Tag: ಕವಚ

  • ಒಂದೇ ಹಳಿಯಲ್ಲಿ ಎರಡು ರೈಲು – ಅಪಾಯದಿಂದ ಪಾರಾಗುವ ಹೊಸ ತಂತ್ರಜ್ಞಾನ ಪರೀಕ್ಷೆ ಯಶಸ್ವಿ

    ಲಕ್ನೋ: ಭಾರತೀಯ ರೈಲ್ವೇ ಅಭಿವೃದ್ಧಿ ಪಡಿಸಿದ ಸ್ವಯಂ ಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆ(ಎಟಿಪಿ)ಯ ಹೊಸ ‘ಕವಚ’ ತಂತ್ರಜ್ಞಾನವನ್ನು ಶುಕ್ರವಾರ ಪರೀಕ್ಷಿಸಲಾಯಿತು. ಪರೀಕ್ಷೆಯನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಶ್ಣವ್ ಕೂಲಂಕುಶವಾಗಿ ವೀಕ್ಷಿಸಿ ತಂತ್ರಜ್ಞಾನವನ್ನು ಶ್ಲಾಘಿಸಿದ್ದಾರೆ.

    ಒಂದೇ ಹಳಿಯಲ್ಲಿ ಪರಸ್ಪರ ಮುಖಾಮುಖಿಯಾಗಿ ಚಲಿಸುತ್ತಿರುವ ರೈಲುಗಳನ್ನು ಹೇಗೆ ಸ್ವಯಂ ಚಾಲಿತವಾಗಿ ನಿಯಂತ್ರಣಕ್ಕೆ ತರಬಹುದು ಎಂಬುದನ್ನು ಅಶ್ವಿನಿ ವೈಶ್ಣವ್ ವೀಕ್ಷಿಸಿದ್ದು, ಅದರ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಇನ್ನಿಲ್ಲ

    ಶೂನ್ಯ ಅಪಘಾತಗಳ ಗುರಿಯೊಂದಿಗೆ ನಿರ್ಮಿಸಲಾದ ಕವಚ ತಂತ್ರಜ್ಞಾನವನ್ನು ಶುಕ್ರವಾರ ಸಿಕಂದರಾಬಾದ್‍ನಲ್ಲಿ ನೇರ ಪರೀಕ್ಷೆಗೆ ಒಳಪಡಿಸಲಾಯಿತು. ಅಶ್ವಿನಿ ವೈಷ್ಣವ್ ಅವರಿಗೆ ರೈಲಿನ ಚಾಲಕ ಹಾಗೂ ಸಿಬ್ಬಂದಿ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದರು.

    ಕೇಂದ್ರ ರೈಲ್ವೇ ಸಚಿವ ಇದ್ದ ರೈಲಿನ ಹಳಿಯ ವಿರುದ್ಧ ದಿಕ್ಕಿನಲ್ಲಿ ಇನ್ನೊಂದು ರೈಲು ಬರುತ್ತಿದ್ದು, ಈ ಸಂದರ್ಭದಲ್ಲಿ ರೈಲಿನ ಚಾಲಕ ರೈಲನ್ನು ನಿಲ್ಲಿಸಲು ಪ್ರಯತ್ನ ಪಟ್ಟಿಲ್ಲವೆಂದಾದರೂ ರೈಲು ತಾನಾಗೇ ನಿಲ್ಲುವುದನ್ನು ವೀಡಿಯೋದಲ್ಲಿ ಕಾಣಬಹುದು. ಇದನ್ನೂ ಓದಿ: ರಾಯರ ಪಟ್ಟಾಭಿಷೇಕ: ಮಂತ್ರಾಲಯಕ್ಕೆ ಭೇಟಿ ಕೊಟ್ಟ ಸುದೀಪ್

    ಅಶ್ವಿನಿ ವೈಶ್ಣವ್ ಟ್ವಿಟ್ಟರ್‍ನಲ್ಲಿ ಎಸ್‍ಪಿಎಡಿ ಪರೀಕ್ಷೆ, ರೈಲು ಕೆಂಪು ಸಿಗ್ನಲ್ ದಾಟಲು ಪ್ರಯತ್ನಿಸಿದೆ. ಆದರೆ ಕವಚ ರೈಲನ್ನು ತಡೆಯುತ್ತದೆ ಎಂದು ಬರೆದಿದ್ದಾರೆ.

  • ದಾಖಲೆ ಮೊತ್ತಕ್ಕೆ ಮಾರಾಟವಾಯ್ತು ಶಿವಣ್ಣನ ‘ಕವಚ’ದ ಹಕ್ಕು!

    ದಾಖಲೆ ಮೊತ್ತಕ್ಕೆ ಮಾರಾಟವಾಯ್ತು ಶಿವಣ್ಣನ ‘ಕವಚ’ದ ಹಕ್ಕು!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಕವಚ ಜನವರಿಯಲ್ಲಿ ತೆರೆ ಕಾಣಲಿದೆ. ಶಿವಣ್ಣ ಅಂಧನಾಗಿ ನಟಿಸಿರೋ ಈ ಚಿತ್ರ ಮತ್ತು ಆಡಿಯೋ ಹಕ್ಕುಗಳೀಗ ದಾಖಲೆ ಮೊತ್ತಕ್ಕೆ ಮಾರಾಟವಾಗಿವೆ.

    ಈಗಾಗಲೇ ಸ್ಯಾಂಡಲ್‍ವುಡ್ ತುಂಬಾ ಸೆನ್ಸೇಷನ್ ಸೃಷ್ಟಿಸಿರೋ ಕವಚ ಚಿತ್ರದ ಹಕ್ಕುಗಳನ್ನು ಖಾಸಗಿ ವಾಹಿನಿಯೊಂದು ಬರೋಬ್ಬರಿ ಮೂರೂವರೆ ಕೋಟಿಗೆ ಖರೀದಿಸಿದೆ. ಇದರ ಆಡಿಯೋ ಹಕ್ಕುಗಳು 42 ಲಕ್ಷಕ್ಕೆ ಮಾರಾಟವಾಗಿದೆ. ಕನ್ನಡ ಚಿತ್ರಗಳ ಮಟ್ಟಿಗೆ ಇದು ನಿಜಕ್ಕೂ ದಾಖಲೆಯ ಮೊತ್ತ. ಈ ಮೂಲಕ ಕವಚ ಬಿಡುಗಡೆಗೂ ಮುನ್ನವೇ ಆರ್ಥಿಕವಾಗಿ ಗೆದ್ದಿದೆ.

    ಜಿಆರ್ ವಾಸು ನಿರ್ದೇಶನದ ಕವಚ ಮಲೆಯಾಳದ ಸೂಪರ್ ಹಿಟ್ ಚಿತ್ರ ‘ಒಪ್ಪಂ’ ರೀಮೇಕ್. ಆದರೆ ವಾಸು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕಥೆಯನ್ನು ಒಗ್ಗಿಸಿಕೊಂಡು ನಿರ್ದೇಶನ ಮಾಡಿದ್ದಾರಂತೆ. ಇದುವರೆಗೂ ನಾನಾ ಥರದ ಪಾತ್ರಗಳನ್ನು ನಿರ್ವಹಿಸಿರುವ ಶಿವಣ್ಣನ ಪಾಲಿಗೂ ಇದು ವಿಶಿಷ್ಟವಾದ ಚಿತ್ರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿವಣ್ಣ ತೊಟ್ಟುಕೊಂಡ ಡಿಫರೆಂಟ್ ‘ಕವಚ’!

    ಶಿವಣ್ಣ ತೊಟ್ಟುಕೊಂಡ ಡಿಫರೆಂಟ್ ‘ಕವಚ’!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಯಾವ ಚಿತ್ರದಲ್ಲಿ ಯಾವ ಪಾತ್ರಗಳನ್ನೇ ಮಾಡಿದರೂ ಅದರಲ್ಲೊಂದು ವಿಶೇಷತೆ ಇದ್ದೇ ಇರುತ್ತೆ. ಅವರ ಇದುವರೆಗಿನ ಸಿನಿಮಾ ಗ್ರಾಫ್ ಗಮನಿಸಿದರೆ ಅಲ್ಲಿ ಇಂಥಾ ವಿಶೇಷತೆಗಳ ಕುರುಹುಗಳೇ ಢಾಳಾಗಿ ಕಾಣ ಸಿಗುತ್ತವೆ. ಇದೇ ಡಿಸೆಂಬರ್ ಏಳನೇ ತಾರೀಕಿನಂದು ಬಿಡುಗಡೆಯಾಗಲು ರೆಡಿಯಾಗಿ ನಿಂತಿರೋ ಕವಚ ಚಿತ್ರವೂ ಆ ಸಾಲಿನಲ್ಲಿ ಸ್ಥಾನ ಪಡೆದುಕೊಳ್ಳೋ ಲಕ್ಷಣಗಳಿವೆ!

     

    ಎಂ. ವಿ ಸತ್ಯನಾರಾಯಣ ಮತ್ತು ಎ.ಸಂಪತ್ ಜಂಟಿಯಾಗಿ ನಿರ್ಮಾಣ ಮಾಡಿರೋ ಕವಚವನ್ನು ಜಿವಿಆರ್ ವಾಸು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿನ ಪಾತ್ರವೂ ಕೂಡಾ ಶಿವಣ್ಣನ ಬಣ್ಣದ ಬದುಕಿಗೆ ಬೇರೆಯದ್ದೇ ರಂಗು ತುಂಬಲಿದೆಯಂತೆ. ಯಾಕೆಂದರೆ ಇಲ್ಲಿ ಅವರು ಚಾಲೆಂಜಿಂಗ್ ಆದ ಅಂಧನ ಪಾತ್ರವನ್ನು ನಿರ್ವಹಿಸಿದ್ದಾರಂತೆ.

    ಕ್ರೈಂ ಬೇಸಿನ ಮನಮಿಡಿಯುವ ಕಥಾ ಹಂದರವನ್ನು ಹೊಂದಿರೋ ಕವಚ, ಮಲೆಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ್ದ ಒಪ್ಪಂ ಚಿತ್ರದಿಂದ ಸ್ಫೂರ್ತಿ ಪಡೆದುಕೊಂಡ ಕಥಾ ಹಂದರವನ್ನು ಹೊಂದಿದೆ. ಕವಚದಲ್ಲಿ ಶಿವಣ್ಣನಿಗೆ ಇಶಾ ಕೊಪ್ಪೀಕರ್ ಜೋಡಿಯಾಗಿ ನಟಿಸಿದ್ದಾರೆ. ಬೇಬಿ ಮೀನಾಕ್ಷಿ ಮುಖ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಬಲಾ ನಾಣಿ, ರವಿ ಕಾಳೆ, ವಸಿಷ್ಠ ಸಿಂಹ ಮುಂತಾದವರ ತಾರಾಗಣವಿರೋ ಕವಚ ಇದೇ ಡಿಸೆಂಬರ್ ಏಳನೇ ತಾರೀಕಿನಂದು ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಂಪ್ಲೀಟ್ ಆಯ್ತು ಶಿವಣ್ಣನ ಕವಚ!

    ಕಂಪ್ಲೀಟ್ ಆಯ್ತು ಶಿವಣ್ಣನ ಕವಚ!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೀಗ ಫುಲ್ ಬ್ಯುಸಿ ಆ್ಯಕ್ಟರ್. ರುಸ್ತುಂ, ದ್ರೋಣ ಸೇರಿದಂತೆ ಶಿವಣ್ಣನ ಬಹು ನಿರೀಕ್ಷಿತ ಚಿತ್ರಗಳ ಸಾಲಿನಲ್ಲಿರುವ ಕವಚ ಚಿತ್ರದ ಚಿತ್ರೀಕರಣವೀಗ ಕಂಪ್ಲೀಟಾಗಿದೆ.

    ಕವಚ ಮಲೆಯಾಳಂನ ಸೂಪರ್ ಹಿಟ್ ಚಿತ್ರ ಒಪ್ಪಂನ ರೀಮೇಕ್. ಒಂದು ಅದ್ಭುತವಾದ ಸಾಮಾಜಿಕ ಕಥಾ ಹಂದರ ಇರುವ ಈ ಚಿತ್ರದ ಒಟ್ಟಾರೆ ಕಥೆ ಮತ್ತು ಪಾತ್ರದ ಮೇಲಿನ ಪ್ರೀತಿಯಿಂದಲೇ ಶಿವರಾಜ್ ಕುಮಾರ್ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಇಶಾ ಕೊಪ್ಪೀಕರ್ ಶಿವಣ್ಣನಿಗೆ ಜೋಡಿಯಾಗಿ ನಟಿಸಿದ್ದಾರೆ.

    ಸ್ವಮೇಕ್ ಚಿತ್ರಗಳತ್ತಲೇ ಹೆಚ್ಚಾಗಿ ಗಮನ ಕೇಂದ್ರೀಕರಿಸುವ ಶಿವರಾಜ್ ಕುಮಾರ್ ಅವರು ಪ್ರಭಾವ ಬೀರುವ ಕಥೆ ಇದ್ದಾಗ ರೀಮೇಕಿಗೂ ಸೈ ಅನ್ನುವುದುಂಟು. ಅದೇ ಮನಸ್ಥಿತಿಯಿಂದಲೇ ಅವರು ನಟಿಸುತ್ತಿರೋ ಚಿತ್ರ ಕವಚ.

    ಅರ್ಜುನ್ ಜನ್ಯ ಸಂಗೀತ ನೀಡಿರೋ ಈ ಚಿತ್ರದಲ್ಲಿ ಈ ಹಿಂದೆ ಟಗರು ಚಿತ್ರದಲ್ಲಿ ಶಿವಣ್ಣನಿಗೆ ಜೊತೆಯಾಗಿದ್ದ ವಸಿಷ್ಟ ಸಿಂಹ ಕೂಡಾ ಬಹು ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಸುಧಾ ಬೆಳವಾಡಿ ಮೊದಲಾದವರ ತಾರಾಗಣ ಹೊಂದಿರೋ ಈ ಚಿತ್ರದ ಪಾತ್ರ ತಮ್ಮನ್ನು ಪ್ರಭಾವಿಸಿದೆ ಅಂತ ಶಿವರಾಜ್ ಕುಮಾರ್ ಅವರೇ ಹೇಳಿಕೊಳ್ಳುವ ಮೂಲ ಕವಚದ ಬಗೆಗಿನ ಅಭಿಮಾನಿಗಳ ನಿರೀಕ್ಷೆ ಗರಿಗೆದರಿಕೊಂಡಿದೆ.

    ತಾವು ನಟಿಸೋ ಚಿತ್ರಗಳಲ್ಲಿ ಮನೋರಂಜನೆಯ ಜೊತೆಗೇ ಸಮಾಜಕ್ಕೆ ಒಳಿತಾಗುವಂಥದ್ದೇನೋ ಹೇಳಬೇಕೆಂಬ ತುಡಿತ ಹೊಂದಿರೋ ಶಿವರಾಜ್ ಕುಮಾರರ್ ಅವರಿಗೆ ಅಂಥಾದ್ದೇ ಚಿತ್ರಗಳು ಸಾಲು ಸಾಲಾಗಿ ಸಿಗುತ್ತಿವೆ. ಭಿನ್ನವಾದ ಕಥಾ ಹಂದರ ಹೊಂದಿರೋ ಕವಚ ಕೂಡಾ ಶಿವರಾಜ್ ಕುಮಾರ್ ಅವರ ವೃತ್ತಿ ಬದುಕಿನಲ್ಲಿ ಮಹತ್ವದ ಚಿತ್ರವಾಗಿ ದಾಖಲಾಗೋ ಲಕ್ಷಣಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ https://www.instagram.com/publictvnews/