Tag: ಕಲಾತಪಸ್ವಿ ರಾಜೇಶ್

  • ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು

    ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು

    1964ರಲ್ಲಿ ತೆರೆಕಂಡ ವೀರ ಸಂಕಲ್ಪ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ರಾಜೇಶ್ ಅವರು ಆನಂತರ ನೂರಾರು ಚಿತ್ರಗಳಿಗೆ ಬಣ್ಣ ಹಚ್ಚಿದರು. ರಾಜೇಶ್ ಅವರ ಅಪರೂಪದ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ ಹಿರಿಯ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀ ನಾರಾಯಣ ಮತ್ತು ಪ್ರಗತಿ ಅಶ್ವತ್ಥ್ ನಾರಾಯಣ್. ಆ ಚಿತ್ರಗಳು ಇಲ್ಲಿವೆ.  ಇದನ್ನೂ ಓದಿ : ರಾಜೇಶ್ ನಟನೆಯ ಸೂಪರ್ ಹಿಟ್ ಹಾಡುಗಳಿವು

    ಯಲ್ಲಪ್ಪ ಮತ್ತು ಮುನಿಯಮ್ಮ ದಂಪತಿಯ ಪುತ್ರ. ಜನ್ಮನಾಮ ಶ್ರೀರಾಮ್. ರಾಮನವಮಿಯಂದು ರಾಜೇಶ್ ಹುಟ್ಟಿದ್ದ ಕಾರಣಕ್ಕಾಗಿ ರಾಜೇಶ್ ಅವರನ್ನು ತಂದೆ ತಾಯಿ ಶ್ರೀರಾಮ್ ಎಂದೇ ಕರೆಯುತ್ತಿದ್ದರು. ರಂಗಭೂಮಿ ಮತ್ತು ಸಿನಿಮಾ ರಂಗಕ್ಕೆ ಬರುವ ಮುನ್ನ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಹಂಗಾಮಿ ಬೆರಳಚ್ಚುಗಾರನಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ಆಹಾರ ಇಲಾಖೆಯಲ್ಲೂ ಕೆಲ ತಿಂಗಳು ಕಾಲ ಕೆಲಸ ಮಾಡಿದ್ದಾರೆ.  ಇದನ್ನೂ ಓದಿ : ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?

    ರಾಜೇಶ್ ನಟರು ಮಾತ್ರವಲ್ಲ, ಬರಹಗಾರ ಕೂಡ ಆಗಿದ್ದರು. ನಿರುದ್ಯೋಗಿ ಬಾಳು, ಸ್ವಪ್ನಜೀವಿ, ರಕ್ತರಾತ್ರಿ, ದೇವಮಾನ ಸೇರಿದಂತೆ ಸಾಕಷ್ಟು ನಾಟಕಗಳನ್ನು ಅವರು ವಿದ್ಯಾಸಾಗರ್ ಹೆಸರಿನಲ್ಲಿ ಬರೆದಿದ್ದಾರೆ. ಕನ್ನಡ ಸಿನಿಮಾ ರಂಗದ ಅತ್ಯಂತ ಶಿಸ್ತಿನ ನಟ, ಜಂಟಲ್ ಮ್ಯಾನ್ ಕಲಾವಿದ ಮತ್ತು ಶುಭ್ರ ಶ್ವೇತವಸ್ತ್ರಧಾರಿ ನಟನೆಂದೇ ರಾಜೇಶ್ ಫೇಮಸ್. ಸಾರ್ವಜನಿಕವಾಗಿ ಎಂದಿಗೂ ಅವರು ಅಶಿಸ್ತಿನಿಂದ ಕಾಣಿಸಿಕೊಂಡವರಲ್ಲ. ಇದನ್ನೂ ಓದಿ : ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿ


    1964ರಲ್ಲಿ ತೆರೆಕಂಡ ವೀರ ಸಂಕಲ್ಪ ಇವರ ಮೊದಲ ಸಿನಿಮಾ. ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು ‘ವೀರ ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
    ನಮ್ಮ ಊರು , ಗಂಗೆ ಗೌರಿ , ಸತೀ ಸುಕನ್ಯ , ಬೆಳುವಲದ ಮಡಿಲಲ್ಲಿ , ಕಪ್ಪು ಬಿಳುಪು , ಬೃಂದಾವನ , ಬೋರೆ ಗೌಡ ಬೆಂಗಳೂರಿಗೆ ಬಂದ , ಮರೆಯದ ದೀಪಾವಳ , ಪ್ರತಿಧ್ವನಿ , ಕಾವೇರಿ , ದೇವರ ಗುಡಿ , ಬದುಕು ಬಂಗಾರವಾಯ್ತು , ಸೊಸೆ ತಂದ ಸೌಭಾಗ್ಯ ಸೇರಿದಂತೆ 175ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ, ಪೋಷಕ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದಾರೆ.
    ‘ಇವನೇ ನನ್ನ ನಲ್ಲ’, ‘ಎಂದೆಂದೂ ಹೀಗೆ ನಗಬೇಕು’, ‘ನೋಟಕೆ ನೋಟ ಮಸೆಯೋನೆ’, ‘ನಂಬಿ ಯಾರನೋ ಮೈಗೆ ಮೈ ಸೋಕಿದಾಗ’, ‘ಎಲ್ಲರ ಕಾಯೋ ದೇವರೆ ನೀನು’, ‘ನಾನೇ ಎಂಬ ಭಾವ ನಾಶವಾಯಿತೋ’, ‘ಈ ದೇಶ ಚೆನ್ನ ಈ ಮಣ್ಣು ಚಿನ್ನ’, ‘ಕಂಗಳು ವಂದನೆ ಹೇಳಿವೆ’ ಮುಂತಾದ ಜನಪ್ರಿಯ ಹಾಡುಗಳನ್ನು ನೆನೆದಾಗ ತಟ್ಟನೆ ರಾಜೇಶ್ ಕಣ್ಮುಂದೆ ಬಂದು ನಿಲ್ಲುತ್ತಾರೆ.

    ಫೋಟೋ ಕೃಪೆ : ಭವಾನಿ ಲಕ್ಷ್ಮೀ ನಾರಾಯಣ ಮತ್ತು ಪ್ರಗತಿ ಅಶ್ವತ್ಥ್ ನಾರಾಯಣ್.

  • ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?

    ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?

    ಇಂದು ಅಗಲಿರುವ ಹಿರಿಯ ನಟ ರಾಜೇಶ್ ಅವರ ನಿಜವಾದ ಹೆಸರು ಮುನಿ ಚೌಡಪ್ಪ. ಅವರನ್ನು ವಿದ್ಯಾಸಾಗರ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ಇವರ ನಟನೆಯ ಮೊದಲ ಸಿನಿಮಾದ ಟೈಟಲ್ ಕಾರ್ಡ್ ನಲ್ಲೂ ವಿದ್ಯಾಸಾಗರ್ ಎಂದೇ ಇದೆ. ಈ ಸಿನಿಮಾದ ನಂತರ ಅವರ ಹೆಸರು ರಾಜೇಶ್ ಅಂತಾಯಿತು. ಹೀಗೆ ಹೆಸರು ಬದಲಾಯಿಸಿದವರು ಕನ್ನಡದ ಖ್ಯಾತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ. ಇದನ್ನೂ ಓದಿ : ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿ


    ರಾಜೇಶ್ ಅವರು ಸಿನಿಮಾ ರಂಗಕ್ಕೆ ಬಂದಿದ್ದು ಆಕಸ್ಮಿಕ ಏನೂ ಅಲ್ಲ. ವಿದ್ಯಾಸಾಗರ್ ಹೆಸರಿನಲ್ಲಿ ಆಗಲೇ ಅವರು ರಂಗಭೂಮಿಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಈ ಜನಪ್ರಿಯತೆಯೇ ಅವರನ್ನು ಸಿನಿಮಾ ರಂಗಕ್ಕೆ ಕರೆದು ತಂದಿತ್ತು. 1964ರಲ್ಲಿ ತೆರೆಕಂಡ ವೀರ ಸಂಕಲ್ಪ ಇವರ ಮೊದಲ ಸಿನಿಮಾ. ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು ‘ವೀರ ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಇದನ್ನೂ ಓದಿ : ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ


    ರಾಜೇಶ್ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಸಿನಿಮಾ ಸಿ.ವಿ.ಶಿವಶಂಕರ್ ನಿರ್ದೇಶಿಸಿದ ‘ನಮ್ಮ ಊರು’ ಚಿತ್ರ. ಈ ಚಿತ್ರದಿಂದ ಅವರ ವೃತ್ತಿ ಬದುಕಿಗೆ ಮತ್ತೊಂದು ತಿರುವು ಸಿಕ್ಕಿದೆ. ಅಲ್ಲಿಂದ ಅವರು ಈವರೆಗೂ ನಮ್ಮ ಊರು , ಗಂಗೆ ಗೌರಿ , ಸತೀ ಸುಕನ್ಯ , ಬೆಳುವಲದ ಮಡಿಲಲ್ಲಿ , ಕಪ್ಪು ಬಿಳುಪು , ಬೃಂದಾವನ , ಬೋರೆ ಗೌಡ ಬೆಂಗಳೂರಿಗೆ ಬಂದ , ಮರೆಯದ ದೀಪಾವಳ , ಪ್ರತಿಧ್ವನಿ , ಕಾವೇರಿ , ದೇವರ ಗುಡಿ , ಬದುಕು ಬಂಗಾರವಾಯ್ತು , ಸೊಸೆ ತಂದ ಸೌಭಾಗ್ಯ ಸೇರಿದಂತೆ 175ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ, ಪೋಷಕ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದಾರೆ.

  • ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿ

    ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿ

    ನ್ನಡದ ಹಿರಿಯ ಚೇತನ, ಕಲಾತಪಸ್ವಿ ರಾಜೇಶ್ ಅವರ ನಿಧನ ಕನ್ನಡ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ. 88ರ ವಯಸ್ಸಿನಲ್ಲೂ ಅವರ ನಟನಾ ಉತ್ಸಾಹ ತಗ್ಗಿರಲಿಲ್ಲ. ಕಳೆದ ವರ್ಷವಷ್ಟೇ ಅವರು ಶ್ರೀನಿ ನಿರ್ದೇಶನ ಮಾಡಿ ನಟಿಸಿರುವ ಓಲ್ಡ್ ಮಾಂಕ್ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈ ಕುರಿತು ನಿರ್ದೇಶಕ ಶ್ರೀನಿ ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿ, ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ನೆಗಟಿವ್ ಪಾತ್ರ ಮಾಡಲ್ಲ
    ನಿರ್ದೇಶಕ ಶ್ರೀನಿ ಅವರು ರಾಜೇಶ್ ಅವರನ್ನು ಭೇಟಿ ಮಾಡಲು ಮನೆಗೆ ಹೋದಾಗ, ಮೊದಲು ರಾಜೇಶ್ ಕೇಳಿದ್ದು ತಮ್ಮದು ಯಾವ ರೀತಿಯ ಪಾತ್ರ? ಎಂದು. ಕಥೆ ಹೇಳಿದ ಮೇಲೆ, ನಾನು ಯಾವುದೇ ಕಾರಣಕ್ಕೂ ನೆಗೆಟಿವ್ ರೀತಿಯ ಪಾತ್ರ ಮಾಡಲಾರೆ ಎಂದು ಬಿಟ್ಟಿದ್ದರಂತೆ. ಈ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುವಂತಹ ಕ್ಯಾರೆಕ್ಟರ್ ನಲ್ಲಿ ನಾನು ನಟಿಸಲಾರೆ ಎಂದಿದ್ದರು ರಾಜೇಶ್. ಅಷ್ಟರ ಮಟ್ಟಿಗೆ ಅವರು ಪಾತ್ರದ ಬಗ್ಗೆ ಎಚ್ಚರಿಕೆ ತಗೆದುಕೊಂಡಿದ್ದರು.  ಇದನ್ನೂ ಓದಿ : ಕಲಾ ತಪಸ್ವಿ ರಾಜೇಶ್‌ ವಿಧಿವಶ

    ನೆನಪಿನ ಶಕ್ತಿ ಅದ್ಭುತ
    ಈ ಇಳಿ ವಯಸ್ಸಿನಲ್ಲೂ ರಾಜೇಶ್ ಅವರು ಅದ್ಭುತ ನೆನಪಿನ ಶಕ್ತಿಯನ್ನು ಹೊಂದಿದ್ದರು ಎಂದು ಶ್ರೀನಿ ನೆನಪಿಸಿಕೊಳ್ಳುತ್ತಾರೆ. “ರಾಜೇಶ್ ಅವರ ಪಾತ್ರ ಅತಿಥಿಯಾಗಿದ್ದರೂ, ದೊಡ್ಡ ದೊಡ್ಡ ಡೈಲಾಗ್ ಗಳನ್ನು ಬರೆದಿದ್ದೆ. ಅವರದ್ದು ಅದ್ಭುತ ಮೆಮರಿ ಪವರ್. ಉದ್ದನೆಯ ಡೈಲಾಗ್ ಹೇಳಿದ ತಕ್ಷಣವೇ ಪಟ ಪಟ ಅಂತ ಹೇಳಿ ಬಿಡುತ್ತಿದ್ದರು. ಅದೆಷ್ಟೇ ದೊಡ್ಡ ಸಂಭಾಷಣೆ ಇದ್ದರೂ ಕ್ಷಣ ಮಾತ್ರದಲ್ಲೇ ತಯಾರಿ ಆಗುತ್ತಿದ್ದರು” ಎಂದರು ಶ್ರೀನಿ. ಇದನ್ನೂ ಓದಿ: ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ

    ಹೀಗಿಯೇ ಗೆಟಪ್ ಇರಬೇಕು ಅಂತ ತಾಕೀತು
    ರಾಜೇಶ್ ಅವರಿಗೆ ನಿರ್ದೇಶಕ ಶ್ರೀನಿ ಓಲ್ಡ್ ಮಾಂಕ್ ಸಿನಿಮಾದ ಕಥೆ ಹೇಳಿದ ಮೇಲೆ, ತಕ್ಷಣವೇ ಪಾತ್ರದಲ್ಲಿ ತಲ್ಲೀಣರಾದರಂತೆ ಹಿರಿಯ ಜೀವ. ಪಾತ್ರಕ್ಕೆ ಇಂಥದ್ದೇ ಗೆಟಪ್ ಇರಬೇಕು, ಲುಕ್ಸ್ ಕೂಡ ಹೀಗಿಯೇ ಆಗಿರಬೇಕು. ಅದಕ್ಕೆ ಕಾಸ್ಟ್ಯೂಮ್ ಈ ರೀತಿಯಲ್ಲಿ ಹೊಂದಾಣಿಕೆ ಆಗಬೇಕು ಎಂದು ತಮ್ಮ ಪಾತ್ರದ ಬಗ್ಗೆ ತಾವೇ ಚಹರಿ ಹೇಳುವ ಮೂಲಕ ಸ್ವತಃ ನಿರ್ದೇಶಕರನ್ನೇ ಅಚ್ಚರಿಗೆ ದೂಡಿದ್ದರಂತೆ ರಾಜೇಶ್.