪನವರ ರಬ್ಬರ್ ಸ್ಟಾಂಪ್. ಅವರಿಂದ ಏನಾದ್ರು ನೀರಿಕ್ಷೆ ಮಾಡಲು ಸಾಧ್ಯವಿಲ್ಲ, ಹೀಗಾಗಿ ಕಾಲ ಕೂಡಿ ಬಂದಿದೆ ಮತ್ತೆ ಹೋರಾಟ ಮಾಡೋಣ, ಅಧಿಕಾರಕ್ಕೆ ಬರೋಣ, ಸ್ವತಂತ್ರವಾಗಿ ಅಧಿಕಾರಕ್ಕೆ ಬರೋಣ. ಕ್ವಿಟ್ ಚಳುವಳಿ ನಮಗೆ ಮಾದರಿಯಾಗಲಿ ಎಂದು ಯಡಿಯೂರಪ್ಪ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಬಿಜೆಪಿಯವರು ಬದಲಾವಣೆ ಮಾಡುತ್ತೇವೆ ಎಂದಿದ್ದರು. ಈಗ ಅಧಿಕಾರಕ್ಕೆ ಬಂದ ಮೇಲೆ ಬದಲಾವಣೆ ಮಾಡಿದ್ದಾರೆ. ಆದರೆ ಅಭಿವೃದ್ಧಿಯನ್ನಲ್ಲ. 28% ಜನ ಬಡತನದ ರೇಖೆಗಿಂತ ಕೆಳಗೆ ಹೋಗಿದ್ದಾರೆ. ನಿರುದ್ಯೋಗ ಯದ್ವಾತದ್ವಾ ಹೆಚ್ಚಾಗಿದೆ. ಇದು ದೇಶಕ್ಕೆ ಮೋದಿಯವರ ಕೊಡುಗೆಯಾಗಿದೆ. ದೇಶದ ಜನರ ಬದುಕುವ ಪರಿಸ್ಥಿತಿ ಶೋಚನೀಯವಾಗಿದೆ. ಅಷ್ಟು ಕೆಟ್ಟ ಪರಿಸ್ಥಿತಿಯನ್ನ ಇವರು ತಂದಿಟ್ಟಿದ್ದಾರೆ. ಸಾಮಾನ್ಯ ಜನ ಬದುಕೋಕೆ ಕಷ್ಟವಾಗಿದೆ. 7 ವರ್ಷದ ಸಾಧನೆ ಸುಳ್ಳು ಹೇಳಿದ್ದು ಬಿಟ್ಟರೆ ಬೇರೇನಿಲ್ಲ. ಸ್ವಾತಂತ್ರ್ಯ ನಂತರ ಇವರಷ್ಟು ಸುಳ್ಳು ಯಾರು ಹೇಳಿಲ್ಲ ಎಂದಿದ್ದಾರೆ.

    ಬಿಜೆಪಿಯವರ ತ್ಯಾಗ ಬಲಿದಾನ ಏನೇನೂ ಇಲ್ಲ. ಸಾರ್ವರ್ಕರ್ ಬಗ್ಗೆ ಬಹಳ ಮಾತನಾಡ್ತಾರೆ. ಕಾಂಗ್ರೆಸ್ ಸಿದ್ಧಾಂತ ಅಂದರೆ ತ್ಯಾಗ ಬಲಿದಾನ ಆನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರು ಯಾರು ಸಮಾಜ ಪರಿವರ್ತನೆ ಮಾಡುವವರಲ್ಲ. ಅವರ ನಂಬಿಕೆ ಚಾತುರ್ವರ್ಣ ವ್ಯವಸ್ಥೆ. ಮೇಲು, ಕೀಳಿನ ಬಗ್ಗೆ ಹೆಚ್ಚು ನಂಬಿಕೆ ಇಟ್ಟವರು. ಟಿಪ್ಪು ಕಾಲದಲ್ಲಿ ಹಣಕಾಸು ಮಂತ್ರಿಯಾಗಿದ್ದವರು ಯಾರು? ಕೃಷ್ಣ ಸ್ವಾಮಿ ಅರ್ಥ ಮಂತ್ರಿಯಾಗಿದ್ದರು. ದಿವಾನರಾಗಿದ್ದವರು ಯಾರು ಬ್ರಾಹ್ಮಣರೇ, ಈಗ ದೇಶಭಕ್ತಿ ಬಗ್ಗೆ ಪಾಠ ಹೇಳಿಕೊಡ್ತಾರೆ. ಟಿಪ್ಪು ಜಯಂತಿ ಮಾಡಿದ್ದಕ್ಕೆ ನನ್ನ ವಿರುದ್ಧ ತಿರುಗಿಬಿದ್ದಿದ್ದರು. ಹಿಂದೂ ಧರ್ಮದ ವಿರೋಧಿ ಅನ್ನೋ ರೀತಿ ತಿರುಗಿ ಬಿದ್ದರು. ಟಿಪ್ಪು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಆಂಗ್ಲೋ ಮೈಸೂರು ಯುದ್ಧ ಮಾಡಿದವರು. ದಿವಾನ್ ಪೂರ್ಣಯ್ಯನ ಮೇಲೆ ಇವರಿಗೆ ಕೋಪವಿಲ್ಲ. ಇವರಿಗೆ ಕೋಪ ಇದ್ದಿದ್ದು ಟಿಪ್ಪು ಮೇಲೆ, ಇದಕ್ಕಿಂತ ನೀಚ ಮನಸ್ಥಿತಿ ಇನ್ನೊಂದು ಇದ್ಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಂಸದ ಪ್ರತಾಪ್ ಸಿಂಹ ಬಂಧನ ವಿಚಾರ- ಸಿಎಂ ಗೆ ಎಚ್ಚರಿಕೆ ನೀಡಿದ ಈಶ್ವರಪ್ಪ

    ಸಂಸದ ಪ್ರತಾಪ್ ಸಿಂಹ ಬಂಧನ ವಿಚಾರ- ಸಿಎಂ ಗೆ ಎಚ್ಚರಿಕೆ ನೀಡಿದ ಈಶ್ವರಪ್ಪ

    ಬಾಗಲಕೋಟೆ: ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುವ ಸ್ಥಿತಿಗೆ ಬಂದಿದೆ. ಇದೇ ರೀತಿ ಹಿಂದೂ-ಮುಸ್ಲಿಮರಿಗೆ ಧೋರಣೆ ಮುಂದುವರಿಸಿ, ಜಾತಿ-ಜಾತಿಗಳ ಮಧ್ಯೆ ಬೆಂಕಿ ಹಚ್ಚಿದ್ರೆ, ಉತ್ತರ ಪ್ರದೇಶದ ಪರಿಸ್ಥಿತಿಯನ್ನು ರಾಜ್ಯದ ಸಿಎಂ ಸಿದ್ದು ಕಾಣಲಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

    ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಸಂಸದ ಪ್ರತಾಪ್ ಸಿಂಹ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೂಗಳಿಗೊಂದು, ಮುಸ್ಲಿಮರಿಗೊಂದು ನೀತಿ ಅನುಸರಿಸುತ್ತಿರೋ ಸಿಎಂ ಮುಸ್ಲಿಮರ ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿ, ಹಿಂದೂಗಳ ಹನುಮ ಹಾಗೂ ದತ್ತ ಜಯಂತಿಗೆ ಅಡ್ಡಿ ಮಾಡ್ತಿರೋದ್ಯಾಕೆ ಎಂದು ಪ್ರಶ್ನೆ ಮಾಡಿದ್ರು. ಸಿಎಂ ಕಾನೂನನ್ನು ಮುರಿಸುವ ಪ್ರಯತ್ನ ಮಾಡ್ತಿದ್ದಾರೆಂದು ಆರೋಪಿಸಿದ್ರು.

    ವೀರಶೈವ ಹಾಗೂ ಲಿಂಗಾಯತರನ್ನು ಬೇರ್ಪಡಿಸಿ, ಸಾಧು ಸಂತರನ್ನ ಬೇರೆ ಮಾಡಿ, ಈ ಸಾಧು ಯಾವ ಜಾತಿ ಎಂದು ಮುಖ ನೋಡಿ ಸ್ವಾಮೀಜಿಗಳಿಗೆ ನಮಸ್ಕಾರ ಮಾಡುವ ಸ್ಥಿತಿಗೆ ಸಿಎಂ ತಂದಿದ್ದಾರೆ. ಮುಖ್ಯಮಂತ್ರಿಯವರು ನಾಡಿನ ಹಿಂದೂಗಳ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ರು.

    ಇನ್ನು ಯೋಗೀಶ್‍ಗೌಡ ಹತ್ಯೆ ಪ್ರಕರಣದ ತನಿಖೆ ಅನುಮಾನಾಸ್ಪದ ರೀತಿಯಲ್ಲಿ ನಡೆಯುತ್ತಿದೆ. ಕೊಲೆಗಡುಕರನ್ನ ಸಿಎಂ ರಕ್ಷಣೆ ಮಾಡ್ತಿರೋದ್ಯಾಕೆ? ರಾಜ್ಯದ ಜನರ ಮುಂದೆ ಸಿಎಂ ಸತ್ಯ ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ರು. ಗೌರಿ ಲಂಕೇಶ್ ಹತ್ಯೆ ಮಾಡಿರುವವರ ಸುಳಿವಿದ್ದರೂ ಗೃಹ ಸಚಿವರು ಪ್ರಕಟ ಮಾಡ್ತಿಲ್ಲ ಅಂತ ಅವರು ಹೇಳಿದ್ರು.

    ಬಿಜೆಪಿ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಸಣ್ಣ ಪುಟ್ಟ ಗೊಂದಲಗಳಾಗಿರೋದು ನಿಜ. ಪಕ್ಷ ಬೆಳೆಯುತ್ತಿರೋದ್ರಿಂದ ಅಲ್ಲಲ್ಲಿ ಅಶಿಸ್ತು ಗೊಂದಲಗಳಾಗಿವೆ. ಅವುಗಳನ್ನೆಲ್ಲ ಬಗೆಹರಿಸಿಕೊಂಡು ಮುನ್ನಡೆಯುತ್ತೇವೆ. ಇದು ಪಕ್ಷ ಅಧಿಕಾರಕ್ಕೆ ಬರೋ ಮುನ್ಸೂಚನೆ ಎಂದು ಹೇಳಿದ್ರು.

    ಬಿಎಸ್‍ವೈ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿಸುತ್ತೇವೆ. ಚುನಾವಣೆ ವೇಳೆ ಯಾತ್ರೆ ಮಾಡೋದು ಸಹಜ. ಜೆಡಿಎಸ್ ಹಾಗೂ ಕಾಂಗ್ರೆಸ್‍ನವರೂ ಯಾತ್ರೆ ಮಾಡಲಿ. ಆದ್ರೆ ಹೋದಲ್ಲೆಲ್ಲಾ ಸಿಎಂ ಸಿದ್ದರಾಮಯ್ಯ ಉಡಾಫೆ ಉತ್ತರ ನೀಡ್ತಿದ್ದಾರೆ ಎಂದು ಟೀಕಿಸಿದ್ರು.

    https://www.youtube.com/watch?v=f0lk2O1Ndno