Tag: ಕರ್ನಾಟಕ ಉಪ ಚುನಾವಣೆ

  • ಬಿಜೆಪಿ ಮಕಾಡೆ ಮಲಗಿಸಲು ಕಾಂಗ್ರೆಸ್‍ನಿಂದ ಸೂಪರ್ ಟೀಮ್ ಫಾರ್ಮುಲಾ 139!

    ಬಿಜೆಪಿ ಮಕಾಡೆ ಮಲಗಿಸಲು ಕಾಂಗ್ರೆಸ್‍ನಿಂದ ಸೂಪರ್ ಟೀಮ್ ಫಾರ್ಮುಲಾ 139!

    – ಬಿಜೆಪಿ ಬಳಸಿದ್ದ ಅಸ್ತ್ರ ಬಳಸಿ ಕಾಂಗ್ರೆಸ್ ಕೌಂಟರ್

    – ರಾಜಸ್ಥಾನ ಉಪಚುನಾವಣೆ ಬಳಸಿ ಯಶಸ್ವಿಯಾಗಿದ್ದ ಕಾಂಗ್ರೆಸ್

    ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಸೂಪರ್ ಟೀಮ್ 139 ಫಾರ್ಮುಲಾ ಬಳಕೆ ಮಾಡಲಿದೆ. ದೇಶದ ನಾನಾ ಕಡೆಗಳಲ್ಲಿ ಬಿಜೆಪಿ ಪ್ರಯೋಗಿಸಿದ್ದ ಅಸ್ತ್ರವನ್ನೇ ಉಪಕದನದಲ್ಲಿ ಬಳಸಿಕೊಳ್ಳಲು ಮುಂದಾಗಿದೆ.

    ಬಿಜೆಪಿ ನಾಯಕರು ನಿರೀಕ್ಷೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ಕಾಂಗ್ರೆಸ್ ಕೌಂಟರ್ ಕೊಡಲು ಸಿದ್ಧವಾಗಿದೆ. ಇಡೀ ಕಾರ್ಯಾಚರಣೆಯ ರೂಪುರೇಷವನ್ನ ಖುದ್ದಾಗಿ ಎಐಸಿಸಿ (ಹೈಕಮಾಂಡ್) ನೇತೃತ್ವದಲ್ಲಿ ನಡೆಯಲಿದೆ. ವಿಶೇಷವಾಗಿ ಬಳ್ಳಾರಿ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ರಚಿತವಾಗಿರುವ ಸೂಪರ್ ಟೀಮ್ ಫಾರ್ಮುಲಾವನ್ನು ಈ ಹಿಂದೆ ರಾಜಸ್ಥಾನದ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್ ಬಳಸಿಕೊಂಡು ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಭದ್ರಕೋಟೆಯನ್ನು ಕೈ ವಶ ಮಾಡಿಕೊಳ್ಳಲು ರಾಜ್ಯದಲ್ಲಿ ಹೊಸ ತಂತ್ರದ ಮೊರೆ ಹೋಗಿದೆ.

    ಏನಿದು ಸೂಪರ್ ಟೀಮ್ ಫಾರ್ಮುಲಾ?
    1. ಬಳ್ಳಾರಿ
    ಬಳ್ಳಾರಿ ಅಭ್ಯರ್ಥಿ ಗೊಂದಲ ಅಲ್ಲಿನ ಶಾಸಕರಲ್ಲೇ ಬಿರುಕು ಮೂಡಿಸಿತ್ತು. ಈ ಅಸಮಧಾನದ ನಡುವೆಯೆ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಸಹೋದರ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿತ್ತು. ಎಲ್ಲ ಬೆಳವಣಿಗೆಯನ್ನು ಚಾಚು ತಪ್ಪದೆ ಗಮನಿಸುತ್ತಿದ್ದ ಕಾಂಗ್ರೆಸ್ ಹೈಕಮಾಂಡ್ ಗೆಲುವಿಗೆ ಪೂರಕವಾಗುವಂತ ವ್ಯವಸ್ಥಿತ ದಾಳವನ್ನು ಸಮಯ ನೋಡಿ ಉರುಳಿಸಿದೆ. ಎಂಎಲ್‍ಸಿ ಉಗ್ರಪ್ಪರ ಹೆಸರನ್ನು ಸೂಚಿಸುವ ಮೂಲಕ ಶಾಸಕರ ನಡುವಿನ ಭಿನ್ನಾಭಿಪ್ರಾಯ ತೊಡೆದು ಹಾಕಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂಬ ಸಂದೇಶ ರವಾನಿಸಿದೆ. ಪಕ್ಷದ ಸಚಿವರು ಹಾಗೂ ಶಾಸಕರು ಸೇರಿ ಒಟ್ಟು 63 ಮಂದಿಗೆ ಜವಬ್ದಾರಿ ನೀಡಿ, ಬಿಜೆಪಿಯ ಭದ್ರಕೋಟೆ ಜನಾರ್ದನ ರೆಡ್ಡಿ ಮತ್ತು ರಾಮುಲು ಕೋಟೆಯನ್ನು ಈ ಬಾರಿ ಬೇಧಿಸಲೇಬೇಕೆಂದು ಸೂಚಿಸಿದೆ.

    ಬಳ್ಳಾರಿಯಲ್ಲಿ ತಲಾ ಹೋಬಳಿಗೆ ಓರ್ವ ಶಾಸಕರಂತೆ ಒಟ್ಟು 52 ಜನ ಶಾಸಕರು ಹಾಗೂ ಪರಿಷತ್ ಸದಸ್ಯರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಎಂಟು ವಿಧಾನಸಭಾ ಕ್ಷೇತ್ರಗಳಿಗೆ ತಲಾ ಓರ್ವ ಸಚಿವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದ್ದು, ಎಂಟು ಸಚಿವರುಗಳು ಒಂದೊಂದು ಕ್ಷೇತ್ರದ ಉಸ್ತುವಾರಿ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹೀಗೆ ಇಡೀ ಬಳ್ಳಾರಿ ಬಿಜೆಪಿ ಕೋಟೆಯನ್ನ ಒಡೆಯಲು ಸೂಪರ್ ಟೀಮ್ ಫಾರ್ಮುಲಾ 63 ಯನ್ನ ಕಾಂಗ್ರೆಸ್ ಪ್ರಯೋಗಿಸಲು ಮುಂದಾಗಿದೆ. ಈ ಟೀಮ್ ಗೆ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ದೇಶದ ನಾನಾ ಕಡೆ ಬಿಜೆಪಿ ಮಾಡಿದ ತಂತ್ರಗಾರಿಕೆಯನ್ನೆ ಕಾಂಗ್ರೆಸ್ ಈಗ ಮಾಡಲು ಮುಂದಾಗಿದೆ.

