Tag: ಕಸ

  • ಬಿಗ್ ಇಂಪ್ಯಾಕ್ಟ್- ಕಸದ ಶುಲ್ಕ ಪ್ರಸ್ತಾವನೆ ಕೈ ಬಿಟ್ಟ ಬಿಬಿಎಂಪಿ

    ಬಿಗ್ ಇಂಪ್ಯಾಕ್ಟ್- ಕಸದ ಶುಲ್ಕ ಪ್ರಸ್ತಾವನೆ ಕೈ ಬಿಟ್ಟ ಬಿಬಿಎಂಪಿ

    – ತೀವ್ರ ವಿರೋಧದ ಹಿನ್ನೆಲೆ ಪ್ರಸ್ತಾವನೆ ವಾಪಸ್

    ಬೆಂಗಳೂರು: ಸಿಲಿಕಾನ್ ಸಿಟಿ ಜನತೆ ಕೊರೊನಾ ಲಾಕ್‍ಡೌನ್‍ನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇಂತಹ ಹೊತ್ತಲ್ಲೇ ಬಿಬಿಎಂಪಿ ಕಸ ಸಂಗ್ರಹಕ್ಕೂ ಶುಲ್ಕ ವಸೂಲಿ ಮಾಡಲು ಬಿಬಿಎಂಪಿ ಮುಂದಾಗಿತ್ತು. ಈ ಕುರಿತು ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆ ಇದೀಗ ಈ ಪ್ರಸ್ತಾವನೆಯನ್ನು ಬಿಬಿಎಂಪಿ ಕೈ ಬಿಟ್ಟಿದೆ.

    ಕಸ ಸಂಗ್ರಹಕ್ಕೆ ಪ್ರತಿ ಮನೆಗೆ 200 ಶುಲ್ಕ ಹೇರುತ್ತಿರುವ ಬಿಬಿಎಂಪಿ ಪ್ರಸ್ತಾವನೆ ಕುರಿತು ನಿಮ್ಮ ‘ಪಬ್ಲಿಕ್ ಟಿವಿ’ ಸುದ್ದಿ ಬ್ರೇಕ್ ಮಾಡಿತ್ತು. ಬಳಿಕ ಸಾರ್ವಜನಿಕರು ಭಾರೀ ಆಕ್ರೋಶ ಹೊರ ಹಾಕಿದ್ದರು. ಹೀಗಾಗಿ ಬಿಬಿಎಂಪಿ ತನ್ನ ಪ್ರಸ್ತಾವನೆಯನ್ನು ಹಿಂಪಡೆದಿದ್ದು, ಶುಲ್ಕ ವಿಧಿಸದಿರಲು ನಿರ್ಧರಿಸಿದೆ. ಅಲ್ಲದೆ ಸದ್ಯಕ್ಕೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

    ಬಿಬಿಎಂಪಿ ರೂಪಿಸಿದ್ದ ಕಸ ನಿರ್ವಹಣೆ ಉಪನಿಯಮ 2020 ರಾಜ್ಯಪತ್ರದಲ್ಲಿ ಪ್ರಕಟವಾಗಿದ್ದು, ಅಧಿಕೃತವಾಗಿ ಜಾರಿಗೆ ಬಂದಿದೆ. ಶುಲ್ಕ ಸಂಗ್ರಹ ಸಂಬಂಧ ಬೆಸ್ಕಾಂಗೆ ಪತ್ರ ಬರೆದಿದ್ದು, ಸರ್ಕಾರ ಒಪ್ಪಿದರೆ ಮುಂದಿನ ತಿಂಗಳಿನಿಂದಲೇ ಇದು ಜಾರಿಗೆ ಬರುವ ಸಾಧ್ಯತೆ ಇತ್ತು.

    ಪ್ರತಿ ತಿಂಗಳು ಮನೆಯ ಅಳತೆಗೆ ತಕ್ಕಂತೆ ಹಣ ಸಂಗ್ರಹ. ನೀರು, ವಿದ್ಯುತ್ ಬಿಲ್ ಕಟ್ಟುವ ರೀತಿ ಕಸಕ್ಕೂ ದುಡ್ಡನ್ನು ಕಟ್ಟಬೇಕು. ಬೆಸ್ಕಾಂ ಜೊತೆಗೆ ಈ ಸಂಬಂಧ ಬಿಬಿಎಂಪಿ ಮಾತುಕತೆ ನಡೆಸುತ್ತಿದ್ದು, ಒಪ್ಪಿಗೆ ಸಿಕ್ಕಿದ್ದರೆ ವಿದ್ಯುತ್ ಬಿಲ್ ಜೊತೆ ಕಸದ ಬಿಲ್ ಸಹ ಬರುತ್ತಿತ್ತು. ಒಂದು ವೇಳೆ ಬೆಸ್ಕಾಂ ಒಪ್ಪದೇ ಇದ್ದರೆ ಆಸ್ತಿ ತೆರಿಗೆ ಕಟ್ಟುವಾಗ ವಸೂಲಿಗೂ ಚಿಂತನೆ ನಡೆದಿತ್ತು.

    ಮನೆ ಮಾತ್ರವಲ್ಲದೇ ಕಟ್ಟಡ, ಐಷಾರಾಮಿ ಕಲ್ಯಾಣಮಂಟಪಗಳಿದ್ದರೆ ದುಬಾರಿ ಶುಲ್ಕ ಪಾವತಿಸಬೇಕಾಗುತ್ತದೆ. ಆಸ್ಪತ್ರೆ, ಹೋಟೆಲ್, ವಾಣಿಜ್ಯ ಕಟ್ಟಡಗಳಿಗೂ ಪ್ರತ್ಯೇಕ ಶುಲ್ಕ ವಿಧಿಸಲು ಬಿಬಿಎಂಪಿ ಮುಂದಾಗಿತ್ತು.

    ಯಾರಿಗೆ ಎಷ್ಟೆಷ್ಟು ಶುಲ್ಕ?
    30*40 ಸೈಟ್ – 30 ರೂ.
    60*40 ಸೈಟ್ – 40 ರೂ.
    60*40 ಮೇಲ್ಪಟ್ಟು- 50 ರೂ.

    ಹೋಟೆಲ್, ಛತ್ರ, ಆಸ್ಪತ್ರೆಗಳಿಗೆ ಶುಲ್ಕವೆಷ್ಟು?
    10 ಸಾವಿರ ಚದರಡಿ – 300 ರೂ.
    10,000-50,000 ಚದರಡಿ – 500 ರೂ.
    50 ಸಾವಿರ ಮೇಲ್ಪಟ್ಟರೆ – 600 ರೂ.
    ದೊಡ್ಡ ಕಲ್ಯಾಣಮಂಟಪ – 14,000 ರೂ.

    ವಾಣಿಜ್ಯ ಕಟ್ಟಡಗಳಿಗೆ ಎಷ್ಟೆಷ್ಟು ಶುಲ್ಕ?
    1,000 ಚದರಡಿ ಕಟ್ಟಡಗಳಿಗೆ – 50 ರೂ.
    1,000-5,000 ಚದರಡಿ ಕಟ್ಟಡಗಳಿಗೆ – 100 ರೂ.
    5,000 ಮೇಲ್ಪಟ್ಟ ಕಟ್ಟಡಗಳಿಗೆ – 300 ರೂ.

    ಕೈಗಾರಿಕಾ ಕಟ್ಟಡಗಳಿಗೆ ಎಷ್ಟೆಷ್ಟು ಶುಲ್ಕ?
    1,000 ಚದರಡಿ ಕಟ್ಟಡಗಳಿಗೆ – 100 ರೂ.
    1,000-5,000 ಚದರಡಿ ಕಟ್ಟಡಗಳಿಗೆ – 200 ರೂ.
    5,000 ಮೇಲ್ಪಟ್ಟ ಕಟ್ಟಡಗಳಿಗೆ – 300 ರೂ.

    ಹೈಕೋರ್ಟ್ ಹೇಳಿದ್ದು ಏನು?
    ಈ ಹಿಂದೆ ಪ್ರಕರಣ ಒಂದರ ವಿಚಾರಣೆ ಸಂದರ್ಭದಲ್ಲಿ ಕಸ ನಿರ್ವಹಣೆಗಾಗಿ ಬಿಬಿಎಂಪಿ ವರ್ಷಕ್ಕೆ 1 ಸಾವಿರ ಕೋಟಿ ಅಧಿಕ ವೆಚ್ಚ ಮಾಡುತ್ತಿದೆ. ಆದರೆ ಆಸ್ತಿ ತೆರಿಗೆ ಜೊತೆ ಸಂಗ್ರಹಿಸುತ್ತಿದ್ದ ಉಪಕರದಿಂದ ಕೇವಲ 40 ಕೋಟಿ ರೂ. ಮಾತ್ರ ಸಂಗ್ರಹವಾಗುತ್ತಿದೆ. ಸಣ್ಣ ನಗರಾಡಳಿತ ಸಂಸ್ಥೆಗಳೇ ಕಸ ನಿರ್ವಹಣೆಗೆ ಬಳಕೆದಾರರ ಶುಲ್ಕ ವಿಧಿಸುತ್ತಿರುವಾಗ ಬಿಬಿಎಂಪಿ ಕ್ರಮಕೈಗೊಳ್ಳದ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.

  • ಇನ್ಮುಂದೆ ಬೆಂಗ್ಳೂರಿನ ನಿವಾಸಿಗಳು ಕಸಕ್ಕೂ ದುಡ್ಡು ಪಾವತಿಸಬೇಕು

    ಇನ್ಮುಂದೆ ಬೆಂಗ್ಳೂರಿನ ನಿವಾಸಿಗಳು ಕಸಕ್ಕೂ ದುಡ್ಡು ಪಾವತಿಸಬೇಕು

    – ಕಸ ನಿರ್ವಹಣೆಗೆ ಶುಲ್ಕ ಜಾರಿ
    – ಮುಂದಿನ ತಿಂಗಳಿನಿಂದ ಜಾರಿ ಸಾಧ್ಯತೆ
    – ವಿದ್ಯುತ್‌ ಬಿಲ್‌ ಜೊತೆ ಕಸಕ್ಕೂ ಬಿಲ್‌?

    ಬೆಂಗಳೂರು: ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯ ಅಡಿಯಲ್ಲಿರುವ ಮನೆಗಳು ಪ್ರತಿ ತಿಂಗಳು ಕಸಕ್ಕೂ ದುಡ್ಡನ್ನು ಪಾವತಿಸಬೇಕು.

    ಹೌದು. ಬಿಬಿಎಂಪಿ ರೂಪಿಸಿರುವ ಕಸ ನಿರ್ವಹಣೆ ಉಪನಿಯಮ 2020 ರಾಜ್ಯಪತ್ರದಲ್ಲಿ ಪ್ರಕಟವಾಗಿದ್ದು, ಅಧಿಕೃತವಾಗಿ ಜಾರಿಗೆ ಬಂದಿದೆ. ಶುಲ್ಕ ಸಂಗ್ರಹ ಸಂಬಂಧ ಬೆಸ್ಕಾಂಗೆ ಪತ್ರ ಬರೆದಿದ್ದು ಸರ್ಕಾರ ಒಪ್ಪಿದರೆ ಮುಂದಿನ ತಿಂಗಳಿನಿಂದಲೇ ಇದು ಜಾರಿಗೆ ಬರುವ ಸಾಧ್ಯತೆಯಿದೆ.

    ಪ್ರತಿ ತಿಂಗಳು ಮನೆಯ ಅಳತೆಗೆ ತಕ್ಕಂತೆ ಹಣ ಸಂಗ್ರಹವಾಗಲಿದೆ. ನೀರು, ವಿದ್ಯುತ್ ಬಿಲ್ ಹೇಗೆ ಕಟ್ಟುತ್ತೀರೋ ಹಾಗೆ ಕಸಕ್ಕೂ ದುಡ್ಡನ್ನು ಕಟ್ಟಬೇಕು. ಬೆಸ್ಕಾಂ ಜೊತೆಗೆ ಈ ಸಂಬಂಧ ಬಿಬಿಎಂಪಿ ಮಾತುಕತೆ ನಡೆಸುತ್ತಿದ್ದು ಒಪ್ಪಿಗೆ ಸಿಕ್ಕರೆ ವಿದ್ಯುತ್ ಬಿಲ್ ಜೊತೆ ಕಸದ ಬಿಲ್ ಬರಲಿದೆ. ಒಂದು ವೇಳೆ ಬೆಸ್ಕಾಂ ಒಪ್ಪದೇ ಇದ್ದರೆ ಆಸ್ತಿ ತೆರಿಗೆ ಕಟ್ಟುವಾಗ ವಸೂಲಿಗೂ ಚಿಂತನೆ ನಡೆದಿದೆ.

    ಮನೆ ಮಾತ್ರವಲ್ಲದೇ ಕಟ್ಟಡ, ಐಷಾರಾಮಿ ಕಲ್ಯಾಣಮಂಟಪಗಳಿದ್ದರೆ ದುಬಾರಿ ಶುಲ್ಕ ಪಾವತಿಸಬೇಕಾಗುತ್ತದೆ. ಆಸ್ಪತ್ರೆ, ಹೋಟೆಲ್, ವಾಣಿಜ್ಯ ಕಟ್ಟಡಗಳಿಗೂ ಪ್ರತ್ಯೇಕ ಶುಲ್ಕ ವಿಧಿಸಲು ಬಿಬಿಎಂಪಿ ಮುಂದಾಗಿದೆ.

    ಯಾರಿಗೆ ಎಷ್ಟೆಷ್ಟು ಶುಲ್ಕ?
    30*40 ಸೈಟ್ – 30 ರೂ.
    60*40 ಸೈಟ್ – 40 ರೂ.
    60*40 ಮೇಲ್ಪಟ್ಟು- 50 ರೂ.

    ಹೋಟೆಲ್, ಛತ್ರ, ಆಸ್ಪತ್ರೆಗಳಿಗೆ ಶುಲ್ಕವೆಷ್ಟು?
    10 ಸಾವಿರ ಚದರಡಿ – 300 ರೂ.
    10,000-50,000 ಚದರಡಿ – 500 ರೂ.
    50 ಸಾವಿರ ಮೇಲ್ಪಟ್ಟರೆ – 600 ರೂ.
    ದೊಡ್ಡ ಕಲ್ಯಾಣಮಂಟಪ – 14,000 ರೂ.

     

    ವಾಣಿಜ್ಯ ಕಟ್ಟಡಗಳಿಗೆ ಎಷ್ಟೆಷ್ಟು ಶುಲ್ಕ?
    1,000 ಚದರಡಿ ಕಟ್ಟಡಗಳಿಗೆ – 50 ರೂ.
    1,000-5,000 ಚದರಡಿ ಕಟ್ಟಡಗಳಿಗೆ – 100 ರೂ.
    5,000 ಮೇಲ್ಪಟ್ಟ ಕಟ್ಟಡಗಳಿಗೆ – 300 ರೂ.

    ಕೈಗಾರಿಕಾ ಕಟ್ಟಡಗಳಿಗೆ ಎಷ್ಟೆಷ್ಟು ಶುಲ್ಕ?
    1,000 ಚದರಡಿ ಕಟ್ಟಡಗಳಿಗೆ – 100 ರೂ.
    1,000-5,000 ಚದರಡಿ ಕಟ್ಟಡಗಳಿಗೆ – 200 ರೂ.
    5,000 ಮೇಲ್ಪಟ್ಟ ಕಟ್ಟಡಗಳಿಗೆ – 300 ರೂ.

    ಹೈಕೋರ್ಟ್‌ ಹೇಳಿದ್ದು ಏನು?
    ಈ ಹಿಂದೆ ಪ್ರಕರಣ ಒಂದರ ವಿಚಾರಣೆ ಸಂದರ್ಭದಲ್ಲಿ ಕಸ ನಿರ್ವಹಣೆಗಾಗಿ ಬಿಬಿಎಂಪಿ ವರ್ಷಕ್ಕೆ 1 ಸಾವಿರ ಕೋಟಿ ಅಧಿಕ ವೆಚ್ಚ ಮಾಡುತ್ತಿದೆ. ಆದರೆ, ಆಸ್ತಿ ತೆರಿಗೆ ಜೊತೆ ಸಂಗ್ರಹಿಸುತ್ತಿದ್ದ ಉಪಕರದಿಂದ ಕೇವಲ 40 ಕೋಟಿ ರೂ. ಮಾತ್ರ ಸಂಗ್ರಹವಾಗುತ್ತಿದೆ. ಸಣ್ಣ ನಗರಾಡಳಿತ ಸಂಸ್ಥೆಗಳೇ ಕಸ ನಿರ್ವಹಣೆಗೆ ಬಳಕೆದಾರರ ಶುಲ್ಕ ವಿಧಿಸುತ್ತಿರುವಾಗ ಬಿಬಿಎಂಪಿ ಕ್ರಮಕೈಗೊಳ್ಳದ ಬಗ್ಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು.

  • ಕಸದೊಂದಿಗೆ 3 ಕೋಟಿ ಮೌಲ್ಯದ ಒಡವೆ ಬಿಸಾಕಿ ಪರದಾಡಿದ ಮಹಿಳೆ!

    ಕಸದೊಂದಿಗೆ 3 ಕೋಟಿ ಮೌಲ್ಯದ ಒಡವೆ ಬಿಸಾಕಿ ಪರದಾಡಿದ ಮಹಿಳೆ!

    ಮುಂಬೈ: ಮನೆಯನ್ನು ಸ್ವಚ್ಛಗೊಳಿಸಿದ ಬಳಿಕ ಮಹಿಳೆ ಕಸದ ಜೊತೆಗೆ ಸುಮಾರು 3 ಕೋಟಿ ರೂ. ಬೆಲೆಯ ಚಿನ್ನಾಭರಣವನ್ನೂ ಬಿಸಾಕಿರುವ ಅಚ್ಚರಿಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ದೀಪಾವಳಿ ಅಂಗವಾಗಿ ಮಹಿಳೆ ರೇಖಾ ಸುಲೆಕರ್ ಮನೆಯನ್ನು ಸ್ವಚ್ಛಗೊಳಿಸಿದ್ದು, ಈ ವೇಳೆ ಸುಮಾರು 3 ಕೋಟಿ ರೂ.ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಸಹ ಬೇರೆಡೆ ಎತ್ತಿ ಇಟ್ಟಿದ್ದಾರೆ. ಬಳಿಕ ಕಸ ಸಂಗ್ರಹಿಸುವ ವಾಹನಕ್ಕೆ ನೀಡಿದ್ದಾರೆ. ಬಳಿಕ ರೇಖಾ ಅವರಿಗೆ ಅರಿವಾಗಿದ್ದು, ಕಸದ ಜೊತೆಗೆ ಬೆಲೆ ಬಾಳುವ ಒಡವೆ ತುಂಬಿದ್ದ ಚೀಲವನ್ನೂ ಹಾಕಿರುವುದು ನೆನಪಾಗಿದೆ.

    ಚಿನ್ನವನ್ನು ಹಾಕಿರುವುದು ಅರಿವಿಗೆ ಬರುತ್ತಿದ್ದಂತೆ ಕುಟುಂಬದವರು ಪಿಸಿಎಂಸಿ(ಪಿಂಪ್ರಿ-ಚಿಂಚವಾಡ ಮುನ್ಸಿಪಲ್ ಕಾರ್ಪೋರೇಶನ್) ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಬ್ಯಾಗ್ ಹಾಕಲು ವಾಹನ ಕಸದ ಡಂಪಿಂಗ್ ಯಾರ್ಡ್‍ಗೆ ತೆರಳಿದ್ದು, ನೀವೂ ಅಲ್ಲಿಗೆ ಹೋಗಿ ಎಂದು ಸೂಚಿಸಿದ್ದಾರೆ. ಬಳಿಕ ಕುಟುಂಬಸ್ಥರು ಅಲ್ಲಿಗೆ ತೆರಳಿದ್ದಾರೆ. ಅಲ್ಲದೆ ಪಿಸಿಎಂಸಿ ಉದ್ಯೋಗಿ ಒಂದು ಗಂಟೆಗೂ ಹೆಚ್ಚು ಕಾಲ ಹುಡುಕಾಟ ನಡೆಸಿದ್ದು, ಅಂತಿಮವಾಗಿ ಬೆಲೆಬಾಳುವ ಒಡವೆಗಳು ತುಂಬಿದ್ದ ಬ್ಯಾಗ್‍ನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ ಬ್ಯಾಗ್‍ನ್ನು ಸುರಕ್ಷಿತವಾಗಿ ಮಾಲೀಕರಿಗೆ ತಲುಪಿಸಿದ್ದಾರೆ.

  • ಕಸ ಎಸೆಯುವವರಿಗೆ ಬೈಗುಳದ ಶಿಕ್ಷೆ- ಆತ್ರಾಡಿ ಗ್ರಾಮಸ್ಥರಿಂದ ಅವಾಚ್ಯ ಬೈಗುಳ

    ಕಸ ಎಸೆಯುವವರಿಗೆ ಬೈಗುಳದ ಶಿಕ್ಷೆ- ಆತ್ರಾಡಿ ಗ್ರಾಮಸ್ಥರಿಂದ ಅವಾಚ್ಯ ಬೈಗುಳ

    ಉಡುಪಿ: ರಸ್ತೆ ಬದಿ ಕಸ ಹಾಕುವವರ ವಿರುದ್ಧ ಉಡುಪಿಯ ಆತ್ರಾಡಿ ಗ್ರಾಮಸ್ಥರು ಫುಲ್ ರಾಂಗ್ ಆಗಿದ್ದಾರೆ. ಕಸ ಹಾಕಬೇಡಿ ಅಂತ ಐದಾರು ವರ್ಷದಿಂದ ಬೋರ್ಡ್ ಹಾಕಿ ಮನವಿ ಮಾಡಿದರೂ ಜನ ಅದನ್ನು ಪಾಲಿಸುತ್ತಿರಲಿಲ್ಲ. ಇದೀಗ ಬೈಗುಳದ ಬ್ಯಾನರ್ ಹಾಕಿ ಕಸ ಹಾಕೋದನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ.

    ಹಿರಿಯಡ್ಕ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬೈಗುಳದ ಬರಹದ ಫ್ಲೆಕ್ಸ್ ಅಳವಡಿಸುವ ಮೂಲಕ ರಸ್ತೆ ಬದಿ ಕಸ ಹಾಕುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಭಾಗದಲ್ಲಿ ಕಸ ಹಾಕುವವರು ಅನೈತಿಕ ಸಂಬಂದಕ್ಕೆ ಹುಟ್ಟಿದವರು ಎಂಬ ಬೈಗುಳದ ಬ್ಯಾನರ್ ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದಯವಿಟ್ಟು ಇಲ್ಲಿ ಕಸ ಹಾಕಬೇಡಿ ಎಂಬ ಕೋರಿಕೆಯ ಬ್ಯಾನರ್ ಅಳವಡಿಸಲಾಗಿತ್ತು. ಜನ ಅದನ್ನು ಕ್ಯಾರ್ ಮಾಡದಿದ್ದಾಗ ಈ ದಾರಿಯನ್ನು ಸ್ಥಳೀಯರು ಹಿಡಿದಿದ್ದಾರೆ.

    ಹೆದ್ದಾರಿಯ ಬದಿಯಲ್ಲಿ ದಿನನಿತ್ಯ ಕಸವನ್ನು ಎಸೆದು ಹೋಗುತ್ತಿದ್ದರು. ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ಇದೀಗ ಬೈಗುಳದ ಬ್ಯಾನರ್ ಅಳವಡಿಸಿದ್ದಾರೆ. ಬೈಗುಳದ ಉಸಾಬರಿಯೇ ಬೇಡವೆಂದು ಮುಂದಿನ ದಿನಗಳಲ್ಲಿ ಕಸ ಹಾಕುವುದನ್ನು ನಿಲ್ಲಿಸಬಹುದು. ಅಥವಾ ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬಂತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಬಹುದು.

    ಈ ಬಗ್ಗೆ ಸ್ಥಳೀಯ ನಿವಾಸಿ ದಿವಾಕರ್ ಮಾತನಾಡಿ ವಾಹನದಲ್ಲಿ ಓಡಾಡುವವರು ತಮ್ಮ ಮನೆಯ ಕಸವನ್ನು ತಂದು ರಸ್ತೆಬದಿಯಲ್ಲಿ ಎಸೆದು ಹೋಗುತ್ತಾರೆ. ಇಡೀ ಊರನ್ನು ಗಲೀಜು ಮಾಡುವ ದುಷ್ಟರಿಗೆ ಮರ್ಯಾದೆ ಇದ್ದರೆ ಇನ್ನು ಕಸ ಹಾಕಲಿಕ್ಕಿಲ್ಲ. ಇದೇ ತರ ಬೇರೆಬೇರೆ ಸ್ಥಳ ಇದೆ. ಗ್ರಾಮ ಪಂಚಾಯತ್, ನಗರಸಭೆ ಕಸ ನಿರ್ವಹಣೆಗೆ ಹಲವಾರು ಯೋಜನೆಗಳನ್ನು ಮಾಡಿದರೂ ಜನರು ಸಹಕಾರ ನೀಡದಿದ್ದರೆ ಯೋಜನೆ ಸಾಕಾರಗೊಳ್ಳಲು ಸಾಧ್ಯ ಇಲ್ಲ ಎಂದರು.

     

  • ಕೇರಳ ತ್ಯಾಜ್ಯಕ್ಕೆ ಕಸದ ತೊಟ್ಟಿಯಾದ ಗುಂಡ್ಲುಪೇಟೆ- ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

    ಕೇರಳ ತ್ಯಾಜ್ಯಕ್ಕೆ ಕಸದ ತೊಟ್ಟಿಯಾದ ಗುಂಡ್ಲುಪೇಟೆ- ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ನಗರದ ಒಂದು ಭಾಗ ಅಕ್ಷರಶಃ ಕಸದ ತೊಟ್ಟಿಯಂತಾಗಿದೆ. ಕೇರಳಿಗರು ಇಲ್ಲಿ ತಂದು ಸುರಿಯುತ್ತಿರುವ ತ್ಯಾಜ್ಯಕ್ಕೆ ಗುಂಡ್ಲುಪೇಟೆಯ ಜನತೆ ತತ್ತರಿಸಿ ಹೋಗಿದ್ದಾರೆ. ಆದರೆ ಈ ವಿಚಾರದಲ್ಲಿ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    ಗುಂಡ್ಲುಪೇಟೆ ಪುರಸಭೆ ಕಸ ಸುರಿಯಲು ಜಾಗವೊಂದನ್ನು ಗುರುತು ಮಾಡಿದೆ. ಕೇರಳಿಗರು ಕರ್ನಾಟಕ ಗಡಿ ದಾಟಿ ಟೆಂಪೋ, ಲಾರಿಗಳಲ್ಲಿ ತ್ಯಾಜ್ಯ ತಂದು ಈ ಜಾಗದಲ್ಲೇ ಸುರಿಯುತ್ತಿದ್ದಾರೆ. ಪ್ಲಾಸ್ಟಿಕ್, ಮಾಂಸದಂಗಡಿಗಳ ತ್ಯಾಜ್ಯ, ಕೊಳೆತ ತರಕಾರಿ ಮತ್ತಿತರ ವಸ್ತುಗಳನ್ನು ತಂದು ಇಲ್ಲಿ ಹಾಕಲಾಗುತ್ತಿದೆ. ಗುಂಡ್ಲುಪೇಟೆ ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 766 ರ ಪಕ್ಕದಲ್ಲೇ ಪುರಸಭೆಯ ಕಸ ಸುರಿಯುವ ಜಾಗ ಇದೆ. ಹೀಗಾಗಿ ಹೆದ್ದಾರಿಯಲ್ಲಿ ಬಂದು ಇಲ್ಲಿ ಕಸ ಸುರಿಯಲಾಗುತ್ತಿದೆ.

    ಕೇರಳ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಇದೆ. ಯಾವ ವಾಹನ ರಾಜ್ಯಕ್ಕೆ ಪ್ರವೇಶ ಪಡೆಯುತ್ತಿದೆ ಎಂಬಿತ್ಯಾದಿ ವಿಚಾರಗಳನ್ನು ಚೆಕ್‍ಪೋಸ್ಟ್ ನಲ್ಲಿ ಗಮನಿಸಬೇಕು. ಆದರೆ ಜಿಲ್ಲಾಡಳಿತ ಮಾತ್ರ ಈ ವಿಚಾರದಲ್ಲಿ ಕಣ್ಮುಚ್ಚಿ ಕುಳಿತಿದೆ.

    ಇನ್ನೊಂದೆಡೆ ಪುರಸಭೆಯವರು ನಿತ್ಯ ಲಾರಿಗಟ್ಟಳೆ ಕಸ ತಂದು ರಾಶಿ ಹಾಕುತ್ತಿದ್ದಾರೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದನ್ನು ಬಿಟ್ಟು ಕಸದ ರಾಶಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಉಸಿರಾಟದ ಸಮಸ್ಯೆಯ ಜೊತೆಗೆ ಪರಿಸರ ಮಾಲಿನ್ಯ, ರೋಗರುಜಿನ ಹರಡುವ ಆತಂಕ ಸ್ಥಳೀಯರಿಗೆ ಕಾಡುತ್ತಿದೆ.

  • ಬೆಂಗ್ಳೂರು ನಿವಾಸಿಗಳಿಗೆ ಕಹಿ ಸುದ್ದಿ – ಕಸಕ್ಕೂ ಶುಲ್ಕ ಪಾವತಿಸಿ

    ಬೆಂಗ್ಳೂರು ನಿವಾಸಿಗಳಿಗೆ ಕಹಿ ಸುದ್ದಿ – ಕಸಕ್ಕೂ ಶುಲ್ಕ ಪಾವತಿಸಿ

    ಬೆಂಗಳೂರು: ಬೆಂಗಳೂರಿನ ನಿವಾಸಿಗಳಿಗೆ ಕಹಿ ಸುದ್ದಿ. ಮುಂದಿನ ತಿಂಗಳಿಂದ ನೀವು ಮನೆ ಖರ್ಚುಗಳ ಜೊತೆ ಕಸದ ಬಿಲ್‍ಗೆ ಹಣ ಹೊಂದಿಸಬೇಕಾಗುತ್ತದೆ. ಲಾಕ್‍ಡೌನ್ ಕಷ್ಟಗಳ ನಡುವೆ ಕಸಕ್ಕೆ ಬಿಲ್ ಹಾಕಲು ಬಿಬಿಎಂಪಿ ಮುಂದಾಗಿದೆ.

    2019ರ ಆಗಸ್ಟ್‍ನಲ್ಲಿ ಬಿಬಿಎಂಪಿ ಅನುಮೋದಿಸಿದ್ದ ನಿರ್ಣಯಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದೂ, ಅಧಿಸೂಚನೆ ಹೊರಡಿಸಿದೆ. ಇಲ್ಲಿಯ ತನಕ ತ್ಯಾಜ್ಯ ನಿರ್ವಹಣೆಗೆ ಶೇ.5 ರಷ್ಟು ಉಪಶುಲ್ಕ ಸಂಗ್ರಹ ಮಾಡ್ತಿದ್ದ ಬಿಬಿಎಂಪಿ, ಇನ್ಮುಂದೆ ಪ್ರತಿ ಮನೆಗಳಿಗೆ 200 ರೂಪಾಯಿ ಕರ ವಿಧಿಸಲಿದೆ.

    ಇದರ ಜೊತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಿದೆ. ಇದಲ್ಲದೇ ಹಸಿ ಕಸ ಒಣ ಕಸ ಬೇರ್ಪಡಿಸದೆ ಕೊಟ್ಟರೂ ದಂಡ ಹಾಕಲಿದೆ. ಪ್ಲಾಸ್ಟಿಕ್ ಬಳಕೆ ಮಾಡಿದ್ರೂ 500 ರೂ. ವರೆಗೂ ದಂಡ ಕಟ್ಟಬೇಕಾಗುತ್ತದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಯಾವುದೇ ಕಾರ್ಯಕ್ರಮಗಳನ್ನು ನಡೆಸುವುದಾದರೆ ಅದಕ್ಕೆ ಪ್ರತ್ಯೇಕವಾಗಿ ಕಸ ನಿರ್ವಹಣೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಮುದಾಯ ಭವನ, ಹೋಟೆಲ್, ಖಾಲಿ ನಿವೇಶನಗಳಲ್ಲಿ ನಡೆಯುವ ಕಾರ್ಯಕ್ರಮ, ವಸ್ತು ಪ್ರದರ್ಶನ ಮತ್ತು ಕಲ್ಯಾಣ ಮಂಟಪಗಳಲ್ಲಿ ತಾತ್ಕಾಲಿಕ ಮನರಂಜನಾ ಕಾರ್ಯಕ್ರಮಕ್ಕೆ ವಾರಕ್ಕೆ 1,500 ರೂ., ಒಂದು ವಾರದಿಂದ ಒಂದು ತಿಂಗಳವರೆಗಿನ ಕಾರ್ಯಕ್ರಮಗಳಿಗೆ 3 ಸಾವಿರ ರೂ., ಒಂದು ತಿಂಗಳಿಗಿಂತ ಹೆಚ್ಚು ಅವಧಿಯ ಕಾರ್ಯಕ್ರಮಗಳಿಗೆ 6 ಸಾವಿರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

  • ಬಹಿರಂಗ ಸಭೆಯಲ್ಲಿ ಪ್ರತಾಪ್ ಸಿಂಹ, ರಾಮದಾಸ್ ವಾಕ್ಸಮರ

    ಬಹಿರಂಗ ಸಭೆಯಲ್ಲಿ ಪ್ರತಾಪ್ ಸಿಂಹ, ರಾಮದಾಸ್ ವಾಕ್ಸಮರ

    ಮೈಸೂರು: ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಶಾಸಕ ರಾಮದಾಸ್ ಸಭೆಯಲ್ಲಿ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದಾರೆ.

    ಕಸ ವಿಲೇವಾರಿ ಘಟಕ ಸೂಯೇಜ್ ಫಾರಂ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮುಂದೆ ಜಟಾಪಟಿ ಮಾಡಿಕೊಂಡಿದ್ದಾರೆ. ಘಟಕದ ಅಭಿವೃದ್ಧಿ ವಿಚಾರದಲ್ಲಿ ಪರಸ್ಪರ ವಾಕ್ಸಮರ ನಡೆಸಿದ್ದಾರೆ.

     

    ಸೂಯೇಜ್ ಫಾರಂ ಕಸ ವಿಲೇವಾರಿಗೆ ವರ್ಕ್ ಆರ್ಡರ್ ಆಗಿದೆ ಎಂದು ಪ್ರತಾಪ್ ಸಿಂಹ ವಾದಿಸಿದರು. ಆಗ ಆರ್ಡರ್ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಅಂತ ರಾಮದಾಸ್ ಅಸಮಾಧಾನ ತೋರಿದರು. ಈ ವೇಳೆ ಸಭೆಯಲ್ಲೇ ಮಾತಿನ ಚಕಮಕಿ ನಡೆಯಿತು.

    ಯೋಜನೆಗೆ ರಾಜ್ಯ ಸರ್ಕಾರದ ಹಣ ಬೇಕಿಲ್ಲ ಅಂತಾ ಪ್ರತಾಪ್ ಸಿಂಹ ಹೇಳಿದ್ದಕ್ಕೆ ಯೋಜನೆಯನ್ನು ರಾಜ್ಯ ಸರ್ಕಾರ ಹೊಸದಾಗಿ ಆರಂಭಿಸಿ ಅಂತ ರಾಮದಾಸ್ ಸಚಿವರನ್ನು ಒತ್ತಾಯಿಸಿದರು.

    ರಾಮದಾಸ್ ಮಾತಿಗೆ ಅಪಸ್ವರ ಎತ್ತಿದ ಸಂಸದ, ಮತ್ತೆ ಯೋಜನೆ ಆರಂಭಿಸುವ ಅಗತ್ಯವಿಲ್ಲ ಅಂತ ಹೇಳಿದರು. ಆಗ ರಾಮದಾಸ್ ಕೋಪಗೊಂಡು ಸಭೆಯಲ್ಲಿ ಮಾತಾಡಿದರು. ಮುಖ ತಿರಗಿಸಿಕೊಂಡು ಸಭೆಯಲ್ಲಿ ಇಬ್ಬರು ವಾಕ್ಸಮರ ಮಾಡಿದರು. ಸಚಿವರಾದ ಭೈರತಿ ಬಸವರಾಜ್ ಮತ್ತು ಎಸ್.ಟಿ.ಸೋಮಶೇಖರ್ ಈ ವಾಕ್ಸಮರಕ್ಕೆ ಸಾಕ್ಷಿಯಾದರು.

  • ಬೆಂಗ್ಳೂರಿಗರೇ ಎಚ್ಚರ- ಕಸದೊಂದಿಗೆ ಮಾಸ್ಕ್ ಮಿಕ್ಸ್ ಮಾಡಿ ಕೊಟ್ರೆ ಬೀಳುತ್ತೆ ಭಾರೀ ದಂಡ

    ಬೆಂಗ್ಳೂರಿಗರೇ ಎಚ್ಚರ- ಕಸದೊಂದಿಗೆ ಮಾಸ್ಕ್ ಮಿಕ್ಸ್ ಮಾಡಿ ಕೊಟ್ರೆ ಬೀಳುತ್ತೆ ಭಾರೀ ದಂಡ

    – ಮೊದಲು ಹಾಗೂ 2ನೇ ಬಾರಿ ಸಿಕ್ಕಿಬಿದ್ದರೆ ದಂಡವೆಷ್ಟು..?
    – ಮಾಸ್ಕ್‌ಗಳನ್ನು ಕಡ್ಡಾಯವಾಗಿ ಸುಟ್ಟುಬಿಡಿ

    ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಾಸ್ಕ್ ಬಳಕೆ ಮಾಡಲಾಗುತ್ತಿದ್ದು, ಆದರೆ ಜನ ಇದನ್ನು ಕಸದೊಂದಿಗೆ ಮಿಶ್ರಣ ಮಾಡಿಕೊಡುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಮಾಸ್ಕ್‌ಗಳನ್ನು ಕಸದೊಂದಿಗೆ ಕೊಟ್ಟರೆ ಅಂತವರಿಗೆ ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ. ರಂದೀಪ್ ಎಚ್ಚರಿಕೆ ನೀಡಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಾಸ್ಕ್‌ಗಳನ್ನು ಕಸದೊಂದಿಗೆ ಮಿಶ್ರಣ ಮಾಡಿ ಕೊಟ್ಟರೆ ಅಂತವರ ಮೇಲೆ ಭಾರೀ ದಂಡ ವಿಧಿಸಲಾಗುವುದು. ಹಸಿ ಕಸ, ಒಣ ಕಸ ಪ್ರತ್ಯೇಕಿಸಿ ಕೊಡುವಂತೆ ಮಾಸ್ಕ್‌ಗಳನ್ನು ಕೂಡ ಸ್ಯಾನಿಟರಿ ತ್ಯಾಜ್ಯವೆಂದು ಪರಿಗಣಿಸಿ ಪ್ರತ್ಯೇಕವಾಗಿ ನೀಡಬೇಕು. ತ್ಯಾಜ್ಯದೊಂದಿಗೆ ಮಾಸ್ಕ್‌ಗಳನ್ನು ಮಿಕ್ಸ್ ಮಾಡಿ ಕೊಟ್ಟರೆ ಮೊದಲ ಬಾರಿ 500 ರೂ. ದಂಡದ ಜೊತೆಗೆ ಆ ಮನೆಯ ಕಸವನ್ನು ಪಡೆಯಲ್ಲ. ಎರಡನೇ ಬಾರಿ ಸಿಕ್ಕಿಬಿದ್ದರೆ 1 ರಿಂದ 2 ಸಾವಿರ ರೂ. ದಂಡ ಹಾಗೂ ಆ ಮನೆಯ ಕಸ ಸ್ವೀಕರಿಸಲ್ಲ ಎಂದು ತಿಳಿಸಿದ್ದಾರೆ.

    ಕೊರೊನಾ ಸಂದರ್ಭದಲ್ಲಿ ತ್ಯಾಜ್ಯ ವಿಂಗಡಣೆ ಮಾಡೋದು ಸವಾಲಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಮಾಸ್ಕ್ ಗಳ ವಿಂಗಡನೆ ಪೌರಕಾರ್ಮಿಕರಲ್ಲಿ ಆತಂಕಕ್ಕೆ ಕಾರಣವಾಗಬಾರದು ಎನ್ನುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಮಾಸ್ಕ್ ಗಳನ್ನು ಕಡ್ಡಾಯವಾಗಿ ಸುಡಬೇಕು. ಮಾಸ್ಕ್ ರಿಸೈಕ್ಲಿಂಗ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ನಿರ್ಧಾರ ಅತ್ಯಗತ್ಯ. ಈಗ ನಿತ್ಯ ನಗರದಲ್ಲಿ ಸರಾಸರಿ 3100 ಟನ್ ಕಸ ಉತ್ಪತ್ತಿಯಾಗುತ್ತೆ ಎಂದು ರಂದೀಪ್ ಮಾಹಿತಿ ನೀಡಿದ್ದಾರೆ.

    ಸ್ಯಾನಿಟರಿ ವಸ್ತುಗಳನ್ನು ಪ್ರತ್ಯೇಕಿಸಿ ಕೊಡುವಂತೆ ಸೂಚನೆ ನೀಡಿದರೂ ಕೆಲವರು ಪಾಲಿಸ್ತಿಲ್ಲ. ಬಿಬಿಎಂಪಿಯಿಂದ ಪಿಪಿಇ ಕಿಟ್ ನೀಡಲಾಗಿದೆ. ನಿತ್ಯ ಎರಡು ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಲಾಗ್ತಿದೆ. ಇದರ ಸಂಪೂರ್ಣ ವೆಚ್ಚ ಬಿಬಿಎಂಪಿಯೇ ಭರಿಸುತ್ತಿದೆ ಎಂದರು.

  • ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಉಗುಳಿದ್ರೆ, ಕಸ ಹಾಕಿದ್ರೆ 1,000 ರೂ. ದಂಡ

    ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಉಗುಳಿದ್ರೆ, ಕಸ ಹಾಕಿದ್ರೆ 1,000 ರೂ. ದಂಡ

    ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಮತ್ತು ಕಸ ಎಸೆದರೆ 1,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.

    ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕು ಹರಡುತ್ತಿರುವುದು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಹಾಗೂ ಕಸ ಎಸದರೆ ಅವರಿಗೆ ದಂಡ ಹಾಕುತ್ತೇವೆ ಎಂದು ಬಿಬಿಎಂಪಿ ತಿಳಿಸಿದೆ. ಮೊದಲ ಬಾರಿಗೆ ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ಅಥವಾ ಕಸ ಹಾಕಿದರೆ 1,000 ರೂಪಾಯಿ ದಂಡ ಹಾಕಲಾಗುತ್ತದೆ. ಆದರೆ ಪುನಃ ಎರಡನೇ ಬಾರಿಗೆ ಇದೇ ತಪ್ಪು ಮುಂದುವರೆಸಿದರೆ ದಂಡದ ಮೊತ್ತ ಡಬಲ್ ಆಗಲಿದೆ. ಅಂದರೆ 2,000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ.

    ಈ ಬಗ್ಗೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಶೇಷ ಆಯುಕ್ತರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಅಲ್ಲದೇ ವಾರ್ಡ್ ಸಂಖ್ಯೆ 157ರ ನ್ಯೂ ಟಿಂಬರ್ ಲೇಔಟ್‍ನ ಸಾರ್ವಜನಿಕ ಸ್ಥಳದಲ್ಲಿ ಮಾಂಸ ತ್ಯಾಜ್ಯವನ್ನು ಮದ್ದೂರಮ್ಮ ಚಿಕನ್ ಸೆಂಟರ್ ನವರು ಅತಿಕ್ರವಾಗಿ ಎಸೆದಿದ್ದರು. ಇದನ್ನು ಪತ್ತೆ ಹೆಚ್ಚಿದ ಮಾರ್ಷಲ್ಸ್ ಗಳು ಮಾಂಸದ ಅಂಗಡಿ ಮಾಲೀಕನಿಗೆ ದಂಡ ವಿಧಿಸಿರುವುದನ್ನು ಕೂಡ ಟ್ವಿಟ್ ಮಾಡಿದ್ದಾರೆ.

    ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 315ಕ್ಕೆ ಏರಿದ್ದು, ಇಂದು ಒಂದೇ ದಿನ 36 ಮಂದಿಗೆ ಸೋಂಕಿ ತಗುಲಿರುವುದು ವರದಿಯಾಗಿದೆ. ಬೆಳಗ್ಗೆ ಒಟ್ಟು 34 ಜನರಿಗೆ ಸೋಂಕು ತಗುಲಿರೋದು ದೃಢ ಪಟ್ಟಿತ್ತು. ಆ ಸಂಖ್ಯೆ ಮತ್ತಿಬ್ಬರು ಸೇರಿದ್ದು 36 ಆಗಿದೆ. ಕಲಬುರಗಿಯ 5 ವರ್ಷದ ಬಾಲಕ ಮತ್ತು 32 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಇಬ್ಬರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 5 ವರ್ಷದ ಬಾಲಕನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿರೋದು ಆತಂಕಕ್ಕೆ ಕಾರಣವಾಗಿದೆ. ಇನ್ನು 32 ವರ್ಷ ವ್ಯಕ್ತಿ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣ ಬೆಳೆಸಿದ್ದರು.

  • ಪೌರ ಕಾರ್ಮಿಕರೊಂದಿಗೆ ತುಪ್ಪದ ಬೆಡಗಿ ಚಾಯ್ ಪೇ ಚರ್ಚಾ

    ಪೌರ ಕಾರ್ಮಿಕರೊಂದಿಗೆ ತುಪ್ಪದ ಬೆಡಗಿ ಚಾಯ್ ಪೇ ಚರ್ಚಾ

    ಬೆಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ತಮ್ಮ ವಿಭಿನ್ನ ರೆಸಿಪಿ ಹಾಗೂ ಬ್ಯೂಟಿ ಟಿಪ್ಸ್ ಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸದಾ ಒಂದಿಲ್ಲೊಂದು ರೆಸಿಪಿಯನ್ನು ನೆಟ್ಟಿಗರಿಗೆ ಪರಿಚಯಿಸುತ್ತಾರೆ. ಈ ಮೂಲಕ ಆಹಾರ ಪ್ರಿಯರನ್ನು ಸೆಳೆಯುತ್ತಿರುತ್ತಾರೆ. ಇದೀಗ ವಿಭಿನ್ನ ಪೋಸ್ಟ್ ಮೂಲಕ ಗಮನಸೆಳೆದಿದ್ದಾರೆ.

    ಕೊರೊನಾ ಭೀತಿ ಹಿನ್ನೆಲೆ ಎಲ್ಲ ನಟ, ನಟಿಯರು ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದು, ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ನಟಿ ರಾಗಿಣಿ ಸಹ ಪುಸ್ತಕ ಓದುವುದು, ವಿಭಿನ್ನ ರೆಸಿಪಿ ಮಾಡುವುದು, ಹಲವು ಬ್ಯೂಟಿ ಟಿಪ್ಸ್‍ಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ತಾಯಿ ಮಾಡಿದ ಪೀ ಪಲಾವ್ ಕುರಿತು ಮಾಹಿತಿ ಹಂಚಿಕೊಂಡಿದ್ದರು. ನೀವು ಟ್ರೈ ಮಾಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು.

    ಹೋಮ್ ಕ್ವಾರೆಂಟೈನ್ ಹಿನ್ನೆಲೆ ಕೂದಲು, ಚರ್ಮ, ಸೌಂದರ್ಯ, ಫಿಟ್ನೆಸ್ ಹೀಗೆ ಹಲವು ವಿಚಾರದ ಕುರಿತು ಗಮನಹರಿಸುತ್ತಿದ್ದಾರೆ. ಇದೆಲ್ಲರ ಮಧ್ಯೆ ಇನ್‍ಸ್ಟಾಗ್ರಾಮ್‍ನಲ್ಲಿ ವಿಭಿನ್ನ ಪೋಸ್ಟ್ ಒಂದನ್ನು ಮಾಡಿದ್ದು, ಪೌರ ಕಾರ್ಮಿಕರೊಂದಿಗೆ ಚರ್ಚೆ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪೌರ ಕಾರ್ಮಿಕರ ನಿತ್ಯದ ಬದುಕು ಹಾಗೂ ಅವರ ಆಗುಹೋಗುಗಳ ಕುರಿತು ವಿಚಾರಿಸಿದ್ದಾರೆ.

    ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ವೈದ್ಯರು, ನರ್ಸ್, ಪೌರ ಕಾರ್ಮಿಕರು ಹಾಗೂ ಮಾಧ್ಯಮದವರು ಯಾವುದೇ ಭಯವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಈ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವೇಳೆ ರಾಗಿಣಿಯವರು ಸಹ ಪೌರ ಕಾರ್ಮಿಕರೊಂದಿಗೆ ಚರ್ಚೆ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, ಇಂದು ನಾನು ಒಂದು ಮುಖ್ಯವಾದ ನಿರ್ಧಾರ ಮಾಡಿದೆ. ಬಿಬಿಎಂಪಿ ಯಲಹಂಕದ ಪೌರ ಕಾರ್ಮಿಕರೊಂದಿಗೆ ಚಾಯ್ ಪೇ ಚರ್ಚಾ ಮಾಡಿದೆ. ಕಸ ಸ್ವಚ್ಛಗೊಳಿಸಲು ಹಾಗೂ ಗಾರ್ಬೇಜ್ ಕೊಂಡೊಯ್ಯಲು ಎರಡು ದಿನಕ್ಕೊಮ್ಮೆ ಇವರು ಬರುತ್ತಾರೆ. ಈ ಹಿಂದೆ ಸಹ ಇವರನ್ನು ನೋಡುತ್ತಿದ್ದೆ, ಆದರೆ ಇವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಇಂತಹ ಅದ್ಭುತ ವ್ಯಕ್ತಿಗಳು ಯಾವುದೇ ಸ್ವಾರ್ಥವಿಲ್ಲದೆ ನಮಗಾಗಿ ಕೆಲಸ ಮಾಡುತ್ತಿದ್ದಾರೆ. ಮುಗ್ದ ನಗುವಿನ ಇವರ ಮುಖ ಹಾಗೂ ನಡವಳಿಕೆ ಇಷ್ಟವಾಯಿತು. ಜೀವನದ ಬಗ್ಗೆ ಇವರಿಂದ ನೀವು ತುಂಬಾ ಕಲಿಯುತ್ತೀರಿ. ಈ ಕ್ಷಣ ಮನಮುಟ್ಟಿತು ಎಂದು ಪೋಸ್ಟ್ ಮಾಡಿದ್ದಾರೆ.

    ಇವರು ಎರಡು ದಿನಕ್ಕೊಮ್ಮೆ ಬರುತ್ತಾರೆ. ನಾನೂ ಸಹ ನಾಲ್ಕೈದು ಬಾರಿ ನೋಡಿದ್ದೇನೆ. ಸ್ವಾರ್ಥವಿಲ್ಲದ ಕೆಲಸ ಹೀಗಿರುತ್ತದೆ. ಇದನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ. ಹೀಗಾಗಿ ಇವರಿಗೊಂದು ಥ್ಯಾಂಕ್ಸ್ ಹೇಳಲು ಬಂದೆ. ಬಿಬಿಎಂಪಿಯವರು ತುಂಬಾ ಕಷ್ಟಪಡುತ್ತಿದ್ದಾರೆ. ಹೀಗಾಗಿ ಬೆಂಗಳೂರನ್ನು ಇಷ್ಟು ಸ್ವಚ್ಛವಾಗಿಡಲು ಸಾಧ್ಯವಾಗಿದೆ. ಮುಂದಿನ ಸಾರಿ ಬಂದಾಗ ನಮ್ಮ ಮನೆಗೆ ಬನ್ನಿ ಕುಳಿತು ಊಟ ಮಾಡೋಣ, ಥ್ಯಾಂಕ್ಯೂ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.