Tag: ಕರಾವಳಿ ಉತ್ಸವ

  • ಕರಾವಳಿ ಉತ್ಸವ; 4,500 ರೂ. ಕೊಟ್ರೆ ಹೆಲಿಕಾಪ್ಟರ್‌ನಲ್ಲಿ ಹಾರಾಡೋ ಅವಕಾಶ

    ಕರಾವಳಿ ಉತ್ಸವ; 4,500 ರೂ. ಕೊಟ್ರೆ ಹೆಲಿಕಾಪ್ಟರ್‌ನಲ್ಲಿ ಹಾರಾಡೋ ಅವಕಾಶ

    ಮಂಗಳೂರು: ಜಿಲ್ಲೆಯಲ್ಲಿ ಕರಾವಳಿ ಉತ್ಸವ (Karavali Utsav) ಸಂಭ್ರಮ ಆರಂಭವಾಗಿದೆ. ಕರಾವಳಿ ಉತ್ಸವ ಹಿನ್ನೆಲೆ ಜಿಲ್ಲಾಡಳಿತ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಾನಂಗಳದಲ್ಲಿ ಹಾರಾಟಕ್ಕೊಂದು ಸುವರ್ಣ ಅವಕಾಶ ಕಲ್ಲಿಸಿದೆ.‌ ಹೆಲಿಕ್ಯಾಪ್ಟರ್ ಏರಿ ಕಡಲನಗರಿಯ ಸೌಂದರ್ಯ ಕಣ್ತುಂಬಿಕೊಳ್ಳಬಹುದಾಗಿದೆ.

    ಕಡಲನಗರಿ ಮಂಗಳೂರು (Mangaluru) ಕರಾವಳಿ ಉತ್ಸವಕ್ಕೆ ಸಜ್ಜಾಗುತ್ತಿದೆ. ಇದರ ಅಂಗವಾಗಿ ಜಿಲ್ಲಾಡಳಿತ ಹೆಲಿಟೂರಿಸಂ ಆಯೋಜಿಸಿದ್ದು, ಈ ಮೂಲಕ ಮಂಗಳೂರಿನ ಸೌಂದರ್ಯ ಬಾನಂಗಳದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮೇರಿಹಿಲ್ ಹೆಲಿಪ್ಯಾಡ್‌ನಲ್ಲಿ‌ ಹೆಲಿಟೂರಿಸಂಗೆ ಚಾಲನೆ ದೊರಕಿದೆ. ಬೆಂಗಳೂರಿನ ತುಂಬಿ ಏರ್ ಟ್ಯಾಕ್ಸಿ ಕಂಪೆನಿಯ ಸಹಯೋಗದೊಂದಿಗೆ ದ‌.ಕ. ಜಿಲ್ಲಾಡಳಿತ ಹೆಲಿಟೂರಿಸಂ ಅನ್ನು ಆಯೋಜಿಸಿದೆ. ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದ ಮಂಗಳೂರಿಗರು ನಗರದ ಸೌಂದರ್ಯವನ್ನು ಆಕಾಶದ ‌ಮೇಲಿನಿಂದ ಕಣ್ತುಂಬಿಕೊಂಡರು.‌ ಇದನ್ನೂ ಓದಿ: ಮಂಗಳೂರು ನಗರದಲ್ಲಿ ತಲೆಯೆತ್ತಿದೆ ಸ್ಮಾರ್ಟ್ ಮಾರ್ಕೆಟ್‌ಗಳು – ಉದ್ಘಾಟನೆಯಾಗದೇ ಪಾಳುಬಿದ್ದ ಹೊಸ ಕಟ್ಟಡಗಳು

    ಬಾನಂಗಳದಲ್ಲಿ ಕುಡ್ಲದ ಸೌಂದರ್ಯ ವೀಕ್ಷಿಸಲು ಬಯಸುವವರಿಗೆ ಡಿ.31ರವರೆಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶವಿದೆ. 6-7 ನಿಮಿಷಗಳ ಕಾಲ ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ಮಂಗಳೂರು ನಗರ, ನೇತ್ರಾವತಿ ನದಿ ತೀರ, ಬೀಚ್ ಸೌಂದರ್ಯವನ್ನು ವೀಕ್ಷಿಸಬಹುದು. ಪ್ರತಿ ರೌಂಡ್‌ನಲ್ಲಿ ಆರು ಮಂದಿಗೆ ಹೆಲಿಕಾಪ್ಟರ್ ಸುತ್ತಾಟಕ್ಕೆ ಅವಕಾಶವಿದೆ. ಇದಕ್ಕೆ ಕೇವಲ 4,500 ರೂ. ಪಾವತಿಸಿದರೆ ಸಾಕು ಯಾರು ಬೇಕಾದರೂ ಹೆಲಿಕಾಪ್ಟರ್ ಪ್ರಯಾಣ ಮಾಡಬಹುದು. www.helitaxii.com ನಲ್ಲಿ ಆನ್‌ಲೈನ್ ಬುಕ್ಕಿಂಗ್‌ ಹಾಗೂ ಸ್ಥಳದಲ್ಲೇ ಬುಕ್ಕಿಂಗ್ ಕೂಡಾ ಮಾಡಬಹುದು.

    ಈ ಹೆಲಿಟೂರಿಸಂ, ಆಯೋಜಿಸಿದ್ದು ಒಳ್ಳೆಯದೇ ಆದ್ರೆ, 6-7 ನಿಮಿಷದ ಸಂಚಾರಕ್ಕೆ 4,500 ರೂ. ದರ ನಿಗದಿಸಿದ್ದು, ಕೊಂಚ ದುಬಾರಿಯೆನಿಸಿದೆ. ದರ ಇಳಿಕೆ ಮಾಡಿದ್ದಲ್ಲಿ ಜನ ಸಾಮಾನ್ಯರೂ ಇದರ ಸದ್ಬಳಕೆ ಮಾಡಬಹುದು ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಇದನ್ನೂ ಓದಿ: ಶಿರಾಡಿಯಲ್ಲಿ ಸುರಂಗ ಮಾರ್ಗ – ಡಿಪಿಆರ್‌ ತಯಾರಿಸಲು ಕೇಂದ್ರ ಒಪ್ಪಿಗೆ

  • ಕರಾವಳಿ ಉತ್ಸವಕ್ಕೆ ಚಾಲನೆ: ಆಕರ್ಷಕ ಮೆರವಣಿಗೆ

    ಕರಾವಳಿ ಉತ್ಸವಕ್ಕೆ ಚಾಲನೆ: ಆಕರ್ಷಕ ಮೆರವಣಿಗೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಆಯೋಜಿಸಿದ 10 ದಿನಗಳ ಕಾಲ ನಡೆಯುವ ಕರಾವಳಿ ಉತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು.

    ತುಳುನಾಡು-ಹೊರ ಜಿಲ್ಲೆಗಳ ಸಾಂಸ್ಕೃತಿಕ ಕಲಾ ಲೋಕದ ಸಂಗಮದ ಈ ಉತ್ಸವವನ್ನು ತುಳುನಾಡಿನ ಸಂಸ್ಕೃತಿ ಬಿಂಬಿಸುವ ಮುಟ್ಟಾಳೆಯನ್ನು ಅತಿಥಿಗಳಿಗೆ ತೊಡಿಸುವುದರ ಮೂಲಕ ಸ್ವಾಗತ ನೀಡಲಾಯಿತು. ಮಂಗಳೂರಿನ ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ಕರಾವಳಿ ಉತ್ಸವದ ಮೆರವಣಿಗೆಗೆ ನಗರದ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವರ್ಣರಂಜಿತ ಜಾನಪದ-ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.

    ತುಳುನಾಡಿನ ಸಂಪ್ರದಾಯದಂತೆ ಅತಿಥಿಗಳಿಗೆ ಮುಟ್ಟಾಳೆ ತೊಡಿಸಿ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಯಿತು. ಮೆರವಣಿಗೆಯು ನೆಹರೂ ಮೈದಾನದಿಂದ ಆರಂಭಗೊಂಡು ಕೆ.ಎಸ್.ರಾವ್ ರಸ್ತೆ, ನವಭಾರತ್ ವೃತ್ತ, ಪಿವಿಎಸ್, ಲಾಲ್‍ಬಾಗ್ ಮೂಲಕ ಕರಾವಳಿ ಉತ್ಸವ ಮೈದಾನ ತಲುಪಿತು. ಉತ್ಸವದ ಕಲಾ ಸಿರಿವಂತಿಕೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ವಿವಿಧ ಕಲಾ ತಂಡಗಳು ಭಾಗವಹಿಸಿ ಕರಾವಳಿ ಉತ್ಸವ ಮೆರವಣಿಗೆಗೆ ಮೆರುಗು ನೀಡಿದವು.

  • ಕರಾವಳಿ ಉತ್ಸವದಲ್ಲಿ ಕುಣಿದು ಕುಪ್ಪಳಿಸಿದ ಬಿಜೆಪಿ ಶಾಸಕಿ

    ಕರಾವಳಿ ಉತ್ಸವದಲ್ಲಿ ಕುಣಿದು ಕುಪ್ಪಳಿಸಿದ ಬಿಜೆಪಿ ಶಾಸಕಿ

    ಕಾರವಾರ: ಒಂದೊಳ್ಳೆ ಸಂಗೀತ ರಿದಮ್ ಇದ್ರೆ ಎಂತವರಿಗೂ ಒಂದು ಸ್ಟೆಪ್ ಹಾಕಬೇಕು ಅನಿಸುತ್ತದೆ. ಸಾಮಾನ್ಯ ಮನುಷ್ಯನಾದ್ರೆ ತನ್ನ ಇಷ್ಟಕ್ಕೆ ತಕ್ಕಂತೆ ಏನು ಬೇಕಾದ್ರೂ ಮಾಡುತ್ತಾರೆ. ಸಮಾಜದಲ್ಲಿ ಮನ್ನಡೆಯಲ್ಲಿದ್ದು ಅದರಲ್ಲೂ ಶಾಸಕರ ಸ್ಥಾನದಲ್ಲಿದ್ದರೇ ಕಟ್ಟುಪಾಡುಗಳಿಗೆ ಅಂಜಿ ತಮ್ಮ ಇಚ್ಚೆ ಇದ್ದರೂ ಏನೂ ಮಾಡಲು ಹಿಂದೇಟು ಹಾಕುತ್ತಾರೆ. ಕಾರವಾರದ ಶಾಸಕಿ ರೂಪಾಲಿ ನಾಯ್ಕ್ ತುಂಬು ವೇದಿಕೆಯಲ್ಲಿಯೇ ಕುಣಿದು ಕುಪ್ಪಳಿಸಿದದಾರೆ.

    ಕರವಾಳಿ ಉತ್ಸವ ಹಿನ್ನೆಲೆಯಲ್ಲಿ ಖ್ಯಾತ ಹಿನ್ನಲೆ ಗಾಯಕ ಅಭಿಜಿತ್ ಸಾವಂತ್ ಅವರ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶಾಸಕ ರೂಪಾಲಿ ನಾಯ್ಕ್ ಭಾಗಿಯಾಗಿದ್ದರು. ಗಾಯಕ ಅಭಿಜಿತ್ ಮರಾಠಿಯ ಸೈರಾಟ್ ಚಿತ್ರದ ಜಿಂಗಾಟ್ ಹಾಡು ಕೇಳುತ್ತಲೇ ಆಸನದಿಂದ ಎದ್ದು ಹೆಜ್ಜೆ ಹಾಕಲು ಆರಂಭಿಸಿದರು. ಕಾರ್ಯಕ್ರಮಕ್ಕೆ ಮಾಧ್ಯಮಗಳು ಅಗಮಿಸುತ್ತಿದ್ದಂತೆ ತಮಗೆ ಮೀಸಲಾಗಿದ್ದ ಆಸನದಲ್ಲಿ ಕುಳಿತರೂ ಅಭಿಜಿತ್ ಹಾಡಿನ ಮೋಡಿಯಲ್ಲಿ ಕುಳಿತಲ್ಲೇ ಸ್ಟೆಪ್ಸ್ ಹಾಕಿ ಎಲ್ಲರ ಗಮನ ಸೆಳೆದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ್, ಕರಾವಳಿ ಉತ್ಸವಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನವೇ ಅಭಿಜಿತ್ ಸಂಗೀತ ಕಾರ್ಯಕ್ರಮ ಜನರಿಗೆ ಭರಪೂರ ಮನರಂಜನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ನನಗೂ ಖುಷಿಯಾಗುತ್ತಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರಾವಳಿ ಉತ್ಸವ ಉದ್ಘಾಟನೆಗೆ ಪ್ರಕಾಶ್ ರೈ- ಹಿಂದೂ ಪರ ಸಂಘಟನೆಗಳಿಗೆ ಖಾದರ್ ಸವಾಲ್

    ಕರಾವಳಿ ಉತ್ಸವ ಉದ್ಘಾಟನೆಗೆ ಪ್ರಕಾಶ್ ರೈ- ಹಿಂದೂ ಪರ ಸಂಘಟನೆಗಳಿಗೆ ಖಾದರ್ ಸವಾಲ್

    ಮಂಗಳೂರು: ನಗರದಲ್ಲಿ `ಕರಾವಳಿ ಉತ್ಸವ’ ಉದ್ಘಾಟನೆಗೆ ಚಿತ್ರನಟ ಪ್ರಕಾಶ್ ರೈಯನ್ನು ಆಹ್ವಾನಿಸಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಗೋ ಬ್ಯಾಕ್ ಪ್ರಕಾಶ್ ರೈ ಅಂತಾ ಫೇಸ್ ಬುಕ್ ನಲ್ಲಿ ಹ್ಯಾಶ್ ಟ್ಯಾಗ್ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಉಸಿರಾಡಲು ಉತ್ತಮ ಗಾಳಿ ಇರುವಾಗ ಕನ್ನಡ ನಾಡಿಗೆ ಯಾಕೆ ಬರ್ತೀಯಾ ಅಂತ ಪ್ರಶ್ನೆ ಮಾಡಿದ್ದಾರೆ. 

    ಇತ್ತೀಚೆಗೆ ಪ್ರಕಾಶ್ ರೈ, ಕೇರಳ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಉಸಿರುಗಟ್ಟುವ ವಾತಾವರಣ ಇದೆ ಎಂದಿದ್ದರು. ಈ ಮಾತಿಗೆ ಹಲವೆಡೆ ವಿರೋಧ ಕೂಡ ಕೇಳಿಬಂದಿತ್ತು. ಇದೀಗ ಮಂಗಳೂರಿನಲ್ಲಿ ಇಂದು ಕರಾವಳಿ ಉತ್ಸವ ಉದ್ಘಾಟನೆಗೆ ಪ್ರಕಾಶ್ ರೈ ಆಗಮಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಯು.ಟಿ. ಖಾದರ್, ಪ್ರಕಾಶ್ ರೈ ಈ ನಾಡಿನ ಮಣ್ಣಿನ ಮಗ. ಅವರು ಬರಬಾರದು ಅನ್ನಲು ಇವರ್ಯಾರು? ಪ್ರಕಾಶ್ ರೈ ಬಂದೇ ಬರ್ತಾರೆ, ತಾಕತ್ತಿದ್ದರೆ ನಿಲ್ಲಿಸಲಿ. ಪ್ರಕಾಶ್ ರೈ ಇವರಿಗೆ ಬೇಕಾದಂತೆ ಮಾತನಾಡಬೇಕಾ. ಇದೇನು ಹಿಟ್ಲರ್ ಆಡಳಿತವಾ? ಅಂತಾ ಸವಾಲು ಹಾಕಿದ್ದಾರೆ.

    ಡಿಸೆಂಬರ್ 22ರಿಂದ 31ರವರೆಗೆ ಮಂಗಳೂರಿನಲ್ಲಿ `ಕರಾವಳಿ ಉತ್ಸವ 2017′ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಬಹುಭಾಷಾ ನಟ ಪ್ರಕಾಶ್ ರೈ ಶುಕ್ರವಾರ ಸಂಜೆ 6 ಗಂಟೆಗೆ ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಏನ್ರಿ ಪ್ರಕಾಶ್ ರಾಜ್, So Called ದೊಡ್ಡ ನಟ?! ಎಂದು ಹೇಳುವ ಮೂಲಕ ಬಹಿರಂಗ ಸವಾಲ್ ಹಾಕಿದ ಒಳ್ಳೆ ಹುಡ್ಗ ಪ್ರಥಮ್