    2. ಜಮಖಂಡಿ:
    ಜಮಖಂಡಿ ವಿಧಾನ ಸಭಾ ಉಪ ಚುನಾವಣೆಯ ಉಸ್ತುವಾರಿಯನ್ನು ಡಿಸಿಎಂ ಪರಮೇಶ್ವರ್ ಅವರಿಗೆ ಉಸ್ತುವಾರಿ ನೀಡಲಾಗಿದೆ. ಇಲ್ಲಿ ಸೂಪರ್ ಟೀಮ್ ಫಾರ್ಮುಲ ನಂಬರ್ 43 ಕಾಂಗ್ರೆಸ್ ನ ಮಾಸ್ಟರ್ ಸ್ಟ್ರೋಕ್. ಜಮಖಂಡಿಗೆ ನಾಲ್ವರು ಜಂಟಿ ಚುನಾವಣಾ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಶಿವಾನಂದ ಪಾಟೀಲ್, ಮಾಜಿ ಸಚಿವ ಎಂ.ಬಿ ಪಾಟೀಲ್, ಎಸ್ ಆರ್ ಪಾಟೀಲ್ ನಾಲ್ವರು ಜಂಟಿ ಉಸ್ತುವಾರಿಗಳು ನಾಯಕರು, ಪ್ರತಿ ಪಂಚಾಯತಿಗೆ ಒಬ್ಬರಂತೆ 38 ಬೇರೆ ಬೇರೆ ಮುಖಂಡರುಗಳ ನೇಮಕ ಮಾಡಿ ಜಮಖಂಡಿಗೆ ಸೂಪರ್ ಟೀಮ್ ಫಾರ್ಮುಲಾ 43 ಪ್ರಯೋಗಿಸಲಾಗಿದೆ.

    3. ಮಂಡ್ಯ:
    ಮಂಡ್ಯದಲ್ಲಿ ಕಾಂಗ್ರೆಸ್ ಸೂಪರ್ ಟೀಮ್ ಫಾರ್ಮುಲಾ 18 ಅಪ್ಲೈ ಮಾಡಲಾಗಿದೆ. ಇನ್ನು ಸ್ಪರ್ಧಿಸಲು ಸೂಕ್ತ ಅಭ್ಯರ್ಥಿ ಇಲ್ಲದೇ ಶಿವಮೊಗ್ಗದಲ್ಲಿ ಜೆಡಿಎಸ್ ಗೆ ಸ್ಥಾನ ಬಿಟ್ಟುಕೊಟ್ಟಿರುವ ಕಾಂಗ್ರೆಸ್ ಅಲ್ಲಿಯೂ ಸೂಪರ್ ಟೀಮ್ ಫಾರ್ಮುಲಾ 14 ಪ್ರಯೋಗಿಸಿದೆ. ಹಿರಿಯ ಸಚಿವ ಆರ್.ವಿ.ದೇಶಪಾಂಡೆ ಉಸ್ತುವಾರಿ ಹಾಗೂ ಸಚಿವೆ ಜಯಮಾಲ ಸಹಾ ಉಸ್ತುವಾರಿಯಾಗಿರುವ ಕ್ಷೇತ್ರದಲ್ಲಿ ಇಬ್ಬರಿಗೂ ಜಾತಿ ಮತ ಸೆಳೆಯುವ ಜವಬ್ದಾರಿಯಾದ್ರೆ, ಉಳಿದ 12 ಜನರಿಗೆ ಕ್ಷೇತ್ರವಾರು ಜವಾಬ್ದಾರಿ ಹಾಗೂ ತಾಲೂಕು ಮಟ್ಟದಲ್ಲಿ ಪ್ರವಾಸದ ಜವಾಬ್ದಾರಿ ಹಂಚಲಾಗಿದೆ.

    4. ಶಿವಮೊಗ್ಗ:
    ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ಮಾಡದಿದ್ದರೂ ಬಿಎಸ್ ವೈ ಮಣಿಸಲು ಜೆಡಿಎಸ್ ಬೆಂಬಲಕ್ಕೆ ಕಾಂಗ್ರೆಸ್ ಟೀಂ ಸಿದ್ಧವಾಗಿದ್ದು, ಇಲ್ಲಿ ಸೂಪರ್ ಟೀಂ ಫಾರ್ಮುಲಾ 13 ಪ್ರಯೋಗಿಸಲಾಗಿದೆ.

    5. ರಾಮನಗರ:
    ಜೆಡಿಎಸ್ ನ ಭದ್ರಕೋಟೆ ರಾಮನಗರದಲ್ಲೂ ಕಾಂಗ್ರೆಸ್ ಸೂಪರ್ ಟೀಮ್ ಫಾರ್ಮುಲಾ 2 ಪ್ರಯೋಗ ಮಾಡಿದೆ. ಸಂಸದ ಡಿ.ಕೆ.ಸುರೇಶ್ ರಾಮನಗರ ವಿಧಾನಸಭಾ ಕ್ಣೇತ್ರದ ಉಸ್ತುವಾರಿಯಾದರೆ, ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಸಹಾ ಉಸ್ತುವಾರಿಯಾಗಿದ್ದಾರೆ. ರಾಮನಗರದ ನೆಲದಲ್ಲಿ ತಮ್ಮ ಪಾರಂಪರಿಕ ಎದುರಾಳಿ ಜೆಡಿಎಸ್ ಪರವಾಗಿ ಕಾಂಗ್ರೆಸ್ ಘಟಾನುಘಟಿಗಳು ಕೆಲಸ ಮಾಡಬೇಕಾಗಿದೆ.

    ಹೀಗೆ ಈ ಬಾರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯ ಸೂಪರ್ ಟೀಮ್ ಫಾರ್ಮುಲಾವನ್ನೆ ಮುಂದಿಟ್ಟುಕೊಂಡು ರಣರಂಗಕ್ಕೆ ಇಳಿದಿದೆ. ಕಾಂಗ್ರೆಸ್ ನ ಸೂಪರ್ ಟೀಮ್ ಫಾರ್ಮುಲ 139 ಕಾಂಗ್ರೆಸ್ ನ ಕೈ ಹಿಡಿಯುತ್ತಾ ಅಥವಾ ಕೈ ಚೆಲ್ಲುತ್ತಾ ಎಂಬುದರ ಬಗ್ಗೆ ರಾಜ್ಯ ರಾಜಕರಣದಲ್ಲಿ ಬಿಸಿ ಬಿಸಿ ಚರ್ಚೆಯಂತು ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಳ್ಳಾರಿ ಗದ್ದುಗೆಗಾಗಿ ಬಿಗ್ ಫೈಟ್- ಕಾಂಗ್ರೆಸ್‍ಗೆ ತಿರುಗೇಟು ನೀಡಲು ಸಜ್ಜಾದ ಶ್ರೀರಾಮುಲು

    ಬಳ್ಳಾರಿ ಗದ್ದುಗೆಗಾಗಿ ಬಿಗ್ ಫೈಟ್- ಕಾಂಗ್ರೆಸ್‍ಗೆ ತಿರುಗೇಟು ನೀಡಲು ಸಜ್ಜಾದ ಶ್ರೀರಾಮುಲು

    ಬೆಂಗಳೂರು: ಕರ್ನಾಟಕ ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಬಿಜೆಪಿ ಭದ್ರಕೋಟೆ ಅಂತಾನೇ ಕರೆಸಿಕೊಳ್ಳುವ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ವಶ ಪಡಿಸಿಕೊಳ್ಳಲು ಕಾಂಗ್ರೆಸ್ ಚುನಾವಣಾ ತಂತ್ರವನ್ನು ಅನುಸರಿಸುತ್ತಿದೆ. ಇತ್ತ ಕಾಂಗ್ರೆಸ್ ಗೆ ತಿರುಗೇಟು ನೀಡಲು ಶಾಸಕ ಶ್ರೀರಾಮುಲು ತೆರೆಮರೆಯಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗುತ್ತಿದ್ದಾರೆ ಎಂಬ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆಗಿದ್ದರಿಂದ ಜೆಡಿಎಸ್ ಅಭ್ಯರ್ಥಿ ಬಳ್ಳಾರಿಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಉಪ ಚುನಾವಣೆಯಲ್ಲಿ ಜೆಡಿಎಸ್ ತನ್ನ ಸಂಪೂರ್ಣ ಬೆಂಬಲವನ್ನು ಕಾಂಗ್ರೆಸ್ ಗೆ ನೀಡಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಹೆಸರು ಅಧಿಕೃತವಾಗಿದೆ. ಬಿಜೆಪಿಯಿಂದ ಶ್ರೀರಾಮುಲು ಸೋದರಿ ಜೆ.ಶಾಂತಾ ಮತ್ತು ಕಾಂಗ್ರೆಸ್‍ನಿಂದ ಎಂಎಲ್‍ಸಿ ಉಗ್ರಪ್ಪ ಸ್ಬರ್ಧೆ ಮಾಡಲಿದ್ದಾರೆ. ಶಾಸಕ ನಾಗೇಂದ್ರ ಪ್ರಸಾದ್ ಸಹೋದರ ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ಎಂಬುವುದು ಬಹುತೇಕ ಖಚಿತವಾಗಿತ್ತು. ಜಿಲ್ಲೆಯ ಶಾಸಕರಲ್ಲಿ ಒಮ್ಮತ ಮೂಡದ ಕಾರಣ ಹೈಕಮಾಂಡ್ ಉಗ್ರಪ್ಪರ ಹೆಸರು ಅಂತಿಮಗೊಳಿಸುವ ಹಸ್ತ ಪಾಳಯದ ಸಂಚಲನ ಮೂಡಿಸಿತ್ತು.

    ಟಿಕೆಟ್ ವಂಚಿತರಾಗುವ ವೆಂಕಟೇಶ್ ಪ್ರಸಾದ್ ಸೋದರ ನಾಗೇಂದ್ರ ಬಂಡಾಯ ಏಳುವ ಸಾಧ್ಯತೆಗಳಿದ್ದು, ಇತ್ತ ಹೊಸಪೇಟೆ ಶಾಸಕ ಆನಂದ್ ಸಿಂಗ್ ಸಹ ಸಚಿವ ಸ್ಥಾನ ಸಿಗದೇ ಇರುವ ಅಸಮಾಧಾನಿತರಲ್ಲಿ ಒಬ್ಬರಾಗಿದ್ದಾರೆ. ಕರ್ನಾಟಕ ಉಪ ಚುನಾವಣೆ ವೇಳೆಯಲ್ಲಿಯೇ ನಾಗೇಂದ್ರ ಮತ್ತು ಆನಂದ್ ಸಿಂಗ್ ಇಬ್ಬರನ್ನು ಬಿಜೆಪಿಗೆ ಸೆಳೆಯುವಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ನಿರತರಾಗಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭವಿಷ್ಯ ನಿಜವಾಗುತ್ತಾ.?

    ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭವಿಷ್ಯ ನಿಜವಾಗುತ್ತಾ.?

    ಬೆಂಗಳೂರು: ಇಂದು ಮಧ್ಯಾಹ್ನ 3 ಗಂಟೆಯ ನಂತರ ಸಮ್ಮಿಶ್ರ ಸರ್ಕಾರದಲ್ಲಿ ಬಿರುಗಾಳಿ ಎದ್ದೇಳುತ್ತಾ ಎಂಬ ಪ್ರಶ್ನೆಯೊಂದು ರಾಜ್ಯ ರಾಜಕೀಯದಲ್ಲಿ ಸುನಾಮಿಯಂತೆ ಹರಿದಾಡುತ್ತಿದೆ. ಈ ಪ್ರಶ್ನೆ ಹುಟ್ಟಲು ಕಾರಣ ಮಾಜಿ ಸಿಎಂ, ಬಿಎಸ್ ಯಡಿಯೂರಪ್ಪರ ಹೇಳಿಕೆ. ಸೋಮವಾರ ಮಾತನಾಡಿದ್ದ ಯಡಿಯೂರಪ್ಪನವರು ನಾಮಪತ್ರ ಸಲ್ಲಿಕೆಯ ಬಳಿಕ ಸಮ್ಮಿಶ್ರ ಸರ್ಕಾರದವರಲ್ಲಿ ಜಗಳ ನಡೆಯುತ್ತೆ ಎಂಬ ಭವಿಷ್ಯವನ್ನು ನುಡಿದಿದ್ದಾರೆ.

    ಸೋಮವಾರ ಶಿವಮೊಗ್ಗದಲ್ಲಿ ಯಡಿಯೂರಪ್ಪರ ಪುತ್ರ ರಾಘವೇಂದ್ರ ನಾಮಪತ್ರ ಸಲ್ಲಿಸಿ, ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶಿಸಿದರು. ಈ ಬೆಳವಣಿಗೆಯ ಮಧ್ಯೆಯೇ, ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಕೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಅಲ್ಲೋಲ ಕಲ್ಲೋಲವಾಗಲಿದೆ ಅಂತ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದರು.

    ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂಎಲ್‍ಸಿ ವಿ.ಎಸ್. ಉಗ್ರಪ್ಪ ಅವರನ್ನು ಕಣಕ್ಕೀಳಿಸಲಾಗಿದೆ. ಶಾಸಕ ನಾಗೇಂದ್ರ ಸಹೋದರ ವೆಂಕಟೇಶ ಪ್ರಸಾದ್‍ಗೆ ಟಿಕೆಟ್ ಸಿಗುವ ಭಾರೀ ನಿರೀಕ್ಷೆ ಇತ್ತು. ಆದರೆ ಇದ್ದಕ್ಕಿದ್ದಂತೆ ಅಭ್ಯರ್ಥಿಯ ಹೆಸರನ್ನು ಬದಲಾವಣೆ ಮಾಡಲಾಯಿತು. ಶಾಸಕರಲ್ಲಿ ಒಮ್ಮತ ಇಲ್ಲದ ಕಾರಣ ಯಾವ ಗುಂಪಿನ ಅಭ್ಯರ್ಥಿಯನ್ನ ನೇಮಕ ಮಾಡಿದ್ರೂ ಪಕ್ಷ ವಿರೋಧಿ ಚಟುವಟಿಕೆ ನಡೆಯುವ ಸಾಧ್ಯತೆ ಇದೆ ಅಂತ ಎಚ್ಚೆತ್ತ ಹೈಕಮಾಂಡ್, ಉಗ್ರಪ್ಪ ಅವರಿಗೆ ಮಣೆ ಹಾಕಿದೆ. ಶಾಸಕ ಶ್ರೀರಾಮುಲು ವಿರುದ್ಧ ವಾಲ್ಮೀಕಿ ಅಸ್ತ್ರವನ್ನೇ ಬಿಡೋ ಪ್ಲಾನ್ ಇದಾಗಿದೆ ಅನ್ನೋ ಮಾತು ಕೇಳಿ ಬಂದಿದೆ.

    ಏನದು ಬಾಂಬ್?
    ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಸೋದರ ಶಾಸಕ ನಾಗೇಂದ್ರ ಬಂಡಾಯ ಏಳುವ ಸಾಧ್ಯತೆಗಳಿವೆ. ಇದೇ ಅಸಮಾಧಾನವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ಚಿಂತಿಸಿದ್ದು, ಮತ್ತೆ ಹಳೆಯ ಎರಡು ನಾಯಕರನ್ನು ಸಂಪರ್ಕಿಸಿ ಪಕ್ಷ ಸೇರುವಂತೆ ಮನವೊಲಿಸುವ ಕಸರತ್ತುಗಳು ನಡೆಯುವ ಸಾಧ್ಯತೆಗಳಿವೆ. ಒಂದು ವೇಳೆ ಯಡಿಯೂರಪ್ಪರ ಈ ಪ್ಲಾನ್ ಯಶಸ್ವಿಯಾದಲ್ಲಿ ಉಪ ಚುನಾವಣೆಗೂ ಮೊದಲೇ ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡುವ ಸಾಧ್ಯತೆಗಳಿವೆ.

    ಈಗಾಗಲೇ ಯಡಿಯೂರಪ್ಪರ ಸೂಚನೆ ಮೇರೆಗೆ ಶ್ರೀರಾಮುಲು ಆನಂದ್ ಸಿಂಗ್ ಮತ್ತು ನಾಗೇಂದ್ರರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರಂತೆ. ಒಂದು ವೇಳೆ ಮತ್ತೆ ಆನಂದ್ ಸಿಂಗ್ ಮತ್ತು ನಾಗೇಂದ್ರ ಬಿಜೆಪಿ ಸೇರುತ್ತಾರಾ ಅಥವಾ ಪಕ್ಷದಲ್ಲಿಯೇ ಉಳಿದುಕೊಳ್ಳುತ್ತಾರಾ ಎಂಬುವುದು ತಿಳಿಯಬೇಕಿದೆ.

    ಕರ್ನಾಟಕ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಅಭ್ಯರ್ಥಿಗಳ ಹೆಸರು ಘೋಷಣೆ ಬೆನ್ನಲ್ಲೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಬಂಡಾಯದ ಬಿಸಿ ತಟ್ಟುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪ ಚುನಾವಣೆಗೆ ಅಖಾಡ ಸಿದ್ಧ – ಇಂದು ಘಟಾನುಘಟಿ ನಾಯಕರಿಂದ ನಾಮಪತ್ರ

    ಉಪ ಚುನಾವಣೆಗೆ ಅಖಾಡ ಸಿದ್ಧ – ಇಂದು ಘಟಾನುಘಟಿ ನಾಯಕರಿಂದ ನಾಮಪತ್ರ

    – ಬಳ್ಳಾರಿ ಅಭ್ಯರ್ಥಿ ಆಯ್ಕೆ ಇನ್ನು ಕಗ್ಗಂಟು

    ಬೆಂಗಳೂರು: ಎರಡು ವಿಧಾನಸಭಾ, ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಕದನ ಇಂದಿನಿಂದ ರಂಗೇರಲಿದೆ. ತೀರ ಪ್ರಯಾಸದಿಂದ ಮೂರು ಪಕ್ಷಗಳು ಮಂಡ್ಯ, ಶಿವಮೊಗ್ಗ, ರಾಮನಗರ, ಜಮಖಂಡಿ ಕ್ಷೇತ್ರಗಳ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದು, ಇಂದು ಕೆಲ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

    ಗಣಿದಣಿಗಳ ಕೋಟೆ ಬಳ್ಳಾರಿಯಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಆಯ್ಕೆ ಆಗಿಲ್ಲ. ಸಿದ್ದರಾಮಯ್ಯ ಒಲವು ವಿಎಸ್ ಉಗ್ರಪ್ಪ ಪರ ಇದ್ದರೆ, ನಾಗೇಂದ್ರ ತಮ್ಮ ಸೋದರ ವೆಂಕಟೇಶ್ ಪ್ರಸಾದ್‍ಗೆ ಟಿಕೆಟ್ ಕೊಡಿಸಲು ಲಾಬಿ ಮಾಡುತ್ತಿದ್ದಾರೆ. ಇತ್ತ ಜಾರಕಿಹೊಳಿ ಬ್ರದರ್ಸ್ ಒಲವು ಸಂಬಂಧಿ ದೇವೇಂದ್ರಪ್ಪ ಪರ ಇದೆ. ಯಾವುದೇ ಕ್ಷಣದಲ್ಲಿ ಕೈ ಅಭ್ಯರ್ಥಿ ಹೆಸರು ಘೋಷಣೆ ಆಗೋ ಸಾಧ್ಯತೆ ಇದೆ.

    ಇತ್ತ ಬಳ್ಳಾರಿ ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಜೆ ಶಾಂತಾ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದ್ದು, ಟಿಕೆಟ್ ಆಕ್ಷಾಂಕಿಯಾಗಿದ್ದ ಡಾ. ಶ್ರೀನಿವಾಸ್ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಯಾವ ಪಕ್ಷದಿಂದ ಯಾವ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ಎಂಬವುದು ಈ ಕೆಳಗಿನಂತಿದೆ.

    * ರಾಮನಗರ ವಿಧಾನಸಭಾ ಕ್ಷೇತ್ರ
    ಅನಿತಾ ಕುಮಾರಸ್ವಾಮಿ, ಜೆಡಿಎಸ್ V/S ಎಲ್.ಚಂದ್ರಶೇಖರ್, ಬಿಜೆಪಿ

    * ಶಿವಮೊಗ್ಗ ಲೋಕಸಭಾ ಕ್ಷೇತ್ರ
    ಮಧು ಬಂಗಾರಪ್ಪ, ಜೆಡಿಎಸ್ V/S ಬಿ.ವೈ ರಾಘವೇಂದ್ರ, ಬಿಜೆಪಿ

    * ಮಂಡ್ಯ ಲೋಕಸಭಾ ಕ್ಷೇತ್ರ
    ಎಲ್.ಆರ್.ಶಿವರಾಮೇಗೌಡ, ಜೆಡಿಎಸ್ V/S ಡಾ.ಸಿದ್ದರಾಮಯ್ಯ, ಬಿಜೆಪಿ

    * ಜಮಖಂಡಿ ವಿಧಾನಸಭಾ ಕ್ಷೇತ್ರ
    ಆನಂದ ನ್ಯಾಮಗೌಡ, ಕಾಂಗ್ರೆಸ್ V/S ಶ್ರೀಕಾಂತ್ ಕುಲಕರ್ಣಿ, ಬಿಜೆಪಿ

    ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಮಧ್ಯಾಹ್ನ 12 ಗಂಟೆಗೆ ನಗರಕ್ಕೆ ತಮ್ಮ ಪತಿ ಸಿಎಂ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಜೊತೆ ಆಗಮಿಸಿ, ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ 1.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ನಂತರ ನಗರದ ಹಳೇ ಬಸ್ ನಿಲ್ದಾಣದ ಬಳಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬಿಜೆಪಿಯ ಚಂದ್ರಶೇಖರ್ ಬೆಳಗ್ಗೆ 10 ಗಂಟೆಗೆ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಇವರಿಗೆ ಮಾಜಿ ಡಿಸಿಎಂ ಅಶೋಕ್, ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಸಾಥ್ ನೀಡಲಿದ್ದಾರೆ.

    ಇತ್ತ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಬಿ. ವೈ. ರಾಘವೇಂದ್ರ ಬೆಳಗ್ಗೆ 9.15ಕ್ಕೆ ಹರಕೆರೆಥಿ ಶ್ರೀರಾಮೇಶ್ವರ ದೇವಸ್ಥಾನ, ಬೆಳಗ್ಗೆ 9.30ಕ್ಕೆ ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನ, ಬೆಳಗ್ಗೆ 9.45ಕ್ಕೆ ತಿಪ್ಪಾಜೋಯ್ಸ್ ಕಲೋನಿಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ನಾಮಪತ್ರ ಸಲ್ಲಿಸಲಿದ್ದಾರೆ. ಮಧು ಬಂಗಾರಪ್ಪ ಕೂಡ ಮಧ್ಯಾಹ್ನ 12 ಗಂಟೆ ಸುಮಾರಿಗೆ ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆ ಇದೆ.

    ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಮಂಡ್ಯದಲ್ಲಿ ಜೆಡಿಎಸ್‍ನ ಶಿವರಾಮೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಬೆಳಗ್ಗೆ 9 ಗಂಟೆಗೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಕಾಲಭೈರವೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಲಿದ್ದಾರೆ. ಶಿವರಾಮೇಗೌಡ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಕುಮಾರಸ್ವಾಮಿ ಆಗಮಿಸುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • SUPER EXCLUSIVE 5

    SUPER EXCLUSIVE 5

    https://www.youtube.com/watch?v=SeeAPEhcKiY

  • ಸಮ್ಮಿಶ್ರ ಸರ್ಕಾರ ಸೇಫ್ಟಿಗೆ ನಾಯಕರ ಮುಂದಿದೆ ಎರಡು ಮಹತ್ವದ ಮೆಟ್ಟಿಲು!

    ಸಮ್ಮಿಶ್ರ ಸರ್ಕಾರ ಸೇಫ್ಟಿಗೆ ನಾಯಕರ ಮುಂದಿದೆ ಎರಡು ಮಹತ್ವದ ಮೆಟ್ಟಿಲು!

    – ಸಕ್ಸಸ್ ಆದ್ರೆ, ಮೈತ್ರಿಯನ್ನ ಟಚ್ ಮಾಡೋಕೆ ಆಗಲ್ಲವಂತೆ!

    ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮುಂದೆ ಎರಡು ಮಹತ್ವದ ಮೆಟ್ಟಿಲುಗಳಿದ್ದು, ಒಂದು ವೇಳೆ ಈ ಮೆಟ್ಟಿಲು ಏರಿದ್ದಲ್ಲಿ ಮೈತ್ರಿಯನ್ನು ಯಾರಿಂದಲೂ ಟಚ್ ಮಾಡೋದಕ್ಕೆ ಸಾಧ್ಯವಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

    ಹೌದು, ರಾಜ್ಯದಲ್ಲೂ ಉಪಚುನಾವಣೆ ಎದುರಾಗಿದ್ದು, ಮೂರು ಪಕ್ಷಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಮೈತ್ರಿ ಸರ್ಕಾರದ ರಚನೆಯ ಬಳಿಕ ಪ್ರತಿನಿತ್ಯ ‘ಆಪರೇಷನ್ ಕಮಲ’ಕ್ಕೆ ಯಾರು ಒಳಗಾಗುತ್ತಾರೋ ಎಂಬ ಪ್ರಶ್ನೆಯೊಂದು ಜೆಡಿಎಸ್ ಮತ್ತು ಕಾಂಗ್ರೆಸ್ ವರಿಷ್ಠರಲ್ಲಿ ಹುಟ್ಟಿಕೊಂಡಿರುವುದು ನಿಜ. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆ ಪೂರ್ವ ಮೈತ್ರಿಯನ್ನು ಮಾಡಿಕೊಂಡಿದ್ದು, ಕ್ಷೇತ್ರಗಳನ್ನು ಸಹ ಹಂಚಿಕೊಂಡಿವೆ. ಮಂಡ್ಯ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರ, ರಾಮನಗರದ ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಾಲಾದ್ರೆ, ಜಮಖಂಡಿ ಹಾಗು ಬಳ್ಳಾರಿ ಕಾಂಗ್ರೆಸ್ ಪಡೆದುಕೊಂಡಿದೆ. ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಜನ ಮೈತ್ರಿ ಪರವಾಗಿ ಇದ್ದಾರೆ ಎಂಬುದನ್ನು ತೋರಿಸಲು ನಾಯಕರು ಕಸರತ್ತು ಆರಂಭಿಸಿದ್ದಾರೆ.

    ಇತ್ತ ಬಿಜೆಪಿ ಸಹ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಲ್ಲಿ ಗೆಲುವು ಸಾಧಿಸುವ ಮೂಲಕ ಜನ ಮೈತ್ರಿ ವಿರುದ್ಧ ಇದ್ದಾರೆ. ಇದು 2019ರ ಲೋಕಸಭಾ ಚುನಾವಣೆಗೆ ಮುನ್ನುಡಿ ಎಂದು ಸಾಬೀತು ಮಾಡಲು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಣತಂತ್ರ ರೂಪಿಸಲಾಗುತ್ತಿದೆ. ಸದ್ಯ ಸರ್ಕಾರದ ಮುಂದೆ ಎರಡು ಮಹತ್ವದ ಮೆಟ್ಟಿಲುಗಳಿದ್ದು, ಒಂದು ವೇಳೆ ಎರಡು ಮೆಟ್ಟಿಲುಗಳಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಯಶಸ್ವಿಯಾಗಿ ಏರಿದಲ್ಲಿ ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರವನ್ನು ಯಾರಿಂದಲೂ ಟಚ್ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ವಿಶ್ಲೇಷಣೆ ಕೇಳಿಬಂದಿದೆ.

    ಮೊದಲ ಮೆಟ್ಟಿಲು ಏನು?
    ಯಡಿಯೂರಪ್ಪರ ಸ್ವಕ್ಷೇತ್ರ ಶಿವಮೊಗ್ಗದಲ್ಲಿ ಜೆಡಿಎಸ್ ಗೆಲುವು ಸಾಧಿಸಿದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಲಿದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಒಂದು ವೇಳೆ ಬಿ.ವೈ.ರಾಘವೇಂದ್ರ ಸೋಲನ್ನಪ್ಪಿದ್ದಲ್ಲಿ, ಮಗನನ್ನೆ ಗೆಲ್ಲಿಸಿಕೊಳ್ಳಲಾಗದ ಬಿಎಸ್‍ವೈ ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಾರೆ ಎನ್ನುವ ವಿಚಾರವನ್ನು ಪ್ರಸ್ತಾಪಿಸಿ ತಿರುಗೇಟು ನೀಡಲು ಮೈತ್ರಿ ನಾಯಕರು ಚಿಂತನೆ ನಡೆಸಿದ್ದಾರೆ.

    ಯಡಿಯೂರಪ್ಪನವರ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸಲೇಬೇಕಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಾಕಷ್ಟು ಚುನಾವಣಾ ತಂತ್ರಗಳನ್ನು ಬೈ ಎಲೆಕ್ಷನ್ ನಲ್ಲಿ ಪ್ರಯೋಗಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಮಾಜಿ ಸಿಎಂ ಬಂಗಾರಪ್ಪ ಕುಟುಂಬಸ್ಥರಾದ ಪುತ್ರ ಮಧು ಬಂಗಾರಪ್ಪ ಅಥವಾ ಪುತ್ರಿ ಗೀತಾ ಶಿವರಾಜ್‍ಕುಮಾರ್ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿ ಜೆಡಿಎಸ್ ಇದೆ. ಆದ್ರೆ ಇಬ್ಬರು ಚುನಾವಣೆಗೆ ಸ್ಫರ್ಧಿಸಲು ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇಷ್ಟು ಬೇಗ ರಾಷ್ಟ್ರ ರಾಜಕಾರಣಕ್ಕೆ ಹೋಗೋದು ಬೇಡ, ಸಮ್ಮಿಶ್ರ ಸರ್ಕಾರದಲ್ಲಿ ಬೇರೆ ಅಧಿಕಾರ ಪಡಯುವ ಕುರಿತು ಮಧು ಬಂಗಾರಪ್ಪ ಚಿಂತಿಸುತ್ತಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಇತ್ತ ಈ ಬಾರಿ ನಮಗೆ ಚುನಾವಣೆವೇ ಬೇಡ, ಬೇಕಾದ್ರೆ ಬಂದು ಪ್ರಚಾರ ಮಾಡುತ್ತೇವೆ ಎಂದು ಶಿವರಾಜ್‍ಕುಮಾರ್ ಸಿಎಂ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಎರಡನೇ ಮೆಟ್ಟಿಲು ಏನು?
    ಶಾಸಕ ಶ್ರೀರಾಮುಲು ಅವರ ರಾಜೀನಾಮೆಯಿಂದ ತೆರುವಾಗಿರುವ ಬಿಜೆಪಿ ಭದ್ರಕೋಟೆ ಬಳ್ಳಾರಿ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 6 ಶಾಸಕರು ಕಾಂಗ್ರೆಸ್‍ನಿಂದ ಆಯ್ಕೆಯಾಗಿ ಬಂದಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಬಳಿಕ ಆಪರೇಷನ್ ಕಮಲ ಶ್ರೀರಾಮುಲು ಮುಂದಾಳತ್ವದಲ್ಲಿಯೇ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಇತ್ತ ಕಾಂಗ್ರೆಸ್ ಟ್ರಬಲ್ ಶೂಟರ್ ಸಚಿವ ಡಿ.ಕೆ.ಶಿವಕುಮಾರ್ ಬಳ್ಳಾರಿಯ ಉಸ್ತುವಾರಿ ಸಚಿವರು. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಮತ್ತು ಡಿ.ಕೆ.ಶಿವಕುಮಾರ್ ನಡುವೆ ಪ್ರತಿಷ್ಠೆಯ ಕಣವಾಗಿ ಬಳ್ಳಾರಿ ಉಪಚುನಾವಣೆ ಏರ್ಪಟ್ಟಿದೆ. ಬಳ್ಳಾರಿಯಲ್ಲಿ ಗೆಲುವು ಸಾಧಿಸುವ ಮೂಲಕ ಆಪರೇಷನ್ ಕಮಲಕ್ಕೆ ಮುಂದಾದವರಿಗೆ ಶಾಕ್ ಕೊಡಲು ಡಿಕೆ ಶಿವಕುಮಾರ್ ಪ್ಲಾನ್ ಮಾಡುತ್ತಿದ್ದಾರೆ.

    ಬಿಜೆಪಿಯಿಂದ ಶ್ರೀರಾಮುಲು ಸಹೋದರಿ ಜೆ.ಶಾಂತಾ ಸ್ಪರ್ಧಿಸೋದು ಖಚಿತವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಇದೂವರೆಗೂ ಅಂತಿಮವಾಗಿಲ್ಲ. ಬಳ್ಳಾರಿ ಚುನಾವಣೆಯಿಂದ ಜೆಡಿಎಸ್ ದೂರ ಉಳಿದಿದ್ದು, ಕಾಂಗ್ರೆಸ್‍ಗೆ ಸುಲಭ ಜಯ ಸಿಗುತ್ತೆ ಎಂಬುವುದು ಕೈ ನಾಯಕರ ಲೆಕ್ಕಾಚಾರ. ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಶ್ರೀರಾಮುಲುಗೆ ಮುಖಭಂಗ ಮಾಡಬೇಕು. ಕೈ ಅಭ್ಯರ್ಥಿ ಜಯಗಳಿಸಿದರೆ ಶ್ರೀರಾಮುಲು ಸಹ ಸಮ್ಮಿಶ್ರ ಸರ್ಕಾರದ ಬಗ್ಗೆ ಮತಾನಾಡಲಾರರು ಎನ್ನುವ ಅಭಿಪ್ರಾಯಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ ಎನ್ನಲಾಗಿದೆ.

    ಕೈ ಹಾಗೂ ತೆನೆ ನಾಯಕರ ಪ್ಲಾನ್ ವರ್ಕ್ ಔಟ್ ಆಗುತ್ತಾ? ಕೈ ಹಾಗೂ ತೆನೆ ನಾಯಕರಿಗೆ ಮುಖಭಂಗವಾಗಿ ಆಪರೇಷನ್ ಭೀತಿ ಮತ್ತಷ್ಟು ಹೆಚ್ಚುತ್ತಾ? ಎಲ್ಲದಕ್ಕೂ ಉಪ ಚುನಾವಣಾ ಫಲಿತಾಂಶವೇ ಉತ್ತರ ನೀಡಲಿದೆ. ನವೆಂಬರ್ 3ರಂದು ಜಮಖಂಡಿ, ರಾಮನಗರ ವಿಧಾನಸಭೆ ಮತ್ತು ಶಿವಮೊಗ್ಗ, ಮಂಡ್ಯ ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ನವೆಂಬರ್ 6ರಂದು ಫಲಿತಾಂಶ ಹೊರ ಬರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯ ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯ ನಾಪತ್ತೆ !

    ಮಂಡ್ಯ ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯ ನಾಪತ್ತೆ !

    ಮಂಡ್ಯ: ರಾಜ್ಯದಲ್ಲಿ ಉಪ ಚುನಾವಣೆಯ ಚಟುವಟಿಕೆಗಳು ಗರಿಗೆದರಿದ್ದು, ಅಭ್ಯರ್ಥಿಗಳು ಅಂತಿಮವಾದ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ಇತ್ತ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಡಾ.ಸಿದ್ದರಾಮಯ್ಯರನ್ನು ಅಂತಿಮಗೊಳಿಸಿದೆ. ಹೆಸರನ್ನು ಘೋಷಣೆ ಮಾಡಿ ಮೂರು ದಿನ ಕಳೆದರೂ, ಸಿದ್ದರಾಮಯ್ಯನವರು ಮಾತ್ರ ಮಂಡ್ಯ ಕಡೆ ಇದೂವರೆಗೆ ತಲೆ ಹಾಕಿಲ್ಲ. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯನವರ ಹುಡುಕಾಟದಲ್ಲಿದ್ದಾರೆ.

