Tag: ಕಾಂಕ್ರೀಟ್

  • ಬಿಬಿಎಂಪಿ ಎಡವಟ್ಟು- ಕಾಮಗಾರಿ ವೇಳೆ ಕಾಂಕ್ರೀಟ್ ಕುಸಿದು 8 ಮಂದಿಗೆ ಗಾಯ

    ಬಿಬಿಎಂಪಿ ಎಡವಟ್ಟು- ಕಾಮಗಾರಿ ವೇಳೆ ಕಾಂಕ್ರೀಟ್ ಕುಸಿದು 8 ಮಂದಿಗೆ ಗಾಯ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಹಾ ಎಡವಟ್ಟು ಮಾಡಿದ್ದು, ಕಾಮಗಾರಿ ವೇಳೆ ಕಾಂಕ್ರೀಟ್ ಕುಸಿದು 8 ಮಂದಿ ಗಾಯಗೊಂಡಿದ್ದಾರೆ.

    ಮೀರ್ ಖಾಸಿಂ (24) ಕಲ್ಕತ್ತ ಅವರ ಸ್ಥಿತಿ ಗಂಭೀರವಾಗಿದೆ. ಆಸಿಬುಲ್ (22), ಶಿವಪ್ರಸಾದ್ (33), ರೆಹಮಾನ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೆಂಗಳೂರಿನ ಶ್ರೀನಗರದ ಕಾಳಿದಾದ ಸರ್ಕಲ್ ಬಳಿ 11:15 ಕ್ಕೆ ಘಟನೆ ನಡೆದಿದೆ. ರಾಜಕಾಲುವೆ ದುರಸ್ತಿ ಕಾರ್ಯದ ವೇಳೆ ಕಳಪೆ ಕಾಮಗಾರಿ ಮಾಡುತ್ತಿರುವುದು ಬಯಲಾಗಿದೆ. ಇದನ್ನೂ ಓದಿ: 5ರೂ. ಡಾಕ್ಟರ್ ಎಂದೇ ಫೇಮಸ್ ಆಗಿದ್ದ ಶಂಕರೇಗೌಡಗೆ ಹೃದಯಾಘಾತ

    ಸೋಮವಾರದಿಂದ ಬಿಬಿಎಂಪಿ ರಾಜಕಾಲುವೆಗೆ ಮೇಲೆ ಮೊಲ್ಡಿಂಗ್ ಕಾಮಗಾರಿ ಶುರು ಮಾಡಿಕೊಂಡಿತ್ತು. ಇಂದು ಕಾರ್ಮಿಕರು ಕೆಲಸ ಮಾಡುವ ವೇಳೆಯಲ್ಲಿ ಘಟನೆ ನಡೆದಿದೆ. ರಾಜಕಾಲುವೆ ಕಾಮಗಾರಿ ಸಂದರ್ಭದಲ್ಲೇ ಬ್ರಿಡ್ಜ್ ಕುಸಿದಿದೆ. ಪರಿಣಾಮ 8 ಮಂದಿ ಕಾರ್ಮಿಕರು ಬ್ರಿಡ್ಜ್ ಮೇಲಿಂದ ಬಿದ್ದಿದ್ದಾರೆ. ಹಲವರು ರಾಜಕಾಲುವೆಗೆ ಬಿದ್ದಿರೋ ಶಂಕೆ ವ್ಯಕ್ತವಾಗುತ್ತಿದೆ. ಘಟನೆಯಲ್ಲಿ ಓರ್ವನ ರಕ್ಷಣೆ ಮಾಡಲಾಗಿದೆ.

    ಕಳಪೆ ಕಾಮಗಾರಿಯಿಂದ ದುರಂತವೆಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಮಗಾರಿ ನಡೆಯುತ್ತಿದ್ರೂ ಇಂಜಿನಿಯರ್ ಆಗ್ಲಿ, ಬಿಬಿಎಂಪಿ ಅಧಿಕಾರಿಗಳ್ಯಾರೂ ಸ್ಥಳದಲ್ಲಿ ಇರಲಿಲ್ಲ. ಅಲ್ಲದೆ ಘಟನೆ ನಡೆದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದಿಲ್ಲ. ಸ್ಥಳೀಯರು ಗಾಯಾಳುಗಳನ್ನ ಸ್ವತಃ ತಾವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

  • ಮಗುಚಿ ಬಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ-ಇಬ್ಬರು ಕಾರ್ಮಿಕರ ಸಾವು

    ಮಗುಚಿ ಬಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ-ಇಬ್ಬರು ಕಾರ್ಮಿಕರ ಸಾವು

    ಮಡಿಕೇರಿ: ಪಾಕ ರಸ್ತೆಯಲ್ಲಿ ತಡೆಗೋಡೆ ನಿರ್ಮಿಸುತ್ತಿದ್ದ ಸಂದರ್ಭ ಕಾಂಕ್ರೀಟ್ ಮಿಕ್ಸರ್ ಲಾರಿ ಮಗುಚಿ ಬಿದ್ದು, ಇಬ್ಬರು ಕಾರ್ಮಿಕರು ನಿನ್ನೆ ಚೇರಂಬಾಣೆ ಕೊಳಗದಾಳು ಬಳಿ ಮೃತಪಟ್ಟಿದ್ದರು. ಇಂದು ಮಣ್ಣಿನಡಿ ಸಿಲುಕಿದ್ದ ಅವರ ಮೃತದೇಹವನ್ನು ಹೊರ ತೆಗೆಯಲಾಗಿದೆ.

    ಗದಗ ಮೂಲದ ಸಂತೋಷ್ ಭಂಡಾರಿ(27) ಮತ್ತು ಪ್ರವೀಣ್(21) ಮೃತ ದುರ್ದೈವಿಗಳು. ಕಳೆದ ಎರಡು ದಿನಗಳಿಂದ ಮಳೆ ಕ್ಷೀಣಿಸಿದ್ದ ಹಿನ್ನೆಲೆಯಲ್ಲಿ ಚೇರಂಬಾಣೆ ಪಾಕ ಬಳಿ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರೊಬ್ಬರು ರಸ್ತೆಯ ತಡೆಗೋಡೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದರು. ಇದನ್ನೂ ಓದಿ: ಹಾಕಿ ಕೋಚ್ ಅಂಕಿತಾಗೆ ಕೊಡಗಿನ ಜನತೆಯಿಂದ ಶುಭ ಹಾರೈಕೆ

    ನಿನ್ನೆ ಸಂಜೆ ವೇಳೆ ಮಡಿಕೇರಿಯಿಂದ ಕಾಂಕ್ರೀಟ್ ತುಂಬಿದ್ದ 10 ಚಕ್ರದ ಲಾರಿ ಕೊಳಗದಾಳು ಮಾರ್ಗವಾಗಿ ಪಾಕ ರಸ್ತೆಯ ತಡೆಗೋಡೆ ನಿರ್ಮಿಸುವ ಸ್ಥಳಕ್ಕೆ ತಲುಪಿದೆ. ಬಳಿಕ ಲಾರಿಯನ್ನು ಮೇಲ್ಬಾಗದಲ್ಲಿ ನಿಲ್ಲಿಸಿಕೊಂಡು ಕೆಳ ಭಾಗದಲ್ಲಿರುವ ತಡೆಗೋಡೆಗೆ ಕಾಂಕ್ರೀಟ್ ನ್ನು ತುಂಬಿಸಲಾಗುತ್ತಿತ್ತು. ಈ ಸಂದರ್ಭ ತಡೆಗೋಡೆಯ ಪಕ್ಕದಲ್ಲಿ ಕುಸಿತ ಉಂಟಾಗಿ ಲಾರಿ ಏಕಾಏಕಿ ಕೆಳಗೆ ಮಗುಚಿ ಬಿದ್ದಿದೆ. ಪರಿಣಾಮವಾಗಿ ಕೆಳಭಾಗದಲ್ಲಿದ್ದ ಇಬ್ಬರು ಕಾರ್ಮಿಕರಾದ ಗದಗ ಜಿಲ್ಲೆ ಇಂದಿರಾ ನಗರದ ನಿವಾಸಿಗಳಾದ ಸಂತೋಷ್ ಭಂಡಾರಿ ಹಾಗೂ ಪ್ರವೀಣ್ ಎಂಬವರು ಮಣ್ಣಿನಡಿ ಸಿಲುಕಿಕೊಂಡಿದ್ದು, ಅಲ್ಲೇ ಪ್ರಾಣ ಬಿಟ್ಟಿದ್ದಾರೆ.

    ಲಾರಿ ಸಹಿತ ಮಣ್ಣಿನ ರಾಶಿ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹಿಟಾಚಿ ಯಂತ್ರಗಳನ್ನು ತಂದು ಮಣ್ಣಿನಡಿ ಸಿಲುಕಿದ್ದ ಇಬ್ಬರು ಕಾರ್ಮಿಕರ ಮೃತ ದೇಹಗಳನ್ನು ಇಂದು ಹೊರ ತೆಗೆಯಲಾಗಿದೆ. ಈ ದುರ್ಘಟನೆ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಸಿರು ಕಾಡು ಅಳಿಸಿ ಕಾಂಕ್ರೀಟ್ ಕಾಡು ನಿರ್ಮಿಸಲು ಹೊರಟಿರುವುದು ದುರದೃಷ್ಟಕರ: ದುಂಡಪ್ಪಾ ಕೋಮಾರ

    ಹಸಿರು ಕಾಡು ಅಳಿಸಿ ಕಾಂಕ್ರೀಟ್ ಕಾಡು ನಿರ್ಮಿಸಲು ಹೊರಟಿರುವುದು ದುರದೃಷ್ಟಕರ: ದುಂಡಪ್ಪಾ ಕೋಮಾರ

    ಬೆಳಗಾವಿ: ಪರಿಸರ ನಾಶ ಮಾಡುವ ಮೂಲಕ ಇಂದಿನ ದಿನಗಳಲ್ಲಿ ಶುದ್ಧ ಆಕ್ಸಿಜನ್ ಇಲ್ಲದೆ ಜನರು ಪರದಾಡುವಂತಾಗಿದೆ. ಹಸಿರು ಕಾಡು ಅಳಿಸಿ ಕಾಂಕ್ರೀಟ್ ಕಾಡನ್ನು ನಿರ್ಮಿಸಲು ಮಾನವ ಹೊರಟಿರುವುದು ದುರದೃಷ್ಟಕರ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಹಶೀಲ್ದಾರ್ ದುಂಡಪ್ಪಾ ಕೋಮಾರ ಕಳವಳ ವ್ಯಕ್ತಪಡಿಸಿದರು.

    ಅಥಣಿ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಘಟಕ ಮತ್ತು ರಾಜ್ಯ ಗ್ರಾಮ ಸಹಾಯಕರ ತಾಲೂಕು ಘಟಕದ ಸಹಯೋಗದೊಂದಿಗೆ ವನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನೆಗೊಂದು ಗಿಡ ನೆಡುವ ಮೂಲಕ ಪರಿಸರ ಬೆಳೆಸೋಣ, ಶುದ್ಧ ಜೀವ ವಾಯು ಪಡೆಯೋಣ, ದೇಶದಲ್ಲಿ ಹಸಿರು ಕಾಡು ಅಳಿಸಿ ಕಾಂಕ್ರೀಟ್ ಕಾಡನ್ನು ನಿರ್ಮಿಸಲು ಮಾನವ ಹೊರಟಿರುವುದು ದುರದೃಷ್ಟಕರವಾಗಿದ್ದು, ಕಾಡನ್ನು ನಾಶ ಮಾಡುವುದನ್ನು ಜನರು ನಿಲ್ಲಿಸಬೇಕು ಎಂದರು.

    ಕಾಡು ಉಳಿದರೆ ನಾಡು ಉಳಿದಿತು. ಒಂದು ಒಳ್ಳೆಯ ದೇಶ ಕಟ್ಟಬೇಕಾದರೆ ಸಮೃದ್ಧ ಪರಿಸರ ಕಾಡು ಅವಶ್ಯಕವಾಗಿದೆ. ದೇಶವನ್ನು ಉಳಿಸಬೇಕಾದರೆ ಕಾಡನ್ನು ಬೆಳೆಸುವುದು ಉತ್ತಮ ಪರಿಸರವನ್ನು ನಾವು ಸಂರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ ಆದ್ದರಿಂದ ಮನುಷ್ಯ ಜೀವಿ ಈಗಲೇ ಎಚ್ಚೆತ್ತುಕೊಂಡು ಪರಿಸರವನ್ನು ಉಳಿಸಲು ಮುಂದಾಗುವಂತೆ ಜನರಲ್ಲಿ ವಿನಂತಿಸಿದರು. ಇದನ್ನೂ ಓದಿ: ಬಾವಿ ಕಳೆದಿದೆ – ದೂರು ದಾಖಲಿಸಿದ ರೈತ

    ಉಪ ತಹಶೀಲ್ದಾರ್ ಮಹಾದೇವ ಬಿರಾದಾರ್ ಪಾಟೀಲ್ ಮಾತನಾಡಿ, ಪರಿಸರದ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇದನ್ನು ಪ್ರತಿ ನಾಗರಿಕನು ಪಾಲಿಸುವಂತಾಗಬೇಕು ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಂದಾಯ ಇಲಾಖೆ ದಿನಾಚರಣೆ ಪ್ರಯುಕ್ತ, ಗ್ರಾಮ ಲೆಕ್ಕಾಧಿಕಾರಿ ಗ್ರಾಮ ಸಹಾಯಕರು ಸೇರಿದಂತೆ ತಾಲೂಕು ಆಡಳಿತದ ಪ್ರತಿಯೊಬ್ಬ ನೌಕರಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪರಿಸರ ಸಂರಕ್ಷಣೆಗೆ ಬದ್ಧರಾಗಿದ್ದಾರೆ. ಪರಿಸರದಿಂದ ಹಸಿರು ಪರಿಸರದಿಂದಲೇ ಉಸಿರು ಆಗಿದೆ ಹಾಗಾಗಿ ನಾವು ನಾಡನ್ನು ಉಳಿಸುವಂತೆ ಕಾಡನ್ನು ಉಳಿಸಬೇಕಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಶಿರಸ್ಥೆದಾರರಾದ ಸಿ.ಎಸ್ ಕಬಾಡೆ ಢವಳೇಶ್ವರ, ಅರಣ್ಯ ಇಲಾಖೆಯ ಮಂಜುನಾಥ್ ಪಾಟೀಲ್, ಗ್ರಾಮ ಲೆಕ್ಕಾಧಿಕಾರಿ ಎಮ್.ಎಮ್ ಮಿರ್ಜಿ ಉಪಸ್ಥಿತರಿದ್ದರು.

  • ವಿಧಾನಸೌಧದ ಮುಂಭಾಗ, ಮೆಟ್ರೋ ಅಂಡರ್‍ಪಾಸ್ ಮೇಲಿರುವ ರಸ್ತೆಯಲ್ಲಿ ಭಾರೀ ಬಿರುಕು

    ವಿಧಾನಸೌಧದ ಮುಂಭಾಗ, ಮೆಟ್ರೋ ಅಂಡರ್‍ಪಾಸ್ ಮೇಲಿರುವ ರಸ್ತೆಯಲ್ಲಿ ಭಾರೀ ಬಿರುಕು

    ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ವಿಧಾನಸೌಧದ ಮುಂಭಾಗದಲ್ಲಿರುವ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿದೆ.

    ವಿಧಾನ ಸೌಧದ ಮುಂಭಾಗ ಮತ್ತು ಅಂಬೇಡ್ಕರ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ಸಿಮೆಂಟ್ ರಸ್ತೆ ಬಿರುಕು ಬಿಟ್ಟಿದ್ದು ವಾಹನಗಳು ಚಲಿಸಿದಾಗ ಗಢ ಗಢ ಎನ್ನುತ್ತಿದೆ. ಘನವಾಹನಗಳಾದ ಬಸ್, ಲಾರಿ ಬಂದರೆ ರಸ್ತೆ ಸಂಪೂರ್ಣ ಕುಸಿದುಬಿದ್ದಂತೆ ಆಗುತ್ತಿದೆ.

    ರಸ್ತೆ ಕೆಳಭಾಗದಲ್ಲಿ ಮೆಟ್ರೋ ರೈಲಿನ ಅಂಡರಪಾಸ್ ಸಹ ಇದೆ. ಕೂಡಲೇ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಮುಂದೆ ದೊಡ್ಡ ಅನಾಹುತವಾಗುವ ಸಾಧ್ಯತೆಯಿದೆ.

     

    https://youtu.be/7geiwdyVck0