Tag: ಕಲಾವಿದೆ

  • ಒಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೇ ಹೆಣವಾದ

    ಒಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೇ ಹೆಣವಾದ

    ಪಣಜಿ: 65 ವರ್ಷದ ಕಲಾವಿದರೊಬ್ಬರನ್ನು ತೋಟದ ಕೆಲಸಗಾರ ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೆ ಹೆಣವಾದ ಘಟನೆ ಗೋವಾದಲ್ಲಿ ನಡೆದಿದೆ.

    ಮುಂಬೈ ಮೂಲದ ಚಿತ್ರಕಲಾವಿದರಾದ ಶಿರಿನ್ ಮೋಡಿ(65) ಕೊಲೆಯಾದ ದುರ್ದೈವಿ. ಮನೆಯೊಳಗೆ ಮಾರಕಾಸ್ತ್ರಗಳಿಂದ ಅವರ ತೋಟದ ಮಾಲಿ ಪ್ರಫುಲ್ಲಾ ಶಿರಿನ್‍ರನ್ನು ಕೊಲೆ ಮಾಡಿದ್ದಾನೆ. ಉತ್ತರ ಗೋವಾ ಜಿಲ್ಲೆಯ ಅರಪೊರಾ ಗ್ರಾಮದಲ್ಲಿ ಶಿರಿನ್ ಆರ್ಟ್ ಸ್ಟುಡಿಯೋ ಹೊಂದಿದ್ದರು. ಹೀಗಾಗಿ ಅವರು ಮುಂಬೈ ಬಿಟ್ಟು ಅರಪೊರಾ ಗ್ರಾಮದಲ್ಲೇ ವಾಸಿಸುತ್ತಿದ್ದರು.

    ಅವರ ತೋಟದಲ್ಲಿ ಅಸ್ಸಾಂ ಮೂಲದ ಪ್ರಫುಲ್ಲಾ ತೋಟದ ಮಾಲಿಯಾಗಿ ಕೆಲಸ ಮಾಡುತ್ತಿದ್ದನು. ಆದರೆ ಭಾನುವಾರ ಪ್ರಫುಲ್ಲಾ ಮನೆಯೊಳಗೆ ಮಾರಕಾಸ್ತ್ರಗಳಿಂದ ಶಿರಿನ್ ಅವರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ, ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಗಾರ್ಡ್‌ನ್ ನಲ್ಲಿ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ.

    ಈ ವೇಳೆ ಗಾರ್ಡ್‌ನ್ ನಲ್ಲಿ ಬಿದ್ದಿದ್ದ ಮಾಲಿಯನ್ನು ಕಂಡ ಅಕ್ಕಪಕ್ಕದ ಮನೆಯವರು ಆತನನ್ನು ಆಸ್ಪತ್ರಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಆರೋಪಿ ಮೃತಪಟ್ಟಿದ್ದನು. ಬಳಿಕ ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದರು.

    ಆಗ ಅಕ್ಕಪಕ್ಕದ ಮನೆಯವರು, ಮಾಲಿ ಹಾಗೂ ಶಿರಿನ್ ಅವರ ನಡುವೆ ಜಗಳ ನಡೆದಿತ್ತು. ಬಳಿಕ ಮಾಲಿ ಮನೆಯಿಂದ ಹೊರಗೆ ಓಡಿಬರುತ್ತಿದ್ದಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ. ಬಹುಶಃ ಆತನೇ ಶಿರಿನ್‍ರನ್ನು ಕೊಲೆ ಮಾಡಿ ತಪ್ಪಿಸಿಕೊಳ್ಳಲು ಓಡಿ ಬರುತ್ತಿದ್ದನು ಎನಿಸುತ್ತದೆ ಎಂದು ಪೊಲೀಸರ ಬಳಿ ಹೇಳಿದ್ದಾರೆ.

    ಇತ್ತ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಘಟನೆ ನಡೆದ ಬಳಿಕ ಮಾಲಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದು ಕಂಡು ಬಂದಿದೆ. ಆತ ಮನೆಯಿಂದ ಹೊರಗೆ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಲು ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಅಸಭ್ಯ ವರ್ತನೆ- ನಾಟಕ ಕಲಾವಿದೆಯಿಂದ ಯುವಕನಿಗೆ ಚಪ್ಪಲಿ ಏಟು!

    ಅಸಭ್ಯ ವರ್ತನೆ- ನಾಟಕ ಕಲಾವಿದೆಯಿಂದ ಯುವಕನಿಗೆ ಚಪ್ಪಲಿ ಏಟು!

    ಬಾಗಲಕೋಟೆ: ನಾಟಕ ಪ್ರದರ್ಶನ ನಡೆಯುತ್ತಿದ್ದ ವೇಳೆ ಕಲಾವಿದೆ ಜೊತೆ ಅನುಚಿತವಾಗಿ ವರ್ತಿಸಿದ ಯುವಕನೊಬ್ಬ ಚಪ್ಪಲಿ ಏಟು ತಿಂದ ಘಟನೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ರಾತ್ರಿ ಹಿಪ್ಪರಗಿ ಗ್ರಾಮದಲ್ಲಿ “ಸೇಡಿಗಾಗಿ ಸಿಡಿದೆದ್ದ ಬಡವ” ಎಂಬ ನಾಟಕ ಪ್ರದರ್ಶನ ನಡೆಯುತ್ತಿತ್ತು. ನಾಟಕಕ್ಕೂ ಮುನ್ನ ಹಿಪ್ಪರಗಿ ಗ್ರಾಮದ ನಿವಾಸಿ ಬಸವರಾಜ್ ನಾಟಕ ಕಲಾವಿದೆ ರೇಖಾ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ನನ್ನನ್ನು ಚುಂಬಿಸಲು ಬಂದಿದ್ದ ಎಂದು ಆರೋಪಿಸಿ ಕಲಾವಿದೆ ಬಸವರಾಜ್‍ಗೆ ಚಪ್ಪಲಿಯಿಂದ ಭರ್ಜರಿಯಾಗಿ ಥಳಿಸಿದ್ದಾರೆ. ಇದನ್ನೂ ಓದಿ:ನಾಟಕದ ವೇದಿಕೆಯ ಮೇಲೆಯೇ ಮೈ ಮರೆತು ಜೋಡಿಯಿಂದ ಲಿಪ್‍ಲಾಕ್

    ಬಳಿಕ ಈ ವಿಷಯ ತಿಳಿದ ಗ್ರಾಮಸ್ಥರು ಇಂದು ಬೆಳಿಗ್ಗೆ ಇದೇ ವಿಚಾರವಾಗಿ ಗುರುಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ಕೂಡ ಯುವಕನಿಗೆ ಕಲಾವಿದೆ ಚಪ್ಪಲಿ ಏಟು ನೀಡಿದ್ದಾರೆ. ನಂತರ ಗ್ರಾಮಸ್ಥರು ಯುವಕನಿಗೆ ಬುದ್ಧಿವಾದ ಹೇಳಿ, ಕಲಾವಿದೆಯ ಕಾಲಿಗೆ ಬೀಳಿಸಿ, ಕ್ಷಮೆ ಕೇಳಿಸಿ, ಪರಿಸ್ಥಿತಿ ಶಾಂತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಅಜ್ಜಿಗೆ ಇಳಿ ವಯಸ್ಸಾದ್ರೂ ಹಾಡುಗಾರಿಕೆಯಲ್ಲಿ ಹದಿಹರೆಯ-6 ದಶಕಗಳು ರಂಜಿಸಿದ ಕಲಾವಿದೆಗೆ ಬೇಕಿದೆ ಸಹಾಯ

    ಅಜ್ಜಿಗೆ ಇಳಿ ವಯಸ್ಸಾದ್ರೂ ಹಾಡುಗಾರಿಕೆಯಲ್ಲಿ ಹದಿಹರೆಯ-6 ದಶಕಗಳು ರಂಜಿಸಿದ ಕಲಾವಿದೆಗೆ ಬೇಕಿದೆ ಸಹಾಯ

    ಕಲಬುರಗಿ: ನಮ್ಮ ಗ್ರಾಮೀಣ ಭಾಗದಲ್ಲಿ ಮೌಖಿಕ ಬುರ್ರಾ ಕಥೆ ಜಾನಪದ ಕಲೆ ಇದೀಗ ನಶಿಸಿ ಹೋಗುತ್ತಿದೆ. ಇಂತಹದರಲ್ಲಿ ಕಲಬುರಗಿಯ ವೃದ್ಧ ದಂಪತಿ ಇಂದಿಗೂ ಅದೇ ಕಲೆಯನ್ನು ಜೀವಾಳವಾಗಿ ಮಾಡಿಕೊಂಡಿದ್ದಾರೆ. ದುರಂತ ಅಂದ್ರೆ ಆ ಕಲೆಗೆ ಇದೀಗ ಬೆಲೆಯಿಲ್ಲದ ಕಾರಣ ವೃದ್ಧ ದಂಪತಿ ಸಂಕಷ್ದಲ್ಲಿದ್ದಾರೆ.

    ಜಾನಪದ ಕಥೆಗಳನ್ನು ಹಾಡಿನ ರೂಪದಲ್ಲಿ ಹಾಡುವ ಅಜ್ಜಿಯ ಹೆಸರು ಶಂಕ್ರಮ್ಮ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಮತೀರ್ಥ ಗ್ರಾಮದ ನಿವಾಸಿಯಾಗಿದ್ದು, ಈ ಇಳಿ ವಯಸ್ಸಿನಲ್ಲಿ ಸಹ ಇವರು ಹರಿಹರೆಯದವರು ನೋಡಿ ನಾಚುವಂತಹ ಎನರ್ಜಿ ಹೊಂದಿದ್ದಾರೆ. ಒಮ್ಮೆ ಕಥೆಗಳನ್ನು ಹೇಳಲು ಆರಂಭಿಸಿದ್ರೆ ಸಾಕು ಗಂಟೆಗಳು ಸಾಲೋದಿಲ್ಲ. ಅಜ್ಜಿ ಅನಕ್ಷರಸ್ಥೆ ಅಲ್ಲದೆ ಎಲ್ಲಿಯೂ ಓದಿ ಕಲಿತಿದಲ್ಲ. ಬದಲಾಗಿ ಆಡು ಮಾತುಗಳನ್ನು ಕಥೆಗಳನ್ನಾಗಿ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಕಥೆ ಹೇಳುತ್ತಾರೆ.

    ಅಜ್ಜಿ 10 ವರ್ಷದವಳಿದ್ದಾಗ ಅವರ ತಾಯಿ ಕಥೆಗಳನ್ನ ಹೇಳುತ್ತಾ ಜೀವನ ಸಾಗಿಸುತ್ತಿದ್ದರು. ಅವರ ಜೊತೆ ಹೋಗಿ ಬಾಯಿಂದನೆ ಕಲಿತ ವಿದ್ಯಯಿದು, ಬುರ್ರಾ ಕಥೆಗಳ ಅಂದ್ರೆ ಹಳೆಯ ಕಾಲದ ಇತಿಹಾಸವನ್ನ ಮತ್ತು ದೇವರ ಕಥೆಗಳನ್ನ ಹೇಳುತ್ತಾರೆ. ಇದೇ ರೀತಿ ಹಳ್ಳಿ ಹಳ್ಳಿಗೆ ಹೋಗಿ ತಮ್ಮ ಕುಟುಂಬವನ್ನು ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಆದರೆ ಇಂತಹ ದಂಪತಿಗಿಗೆ ವಯಸ್ಸಾದ ಹಿನ್ನಲೆ ಆ ಶಕ್ತಿ ಉಳಿದಿಲ್ಲ.

    ಅಜ್ಜಿ ಶಂಕ್ರಮ್ಮರ ಗಂಡನಾದ ಮಹದೇವಪ್ಪ ಸಾಥ್ ನೀಡಿದ್ದು ಅವರು ಸಹ ಹಗಲುವೇಷ ಮತ್ತು ಹಾರ್ಮೋನಿಯಂ ನುಡಿಸುತ್ತಾರೆ. ಇಂತಹ ಕಲಾವಿದ ದಂಪತಿಗೆ ಇಲ್ಲಿಯವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ನೀಡುವ ಪಿಂಚಣಿ ಸಹ ನೀಡಿಲ್ಲ. ಇನ್ನು ಸ್ವಂತ ಮನೆಯಿಲ್ಲದ ಕಾರಣ ಈ ದಂಪತಿ ಮತ್ತು ಮಗ ಮಾರುತಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ವೃದ್ಯಾಪ ಮಾಶಾಸನ ಪಡೆಯಬೇಕು ಅಂದ್ರೆ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಆಟವಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ನಮ್ಮ ತಂದೆ-ತಾಯಿಯ ನೆರವಿಗೆ ಬರಲಿ ಎಂದು ಮಾರುತಿ ಮಗ ವಿನಂತಿಸುತ್ತಿದ್ದಾರೆ.

    ಶಂಕ್ರಮ್ಮ ಅವರ ಬುರ್ರಾ ಕಥೆಗಳ ಕನ್ನಡ ಮತ್ತು ತೆಲುಗು ತವಲಾನಿಕ ಅಧ್ಯಯನ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾಣಿಕಪ್ಪ ಎಂಬವರು ಪಿಎಚ್‍ಡಿ ಅವಾರ್ಡ್ ಪಡೆದಿದ್ದಾರೆ. ಇಷ್ಟಾದರೂ ಸರ್ಕಾರ ಮಾತ್ರ ಇವರ ಕಲೆಗೆ ಬೆಲೆ ನೀಡದಿರುವದು ದುರಂತ. ಹೀಗಾಗಿ ಈ ಕಲಾವಿದರು ಸ್ವಂತ ಮನೆ, ವೃದ್ಯಾಪ ಪಿಂಚಣಿ ಮತ್ತು ಕಲಾವಿದರಿಗೆ ಸಿಗಬೇಕಾದ ಮಾಶಾಸನದ ನೀರಿಕ್ಷೆಯಲ್ಲಿದ್ದಾರೆ.

    https://www.youtube.com/watch?v=bVErt77iCRs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews