Tag: ಕರ್ನಾಟಕ ಬಂದ್

  • ಯಡಿಯೂರಪ್ಪ ಸರ್ಕಾರದಿಂದ ಆತ್ಮಹತ್ಯೆ ಭಾಗ್ಯ ಅಂದ್ರು ಡಿವಿಎಸ್ – ವೇದಿಕೆಯಲ್ಲಿದ್ದ ಬಿಎಸ್‍ವೈ ತಬ್ಬಿಬ್ಬು

    ಯಡಿಯೂರಪ್ಪ ಸರ್ಕಾರದಿಂದ ಆತ್ಮಹತ್ಯೆ ಭಾಗ್ಯ ಅಂದ್ರು ಡಿವಿಎಸ್ – ವೇದಿಕೆಯಲ್ಲಿದ್ದ ಬಿಎಸ್‍ವೈ ತಬ್ಬಿಬ್ಬು

    ಮೈಸೂರು: ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ 3.5 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಮುಖ್ಯಮಂತ್ರಿ ನಮಗೆ ಬೇಕಾ ಎಂದು ಪ್ರಶ್ನಿಸಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಎಡವಟ್ಟು ಮಾಡಿಕೊಂಡಿದ್ದಾರೆ.

    ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಎಂದು ಹೇಳುವ ಭರದಲ್ಲಿ ಬಿಎಸ್‍ವೈ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಡಿವಿಎಸ್ ಈ ರೀತಿ ಹೇಳಿದ್ದನ್ನು ನೋಡಿ ವೇದಿಕೆಯಲ್ಲಿದ್ದ ಬಿಎಸ್ ಯಡಿಯೂರಪ್ಪ ಒಮ್ಮೆ ತಬ್ಬಿಬ್ಬು ಆದರು.

    ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತಾ ಅಂದ್ರೆ ಕನಸಲ್ಲೂ ಗಡಗಡ ನಡುಗುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ದೊಡ್ಡ ಕಾರ್ಯಕ್ರಮಗಳನ್ನು ನಡೆಸುತ್ತಿರುವಾಗಲೇ ಬಂದ್ ನಡೆಸಲು ಪ್ರೇರಣೆ ನೀಡಿದ್ದಾರೆ. ಮಹದಾಯಿ ವಿಚಾರವಾಗಿ ಉತ್ತರ ಕರ್ನಾಟಕದಲ್ಲಿ ಬಂದ್ ಮಾಡೋದು ಅಥವಾ ರಾಜಧಾನಿಯಲ್ಲಿ ಬಂದ್ ಮಾಡೋದು ಸ್ವಾಭಾವಿಕ. ಆದರೆ ಬಿಜೆಪಿಯ ದೊಡ್ಡ ಕಾರ್ಯಕ್ರಮ ಇದೆ ಎಂದು ಬಂದ್ ಮಾಡುತ್ತಿರುವ ಉದ್ದೇಶವೇ ಸಿದ್ದರಾಮಯ್ಯ ಅವರ ಕಾಗ್ರೆಸ್ ಪ್ರೇರಿತ ಬಂದ್ ಆಗಿದೆ ಅಂತಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ನಾಲ್ಕೂವರೆ ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಏನೂ ಮಾಡಿಲ್ಲ. ಹೀಗಾಗಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಅವರಿಗೆ ಗೊತ್ತಾಗಿದ್ದರಿಂದ ಸಿದ್ದರಾಮಯ್ಯ ಈ ರೀತಿ ಮಾಡುತ್ತಿದ್ದಾರೆ. ಈ ರೀತಿಯ ರಾಜಕೀಯ ದ್ವೇಷ ಒಳ್ಳೆಯದಲ್ಲ. ಒಂದು ದೇಶದ ಪ್ರಧಾನಿ ರಾಜ್ಯಕ್ಕೆ ಬರುವಾಗ ಶಾಂತಿ ಸುವ್ಯವಸ್ಥೆ ಕಾಪಾಡುವ ಬದಲು ರಾಜಕೀಯ ದ್ವೇಷ ಮಾಡೋದು ಸರಿಯಲ್ಲ. ಇದು ಅವರಿಗೇ ತಿರುಗುಬಾಣ ಆಗುತ್ತದೆ. ಮಹದಾಯಿ ಹೋರಾಟಗಾರರು ಮತ್ತು ಉತ್ತರ ಕರ್ನಾಟಕದ ಜನ ನಮ್ಮ ಪರವಾಗಿದ್ದು ಕನ್ನಡ ಪರ ಹೋರಾಟಗಾರರೇ ಬಂದ್‍ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸದಾನಂದ ಗೌಡ ಆಕ್ರೋಶ ಹೊರಹಾಕಿದ್ರು.

    ಅಧಿಕಾರಿಗಳನ್ನು ಪದೇ ಪದೇ ವರ್ಗಾವಣೆ ಮಾಡುವುದರಿಂದ ಅವರಿಗೆ ಕೆಲಸ ಮಾಡಲು ಆಗಲ್ಲ. ಅಧಿಕಾರಿಗಳ ಮೇಲೆ ಸವಾರಿ ಮಾಡುತ್ತ, ಸ್ವ ಇಚ್ಚೆಯಂತೆ ಕುಣಿಸುವುದರಿಂದ ಆಡಳಿತ ಕೆಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

    https://www.youtube.com/watch?v=TOEgUo27GjM

  • ಪ್ರಧಾನಿ ಮೋದಿಗೆ ಕರ್ನಾಟಕ ರಾಜ್ಯ ಗೊತ್ತೇ ಇಲ್ಲ: ವಾಟಾಳ್ ನಾಗರಾಜ್

    ಪ್ರಧಾನಿ ಮೋದಿಗೆ ಕರ್ನಾಟಕ ರಾಜ್ಯ ಗೊತ್ತೇ ಇಲ್ಲ: ವಾಟಾಳ್ ನಾಗರಾಜ್

    ದಾವಣಗೆರೆ: ಕಳಸಾ ಬಂಡೂರಿ ವಿಷಯದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ರಾಜ್ಯ ಗೊತ್ತಿಲ್ಲ. ಆದ್ರೆ ಕರ್ನಾಟಕದ ಅಕ್ಕ ಪಕ್ಕದ ರಾಜ್ಯಗಳು ಗೊತ್ತಿವೆ. ನಮ್ಮ ಸಮಸ್ಯೆಗಳನ್ನು ಸಹ ಕೇಳುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅಸಮಧಾನ ಹೊರ ಹಾಕಿದ್ರು.

    ಮೋದಿಯವರು ಕಳಸಾ ಬಂಡೂರಿಯ ಮಧ್ಯಸ್ಥಿಕೆ ವಹಿಸಿದ್ರೆ ಕರ್ನಾಟಕ ಬಂದ್ ಕೈ ಬಿಡಲಾಗುವುದು. ಜನವರಿ 25 ಕ್ಕೆ ಸಮಗ್ರ ಕರ್ನಾಟಕ ಬಂದ್ ಗೆ ತಯಾರಿ ನಡೆದಿದ್ದು, 2000 ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ನಮ್ಮ ಸಮಸ್ಯೆಗಳನ್ನು ಸಂಸದರು ಕೇಂದ್ರ ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡುತ್ತಿಲ್ಲ. ಕೂಡಲೇ ಪ್ರದಾನ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು, ಇಲ್ಲವಾದ್ರೆ 25ರಂದು ಕರ್ನಾಟಕ ಬಂದ್ ಹಾಗೂ ಫೆಬ್ರವರಿ 4 ರಂದು ಬೆಂಗಳೂರು ಬಂದ್ ಮಾಡಿ ಪ್ರಧಾನಿಗಳಿಗೆ ಬಿಸಿ ಮುಟ್ಟುವಂತೆ ಮಾಡುತ್ತೇವೆ ಅಂತಾ ಹೇಳಿದ್ರು.

    ಕನ್ನಡಿಗರನ್ನು ಹರಾಮಿಗಳು ಎಂದು ಗೋವಾ ಸಚಿವ ಕರೆದಿದ್ದಾರೆ. ಅವರನ್ನು ಯಾರು ಕರ್ನಾಟಕಕ್ಕೆ ಬನ್ನಿ ಎಂದು ಕರೆದವರು ಯಾರು, ಗೋವಾ ಮುಖ್ಯಮಂತ್ರಿ ಪ್ರಾಮಾಣಿಕತೆಯ ನಂಬಿಕೆ ಕಳ್ಕೊಂಡಿದ್ದಾರೆ. ನಮ್ಮನ್ನ ಹರಾಮಿಗಳು ಎಂದು ಕರೆಯಲು ಅವರ್ಯಾರು, ಮತ್ತೊಮ್ಮೆ ಈ ರೀತಿ ಹೇಳಿದ್ರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಗೋವಾ ಸಚಿವರ ವಿರುದ್ಧ ಕಿಡಿಕಾರಿದ್ರು.

  • ರಾಜ್ಯದ ಜನತೆಗೆ ಸಾಲು ಸಾಲು ರಜೆಯ ಭಾಗ್ಯವನ್ನು ಕೊಟ್ಟ ವಾಟಾಳ್ ನಾಗರಾಜ್

    ರಾಜ್ಯದ ಜನತೆಗೆ ಸಾಲು ಸಾಲು ರಜೆಯ ಭಾಗ್ಯವನ್ನು ಕೊಟ್ಟ ವಾಟಾಳ್ ನಾಗರಾಜ್

    ಬೆಂಗಳೂರು: ಅನ್ನ ಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ಇನ್ನಿತರ ಭಾಗ್ಯಗಳನ್ನು ನೀವು ಕೇಳಿರಬಹುದು. ಆದರೆ ಈಗ ವಾಟಾಳ್ ನಾಗರಾಜ್ ಅವರು ರಾಜ್ಯದ ಜನತೆಗೆ ರಜೆಯ ಭಾಗ್ಯವನ್ನು ಕೊಟ್ಟಿದ್ದಾರೆ. ಮಹದಾಯಿ ವಿವಾದ ಬಗೆಹರಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಜನವರಿ 27 ರಂದು ಕರೆ ನೀಡಿದ್ದ ಬಂದ್ ದಿನಾಂಕ ದಿಢೀರ್ ಬದಲಾಗಿದ್ದು ಜನವರಿ 25 ರಂದು ನಡೆಸಲು ಮುಂದಾಗಿವೆ.

    ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್ ನಾಗರಾಜ್ ಪ್ರಧಾನಿ ಮೋದಿ ಅವರು ಜನವರಿ 28 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹದಾಯಿ ವಿಚಾರದಲ್ಲಿ ಅವರ ಮೌನವನ್ನು ಖಂಡಿಸಿ ಮತ್ತಿ ಶೀಘ್ರ ವಿವಾದ ಇತ್ಯರ್ಥಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಮೋದಿ ಭೇಟಿಯ ಮುನ್ನ ದಿನವಾದ ಜ.27 ರಂದು ಬಂದ್ ನಡೆಸುತ್ತಿರುವುದಾಗಿ ಹೇಳಿದ್ದರು.  ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಈ ಸುದ್ದಿಗೋಷ್ಠಿ ನಡೆದು ಒಂದು ದಿನ ಕಳೆಯುವಷ್ಟರಲ್ಲಿ ಗುರುವಾರ ಸಂಜೆ ದಿಢೀರ್ ಸುದ್ದಿಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್ ಸಾಲು ಸಾಲು ರಜೆಯ ಹಿನ್ನಲೆಯಲ್ಲಿ ಬಂದ್ ದಿನಾಂಕವನ್ನು ಬದಲಾವಣೆ ಮಾಡಿದ್ದು, ಇದೇ 25 ರಂದು ಕರೆ ನೀಡಿರುವುದಾಗಿ ತಿಳಿಸಿದ್ದಾರೆ.

    ಸಾಲು ಸಾಲು ರಜೆಗಳು: ಜನವರಿ 26 ಶುಕ್ರವಾರ ಗಣರಾಜ್ಯೋತ್ಸವ, 27 ನಾಲ್ಕನೇಯ ಶನಿವಾರ ಆಗಿರುವ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಶನಿವಾರ ಖಾಸಗಿ ಕಂಪೆನಿಗಳಿಗೂ ರಜೆ ಇರುತ್ತದೆ. ಇನ್ನು ಭಾನುವಾರ ಹೇಗೂ ವಾರದ ರಜೆ. ಈ ಮಧ್ಯೆ ಈಗ 25ಕ್ಕೆ ಕರ್ನಾಟಕ ಬಂದ್ ನಡೆಸಲು ತೀರ್ಮಾನಿಸಲಾಗಿದೆ. ಗುರುವಾರ ನಡೆಯಲಿರುವ ಬಂದ್ ಬೆಂಬಲ ನೀಡದ ಜನರಿಗೆ ಒಟ್ಟಿನಲ್ಲಿ ದೀರ್ಘ ರಜೆ ಸಿಗಲಿದೆ. ಹೀಗಾಗಿ ಜನವರಿ 25ರಂದು ನಡೆಯುವ ಬಂದ್ ಗೆ ಜನ ಹೇಗೆ ಬೆಂಬಲ ನೀಡುತ್ತಾರೆ ಎನ್ನುವ ಪ್ರಶ್ನೆ ಈಗ ಎದ್ದಿದೆ. ಇದನ್ನೂ ಓದಿ: ಕರ್ನಾಟಕದ ಜನರೇ ಮತ್ತೊಂದು ಬಂದ್‍ಗೆ ರೆಡಿಯಾಗಿ

    ಗೋವಾ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್, ಪರಿಕ್ಕರ್ ಒಬ್ಬ ನಾಲಾಯಕ್. ಅವರು ಗ್ರಾಮ ಪಂಚಾಯತ್ ಸದಸ್ಯರಾಗಲು ಆರ್ಹರಲ್ಲ. ಅವರೊಬ್ಬ ಬೇಜವಾಬ್ದಾರಿ ಮುಖ್ಯಮಂತ್ರಿಯಾಗಿದ್ದು, ಮಹದಾಯಿ ವಿಚಾರದಲ್ಲಿ ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ ಬರೆಯಬೇಕಿತ್ತು. ಗೋವಾ ಸಿಎಂ ಯಡಿಯೂರಪ್ಪಗೆ ಪತ್ರ ಬರೆದದ್ದು ತಪ್ಪು. ಗೋವಾ ಸಿಎಂ ಯಾವ ಆಧಾರದದಲ್ಲಿ ಪತ್ರ ಬರೆದಿದ್ದಾರೆ ಎನ್ನುವುದಕ್ಕೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.

    ಈ ವೇಳೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್ ಅವರು, ಕರ್ನಾಟಕ ಬಂದ್ ಗೆ ಚಿತ್ರರಂಗ ಕೂಡ ಸಂಪೂರ್ಣ ಬೆಂಬಲ ನೀಡಲಿದೆ. ಅಂದು ಯಾವುದೇ ಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣ ಸೇರಿದಂತೆ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಇರುವುದಿಲ್ಲ. ಪ್ರಧಾನಿ ಮೋದಿ ಕರ್ನಾಟಕದ ಕುಡಿಯೋ ನೀರಿನ ಬಗ್ಗೆ ಮೌನವಾಗಿದ್ದಾರೆ. ಕರ್ನಾಟಕದ ಜನರು ಮೋದಿಯವರ ಗುಲಾಮರಲ್ಲ. ಮಹದಾಯಿ ಯೋಜನೆಯನ್ನು ಮೋದಿಯವರು ಕಡೆಗಣಿಸಿದ್ದಾರೆ. ಹೀಗಾಗಿ ಮೋದಿ ರಾಜ್ಯಕ್ಕೆ ಬರುವ ದಿನ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿ ತೀವ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜನವರಿ 31ರ ಒಳಗಡೆ ಮಹದಾಯಿ ವಿವಾದ ಇತ್ಯರ್ಥಗೊಳಿಸಿ: ರಾಜಕೀಯ ಪಕ್ಷಗಳಿಗೆ ಡೆಡ್‍ಲೈನ್

    ಬಿಜೆಪಿಯ 75 ದಿನಗಳ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ನವೆಂಬರ್ 2ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಚಾಲನೆ ನೀಡಿದ್ದರು. ಯಾತ್ರೆಯ ಸಮಾರೋಪ ಸಮಾರಂಭ ಜನವರಿ 28ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ. ಇದನ್ನೂ ಓದಿ:  ಮಹದಾಯಿ ನದಿ ಮೇಲೆ 3 ರಾಜ್ಯದ ಹಕ್ಕಿದೆ, ಬೇರೆ ನದಿಪಾತ್ರಕ್ಕೆ ನೀರು ಹರಿಸಲು ಸಾಧ್ಯವಿಲ್ಲ: ಮನೋಹರ್ ಪರಿಕ್ಕರ್


     
  • ಜನವರಿ 27ರಂದು ಕರ್ನಾಟಕ ಬಂದ್

    ಜನವರಿ 27ರಂದು ಕರ್ನಾಟಕ ಬಂದ್

    ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಮುನ್ನ ದಿನಾವದ ಜನವರಿ 27 ಶನಿವಾರದಂದು ಮಹದಾಯಿಗಾಗಿ ಕರ್ನಾಟಕ ಬಂದ್ ನಡೆಸಲು ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.

    ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಇದೇ 28ರಂದು ಬರುವಾಗ ದೊಡ್ಡ ಹೋರಾಟ ಮಾಡಬೇಕು. ಈ ಕುರಿತು ಎಲ್ಲಾ ಕನ್ನಡ ಸಂಘಟನೆಯವರಿಗೆ ಕರೆ ಕೊಡ್ತೀನಿ. ಕನ್ನಡಿಗರ ಶಕ್ತಿ ಪ್ರದರ್ಶನ ಮಾಡೋಣ. ನನ್ನ ಬೆಂಬಲ ಇಲ್ಲ ಅಂತಾ ಕೆಲ ಸಂಘಟನೆಯವರು ಹೇಳಬಾರದು. ಕಳೆದ ಬಾರಿಯ ರೀತಿ ಈ ಬಾರಿ ಆಗಬಾರದು. ಕರವೇ ನಾರಾಯಣ ಗೌಡರಿಗೂ ಕರೆ ಕೊಡುತ್ತಿದ್ದೇನೆ, ನಮ್ಮ ಹೋರಾಟಕ್ಕೆ ಕೈ ಜೋಡಿಸಬೇಕು. ಮೋದಿಗೆ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಬೆಳಗ್ಗೆ 6ರಿಂದ ಸಂಜೆ 6ರ ತನಕ ಬಂದ್ ಹಾಗೂ ಹೋರಾಟ ನಡೆಯಲಿದ್ದು, ಕರ್ನಾಟಕ ಸರ್ಕಾರವೂ ನಮ್ಮ ಬಂದ್ ಗೆ ಬೆಂಬಲ ಕೊಡಬೇಕು. ಇನ್ನು ಮಂಗಳೂರು, ಉಡುಪಿ ಜನರು ನಮ್ಮ ಮೇಲಿನ ಮುನಿಸು ಬಿಟ್ಟು ದಯವಿಟ್ಟು ಈ ಬಾರಿಯ ಹೋರಾಟಕ್ಕೆ ಬೆಂಬಲ ಕೊಡಿ. ಈ ಬಾರಿಯ ಕನ್ನಡಿಗರ ಶಕ್ತಿ ಮೋದಿಗೆ ಮುಟ್ಟಲೇ ಬೇಕು ಅಂತ ಮನವಿ ಮಾಡಿಕೊಂಡರು. ಇದನ್ನೂ ಓದಿ: ಜನವರಿ 31ರ ಒಳಗಡೆ ಮಹದಾಯಿ ವಿವಾದ ಇತ್ಯರ್ಥಗೊಳಿಸಿ: ರಾಜಕೀಯ ಪಕ್ಷಗಳಿಗೆ ಡೆಡ್‍ಲೈನ್

    ಇನ್ನು ಈ ಸಂಬಂಧ ಚಿತ್ರ ಪ್ರದರ್ಶನ ಚಿತ್ರೀಕರಣ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದ್ ಹೇಳಿದರು. ಇದನ್ನೂ ಓದಿ:  ಮಹದಾಯಿ ನದಿ ಮೇಲೆ 3 ರಾಜ್ಯದ ಹಕ್ಕಿದೆ, ಬೇರೆ ನದಿಪಾತ್ರಕ್ಕೆ ನೀರು ಹರಿಸಲು ಸಾಧ್ಯವಿಲ್ಲ: ಮನೋಹರ್ ಪರಿಕ್ಕರ್

    ಬಿಜೆಪಿಯ 75 ದಿನಗಳ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ನವೆಂಬರ್ 2ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಚಾಲನೆ ನೀಡಿದ್ದರು. ಯಾತ್ರೆಯ ಸಮಾರೋಪ ಸಮಾರಂಭ ಜನವರಿ 28ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ.

  • ಮಂಗಳೂರು ಚಲೋಗೆ ‘ಹ್ಯಾಂಡ್’ ಬ್ರೇಕ್: ಶನಿವಾರ ಕರ್ನಾಟಕ ಬಂದ್?

    ಮಂಗಳೂರು ಚಲೋಗೆ ‘ಹ್ಯಾಂಡ್’ ಬ್ರೇಕ್: ಶನಿವಾರ ಕರ್ನಾಟಕ ಬಂದ್?

    ಬೆಂಗಳೂರು: ಯುವ ಮೋರ್ಚಾದ ಮಂಗಳೂರು ಚಲೋ ಬೈಕ್ ರ‍್ಯಾಲಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ರಾಜ್ಯ ಬಿಜೆಪಿ ನಾಯಕರು ಸೆಪ್ಟೆಂಬರ್ 9 ರಂದು ಕರ್ನಾಟಕ ಬಂದ್ ನಡೆಸಲು ಚಿಂತನೆ ನಡೆಸಿದ್ದಾರೆ.

    ಬೆಂಗಳೂರು ಮತ್ತು ರಾಜ್ಯದ ಹಲವು ಕಡೆಗಳಲ್ಲಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಮವನ್ನು ಟೀಕಿಸಿ ಬಂದ್ ಕರೆ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

    ಏನಿದು ಮಂಗಳೂರು ಚಲೋ? ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಿಂದೆ ಪಿಎಫ್‍ಐ ಸಂಘಟನೆ ಭಾಗಿಯಾಗಿದ್ದು, ಇದನ್ನು ನಿಷೇಧಿಸುವ ಸಲುವಾಗಿ ಸೆಪ್ಟೆಂಬರ್ 7 ರಂದು ಬಿಜೆಪಿ ಯುವಾ ಮೋರ್ಚಾ ಮಂಗಳೂರು ಚಲೋವನ್ನು ಆಯೋಜಿಸಿತ್ತು. ಕೆಎಫ್ ಡಿ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಈ ರ‍್ಯಾಲಿಯನ್ನು ಬಿಜೆಪಿ ಆಯೋಜಿಸಿತ್ತು.

    https://youtu.be/6vmiYWGCGow

    https://youtu.be/VO7l6AMHDww

    https://youtu.be/CDVIA-TBxKk

    https://twitter.com/ShobhaBJP/status/904911381194915840

     

     

  • ಕರ್ನಾಟಕ ಬಂದ್ ವಿಫಲಗೊಂಡಿದ್ದು ಯಾಕೆ?

    ಕರ್ನಾಟಕ ಬಂದ್ ವಿಫಲಗೊಂಡಿದ್ದು ಯಾಕೆ?

    ಬೆಂಗಳೂರು: ಕನ್ನಡ ಒಕ್ಕೂಟಗಳು ಕರೆ ಕೊಟ್ಟಿದ್ದ ಕರ್ನಾಟಕ ಬಂದ್‍ಗೆ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ಕೋಲಾರ ಹುಬ್ಬಳ್ಳಿಯಲ್ಲಿ ಬಂದ್ ಬಿಸಿ ಹೆಚ್ಚಿತ್ತೇ ವಿನಾಃ ಮತ್ಯಾವ ಜಿಲ್ಲೆಯಲ್ಲೂ ಬಂದ್ ಬಿಸಿ ಕಾಣಲಿಲ್ಲ.

    ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ, ಎತ್ತಿನಹೊಳೆ, ಮಹದಾಯಿ, ಮೇಕೆದಾಟು ಯೋಜನೆ ಆಗ್ರಹಿಸಿ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದರು. ಆದರೆ ಕನ್ನಡ ಒಕ್ಕೂಟ ಈ ಉದ್ದೇಶವನ್ನ ಆಗ್ರಹಿಸಿದ ರೀತಿಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾದ ಕಾರಣ ಬಂದ್ ವಿಫಲವಾಗಿದೆ.

    ವಿಫಲವಾಗಲು ಕಾರಣ ಏನು?
    1. ವಾಟಾಳ್ ನಾಗರಾಜ್ ಮೊದಲು ಕರ್ನಾಟಕ ಬಂದ್ ಎಂದು ಘೋಷಿಸಿ ನಂತರ ಕನ್ನಡ ಸಂಘಟನೆಗಳ ಜೊತೆ ಚರ್ಚೆ ನಡೆಸುತ್ತಾರೆ ಎನ್ನುವ ಆರೋಪ.
    2. ಎಲ್ಲಾ ಸಮಸ್ಯೆಗಳಿಗೂ ಬಂದ್ ಪರಿಹಾರ ಎಂಬಂತೆ ಬಳಕೆಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.

    3. ಹೋರಾಟದ ಮೊದಲ ಹಂತವಾಗಿ ಸಂಬಂಧಪಟ್ಟ ಇಲಾಖೆಗಳ ಸಚಿವರುಗಳ ಜೊತೆ ಸರಿಯಾದ ಚರ್ಚೆ ಆಗದೇ ಇರುವುದು.
    4. ಬೆಂಗಳೂರಿನಲ್ಲಿ ಕೂತು ನಿರ್ಧಾರ ಮಾಡುವ ನಾಯಕರುಗಳು, ರಾಜ್ಯದ ಪ್ರದೇಶವಾರು ಸಂಘ ಸಂಸ್ಥೆಗಳನ್ನ ಪರಿಗಣಿಸುತ್ತಿಲ್ಲ, ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.

    5. ಏನೇ ಆದ್ರೂ ಕೊನೆಗೆ ಜನರ ಮೇಲೆಯೇ ಬಂದ್ ಬರೆ ಬೀಳತ್ತೆ ಎನ್ನುವ ನಿರ್ಧಾರಕ್ಕೆ ಬಂದಿರುವ ಜನ ಬಂದ್ ಬೆಂಬಲಿಸುತ್ತಿಲ್ಲ.
    6. ವಿಶೇಷವಾಗಿ ಕರ್ನಾಟಕ ಬಂದ್ ವಿಚಾರ ಬಂದಾಗ ಬಹಳಷ್ಟು ಜನ ಕನ್ನಡಪರ ಕಳಕಳಿ ಹೊಂದಿರುವ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಂದ್ ಬೆಂಬಲಿಸಿ ಪೋಸ್ಟ್/ಟ್ವೀಟ್ ಗಳನ್ನು ಹಾಕುತ್ತಿದ್ದರು. ಆದರೆ ಈ ಬಾರಿ ಕರೆ ನೀಡಿದ ಬಂದ್‍ಗೆ ಈ ವ್ಯಕ್ತಿಗಳು ಹೆಚ್ಚಿನ ಆಸಕ್ತಿ ತೋರಿಸದೇ ಬಂದ್ ವಿರೋಧಿಸಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

    ಇದನ್ನೂ ಓದಿ: ಬೆಂಗಳೂರು ಗುತ್ತಿಗೆಯನ್ನು ನಾರಾಯಣ ಗೌಡರೇ ತೆಗೆದುಕೊಳ್ಳಲಿ: ವಾಟಾಳ್

    ಇದನ್ನೂ ಓದಿ: ಕರ್ನಾಟಕವನ್ನು ವಾಟಾಳ್‍ಗೆ ಬರೆದುಕೊಟ್ಟಿಲ್ಲ- ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾಗ್ದಾಳಿ

     

    https://youtu.be/5fg4AvaKFmM

    https://youtu.be/QUgrRVs1kEo

    https://youtu.be/RtwzcEjVDT0

  • ಕೋಲಾರ ಬಂದ್ ಬಿಸಿ: ಊಟಕ್ಕೆ ಮದುವೆ ಮನೆಗಳಿಗೆ ಎಂಟ್ರಿ ಕೊಟ್ಟ ಪ್ರತಿಭಟನಾಕಾರರು

    ಕೋಲಾರ ಬಂದ್ ಬಿಸಿ: ಊಟಕ್ಕೆ ಮದುವೆ ಮನೆಗಳಿಗೆ ಎಂಟ್ರಿ ಕೊಟ್ಟ ಪ್ರತಿಭಟನಾಕಾರರು

    ಕೋಲಾರ: ಇಂದು ಕನ್ನಡಪರ ಸಂಘಟನೆಗಳು ನೀಡಿದ್ದ `ಕರ್ನಾಟಕ ಬಂದ್’ಗೆ ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆದರೆ ಬಹುತೇಕ ಮದುವೆಗೆ ಬರಬೇಕಾದ ಜನ ಬರದೇ ಮಂಟಪಗಳು ಬಿಕೋ ಎನ್ನುತ್ತಿದ್ದವು.

    ನಗರದ ವಕೀಲ ಕೋದಂಡಪ್ಪನವರ ಮಗ ವೀರೇಂದ್ರ ಹಾಗೂ ಚಿತ್ರಾ ಎಂಬವರ ಮದುವೆಗೂ ಬಂದ್ ಬಿಸಿ ತಟ್ಟಿತ್ತು. ಬಂದ್‍ನಿಂದಾಗಿ ಮದುವೆಗಳಿಗೆ ಬರಬೇಕಾದ ಬಂಧುಗಳು ಹಾಗು ಸ್ನೇಹಿತರು ಬರದೇ ಇದ್ದಿದರಿಂದ ಕಲ್ಯಾಣ ಮಂಟಪಗಳು ಜನರಿಲ್ಲದೇ ಖಾಲಿ ಖಾಲಿಯಾಗಿತ್ತು.

    ಬಂಧುಗಳು ಬರದೇ ಇದಿದ್ದರಿಂದ ಮಾಡಿದ್ದ ಅಡುಗೆ ಹಾಗೆಯೇ ಉಳಿದಿತ್ತು. ಮದುವೆ ಮನೆಯವರ ಆಹ್ವಾನದ ಮೇರೆಗೆ ಹೋರಾಟಗಾರರೆಲ್ಲರೂ ಬಂದು ಊಟ ಮಾಡಿದ್ದಾರೆ. ಪ್ರತಿಭಟನೆ ಮಾಡಿ ಸುಸ್ತಾಗಿದ್ದ ಪ್ರತಿಭಟನಾಕಾರರು ರುಚಿಯಾದ ಊಟ ಮಾಡಿ ತಮ್ಮ ಹಸಿವು ನೀಗಿಸಿಕೊಂಡರು.

    https://www.youtube.com/watch?v=8OR7M716AWI

     

     

  • ಕರ್ನಾಟಕ ಬಂದ್ ಯಶಸ್ವಿಯಾಗಿದೆ, ಬೆಂಗಳೂರು ಗುತ್ತಿಗೆಯನ್ನು ನಾರಾಯಣ ಗೌಡರೇ ತೆಗೆದುಕೊಳ್ಳಲಿ: ವಾಟಾಳ್

    ಕರ್ನಾಟಕ ಬಂದ್ ಯಶಸ್ವಿಯಾಗಿದೆ, ಬೆಂಗಳೂರು ಗುತ್ತಿಗೆಯನ್ನು ನಾರಾಯಣ ಗೌಡರೇ ತೆಗೆದುಕೊಳ್ಳಲಿ: ವಾಟಾಳ್

    ಬೆಂಗಳೂರು: ಸೋಮವಾರ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

    ಟೌನ್‍ಹಾಲ್ ಮುಂದುಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರಲ್ಲಿ ಯಾವುದೇ ನಿರುತ್ಸಾಹ ಇಲ್ಲ, ಜನರು ಇಷ್ಟಪಟ್ಟು ಬಂದ್‍ನಲ್ಲಿ ಭಾಗವಹಿಸಿದ್ದಾರೆ ಬೆಂಗಳೂರಿನಲ್ಲಿ ಎರಡು ಮೂರು ಬಸ್ ಓಡಿದ ಮಾತ್ರಕ್ಕೆ ಬಂದ್ ಯಶಸ್ವಿಯಾಗಿಲ್ಲ ಎಂದು ಹೇಳುವುದು ಸರಿಯಲ್ಲ ಎಂದರು.

    ಮಹಾದಾಯಿ ಮತ್ತು ರೈತರ ಸಾಲಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಹೀಗಾಗಿ ಬಂದ್ ಮೂಲಕ ಕೇಂದ್ರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಮಂಗಳವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೇಂದ್ರದ ಭೂತವನ್ನು ಸುಡುತ್ತೇವೆ ಎಂದು ವಾಟಾಳ್ ಹೇಳಿದಾಗ ಮಾಧ್ಯಮವರು ಪ್ರತಿಬಾರಿಯೂ ನೀವು ಕೇಂದ್ರದ ವಿರುದ್ಧವೇ ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

    ಈ ಪ್ರಶ್ನೆಗೆ, ವಾಟಾಳ್ ಬಂದ್ ವಿಫಲಗೊಳಿಸಲು ನೀವು ಕಾರಣ, ನೀವು ಅಪ್ರಚಾರ ಮಾಡಿದ್ದೀರಿ. ವಸ್ತುಸ್ಥಿತಿ ಹೇಳಬೇಕು ಎಂದರು. ಮಾಧ್ಯಮಗಳು ಮರುಪ್ರಶ್ನೆ ಹಾಕಿ ಮಾರ್ಕೆಟ್ ಬಂದ್ ಆಗಿಲ್ಲ, ಬಸ್ ಸಂಚರಿಸುತ್ತಿದೆ.ಕನ್ನಡ ಸಂಘಟನೆಗಳ ಮಧ್ಯೆ ಒಡಕು ಇದೆ. ನಾರಾಯಣ ಗೌಡರು ನಿಮ್ಮ ವಿರುದ್ಧವೇ ಮಾತನಾಡಿದ್ದಾರೆ ಎಂದು ಮರು ಪ್ರಶ್ನೆ ಹಾಕಿದರು.

    ನಮ್ಮಲ್ಲಿ ಯಾವುದೇ ಒಡಕು ಇಲ್ಲ. ನಾರಾಯಣ ಗೌಡರ ಭಾಷೆಯನ್ನು ನಾನು ಬಳಸುವುದಿಲ್ಲ. ಬೇಕಾದರೆ ಬೆಂಗಳೂರಿನ ಗುತ್ತಿಗೆಯನ್ನು ಅವರೇ ತೆಗೆದುಕೊಳ್ಳಲಿ. ಒಂದು ತಿಂಗಳಲ್ಲಿ ಅವರು ಕರ್ನಾಟಕ ಬಂದ್ ಕರೆಯಲಿ. ಕನ್ನಡಿಗರು ಕನ್ನಡಿಗರಲ್ಲಿ ಭಿನ್ನಾಭಿಪ್ರಾಯ ಬೇಡ. ಇವತ್ತು ಎಲ್ಲರೂ ನಮ್ಮ ಜೊತೆ ಬನ್ನಿ. ಎಲ್ಲರೂ ಒಟ್ಟಿಗೆ ಹೋಗಿ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದರು.

    ರಾಜ್ಯ ಸರ್ಕಾರ ಕಾರಣ: ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಬಂದ್ ಹತ್ತಿಕ್ಕುವ ಕೆಲಸ ನಡೆಸಿದೆ. 500 ಮಂದಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. 2 ಸಾವಿರ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವತ್ತು ರಾಹುಲ್ ಗಾಂಧಿ ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಸರ್ಕಾರ ಬಂದ್ ಹತ್ತಿಕ್ಕಲು ಮುಂದಾಗಿದ್ದು, ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

    ಕನ್ನಡಕ್ಕೆ ಹೋರಾಡುತ್ತೇನೆ: ನಾನು ಯಾವತ್ತೂ ಕನ್ನಡಕ್ಕಾಗಿ ಹೋರಾಡುತ್ತೇನೆ. ನಾನು ಏಕಾಂಗಿಯಾಗಿ 5 ಬಾರಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆ ಆಗಿದ್ದೇನೆ. ಹೊಂದಾಣಿಕೆ ಮಾಡಿಕೊಂಡಿದ್ದರೆ ನಾನು ಮಂತ್ರಿ, ಮುಖ್ಯಮಂತ್ರಿಯಾಗುತ್ತಿದ್ದೆ. ಕಳೆದ 53 ವರ್ಷಗಳಿಂದ ನಾನು ಹೋರಾಡುತ್ತಿದ್ದೇನೆ ಎಂದು ತಿಳಿಸಿದರು.

    ಬೃಹತ್ ಮೆರವಣಿಗೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾರಾ ಗೋವಿಂದು, ಕುಮಾರ್ ಸೇರಿದಂತೆ ನೂರಾರು ಮಂದಿಯನ್ನು ಕಾರ್ಪೋರೇಷನ್ ವೃತ್ತದಲ್ಲಿ ತಡೆದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದರು.

    ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಪ್ರವೀಣ್ ಶೆಟ್ಟಿ ಮತ್ತು ಅವರ ಬಣದ ನೂರಾರು ಕಾರ್ಯಕರನ್ನು ಮೆಖ್ರಿ ವೃತ್ತದಲ್ಲಿಯೇ ತಡೆದ ಪೊಲೀಸರು, ಅವರನ್ನು ವಶಕ್ಕೆ ಪಡೆದರು.

    ಇದನ್ನೂ ಓದಿ: ಕರ್ನಾಟಕವನ್ನು ವಾಟಾಳ್‍ಗೆ ಬರೆದುಕೊಟ್ಟಿಲ್ಲ- ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾಗ್ದಾಳಿ

  • ಕರ್ನಾಟಕವನ್ನು ವಾಟಾಳ್‍ಗೆ ಬರೆದುಕೊಟ್ಟಿಲ್ಲ- ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾಗ್ದಾಳಿ

    ಕರ್ನಾಟಕವನ್ನು ವಾಟಾಳ್‍ಗೆ ಬರೆದುಕೊಟ್ಟಿಲ್ಲ- ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾಗ್ದಾಳಿ

    ಬೆಂಗಳೂರು: ಬಂದ್ ಗೆ ಬೆಂಬಲ ನೀಡದವರು ಕನ್ನಡ ವಿರೋಧಿಗಳು ಅಂತಾ ತೀರ್ಮಾನ ಮಾಡಲು ವಾಟಾಳ್ ನಾಗರಾಜ್ ಅವರಿಗೆ ಕರ್ನಾಟಕವನ್ನು ಬರೆದುಕೊಟ್ಟಿಲ್ಲ. ಕನ್ನಡದ ಕೆಲಸ ಮಾಡುವವರೆಲ್ಲರೂ ಕನ್ನಡಾಭಿಮಾನಿಗಳೇ ಅಂತಾ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾಗ್ದಾಳಿ ನಡೆಸಿದ್ದಾರೆ.

    ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ-ಕಳಸಾ ಬಂಡೂರಿ ಯೋಜನೆಯ ತ್ವರಿತ ಜಾರಿ, ಮೇಕೆದಾಟು ಯೋಜನೆ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ಹತ್ತಾರು ವಿಷಯಗಳನ್ನು ಮುಂದಿಟ್ಟುಕೊಂಡು ಇಂದು ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಬಂದ್‍ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾರಾಯಣ ಗೌಡ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ಯಾರೋ ಒಬ್ಬ ಕನ್ನಡ ಚಳವಳಿ ಅಥವಾ ಹೋರಾಟದಲ್ಲಿ ಭಾಗವಹಿಸಿಲ್ಲ ಅಂದ ತಕ್ಷಣ ಆತ ಕನ್ನಡ ವಿರೋಧಿಯಾಗಲು ಸಾಧ್ಯವಿಲ್ಲ. ಕರ್ನಾಟದಲ್ಲಿ ಕನ್ನಡದ ಬಗ್ಗೆ ಅಭಿಮಾನವಿರುವ ಎಲ್ಲರೂ ಕನ್ನಡಾಭಿಮಾನಿಗಳೇ ಆಗಿರುತ್ತಾರೆ. ಹೋರಾಟಗಾರರಷ್ಟೇ ಕನ್ನಡದ ಅಭಿಮಾನಿಗಳು, ಕನ್ನಡದ ಪರವಾಗಿ ಇರುವವರು ಅಂತಾ ಅರ್ಥ ಅಲ್ಲ. ನಮಗಿಂತಲೂ ಚೆನ್ನಾಗಿ ಕನ್ನಡವನ್ನು ಪ್ರೀತಿಸೋರು, ಬಲ್ಲವರು ಇದ್ದಾರೆ ಅಂತಾ ಹೇಳಿದ್ರು.

    ಬಂದ್‍ನಲ್ಲಿ ಸಫಲರು ಯಾರು, ವಿಫಲರು ಯಾರು ಅಂತಾ ಹೇಳೋದಕ್ಕಿಂತ ಎಲ್ಲ ಸಂದರ್ಭಗಳಲ್ಲೂ ಜನ ನಾವು ಹೇಳಿದ ಹಾಗೇ ಕೇಳ್ತಾರೆ ಅನ್ನೋ ಅಹಂಕಾರದ ಗುಣ ಸರಿಯಾದ ಕ್ರಮವಲ್ಲ. ಇದನ್ನು ಜನರ ಪರವಾದ ಬಂದ್ ಅಂತಾ ಹೇಗೆ ಹೇಳ್ತೀರಿ. ಜನರ ಪರವಾದ ಬಂದ್ ಅಂತಾ ಆದ್ರೆ ಜನಈ ಬಂದ್ ಸ್ವೀಕರಿಸುತ್ತಿದ್ದರು ಅಂತಾ ಹೇಳಿದ್ರು.

    ಇದನ್ನೂ ಓದಿ: ಕೋಲಾರದಲ್ಲಿ ಸರ್ಕಾರಿ ಬಸ್‍ಗೆ ಕಲ್ಲು- ತೆಲುಗು ನಟ ನಂದಮೂರಿ ತಾರಕರತ್ನ ಕಾರಿಗೆ ತಡೆ


    ಸಂಸದರಿಗೆ ಬಿಸಿ ಮುಟ್ಟಿಸಿ: ಹೋರಾಟಗಾರರಿಗೆ ನಾನಾ ರೀತಿಯ ಹೋರಾಟದ ಮಾರ್ಗಗಳಿರುತ್ತವೆ. ಎಲ್ಲೋ ಒಂದು ಬಾರಿ ಜನ ನಮಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಅಂದ್ರೆ ಅದನ್ನು ದುರುಪಯೋಗಪಡಿಸಿಕೊಳ್ಳೋದು ಸರಿಯಲ್ಲ. ಪ್ರತೀ ಸಾರಿನೂ ಬಂದ್ ಬಂದ್ ಅಂತಾ ಕುಳಿತುಕೊಂಡ್ರೆ ಶ್ರೀ ಸಾಮಾನ್ಯರ ಮೇಲೆ ಆಗುವ ಪರಿಣಾಮದ ಹೊಣೆಯನ್ನು ಯಾರು ಹೊತ್ತು ಮಾತನಾಡಲು ಸಾಧ್ಯವಿದೆ? ಕೇಂದ್ರಕ್ಕೆ ಮುಟ್ಟಿಸಲು ನಮ್ಮ ರಾಜ್ಯದಿಂದ 28 ಜನ ಲೋಕಸಭಾ ಸದಸ್ಯರನ್ನು ಈಗಾಗಲೇ ಕಳುಹಿಸಿಕೊಟ್ಟಿದ್ದೇವಲ್ವಾ. ಹೀಗಾಗಿ ಕೇಂದ್ರಕ್ಕೆ ಮುಟ್ಟಿಸಬೇಕಾದ್ರೆ ಮೊದಲು ಅವರಿಗೆ ಬಿಸಿ ಮುಟ್ಟಿಸಬೇಕು. ಅವರ ಮನೆ ಮುಂದೆ ಹೋಗಿ ಧರಣಿ ಮಾಡೋಣ. ಈ ಮೂಲಕ ಅವರನ್ನು ಎಚ್ಚರಗೊಳಿಸೋಣ. ರಾಜ್ಯದ ಸಮಸ್ಯೆಯ ಬಗ್ಗೆ ಜಾಗೃತಿಗೊಳಿಸೋಣ. ಕೇಂದ್ರಕ್ಕೆ ಯಾವ ರೀತಿ ರಾಜ್ಯದ ಸಮಸ್ಯೆಯನ್ನು ಮುಟ್ಟಿಸಬೇಕು ಅದೇ ರೀತಿ ತಲುಪಿಸೋಣ. ಇಲ್ಲವೇ ಸಾವಿರಾರು ಸಂಖ್ಯೆಯಲ್ಲಿ ದೆಹಲಿಗೆ ಹೋಗಿ ಅಲ್ಲಿಯ ಜಂತರ್ ಮಂತರ್ ಮುಂದೆ ಕುಳಿತು ಪ್ರತಿಭಟನೆ ಮಾಡೋಣ ಅಂತಾ ತಿಳಿ ಹೇಳಿದ್ರು.

    ಪ್ರತಿಷ್ಠೆ ಬಿಡಿ, ಒಮ್ಮತವಿರಲಿ: ಯಾವುದೇ ಒಂದು ಹೋರಾಟಕ್ಕೂ ಒಮ್ಮತವಿರಬೇಕು. ಒಗ್ಗಟ್ಟಿನಿಂದ ನಾವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಪ್ರತೀ ಬಾರಿನೂ ನಾನು ಇದೇ ಮಾತನ್ನ ಹೇಳ್ತಾ ಇದ್ದೀನಿ. ನಾವು ನಮ್ಮ ಪ್ರತಿಷ್ಠೆಗಳನ್ನು ಬಿಟ್ಟು ಒಮ್ಮತದ ಹೋರಾಟ ಮಾಡೋಣ. ರಾಜ್ಯದ ಜನರ ಹಿತಕ್ಕೋಸ್ಕರ ಪ್ರತಿಭಟನೆಗಳನ್ನು ಮಾಡಬೇಕಾದ್ರೆ ನಾವು ನಮ್ಮ ಪ್ರತಿಷ್ಠೆಗಳನ್ನು ಬಿಟ್ಟು ಬಿಡಬೇಕು. ಒಟ್ಟಿನಲ್ಲಿ ಒಗ್ಗಟ್ಟಿನಿಂದ ಈ ನಾಡು ಕಟ್ಟುವ ಕೆಲಸ ಮಾಡಬೇಕು. ಒಮ್ಮತ ಅಂದ್ರೆ ನನ್ನಿಂದ, ನಾನು, ನನ್ನ ಮಾತನ್ನು ಎಲ್ಲರೂ ಕೇಳಬೇಕು ಅನ್ನೋ ಪ್ರತಿಷ್ಠೆ ಬಿಟ್ಟು ಬಿಡಬೇಕು ಅಂದ್ರು.

    ಇದನ್ನೂ ಓದಿ: ಕರ್ನಾಟಕ ಬಂದ್: ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಗೆ ನೋಟಿಸ್

     

    ಬಂದ್‍ಗೆ ವಿರೋಧವಿಲ್ಲ: ಇಂದಿನ ರಾಜ್ಯ ಬಂದ್ ಗೆ ನಾನು ವಿರೋಧ ವ್ಯಕ್ತಪಡಿಸುತ್ತಿಲ್ಲ. ಬದಲಾಗಿ ನನಗೆ ಬಂದ್ ಇಷ್ಟ ಇಲ್ಲ. ಅದಕ್ಕಾಗಿ ನಾನು ಬಂದ್ ನಿಂದ ದೂರ ಉಳಿದ್ದೀನಿ. ಆದ್ರೆ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕಾರ್ಯಕರ್ತರಿಗೆ ಕರೆ ಮಾಡಿ ಬಂದ್ ಗೆ ಬೆಂಬಲ ಸೂಚಿಸಲು ತಿಳಿಸಿದ್ದೇನೆ. ಯಾಕಂದ್ರೆ ಬೆಂಗಳೂರಿನಲ್ಲಿ ನಡೆದ ಕಾವೇರಿ ಗಲಭೆಯ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಕನ್ನಡಿಗರನ್ನು ಜೈಲಿಗೆ ಹಾಕಿದ್ರು. ಅಂದು ಅವರನ್ನು ಭೇಟಿಯಾಗಲು ಜೈಲಿಗೆ ಹೋಗಿದ್ದೆ. ಅಂದು ಅವರಲ್ಲಿ ಕಣ್ಣೀರು ಹಾಕಿದ್ದನ್ನು ನೋಡಿದ್ರೆ ನಮಗೆ ಇಂತಹ ವ್ಯವಸ್ಥೆ ಬೇಕಾ ಅಂತಾ ಅನ್ನಿಸ್ತು. ಆದ್ರೆ ಯಾರು ಹೋಗಿ ಅವರನ್ನು ಜೈಲಲ್ಲಿ ನೋಡಿದ್ದಾರೆ ಅಂತಾ ಪ್ರಶ್ನಿಸಿದರು.

    https://www.youtube.com/watch?v=fAzg4duUVEY