Tag: ಕಾಂಕ್ರಿಟ್

  • ಪಾದಚಾರಿ ಮೇಲೆ ಹರಿದ ಕಾಂಕ್ರಿಟ್ ಲಾರಿ

    ಪಾದಚಾರಿ ಮೇಲೆ ಹರಿದ ಕಾಂಕ್ರಿಟ್ ಲಾರಿ

    ಮಡಿಕೇರಿ: ಕಾಂಕ್ರಿಟ್ ಸಾಗಿಸುತ್ತಿದ್ದ ಲಾರಿಯೊಂದು ಪಾದಚಾರಿಯ ಮೇಲೆ ಹರಿದ ಪರಿಣಾಮ ಕಾರ್ಮಿಕ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಪುರ ಗ್ರಾಮದಲ್ಲಿ ನಡರದಿದೆ.

    ರಾಮಣ್ಣ ಗಂಭೀರವಾಗಿ ಗಾಯಗೊಂಡ ವ್ಯಕ್ತಿ. ರಾಮಣ್ಣ ಮೂಲತಃ ಬಳ್ಳಾರಿಯವರಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕಿರುತೆರೆ ನಟಿ ಶ್ವೇತಾ ಚಂಗಪ್ಪರವರ ಸಂಬಂಧಿಯಾಗಿರುವ ಕಾವೇರಪ್ಪ ಕಾಶಿರವರ ಗರ್ವಾಲೆಯಲ್ಲಿರುವ ತೋಟಕ್ಕೆ ರಾಮಣ್ಣ ಎಂಬಾತ ಕಳೆದ ಒಂದು ತಿಂಗಳ ಹಿಂದೆ ತಾನು ಬಳ್ಳಾರಿಯವನೆಂದು ಹೇಳಿಕೊಂಡು ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದರು.

    ಇಂದು ಸೋಮವಾರಪೇಟೆ ತಾಲೂಕಿನ ಮಾದಾಪುರ ಸಂತೆಗೆಂದು ಬಂದವನು ಮೊಬೈಲ್‍ನ್ನು ತೋಟದ ಮಾಲೀಕರ ಸಂಬಂಧಿಯಿಂದ ಖರೀದಿಸಿಕೊಂಡಿದ್ದ ಎನ್ನಲಾಗಿದೆ. ಹೊಸ ಮೊಬೈಲ್ ಸಿಕ್ಕಿದ ಸಂಭ್ರಮದಲ್ಲಿ ಈತ ಮಾದಾಪುರ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ಮೊಬೈಲಿನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ವೇಳೆ ಅಪಘಾತ ನಡೆದಿದೆ.

    ಈ ವೇಳೆ ಬಯಲುಕೊಪ್ಪದಿಂದ ಮಾದಾಪುರ ಸಮೀಪದ ಜಂಬೂರುವಿನಲ್ಲಿ ನಿರಾಶ್ರಿತರಿಗೆ ನಿರ್ಮಾಣವಾಗುತ್ತಿರುವ ಮನೆಯ ಕೆಲಸಕ್ಕೆಂದು ಕಾಂಕ್ರೀಟ್ ಸಾಗಿಸುತ್ತಿದ್ದ ಲಾರಿಯ ಹಿಂಬದಿ ಚಕ್ರ ರಾಮಣ್ಣನ ಮೇಲೆ ಹರಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡು ಚಿಂತಾಜನಕನಾದ ರಾಮಣ್ಣನನ್ನು ಮಡಿಕೇರಿ ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಾಂಕ್ರಿಟ್ ಕಟ್ಟಡಗಳ ಮಧ್ಯೆ ಬೆಳೆ ಬೆಳೆದು ಇಬ್ಬರು ಹೆಣ್ಮಕ್ಳ ಮದ್ವೆ ಮಾಡಿಸಿದ್ರು!

    ಕಾಂಕ್ರಿಟ್ ಕಟ್ಟಡಗಳ ಮಧ್ಯೆ ಬೆಳೆ ಬೆಳೆದು ಇಬ್ಬರು ಹೆಣ್ಮಕ್ಳ ಮದ್ವೆ ಮಾಡಿಸಿದ್ರು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎತ್ತ ನೋಡಿದ್ರೂ ಬರೀ ಕಾಂಕ್ರಿಟ್ ಕಟ್ಟಡಗಳೇ ಕಾಣತ್ತದೆ. ಆದರೆ ಇಂತಹ ಕಾಂಕ್ರಿಟ್ ಕಟ್ಟಡದಲ್ಲಿ ರೈತರೊಬ್ಬರು ಬೆಳೆ ಬೆಳೆದಿದ್ದಾರೆ.

    ನಗರದ ನೀಲಸಂದ್ರದ ಆನೆಪಾಳ್ಯದಲ್ಲಿರುವ ಮುನಿವೆಂಕಟಪ್ಪ ಕಾಂಕ್ರಿಟ್ ಮಧ್ಯೆ ಬೆಳೆ ಬೆಳೆದ ರೈತ. ಇವರು ಕಾಂಕ್ರಿಟ್ ಕಟ್ಟಡಗಳ ಮಧ್ಯೆ ಇರುವ 2 ಕುಂಟೆ ಜಾಗದಲ್ಲಿ 20 ವರ್ಷಗಳಿಂದ ಬೆಳೆ ಬೆಳೆಯುತ್ತಾ ಜೀವನ ಮಾಡುತ್ತಿದ್ದಾರೆ.

    ನಾನು ಕಳೆದ ಇಪ್ಪತ್ತು ವರ್ಷಗಳಿಂದ ತರಕಾರಿ, ಸೊಪ್ಪು, ಬೀನ್ಸ್, ಟೊಮೆಟೋ, ಹೂಕೋಸ್ ಬೆಳೆಯನ್ನ ಬೆಳೆದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಈ ಚಿಕ್ಕ ಜಾಗದಲ್ಲಿ ನಲವತ್ತು ದಿನಕ್ಕೊಮ್ಮೆ ಬರುವ ಬೆಳೆಯನ್ನ ಬೆಳೆದು ಜೀವನ ಮಾಡಿ ತನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆ ಕೂಡ ಮಾಡಿದ್ದೇನೆ ಎಂದು ಮುನಿ ವೆಂಕಟಪ್ಪ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಇಲ್ಲಿ ಬೆಳೆ ಬೆಳೆಯುವುದಕ್ಕೆ ನೀರಿಗಾಗಿ ಚಿಕ್ಕದಾಗಿ ಬಾವಿ ಮಾಡಿದ್ದು, ಬಾವಿಯಿಂದ ನೀರು ಸೇದುವ ರೀತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಳಿಕ ನೀರನ್ನ ನಮ್ಮ ತಂದೆ ಕೈಯಲ್ಲೇ ಹಾಕುತ್ತಾ ಹೋಗುತ್ತಾರೆ. ನಲವತ್ತು ದಿನಕ್ಕೊಮ್ಮೆ ಬರುವ ಬೆಳೆಯನ್ನ ಬೆಳೆದು ಮಾರಾಟ ಮಾಡಲಾಗುತ್ತದೆ. ನಮ್ಮ ಈ ಕಾರ್ಯ ವೈಖರಿಯ ಬಗ್ಗೆ ಸುತ್ತ ಮುತ್ತಿಲಿನ ಜನ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ನಮಗೆ ಈ ರೀತಿ ಕೃಷಿ ಕಾರ್ಯಕ್ಕೆ ಯಾರು ತೊಂದರೆ ಮಾಡದೇ ಸಹಕಾರ ಮಾಡುತ್ತಾರೆ ಎಂದು ಮಗಳು ಕಲಾವತಿ ಹೇಳಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಚಿಕ್ಕ ಜಾಗ ಇದ್ದರೂ ಕೂಡ ಬಿಲ್ಡಿಂಗ್ ಕಟ್ಟಿ ಬಾಡಿಗೆಗೆ ಕೊಡುತ್ತಾರೆ. ಆದರೆ ಇವರು ಈ ಜಾಗದಲ್ಲಿಯೇ ಬೆಳೆ ಬೆಳೆದು ಭೂಮಿ ಇದ್ದರು ಬೇಸಾಯ ಮಾಡದ ರೈತರಿಗೆ ಮಾದರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv