Tag: ಕಲಾವಿದರು

  • ಕಾರವಾರಕ್ಕೆ ದಿಢೀರ್ ಭೇಟಿ ನೀಡಿದ ಅಮಿತ್ ಶಾ, ಅಮಿತಾಬ್ ಬಚ್ಚನ್- ಸಮೋಸ ನೀಡಿ ಸ್ವಾಗತಿಸಿದ ಸರ್ವರ್ ರಾಮು

    ಕಾರವಾರಕ್ಕೆ ದಿಢೀರ್ ಭೇಟಿ ನೀಡಿದ ಅಮಿತ್ ಶಾ, ಅಮಿತಾಬ್ ಬಚ್ಚನ್- ಸಮೋಸ ನೀಡಿ ಸ್ವಾಗತಿಸಿದ ಸರ್ವರ್ ರಾಮು

    ಕಾರವಾರ: ರಾತ್ರೋ ರಾತ್ರಿ ಅಮಿತ್ ಶಾ, ಅಮಿತಾಬ್ ಬಚ್ಚನ್, ಸುದೀಪ್, ಪುನೀತ್ ರಾಜ್ ಕುಮಾರ್ ಕಾರವಾರದ ನಗರದ ಮಾರುತಿ ಗಲ್ಲಿಯ ಬೀದಿಯಲ್ಲಿ ಬಂದು ನಿಂತಿದ್ದರು. ಇವರನ್ನು ನೋಡಲು ಸಾವಿರಾರು ಜನರು ಮುಗಿಬಿದ್ದು, ಇವರ ಜೊತೆ ಸೆಲ್ಫಿ ತಗೆದುಕೊಂಡರು. ಅರೇ ಒಂದೊಂದು ದಿಕ್ಕಿನಲ್ಲಿರುವ ಈ ಗಣ್ಯರು ಒಟ್ಟಿಗೆ ಕಾರವಾರದಲ್ಲಿ ಬಂದಿದ್ದು ಏಕೆ ಅಂತೀರಾ? ಕನ್ಫ್ಯೂಸ್ ಆಗಬೇಡಿ ಇಲ್ಲಿದೆ ವಿಶೇಷ.

    ಪ್ರತಿವರ್ಷ ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಕಾರವಾರ ನಗರದ ಮಾರುತಿ ದೇವಸ್ಥಾನದ ಜಾತ್ರೋತ್ಸವ ನಡೆಯುತ್ತದೆ. ಈ ಜಾತ್ರೋತ್ಸವ ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಕಾರವಾರ ನಗರದಲ್ಲಿಯೇ ಈ ಜಾತ್ರೆ ವಿಶೇಷ ಮಹತ್ವ ಹೊಂದಿದ್ದು, ಜಾತ್ರೆಯ ದಿನ ರಾತ್ರಿ ದೇವರ ಪಲ್ಲಕ್ಕಿ ಮಾರುತಿ ಗಲ್ಲಿ ಹಾಗೂ ಬ್ರಾಹ್ಮಣ ಗಲ್ಲಿಗಳಲ್ಲಿ ಪ್ರದಕ್ಷಿಣೆ ಹಾಕುತ್ತದೆ. ಈ ವೇಳೆ ತಳಿರು ತೋರಣ ಹಾಗೂ ರಂಗೋಲಿ ಬಿಡಿಸಿ ಅನಾದಿಕಾಲದಿಂದಲೂ ದೇವರನ್ನು ಬರಮಾಡಿಕೊಳ್ಳುವುದು ವಾಡಿಕೆ. ಆದರೇ ಇದರ ಜೊತೆಗೆ ಪ್ರತಿ ಮನೆಯ ಮುಂದೆಯೇ ಆಂಜನೇಯನ ಸೇವೆ ರೂಪದಲ್ಲಿ ಒಬ್ಬರಿಗಿಂತ ಒಬ್ಬರು ವಿಶೇಷ ರಂಗೋಲಿ ಬಿಡಿಸುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ.

    ಹೀಗೆ ಬೆಳೆದುಕೊಂಡು ಬಂದ ಸಂಪ್ರದಾಯವನ್ನು ಉಳಿಸಿಕೊಳ್ಳಲು ದೇವಸ್ಥಾನದ ಆಡಳಿತ ವರ್ಗವೇ ರಂಗೋಲಿ ಸ್ಪರ್ಧೆಯನ್ನಿಡುತ್ತದೆ. ರಂಗೋಲಿ ಹಾಕುವುದು, ಸ್ಪರ್ದೆಯಲ್ಲಿ ಗೆಲ್ಲುವುದು ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಇರುವ ಗಲ್ಲಿಯ ಜನರ ಪ್ರತಿಷ್ಠೆಯಾಗಿ ಬದಲಾಯಿತು.

    ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತೆ ರಂಗೋಲಿ:
    ಕಾರವಾರದ ಮಾರುತಿ ಗಲ್ಲಿಯಲ್ಲಿ ರಂಗೋಲಿ ನೋಡುವುದೇ ಒಂದು ಹಬ್ಬದ ಸಂಭ್ರಮ. ಸಂಪ್ರದಾಯಿಕ ರಂಗೋಲಿ ಜೊತೆ ಕೆಲವರು ತಮಗೆ ಇಷ್ಟವಾದ ಚಲನಚಿತ್ರ ನಟ, ರಾಜಕಾರಣಿಗಳ ಚಿತ್ರ ಬಿಡಿಸಿದರೆ, ಇನ್ನೂ ಕೆಲವರು ಸಾಮಾಜಿಕ ಕಳಕಳಿ ಬಿಂಬಿಸುವ ಚಿತ್ರಗಳನ್ನು ಬಿಡಿಸುತ್ತಾರೆ. ಜೊತೆಗೆ ರಂಗೋಲಿ ಬಿಡಿಸುವವರಿಗೆ ಇಷ್ಟವಾದ ಜನರು ಕೂಡ ಈ ಜಾತ್ರೆಯ ದಿನ ಈ ಬೀದಿಯಲ್ಲಿ ರಂಗೋಲಿಯಲ್ಲಿ ಮೂಡುತ್ತಾರೆ.

    ಕಾರವಾರದ ಹೊಟಲ್ ಸರ್ವರ್ ರಂಗೋಲಿಯಲ್ಲಿ:
    ಕಾರವಾರದಲ್ಲಿರುವ ಉಡುಪಿ ಮೂಲದ ಹೋಟಲ್ ಒಂದರಲ್ಲಿ 40 ವರ್ಷಗಳಿಂದ ಸರ್ವರ್ ಆಗಿ ಕೆಲಸ ಮಾಡುತ್ತಿರುವ ರಾಮು ಎಂಬವರ ನಿಸ್ವಾರ್ಥ ಸೇವೆಯನ್ನು ನೋಡಿದ ಕಾರವಾರ ನಗರದ ಮಾರುತಿ ಗಲ್ಲಿಯ ವಸಂತ್ ವಾಡ್ಕರ್‍ರವರು ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಮೂಡಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದ್ದಾರೆ. ಆದರೆ ವಾಡ್ಕರ್ ಹೋಟೆಲ್ ಮಾಲೀಕರಲ್ಲ. ಈ ಹೋಟೆಲ್ ಗೆ ಗ್ರಾಹಕರು. ಆದರೂ ಸರ್ವರ್ ಒಬ್ಬರ ನಿಸ್ವಾರ್ಥ ಸೇವೆಯನ್ನು ಇಲ್ಲಿ ಸ್ಮರಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗುವ ಜೊತೆಗೆ ಸರ್ವರ್ ರಾಮು ಸೆಲಬ್ರಿಟಿಯಾಗಿಬಿಟ್ಟಿದ್ದಾರೆ.

    ಈ ಜಾತ್ರೆಯು ರಾತ್ರಿಯಿಂದ ಮುಂಜಾನೆವರೆಗೆ ನಡೆಯುತ್ತದೆ. ಒಂದೆಡೆ ಈ ಬಾರಿ ದುಬಾರಿಯಾದ ಈರುಳ್ಳಿಯಿಂದ ಮಾಡಿದ ಕಲಾಕೃತಿ, ಧಾನ್ಯ ಕಲಾಕೃತಿ, ಹೂವುಗಳ ರಂಗೋಲಿ ಚಿತ್ರಗಳು ಎಲ್ಲರ ಗಮನ ಸೆಳೆಯಿತು. ಇನ್ನೊಂದೆಡೆ ಯಕ್ಷಗಾನ, ಸಿನಿಮಾ ನಟರ ರಂಗೋಲಿ ಚಿತ್ರಗಳು ಕಲಾವಿದನ ಕೈನಲ್ಲಿ ಅರಳಿ ಎದ್ದು ಬಂದಂತೆ ಭಾಸವಾಗುತಿತ್ತು. ಜಾತ್ರೆ ನೋಡಲು ಕೇವಲ ಕಾರವಾರಿಗರು ಮಾತ್ರ ಇರದೇ ನೆರೆಯ ಗೋವಾ, ಮಹರಾಷ್ಟ್ರ, ರಾಜಸ್ತಾನನಿಂದ ಸಹ ಇಲ್ಲಿಗೆ ಜನರು ಬಂದು ಈ ವಿಶೇಷ ರಂಗೋಲಿ ಜಾತ್ರೆಯನ್ನು ನೋಡಿ ಕಣ್ತುಂಬಿಕೊಂಡರು.

  • ಮಂಡ್ಯಗೆ 5 ಸಾವಿರ ಕೋಟಿ-ಬೆಳಗಾವಿಗೆ ಚಿಲ್ಲರೆ ಕಾಸು

    ಮಂಡ್ಯಗೆ 5 ಸಾವಿರ ಕೋಟಿ-ಬೆಳಗಾವಿಗೆ ಚಿಲ್ಲರೆ ಕಾಸು

    ಬೆಳಗಾವಿ: ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಕೇವಲ ಮೈಸೂರು ಕರ್ನಾಟಕಕ್ಕೆ ಮಾತ್ರ ಸೀಮಿತ ಅನ್ನೋ ಟೀಕೆ ನಡುವೆಯೇ, ಇದನ್ನು ರುಜುವಾತು ಮಾಡಿಸುವ ಘಟನೆ ಬೆಳಕಿಗೆ ಬಂದಿದೆ. ಮಂಡ್ಯಗೆ 5 ಸಾವಿರ ಕೋಟಿ ಬಿಡುಗಡೆ ಮಾಡೋ ಸರ್ಕಾರ, ಬೆಳಗಾವಿಯ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಉತ್ಸವಗಳ ಕಲಾವಿದರಿಗೆ ಲಕ್ಷಾಂತರ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ.

    ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ನಮ್ಮ ದೇಶದ ಹೆಮ್ಮೆ. ಚೆನ್ನಮ್ಮನ ತ್ಯಾಗ ಬಲಿದಾನ ಹಾಗೂ ಸಂಗೊಳ್ಳಿ ರಾಯಣ್ಣನ ಶೌರ್ಯವನ್ನು ಈ ಪೀಳಿಗೆಗೆ ಮುಟ್ಟಿಸಬೇಕೆಂಬ ದೃಷ್ಟಿಯಿಂದ 3 ದಿನಗಳ ಕಾಲ ಪ್ರತಿ ವರ್ಷ ಸರ್ಕಾರ ಉತ್ಸವ ನಡೆಸಿಕೊಂಡು ಬರುತ್ತಿದ್ದು, ಇವು ಕಾಟಾಚಾರಕ್ಕೆ ಸೀಮಿತವಾಗಿವೆ. ಯಾಕಂದ್ರೆ, ಉತ್ಸವದಲ್ಲಿ ಭಾಗವಹಿಸಿರೋ ಕಲವಾವಿದರಿಗೆ 30 ಲಕ್ಷಕ್ಕೂ ಹೆಚ್ಚಿನ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಕಲಾವಿದರ ತಂಡ ಹಾಗೂ ಪೆಂಡಾಲ್ ಸೇರಿದಂತೆ ಇನ್ನಿತರ ಕೆಲಸಗಾರರಿಗೂ ಜಿಲ್ಲಾಡಳಿತ ಹಣ ರಿಲೀಸ್ ಮಾಡಿಲ್ಲ. ಇದರ ಮಧ್ಯೆ ಕಳೆದ ವರ್ಷ ಭಾಗವಹಿಸಿದ್ದ ಕೆಲವು ಕಲಾವಿದರಿಗೆ ನೀಡಲಾಗಿದ್ದ ಚೆಕ್‍ಗಳು ಬೌನ್ಸ್ ಆಗಿವೆ.

    ಸದ್ಯ ಬೆಳವಡಿ ಉತ್ಸವ ಕೂಡ ಫೆ.28, 29 ಎರಡು ದಿನ ನಡೆಯಲಿದೆ. ಹೀಗಾಗಿ ಈ ಉತ್ಸವವೂ ಸಹ ನಿರ್ಲಕ್ಷ್ಯಕ್ಕೊಳಗಾಗಿದೆ. ಇತ್ತ ಕಲಾವಿದರು ಬೈಲಹೊಂಗಲ ಎಸಿ ಶಿವಾನಂದ ಬಳಿ ಹೋದ್ರೇ ಕನ್ನಡ ಸಂಸ್ಕೃತಿ ಇಲಾಖೆಯನ್ನ ಕೇಳಿ ಎನ್ನುತ್ತಿದ್ದಾರೆ. ಇದನ್ನು ಮಾಧ್ಯಮಗಳಿಗೆ ಹೇಳಿದರೆ ಮುಂದಿನ ದಿನಗಳಲ್ಲಿ ಯಾವುದೇ ಅವಕಾಶ ಕೊಡಲ್ಲ ಅಂತಲೂ ಧಮಕಿ ಹಾಕ್ತಿದ್ದಾರೆ.

    ಒಟ್ಟಿನಲ್ಲಿ ಮಂಡ್ಯಗೆ ಮೊನ್ನೆಯಷ್ಟೇ 5 ಸಾವಿರ ಕೋಟಿ ರಿಲೀಸ್ ಮಾಡಿರೋ ದೋಸ್ತಿ ಸರ್ಕಾರ, ಬೆಳಗಾವಿಗ್ಯಾಕೆ ಈ ಪರಿ ತಾರತಮ್ಯ ಮಾಡ್ತಿದೆ ಎಂದು ಕಲಾವಿದರು ಪ್ರಶ್ನೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಲ್ಲಿಂದು ಅಂಬಿಗೆ ನುಡಿನಮನ – ಜನಪ್ರತಿನಿಧಿಗಳು, ಸಿನಿ ತಾರೆಯರು ಆಗಮನ

    ಮಂಡ್ಯದಲ್ಲಿಂದು ಅಂಬಿಗೆ ನುಡಿನಮನ – ಜನಪ್ರತಿನಿಧಿಗಳು, ಸಿನಿ ತಾರೆಯರು ಆಗಮನ

    – 1 ಲಕ್ಷ ಅಭಿಮಾನಿಗಳಿಂದ ಭಾವಪೂರ್ಣ ನಮನ

    ಮಂಡ್ಯ: ಜಿಲ್ಲೆಗೂ ಹಾಗೂ ಅಂಬರೀಶ್ ಅವರಿಗೂ ಕರುಳಬಳ್ಳಿ ಸಂಬಂಧ. ಅಂಬಿ ಅಗಲಿಕೆಯಿಂದ ಕಣ್ಣೀರಾಗಿದ್ದ ಮಂಡ್ಯ ಜನ ಇಂದು ಮಂಡ್ಯದಲ್ಲಿ ಅಂಬಿ ಅವರಿಗೆ ಶ್ರದ್ಧಾಂಜಲಿ, ನುಡಿ ನಮನ ಸಲ್ಲಿಸುತ್ತಿದ್ದಾರೆ. ಅಂಬರೀಶ್ ಪತ್ನಿ ಸುಮಲತಾ ಹಾಗೂ ಮಗ ಅಭಿಷೇಕ್ ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ದಿಗ್ಗಜರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

    ಮಂಡ್ಯ ನಗರದಾದ್ಯಂತ ಎಲ್ಲಿ ನೋಡಿದರೂ ಅಂಬರೀಶ್ ಸ್ಮರಣೆ ನಡೆಯುತ್ತಿದೆ. ತಮ್ಮನ್ನಗಲಿದ ಅಂಬರೀಶ್ ನೆನೆದು ಇಂದಿಗೂ ಕಣ್ಣೀರಾಗುತ್ತಿರುವ ಅವರ ಅಭಿಮಾನಿಗಳು, ಇಂದು ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಂದು ಸಂಜೆ ಐದು ಗಂಟೆ ಸುಮಾರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆರಂಭವಾಗಲಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಲಕ್ಷಾಂತರ ಜನ ಅಂಬರೀಶ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್, ಸಿಎಂ ಕುಮಾರಸ್ವಾಮಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಸೇರಿದಂತೆ ಹಲವು ಜನ ರಾಜಕಾರಣಿಗಳು, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟರಾದ ಶಿವರಾಜ್‍ಕುಮಾರ್, ಜಗ್ಗೇಶ್, ದೊಡ್ಡಣ್ಣ, ನಟ ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್, ಯಶ್ ಸೇರಿದಂತೆ ಹಲವು ಜನ ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದ್ದು, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಖುದ್ದು ಕಾರ್ಯಕ್ರಮ ನೋಡಿಕೊಳ್ಳುತ್ತಿದ್ದಾರೆ.

    ಒಟ್ಟಿನಲ್ಲಿ ಜಿಲ್ಲೆಯ ಜನ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುತ್ತಿರುವ ಅಭಿಮಾನಿಗಳು, ತಮ್ಮ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿರುವ ಅಂಬಿಗೆ ಭಾವಪೂರ್ಣವಾಗಿ ಗೌರವ ಸಲ್ಲಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ಇತಿಹಾಸದಲ್ಲಿ ಅತಿ ದೊಡ್ಡ ಐಟಿ ದಾಳಿ – ಯಾರ ಮನೆ ಮೇಲೆ ದಾಳಿ ನಡೆದಿದೆ?

    ಸ್ಯಾಂಡಲ್‍ವುಡ್ ಇತಿಹಾಸದಲ್ಲಿ ಅತಿ ದೊಡ್ಡ ಐಟಿ ದಾಳಿ – ಯಾರ ಮನೆ ಮೇಲೆ ದಾಳಿ ನಡೆದಿದೆ?

    ಬೆಂಗಳೂರು: ಸ್ಯಾಂಡಲ್‍ವುಡ್ ಮೇಲೆ ಅತಿ ದೊಡ್ಡ ಐಟಿ ದಾಳಿ ನಡೆದಿದೆ. ಬೆಳ್ಳಂಬೆಳ್ಳಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ಕನ್ನಡದ ಹಲವು ಕಲಾವಿದರು, ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಬೆಳ್ಳಂಬೆಳಗ್ಗೆ ಇಂದು 50ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ನಡೆದಿದ್ದು, 200ಕ್ಕೂ ಹೆಚ್ಚು ಅಧಿಕಾರಿಗಳು ಕಲಾವಿದರ, ನಿರ್ಮಾಪಕರ ನಿವಾಸದಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ‘ಕೆಜಿಎಫ್’ ಸಕ್ಸಸ್ ಗುಂಗಿನಲ್ಲಿದ್ದ ನಟ ಯಶ್ ಅವರಿಗೆ ಐಟಿ ಶಾಕ್ ನೀಡಿದೆ. ಬನಶಂಕರಿ ಮೂರನೇ ಹಂತದಲ್ಲಿರುವ ಯಶ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಂದು ಇನ್ನೋವಾ ಗಾಡಿಯಲ್ಲಿ ನಾಲ್ವರು ಅಧಿಕಾರಿಗಳು ಬಂದು ಮನೆ ಪರಿಶೀಲನೆ ಮಾಡುತ್ತಿದ್ದಾರೆ. ಮನೆಯಲ್ಲಿ ತಂದೆ-ತಾಯಿ ಸಮ್ಮುಖದಲ್ಲಿ ಐಟಿ ಅಧಿಕಾರಿಗಳು ಮುಂಜಾನೆಯಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಇದರ ಜೊತೆಯಲ್ಲೇ ಮಲ್ಲೇಶ್ವರಂನಲ್ಲಿರುವ ರಾಧಿಕಾ ಪಂಡಿತ್ ಅವರ ತಂದೆಯ ನಿವಾಸ ಮತ್ತು ಯಶ್ ಸಹೋದರಿ ಮನೆ ಮೇಲೂ ದಾಳಿ ನಡೆದಿದೆ. ಇದನ್ನೂ ಓದಿ: ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್- ಪುನೀತ್, ಯಶ್ ಸೇರಿದಂತೆ ನಿರ್ಮಾಪಕರ ಮನೆ ಮೇಲೆ ದಾಳಿ

    ಸದಾಶಿವ ನಗರದಲ್ಲಿರುವ ಪುನೀತ್ ರಾಜ್‍ಕುಮಾರ್, ನಟಸಾರ್ವಭೌಮ ನಿರ್ಮಾಪಕರಾಗಿರುವ ರಾಕ್ ಲೈನ್ ವೆಂಕಟೇಶ್ ನಿವಾಸ, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ನಿವಾಸದ ಮೇಲೂ ದಾಳಿ ನಡೆದಿದೆ. ನಟರಾದ ಶಿವರಾಜ್‍ಕುಮಾರ್, ಸುದೀಪ್ ನಿವಾಸದ ಮನೆ ಮೇಲೂ ಐಟಿ ದಾಳಿ ನಡೆದಿದೆ.

    ವಿಲನ್ ಚಿತ್ರದ ನಿರ್ಮಾಪಕ, ವಿಧಾನಪರಿಷತ್ ಸದಸ್ಯ ಸಿ.ಆರ್.ಮನೋಹರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸಿ.ಆರ್. ಮನೋಹರ್ ಮೇಲೆ ನಡೆದ ಎರಡನೇ ದಾಳಿ ಇದಾಗಿದ್ದು, ವಿಲನ್ ಚಿತ್ರ ಘೋಷಣೆಯಾದ ಬಳಿಕ ಈ ಹಿಂದೆ ಐಟಿ ದಾಳಿ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷಕ್ಕೆ ಶುಭ ಕೋರಿದ ಬಿಟೌನ್- ಕ್ಷಮೆ ಕೇಳಿದ ಅಮೀರ್ ಖಾನ್

    ಹೊಸ ವರ್ಷಕ್ಕೆ ಶುಭ ಕೋರಿದ ಬಿಟೌನ್- ಕ್ಷಮೆ ಕೇಳಿದ ಅಮೀರ್ ಖಾನ್

    ಮುಂಬೈ: 2018ಗೆ ಟಾಟಾ ಹೇಳಿ ಹೊಸ ವರ್ಷ 2019 ಅನ್ನು ಬಾಲಿವುಡ್ ಕಲಾವಿದರು ಸ್ವಾಗತಿಸಿ ತಮ್ಮ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

    ಬಾಲಿವುಡ್ ಮಿ. ಪರ್ಫೆಕ್ಟ್ ತಮ್ಮ ಟ್ವಿಟ್ಟರಿನಲ್ಲಿ ಈ ವರ್ಷದ ಹೊಸ ರೆಸಲ್ಯೂಶನ್‍ನನ್ನು ಬರೆದು ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿ ಕ್ಷಮೆ ಕೇಳಿದ್ದಾರೆ. ಅಮೀರ್ ಖಾನ್ ತಮ್ಮ ಟ್ವಿಟ್ಟರಿನಲ್ಲಿ, “ಹಾಯ್ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ನೆಮ್ಮದಿ ಹಾಗೂ ಖುಷಿ ಸಿಗಲಿ. ನನ್ನ ಹೊಸ ವರ್ಷದ ರೆಸಲ್ಯೂಶನ್ ಏನೆಂದರೆ ನಾನು ಮೊದಲಿನಂತೆ ಟಾಪ್ ಶೇಪ್‍ಗೆ ಬರಬೇಕು. 2018ರಲ್ಲಿ ತಪ್ಪುಗಳಿಂದ ಕಲಿತಿರುವುದನ್ನು ದಿನನಿತ್ಯ ಅಭ್ಯಾಸ ಮಾಡುವೆ. ಅತ್ಯುತ್ತಮ ಚಿತ್ರ ಮಾಡುವುದು. ಹೊಸ ವಿಷಯಗಳನ್ನು ಕಲಿಯುವುದು ಹಾಗೂ ನನ್ನ ತಾಯಿ, ಪತ್ನಿ ಹಾಗು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದು. ನಾನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಯಾರಿಗಾದರೂ ನೋವು ಮಾಡಿದ್ದರೆ, ನನ್ನನ್ನು ಕ್ಷಮಿಸಿ” ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/aamir_khan/status/1079751736317755392

    ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ಟ್ವೀಟ್ ಮಾಡಿ ಹೊಸ ವರ್ಷಕ್ಕೆ ಶುಭಾಶಯ ತಿಳಿಸಿದ್ದಾರೆ. ಅಮಿತಾಬ್ ತಮ್ಮ ಟ್ವಿಟ್ಟರಿನಲ್ಲಿ, “ಹೊಸ ವರ್ಷದ ಗ್ರೀಟಿಂಗ್ಸ್ ಹಾಗೂ ಖುಷಿ ನಿರಂತವಾಗಿರಲಿ. ಹೊಸ ವರ್ಷ, ಹೊಸ ಹರ್ಷ, ಹೊಸ ಜೀವನ ಉತ್ಕರ್ಷ, ಹೊಸ ದಾರಿ, ಹೊಸ ಗುರಿ, ಜೀವನದ ಹೊಸ ಪ್ರವಾಹ” ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಮಗ ಅಭಿಷೇಕ್ ಬಚ್ಚನ್ “ಎಲ್ಲರಿಗೂ ಹೊಸ ವರ್ಷದ ಶುಭಾಶಯ” ಎಂದು ಟ್ವೀಟ್ ಮಾಡಿದ್ದಾರೆ.

    ನಟ ಸಿದ್ಧಾರ್ಥ್ ಮಲ್ಹೋತ್ರ ಕೂಡ ಟ್ವಿಟ್ಟರಿನಲ್ಲಿ, “ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ದಿನ ರಾತ್ರಿ ಯಾವುದೇ ಪಾರ್ಟಿ ಮಾಡುವುದಿಲ್ಲ. ನಾನು ಇತರರಿಗೆ ಕೆಲಸ ಮಾಡದೇ ಇರುವ ಕೆಲಸಗಳನ್ನು ನಂಬುತ್ತೇನೆ. ನೀವು ನಿಮ್ಮ ದಾರಿಯಲ್ಲಿ ನಡೆಯಿರಿ. ನಿಮ್ಮನ್ನು ನೀವು ನಂಬಿ. ನಿಮ್ಮ ಈ ಪ್ರಯಾಣವನ್ನು ಎಂಜಾಯ್ ಮಾಡಿ. ಎಲ್ಲರಿಗೂ ಗುಡ್ ಲಕ್” ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

    ನಟಿ ಅನುಷ್ಕಾ ಶರ್ಮಾ ತಮ್ಮ ಟ್ವಿಟ್ಟರಿನಲ್ಲಿ ಪತಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆಯಿರುವ ಫೋಟೋವನ್ನು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಅನುಷ್ಕಾ ತಮ್ಮ ಟ್ವಿಟ್ಟರಿನಲ್ಲಿ, “ಶಾಂತಿ, ಭರವಸೆ ತುಂಬಿರುವ ಈ ಹೊಸ ವರ್ಷಕ್ಕೆ ನೀವು ಎಲ್ಲರೂ ಎಚ್ಚರಗೊಂಡಿದ್ದೀರಿ ಎಂದುಕೊಳ್ಳುತ್ತೇನೆ. ಒಬ್ಬರಿಗೊಬ್ಬರು ಸ್ವಲ್ಪ ದಯೆ ತೋರಿಸಿ ನಕ್ಷತ್ರದಂತೆ ಒಬ್ಬರ ಬಾಳಲ್ಲಿ ಬೆಳಕು ಹಾಗೂ ಸೌಂದರ್ಯವನ್ನು ಬೆಳೆಗಿಸೋಣ. ನಮ್ಮ ಕಡೆಯಿಂದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

    ನಟಿ ಶ್ರದ್ಧಾ ಕಪೂರ್ ಕೂಡ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ಖುಷಿ, ನೆಮ್ಮದಿ, ಪ್ರೀತಿ ಹಾಗೂ ಎಲ್ಲಾ ಕೆಲಸ ಅದ್ಭುತವಾಗಲಿ ಎಂದು ಶುಭ ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ನಟಿ ಶಿಲ್ಪಾ ಶೆಟ್ಟಿ ಕೂಡ ತಮ್ಮ ಫೋಟೋವನ್ನು ಹಾಕಿ ಅದಕ್ಕೆ, “ಬಾಯ್ ಬಾಯ್ 2018. ಈಗ ಮಿನುಗುವ ಸಮಯ. ಎಲ್ಲರೂ ಸ್ಪಾರ್ಕಿ 2019ಕ್ಕೆ ರೆಡಿಯಾಗಿದ್ದೀರಿ ಅಂದುಕೊಂಡಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2018ರಲ್ಲಿ ಸಿನಿ ಕುಟುಂಬಕ್ಕೆ ಪಾದಾರ್ಪಣೆ ಮಾಡಿದ ಮುದ್ದು ಕಂದಮ್ಮಗಳು

    2018ರಲ್ಲಿ ಸಿನಿ ಕುಟುಂಬಕ್ಕೆ ಪಾದಾರ್ಪಣೆ ಮಾಡಿದ ಮುದ್ದು ಕಂದಮ್ಮಗಳು

    ಸಿನಿಮಾ ತಾರೆಯರ ಬಗ್ಗೆ ತಿಳಿದುಕೊಳ್ಳಲು ಬಹುತೇಕರು ಇಷ್ಟಪಡುತ್ತಾರೆ. ತೆರೆಯ ಮೇಲೆ ಅಬ್ಬರಿಸಿ, ಬೊಬ್ಬಿರಿಯುವ ತಾರೆಯರ ಖಾಸಗಿ ಜೀವನ ಹೇಗಿರುತ್ತೆ ಎಂಬ ಕುತೂಹಲವನ್ನು ಹೊಂದಿರುತ್ತಾರೆ. 2018ರಲ್ಲಿ ಹಲವು ಕಲಾವಿದರು ಸಾಂಸಾರಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಂತೆಯೇ ಹಲವು ಕಲಾವಿದರು ನಿಜ ಜೀವನದಲ್ಲಿ ಪೋಷಕ ಸ್ಥಾನಕ್ಕೆ ಪದವಿಯನ್ನು ಪಡೆದುಕೊಂಡಿದ್ದಾರೆ. ಈ ವರ್ಷ ತಂದೆ/ತಾಯಿ ಸ್ಥಾನಕ್ಕೆ ಪದವಿ ಪಡೆದ ತಾರೆಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಇದನ್ನೂ ಓದಿ: 2018ರಲ್ಲಿ ಸಿನಿಮಾರಂಗ ಕಳೆದುಕೊಂಡ ಕಲಾವಿದರು

    1. ನಿಖಿತಾ ತುಕ್ರಾಲ್:
    ನಿಖಿತಾ 2016 ಅಕ್ಟೋಬರ್ 16 ರಂದು ಮುಂಬೈ ಮೂಲದ ಉದ್ಯಮಿ ಗಗನ್ ದೀಪ್ ಸಿಂಗ್ ಮಾಗೋ ಅವರನ್ನು ಮದುವೆಯಾಗಿದ್ದರು. ನಿಖಿತಾ ತಮ್ಮ ಮಗುವಿನೊಂದಿಗೆ ಇರುವ ಫೊಟೋವನ್ನು ಫೆಬ್ರವರಿ 28ರಂದು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದರು. ನಿಖಿತಾ ಮಗುವಿಗೆ `ಜಸ್ಮಿರಾ’ ಎಂದು ಹೆಸರಿಟ್ಟಿದ್ದು, ನಿಖಿತಾ ಸ್ಯಾಂಡಲ್‍ವುಡ್ ನಲ್ಲಿ ದರ್ಶನ್, ಸುದೀಪ್ ಮತ್ತು ಪುನೀತ್ ರಾಜ್‍ಕುಮಾರ್ ಸ್ಟಾರ್ ಗಳ ಜೊತೆ ನಾಯಕಿಯಾಗಿ ನಟಿಸಿದ್ದು, ಬಿಗ್ ಬಾಸ್ ಸೀಸನ್ ಒಂದರಲ್ಲಿ ಸ್ಪರ್ಧಿಸಿದ್ದರು.

    2. ಸನ್ನಿ ಲಿಯೋನ್:
    2017ರಲ್ಲಿ ನಿಶಾ ಎಂಬ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದ ಬಾಲಿವುಡ್ ಮಾದಕ ಚೆಲುವೆ ಸನ್ನಿ ಲಿಯೋನ್ ಬಾಡಿಗೆ ತಾಯ್ತನದ ಮೂಲಕ ಮತ್ತೆರಡು ಮಕ್ಕಳಿಗೆ ತಾಯಿಯಾದ್ರು. ಮಾರ್ಚ್ 5ರಂದು ಸನ್ನಿ ಲಿಯೋನ್, ನಾನು ಮತ್ತು ಡೇನಿಯಲ್ ಮಕ್ಕಳಿಗಾಗಿ ಬಾಡಿಗೆ ತಾಯಿಯ ಮೊರೆ ಹೋಗಿದ್ದೇವೆ. ಇಂದು ನಮ್ಮ ಕುಟುಂಬ ಪರಿಪೂರ್ಣವಾಗಿದ್ದು, ಮಕ್ಕಳಿಗೆ ಕಿರೆನ್ ಮತ್ತು ನೋಹಾ ಎಂದು ಹೆಸರಿಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

    3. ಅನು ಪ್ರಭಾಕರ್:
    ಸ್ಯಾಂಡಲ್‍ವುಡ್ ನಟಿ ಅನು ಪ್ರಭಾಕರ್ ಸ್ವಾತಂತ್ರ್ಯ ದಿನಾಚರಣೆಯಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ಅನು ಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ಅವರು 2016 ಏಪ್ರಿಲ್ 25 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ. ಇದನ್ನೂ ಓದಿ: 2018ರ ಸಿನಿ ಲೋಕದ ಸುಂದರ ಪ್ರೇಮ ಕಹಾನಿಗಳು

    4. ಹೇಮಾ ಪಂಚಮುಖಿ:
    ‘ಅಮೆರಿಕಾ ಅಮೆರಿಕಾ’ ಚಿತ್ರದಿಂದ ನಾಯಕಿಯಾಗಿ ಗುರುತಿಸಿಕೊಂಡ ನಟಿ ಹೇಮಾ ಪಂಚಮುಖಿ ಸೆಪ್ಟೆಂಬರ್ ನಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ಹೇಮಾ ಅವರಿಗೆ ಈಗಾಗಲೇ ಒಬ್ಬಳು ಮಗಳಿದ್ದಾಳೆ. ಹೇಮಾ ಭರತನಾಟ್ಯ ಅಭಿನೇತ್ರಿಯಾಗಿದ್ದು, ‘ರಂಗೋಲಿ’ ಚಿತ್ರದ ನಟ ಪ್ರಶಾಂತ್ ಗೋಪಾಲ್ ಅವರ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದರು. ಹೇಮಾ ಅಮೆರಿಕಾ ಅಮೆರಿಕಾ, ದೊರೆ, ಸಂಭ್ರಮ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯಕ್ಕೆ ಹೇಮಾ ಹಾಗೂ ಅವರ ಪತಿ ಪ್ರಶಾಂತ್ ನಾಟ್ಯ ಶಾಲೆ ಮೂಲಕ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ.

    5. ನೇಹಾ ಧುಪಿಯಾ:
    ಮದುವೆಯಾದ ಆರು ತಿಂಗಳಿಗೆ ನಟಿ ನೇಹಾ ಧುಪಿಯಾ ಹೆಣ್ಣು ಮಗುವಿಗೆ ನವೆಂಬರ್ 18ರಂದು ಜನ್ಮ ನೀಡಿದ್ದರು. ನೇಹಾ ಧುಪಿಯಾ ತನ್ನ ಬಹುಕಾಲದ ಗೆಳೆಯ ಅಂಗದ್ ಬೇಡಿ ಜೊತೆ ಮೇ ತಿಂಗಳಲ್ಲಿ ಯಾರಿಗೂ ತಿಳಿಸದೇ ಖಾಸಗಿಯಾಗಿ ನವದೆಹಲಿಯ ಗುರುದ್ವಾರದಲ್ಲಿ ಮದುವೆ ಆಗಿದ್ದರು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಅಂಗದ್ ತಮ್ಮ ಪತ್ನಿ ನೇಹಾ ಗರ್ಭಿಣಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು

    6. ಅಜಯ್ ರಾವ್:
    ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ನವೆಂಬರ್ 23ರಂದು ಹೆಣ್ಣು ಮಗುವಿಗೆ ತಂದೆಯಾದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಸ್ವಪ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಜಯ್ ಅಂದೇ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಫೋಟೋ ಹಾಕಿಕೊಂಡು ತಮ್ಮ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

    7. ಯಶ್:
    ಚಂದನವನದ ಮಿಸ್ಟರ್ ರಾಮಾಚಾರಿ ಡಿಸೆಂಬರ್ 2ರಂದು ಹೆಣ್ಣು ಮಗುವಿನ ತಂದೆಯಾದರು. ಪತ್ನಿ ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಸರಾಗೆ ಅಡ್ಡಿಯಾಗದ ಬರ ಹಂಪಿ ಉತ್ಸವಕ್ಕೆ ಹೇಗೆ ಸಮಸ್ಯೆ ಆಗುತ್ತೆ – ಸರ್ಕಾರದ ವಿರುದ್ಧ ಬಳ್ಳಾರಿಯಲ್ಲಿ ಆಕ್ರೋಶ

    ದಸರಾಗೆ ಅಡ್ಡಿಯಾಗದ ಬರ ಹಂಪಿ ಉತ್ಸವಕ್ಕೆ ಹೇಗೆ ಸಮಸ್ಯೆ ಆಗುತ್ತೆ – ಸರ್ಕಾರದ ವಿರುದ್ಧ ಬಳ್ಳಾರಿಯಲ್ಲಿ ಆಕ್ರೋಶ

    ಬಳ್ಳಾರಿ: ದಸರಾ ಆಚರಣೆಗೆ ಅಡ್ಡಿಯಾಗದ ಬರ ಹಂಪಿ ಉತ್ಸವಕ್ಕೆ ಎದುರಾಗಿದೆಯಾ ಎಂದು ಪ್ರಶ್ನೆ ಮಾಡಿರುವ ಬಳ್ಳಾರಿ ಜನರು ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ನಡೆಸಲೇಬೇಕೆಂದು ಪಟ್ಟು ಹಿಡಿದಿದ್ದು, ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.

    ಉತ್ಸವಕ್ಕೆ ಸರ್ಕಾರ ಹಣ ನೀಡಿದಿದ್ದರೂ ಪರವಾಗಿಲ್ಲ ನಾವೇ ಹಣ ಸಂಗ್ರಹಿಸಿ ಉತ್ಸವ ನಡೆಸುವುದಾಗಿ ಸಾರ್ವಜನಿಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಹೂವಿನಹಡಗಲಿಯ ಮಾಗಳ ಗ್ರಾಮಸ್ಥರು ಸ್ವತಃ ಹಣ ಸಂಗ್ರಹಿಸಿ ಗ್ರಾಮ ಪಂಚಾಯತ್ ಪಿಡಿಓಗೆ ನೀಡಿದ್ದಾರೆ. ಇದಲ್ಲದೇ ಉತ್ಸವ ಅನ್ನುವುದು ನಮ್ಮ ಜಿಲ್ಲೆಯ ಹೆಮ್ಮೆ, ಇದಕ್ಕಾಗಿ ಹಣ ನೀಡಲು ಸಿದ್ಧ ಎನ್ನುತ್ತಿದ್ದಾರೆ.

    ಇದರೊಂದಿಗೆ ಬಳ್ಳಾರಿಯಲ್ಲಿ ಕಲಾವಿದರು ಕೂಡ ಪ್ರತಿಭಟನೆ ನಡೆಸಿದ್ದು, ಉತ್ಸವಕ್ಕೆ ಬಾಲಿವುಡ್ ಕಲಾವಿದರನ್ನ ಕರೆಸದೇ ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶ ನೀಡಿ ಅರ್ಥಪೂರ್ಣವಾಗಿ ಆಚರಿಸಬಹುದು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬರಗಾಲದ ನೆಪ ಒಡ್ಡಿ ಆಚರಣೆಗಳನ್ನು ರದ್ದುಗೊಳಿಸುವುದರಲ್ಲಿ ಅರ್ಥವಿಲ್ಲ. ಬರಗಾಲದ ಸಂದರ್ಭದಲ್ಲೂ ಅನಗತ್ಯ ಹಾಗೂ ಅದ್ಧೂರಿ ಎನಿಸುವ ಖರ್ಚುಗಳಿಗೆ ಲಗಾಮು ಹಾಕಿ ಉತ್ಸವ ನಡೆಸಬಹುದು. ಅಲ್ಲದೇ ಬಾಲಿವುಡ್ ಕಲಾವಿದರನ್ನ ಹಂಪಿ ಉತ್ಸವಕ್ಕೆ ಆಹ್ವಾನ ನೀಡದೇ ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶ ನೀಡಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬಹುದು. ಯಾವುದೇ ಸಂಭಾವನೆ ಪಡೆಯದೇ ಉತ್ಸವದಲ್ಲಿ ಕಾರ್ಯಕ್ರಮ ಕೊಡಲು ಸ್ಥಳೀಯ ಕಲಾವಿದರು ತಯಾರಿದ್ದಾರೆ. ಇಷ್ಟೆಲ್ಲ ಸಾಧ್ಯತೆಗಳಿದ್ದರೂ ಸರ್ಕಾರ ಏಕಾಏಕಿ ಹಂಪಿ ಉತ್ಸವವನ್ನು ರದ್ದುಗೊಳಿಸಿದೆ. ಡಿಸೆಂಬರ್ ತಿಂಗಳಲ್ಲಿ ಉತ್ಸವ ಮಾಡದಿದ್ರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಕಲಾವಿದರು ಎಚ್ಚರಿಸಿದರು.

    https://www.youtube.com/watch?v=Ea6m7EwRnxI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಡಗಿಗಾಗಿ ಮಿಡಿದ ಉಡುಪಿ ಕಲಾವಿದರ ಹೃದಯ – ತ್ರಿವರ್ಣದಿಂದ 50 ಸಾವಿರ ಸಹಾಯಧನ

    ಕೊಡಗಿಗಾಗಿ ಮಿಡಿದ ಉಡುಪಿ ಕಲಾವಿದರ ಹೃದಯ – ತ್ರಿವರ್ಣದಿಂದ 50 ಸಾವಿರ ಸಹಾಯಧನ

    ಉಡುಪಿ: ನೆರೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಕೊಡಗಿನ ಜನತೆಗೆ ಹೇಗೆಲ್ಲಾ ಸಹಾಯ ಮಾಡಲು ಸಾಧ್ಯವಾಗುತ್ತೋ ಅದನ್ನೆಲ್ಲಾ ಜನ ಮಾಡಿದ್ದಾರೆ. ಇದೀಗ ಉಡುಪಿ ಕಲಾವಿದರು ವಿಶೇಷ ರೀತಿಯಲ್ಲಿ ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ.

    ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಕುಂದಾಪುರದ ತ್ರಿವರ್ಣ ಕಲಾಕೇಂದ್ರದ 39 ಯುವ ಕಲಾವಿದರು ಒಂದು ಚಿತ್ರ ಕಲಾ ಪ್ರದರ್ಶನ ಏರ್ಪಡಿಸಿ ಇಲ್ಲಿ ಸಂಗ್ರಹಗೊಂಡ ಹಣವನ್ನು ಕೊಡಗಿಗೆ ನೀಡಲು ಮುಂದಾಗಿದ್ದಾರೆ. ಕಲಾವಿದರು ತಾವು ರಚಿಸಿದ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟು ಬೆಲೆ ನಿಗದಿ ಮಾಡಿ ಮಾಡಿದ್ದರು. ಮಾರಾಟದಲ್ಲಿ ಬಂದ ದುಡ್ಡಿನಲ್ಲಿ ಒಂದು ರೂಪಾಯಿ ಇಟ್ಟುಕೊಳ್ಳದೇ ಎಲ್ಲವನ್ನೂ ಕೊಡಗು ಜಿಲ್ಲೆಗೆ ಕೊಡಲಿದ್ದಾರೆ.

    ಈ ವಿಭಿನ್ನ ಪ್ರಯತ್ನದ ಸಾರಥಿ ಹರೀಶ್ ಸಾಗ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಮ್ಮ ಕಲಾವಿದರು ಹೆಚ್ಚು ಶ್ರೀಮಂತರಲ್ಲ. ಆದರೂ ಕಷ್ಟದಲ್ಲಿ ಇರುವ ಕೊಡಗಿಗೆ ನಮ್ಮ ಕೈಯಿಂದ ಏನು ಸಹಾಯ ಆಗಬಹುದು ಅಂತ ಆಲೋಚನೆ ಮಾಡಿದಾಗ ಈ ಐಡಿಯಾ ಹೊಳೆಯಿತು. ಕಲಾಕೃತಿ ಮಾರಿ ಒಂದು ಲಕ್ಷವಾದರೂ ಕೊಡಬೇಕೆಂದಿತ್ತು. 45 ಸಾವಿರ ರೂಪಾಯಿ ಸಂಗ್ರಹವಾಗಿದೆ. ಸ್ವಲ್ಪ ಹಣ ಒಟ್ಟು ಮಾಡಿ ಕೊಡಗು ಜಿಲ್ಲೆಗೆ 50 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಹೇಳಿದರು.

    ಗೋ ನಿಧಿ ಎಂಬ ಕಾನ್ಸೆಪ್ಟ್ ರೆಡಿ ಮಾಡಿದ ಈ ಟೀಂ, ದೇಶಾದ್ಯಂತ ಗೋವಿನ ರಕ್ಷಣೆ ಆಗಬೇಕು. ಅದರ ಜೊತೆ ಕೊಡಗಿನ ಸಂತ್ರಸ್ತರಿಗೂ ಸಹಾಯವಾಗಬೇಕೆಂದು ಈ ಆಲೋಚನೆಯನ್ನು ಮಾಡಿದ್ದಾರೆ. ಮೂರು ದಿನಗಳ ಕಾಲ ಮಣಿಪಾಲದಲ್ಲಿ ಪ್ರದರ್ಶನ ಮಾಡಿದ್ದು ನಾಲ್ಕೈದು ಕಲೆಗಳಿಗೆ ಬೇಡಿಕೆ ಬಂದಿದೆ. ಹಲವಾರು ಮಾಧ್ಯಮಗಳಲ್ಲಿ ವಿದ್ಯಾರ್ಥಿಗಳು ಕಲಾಕೃತಿ ಬರೆದಿದ್ದು ಗೋವನ್ನೂ ವಿವಿಧ ದೃಷ್ಟಿಕೋನದಲ್ಲಿ ನೋಡಿದ್ದಾರೆ.

    ಕಲಾವಿದೆ ಪವಿತ್ರ ಮಾತನಾಡಿ, ಚಲನಚಿತ್ರ ನಟರು, ಶ್ರೀಮಂತರು ನಾವು ಕೊಟ್ಟ ಮೌಲ್ಯವನ್ನು ಒಬ್ಬರೇ ಕೊಟ್ಟಿರಬಹುದು. ಹನಿಗೂಡಿ ಹಳ್ಳ ಎಂಬಂತೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ. ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮನೋಭಾವನೆ ಎಲ್ಲರಲ್ಲೂ ಬಂದಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಲೆ, ಸಂಸ್ಕೃತಿಗಾಗಿ ಸರ್ಕಾರಿ ನೌಕರಿಗೆ ಗುಡ್‍ಬೈ ಅಂದ್ರು ಹಗರಿಬೊಮ್ಮನಹಳ್ಳಿಯ ರಾಜಾರಾವ್

    ಕಲೆ, ಸಂಸ್ಕೃತಿಗಾಗಿ ಸರ್ಕಾರಿ ನೌಕರಿಗೆ ಗುಡ್‍ಬೈ ಅಂದ್ರು ಹಗರಿಬೊಮ್ಮನಹಳ್ಳಿಯ ರಾಜಾರಾವ್

    ಬಳ್ಳಾರಿ: ರಾಜ್ಯದಲ್ಲಿ ಎಷ್ಟೋ ಮಂದಿ ಎಲೆಮರೆ ಕಾಯಿಯಂತೆ ಕಲಾವಿದರಿದ್ದಾರೆ. ಈ ರೀತಿಯಿದ್ದ ನೂರಾರು ಕಲಾವಿದರನ್ನ ಪ್ರವರ್ಧಮಾನಕ್ಕೆ ಕರೆ ತಂದಿದ್ದು, ಅದಕ್ಕಾಗಿ ಸರ್ಕಾರಿ ಸೇವೆಗೆ ಗುಡ್‍ಬೈ ಹೇಳಿದ್ದಾರೆ ನಮ್ಮ ಪಬ್ಲಿಕ್ ಹೀರೋ.

    ಹಗರಿಬೊಮ್ಮನಹಳ್ಳಿ ನಿವಾಸಿ ತಟ್ಟಿ ರಾಜಾರಾವ್ ಅವರು ಬಳ್ಳಾರಿಯ ಬಹುತೇಕ ಕಲಾವಿದರಿಗೆ ಚಿರಪರಿಚಿತರು. ಗ್ರಾಮೀಣ ಕಲೆ-ಕಲಾವಿದರ ಉಳಿಸಿಲು ಪಣತೊಟ್ಟು, ಸರ್ಕಾರಿ ನೌಕರಿಗೆ ಗುಡ್‍ಬೈ ಹೇಳಿದ್ದಾರೆ. ಪಿಯುಸಿ ಓದಿರುವ ಇವರಿಗೆ 1976ರಲ್ಲಿ ಕೃಷಿ ಇಲಾಖೆಯಲ್ಲಿ ಕೃಷಿ ಸಹಾಯಕರ ಕೆಲಸ ಸಿಕ್ಕಿತ್ತು. ಆದರೆ ವಿಆರ್‍ಎಸ್ ಪಡೆದಿದ್ದಾರೆ. ಕುಕನೂರ ರಹೀಮಾನವ್ವ ನಾಟಕ ಕಂಪನಿ, ಗುಡಿಗೇರಿ ಎನ್ ಬಸವರಾಜರ ನಾಟಕ ಕಂಪನಿ, ಸುಳ್ಳ ದೇಸಾಯಿಯವರ ನಾಟಕ ಕಂಪನಿಗಳಲ್ಲಿ ರಂಗಗೀತೆ, ಜಾನಪದ ಹಾಡುಗಳನ್ನ ಹಾಡುತ್ತಿದ್ದ ಇವರಿಗೆ ಕಲೆಯೇ ಜಗತ್ತು ಆಗಿದೆ.

    ಹಳ್ಳಿ ಹಳ್ಳಿಗಳಲ್ಲಿ ಕಲಾವಿದರನ್ನು ಗುರುತಿಸಿ, ಅವರ ಪ್ರತಿಭೆಯ ಅನಾವರಣಕ್ಕೆ ವೇದಿಕೆ ನಿರ್ಮಿಸಿಕೊಡ್ತಿದ್ದಾರೆ. ಸೋಬಾನೆ ಪದದ ಹಾಡುಗಾರರು, ಸುಡುಗಾಡು ಸಿದ್ದರು, ಡೊಳ್ಳು ಕುಣಿತ, ಬಯಲಾಟ, ದೊಡ್ಡಾಟ, ಕೋಲಾಟ, ಸುಗ್ಗಿ ಹಾಡುಗಳು ಸೇರಿದಂತೆ ಹಳ್ಳಿ ಸೊಗಡಿನ ಕಲಾವಿದರನ್ನು ಕಲಾ ಜಗತ್ತಿಗೆ ಪರಿಚಯಿಸುತ್ತಿದ್ದಾರೆ.

    ಇವರಿಂದ ತರಬೇತಿ ಪಡೆದ ನೂರಾರು ಕಲಾವಿದರು ರಾಜ್ಯದೆಲ್ಲೆಡೆ ಕಲಾಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಮಾಸಾಶನವೂ ಸಿಗುವಂತೆ ಮಾಡಿದ್ದಾರೆ. ರಾಜಾರಾವ್‍ರ ಕಲಾಸೇವೆಗೆ ಪತ್ನಿ ಜ್ಯೋತಿ ಸಹ ಸಾಥ್ ನೀಡಿದ್ದಾರೆ.

    https://www.youtube.com/watch?v=3cSjfiSR810

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • 80ರ ದಶಕದ ಸೌಥ್ ಸ್ಟಾರ್ ಗಳ Get-Together: ಪಾರ್ಟಿಗೆ ಷರತ್ತು ಏನಿತ್ತು ಗೊತ್ತಾ?

    80ರ ದಶಕದ ಸೌಥ್ ಸ್ಟಾರ್ ಗಳ Get-Together: ಪಾರ್ಟಿಗೆ ಷರತ್ತು ಏನಿತ್ತು ಗೊತ್ತಾ?

    ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದ 80ರ ದಶಕದ ಕಲಾವಿದರು ಒಟ್ಟಿಗೆ ಸೇರಿ ಗೆಟ್-ಟು-ಗೆದರ್ ಆಚರಿಸಿದ್ದಾರೆ. ಎರಡು ದಿನಗಳ ಕಾಲ ಚೆನ್ನೈನ ರೆಸಾರ್ಟ್ ಒಂದರಲ್ಲಿ ಆಯೋಜನೆಗೊಂಡಿದ್ದ ಪಾರ್ಟಿಯಲ್ಲಿ 30ಕ್ಕೂ ಹೆಚ್ಚಿನ ಕಲಾವಿದರು ಕುಣಿದು ಸಂಭ್ರಮಿಸಿದ್ದಾರೆ.

    2009ರಲ್ಲಿ ನಟಿ ಸುಹಾಸಿನಿ ಈ ವಿಭಿನ್ನವಾದ ಕಾನ್ಸೆಪ್ಟ್ ಶುರು ಮಾಡಿದ್ದರು. ಇದು ಪ್ರತಿ ವರ್ಷ ನಡೆಯುತ್ತಿದ್ದು, ಎಲ್ಲಾ ತಾರೆಯರು ಗೆಟ್-ಟು-ಗೆದರ್ ಅಲ್ಲಿ ತಪ್ಪದೇ ಭಾಗವಹಿಸುತ್ತಾರೆ. ನವೆಂಬರ್ 17ರಂದು 8ನೇ ವರ್ಷದ ಗೆಟ್-ಟು-ಗೆದರ್ ನಡೆದಿದ್ದು, ಕಲಾವಿದರು ಸನ್ ಗ್ಲಾಸ್, ಹವಯಿಯಾನ್ ಶರ್ಟ್‍ಗಳನ್ನು ಧರಿಸಿ ಬಂದಿದ್ದರು.

    ಪಾರ್ಟಿಯ ಜಾಗವನ್ನು ನೇರಳೆ ಆರ್ಕಿಡ್ ಗಳು, ಬಲೂನ್, ಮುಖವಾಡಗಳು, ಕಾನ್ಫೆಟ್ಟಿ, ಕಲೆ ಮತ್ತು ಕಲಾಕೃತಿಗಳು ಎಲ್ಲಾ ನೀಲಿ ಬಣ್ಣಗಳಿಂದ ತಯಾರಿಸಲಾಗಿತ್ತು. ಕಲಾವಿದರು ಎರಡೂ ದಿನಗಳ ಕಾಲ ಜೊತೆಯಾಗಿದ್ದು ಸಂಭ್ರಮಿಸಿದ್ದಾರೆ.

    ಹಿರಿಯ ನಟರಾದ ಚಿರಂಜೀವಿ, ವೆಂಕಟೇಶ್, ಶರತ್ ಕುಮಾರ್, ಜಾಕಿ ಶ್ರಾಫ್, ನರೇಶ್, ಭಾನು ಚುನ್ದರ್, ಸುರೇಶ್, ಭಾಗ್ಯರಾಜ್ ಜೊತೆ ನಟಿಯರಾದ ರಮ್ಯಕೃಷ್ಣ, ಸುಮಲತಾ, ರಾಧಿಕಾ, ರೇವತಿ, ನದೀಯಾ, ಸುಹಾಸಿನಿ, ಜಯಸುಧಾ, ಖುಷ್ಬೂ ಸೇರಿ ಮತ್ತಷ್ಟು ನಟಿಯರು ಕಾಣಿಸಿಕೊಂಡಿದ್ದಾರೆ.

    ರಾಜಕುಮಾರ್ ಸೆತುಪತಿ ಜೊತೆ ಸೇರಿ ಸುಹಾಸಿನಿ, ಪೂರ್ಣಿಮಾ ಭಾಗ್ಯರಾಜ್ ಹಾಗೂ ಖುಷ್ಬೂ ಈ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು. ಅದ್ಧೂರಿಯಾಗಿ ನಡೆದ ಪಾರ್ಟಿಯಲ್ಲಿ ಎಲ್ಲಾ ತಾರೆಯರೂ ನೀಲಿ ಬಣ್ಣದ ಉಡಪುಗಳನ್ನು ಧರಿಸಿ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ. ಈ ವೇಳೆ ಪುರಷರ ಫ್ಯಾಶನ್ ಶೋ ಕೂಡ ನಡೆದಿದ್ದು, ನಟ ಚಿರಂಜೀವಿ ಗೆದ್ದಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ಈ ಕಾರ್ಯಕ್ರಮದಲ್ಲಿ ರಜನೀಕಾಂತ್, ಅಂಬರೀಶ್, ರಮೇಶ್ ಅರವಿಂದ್, ಪ್ರಭು, ಮೋಹನ್ ಲಾಲ್ ಭಾಗವಹಿಸರಲಿಲ್ಲ.

    ಪಾರ್ಟಿಗೆ ಷರತ್ತು ಏನಿತ್ತು? ಇದು 80ರ ದಶಕದ ಕಲಾವಿದರಿಗೆ ಇರುವ ವಿಶೇಷ ಕಾರ್ಯಕ್ರಮವಾಗಿರುವ ಕಾರಣ, ಬೇರೆ ಯಾರನ್ನು ಬರಲು ಬಿಡುವುದಿಲ್ಲ. ಚಿತ್ರರಂಗದವರು ಆಗಿದ್ದರೆ ಮಾತ್ರ ನಟ ಅಥವಾ ಅವರ ಪತ್ನಿಯರನ್ನು ಬರಲು ಅವಕಾಶವಿದೆ. ಕಲಾವಿದರ ಮನೆಯರನ್ನು ಕರೆತರಲು ಅವಕಾಶವಿಲ್ಲ. ದಕ್ಷಿಣ ಭಾರತದ ಕಲಾವಿದರು ಮಾತ್ರ ಈ ರೀತಿಯ ಪಾರ್ಟಿ ಆಯೋಜಿಸುತ್ತಿದ್ದು, ನಾವೆಲ್ಲ ವಾಟ್ಸಪ್ ನಲ್ಲಿ ಗ್ರೂಪ್ ಮಾಡಿಕೊಂಡು ಪರಸ್ಪರ ಸಂಪರ್ಕದಲ್ಲಿರುತ್ತೇವೆ ಎಂದು ನಟಿ ಸುಹಾಸಿನಿ ತಿಳಿಸಿದ್ದಾರೆ.

    https://twitter.com/SMKSMART/status/932977410957438976

    \