    ಈಗಾಗಲೇ ಪಕ್ಷದ ವರಿಷ್ಠರು ಡಾ. ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಎಂದು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಇನ್ನೂ ಕೂಡ ಮಂಡ್ಯದ ಕಡೆ ತಲೆ ಹಾಕಿಲ್ಲ. ಹೀಗಾದರೆ ಜನರ ಬಳಿ ಹೋಗಿ ವೋಟ್ ಕೇಳೋದಾದರೂ ಹೇಗೆ ಎಂದು ಮಂಡ್ಯ ಬಿಜೆಪಿ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.

    ಸಿದ್ದರಾಮಯ್ಯ ಅವರ ಈ ನಡೆ ನೋಡಿದರೆ ಅವರೇ ಅಭ್ಯರ್ಥಿಯಾ? ಎಂಬ ಅನುಮಾನ ಮೂಡುತ್ತಿದೆ. ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಕೂಡ ಸಾಧ್ಯವಾಗುತ್ತಿಲ್ಲ. ಇದೆಲ್ಲವನ್ನು ನೋಡಿದರೆ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸ್ವತಂತ್ರವಾಗಿ ಆಯ್ಕೆ ಮಾಡುವ ಹುನ್ನಾರ ನಡೆಯುತ್ತಿದೆ ಅನಿಸುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಸಿದ್ದರಾಮಯ್ಯರ ಬರುವಿಕೆಗಾಗಿ ನಾವೆಲ್ಲ ಕಾಯುತ್ತಿದ್ದೇವೆ. ಜಿಲ್ಲೆಯ ಜನತೆಗೆ ಸಿದ್ದರಾಮಯ್ಯರನ್ನು ಪರಿಚಯಿಸಬೇಕಿದೆ. ಅಭ್ಯರ್ಥಿ ಇಲ್ಲದೇ ಜನರ ಬಳಿ ಮತ ಕೇಳೋದು ಹೇಗೆ? ಜಿಲ್ಲೆಯಲ್ಲಿರುವ ಕಾರ್ಯಕರ್ತರನ್ನು ಅಭ್ಯರ್ಥಿಯಾಗಿ ಮಾಡಿದ್ದರೆ ಚೆನ್ನಾಗಿ ಇರುತ್ತಿತ್ತು. ಹೊಸಬರನ್ನು ಆಯ್ಕೆ ಮಾಡಿದರೂ ಯಾರು ವಿರೋಧ ವ್ಯಕ್ತಪಡಿಸಿಲ್ಲ. ಫೋನ್ ಮಾಡಿದ್ದರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬಿಜೆಪಿ ಘೋಷಿತ ಅಭ್ಯರ್ಥಿ ಸಿದ್ದರಾಮಯ್ಯ ಮಂಡ್ಯಕ್ಕೆ ಬರದಿದ್ದರೆ ಅವರನ್ನು ಹುಡುಕಿಕೊಡಿ ಎಂದು ಪಕ್ಷದ ಅಧ್ಯಕ್ಷರಿಗೂ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕಾಗುತ್ತೆ ಎಂದು ಬಿಜೆಪಿ ಕಾರ್ಯಕರ್ತ ಸಿದ್ದರಾಜು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಮ್ಮನ್ನು ಬಿಟ್ಟು ಬಿಡಿ ಪ್ಲೀಸ್-ನಮಗೆ ಈಗ ರಾಜಕೀಯದ ಸಹವಾಸವೇ ಬೇಡ

    ನಮ್ಮನ್ನು ಬಿಟ್ಟು ಬಿಡಿ ಪ್ಲೀಸ್-ನಮಗೆ ಈಗ ರಾಜಕೀಯದ ಸಹವಾಸವೇ ಬೇಡ

    ಬೆಂಗಳೂರು: ಶಿವಮೊಗ್ಗ ಲೋಕಸಭಾ ಉಪಚುನಾವಣೆ ಕುರಿತು ನಮ್ಮನ್ನು ಬಿಟ್ಟು ಬಿಡಿ ಪ್ಲೀಸ್.. ನಮಗೆ ಈಗ ರಾಜಕೀಯಸ ಸಹವಾಸವೇ ಬೇಡ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸಿಎಂ ಕುಮಾರಸ್ವಾಮಿ ಅವರಿಗೆ ಹೇಳಿದ್ದಾರಂತೆ.

    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಮೈತ್ರಿ ಸರ್ಕಾರದ ಒಪ್ಪಂದದಂತೆ ಜೆಡಿಎಸ್ ಗೆ ಶಿವಮೊಗ್ಗ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಕಳೆದ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜ್‍ಕುಮಾರ್ ಸ್ಪರ್ಧಿಸಿ ಯಡಿಯೂರಪ್ಪರ ವಿರುದ್ಧ ಸೋಲು ಕಂಡಿದ್ದರು. ಹಾಗಾಗಿ ಜೆಡಿಎಸ್ ನಿಂದ ಮತ್ತೊಮ್ಮೆ ಗೀತಾ ಅವರನ್ನೇ ಕಣಕ್ಕಿಳಿಸಲು ಮಾಜಿ ಪ್ರಧಾನಿ ದೇವೇಗೌಡರು ಪ್ಲಾನ್ ಮಾಡಿದ್ದರು.

    ಪತ್ನಿ ಗೀತಾ ಅವರನ್ನ ಉಪ ಚುನಾವಣೆಗೆ ನಿಲ್ಲಿಸಲು ಶಿವರಾಜ್‍ಕುಮಾರ್ ಹಿಂದೇಟು ಹಾಕುತ್ತಿದ್ದಾರಂತೆ. ಸಿಎಂ ಜೊತೆಗಿನ ಮಾತುಕತೆ ವೇಳೆ, ಯಾವುದೇ ಕಾರಣಕ್ಕೂ ಬೈ ಎಲೆಕ್ಷನ್ ಬೇಡ. ಈ ಮೊದಲೇ ನಾವು ಅನುಭವಿಸಿದ್ದು ಸಾಕು, ನಮಗೆ ಎಲೆಕ್ಷನ್ ಸಹವಾಸ ಬೇಡ. ಮಧು ಬಂಗಾರಪ್ಪ ಸ್ಪರ್ಧೆ ಮಾಡೋದಾದರೆ ನಾವು ಬಂದು ಪ್ರಚಾರ ಮಾಡುತ್ತೇವೆ. ಆದರೆ ಮಧು ಬಂಗಾರಪ್ಪ ಮನವೊಲಿಸೋದು ನಿಮಗೆ ಬಿಟ್ಟಿದ್ದು ಎಂದು ಶಿವರಾಜ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಸ್ಪರ್ಧೆಗೆ ಹಿಂದೇಟು ಯಾಕೆ?
    ಉಪ ಚುನಾವಣೆಯ ಅಧಿಕಾರವಧಿ ಕಡಿಮೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಂಗಾರಪ್ಪ ಕುಟುಂಬ ಹಿಂದೇಟು ಹಾಕುತ್ತಿರಬಹುದು. 2019ರ ಚುನಾವಣೆಗೆ ಸಂಪನ್ಮೂಲ ಕ್ರೂಢೀಕರಣಕ್ಕೂ ತೊಂದರೆ ಆಗಬಹುದು. ಇನ್ನು ಮಧು ಬಂಗಾರಪ್ಪ ಇಷ್ಟು ಬೇಗ ರಾಷ್ಟ್ರ ರಾಜಕಾರಣಕ್ಕೆ ಹೋಗೋದು ಬೇಡ. ಸಮ್ಮಿಶ್ರ ಸರ್ಕಾರದಲ್ಲಿಯೇ ಅಧಿಕಾರಕ್ಕಾಗಿ ಒಲವು ತೋರಿಸುವ ಸಾಧ್ಯತೆಗಳಿವೆ. ಇತ್ತ ಗೀತಾ ಶಿವರಾಜ್‍ಕುಮಾರ್ ಕಳೆದ ಬಾರಿ ಸೋಲಿನ ಕಹಿಯನ್ನು ಮರೆತ ಹಾಗಿಲ್ಲ.

    ಚುನಾವಣೆ ಘೋಷಣೆಯೂ ಮುನ್ನವೇ ವಿದೇಶ ಪ್ರವಾಸಕ್ಕೆ ತೆರಳಿರುವ ಮಧು ಬಂಗಾರಪ್ಪ, ಅಕ್ಟೋಬರ್ 16ಕ್ಕೆ ಸ್ವದೇಶಕ್ಕೆ ಹಿಂದಿರುಗಲಿದ್ದಾರೆ. ಆದ್ರೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 16 ಕೊನೆಯ ದಿನಾಂಕ. ಇತ್ತ ಬಿಜೆಪಿ ಬಿ.ವೈ.ರಾಘವೇಂದ್ರ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಯಡಿಯೂರಪ್ಪರನ್ನು ಸ್ವಕ್ಷೇತ್ರದಲ್ಲಿಯೇ ಕಟ್ಟಿ ಹಾಕಬೇಕು ಎಂದು ಪ್ಲಾನ್ ಮಾಡುತ್ತಿರುವ ದೇವೇಗೌಡರು ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ. ಒಂದು ವೇಳೆ ಸೂಕ್ತ ಅಭ್ಯರ್ಥಿ ಸಿಗದೇ ಪಕ್ಷದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡುವ ಸಾಧ್ಯತೆ ಗಳು ಇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜನಾರ್ದನ ರೆಡ್ಡಿಗೆ ಹೈಕಮಾಂಡ್ ರೆಡ್ ಸಿಗ್ನಲ್ – ಏಕಾಂಗಿಯಾದ್ರು ಶ್ರೀರಾಮುಲು

    ಜನಾರ್ದನ ರೆಡ್ಡಿಗೆ ಹೈಕಮಾಂಡ್ ರೆಡ್ ಸಿಗ್ನಲ್ – ಏಕಾಂಗಿಯಾದ್ರು ಶ್ರೀರಾಮುಲು

    ಬೆಂಗಳೂರು: ಗಾಲಿ ಜನಾರ್ದನ ರೆಡ್ಡಿಗೆ ಹೈಕಮಾಂಡ್ ರೆಡ್ ಸಿಗ್ನಲ್ ನೀಡಿದ್ದು, ಇದರಿಂದ ಮತ್ತೆ ಬಳ್ಳಾರಿ ಶಾಸಕ ರಾಮುಲು ಏಕಾಂಗಿಯಾಗಿದ್ದಾರೆ.

    ಬಳ್ಳಾರಿ ಲೋಕಸಭೆ ಚುನಾವಣೆಗೆ ರಾಮುಲು ಅವರಿಗೆ ಗೆಳೆಯ ಜನಾರ್ದನರೆಡ್ಡಿ ಸಹಾಯದ ಕೊರತೆ ಉಂಟಾಗಿದೆ. ಯಾಕೆಂದರೆ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗಲು ಕೋರ್ಟ್ ಅನುಮತಿ ನೀಡದಿದ್ದರೂ ಹೊರಗಿನ ಸಹಾಯಕ್ಕೆ ಹೈಕಮಾಂಡ್ ಆಕ್ಷೇಪ ವ್ಯಕ್ತಪಡಿಸಿದೆ.

    ಅಷ್ಟೇ ಅಲ್ಲದೇ ಯಾವುದೇ ಕಾರಣಕ್ಕೂ ಗಾಲಿ ಜನಾರ್ದನರೆಡ್ಡಿ ಬಳ್ಳಾರಿ ಉಪ ಚುನಾವಣೆಯ ಅಖಾಡಕ್ಕೆ ತಲೆಹಾಕಬಾರದು. ಉಪಚುನಾವಣೆಯ ವಿಚಾರದಲ್ಲಿ ಬೆಂಬಲಿಸುವ ಬಹಿರಂಗ ಹೇಳಿಕೆಯನ್ನು ಕೊಡದಂತೆ ನೋಡಿಕೊಳ್ಳಿ. ಕಳೆದ ಬಾರಿ ಬಹಿರಂಗ ಅಖಾಡಕ್ಕೆ ಇಳಿದು ಬಳಿಕ ನಾವು ಸ್ಪಷ್ಟನೆ ಕೊಡಬೇಕಾಗಿ ಬಂತು. ಹಾಗಾಗಿಯೇ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ನಿರೀಕ್ಷಿತ ಸ್ಥಾನ ಸಿಗಲಿಲ್ಲ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಮತ್ತು ಶ್ರೀರಾಮುಲುಗೆ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ ಎನ್ನಲಾಗುತ್ತಿದೆ.

    ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಕಡಿಮೆ ಸ್ಥಾನ ಬರಲು ರೆಡ್ಡಿ ವಿವಾದ ಕಾರಣವಾಗಿದೆ. ಜನಾರ್ದನರೆಡ್ಡಿ ಆಂತರಿಕವಾಗಿ ಕೆಲಸ ಮಾಡಿದರೆ ಯಾವ ಸಮಸ್ಯೆಯೂ ಆಗುತ್ತಿರಲಲ್ಲಿ. ಆದರೆ ಬಹಿರಂಗವಾಗಿ ಮಾತನಾಡಿ ಮಾಧ್ಯಮಗಳು ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸಿದ್ದವು. ಮಾಧ್ಯಮಗಳನ್ನ ಎದುರಿಸಲಾಗದೇ ರೆಡ್ಡಿಗೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಡಬೇಕಾಯಿತು ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಸಂದೇಶ ರವಾನಿಸಿದೆಯಂತೆ.

    ಹಾಗಾಗಿ ಈ ಬಾರಿಯೂ ಜನಾರ್ದನರೆಡ್ಡಿ ಚುನಾವಣೆ ಅಬ್ಬರದಿಂದ ದೂರವಿರಲಿ. ಹೊರಗಿನಿಂದಲೂ ಬಿಜೆಪಿಗೆ ಸಹಕಾರ ನೀಡುವ ಬಗ್ಗೆ ಎಲ್ಲೂ ಮಾತನಾಡಬಾರದು. ನೀವು ಕೂಡ ಜನಾರ್ದನ ರೆಡ್ಡಿಯಿಂದ ಅಂತರವನ್ನು ಕಾಯ್ದುಕೊಂಡು ಚುನಾವಣೆ ಮುಗಿಸಿ ಎಂದು ಬಿಜೆಪಿ ಹೈಕಮಾಂಡ್ ಖಡಕ್ ವಾರ್ನಿಂಗ್ ಕೊಟ್ಟಿದೆ. ಆದ್ದರಿಂದ ಈಗ ಬಳ್ಳಾರಿಯ ಉಪಚುನಾವಣೆಗೆ ಶ್ರೀರಾಮುಲು ಒಬ್ಬರೆ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸಬೇಕಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv