Tag: ಕಳಪೆ

  • ಎರಡನೇ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಳಪೆ ಬೋರ್ಡ್ ಹಾಕಿಸಿಕೊಂಡ ರಾಕೇಶ್

    ಎರಡನೇ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಳಪೆ ಬೋರ್ಡ್ ಹಾಕಿಸಿಕೊಂಡ ರಾಕೇಶ್

    ಬಿಗ್ ಬಾಸ್ (Bigg Boss) ಮನೆಯ ಆಟ ಸಾಕಷ್ಟು ರೋಚಕ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಈ ಸೀಸನ್ 95 ದಿನಗಳನ್ನು ಪೂರೈಸಿ, ಗ್ರ್ಯಾಂಡ್ ಫಿನಾಲೆಯತ್ತ ಲಗ್ಗೆ ಇಡುತ್ತಿದೆ. ಇದೀಗ ರಾಕೇಶ್ ಅಡಿಗ (Rakesh Adiga) ಎರಡನೇ ಬಾರಿ ಕಳಪೆ ಹಣೆಪಟ್ಟಿ ಪಡೆದು ಜೈಲಿಗೆ ಹೋಗಿದ್ದಾರೆ. ಮನೆಯ ಸದಸ್ಯರು ಈ ವಾರ ಅವರಿಗೆ ಕಳಪೆ ಹಣೆಪಟ್ಟಿ ಕಟ್ಟಿದ್ದಾರೆ.

    ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ 13ನೇ ವಾರ ಸರಣಿ ಟಾಸ್ಕ್‌ಗಳನ್ನು ‘ಬಿಗ್ ಬಾಸ್’ ನೀಡಿದ್ದರು. ಟಾಸ್ಕ್‌ಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿತ್ತು. ಟಾಸ್ಕ್‌ಗಳನ್ನು ಎಷ್ಟು ಬೇಗ ಮುಗಿಸುತ್ತಾರೆ ಎಂಬ ಆಧಾರದ ಮೇಲೆ ಸ್ಪರ್ಧಿಗಳಿಗೆ ಪಾಯಿಂಟ್‌ಗಳನ್ನು ನೀಡಲಾಗಿತ್ತು. ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್ಯವರ್ಧನ್ ಗುರೂಜಿ (Aryardhan Guruji) ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಪಡೆದಿದ್ದಾರೆ. ಇನ್ನೂ, ಒಂದು ಆಟವನ್ನ ಸಂಪೂರ್ಣವಾಗಿ ಮುಗಿಸದೆ ಗಿವಪ್ ಮಾಡಿದ ರಾಕೇಶ್ ಅಡಿಗ ‘ಕಳಪೆ’ ಪಟ್ಟ ಪಡೆದು ಜೈಲಿಗೆ ತೆರಳಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

    ಟಾಸ್ಕ್ ವೊಂದರಲ್ಲಿ ರಾಕಿ ಗಿವಪ್ ಮಾಡಿದ್ದರು. ಇದನ್ನ ಆಧರಿಸಿ‌ ಮನೆಮಂದಿ ಕಳಪೆ ಹಣೆಪಟ್ಟಿ ನೀಡಿದ್ದರು. ಈ ವಾರ ಟಾಸ್ಕ್‌ಗಳನ್ನು ಚೆನ್ನಾಗಿ ಆಡಿದ ಗುರೂಜಿ ಪರವಾಗಿ ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ, ಅಮೂಲ್ಯ ಗೌಡ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಅರುಣ್ ಸಾಗರ್ ವೋಟ್ ಮಾಡಿದರು. ಹೀಗಾಗಿ ಈ ವಾರದ ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಆರ್ಯವರ್ಧನ್ ಗುರೂಜಿ ಪಾಲಾಯಿತು.

    ಇನ್ನೂ ಈ ವಾರ ಡಬಲ್ ಎಲಿಮಿನೇಷನ್ ಆಗಲಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿರುವ ಬೆನ್ನಲ್ಲೇ ಇಬ್ಬರು ಸ್ಪರ್ಧಿಗಳಿಗೆ ಈ ವಾರ ಮನೆ ಆಟ ಕೊನೆಯಾಗಲಿದೆ. ನವೀನರು ಹಾಗೂ ಪ್ರವೀಣರು ಎಂಬ ಟ್ಯಾಗ್ ಲೈನ್ ನೊಂದಿಗೆ ಶುರುವಾದ ಕನ್ನಡದ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಗೂ ಬಿಗ್ ಬಾಸ್ ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಖು ಬಿಗ್ ಬಾಸ್ ಫಿನಾಲೆ ನಡೆಯುವುದು ನಿಕ್ಕಿಯಾಗಿದೆ. ಸದ್ಯ ಮನೆಯಲ್ಲಿ ಎಂಟು ಜನರು ಇರುವುದರಿಂದ ಈ ವಾರ ಅನಿವಾರ್ಯವಾಗಿ ಡಬಲ್ ಎಲಿಮಿನೇಷನ್ ನಡೆಯಬೇಕಾಗುತ್ತದೆ.

    ಮೊದಲ ದಿನ ಬಿಗ್ ಬಾಸ್ ಮನೆಗೆ ಬಂದವರು 9 ನವೀನರು 9 ಹಳೆಯ ಸ್ಪರ್ಧಿಗಳು. ಈಗ ಮನೆಯಲ್ಲಿ ಇರುವುದು ಎಂಟು ಜನರು ಮಾತ್ರ. ಉಳಿದಿರುವುದು ಎರಡೇ ವಾರ. ಹಾಗಾಗಿ ಈ ವಾರ ಇಬ್ಬರು ಮನೆಯಿಂದ ಹೊರ ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಫಿನಾಲೆಯ ವೇದಿಕೆಯ ಮೇಲೆ ಐದು ಜನರಿಗೆ ಮಾತ್ರ ಅವಕಾಶ ಇರುವುದರಿಂದ ಈ ವಾರ ಇಬ್ಬರು ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವುದ ಕುತೂಹಲ.

    ಸದ್ಯ ಮನೆಯಲ್ಲಿ ರೂಪೇಶ್ ರಾಜಣ್ಣ, ಅಮೂಲ್ಯ ಗೌಡ. ದಿವ್ಯಾ ಉರುಡುಗ, ಅರುಣ್ ಸಾಗರ್, ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಉಳಿದುಕೊಂಡಿದ್ದಾರೆ. ಪ್ರತಿಯೊಬ್ಬರೂ ಚೆನ್ನಾಗಿ ಆಟವಾಡುತ್ತಿದ್ದಾರೆ. ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಹಾಗಾಗಿ ಇವರಲ್ಲಿ ಯಾರು ಈ ವಾರ ಆಚೆ ಬರುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ : ರೂಪೇಶ್ ರಾಜಣ್ಣ ಕಳಪೆ, ಕಾವ್ಯಶ್ರೀ ಗೌಡ ಕ್ಯಾಪ್ಟನ್

    ಬಿಗ್ ಬಾಸ್ : ರೂಪೇಶ್ ರಾಜಣ್ಣ ಕಳಪೆ, ಕಾವ್ಯಶ್ರೀ ಗೌಡ ಕ್ಯಾಪ್ಟನ್

    ಬಿಗ್ ಬಾಸ್ (Bigg Boss) ಸೀಸನ್ 9 ಕಾರ್ಯಕ್ರಮ ಇದೀಗ ಏಳನೇ ವಾರದಲ್ಲಿ ಮುನ್ನುಗ್ಗುತ್ತಿದೆ. ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ವಿಚಾರದಲ್ಲಿ ನಾನಾ ರೀತಿಯ ವಾಗ್ವಾದಗಳೇ ನಡೆದಿದ್ದರೂ, ಕೊನೆಗೂ ಕ್ಯಾಪ್ಟನ್ ಆಗಿ ಕಾವ್ಯಶ್ರೀ ಗೌಡ (Kavyashree Gowda) ಆಯ್ಕೆಯಾಗಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಕ್ಯಾಪ್ಟನ್ ಆಗಲು ನಾನಾ ಕಸರತ್ತುಗಳನ್ನು ಮಾಡಿದ್ದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ (Rupesh Rajanna), ಕಳಪೆ ಹಣೆಪಟ್ಟಿ ಪಡೆದಿದ್ದಾರೆ.

    ರೂಪೇಶ್ ರಾಜಣ್ಣಗೆ ಕಳಪೆ ಹಣೆಪಟ್ಟಿ ಕಟ್ಟಲು ಕಾರಣ, ಅವರು ಈ ವಾರ ಮನೆಯಲ್ಲಿ ಆಡಿದ ಮಾತು. ತೀರಾ ಒರಟು ಒರಟಾಗಿ ಎಲ್ಲರೊಂದಿಗೆ ಮಾತನಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಇಂಥದ್ದೊಂದು ಸ್ಥಾನ ಅವರಿಗೆ ಸಿಕ್ಕಿದೆ. ಕಳಪೆ ಸಿಕ್ಕ ಕಾರಣಕ್ಕಾಗಿ ಜೈಲಿಗೂ ಕಳುಹಿಸಲಾಗಿದೆ. ವಿನೋದ್ ಗೊಬ್ಬರಗಾಲ, ಅರುಣ್ ಸಾಗರ್, ಅನುಪಮಾ ಗೌಡ, ಕಾವ್ಯಶ್ರೀ ಗೌಡ, ದಿವ್ಯಾ, ದೀಪಿಕಾ ದಾಸ್, ರಾಕೇಶ್ ಅಡಿಗ ಸೇರಿದಂತೆ ಬಹುತೇಕರು ರೂಪೇಶ್ ರಾಜಣ್ಣನ ಕುರಿತಾದ ಮಾತಿನಲ್ಲೇ ಇದನ್ನೇ ವಿವರಿಸಿದರು. ಇದನ್ನೂ ಓದಿ: ವ್ಯಾಯಾಮ ಮಾಡುತ್ತಿದ್ದಾಗ ಜಿಮ್ ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ

    ದಿವ್ಯಾ ಉರುಡುಗ ಅಂತೂ ರೂಪೇಶ್ ರಾಜಣ್ಣನ ಮೇಲೆ ಆರೋಪಗಳ ಸುರಿಮಳೆಯನ್ನೂ ಸುರಿಸಿದರು. ನನ್ನೊಂದಿಗೆ ರೂಪೇಶ್ ರಾಜಣ್ಣ ಫೇಕ್ ರೀತಿಯಲ್ಲಿ ನಡೆದುಕೊಂಡರು. ಹಾಗಾಗಿ ನಾನು ಕಳಪೆ ಕೊಡುತ್ತಿದ್ದೇನೆ ಎಂದು ನೇರವಾಗಿಯೇ ತಿಳಿಸಿದರು. ಈ ಎಲ್ಲರ ಮಾತಿಗೆ ಪ್ರತಿಕ್ರಿಯೆ ನೀಡಿರುವ ರೂಪೇಶ್ ರಾಜಣ್ಣ, ‘ಈ ಮನೆಯಲ್ಲಿ ಯಾವ ರೀತಿ ಮಾತನಾಡಬೇಕು, ಎಷ್ಟು ಟೋನ್ ನಲ್ಲಿ ಮಾತನಾಡಬೇಕು ಎಂದು ಯಾವ ರೂಲ್ಸೂ ಇಲ್ಲ. ನನ್ನ ಸ್ಟೈಲ್ ನಲ್ಲೇ ನಾನು ಮಾತನಾಡಿದ್ದೇನೆ ಎಂದು ಸಮಜಾಯಿಸಿ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ನಟಿ, ನಿರೂಪಕಿ ಅನುಪಮಾ ಗೌಡಗೆ ಕಳಪೆ ಹಣೆಪಟ್ಟಿ: ಜೈಲು ಸೇರಿದ ಬೆಡಗಿ

    ನಟಿ, ನಿರೂಪಕಿ ಅನುಪಮಾ ಗೌಡಗೆ ಕಳಪೆ ಹಣೆಪಟ್ಟಿ: ಜೈಲು ಸೇರಿದ ಬೆಡಗಿ

    ಕಿರುತೆರೆಯ ಖ್ಯಾತ ಕಲಾವಿದೆ, ನಿರೂಪಕಿ ಅನುಪಮಾ ಗೌಡ (Anupama Gowda) ಕಳಪೆ ಹಣೆಪಟ್ಟಿ ಕಟ್ಟಿಕೊಂಡು ಜೈಲು ಸೇರಿದ್ದಾರೆ. ಮನೆಯ ಬಹುತೇಕ ಸದಸ್ಯರೇ ಇವರ ವಿರುದ್ಧ ತಿರುಗಿ ಬಿದ್ದಿದ್ದರಿಂದ ಕಳಪೆ ಹಣೆಪಟ್ಟಿಯ ಜೊತೆಗೆ ಜೈಲು ಸೇರುವುದು ಅನಿವಾರ್ಯವಾಗಿದೆ. ಹಾಗಂತ ಅವರೇನು ನೊಂದುಕೊಂಡಿಲ್ಲ. ಬಂದಿರುವ ಸ್ಥಿತಿಯನ್ನು ಅನುಭವಿಸಬೇಕಾಗಿದೆ. ಹಾಗಾಗಿ ಈ ವಾರದಲ್ಲಿ ಅವರು ಎಷ್ಟು ದಿನಗಳ ಕಾಲ ಜೈಲಿನಲ್ಲಿ ಇರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    ಅಂದಹಾಗೆ, ಅನುಪಮಾ ಗೌಡ ಈ ವಾರ ಬಿಗ್ ಬಾಸ್ (Big Boss) ಮನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಅನುಪಮಾ ಕ್ಯಾಪ್ಟನ್ (Captain) ಆಗುತ್ತಿದ್ದಂತೆಯೇ ಎಲ್ಲವನ್ನೂ ಅವರು ಸರಿಯಾದ ರೀತಿಯಲ್ಲೇ ನಿಭಾಯಿಸುತ್ತಾರೆ ಅಂದುಕೊಳ್ಳಲಾಗಿತ್ತು. ಆದರೆ, ಅನುಪಮಾ ಮನೆಯಲ್ಲಿದ್ದವರ ಮನಸ್ಸನ್ನು ಕದಿಯುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ, ಇವರ ಕ್ಯಾಪ್ಟೆನ್ಸಿಯಲ್ಲಿ ಸಾಕಷ್ಟು ಗಲಾಟೆಗಳು ಆಗಿದ್ದರಿಂದ, ಟಾಸ್ಕ್ ಅನ್ನು ಸರಿಯಾದ ರೀತಿಯಲ್ಲಿ ನಿಭಾಯಿಸದೇ ಇರುವ ಕಾರಣಕ್ಕಾಗಿ ಅವರು ಕಳಪೆ (Poor) ಹಣೆಪಟ್ಟಿಯನ್ನು ಕಟ್ಟಿಕೊಳ್ಳಬೇಕಾಯಿತು. ಇದನ್ನೂ ಓದಿ:`ಅವತಾರ್ 2′ ಟ್ರೈಲರ್‌ ಟ್ರೆಂಡಿಂಗ್‌ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಕನ್ನಡಿಗರು ಗರಂ

     

    ಈ ವಾರ  ಅನುಪಮಾ ಮತ್ತು ರೂಪೇಶ್ ರಾಜಣ್ಣ (Rupesh Rajanna) ನಡುವೆ ದೊಡ್ಡದೊಂದು ಗಲಾಟೆಯೇ ನಡೆದು ಹೋಯಿತು. ತಾವು ಈ ಮನೆಯಲ್ಲಿ ಇರುವುದಕ್ಕೆ ಸಾಧ್ಯವೇ ಇಲ್ಲವೆಂದು ಬ್ಯಾಗ್ ತಗೆದುಕೊಂಡು ಮನೆಯಿಂದ ಹೊರಹೋಗುವ ಪ್ರಯತ್ನ ಮಾಡಿದರು ರೂಪೇಶ್. ಬಿಗ್ ಬಾಸ್ ಮನೆಯ ಇತರ ಸದಸ್ಯರು ಸಮಾಧಾನ ಮಾಡಿದ್ದರಿಂದ ಮತ್ತೆ ಅವರು ಬಿಗ್ ಬಾಸ್ ಮನೆಯಲ್ಲೇ ಉಳಿದುಕೊಂಡರು. ಅದರಂತೆ, ಅನುಪಮಾ ತಮಗೆ ಬೇಕಾದವರಿಗೆ ಮಾತ್ರ ಸಪೋರ್ಟ್ ಮಾಡುತ್ತಾರೆ ಎಂದು ಹೇಳಲಾಯಿತು. ಅದನ್ನು ಅವರು ನಿರಾಕರಿಸಿದರು.

    ಅನುಪಮಾ ಗೌಡ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗುತ್ತಿದ್ದಂತೆಯೇ ಮನೆಯಲ್ಲಿ ಹೊಸ ವಾತಾವರಣ ಸಿಗಲಿದೆ ಎಂದೇ ಹೇಳಲಾಗಿತ್ತು. ಈಗಾಗಲೇ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದು, ಇದು ಎರಡನೇ ಬಾರಿಯ ಪಯಣವಾಗಿದ್ದರಿಂದ, ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಆಟವಾಡಲಿದ್ದಾರೆ ಎಂದೂ ನಂಬಲಾಗಿತ್ತು. ಆದರೆ, ಕ್ಯಾಪ್ಟನ್ ವಿಷಯದಲ್ಲಿ ಅವರು ಎಡವಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಳ್ಳುವಲ್ಲಿ ಸೋತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಳಪೆ ಎಂದ ರಾಕೇಶ್ ಮೇಲೆ ಸೋನುಗೆ ಕೆಂಡದಷ್ಟು ಕೋಪ

    ಕಳಪೆ ಎಂದ ರಾಕೇಶ್ ಮೇಲೆ ಸೋನುಗೆ ಕೆಂಡದಷ್ಟು ಕೋಪ

    ವಾರದ ಕ್ಯಾಪ್ಟನ್ ಆಗಬೇಕು ಎಂದು ಸ್ಪರ್ಧೆಗೆ ಇಳಿದಿದ್ದ ಸೋನು ಅಕಸ್ಮಾತ್ ಆಗಿ ನಿರೀಕ್ಷೆಯನ್ನೇ ಮಾಡದೆ ಕಳಪೆ ಬೋರ್ಡ್ ಹೊತ್ತು ಜೈಲು ಪಾಲಾಗಿದ್ದಾಳೆ. ಯಾರು ಏನೇ ಹೇಳಲಿ ಯಾವುದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿರಲಿಲ್ಲ. ತಾನು ಆಡುತ್ತಿದ್ದ ಮಾತಿಗೆ ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆಗಲೂ ತನಗೆ ಏನು ಅನ್ನಿಸುತ್ತೆ ಅದನ್ನ ಮಾತನಾಡಿ, ಅಲ್ಲಿಗೆ ಅದನ್ನೆಲ್ಲ ಮರೆತು ಮತ್ತೆ ನೆಕ್ಸ್ಟ್ ಮೂಮೆಂಟೇ ಅವಳದ್ದೆ ಲೋಕದಲ್ಲಿ ಆಕ್ಟೀವ್ ಆಗಿದ್ದಂತಹ ಹುಡುಗಿ ಎಂದರೆ ಸೋನು. ಆದರೆ ಈ ಬಾರಿ ಸೋನು ಉಳಿಯುವುದು ಕಷ್ಟ ಎನ್ನಲಾಗುತ್ತಿದೆ. ಯಾಕೆಂದರೆ ಕಳಪೆ ಬೋರ್ಡ್ ಹೊತ್ತ ಕೂಡಲೇ ತುಂಬಾ ವೀಕ್ ಆದವಳಂತೆ ಭಾಸವಾಗುತ್ತಿದ್ದಾಳೆ.

    ತನಗೆ ಯಾರಾದರೂ ಕೆಲಸ ಮಾಡು ಎಂದಾಗ, ನಾನೇನು ಕೆಲಸ ಮಾಡಲು ಬಂದಿದ್ದೀನಾ ಅಂತ ಪ್ರತಿ ಬಾರಿಯೂ ಪ್ರಶ್ನಿಸುತ್ತಿದ್ದಳು. ಇದಕ್ಕೆ ಮನೆಮಂದಿಯೆಲ್ಲಾ ಸೇರಿ ಬೆಸ್ಟ್ ಅಂಡ್ ವರ್ಸ್ಟ್ ಪರ್ಫಾಮರ್ ಅನ್ನು ಆಯ್ಕೆ ಮಾಡಬೇಕಾದ ಸಂದರ್ಭ ತಕ್ಕ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಒಂದಷ್ಟು ಮಂದಿ ಜಯಶ್ರೀಗೆ ಬೆಸ್ಟ್ ಎಂದು ಹೇಳಿದರು, ಇನ್ನೊಂದಷ್ಟು ಮಂದಿ ಜಯಶ್ರೀಯನ್ನೇ ವರ್ಸ್ಟ್ ಎಂದರು. ಆದರೂ ಜಯಶ್ರೀ ಜೈಲಿನಿಂದ ಬಂದ ಮೇಲಿಂದ ಹೇಗಾದರೂ ಗೆಲ್ಲಲೇಬೇಕು ಎಂಬ ಹಠ ಹೊತ್ತು ಇವತ್ತು ಬೆಸ್ಟ್ ಎಂಬ ಅವಾರ್ಡ್ ತೆಗೆದುಕೊಂಡಿದ್ದಾಳೆ. ಅದರಂತೆ ಸೋನುಳನ್ನು ಹಲವು ಜನ ಕಳಪೆಗೆ ಆಯ್ಕೆ ಮಾಡಿದರು. ಕೊನೆಗೆ ಸೋನು ಜೈಲು ಸೇರಬೇಕಾಗಿ ಬಂತು.

    ಸೋನುಗೆ ಯಾರೇ ಕಳಪೆ ಅಂತ ಹೇಳಿದ್ದರೂ, ಜೈಲಿಗೆ ಹಾಕಿದ್ದರೂ ಇಷ್ಟು ನೋವು ಆಗುತ್ತಿರಲಿಲ್ಲ ಎಂದು ಕಾಣುತ್ತದೆ. ಆದರೆ ರಾಕೇಶ್ ಅವಳ ಹೆಸರನ್ನು ತೆಗೆದುಕೊಂಡಾಗಲೇ ಆಕೆಯ ಮನಸ್ಸು ಭಾರವಾದಂತೆ ಕಾಣುತ್ತಿತ್ತು. ಜೈಲಿಗೆ ಹೋಗುವ ಸಂದರ್ಭ ದಯವಿಟ್ಟು ಎಲ್ಲರೂ ಇಲ್ಲಿಂದ ಹೋಗಿ ಬಿಡಿ ಎಂದು ರಿಕ್ವೆಸ್ಟ್ ಮಾಡಿದ್ದಳು. ಸ್ವಲ್ಪ ಸಮಯದ ಬಳಿಕ ರಾಕೇಶ್ ಬಂದು ಸಮಾಧಾನ ಮಾಡಲು ಯತ್ನಿಸಿದ. ಆಯ್ತು ಬೈಯ್ಯಬೇಕು ಎನಿಸಿದರೆ ನನ್ನನ್ನು ಬೈದು ಬಿಡು ಎಂದ. ಆದರೆ ಸೋನುಗೆ ರಾಕೇಶ್ ಮುಖವನ್ನು ನೋಡುವುದಕ್ಕೆ ಇಷ್ಟವಿರಲಿಲ್ಲ. ಸುಮ್ಮನೆ ಹೋಗಿಬಿಡು. ನಾನು ಕಿರುಚಿಕೊಳ್ಳುವಂತೆ ಮಾಡಬೇಡ ಎಂದಳು. ಇದನ್ನೂ ಓದಿ: ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ರಾಕೇಶ್ ಅಲ್ಲಿಂದ ವಾಪಾಸ್ ಆದವ ಗುರೂಜಿ ಬಳಿ ಕುಳಿತು ಆ ಬಗ್ಗೆ ಬೇಸರ ಹೊರಹಾಕಿದ. ತುಂಬಾ ಒಳ್ಳೆ ಫ್ರೆಂಡು ಅಂದುಕೊಂಡಿದ್ದವನೇ ಕಳಪೆ ಕೊಟ್ಟರೆ ಯಾರಿಗೆ ತಾನೇ ಹರ್ಟ್ ಆಗಲ್ಲ ಹೇಳಿ ಎಂದಿದ್ದ. ಎಲ್ಲವೂ ಒಂದು ತಹಬದಿಗೆ ಬಂದ ಮೇಲೆ ಚೈತ್ರಾ ಸಮಾಧಾನ ಮಾಡಲು ಹೋದಳು. ಅಷ್ಟರಲ್ಲಾಗಲೇ ಸೋನು ಕಣ್ಣಲ್ಲಿ ಕಣ್ಣೀರ ಕೋಡಿ ತುಂಬಿತ್ತು. ಚೈತ್ರಾ ಸಮಾಧಾನದ ಮಾತುಗಳನ್ನು ಆಡುತ್ತಿದ್ದಂತೆ ಜೋರು ಸುರಿಯಿತು. ಅಲ್ಲ ಮನೆ ಕೆಲಸ ಮಾಡಲಿಲ್ಲ ಅಂತ ಕಳಪೆ ಕೊಡುತ್ತಾರಲ್ಲ. ಅದು ನಂಬಿದ್ದವರೆ ಇಂತಹ ದ್ರೋಹ ಮಾಡುತ್ತಾರಲ್ಲ. ನಾವೇನು ಮನೆ ಕೆಲಸಕ್ಕೆ ಬಂದಿದ್ದೀವಾ? ಯಾವನ್ ಹೇಳಿದ್ದು ಹಾಗೇ. ಇವತ್ತು ಯಾರೆಲ್ಲಾ ಕಳಪೆ ಎಂದರೋ, ಯಾರೂ ಸರಿ ಇಲ್ಲ. ಎಲ್ಲಾ ನಕಲಿ ಜನರೇ ಎಂದಿದ್ದಾಳೆ.

    ಈಗಾಗಲೇ ಸೋನುಗೆ ರಾಕೇಶ್ ಮೇಲೆ ಕೆಂಡದಷ್ಟು ಕೋಪ ಬಂದಿದೆ. ಮತ್ತೆ ಕಳಪೆ ಎಂದಿದ್ದಾರೆ. ನೆಕ್ಸ್ಟ್ ಪ್ರೂವ್ ಮಾಡೋಣಾ ಎಂಬ ಹಠ ಅವಳಲ್ಲಿ ಹುಟ್ಟಿಕೊಂಡಂತೆ ಇಲ್ಲ. ಕಳಪೆ ಎಂದುಬಿಟ್ಟರಲ್ಲ ಎಂಬ ನೋವೇ ಎದ್ದು ಕಾಣುತ್ತಿದೆ. ಇಷ್ಟು ದಿನ ರಾಕೇಶ್‌ಗೆ ಹರ್ಟ್ ಆಗುವಂತೆ ಮಾತನಾಡಿದರು. ರಾಕಿ ಅದ್ಯಾವುದನ್ನು ಮನಸ್ಸಲ್ಲಿ ಇಟ್ಟುಕೊಂಡಿರಲಿಲ್ಲ. ಮತ್ತೆ ಮತ್ತೆ ಸರಿ ಮಾಡಿಕೊಂಡು ಮಾತನಾಡುತ್ತಿದ್ದ. ಆದರೆ ಸೋನು ಆ ರೀತಿ ಅಲ್ಲ. ಇದನ್ನೇ ಸ್ಟ್ರಾಂಗ್ ಆಗಿ ಹಿಡಿದುಕೊಳ್ಳುತ್ತಾಳೆ ಅನ್ನಿಸುತ್ತೆ. ನನ್ನನ್ನೇ ಕಳಪೆ ಎಂದವನು ನನಗೆ ಯಾವ ಸೀಮೆ ಫ್ರೆಂಡ್ ಅಂತ ಈಗಾಗಲೇ ಹೇಳಿದ್ದಾಳೆ. ಹೀಗಾಗಿ ಜೈಲಿನಿಂದ ಬಂದ ಮೇಲೆ ರಾಕಿನ ಕ್ಷಮಿಸೋದು ಸುಳ್ಳು ಎನಿಸುತ್ತಿದೆ. ಇದನ್ನೂ ಓದಿ: ‘ಲೈಗರ್’ ಸಿನಿಮಾ ಸೋಲು: ನಿರ್ಮಾಪಕರಿಗೆ ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

    Live Tv
    [brid partner=56869869 player=32851 video=960834 autoplay=true]

  • ಕಳಪೆ ಆಹಾರ ವಿತರಣೆ ಸಮಸ್ಯೆ ಡಿಸಿಗೆ ಹೇಳಲು 10 ಕಿ.ಮೀ ನಡೆದ ವಿದ್ಯಾರ್ಥಿನಿಯರು

    ಕಳಪೆ ಆಹಾರ ವಿತರಣೆ ಸಮಸ್ಯೆ ಡಿಸಿಗೆ ಹೇಳಲು 10 ಕಿ.ಮೀ ನಡೆದ ವಿದ್ಯಾರ್ಥಿನಿಯರು

    ಯಾದಗಿರಿ: ವಸತಿ ಶಾಲೆಯಲ್ಲಿ ನೀಡುತ್ತಿರುವ ಕಳಪೆ ಆಹಾರ ವಿತರಣೆ ಸಮಸ್ಯೆಯನ್ನು ವಿದ್ಯಾರ್ಥಿನಿಯರು ಡಿಸಿಗೆ ಹೇಳಲು 10 ಕಿ.ಮೀ ನಡೆದು ಜಿಲ್ಲಾಧಿಕಾರಿ ಆಫೀಸ್‍ಗೆ ಬಂದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಯಾದಗಿರಿ ತಾಲೂಕಿನ ಮುಂಡರಗಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ, ಕಳಪೆ ಆಹಾರ ನೀಡುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಊಟ ಮಾಡದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ 7 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: 5-6 ದಿನ ಪುನೀತ್ ಸಮಾಧಿ ಬಳಿ ಯಾರನ್ನೂ ಬಿಡಲ್ಲ: ಅರಗ ಜ್ಞಾನೇಂದ್ರ

    ಒಂದು ಕಡೆ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿನಿಯರು ವಸತಿ ಶಾಲೆಯಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ವಾರ್ಡನ್ ಹಾಗೂ ಪ್ರಾಂಶುಪಾಲರನ್ನು ಬದಲಾವಣೆ ಮಾಡಬೇಕೆಂದು ಒತ್ತಾಯ ಮಾಡಿದರು. ಸುಮಾರು 10ಕಿ.ಮೀ ವರಗೆ ನಡೆದುಕೊಂಡು ಬಂದು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ:  ಕಾಂಗ್ರೆಸ್‍ನವರು ಮತದಾರರಿಗೆ ನೇರವಾಗಿ ಹಣ ಹಂಚಿದ್ದಾರೆ: ಈಶ್ವರಪ್ಪ

    ವಸತಿ ಶಾಲೆಯಲ್ಲಿ ಗುಣಮಟ್ಟದ ಆಹಾರ, ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಈ ಕೂಡಲೇ ಸಮಸ್ಯೆ ಬಗೆ ಹರಿಸಬೇಕೆಂದು ಪ್ರತಿಭಟನೆ ನಿರತ ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ. ಈ ವೇಳೆ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಅವರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಕೂಡಲೇ ಸಮಸ್ಯೆ ಬಗೆಹರಿಸಲಾಗುತ್ತದೆಂದು ಭರವಸೆಯನ್ನು ನೀಡಿದ್ದಾರೆ. ಇದನ್ನೂ ಓದಿ:  ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನ ಸಹಜ ಎನ್ನುವ ರೀತಿ ಬಿಂಬಿಸುವ ಕೆಲಸ ನಡೆಯುತ್ತಿದೆ: ಸಿ.ಟಿ.ರವಿ

  • ಬಿಗ್‍ಮನೆಯಲ್ಲಿ ಹಾರಿದ ಕ್ರಾಂತಿಯ ಬಾವುಟ- ಕಾವೇರಿತು ಚಕ್ರವರ್ತಿ ಪ್ರತಿಭಟನೆ

    ಬಿಗ್‍ಮನೆಯಲ್ಲಿ ಹಾರಿದ ಕ್ರಾಂತಿಯ ಬಾವುಟ- ಕಾವೇರಿತು ಚಕ್ರವರ್ತಿ ಪ್ರತಿಭಟನೆ

    ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್‍ಗೆ ಕಳಪೆ ಪಟ್ಟ ಕೊಟ್ಟು ಜೈಲಿಗೆ ಕಳಿಸಲಾಗಿದೆ. ತನಗೆ ಕಳಪೆ ಪಟ್ಟ ಕೊಡಲು ಸ್ಪರ್ಧಿಗಳು ನೀಡಿದ ಕಾರಣ ಸರಿ ಇಲ್ಲ ಎಂದು ಪ್ರತಿಭಟನೆಯನ್ನು ಆರಂಭಿಸಿದ್ದಾರೆ.

    ಬಿಗ್‍ಬಾಸ್ ಆಟದ ನಿಯಮದ ಪ್ರಕಾರ ಪ್ರತಿವಾರದ ಆಟ ಮತ್ತು ಮನೆಯಲ್ಲಿ ಹೇಗೆ ಇರುತ್ತಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡು ಸ್ಪರ್ಧಿಗಳು ಒಮ್ಮತದಿಂದ ಒಬ್ಬರನ್ನು ಕಳಪೆ ಎಂದು ಸೂಚಿಸುತ್ತಾರೆ. ಅವರು ಬಿಗ್‍ಬಾಸ್ ಮುಂದಿನ ಆದೇಶದವರೆಗೆ ಜೈಲಿನಲ್ಲಿದ್ದು, ಶಿಕ್ಷೆಯನ್ನು ಅನುಭವಿಸಬೇಕು. ಸೆಕೆಂಡ್ ಇನ್ನಿಂಗ್ಸ್‍ನಲ್ಲಿ 2ನೇ ವಾರ ಕಳಪೆ ಪಟ್ಟಿಯನ್ನು ಹೊತ್ತು ಜೈಲು ಸೇರಿರುವ ಚಕ್ರವರ್ತಿ ಚಂದ್ರಚೂಡ್ ಬಿಗ್‍ಬಾಸ್ ಮನೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.

    ಚಕ್ರವರ್ತಿಯನ್ನು ಪ್ರಿಯಾಂಕಾ ತಿಮ್ಮೇಶ್, ಶಮಂತ್ ಬ್ರೊ ಗೌಡ, ಪ್ರಶಾಂತ್ ಸಂಬರ್ಗಿ, ಶುಭಾ ಪೂಂಜಾ ಸೇರಿ ಐವರು ಕಳಪೆ ಪಟ್ಟಕ್ಕೆ ನಾಮಿನೇಟ್ ಮಾಡಿದ್ದಾರೆ. ಮನನೊಂದಿರುವ ನಾನು ತರಕಾರಿ ಕಟ್ ಮಾಡೋದಿಲ್ಲ, ಸಾಂಬಾರ್ ಕಾಗೆ, ಜೊಳ್ಳು ಮಳ್ಳು, ಅವಕಾಶವಾದಿಗಳು, ಸುಬ್ಬಿ, ಒಟ್ಟಿಗೆ ಅನ್ನ ತಿಂದು ದ್ರೋಹ ಮಾಡಿದ ಸ್ನೇಹಿತರು ಎಂದು ಹೀಗೆ ಬರೆದು ಜೈಲಿನಲ್ಲೇ ಕುಳಿತುಕೊಂಡು ಟಿಶ್ಯು ಮೇಲೆ ಬರೆದು ಹಾಕಿದ್ದಾರೆ. ಇದೆಲ್ಲವನ್ನು ಹಾಡಿನ ರೂಪದಲ್ಲಿ ಹೇಳುತ್ತಾ ಜೈಲಿನೊಳಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಗೋಡೆ ಮೇಲೆ ಬಾವುಟ, ಪೋಸ್ಟರ್ ಕೂಡ ಅಂಟಿಸುತ್ತಾ ಅವರಿಗೆ ಬೇಸರ ಮಾಡಿದ ಸ್ಪರ್ಧಿಗಳ ಹೆಸರು ಕೂಡ ಬರೆದಿದ್ದಾರೆ.

    ಚಕ್ರವರ್ತಿ ನಡವಳಿಕೆ ಬಗ್ಗೆ ಇತರ ಸ್ಪರ್ಧಿಗಳು ಚರ್ಚೆ ಮಾಡುತ್ತಿದ್ದಾರೆ. ಸ್ನೇಹಿತ ಸ್ನೇಹಿತರ ತರ ಇರಬೇಕು ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಆತ್ಮೀಯರಾಗಿರುವವರು ಈ ರೀತಿ ಮಾಡಿದರೆ ಬೇಸರ ಆಗತ್ತೆ ಅಂತ ಶಮಂತ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಕ್ರವರ್ತಿ ಅವರೇ ಇದನ್ನೆಲ್ಲ ನಿಲ್ಲಿಸಬೇಕು, ಬೇರೆ ಯಾರೂ ಏನೂ ಮಾಡೋಕೆ ಆಗದು ಮಂಜು ಪಾವಗಡ ಹೇಳಿದ್ದಾರೆ. ತರಕಾರಿಯನ್ನು ಅವರಿಗೆ ಕೋಡೋಣ ಮನಸ್ಸು ಬದಲಾಯಿಸಿ ಕಟ್ ಮಾಡಿದರು ಮಾಡಬಹುದು ಎಂದು ದಿವ್ಯಾ ಉರುಡುಗ ವೈಷ್ಣವಿಯ ಬಳಿ ಹೇಳಿದ್ದಾರೆ.

    ಎಲ್ಲರೂ ಕಳಪೆಗಾಗಿ ಎಲ್ಲರೂ ಜೈಲಿಗೆ ಹೋಗಿದ್ದಾರೆ. ಆದರೆ ಯಾರು ಹೀಗೆ ಮಾಡಿಲ್ಲ. ಪ್ರಶಾಂತ್ ಸರ್ ತರಕಾರಿ ಕಟ್ ಮಾಡಲ್ಲ ಎಂದಾಗ ಎಲ್ಲರ ಮುಖದಲ್ಲಿ ಕೋಪ ಬಂತು. ಆದರೆ ಇವತ್ತು ಈ ವ್ಯಕ್ತಿಗೆ ಯಾರು ಏನು ಹೇಳಿಲ್ಲ. ಸರಿದೂಗಿಸಿಕೊಂಡು ಹೇಗೋ ಒಂದು ಸಾಂಬಾರ್ ಮಾಡಿದರು. ನನಗೆ ಈ ವಿಚಾರವಾಗಿ ಬೇಸರವಾಯಿತು. ಕಳಪೆಯಾಗಿ ಕಾಮಿಡಿ ಪೀಸ್ ಆಗಿ ಬಿಟ್ಟರು ಎಂದು ಪ್ರಿಯಾಂಕ ಶಮಂತ್ ಬಳಿ ಹೇಳಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಸಿಕ್ಕ ಕಪ್ಪು ಬಣ್ಣದ ಕವರ್ ಅನ್ನು ಜೈಲಿನ ಕಂಬಿಗೆ ಕಟ್ಟಿದ್ದಾರೆ. ಮನೆಯ ಸ್ಪರ್ಧಿಗಳ ವಿರುದ್ಧ ನಾನು ಪ್ರತಿಭಟನೆ ಮಾಡುತ್ತಿದ್ದೇನೆ. ಇದುವೇ ಪ್ರತಿಭಟನೆಯ ಬಾವುಟ. ನಿಜವಾದ ಕಳಪೆ, ದಲ್ಲಾಳಿಗಳ ವಿರುದ್ಧ ನನ್ನ ಪ್ರತಿಭಟನೆ. ಕಪ್ಪು ಬಾವುಟ ನನ್ನ ಹೋರಾಟದ ಪ್ರತೀಕ ಬ್ರೋ ಎಂದು ಅರವಿಂದ್ ಬಳಿ ಚಕ್ರವರ್ತಿ ಹೇಳಿದ್ದಾರೆ. ಆಗ ಅರವಿಂದ್ ಓಓ.. ಹೌದಾ ಎಂದು ನಕ್ಕು ಸುಮ್ಮನಾಗಿದ್ದಾರೆ.

    ಪ್ರತಿ ಬಾರಿ ಕಳಪೆ ನೀಡಿದಾಗಲೂ ಅದನ್ನು ಒಪ್ಪಿಕೊಂಡು ಸ್ಪರ್ಧಿಗಳು ಜೈಲಿಗೆ ಹೋಗಿದ್ದಾರೆ. ದಿವ್ಯಾ ಕೈಗೆ ಗಾಯ ಆಗೋಕೆ ನಾನೇ ಕಾರಣ. ಹೀಗಾಗಿ ನಾನೇ ಜೈಲಿಗೆ ಹೋಗುತ್ತೇನೆ ಎಂದು ಚಕ್ರವರ್ತಿ ಅವರೇ ಬಾಯ್ಬಿಟ್ಟು ಹೇಳಿದ್ದರು. ಈಗ ಕಳಪೆ ಎನ್ನುವ ಪಟ್ಟ ನೀಡಿದ ನಂತರದಲ್ಲಿ ಅವರ ವರಸೆಯನ್ನು ಬದಲಾಯಿಸಿದ್ದಾರೆ.

  • ಮೊಳಕೆ ಒಡೆಯದ ಕಳಪೆ ಬೀಜ – ಉತ್ತಮ ಮಳೆಯಾದ್ರೂ ಮಂಕಾದ ರೈತರು

    ಮೊಳಕೆ ಒಡೆಯದ ಕಳಪೆ ಬೀಜ – ಉತ್ತಮ ಮಳೆಯಾದ್ರೂ ಮಂಕಾದ ರೈತರು

    ರಾಯಚೂರು: ರೈತರು ದೇಶದ ಬೆನ್ನೆಲುಬು ಅನ್ನೋದು ಕೇವಲ ಮಾತಿಗೆ ಸೀಮಿತವಾಗಿದೆ. ರೈತರಿಗೆ ಮಾತ್ರ ಅನ್ಯಾಯವಾಗುತ್ತಲೇ ಇದೆ. ಸಾಲಸೂಲ ಮಾಡಿ ಜಮೀನಿನಲ್ಲಿ ಬಿತ್ತನೆ ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಅನ್ನದಾತರು ಇರುತ್ತಾರೆ. ಆದರೆ ರೈತರಿಗೆ ಮೋಸ ಮಾಡಲೆಂದೇ ಇರುವ ಕಳಪೆ ಬೀಜ ತಯಾರಿಕಾ ಕಂಪನಿಗಳು ಮಾತ್ರ ರೈತರ ಬದುಕನ್ನೇ ಮುಳುಗಿಸುತ್ತಿವೆ.

    ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಖುಷಿಯಾಗಿದ್ದ ರಾಯಚೂರಿನ ಸಿಂಧನೂರು, ಮಸ್ಕಿ ತಾಲೂಕಿನ ಈ ರೈತರು ಈಗ ಮೋಸಹೊಗಿದ್ದಾರೆ. ಸೂರ್ಯಕಾಂತಿ ಬೀಜ ಬಿತ್ತಿ 20 ದಿನಗಳಾದರೂ ಬೀಜ ಮೊಳಕೆ ಒಡೆಯದೇ ಇರುವುದರಿಂದ ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೀಜ ಕಳಪೆಯಾಗಿದೆ. ಮೋಸಹೋಗಿ ಕೈ ಸುಟ್ಟುಕೊಂಡಿರುವ ರೈತರು ಕಂಪನಿಯ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

    ಮುಂಗಾರು ಹಂಗಾಮಿನ ಬಿತ್ತನೆ ಎಲ್ಲೆಡೆ ಜೋರಾಗಿ ನಡೆದಿದೆ. ಇದೇ ಸಮಯದಲ್ಲಿ ಮಳೆಯನ್ನು ನಂಬಿ ಜಿಲ್ಲೆಯ ಸಿಂಧನೂರು ತಾಲೂಕಿನ ನೂರಾರು ಜನ ರೈತರು ತೇಜ ಕಂಪನಿಯ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ್ದಾರೆ. ತುರ್ವಿಹಾಳದ ಶ್ರೀ ಬಸವ ಅನ್ನದಾತ ಟ್ರೇಡರ್ಸ್ ನಲ್ಲಿ ತೇಜ ಕಂಪನಿಯ ಸೂರ್ಯಕಾಂತಿ ಬೀಜವನ್ನು ಖರೀದಿಸಿ ಬಿತ್ತನೆ ಮಾಡಿದ್ದಾರೆ. 20 ದಿನ ಕಳೆದರೂ ಬೀಜ ಮೊಳಕೆ ಒಡೆಯದೇ ಇರುವುದರಿಂದ ಕಂಪನಿಯು ಕಳಪೆ ಬೀಜ ನೀಡಿ ಮೋಸ ಮಾಡಿದೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.

    ಅಮಾಯಕ ರೈತರಿಗೆ ಮೋಸ ಮಾಡುವ ಕಂಪನಿಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೃಷಿ ಸಚಿವರು ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ಕಳಪೆ ಬೀಜ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ.

  • ಕಳಪೆ ಬಿತ್ತನೆ ಬೀಜ ಮಾರಾಟ ಮಾಡೋರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಬಿ.ಸಿ ಪಾಟೀಲ್

    ಕಳಪೆ ಬಿತ್ತನೆ ಬೀಜ ಮಾರಾಟ ಮಾಡೋರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಬಿ.ಸಿ ಪಾಟೀಲ್

    – ರೈತರಿಗೆ ಅಗತ್ಯವಿರುವಷ್ಟು ಪೆಟ್ರೋಲ್, ಡೀಸೆಲ್ ನೀಡಬೇಕು

    ಹಾವೇರಿ: ರೈತರ ವಸ್ತುಗಳನ್ನು ಸಾಗಾಣಿಕೆ ಮಾಡಲು ಯಾವುದೇ ನಿರ್ಬಂಧವಿಲ್ಲ. ಕೃಷಿ ಮತ್ತು ಕೃಷಿಗೆ ಪೂರಕವಾದ ಚಟುವಟಿಕೆಗಳಿಗೆ ಸರ್ಕಾರದಿಂದ ನಿರ್ಬಂಧವಿಲ್ಲ. ರೈತರಿಗೆ ಅಗತ್ಯವಿರುವಷ್ಟು ಬಂಕ್‍ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಹಾವೇರಿ ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು ಸಭೆ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದರು. ಪೊಲೀಸರು ಸಹ ರೈತರಿಗೆ ಯಾವುದೇ ತೊಂದರೆ ಮಾಡದಂತೆ ಸೂಚಿಸಿದರು. ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಬಾರದು ಅಧಿಕಾರಿಗಳ ಜೊತೆಗೆ ನಾವಿದ್ದೇವೆ ಎಂದರು.

    ಒಂದು ವೇಳೆ ಕಳಪೆ ಬಿತ್ತನೆ ಬೀಜದಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದು ಆತ್ಮಹತ್ಯೆ ಅಲ್ಲ ಅವರ ಕೊಲೆ ಮಾಡಿದಂತೆ. ಹೀಗಾಗಿ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಲಾಕ್‍ಡೌನ್‍ನಿಂದ ಹೂವಿನ ಮಾರುಕಟ್ಟೆಗೂ ತೊಂದರೆ ಆಗಿರುವುದು ನಿಜ. ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿ ವರದಿ ಕೊಡಲು ಸಿಎಂ ಸೂಚಿಸಿದ್ದಾರೆ. ವರದಿ ನಂತರ ಸೂಕ್ತ ಪರಿಹಾರ ವಿತರಣೆ ಮಾಡಲಾಗುವುದು. ಇದರ ಜೊತೆಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ಎಂ.ಆರ್.ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಪಾಟೀಲ್ ಹೇಳಿದರು.

  • ಅಂಗನವಾಡಿಯಲ್ಲಿ ಕಳಪೆ ಆಹಾರ- ಕೆಂಡಾಮಂಡಲವಾಗಿ ಸಭೆಯಲ್ಲಿ ಅಧಿಕಾರಿಗಳ ಮೈಚಳಿ ಬಿಡಿಸಿದ ಜಿ.ಪಂ. ಅಧ್ಯಕ್ಷೆ

    ಅಂಗನವಾಡಿಯಲ್ಲಿ ಕಳಪೆ ಆಹಾರ- ಕೆಂಡಾಮಂಡಲವಾಗಿ ಸಭೆಯಲ್ಲಿ ಅಧಿಕಾರಿಗಳ ಮೈಚಳಿ ಬಿಡಿಸಿದ ಜಿ.ಪಂ. ಅಧ್ಯಕ್ಷೆ

    ಗದಗ: ಬಡ ಮಕ್ಕಳಿಗೆ ಪೌಷ್ಟಿಕ ಆಹಾರಕ್ಕಾಗಿ ಸರ್ಕಾರ ಕೋಟಿ ಕೋಟಿ ಹಣ ನೀಡುತ್ತಿದೆ. ಆದರೆ ಜಿಲ್ಲೆಯ ಅಂಗನವಾಡಿಯ ಅಧಿಕಾರಿಗಳು ಮಕ್ಕಳಿಗೆ ಕಳಪೆ ಆಹಾರವನ್ನು ನೀಡುತ್ತಿದ್ದಾರೆ.

    ರವೆ, ಶೇಂಗಾದಲ್ಲಿ ಹುಳಗಳು ಸಾರ್ ಹುಳಗಳು, ಕಳಪೆ ಗುಣಮಟ್ಟದ ಹೆಸರುಕಾಳು, ಕಡಲೆಕಾಳು, ತೊಗರಿ ಬೆಳೆ, ಕೆಟ್ಟು ಹೋಗಿರುವ ಬೆಲ್ಲ ಇದು ಬಡ ಮಕ್ಕಳ ಅಪೌಷ್ಟಿಕತೆ ನೀಗಿಸಲು ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ನೀಡುವ ಆಹಾರದಲ್ಲಿ ಕಂಡು ಬಂದಿದೆ.

    ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರೂಪಾ ಅಂಗನವಾಡಿ ಎಮ್.ಎಸ್.ಪಿ.ಸಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿದಾಗ ಈ ಕಳಪೆ ಆಹಾರ ಮತ್ತು ಅಧಿಕಾರಿಗಳ ನಿಜ ಬಣ್ಣ ಬಯಲಾಗಿದೆ. ಇಂತಹ ಕಳಪೆ ಆಹಾರವನ್ನು ಮಕ್ಕಳು ತಿಂದ್ರೆ ಪೌಷ್ಟಿಕಾಂಶ ಬರಲು ಹೇಗೆ ಸಾಧ್ಯ ಅಂತ ಅಧ್ಯಕ್ಷೆ ರೂಪಾ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

    ಗದಗದ ಎಂಎಸ್‍ಪಿಸಿ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಸಾಮಗ್ರಿಗಳ ಪೂರೈಕೆ ಮಾಡುತ್ತಿದ್ದು, ಇದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಕಳಪೆ ಆಹಾರ ಪೂರೈಕೆ ಮಾಡಿದ ಅಧಿಕಾರಿಗಳು, ಗುತ್ತಿಗೆದಾರರನ್ನ ಸಸ್ಪೆಂಡ್ ಮಾಡುವಂತೆ ಜಿಲ್ಲಾ ಪಂಚಾಯ್ತಿ ಸಿಇಓ ಮಂಜುನಾಥ್ ಹಾಗೂ ಡಿಸಿಗೆ ಜಿಪಂ ಅಧ್ಯಕ್ಷೆ ಸೂಚಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಹೇಳಿದ್ದಾರೆ.

    ಪ್ರತಿಯೊಂದು ಆಹಾರ ಪದಾರ್ಥಗಳ ತೂಕದಲ್ಲೂ ಭಾರೀ ಮೋಸ ನಡೆಯುತ್ತಿರುವುದು ಸಹ ಕಂಡು ಬಂದಿದೆ. ಇದರಲ್ಲಿ ಎಂಎಸ್‍ಪಿಸಿ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂಬ ಆರೋಪವಿದೆ. ಇನ್ನಾದರೂ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿ ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 3 ತಿಂಗಳು ಕಳೆಯೋದ್ರಲ್ಲಿ ರಸ್ತೆ ತುಂಬಾ ಗುಂಡಿ- ಗ್ರಾಮೀಣಾಭಿವೃದ್ಧಿ ಸಚಿವರ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ

    3 ತಿಂಗಳು ಕಳೆಯೋದ್ರಲ್ಲಿ ರಸ್ತೆ ತುಂಬಾ ಗುಂಡಿ- ಗ್ರಾಮೀಣಾಭಿವೃದ್ಧಿ ಸಚಿವರ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ

    ಗದಗ: ಎಲ್ಲೆಂದರಲ್ಲಿ ಗುಂಡಿಗಳಿಂದ ತುಂಬಿರೋ ರಸ್ತೆ ಒಂದೆಡೆಯಾದ್ರೆ ವಾಹನ ಓಡಿಸಲು ಪ್ರಯಾಸ ಪಡ್ತಿರೋ ಸವಾರರು ಇನ್ನೊಂದೆಡೆ. ಪಂಕ್ಚರ್ ಆದ ಬೈಕನ್ನು ತಳ್ತಿರೋ ಸವಾರ ಮತ್ತೊಂದೆಡೆ ಇದು ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಕ್ಷೇತ್ರದ ರಸ್ತೆಯ ಪರಸ್ಥಿತಿ.

    ಗದಗದಿಂದ 5 ಕಿಲೋಮೀಟರ್ ದೂರದಲ್ಲಿರೋ ಸಂಭಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಪಿಎಂಜಿಎಸ್‍ವೈ ಇಲಾಖೆ ಉಸ್ತುವಾರಿಯಲ್ಲಿ 4 ಕೋಟಿ 93 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಯೋಜನೆ ಪ್ರಕಾರ ಇದು 2016 ಜುಲೈ 3ರಂದು ಮುಗಿಯಬೇಕಾಗಿತ್ತು. ಆದ್ರೆ ಮೂರು ತಿಂಗಳ ಹಿಂದಷ್ಟೆ ಮುಕ್ತಾಯವಾಗಿದೆ. ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸೋ ಮುಖ್ಯ ರಸ್ತೆಯಲ್ಲಿ ಪ್ರತಿದಿನ ನೂರಾರು ಜನ ಓಡಾಡ್ತಾರೆ. ಆದ್ರೆ ಕೆಲಸ ಮುಗಿದ ಮೂರೇ ತಿಂಗಳಿಗೆ ಈ ರಸ್ತೆ ತನ್ನ ನಿಜ ರೂಪವನ್ನು ತೋರಿಸಿದೆ. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ.

    ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಕಾಮಗಾರಿ ಬಗ್ಗೆ ದೂರುಗಳಿವೆ. ಹೀಗಾಗಿ ಹಣ ಬಿಡುಗಡೆ ಮಾಡಿಲ್ಲ. ಆಗಿರೋ ತಪ್ಪನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿ ಅಂತಾ ತಿಪ್ಪೇ ಸಾರಿಸುತ್ತಾರೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಬಗ್ಗೆ ಮಾತಾಡೋ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಜಿಲ್ಲೆಯಲ್ಲಿಯೇ ಇಂತಹ ಕಳಪೆ ಕಾಮಗಾರಿ ನಡೀತಿದ್ರೂ ಸಚಿವರೂ ಸೇರಿದಂತೆ ಯಾರೂ ಇತ್ತ ತಿರುಗಿ ನೋಡದೇ ಇರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.