Tag: ಕಲ್ಲು ಗಣಿಗಾರಿಕೆ

  • ಕಲ್ಲು ಗಣಿಗಾರಿಕೆಗೆ ಜನ ತತ್ತರ – ನೂರಾರು ಮನೆಗಳು ಬಿರುಕು

    ಕಲ್ಲು ಗಣಿಗಾರಿಕೆಗೆ ಜನ ತತ್ತರ – ನೂರಾರು ಮನೆಗಳು ಬಿರುಕು

    ಬೆಂಗಳೂರು: ಐದು ಕ್ರಷರ್ ಗಳಿಂದ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ನೆಲಮಂಗಲ ತಾಲೂಕಿನ ಗ್ರಾಮದ ಜನ ತತ್ತರಿಸಿ ಹೋಗಿದ್ದಾರೆ. ಮಾಲೀಕರ ದುರಾಸೆಯಿಂದ ನಿರ್ಮಾಣವಾಗಿರುವ ಐದು ಕಲ್ಲುಗಾಣಿಗಾರಿಕೆ ತಾಣಗಳಿಂದ, ಕ್ರಷರ್‍ಗೆ ಹೊಂದಿಕೊಂಡಿರುವ ಗ್ರಾಮದ ಜನರ ಬದುಕು ಹೇಳತೀರದಾಗಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಗಡಿಯಂಚಿನಲ್ಲಿರುವ ಮಾಕೇನಹಳ್ಳಿಯ ಗ್ರಾಮಸ್ಥರು, ಪ್ರತಿನಿತ್ಯ ಗಣಿಗಾರಿಕೆಯ ಸ್ಫೋಟದ ಭಯಾನಕ ಶಬ್ಧ ಹಾಗೂ ಧೂಳಿನಿಂದ ಭಯಭೀತರಾಗಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಗ್ರಾಮದಲ್ಲಿನ ನೂರಾರು ಮನೆಗಳು ಸಹ ವಿಪರೀತ ಬಿರುಕು ಬಿಟ್ಟಿವೆ. ಯಾವಾಗ ಮನೆ ಬೀಳುತ್ತದೆಯೋ ಎಂಬ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.

    ನಿತ್ಯ ನೂರಾರು ಲಾರಿಗಳಲ್ಲಿ ಕಲ್ಲಿನ ಉತ್ಪನ್ನಗಳಾದ ಜಲ್ಲಿ, ಎಂ.ಸ್ಯಾಂಡ್, ಇನ್ನಿತರ ಕಲ್ಲಿನ ಉತ್ಪನ್ನಗಳನ್ನು ಸಾಗಿಸಲು ಬೆಟ್ಟದಂತಿರುವ ಕಲ್ಲು ಬಂಡೆಯನ್ನು ಕರಗಿಸುತ್ತಿದ್ದಾರೆ. ಹರ್ಷ, ಸೂರ್ಯ, ವಿನಾಯಕ, ಎಸ್.ಎಲ್.ಎನ್, ಎಸ್.ಎಲ್.ಆರ್ ಎಂಬ ಕಂಪನಿಗಳ ಗಣಿಗಾರಿಕೆ ಜೋರಾಗಿದೆ. ಈ ಗಣಿಗಾರಿಕೆಯಿಂದ ಮಾಕೇನಹಳ್ಳಿ ಗ್ರಾಮದ ನೂರಾರು ಮನೆಗಳೆಲ್ಲ ಬಿರುಕು ಬಿಟ್ಟಿದ್ದು, ಮನೆ ಬೀಳುವ ಭಯದಲ್ಲೇ ಗ್ರಾಮಸ್ಥರು ಬದುಕು ಸಾಗಿಸುತ್ತಿದ್ದಾರೆ.

    ಮನೆಯ ಗೋಡೆಗಳು ಸಂಪೂರ್ಣ ಹಾಳಾಗುವ ಪರಿಸ್ಥಿತಿಗೆ ಬಂದು ತಲುಪಿದ್ದು, ಇನ್ನೊಂದೆಡೆ ಕಲ್ಲು ಗಣಿಗಾರಿಕೆಯ ವಿಪರೀತ ಶಬ್ದದಿಂದ ರಾತ್ರಿ ವೇಳೆ ಮಲಗಲು ಸಾಧ್ಯವಾಗದೇ, ಬಾಣಂತಿ, ಚಿಕ್ಕಮಕ್ಕಳು ನಿದ್ರೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

    ಗ್ರಾಮ ಪಂಚಾಯತಿಯಿಂದ ಹಿಡಿದು ಮೇಲ್ಮಟ್ಟದ ಆಡಳಿತ ವ್ಯವಸ್ಥೆಯವರೆಗೆ ಎಲ್ಲ ಜನಪ್ರತಿನಿಧಿಗಳು ಕ್ರಷರ್‍ಗಳಿಂದ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ರಾಶಿಗಟ್ಟಲೇ ಲಾರಿ ಲೋಡ್‍ಗಳಲ್ಲಿ ಸಾಗಿಸುವ ಜಲ್ಲಿ, ಎಂ.ಸ್ಯಾಂಡ್‍ಗಳಿಗೆ ರಾಜಕಾರಣಿಗಳೇ ಶ್ರೀ ರಕ್ಷೆಯಾಗಿದ್ದಾರೆ ಎಂದು ಮಾಕೇನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನೆಪ ಮಾತ್ರಕ್ಕೆ ಕಾಣದ ಮರದ ಕೆಳಗೆ ಕುಳಿತು ಜಾಣ ಮೌನದಲ್ಲಿ ತೊಡಗಿರುವುದು ಅನುಮಾನ ಮೂಡಿಸಿದೆ.

  • ಚಿಕ್ಕಬಳ್ಳಾಪುರದತ್ತ ಮುಖ ಮಾಡಿದ ಅಕ್ರಮ ಕಲ್ಲು ಗಣಿಗಾರಿಕೆ

    ಚಿಕ್ಕಬಳ್ಳಾಪುರದತ್ತ ಮುಖ ಮಾಡಿದ ಅಕ್ರಮ ಕಲ್ಲು ಗಣಿಗಾರಿಕೆ

    -ದಂಧೆಕೋರರ ಚಳಿ ಬಿಡಿಸಿದ ಅಧಿಕಾರಿಗಳು

    ಚಿಕ್ಕಬಳ್ಳಾಪುರ: ಇಷ್ಟು ದಿನ ರಾಜ್ಯ ರಾಜಧಾನಿಯಲ್ಲಿ ಸದ್ದು ಮಾಡ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಯ ಮಾಫಿಯಾ ಇದೀಗ ಚಿಕ್ಕಬಳ್ಳಾಪುರದತ್ತ ಮುಖ ಮಾಡಿದೆ. ಜಿಲ್ಲೆಯಲ್ಲಿ ರಾತ್ರೋ ರಾತ್ರಿ ಜಲ್ಲಿ ಕಲ್ಲು, ಗ್ರಾನೈಟ್ ದಿಮ್ಮಿಗಳು, ಕಲ್ಲಿನ ಬೋಲ್ಡರ್ಸ್ ಗಳನ್ನು ಬೃಹತ್ ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಇದನ್ನರಿತ ಚಿಕ್ಕಬಳ್ಳಾಪುರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ರಾನ್ ಜಿ ನಾಯಕ್ ಹಾಗೂ ಸಂದೀಪ್ ದಾಳಿ ನಡೆಸಿದ್ದಾರೆ.

    ಯಲಗಲಹಳ್ಳಿ, ಚಿಕ್ಕನಾಗವಲ್ಲಿ ಗ್ರಾಮದ ಸುತ್ತಮುತ್ತಲಿನ ಕಲ್ಲು ಕ್ವಾರಿಗಳಲ್ಲಿನ ಟಿಪ್ಪರ್ ಲಾರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಂತರ ಅಧಿಕಾರಿಗಳ ಬೆನ್ನುಬಿದ್ದ ದಂಧೆಕೋರರು ಅಧಿಕಾರಿಗಳಿಗೆ ಭಯ ಹುಟ್ಟಿಸಿದ್ದಾರೆ. ನಾಲ್ಕೈದು ಕಾರು, ಬೈಕ್‍ಗಳಲ್ಲಿ ಅಧಿಕಾರಿಗಳನ್ನು ಹಿಂಬಾಲಿಸಿದ ಮಾಫಿಯಾ ಪಡೆ ಡಿಕ್ಕಿ ಹೊಡೆದು ಅಟ್ಯಾಕ್ ಮಾಡುವ ಹಾಗೆ ಚಮಕ್ ಕೊಟ್ಟಿದ್ದಾರೆ. ಆದ್ರೂ ಧೃತಿಗೆಡದ ಅಧಿಕಾರಿಗಳು ಯಲಗಲಹಳ್ಳಿ ಬಳಿ 8, ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದ್ರು. ಅತ್ತ ಸಾರಿಗೆ ಇಲಾಖೆಯ ಆರ್.ಟಿ.ಓ ನಾಗಿರೆಡ್ಡಿ ಸಹ ರಾಷ್ಟ್ರೀಯ ಹೆದ್ದಾರಿ 7ರ ಹೊನ್ನೇನಹಳಿ ಬಳಿ 5 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮೊರೆ ಹೋಗಿದ್ದಾರೆ.

    ಈ ಘಟನೆ ನಂತರ ಮತ್ತಷ್ಟು ಚುರುಕಾಗಿರುವ ಡಿಸಿ ಅನಿರುದ್ ಶ್ರವಣ್, ಪ್ರತಿ ದಿನ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಅಕ್ರಮಗಳಿಗೆ ಕಡಿವಾಣ ಹಾಕಿ ಗಣಿ ಗ್ಯಾಂಗ್‍ಗೆ ಶಾಕ್ ನೀಡಿ ಅಂತ ಆದೇಶಿಸಿದ್ದಾರೆ. ಇದರಿಂದ ದಂಧೆಕೋರರು ಅನ್ಯ ಮಾರ್ಗಗಳತ್ತ ಮುಖ ಮಾಡ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲ್ಲು ಗಣಿಗಾರಿಕೆ ಪರಿಶೀಲನೆಯಲ್ಲಿ ಡೀಸೆಲ್ ಬ್ಯಾರಲ್ ಸ್ಫೋಟ – ಗಣಿ ಭೂವಿಜ್ಞಾನ ಅಧಿಕಾರಿ ದುರ್ಮರಣ

    ಕಲ್ಲು ಗಣಿಗಾರಿಕೆ ಪರಿಶೀಲನೆಯಲ್ಲಿ ಡೀಸೆಲ್ ಬ್ಯಾರಲ್ ಸ್ಫೋಟ – ಗಣಿ ಭೂವಿಜ್ಞಾನ ಅಧಿಕಾರಿ ದುರ್ಮರಣ

    ಕೊಪ್ಪಳ: ಇದೇ ತಿಂಗಳ 6ರಂದು ಜಿಲ್ಲೆಯಲ್ಲಿ ನಡೆಯುತ್ತಿದ್ದ ಅನಧಿಕೃತ ಕಲ್ಲು ಗಣಿಗಾರಿಕೆಯ ಪರಿಶೀಲನೆಗೆ ತೆರಳಿದಾಗ ಡೀಸೆಲ್ ಬ್ಯಾರಲ್ ಸ್ಫೋಟಗೊಂಡು ಗಾಯಗೊಂಡಿದಂತಹ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ದಿನೇಶ್ ಭಾನುವಾರ ಸಂಜೆ ಮೃತಪಟ್ಟಿದ್ದಾರೆ.

    ಅಕ್ರಮ ಕಲ್ಲುಗಣಿಗಾರಿಕೆಯ ಮಾಹಿತಿ ಮೇರೆಗೆ ದಿನೇಶ್ ಹಾಗೂ ನವೀನ್ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಲಿಂಗನಬಂಡಿಯಲ್ಲಿ ಇರುವ ಕಲ್ಲು ಕ್ವಾರೆಗೆ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಪರಿಶೀಲನೆ ನಡೆಸುವ ಸಂಧರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಅಲ್ಲಿದ್ದ ಡೀಸೆಲ್ ಬ್ಯಾರಲ್ ಸ್ಫೋಟಗೊಂಡಿತ್ತು. ಆಗ ದಿನೇಶ್ ಹಾಗೂ ನವೀನ್ ತೀವ್ರವಾಗಿ ಗಾಯಗೊಂಡಿದ್ದರು.

    ಸ್ಫೋಟದ ತೀವ್ರತೆಗೆ ಇಬ್ಬರಿಗೂ ಮೈ ಹಾಗೂ ಕೈ ಭಾಗಗಳಲ್ಲಿ ವಿಪರೀತವಾದ ಗಾಯವಾಗಿತ್ತು. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಕ್ಷಣ ಬೆಂಗಳೂರಿನ ಕೋರಮಂಗಲದಲ್ಲಿರುವ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ದಿನೇಶ್ ಅವರಿಗೆ ಶ್ವಾಸಕೋಶದಲ್ಲಿ ಹೊಗೆ ತುಂಬಿದ್ದರಿಂದ ಹಾಗೂ ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಸಂಜೆ ಮೃತಪಟ್ಟಿದ್ದಾರೆ. ನವೀನ್ ಅವರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನ್ಯಾಯಕ್ಕಾಗಿ ಸಿಎಂ ಮನೆ ಮುಂದೆ ವಿಷ ಸೇವಿಸಲು ಮುಂದಾದ ರೈತ ಕುಟುಂಬ!

    ನ್ಯಾಯಕ್ಕಾಗಿ ಸಿಎಂ ಮನೆ ಮುಂದೆ ವಿಷ ಸೇವಿಸಲು ಮುಂದಾದ ರೈತ ಕುಟುಂಬ!

    ಬೆಂಗಳೂರು: ಗಣಿ ಮಾಲೀಕರ ಬಳಿ ಇರುವ ನಮ್ಮ ಜಮೀನನ್ನು ನಮಗೆ ಸಿಗದೇ ಇದ್ದರೆ ನಾವು ಸಿಎಂ ಮುಂದೆ ವಿಷ ಸೇವಿಸುವುದಾಗಿ ರೈತ ಕುಟುಂಬ ಹೇಳಿದೆ.

    ಜೆಪಿ ನಗರದಲ್ಲಿರುವ ಸಿಎಂ ನಿವಾಸದ ಮುಂದೆ ರಾಮನಗರ ಜಿಲ್ಲೆಯ ತೆಂಗಿನಕಲ್ಲು, ಲಂಬಾಣಿತಾಂಡ, ಅಮ್ಮನದೊಡ್ಡಿ ಗ್ರಾಮದ ನಾಗೇಶ್ ನಾಯಕ, ರಾಮಣ್ಣ ಹಾಗೂ ರಾಜುನಾಯಕ್ ಆತ್ಮಹತ್ಯೆಗೆ ಯತ್ನಿಸಿದ್ದ ರೈತರು.

    ನಮಗೆ ನ್ಯಾಯ ಒದಗಿಸಿಕೊಡಿ ಅಂತಾ ಆಗ್ರಹಿಸಿ, ವಿಷ ಸೇವಿಸಲು ಮುಂದಾಗಿದ್ದರು. ನಿವಾಸದಲ್ಲಿ ಮುಖ್ಯಮಂತ್ರಿ ಇಲ್ಲವೆಂದು ತಿಳಿಯುತ್ತಿದ್ದಂತೆ, ನ್ಯಾಯ ಸಿಗದೇ ಹೋದರೆ ನಾಳೆ ಮತ್ತೆ ಬಂದು ಇಲ್ಲಿಯೇ ವಿಷ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ರೈತರು ಮರಳಿದ್ದಾರೆ.

    ಯಾಕೆ ವಿಷ ಸೇವನೆ?
    ಬೆಂಗಳೂರು ನಿವಾಸಿ ನಂದಕುಮಾರ್ ಎಂಬವರು ಕಲ್ಲು ಗಣಿಗಾರಿಕೆಗೆ ಜಮೀನು ಬಳಸಿಕೊಂಡು ವಾಪಾಸ್ ಕೊಡುವುದಾಗಿ ಹೇಳಿ, ಅಕ್ರಮವಾಗಿ ಜಮೀನನ್ನು ಬರೆಸಿಕೊಂಡಿದ್ದಾರೆ. ಈಗ ಜಮೀನು ನನ್ನದೇ ಎಂದು ಹೇಳಿ, ಬೇರೆಯವರಿಗೆ ಮಾರಲು ಮುಂದಾಗಿದ್ದಾರೆ. ರಾಮನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮೂರು ಕುಟುಂಬದ ಜಮೀನನ್ನು ನಂದಕುಮಾರ್ ಪಡೆದು ಮೋಸ ಮಾಡಿದ್ದಾರೆ ರೈತರು ಆರೋಪಿಸಿದ್ದಾರೆ.

  • ಬಿಬಿಎಂಪಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ!

    ಬಿಬಿಎಂಪಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ!

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಅರಣ್ಯ ಪ್ರದೇಶದ ಮಧ್ಯದಲ್ಲಿಯೇ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. 2007ರಲ್ಲಿ ಕಸ ಡಂಪ್ ಮಾಡೋದಕ್ಕೆ ಅಂತಾ ತಮ್ಮನಾಯಕನಹಳ್ಳಿಯಲ್ಲಿ ಸರ್ಕಾರ ಸುಮಾರು ಎರಡು ಎಕರೆಯಷ್ಟು ಜಾಗವನ್ನು ಮಂಜೂರು ಮಾಡಿತ್ತು. ಇದು ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಕಸ ಡಂಪ್ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸಿತ್ತು.

    ಸದ್ಯ ಈ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತದೆ. ಡೈನಾಮೇಟ್ ಸಿಡಿಸಿಕಲ್ಲು ಪುಡಿ ಮಾಡೋದರಿಂದ ಅರಣ್ಯದಲ್ಲಿರುವ ಪ್ರಾಣಿ ಪಕ್ಷಿಗಳು ಸ್ಫೋಟಕ ಸದ್ದಿಗೆ ನಡುಗಿ ಹೋಗಿವೆ. ಬಿಬಿಎಂಪಿ ಜಾಗದಲ್ಲಿ ರಾಜಾರೋಷವಾಗಿ ಕಲ್ಲುಗಣಿಗಾರಿಕೆ ನಡೆಸಲು ಅಧಿಕಾರಿಗಳೇ ಶ್ರೀರಕ್ಷೆ ನೀಡಿದ್ದಾರೆ. ಪ್ರಭಾವಿ ರಾಜಕೀಯ ನಾಯಕರು ಈ ಕಲ್ಲುಗಣಿಗಾರಿಕೆ ರೂವಾರಿ ಅನ್ನೋದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.

    2007ರಲ್ಲಿ ಕಸ ಡಂಪಿಂಗ್ ಮಾಡೋದಕ್ಕೆ ಬಿಬಿಎಂಪಿ ಆದೇಶ ನೀಡಿತ್ತು. ಅರಣ್ಯ ಪ್ರದೇಶ ಆಗಿರೋದ್ರಿಂದ ಕಸ ಡಂಪ್ ಮಾಡಲು ಸಾಧ್ಯವಾಗಲಿಲ್ಲ. ಕೆಲವು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಯಾರು ಅನುಮತಿ ನೀಡಿದ್ರೂ ಎಂಬುವುದು ಗೊತ್ತಾಗುತ್ತಿಲ್ಲ. ಈ ಸಂಬಂಧ ಕೇಂದ್ರ ಪರಿಸರ ದೂರು ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪರಿಸರವಾದಿ ವಿಜಯ್ ನಿಶಾಂತ್ ದೂರಿದ್ದಾರೆ.

  • ಬೆಂಗ್ಳೂರಲ್ಲೇ ಎಗ್ಗಿಲ್ಲದೆ ನಡೀತಿದೆ ಅಕ್ರಮ ಕಲ್ಲು ಗಣಿಗಾರಿಕೆ- ದೂರು ನಿಡಿದ್ರೂ ಕ್ಯಾರೇ ಎನ್ನುತ್ತಿಲ್ಲ ಖಾಕಿ!

    ಬೆಂಗ್ಳೂರಲ್ಲೇ ಎಗ್ಗಿಲ್ಲದೆ ನಡೀತಿದೆ ಅಕ್ರಮ ಕಲ್ಲು ಗಣಿಗಾರಿಕೆ- ದೂರು ನಿಡಿದ್ರೂ ಕ್ಯಾರೇ ಎನ್ನುತ್ತಿಲ್ಲ ಖಾಕಿ!

    ಬೆಂಗಳೂರು: ಇಲ್ಲಿ ನಿತ್ಯವೂ ಸಂಭವಿಸುತ್ತೆ ಸ್ಫೋಟ. ಇಲ್ಲಿನ ಜನರಿಗೆ ನಿತ್ಯವೂ ಭೂಕಂಪನದ ಅನುಭವ. ಮನೆಯಲ್ಲಿ ಪುಟ್ಟ-ಪುಟ್ಟ ಮಕ್ಕಳು ಬೆಚ್ಚಿ ಬೀಳ್ತಾರೆ. ಇದು ಎಲ್ಲೋ ನಡೆಯುತ್ತಿರುವ ಘಟನೆ ಅಲ್ಲ. ನಮ್ಮ ಬೆಂಗಳೂರಲ್ಲೇ ನಡೆಯತ್ತಿರುವ ಅಕ್ರಮ ಗಣಿಗಾರಿಕೆ.

    ಹೌದು. ಬೆಂಗಳೂರಿನ ರಾಮಚಂದ್ರಾಪುರದಲ್ಲಿ ಎಗ್ಗಿಲ್ಲದೆ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಸ್ಫೋಟಕಗಳನ್ನ ಬಳಸಬಾರದು ಅಂತ ಷರತ್ತು ವಿಧಿಸಿದ್ರೂ, ಇಲ್ಲಿ ಬ್ಲಾಸ್ಟಿಂಗ್ ನಡೆಯುತ್ತೆ. ಪೊಲೀಸರಿಗೆ ದೂರು ನೀಡಿದ್ರೂ ಕ್ಯಾರೆ ಅನ್ನಲ್ಲ. ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೂ ಬೇಜಾವಾಬ್ದಾರಿ. ದೂರು ಕೊಟ್ಟು ಕೊಟ್ಟು ಸ್ಥಳೀಯರು ಬೇಸತ್ತಿದ್ದಾರೆ.

    ಉಮ್ರಾ ಡೆವಲಪರ್ಸ್ ಮೂಲಕ ನವೀದ್ ಅನ್ನೋ ಬಿಲ್ಡರ್, ಕಲ್ಲು ಗಣಿಗಾರಿಕೆ ನಡೆಸ್ತಿದ್ದಾರೆ. ಗಣಿಗಾರಿಕೆಯಿಂದ ಆಗ್ತಿರುವ ಸಮಸ್ಯೆ ವಿರುದ್ಧ ಸ್ಥಳೀಯರು ಕೋರ್ಟ್ ಮೆಟ್ಟಿಲೇರಿದ್ರು. ನಾಲ್ಕು ತಿಂಗಳೊಳಗೆ ಸ್ಥಳೀಯರ ಮನವಿಗೆ ಸ್ಪಂದಿಸಿ ಕ್ರಮ ಜರುಗಿಸಿ ಎಂದು ಕೋರ್ಟ್ ಆದೇಶ ಕೂಡ ನೀಡ್ತು. ಆದ್ರೆ ಯಲಹಂಕ ನ್ಯೂಟೌನ್ ಪೊಲೀಸರು ಮಾತ್ರ ಒಂದು ಲಾರಿ ಸೀಜ್ ಮಾಡಿ, ಬಿಟ್ಟು ಕಳಿಸಿದ್ರು. ಇನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾತ್ರ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.

    ಅಕ್ರಮಕ್ಕೆ ಸಾಕ್ಷಿಯಾಗುವ ದೃಶ್ಯಗಳು ಇದೆ. ಆದ್ರೆ ಕ್ರಮ ಮಾತ್ರ ಜರುಗಿಸುತ್ತಿಲ್ಲ. ಇಂತಹ ಅಧಿಕಾರಿಗಳ ಸಹಕಾರದಿಂದಲೇ ಎಗ್ಗಿಲ್ಲದೇ ಗಣಿಗಾರಿಕೆ ನಡೆಯುತ್ತಿರೋದು. ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್ ಈಗಲಾದ್ರೂ ಕ್ರಮ ಕೈಗೊಳ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.

  • ಕಲ್ಲು ಗಣಿಗಾರಿಕೆಗೆ ಪ್ರತಿದಿನ ಡೈನಮೈಟ್‍ಗಳ ಸ್ಫೋಟ- ಬಿರುಕು ಬಿಡ್ತಿವೆ ಮನೆಗಳು

    ಕಲ್ಲು ಗಣಿಗಾರಿಕೆಗೆ ಪ್ರತಿದಿನ ಡೈನಮೈಟ್‍ಗಳ ಸ್ಫೋಟ- ಬಿರುಕು ಬಿಡ್ತಿವೆ ಮನೆಗಳು

    ಬೆಂಗಳೂರು: ಮನೆಗಳ ಗೋಡೆ, ಚಾವಣಿಗಳು ಬಿರುಕು ಬಿಟ್ಟಿವೆ. ಗೋಡೆ ಗೋಡೆಗಳೇ ಕುಸಿದು ಬಿದ್ದಿವೆ. ಪ್ರತಿನಿತ್ಯ ಭೂಮಿ ನಡುಗುತ್ತಿದೆ. ಇದು ಬೆಂಗಳೂರು ನಗರದ ವಿದ್ಯಾರಣ್ಯಪುರ ಬಳಿಯ ದೊಡ್ಡಬೆಟ್ಟಹಳ್ಳಿಯ ಕಾಲೋನಿಯಲ್ಲಿನ ಪರಿಸ್ಥಿತಿ.

    ಕಳೆದ ಆರು ತಿಂಗಳಿನಿಂದ ಇಲ್ಲಿ ಉಮ್ರಾ ಡೆವಲಪರ್ಸ್ ಕಲ್ಲು ಗಣಿಗಾರಿಕೆಯನ್ನು ನಡೆಸ್ತಿದ್ದಾರೆ. ಹೀಗಾಗಿ ಇಲ್ಲಿ ಪ್ರತಿದಿನ ಹಗಲು ರಾತ್ರಿಯೆನ್ನದೇ ಡೈನಮೈಟ್ ಸ್ಫೋಟಗೊಳ್ಳುತ್ತಿವೆ. ಇದ್ರಿಂದ ಜನ ಪ್ರತಿದಿನ ಏನಾಗುತ್ತೋ ಅನ್ನೋ ಆತಂಕದಲ್ಲೇ ದಿನ ಕಳೀತಿದ್ದಾರೆ. ಪರೀಕ್ಷೆ ಸಮಯ ಕರ್ಕಶ ಶಬ್ಧದಿಂದ ಮಕ್ಕಳಿಗೆ ಓದಲು ಆಗ್ತಿಲ್ಲ.

    ಹಾನಿಕಾರಕ ಸ್ಫೋಟಕಗಳಿಂದ ಹಲವು ಮನೆಗಳು ಬಿರುಕು ಬಿಡೋದಿರಲಿ ಕುಸಿದು ಬಿದ್ದಿವೆ. ಪ್ರತಿದಿನ ಇಲ್ಲಿನ ಜನ ಆತಂಕದೊಂದಿಗೆ ದಿನ ಕಳೆಯುತ್ತಿದ್ದಾರೆ. ಜಿಲ್ಲಾಧಿಕಾರಿಗಳು, ಮೈನಿಂಗ್ ಅಧಿಕಾರಿಗಳು ಏನ್ಮಾಡ್ತಿದ್ದಾರೆ ಎಂಬುವುದು ಇಲ್ಲಿನ ಜನರ ಪ್ರಶ್ನೆಯಾಗಿದೆ.