Tag: ಕರಿ

  • ಹೆಚ್ಚು ಪ್ರೋಟೀನ್ ಇರುವ ‘ಸೋಯಾ ಕರಿ’ ಮಾಡುವ ರೆಸಿಪಿ

    ಹೆಚ್ಚು ಪ್ರೋಟೀನ್ ಇರುವ ‘ಸೋಯಾ ಕರಿ’ ಮಾಡುವ ರೆಸಿಪಿ

    ಸೋಯಾದಲ್ಲಿ ಹೆಚ್ಚು ಪ್ರೋಟೀನ್ ಇದ್ದು, ಜನರಿಗೆ ಬೇಕಾದ ಪೋಷಕಾಂಶವನ್ನು ಉತ್ತಮವಾಗಿ ನೀಡುತ್ತೆ. ಅದಕ್ಕೆ ಇಂದು ಆರೋಗ್ಯಕ್ಕೂ ಒಳ್ಳೆಯದು ಮತ್ತು ಬಾಯಿ ರುಚಿಗೂ ಸಿಗಬೇಕು ಎಂದು ‘ಸೋಯಾ ಕರಿ’ ಮಾಡುವುದನ್ನು ಹೇಳಿಕೊಡುತ್ತಿದ್ದೇವೆ. ಈ ವಿಧಾನವನ್ನು ಓದಿ ಹೇಗೆ ‘ಸೋಯಾ ಕರಿ’ ಮಾಡಬಹುದು ಎಂದು ತಿಳಿದುಕೊಳ್ಳಿ.

    ಬೇಕಾಗಿರುವ ಪದಾರ್ಥಗಳು:
    * ಸೋಯಾ – 2 ಕಪ್
    * ಸಾಸಿವೆ ಎಣ್ಣೆ – ಅರ್ಧ ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ರುಚುಗೆ ತಕ್ಕಷ್ಟು ಉಪ್ಪು
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಕಟ್ ಮಾಡಿದ ಟೊಮೆಟೊ – 1 ಕಪ್
    * ಹಸಿರು ಮೆಣಸಿನಕಾಯಿ – 2
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್


    ಮಸಾಲೆಗಳು:
    * ಕೆಂಪುಮೆಣಸು – 1 ಟೀಸ್ಪೂನ್
    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ಜೀರಿಗೆ ಪುಡಿ – 1 ಟೀಸ್ಪೂನ್
    * ದಾನಿಯಾ ಪುಡಿ – 1 ಟೀಸ್ಪೂನ್
    * ಗರಂ ಮಸಾಲಾ – ಅರ್ಧ ಟೀಸ್ಪೂನ್

    ಮಾಡುವ ವಿಧಾನ:
    * ಸೋಯಾ ಬೀನ್ಸ್‍ಗಳನ್ನು ಬಿಸಿ ನೀರಿನಲ್ಲಿ 15 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಸೋಯಾ ಬೀನ್ಸ್ ಸೋಸಿ ತಣ್ಣಗಾಗುವವರೆಗೂ ಬಿಡಿ. ಸೋಯಾದಲ್ಲಿರುವ ನೀರನ್ನು ಸಂಪೂರ್ಣವಾಗಿ ಹಿಂಡಿ. ಪಕ್ಕಕ್ಕೆ ಹಿಡಿ.
    * ಒಂದು ಜಾರಿಗೆ ಕಟ್ ಮಾಡಿದ ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿಗಳು, ಶುಂಠಿ, ಬೆಳ್ಳುಳ್ಳಿ ಪೇಸ್ಟ್‍ಗಳನ್ನು ಹಾಕಿ ನಯವಾದ ಪೇಸ್ಟ್ ಮಾಡಿ.
    * ಗ್ಯಾಸ್ ಮೇಲೆ ಬಾಣಲೆಯನ್ನು ಇಟ್ಟು ಅದಕ್ಕೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಮಸಾಲಾ ಪೇಸ್ಟ್ ನಿಧಾನವಾಗಿ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.


    * ನಂತರ ಅದಕ್ಕೆ ಕೆಂಪುಮೆಣಸು, ಅರಿಶಿನ ಪುಡಿ, ಜೀರಿಗೆ ಪುಡಿ, ದಾನಿಯಾ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಫ್ರೈ ಮಾಡಿ. ನಂತರ ಎಣ್ಣೆಯು ಪಾತ್ರೆಯ ಬದಿಗಳನ್ನು ಬಿಡುವವರೆಗೆ ಚೆನ್ನಾಗಿ ಫ್ರೈ ಮಾಡಿ.
    * ಈಗ, ನೆನೆಸಿದ ಮತ್ತು ಹಿಂಡಿದ ಸೋಯಾ ತುಂಡುಗಳನ್ನು ಮಸಾಲೆಯೊಂದಿಗೆ ಮಿಕ್ಸ್ ಮಾಡಿ ಸುಮಾರು 2-3 ನಿಮಿಷಗಳ ಕಾಲ ಎಲ್ಲವನ್ನೂ ಫ್ರೈ ಮಾಡಿ.
    * ಅದಕ್ಕೆ 1.5 ಕಪ್ ನೀರನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಫ್ರೈ ಮಾಡಿ. 5 ನಿಮಿಷ ಬಿಡಿ.

    – ಕೊನೆಗೆ ಕಟ್ ಮಾಡಿದ ಕೊತ್ತಂಬರಿ ಸೊಪ್ಪಿನಿಂದ ಸೋಯಾ ಕರಿ ಅಲಂಕರಿಸಿ. ಬಿಸಿಯಾಗಿ ಬಡಿಸಿ. ಆನಂದಿಸಿ!

    Live Tv
    [brid partner=56869869 player=32851 video=960834 autoplay=true]

  • ಹೊತ್ತಿ ಉರಿದ ಗುಡಿಸಲು – 60 ಕ್ಕೂ ಹೆಚ್ಚು ಕುರಿ, ಮೇಕೆ ಬೆಂಕಿಗೆ ಬಲಿ

    ಹೊತ್ತಿ ಉರಿದ ಗುಡಿಸಲು – 60 ಕ್ಕೂ ಹೆಚ್ಚು ಕುರಿ, ಮೇಕೆ ಬೆಂಕಿಗೆ ಬಲಿ

    ಮನಕಲುಕುವಂತಿದೆ ಮೂಕಪ್ರಾಣಿಗಳ ಸಾವಿನ ದೃಶ್ಯ.

    ಚಿಕ್ಕಬಳ್ಳಾಪುರ: 60 ಕ್ಕೂ ಹೆಚ್ಚು ಕುರಿ-ಮೇಕೆ ಜಾನುವಾರುಗಳು ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಪೂಲಮಾಕಲಹಳ್ಳಿ ನಡೆದಿದೆ.

    ಗ್ರಾಮದ ಗಂಗಾಧರಪ್ಪ ಹಾಗೂ ತುಳಸಮ್ಮ ದಂಪತಿಗೆ ಕುರಿ, ಮೇಕೆ, ಹಸುಗಳೇ ಜೀವನಾಧಾರವಾಗಿದ್ದವು. ಕಾಡು ಮೇಡುಗಳಲ್ಲಿ ಅಲೆದು ಮೂಕ ಜೀವಿಗಳ ಜೊತೆಗೆ ಬದುಕು ಕಟ್ಟಿಕೊಂಡಿದ್ದ ಗಂಗಾಧರಪ್ಪ ನಿನ್ನೆ ಸಂಜೆ ಹುಲ್ಲಿನ ಮನೆಯಲ್ಲಿ ಜಾನುವಾರುಗಳನ್ನ ಕೂಡಿಹಾಕಿ ಮನೆಗೆ ಹೋಗಿದ್ದಾರೆ.

    ಆಕಸ್ಮಿಕ ಬೆಂಕಿಯೋ ಅಥವಾ ಕಿಡಿಗೇಡಿಗಳ ಕೃತ್ಯದಿಂದಲೋ ಕರಿಗಳಿದ್ದ ಗುಡಿಸಲಿಗೆ ಬೆಂಕಿ ತಗುಲಿದೆ. 60ಕ್ಕೂ ಹೆಚ್ಚು ಕುರಿ, ಮೇಕೆಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ಕೆನ್ನಾಲಿಗೆಯಿಂದ ಹಸುಗಳು ತಪ್ಪಿಸಿಕೊಂಡು ಪರಾರಿಯಾಗಿವೆ. ಗಂಗಾಧರಪ್ಪ ಕುಟುಂಬಕ್ಕೆ ಜಾನುವಾರುಗಳೇ ಬದುಕಾಗಿದ್ದು, ಸಾಲ ಸೋಲ ಮಾಡಿ ತಮ್ಮ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಜಾನುವಾರುಗಳ ಪೆÇೀಷಣೆಯಲ್ಲಿ ತೊಡಗಿದ್ದರು.

    ಕಳೆದ ರಾತ್ರಿ ಸಂಭವಿಸಿದ ದುರಂತದಲ್ಲಿ ಬದುಕನ್ನ ಬೆಂಕಿ ಬಲಿ ಪಡೆದಂತಿದೆ. ಇದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾದ ರೈತ ಗಂಗಾಧರಪ್ಪ ಕುಟುಂಬಕ್ಕೆ ಶಾಸಕ ಶಿವಶಂಕರರೆಡ್ಡಿ ಸಾಂತ್ವಾನದ ಮಾತುಗಳನ್ನು ಹೇಳಿದ್ದಾರೆ. ಸರ್ಕಾರದಿಂದ ಬರುವ ಪರಿಹಾರದ ಜೊತೆಗೆ ಯೋಜನೆಗಳ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದ್ದಾರೆ.