Tag: ಕಸ

  • ರಾಷ್ಟ್ರೀಯ ಹೆದ್ದಾರಿಗಳ ಬದುಗಳಲ್ಲಿ ರಾಶಿ ರಾಶಿ ಕಸ – ನಿವಾಸಿಗಳಿಗೆ ರೋಗ ಭೀತಿ

    ರಾಷ್ಟ್ರೀಯ ಹೆದ್ದಾರಿಗಳ ಬದುಗಳಲ್ಲಿ ರಾಶಿ ರಾಶಿ ಕಸ – ನಿವಾಸಿಗಳಿಗೆ ರೋಗ ಭೀತಿ

    ಮೈಸೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ತ್ಯಾಜ್ಯಗಳ ರಾಶಿ ದಿನದಿನಕ್ಕೂ ಹೆಚ್ಚುತ್ತಿದ್ದು ತ್ಯಾಜ್ಯ ಕೊಳೆತು ನಾರುತ್ತಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಂಡವಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಬದುಗಳೇ ಕಸ ಹಾಕುವ ಸ್ಥಳವಾಗಿದೆ.

    ಹೆದ್ದಾರಿಯ ಬದುವಿನಲ್ಲೆ ರಾಶಿ ರಾಶಿ ಕಸ ಸುರಿದಿರುವ ಕಾರಣ ಜನರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಬಂದಿದೆ. ಕಾರ್ಖಾನೆಗಳ ಕಸ ಹಾಗೂ ಕೋಳಿ ಫಾರಂನ ತ್ಯಾಜ್ಯವನ್ನು ಇಲ್ಲಿ ತಂದು ಸುರಿಯಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ರೋಗಗಳ ಭೀತಿ ಎದುರಾಗಿದೆ.

    ಗ್ರಾಮ ಪಂಚಾಯತಿ ಅಧಿಕಾರಿಗಳು, ಸದಸ್ಯರು ಈ ಕಸ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮೂಖ ಪ್ರೇಕ್ಷಕರಂತೆ ಕೂತು ಬಿಟ್ಟಿದ್ದಾರೆ. ಹೀಗಾಗಿ ಸ್ವಚ್ಛತೆ ಕಡೆಗಣಿಸಿದ ಅಧಿಕಾರಿಗಳ, ಗ್ರಾಮ ಪಂಚಾಯತಿ ಸದಸ್ಯರ ವಿರುದ್ಧ ರೈತ ಮುಖಂಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಸದಿಂದ ಕೋಟಿ ಲೂಟಿ- ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರಿಗೆ ಲೋಕಾಯುಕ್ತ ನೋಟಿಸ್

    ಕಸದಿಂದ ಕೋಟಿ ಲೂಟಿ- ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರಿಗೆ ಲೋಕಾಯುಕ್ತ ನೋಟಿಸ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಸ ವಿಲೇವಾರಿ ಸಮಸ್ಯೆ ನಡುವೆ ಬಿಬಿಎಂಪಿ ತ್ಯಾಜ್ಯ ಸಾಗಾಟ ಮಾಡುವ ಕಾಂಪ್ಯಾಕ್ಟರ್ ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ.

    ಬೆಂಗಳೂರಿನಲ್ಲಿ ಕಸದಿಂದ ಕೋಟಿ ಕೋಟಿ ಲೂಟಿ ಮಾಡ್ತಾರೆ ಎಂಬ ಆರೋಪವಿದೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯ ತ್ಯಾಜ್ಯ ಸಾಗಾಟ ಮಾಡುವ ಕಾಂಪ್ಯಾಕ್ಟರ್ ವಾಹನ ಖರೀದಿ ಹಾಗೂ ನಿರ್ವಹಣೆಯಲ್ಲಾಗಿರುವ ಹಗರಣದ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಯಾಗಿತ್ತು. ಆದರೆ ತಾತ್ಕಾಲಿಕವಾಗಿ ಈ ಸುದ್ದಿ ತಣ್ಣಗಾಗಿತ್ತಾದರೂ, ಮತ್ತೆ ಈ ಹಗರಣ ಮುನ್ನಲೆಗೆ ಬಂದಿದೆ.

    ಕಾಂಪ್ಯಾಕ್ಟರ್ ಗಳ ಖರೀದಿಯಲ್ಲಿ ಅವ್ಯವಹಾರ ಆಗಿದೆ, 125 ಕಾಂಪ್ಯಾಕ್ಟರ್ ಲಾರಿಗಳ ನಿರ್ವಹಣೆಯೂ ಕಳಪೆಯಾಗಿರುವುದರ ಬಗ್ಗೆ ಲೋಕಾಯುಕ್ತದಲ್ಲಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ದೂರು ಸಲ್ಲಿಸಿದ್ದರು. ಇದಕ್ಕೆ ಪಾಲಿಕೆಗೆ ಎಷ್ಟೇ ವಿವರ ಕೇಳಿದರೂ ಸಮರ್ಪಕ ದಾಖಲೆಯನ್ನು ಲೋಕಾಯುಕ್ತಕ್ಕೆ ಸಲ್ಲಿಸದ ಹಿನ್ನೆಲೆ ಇದೀಗ ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್ ವಿರುದ್ಧ ಶೋಕಾಸ್ ನೋಟಿಸ್ ಜಾರಿಯಾಗಿದೆ.

    ಲೋಕಾಯುಕ್ತರಾದ ವಿಶ್ವನಾಥ್ ಶೆಟ್ಟಿ ಈ ಬಗ್ಗೆ ನೋಟಿಸು ಕಳಿಸಿದ್ದು, ಸರ್ಫರಾಜ್ ಖಾನ್ ಅವರಿಗೆ ಡಿಸೆಂಬರ್ 12ಕ್ಕೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಅಲ್ಲದೆ ಬೆಂಗಳೂರು ನಗರ ಎಸ್‍ಪಿಗೆ, ಈ ಅವ್ಯವಹಾರದ ತನಿಖೆಗೆ ನಿರ್ದೇಶನ ನೀಡಲಾಗಿದೆ.

  • ಕಸ ಎಲ್ಲೆಂದರಲ್ಲಿ ಹಾಕಿದ್ರೆ ಬಿಬಿಎಂಪಿಯಿಂದ ದಂಡದ ಎಚ್ಚರಿಕೆ

    ಕಸ ಎಲ್ಲೆಂದರಲ್ಲಿ ಹಾಕಿದ್ರೆ ಬಿಬಿಎಂಪಿಯಿಂದ ದಂಡದ ಎಚ್ಚರಿಕೆ

    ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಆಯುಧ ಪೂಜೆ, ದಸರಾ ಸಂಭ್ರಮವಾದರೆ ವ್ಯಾಪಾರಿಗಳಿಗೆ ವ್ಯಾಪಾರದ ಜೊತೆ ತಮ್ಮ ಉಳಿಕೆ ಕಸದ ತಲೆ ನೋವು ಶುರುವಾಗಿದೆ.

    ಯಾವುದೇ ಕಾರಣಕ್ಕೂ ಬೀದಿಬದಿ ಕಸ ಎಸೆದು ಹೋಗಬಾರದು. ಕಸ ವಿಂಗಡಿಸಿ ಪೌರಕಾರ್ಮಿಕರಿಗೇ ನೀಡಬೇಕು, ಇಲ್ಲವಾದರೆ ಭಾರೀ ದಂಡ ತೆರಬೇಕಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

    ನಗರಕ್ಕೆ, ಬೆಂಗಳೂರು ಹೊರವಲಯದ ಹಳ್ಳಿಗಳಿಂದ ವ್ಯಾಪಾರಿಗಳು, ರೈತರು ಬಾಳೆ ಕಂಬ, ಬೂದುಕುಂಬಳಕಾಯಿ, ಹೂವು ತಂದಿದ್ದು ಎರಡು ಮೂರು ದಿನದಿಂದ ಮಾರುಕಟ್ಟೆಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಪೌರಕಾರ್ಮಿಕರು ಕೂಡ ಹಬ್ಬದ ರಜೆಯಲ್ಲಿದ್ದು, ಕಸ ವಿಲೇವಾರಿ ಶೀಘ್ರದಲ್ಲಿ ಆಗೋದು ಅನುಮಾನ.

    ಆಯುಕ್ತರು ಮಾತ್ರ, ಕಸವನ್ನು ಕಡ್ಡಾಯವಾಗಿ ವಿಂಗಡಿಸಿ, ತಳ್ಳುವ ಗಾಡಿ ಅಥವಾ ಬಿಬಿಎಂಪಿ ಆಟೋಗಳಿಗೆ ನೀಡಬೇಕು ಎಂದು ಆದೇಶಿಸಿದ್ದಾರೆ. ಕಸ ವಿಂಗಡಿಸದೇ ಅಂಗಡಿಗಳ, ಕಚೇರಿಗಳ ಮುಂಭಾಗದಲ್ಲಿ ಹಾಗೇ ಬಿಟ್ಟಿದ್ದರೆ ಅದೇ ಮಳಿಗೆ, ಅಂಗಡಿಗಳಿಗೆ ಹಾಗೂ ಕಚೇರಿಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಮಲ್ಲೇಶ್ವರಂ ಹಾಗೂ ಶೇಷಾದ್ರಿಪುರಂ ಬಳಿ ಇಂದೇ ರಾಶಿರಾಶಿ ಕಸ ರಸ್ತೆ ಮಧ್ಯಭಾಗದಲ್ಲಿ ಹಾಕಲಾಗಿದೆ. ವಾಹನಗಳು ಹಾಗೂ ಜನ ಕಸದ ಮಧ್ಯೆಯೇ ಓಡಾಡುತ್ತಿದ್ದಾರೆ. ಹಬ್ಬವಾದ ಕಾರಣ ಹೆಚ್ಚಿನ ಪೌರಕಾರ್ಮಿಕರೂ ರಜೆ ಹಾಕಿರುವ ಹಿನ್ನೆಲೆಯಲ್ಲಿ ಕಸದ ರಾಶಿಯೇ ಬಿದ್ದಿದೆ.

  • ಅನುದಾನ ನೀಡದಿದ್ದರೆ ಕಸ ಹಾಕಬೇಡಿ – ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

    ಅನುದಾನ ನೀಡದಿದ್ದರೆ ಕಸ ಹಾಕಬೇಡಿ – ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸ್ವಚ್ಛವಾಗಿಡಲು ನಗರದ ಹೊರವಲಯ ಗಬ್ಬು ನಾರುತ್ತಿದೆ. ನಿಮ್ಮ ಕಸ ನಮಗೆ ಬೇಡ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಇಂದು ಬೆಳ್ಳಳಿ ಕಸದ ಕ್ವಾರಿ ಸುತ್ತಮುತ್ತಲಿನ ಜನರು ಪ್ರತಿಭಟನೆ ಮಾಡಿದರು.

    ಬೆಂಗಳೂರಿನ ಕೋಗಿಲು ಕ್ರಾಸ್ ಸಮೀಪದಲ್ಲಿರುವ ಬೆಳ್ಳಳಿ ಕಸದ ಕ್ವಾರಿ ಅಲ್ಲಿನ ಜನರನ್ನು ನರಕಕ್ಕೆ ದೂಡುತ್ತಿದೆ. ನಗರದ ಬಹುತೇಕ ಶೇ.70 ರಷ್ಟು ಕಸ ಬೆಳ್ಳಳ್ಳಿ ಕ್ವಾರಿಗೆ ಸುರಿಯಲಾಗುತ್ತಿದೆ. ಪರಿಣಾಮ ಸುತ್ತಮುತ್ತ ಜನರು ಗಬ್ಬುನಾತ, ಸೊಳ್ಳೆ ಮತ್ತು ಕೊಳಚೆ ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಹೀಗಿರುವಾಗ ಜನರ ಅಭಿವೃದ್ಧಿಗಾಗಿ ನೀಡಬೇಕಾದ ಅನುದಾನವನ್ನು ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರು ಇದ್ದಾರೆ ಎಂದು ನೀಡುತ್ತಿಲ್ಲ ಎಂದು ಧರಣಿ ನಡೆಸಿದರು.

    ಮಾಜಿ ಸಚಿವ ಕೃಷ್ಣಬೈರೆಗೌಡ ನೇತೃತ್ವದಲ್ಲಿ ಕಾರ್ಪೋರೇಟರ್ ಚೇತನ್ ಸೇರಿದಂತೆ ಹಲವರು ಧರಣಿ ನಡೆಸಿದರು. ದೋಸ್ತಿ ಸರ್ಕಾರ ಕ್ವಾರಿ ಸುತ್ತಲಿನ ಅಭಿವೃದ್ಧಿಗಾಗಿ ನೀಡಿದ 120 ಕೋಟಿ ರೂ ಅನುದಾನ ಕಡಿತಗೊಳಿಸಿದೆ. ಜೊತೆಗೆ ಇತರ 200 ಕೋಟಿ ರೂ. ಅನುದಾನವನ್ನು ರದ್ದು ಮಾಡಿದೆ. ಇದರಿಂದ ಕ್ಷೇತ್ರದ ಜನರ ಜೀವನ ನರಕವಾಗಿದೆ ಎಂದು ಆಕ್ರೋಶ ಹೊರಹಾಕಿದರು.

    ಸುತ್ತಲಿನಿಂದ ನೂರಾರು ಜನರು ಸುರಿಯೋ ಮಳೆಯಲ್ಲೂ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಮತ್ತೊಂದು ಮಂಡೂರು ಮಾಡಲು ನಮ್ಮೂರು ಬಿಡಲ್ಲ ಎಂದು ಜನರು ಉಗ್ರ ಹೋರಾಟ ಮಾಡಿದರು. ಸ್ಥಳಕ್ಕೆ ಘನ ತ್ಯಾಜ್ಯವಿಲೇವಾರಿ ವಿಶೇಷ ಆಯುಕ್ತ ರಂದೀಪ್ ಕರೆಸಿ ಕಸ ಸುರಿಯೊದು ನಿಲ್ಲಿಸಿ ಎಂದು ಆಗ್ರಹಿಸಿದರು.

  • ಮಾಲೀಕನ ನಿರ್ಲಕ್ಷ್ಯದಿಂದ ಕೈ ಕಳೆದುಕೊಂಡ ಮಹಿಳೆ

    ಮಾಲೀಕನ ನಿರ್ಲಕ್ಷ್ಯದಿಂದ ಕೈ ಕಳೆದುಕೊಂಡ ಮಹಿಳೆ

    ಬೆಂಗಳೂರು: ಮಾಲೀಕರ ನಿರ್ಲಕ್ಷ್ಯದಿಂದ ಹೌಸ್ ಕೀಪಿಂಗ್ ಮಹಿಳೆಯೊಬ್ಬರು ತನ್ನ ಕೈ ಕಳೆದುಕೊಂಡ ಘಟನೆ ನಗರದ ಕೋಣನಕುಂಟೆಯಲ್ಲಿ ನಡೆದಿದೆ.

    ಶಾರದಮ್ಮ (39) ಕೈಕಳೆದುಕೊಂಡ ಮಹಿಳೆ. ಶಾರದಮ್ಮ ದೊಡ್ಡ ಲಕ್ಕಸಂದ್ರ ವಿಲ್ಲಾಸ್ ಪ್ರೈಡ್ ಅಪಾರ್ಟ್‍ಮೆಂಟ್‍ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕಸವನ್ನು ಮೆಷಿನ್‍ಗೆ ಹಾಕುತ್ತಿದ್ದಾಗ ಈ ಅವಘಡ ನಡೆದಿದ್ದು, ಬಲಗೈ ತುಂಡಾಗಿದೆ.

    ಶಾರದಮ್ಮ ಅಪಾರ್ಟ್‍ಮೆಂಟ್ ಸುತ್ತ ಮುತ್ತಲಿನ ಕಸವನ್ನು ಗುಡಿಸಿ ರಾಶಿ ಹಾಕಿದ್ದರು. ಕಸವನ್ನು ಮಷಿನ್‍ಗೆ ಹೇಗೆ ಹಾಕುವುದೆಂದು ಅಪಾರ್ಟ್ ಮೆಂಟ್ ಮಾಲೀಕ ಕುಮಾರ್ ಶಾರದಮ್ಮಗೆ ಹೇಳಿಕೊಟ್ಟಿರಲಿಲ್ಲ. ಆದರೂ ಕಸವನ್ನು ಮಷಿನ್‍ಗೆ ಹಾಕುವಂತೆ ಕುಮಾರ್ ಹೇಳಿದ್ದರು. ಇದರಿಂದಾಗಿ ಶಾರದಮ್ಮ ಮೆಷಿನ್‍ನಲ್ಲಿ ಕಸ ಹಾಕಿ ಕಡ್ಡಿಯಿಂದ ದೂಡುತ್ತಿದ್ದರು. ಈ ವೇಳೆ ಕಡ್ಡಿ ಮೆಷಿನಿನೊಳಗೆ ಬಿದ್ದಿದೆ. ತಕ್ಷಣವೇ ಕಡ್ಡಿಯನ್ನು ತೆಗೆಯಲು ಮುಂದಾದ ಶಾರದಮ್ಮ, ಆಯ ತಪ್ಪಿ ಮೆಷಿನ್‍ನಲ್ಲಿ ಬಲಗೈ ಇಟ್ಟಿದ್ದಾರೆ. ಪರಿಣಾಮ ಮೆಷಿನಿಗೆ ಸಿಲುಕಿದ ಶಾರದಮ್ಮಳ ಬಲಗೈ ತುಂಡಾಗಿದೆ.

    ಶಾರದಮ್ಮ ನೋವಿನಿಂದ ಅಳುತ್ತಿದ್ದ ಧ್ವನಿ ಕೇಳಿ ಸ್ಥಳಕ್ಕೆ ಆಗಮಿಸಿದ ಸಹೋದ್ಯೋಗಿಳು ಕಣ್ಣೀರು ಹಾಕಿದರು. ಗಂಭೀರವಾಗಿ ಗಾಯಗೊಂಡಿದ್ದ ಶಾರದಮ್ಮ ಅವರಿಗೆ ನೀರು ಕುಡಿಸಿ, ಕೈಗೆ ಬಟ್ಟೆ ಕಟ್ಟಿ ರಕ್ತಸ್ರಾವ ತಡೆಯಲು ಪ್ರಯತ್ನಿಸಿದರು. ಸ್ಥಳದಲ್ಲಿದ್ದ ಕೆಲವರು ಅಂಬುಲೆನ್ಸ್ ಗೆ ಕರೆ ಮಾಡಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ.

    ತರಬೇತಿ ಹಾಗೂ ಸುರಕ್ಷತೆ ನೀಡದೆ ಕೆಲಸ ಮಾಡುವಂತೆ ಹೇಳಿದ ಅಪಾರ್ಟ್‍ಮೆಂಟ್ ಮಾಲೀಕ ಕುಮಾರ್ ವಿರುದ್ಧ ಕೊಣನಕುಂಟೆ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಮತ್ತೆ ತನ್ನ ಹಳೆ ಚಾಳಿಯನ್ನ ಮುಂದುವರಿಸಿದ ಕೇರಳ!

    ಮತ್ತೆ ತನ್ನ ಹಳೆ ಚಾಳಿಯನ್ನ ಮುಂದುವರಿಸಿದ ಕೇರಳ!

    ಮೈಸೂರು: ಕೇರಳದ ಕಸವನ್ನು ಮೈಸೂರಿನ ಗಡಿ ತಾಲೂಕುಗಳ ಗ್ರಾಮಗಳಲ್ಲಿ ಬಂದು ಸುರಿಯುವ ಕೆಲಸವನ್ನು ಕೇರಳಿಗರು ಮತ್ತೆ ಆರಂಭಿಸಿಕೊಂಡಿದ್ದಾರೆ.

    ಮೈಸೂರಿನ ಎಚ್.ಡಿ. ಕೋಟೆಯ ಗಡಿ ಗ್ರಾಮಗಳಲ್ಲಿ ಕೇರಳದಿಂದ ರಾತ್ರೋರಾತ್ರಿ ಲಾರಿಗಟ್ಟಲೆ ಕಸದ ರಾಶಿ ತಂದು ಸುರಿಯಲಾಗುತ್ತಿತ್ತು. ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ ನಂತರ ಈ ಭಾಗದಲ್ಲಿ ಕಸ ಸುರಿಯುವುದು ತಪ್ಪಿದೆ. ಈಗ ಇನ್ನೊಂದು ಗಡಿ ತಾಲೂಕಾದ ಟಿ. ನರಸೀಪುರದಲ್ಲಿ ಈ ಸಮಸ್ಯೆ ಶುರುವಾಗಿದೆ.

    ಟಿ. ನರಸೀಪುರದ ಕಗ್ಗಲಿಪುರ ಗ್ರಾಮದ ಹೊರವಲಯದಲ್ಲಿ ಕೇರಳದಿಂದ ಕಸ ತಂದು ಸುರಿಯಲಾಗುತ್ತಿದೆ. ರಾತ್ರೋರಾತ್ರಿ ಕೇರಳದಿಂದ ಕಸ ತಂದು ಸುರಿಯುತ್ತಿರುವುದನ್ನು ಗ್ರಾಮಸ್ಥರೇ ರೆಡ್ ಹ್ಯಾಂಡ್ ಆಗಿ ಹಿಡಿದು ವಿಡಿಯೋ ಮಾಡಿದ್ದಾರೆ. ಕಗ್ಗಲೀಪುರದ ಕೆರೆ ಪಕ್ಕದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಹಾಗೂ ಮೆಡಿಸನ್‍ನ ತ್ಯಾಜ್ಯ ಸುರಿಯಲಾಗಿದೆ.

  • ಪಕ್ಷಭೇದ ಮರೆತು ಕ್ಷೇತ್ರದ ಸ್ವಚ್ಛತೆಗಿಳಿದ ಕೇರಳ ಅಭ್ಯರ್ಥಿಗಳು

    ಪಕ್ಷಭೇದ ಮರೆತು ಕ್ಷೇತ್ರದ ಸ್ವಚ್ಛತೆಗಿಳಿದ ಕೇರಳ ಅಭ್ಯರ್ಥಿಗಳು

    ತಿರುವನಂತಪುರಂ: ಲೋಕಸಭಾ ಚುನಾವಣೆ ಹಿನ್ನೆಲೆ ಬ್ಯಾನರ್ ಗಳು, ಕಟೌಟ್‍ಗಳು, ವಿಭಿನ್ನ ಪಕ್ಷಗಳ ರಾಶಿ ರಾಶಿ ಬಾವುಟಗಳು ಎಲ್ಲೆಂದರಲ್ಲಿ ರಾರಾಜಿಸುತ್ತಿರುತ್ತದೆ. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮಿಂದಾದ ಕಸವನ್ನು ತಾವೇ ಸ್ವಚ್ಛ ಮಾಡುವ ಮೂಲಕ ಕೇರಳ ಅಭ್ಯರ್ಥಿಗಳು ಈಗ ಮಾದರಿಯಾಗಿದ್ದಾರೆ.

    ಬೃಹತ್ ರೋಡ್ ಶೋ, ಖ್ಯಾತ ರಾಜಕಾರಣಿಗಳ ಭೇಟಿ, ಪಕ್ಷದ ಪ್ರಚಾರಕ್ಕಾಗಿ ಬ್ಯಾನರ್, ಕಟೌಟ್ ಅಂತ ಕ್ಷೇತ್ರದ ಮೂಲೆ ಮೂಲೆಗೂ ಕಸದ ರಾಶಿಯೇ ತುಂಬಿ ಹೋಗಿರುತ್ತದೆ. ಅಲ್ಲದೆ ಚುನಾವಣೆ ಬಳಿಕ ಮತದಾನ ಮುಗಿಯುತ್ತಿದ್ದಂತೆ ಕಸದ ರಾಶಿಯ ಗತಿ ಕೇಳುವವರೇ ಇರುವುದಿಲ್ಲ. ಎಲ್ಲೆಂದರಲ್ಲಿ ಭಾರಿ ಪ್ರಮಾಣದಲ್ಲಿ ಕಸ ತುಂಬಿಕೊಂಡಿರುತ್ತದೆ. ಆದರೆ ಕೇರಳದಲ್ಲಿ ಮತದಾನ ನಡೆದ ನಂತರ ಸ್ಪರ್ಧೆಗೆ ನಿಂತಿದ್ದ ಅಭ್ಯರ್ಥಿಗಳೇ ನಗರವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

    https://www.facebook.com/kummanam.rajasekharan/posts/1962362957206815

    ಚುನಾವಣೆಗೆ ಬಳಸಿದ ವಸ್ತುಗಳನ್ನು ಪುನಃ ಬಳಕೆ ಮಾಡಲು, ಸಾರ್ವಜನಿಕರ ಬಳಕೆಗೆ ಉಪಯೋಗವಾಗುವಂತೆ ಅದನ್ನು ಪರಿಷ್ಕರಿಸಿ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಗೊಳಿಸಲು ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ಜೊತೆಗೆ ಸ್ವತಃ ತಾವೇ ಮುಂದೆ ಬಂದು ರಸ್ತೆಗಳಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ತೆರವು ಗೊಳಿಸಲು ಪುರಸಭೆ ಕಾರ್ಮಿಕರ ಜೊತೆ ಕೈಜೋಡಿಸಿದ್ದಾರೆ.

    ಈ ಬಗ್ಗೆ ಮಾಜಿ ಮಿಜೋರಾಮ್ ಗವರ್ನರ್ ಮತ್ತು ಬಿಜೆಪಿ ಅಭ್ಯರ್ಥಿ ಕುಮ್ಮನಮ್ ರಾಜಶೇಖರನ್ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಸ್ವಚ್ಛತಾ ಅಭಿಯಾನದಡಿ ಚುನಾವಣೆಗೆ ಬಳಸಿದ್ದ ಸುಮಾರು 1 ಲಕ್ಷ ಶಾಲುಗಳು ವಾಪಸ್ ಬಂದಿದೆ. ಈ ಶಾಲುಗಳನ್ನು ಎಸೆಯುವ ಬದಲು ಅವುಗಳನ್ನು ಸಂಗ್ರಹಿಸಿದ್ದೇವೆ. ಅವುಗಳನ್ನು ಸಾರ್ವಜನಿಕರಿಗೆ ಸಹಾಯವಾಗುವಂತೆ ಪುನರ್ ಬಳಕೆಗೆ ಉಪಯೋಗಿಸುತ್ತೇವೆ. ಈ ಶಾಲುಗಳನ್ನು ಬ್ಯಾಗ್, ದಿಂಬು ಹೀಗೆ ಇತ್ಯಾದಿ ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತನೆ ಮಾಡಬಹುದು. ಪ್ರಕೃತಿ ಸ್ನೇಹಿ ವಸ್ತುಗಳ ಬಳಕೆಗೆ ಉತ್ತೇಜನ ನೀಡುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದಾಗಿದೆ ನಮ್ಮ ಗುರಿ ಎಂದು ತಿಳಿಸಿದ್ದಾರೆ.

    https://www.facebook.com/HibiEden/posts/10155940051967260

    ಎರ್ನಾಕುಲಮ್‍ನ ಕಾಂಗ್ರೆಸ್ ಅಭ್ಯರ್ಥಿ ಹಿಬಿ ಈಡನ್ ಕೂಡ ಈ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರ ಜತೆ ಕ್ಷೇತ್ರದಲ್ಲಿ ಪ್ರಚಾರದ ಸಂದರ್ಭ ಬಿದ್ದಿದ್ದ ಕಸಗಳನ್ನು ತೆರವುಗೊಳಿಸಿ, ಬೀದಿಗಳನ್ನು ಸ್ವಚ್ಛ ಮಾಡಿದ್ದಾರೆ. ಚುನಾವಣೆ ಸಂದರ್ಭ ಉಪಯೋಗಿಸಿದ್ದ ಎಲ್ಲಾ ರೀತಿಯ ಪಕ್ಷದ ವಸ್ತುಗಳನ್ನು ತೆರವುಗೊಳಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಫೇಸ್‍ಬುಕ್ ಮೂಲಕ ಹಿಬಿ ಸೂಚಿಸಿದ್ದಾರೆ. ಹಾಗೆಯೇ ಸಿಪಿಎಂ ಅಭ್ಯರ್ಥಿ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಪಿ ರಾಜೀವ್ ಅವರು ಮುಂದಿನ ಎರಡು ದಿನಗಳಲ್ಲಿ ಚುನಾವಣೆ ಪ್ರಚಾರಕ್ಕೆ ಬಳಸಿದ ಎಲ್ಲ ವಸ್ತುಗಳನ್ನು ಕ್ಷೇತ್ರದಿಂದ ತೆರವುಗೊಳಿಸಿ ಸ್ವಚ್ಛಗೊಳಿಸುವುದಾಗಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    https://www.facebook.com/prajeev.cpm/posts/2437006436311441

    ಕೇಂದ್ರ ಸಚಿವ ಮತ್ತು ಬಿಜೆಪಿಯ ಎರ್ನಾಕುಲಂ ಅಭ್ಯರ್ಥಿ ಆಲ್ಫಾನ್ಸ್ ಕಣ್ಣಂತಾನಂ ಕ್ಷೇತ್ರದ ಸಾರ್ವಜನಿಕ ಜಾಗಗಳನ್ನು ಸಂರಕ್ಷಿಸಲು ಒತ್ತಾಯಿಸಿದ್ದು, ಪಕ್ಷಕ್ಕೆ ಸಂಬಂಧಪಟ್ಟ ಎಲ್ಲಾ ಪೋಸ್ಟರ್ ಮತ್ತು ಚಿಹ್ನೆಗಳನ್ನು ತಮ್ಮ ಪಕ್ಷದ ಕಾರ್ಯಕರ್ತರು ತೆರವುಗೊಳಿಸಿದ್ದಾರೆ. ಅಲ್ಲದೆ ಪಕ್ಷದ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಬರೆದಿದ್ದ ಗೋಡೆಬರಹ ಹಾಗೂ ರೇಖಾಚಿತ್ರಗಳನ್ನು ಅಳಿಸಲು ಅವುಗಳ ಮೇಲೆ ಪೇಂಟ್ ಮಾಡಲಾಗಿದೆ. “ನಮ್ಮ ಸಂದೇಶವನ್ನು ನಿಮಗೆ ಮತ್ತು ನಿಮ್ಮ ನೆರೆಹೊರೆಯವರ ಜೊತೆ ಹಂಚಿಕೊಳ್ಳಲು ಅವಕಾಶ ನೀಡಿದಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ.

  • ಕಸಕ್ಕಾಗಿ ಕೋಟಿ ಬಾಚಿದ ಬಿಬಿಎಂಪಿ ಕಥೆ..!

    ಕಸಕ್ಕಾಗಿ ಕೋಟಿ ಬಾಚಿದ ಬಿಬಿಎಂಪಿ ಕಥೆ..!

    ಬೆಂಗಳೂರು: ಬಿಬಿಎಂಪಿ ಕಸದ ಮಾಫಿಯಾ ಇಡೀ ಪಾಲಿಕೆಯನ್ನ ಆರ್ಥಿಕವಾಗಿ ಮುಳುಗಿಸಿದರೂ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ಹಸಿ, ಒಣ ಕಸ ಹೆಸರಲ್ಲಿ ಕೋಟಿ ಕೋಟಿ ಖರ್ಚಾಗುತ್ತಲೇ ಇದೆ. ಹೀಗೆ ನಗರದ ಹಲವೆಡೆ ಕಾಣುವ “ಸೈಂಟಿಫಿಕ್ ವೆಸ್ಟ್ ಕಲೆಕ್ಷನ್ ಬಿನ್ಸ್ ” ಕಸ ನಾವು ಕಟ್ಟುತ್ತಿರುವ ಕೋಟಿಗಟ್ಟಲೆ ತೆರಿಗೆ ಹಣವನ್ನ ನುಂಗುತ್ತಿದೆ.

    ವಿದೇಶಿ ಮಾದರಿ ಕಸ ವಿಲೇವಾರಿ ಹೆಸರಲ್ಲಿ ಕಸದ ತೊಟ್ಟಿ ಕಟ್ಟಲು ಪಾಲಿಕೆ 25 ಲಕ್ಷ 75 ಸಾವಿರ ತೆರಿಗೆ ಹಣ ಸುರಿಯುತ್ತಿದೆ. ಕಸವನ್ನ ಕೈಯಲ್ಲಿ ತೆಗೆಯಬಾರದೆಂದು ಈ ವಿದೇಶಿ ಮಾದರಿ ಕಸ ತೆಗೆಯುವ ಬೀನ್ಸ್ ಗಾಗಿ ಕೋಟಿ ಕೋಟಿ ಹಣ ಪೋಲಾಗುತ್ತಿದೆ. ಬೆಂಗಳೂರಿನಲ್ಲಿ ನಮ್ಮ ಸುತ್ತಮುತ್ತ ಇರುವ ಸೈಂಟಿಫಿಕ್ ವೆಸ್ಟ್ ಕಲೆಕ್ಷನ್ ಬೀನ್ ಬೆಲೆ 5 ಲಕ್ಷ 79 ಸಾವಿರ ರೂ. ಈ ಕಸದ ಡಬ್ಬಗಳಿಗೆ ಇಷ್ಟೊಂದು ಪೋಲು ಕೇಳಿ ತಲೆತಿರುಗುತ್ತದೆ. ಈ ಯೋಜನೆಯಲ್ಲಿ ಬಹುತೇಕ ನಿಯಮವನ್ನು ಗಾಳಿಗೆ ತೂರಲಾಗಿದೆ.

    ಡೆಸ್ಟ್ ಬಿನ್ ಯೋಜನೆ ಜಾರಿಗೆ ತರಲು 2016 ಡಿಸೆಂಬರ್ 22 ರಂದು ಟೆಂಡರ್ ಕರೆಯಲಾಗಿತ್ತು. ಆದರೆ ಈ ಯೋಜನೆ ಒಪ್ಪಂದ ಆಗಿರುವುದು ಮಾತ್ರ ಬರೋಬ್ಬರಿ 2 ವರ್ಷ ಕಳೆದು, ಅಂದರೆ ಮಾರ್ಚ್ 2018 ರಂದು ನಡೆದಿದೆ. ಇನ್ನು ಯಾವುದೇ ಯೋಜನೆಗೆ ಕೈ ಹಾಕಬೇಕಾದರೆ ಎಲ್ಲೆಲ್ಲಿ ಡೆಸ್ಟ್ ಬಿನ್ ಹಾಕುತ್ತೀರಾ ಅಂತ ಮಾಹಿತಿ ಸಿದ್ಧ ಪಡಿಸಬೇಕು. ನಗರದ ವಿವಿಧೆಡೆ ಸೈಂಟಿಫಿಕ್ ಡೆಸ್ಟ್ ಬಿನ್ ಅಂತ ನಮೂದಿಸಿ ಯೋಜನೆಗೆ ಅನುಮೋದನೆ ಪಡೆಯಲಾಗಿದೆ.

    ತಜ್ಞರ ಪ್ರಕಾರ ತಿಂಗಳಿಗೆ 2 ಮೆಟ್ರಿಕ್ ಟನ್ ಕಸ ಮಾತ್ರ ತಿಂಗಳಿಗೆ ಸಂಗ್ರಹಣೆ ಆಗುತ್ತದೆ. ಹಾಗೇ ಲೆಕ್ಕ ಹಾಕಿ 200 ಕಡೆ, 2 ಮೆಟ್ರಿಕ್ ಟನ್ 60 ತಿಂಗಳಿಗೆ 24 ಸಾವಿರ ಮೆಟ್ರಿಕ್ ಟನ್ 5 ವರ್ಷದಲ್ಲಿ ಸಂಗ್ರಹವಾಗಲಿದೆ. ಇದಕ್ಕೆ 1 ಮೆಟ್ರಿಕ್ ಟನ್ ಗೆ 625 ರೂ ನೀಡುವುದಾದರೆ 1 ಕೋಟಿ 50 ಲಕ್ಷ ಸಾಕಾಗುತ್ತದೆ. ಈ ಪ್ರಕಾರ 33 ಕೋಟಿಯಲ್ಲಿ ಉಳಿಕೆಯ 31 ವರೆ ಕೋಟಿ ಏನಾಯ್ತು? ಒಪ್ಪಂದಲ್ಲಿ 5 ವರ್ಷಕ್ಕೆ 5 ಲಕ್ಷ 46 ಟನ್ ಕಸ ಸಂಗ್ರಹ ಅಂತ ಅನುಮೋದಿಸಲಾಗಿದೆ.

    ಈ ಪ್ರಕಾರ 200 ಕಡೆಗಳಲ್ಲಿ ಕಸ ತೆಗೆಯಲು 8 ವೆಹಿಕಲ್ ಬಳಸಲಿದ್ದು, ಒಂದು ವೆಹಿಕಲ್ ಗೆ 56 ಲಕ್ಷ ಬೀಳುತ್ತೆ. ಹಾಗೇ ಕೋಟಿ ಕೊಡುವ ಬದಲು ಹೊಸ ವೆಹಿಕಲ್ ಖರೀದಿಸಬಹುದಿತ್ತು. ಹೀಗೆ ಕೋಟ್ಯಾಂತರ ರೂ. ಪಾಲಿಕೆ ಹಣ ಪೋಲಾಗುತ್ತಿದೆ ಎಂದು ಕಾರ್ಪೋರೇಟರ್ ಗೌತಮ್ ಆಕ್ಷೇಪ ಹೊರಹಾಕಿದ್ದಾರೆ.

    ಶಾಲೆಯ ಆವರಣದಲ್ಲಿ ಸೈಂಟಿಫಿಕಲ್ ಬಿನ್ ಹಾಕುವಾಗ ಫುಟ್ ಪಾತ್ ಒತ್ತುವರಿ ಆಗಿರುವುದು, ರಸ್ತೆಯನ್ನ ಕಸ ಆವರಿಸಿರುವುದು, ಅಗತ್ಯಕ್ಕಿಂತ ಹೆಚ್ಚು ಹಣ ಪೋಲಾಗಿರುವ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಡಳಿತ ಪಕ್ಷ ನಾಯಕ ಶಿವರಾಜ್ ಹೇಳಿದ್ದಾರೆ.

    ಸುಪ್ರೀಂ ಕೋರ್ಟ್ ಸೂಚನೆ ಪ್ರಕಾರ ನಗರದ ರಸ್ತೆಗಳ ಬದಿಯಲ್ಲಿ ಡೆಸ್ಟ್ ಬೀನ್ ಇಡಬಾರದಿತ್ತು. ಈಗ ಬೀನ್ ಇಟ್ಟು ಪಾಲಿಕೆ ತೆರಿಗೆದಾರರ ಕೋಟಿ ಹಣ ಲೂಟಿ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಮಾನ್ಯರು ಬಿಡಿ, ಜನಪ್ರತಿನಿಧಿಗಳ ಮನೆಯಲ್ಲೇ ಆಗ್ತಿಲ್ಲ ಕಸ ವಿಂಗಡಣೆ, ವಿಲೇವಾರಿ!

    ಸಾಮಾನ್ಯರು ಬಿಡಿ, ಜನಪ್ರತಿನಿಧಿಗಳ ಮನೆಯಲ್ಲೇ ಆಗ್ತಿಲ್ಲ ಕಸ ವಿಂಗಡಣೆ, ವಿಲೇವಾರಿ!

    – ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಯಲಾಯ್ತು ಅಸಲಿಯತ್ತು

    ಬೆಂಗಳೂರು: ಸಿಲಿಕಾನ್ ಸಿಟಿ ಕಸದ ನಗರಿ ಅಂತ ಈಗಾಗಲೇ ಜಗಜ್ಜಾಹೀರಾಗಿದೆ. ಬಿಬಿಸಿಯೇ ಬೆಂಗಳೂರು ನಗರವನ್ನು ಕೊಳಕು ನಗರ ಅಂತಲೂ ಘೋಷಿಸಿ ಬಿಟ್ಟಿದೆ. ಈ ಹಣೆಪಟ್ಟಿಯಿಂದ ಹೊರ ಬರೋದಕ್ಕೆ ಜಾಹೀರಾತಿಗಾಗಿ ಬಿಬಿಎಂಪಿ ಕೋಟಿಗಟ್ಟಲೇ ಹಣ ಕೂಡ ಖರ್ಚು ಮಾಡುತ್ತಿದೆ. ಹಸಿ ಕಸ, ಒಣ ಕಸ ಅಂತ ವಿಂಗಡಣೆ ಮಾಡದಿದ್ರೆ, ನಿಮ್ಮ ಮನೆ ಕಸ ಸ್ವೀಕರಿಸಲ್ಲ ಅಂತ ಬಿಬಿಎಂಪಿ ಫರ್ಮಾನು ಕೂಡ ಹೊರಡಿಸಿದೆ. ಬೆಳಗ್ಗೆ ಹೊತ್ತು ಮನೆ ಮುಂದೆ ಬರೋ ಪೌರ ಕಾರ್ಮಿಕರು ಕಸ ವಿಂಗಡಣೆ ಮಾಡದಿದ್ದರೆ ನಾವು ಸ್ವೀಕರಿಸಲ್ಲ ಅಂತ ಬಿಸಾಡಿ ಹೊರಡುತ್ತಾರೆ. ಆದ್ರೆ, ಇದೀಗ ಈ ರೂಲ್ಸ್ ಗಳನ್ನ ಜನಪ್ರತಿನಿಧಿಗಳು ಫಾಲೋ ಮಾಡುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.


    ಜನಪ್ರತಿನಿಧಿಗಳ ಮನೆಗಳಲ್ಲಿ ಕಸ ವಿಲೇವಾರಿ ಆಗುತ್ತಿದ್ಯಾ? ಅಥವಾ ಇಲ್ವಾ….? ಅಂತ ಪಬ್ಲಿಕ್ ಟಿವಿ ಬೆಳಗ್ಗೆ ಪರೀಕ್ಷೆ ನಡೆಸಲು ಹೊರಟಿತ್ತು. ರಾಜ್ಯದ ಅಧಿಪತಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಪ್ರಮುಖರ ಮನೆ ಬಳಿ ಸ್ಟಿಂಗ್ ಆಪರೇಷನ್ ಕೂಡ ನಡೆಸಿತ್ತು. ಈ ವೇಳೆ ಅಲ್ಲಿ ಕಂಡು ಬಂದ ದೃಶ್ಯ ನಿಜಕ್ಕೂ ಮುಜುಗರ ತರಿಸುವಂತಿತ್ತು.

    ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಜೆ.ಪಿ. ನಗರ ನಿವಾಸದ ಬಳಿಗೆ ಬೆಳಗ್ಗೆ 6 ಗಂಟೆ ಸುಮಾರಿಗೆ ತೆರಳಿದಾಗ ಅಲ್ಲಿಯ ದೃಶ್ಯ ಕಂಡು ನಿಜಕ್ಕೂ ಆಘಾತವುಂಟಾಗಿದೆ. ಯಾಕಂದ್ರೆ, ನಾಡಿನ ಅಧಿಪತಿ ನಿವಾಸದಲ್ಲೇ ಕಸ ವಿಲೇವಾರಿ ಆಗುತ್ತಿಲ್ಲ.
    ಪಬ್ಲಿಕ್ ಪ್ರತಿನಿಧಿ – ನೀವೇ ಮಾಡಿಕೊಳ್ಳಬೇಕಾ?
    ಪೌರ ಕಾರ್ಮಿಕ – ಹು…..
    ಪ್ರತಿನಿಧಿ – ಅವರು ಮಾಡಿಕೊಡಲ್ವಾ…?
    ಪೌರ ಕಾರ್ಮಿಕ – ಇಲ್ಲ. ಅವರ್ಯಾಕೆ ಮಾಡಿಕೊಡಬೇಕು?
    ಪ್ರತಿನಿಧಿ – ಹಸಿ, ಒಣ ಕಸ ಬೇರೆ ಮಾಡಿಕೊಡಬೇಕು ಅಲ್ವಾ…?
    ಪೌರ ಕಾರ್ಮಿಕ – ನಮ್ ಕೆಲಸ ಅದು ಮಾಡ್ತೀವಿ.

    ಮುಖ್ಯಮಂತ್ರಿಗಳ ಮನೆಯಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಬೆಂಗಳೂರು ಉಸ್ತುವಾರಿ ಸಚಿವರು ಅಂತ ಅನಿಸಿಕೊಂಡ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಮನೆಯಲ್ಲಿ ಏನಾದರೂ ಕಸ ವಿಲೇವಾರಿ ಆಗುತ್ತಿದ್ಯಾ…? ಅಂತ ನೋಡಲು ಹೊರಟ್ರೆ ಅಲ್ಲೂ ಕಸ ವಿಲೇವಾರಿ ಆಗುತ್ತಿರಲಿಲ್ಲ.

    ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ನಗರಾಭಿವೃದ್ಧಿ ಸಚಿವರಾದ ಬೆರಳೆಣಿಕೆಯ ದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಸಿ ಕಸ ಬೇರ್ಪಡಿಸಿ ಎಂದು ಸಂದೇಶ ನೀಡಿದ್ರು. ಆದ್ರೆ ಅವರು ವಾಸವಿರೋ ಸದಾಶಿವನಗರ ಮನೆಯಲ್ಲೇ ಕಸ ವಿಂಗಡನೆಯೇ ಆಗುತ್ತಿಲ್ಲ. ಕಡೆ ಪಕ್ಷ ಕಸವನ್ನ ತಂದು ಪೌರಕಾರ್ಮಿಕರ ಕೈಗೂ ಕೊಡಲ್ಲ. ಬದಲಾಗಿ ಅವರ ಮನೆ ಡೆಸ್ಟ್ ಬಿನ್ ತಂದು ಕಸ ಸುರಿದುಕೊಂಡು ಹೋಗ್ತಾರೆ.
    ಪ್ರತಿನಿಧಿ – ಎಲ್ಲ ರಾಜಕಾರಣಿಗಳು ಇರೋದು ಇಲ್ಲೇ ತಾನೇ?
    ಪೌರಕಾರ್ಮಿಕ – ಹೌದು.
    ಪ್ರತಿನಿಧಿ – ಕಸ ಬೇರ್ಪಡಿಸಿ ಕೊಡ್ತಾರಾ…?
    ಪೌರಕಾರ್ಮಿಕ – ಇಲ್ಲ
    ಪ್ರತಿನಿಧಿ – ಯಾಕೆ ಅಂತ ಕೇಳೋದು…?
    ಪೌರಕಾರ್ಮಿಕ – ನಿಮ್ ಕೆಲಸನೇ ಅದು. ಮಾಡಿದರೆ ಮಾಡಿ ಇಲ್ಲ ಬಿಡಿ ಅಂತಾರೆ. ನಮ್ ಕಷ್ಟ ಕೇಳೋರು ಯಾರು?
    ಪ್ರತಿನಿಧಿ – ಡಿಸಿಎಂ ಮನೆಯಲ್ಲಿ ಕಸ ಬೇರ್ಪಡಿಸ್ತಾರಾ?
    ಪೌರಕಾರ್ಮಿಕ – ಅವರೂ ಅಷ್ಟೇ.. ಕಸ ವಿಂಗಡಿಸಿಲ್ಲ

    ಸಿಎಂ, ಡಿಸಿಎಂ ಆಯ್ತು. ಬಳಿಕ ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲಿ ಏನಾಗ್ತಿದೆ ಅಂತ ಪದ್ಮನಾಭನಗರ ಕಡೆ ಹೊರಟ್ರೆ ಅಲ್ಲೂ ಕಂಡುಬಂದಿದ್ದು ಮಾಮೂಲಿ ಚಿತ್ರಣವೇ.
    ಪ್ರತಿನಿಧಿ – ದೇವೇಗೌಡರ ಕಸ ವಿಂಗಡಿಸಿ ಕೊಡ್ತಾರಾ ?
    ಪೌರಕಾರ್ಮಿಕ – ಯಾರ್ ಮನೆಯವ್ರು…?
    ಪ್ರತಿನಿಧಿ – ಗೌಡರ ಮನೆಯವ್ರು…?
    ಪೌರಕಾರ್ಮಿಕ – ಇಲ್ಲ. ಒಬ್ರು ಮಾಡ್ತಾರೆ. ಇನ್ನೊಬ್ಬರು ಮಾಡಲ್ಲ.

    ಗೌಡರ ನಿವಾಸದಲ್ಲೂ ಕಸ ವಿಲೇವಾರಿ ಆಗುತ್ತಿಲ್ಲ. ಬಳಿಕ ಅಲ್ಲಿಂದ ನೇರವಾಗಿ ಜಯಮಾಲಾ ಮನೆ ನೋಡಿ ಬಿಡೋಣ ಅಂತ ಡಾಲರ್ಸ್ ಕಾಲೋನಿಯತ್ತ ಹೊರಟ್ವಿ. ಸಚಿವೆ ಆಗಿರುವುದಕ್ಕಿಂತ ಗೃಹಿಣಿ ಆಗಿರೋದ್ರಿಂದ ನಮ್ಮ ನಿರೀಕ್ಷೆಗಳೂ ಹೆಚ್ಚಿದ್ವು. ಆದ್ರೆ ಆಗಿದ್ದೇ ಬೇರೆ. ಏನಂದ್ರೆ ಸಚಿವೆಯ ಮನೆಯಲ್ಲೂ ಕಸ ವಿಂಗಡಣೆಯೇ ಇಲ್ಲ.
    ಪ್ರತಿನಿಧಿ – ಮಿನಿಸ್ಟರ್ ಮನೆಯಲ್ಲಿ ಕಸ ವಿಂಗಡಿಸಲ್ವಂತೆ ?
    ಪೌರಕಾರ್ಮಿಕ – ಹೌದು. ಇಲ್ಲಿ ಒಬ್ಬರ ಮನೆ ಇದೆ .. ಜಯಮಾಲಾ ಮನೆ, ವಿಂಗಡಿಸ್ತಾರೆ.. ಆದ್ರೆ ಮಿಕ್ಸ್ ಮಾಡಿ ಹಾಕುತ್ತಾರೆ. ನಾವೇ ಕ್ಲೀನ್ ಮಾಡಬೇಕು.
    ಪ್ರತಿನಿಧಿ – ಹು..
    ಪೌರಕಾರ್ಮಿಕ – ಮೇಡಂ ನೋಡಿದ್ರೆ ಬೈಯ್ತಾರೆ.. ಆದ್ರೆ ಇದೆಲ್ಲಾ ಕೆಲಸಗಾರರ ಅವಾಂತರ

    ಪೌರಕಾರ್ಮಿಕ- ಯಾಕೆ ಕಸ ಸಪರೇಟ್ ಮಾಡಿ ಕೊಡ್ತಾ ಇಲ್ಲ
    ಮಂತ್ರಿ ಮನೆ ಕೆಲಸದಾಕೆ – ಗೊತ್ತಿಲ್ಲ ನನಗೆ.
    ಪ್ರತಿನಿಧಿ – ಯಾಕೆ ಮಾಡ್ತಾ ಇಲ್ಲ?
    ಮಂತ್ರಿ ಮನೆ ಕೆಲಸದಾಕೆ – ನನಗೆ ಗೊತ್ತಿಲ್ಲ, ಕಸ ಗುಡಿಸೋರು ಬೇರೆ? ಕ್ಲೀನ್ ಮಾಡೋರು ಬೇರೆ .. ಇನ್ನೊಬ್ರು ಕೇಳಿ ಗೊತ್ತಿಲ್ಲ..
    ಪೌರಕಾರ್ಮಿಕ – ಅವತ್ತೇ ಹಿಗ್ ಮಾಡ್ ಬಾರದು ಅಂತ ಹೇಳಿಲ್ವಾ…?
    ಪೌರಕಾರ್ಮಿಕ – ಬಕೆಟ್ ನಲ್ಲಿ ಪ್ಲಾಸ್ಟಿಕ್ , ಬಾಟೆಲ್ ಎಲ್ಲ ಸರ್ಪೆಟ್ ಮಾಡಿ, ಇಲ್ಲವಾದ್ರೆ ಮೇಡಂಗೆ ಹೇಳ್ತಿವಿ.. ಎಲ್ಲರೂ ಕಂಪ್ಲೇಂಟ್ ಮಾಡ್ತಾರೆ
    ಮಂತ್ರಿ ಮನೆ ಕೆಲಸದಾಕೆ – ಆಯ್ತು ಇನ್ಮುಂದೆ ಮಾಡ್ತಿನಿ

    ಆಡಳಿತ ಮೈತ್ರಿ ಪಕ್ಷದ ನಾಯಕರನ್ನ ಕಥೆ ಈ ರೀತಿಯಾಗಿತ್ತು. ಈಗ ಇದೆಲ್ಲ ಸರಿನಾ ಅಂತ ಕೇಳಬೇಕಾದ ವಿರೋಧ ಪಕ್ಷದ ನಾಯಕರ ಮನೆ ಬಳೀ ಹೋದ್ರೆ ಅವರದ್ದು ಇದೇ ಕಥೆ. ಡಾಲರ್ಸ್ ಕಾಲೋನಿಯಲ್ಲಿರೊ ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲೂ ಕಸ ವಿಂಗಡನೆ ಮಾಡಲ್ಲ.
    ಪೌರಕಾರ್ಮಿಕ – ಎರಡು ಮನೆ ಕ್ಲಿನ್ ಮಾಡಿ ಕೊಡ್ತಾರೆ.. ಉಳಿದ ಇಬ್ರು ಹಾಗೇ ಕೊಡ್ತಾರೆ
    ಪ್ರತಿನಿಧಿ – ಯಡಿಯೂರಪ್ಪ ಪಿಎ ಗಾದ್ರೂ ಹೇಳಬೇಕಿತ್ತು.
    ಪೌರಕಾರ್ಮಿಕ – ಅವರೆಲ್ಲ ನಮ್ ಹತ್ರ ಎಲ್ಲಿ ಮಾತಾಡ್ತಾರೆ. ಬರ್ತಾರೆ. ಹೋಗ್ತಾರೆ.
    ಪ್ರತಿನಿಧಿ – ಯಾರಿಗಾದ್ರೂ ಹೇಳಿದ್ರಾ?
    ಪೌರಕಾರ್ಮಿಕ – ಯಾರಿಗೂ ಹೇಳಿಲ್ಲ.. ನಾವೇ ಮಾಡಿ ಕೊಳ್ತಿವಿ

    ಒಟ್ಟಿನಲ್ಲಿ ಬಾಯಿಯಲ್ಲಿ ಹೇಳೋದು ಸುಲಭ. ಮಾಡೊದು ಕಷ್ಟ. ಶ್ರೀಸಾಮಾನ್ಯರು ಕಸ ವಿಂಗಡಣೆ ಮಾಡದಿದ್ದರೆ ದಂಡ ವಿಧಿಸೋ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳ ಬಗ್ಗೆ ಕೇಳಿದ್ರೆ, ಕೊಡೋ ಉತ್ತರನೇ ಬೇರೆಯದ್ದಾಗಿರುತ್ತದೆ.

    https://www.youtube.com/watch?v=bJyc-Nl-fEI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹಬ್ಬವೆಂದು ಆತುರದಲ್ಲಿ ಪಟಾಕಿ ಹೊಡೆಯೋರೇ ಹುಷಾರ್..!

    ಹಬ್ಬವೆಂದು ಆತುರದಲ್ಲಿ ಪಟಾಕಿ ಹೊಡೆಯೋರೇ ಹುಷಾರ್..!

    ಬೆಂಗಳೂರು: ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಹೊಡೆಯುವ ಆತುರದಲ್ಲಿರೊರಿಗೆ ಪಾಲಿಕೆ ಶಾಕ್ ನೀಡಲಿದೆ. ಪಟಾಕಿ ತ್ಯಾಜ್ಯ ನೀವೇ ಕ್ಲಿನ್ ಮಾಡಬೇಕು. ಇಲ್ಲವಾದ್ರೆ ಕ್ರಿಮಿನಲ್ ಕೇಸ್ ಬೀಳುತ್ತದೆ. ಹೈಕೋರ್ಟ್ ಸೂಚನೆಯಿಂದ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಪಾಲಿಕೆ ಮುಂದಾಗಿದೆ. ಹೀಗಾಗಿ ಪಟಾಕಿ ತ್ಯಾಜ್ಯ ಇದ್ರೆ ಕ್ರಿಮಿನಲ್ ಕೇಸ್ ದಾಖಲಿಸಲು ಪಾಲಿಕೆ ದೀಪಾವಳಿಯ ರಜೆ ಪಡೆಯದೇ ಕೆಲಸ ಮಾಡ್ತಿದೆ.

    ಹೌದು, ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಹೊಡೆದ್ಮೇಲೆ ಅದರ ತ್ಯಾಜ್ಯವನ್ನು ನೀವೇ ಶುಚಿಗೊಳಿಸಬೇಕು. ಪೌರಕಾರ್ಮಿಕರು ಕ್ಲೀನ್ ಮಾಡ್ತಾರೆ ಅಂತ ಕಾಯುವಂತಿಲ್ಲ. ಒಂದು ವೇಳೆ ನಿಮ್ಮ ಮನೆ ಮುಂದೆ ಪಟಾಕಿ ತ್ಯಾಜ್ಯ ಇದ್ರೆ ಪೌರಕಾರ್ಮಿಕರೇ ದೂರು ಕೊಡ್ತಾರೆ. ಬಳಿಕ ಪಾಲಿಕೆ ಅಧಿಕಾರಿಗಳು ನಿಮ್ಮ ಮಾಹಿತಿಯನ್ನ ಪೊಲೀಸ್ ಇಲಾಖೆಗೆ ಕೊಡ್ತಾರೆ. ಹೀಗಾಗಿ ಪಟಾಕಿ ತ್ಯಾಜ್ಯದ ಬಗ್ಗೆ ಎಚ್ಚರ ಸಾರ್ವಜನಿಕರೇ ಎಚ್ಚರ ಅಂತ ಪಾಲಿಕೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ನಾಡಿಗೆಲ್ಲಾ ದೀಪಾವಳಿಯ ಸಂಭ್ರಮ, ಆದ್ರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ಕಸ ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದಾರೆ. ಹೈಕೋರ್ಟ್ ಚಾಟಿ ಬೀಸಿರುವ ಹಿನ್ನೆಲೆಯಲ್ಲಿ ನೆಮ್ಮದಿ ಕಳೆದುಕೊಂಡಿರುವ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ಅಧಿಕಾರಿಗಳು ಕಸ ನಿರ್ವಹಣೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ, ಆರೋಗ್ಯಾಧಿಕಾರಿಗಳು ಹಾಗೂ ಎಂಜಿನಿಯರ್ಸ್ ರಸ್ತೆ ರಸ್ತೆಗಳನ್ನೂ ಪರಿಶೀಲನೆ ನಡೆಸಿ ಕಸ ರಾಶಿ ಬೀಳದಂತೆ ಎಚ್ಚರಿಕೆ ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv