Tag: ಕರಣ್ ಜೋಹಾರ್

  • ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಲವ್ ಬ್ರೇಕ್ ಅಪ್ ಗೆ ಕಾರಣನಾದ ಕರಣ್ ಜೋಹಾರ್

    ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಲವ್ ಬ್ರೇಕ್ ಅಪ್ ಗೆ ಕಾರಣನಾದ ಕರಣ್ ಜೋಹಾರ್

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ (Dating) ವಿಚಾರ ಹಲವು ವರ್ಷಗಳಿಂದ ಹರಿದಾಡುತ್ತಲೇ ಇದೆ. ಒಟ್ಟೊಟ್ಟಿಗೆ ಹೋಟೆಲ್ ನಲ್ಲಿ ಕಾಣಿಸಿಕೊಳ್ಳುವುದು, ತಡರಾತ್ರಿ ಪಾರ್ಟಿ ಮಾಡುವುದು ಹಾಗೂ ನ್ಯೂ ಯಿಯರ್ ಅನ್ನು ಗೋವಾದಲ್ಲಿ ಆಚರಿಸೋದು ಹೀಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಹಾಗಾಗಿ ಇಬ್ಬರೂ ಡೇಟಿಂಗ್ ಮಾಡುವ ವಿಚಾರ ಆಗಾಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ.

    ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ವಿಚಾರ ಕೇವಲ ಟಾಲಿವುಡ್ ನಲ್ಲಿ ಮಾತ್ರವಲ್ಲ ಬಾಲಿವುಡ್ ವುಡ್ ನಲ್ಲೂ ಸದ್ದು ಮಾಡಿದೆ. ಹೀಗಾಗಿಯೇ ಕರಣ್ ಜೋಹಾರ್ (Karan Johar) ಕೂಡ ಈ ಇಬ್ಬರ ರಿಲೇಶನ್ ಶಿಪ್ ಬಗ್ಗೆ ಮಾತನಾಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಇಂಥದ್ದೊಂದು ಚರ್ಚೆ ನಡೆದಿದ್ದು, ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ಕುರಿತಾಗಿ ಕರಣ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಅದು ಕೂಡ ಚರ್ಚೆ ಆಗುತ್ತಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ

    ಕಾಫಿ ವಿತ್ ಕರಣ್ ಶೋಗೆ ಬಾಲಿವುಡ್ ನಟಿ ನಿಹಾರಿಕಾ (Niharika) ಬಂದಿದ್ದರು. ಈ ಸಂದರ್ಭದಲ್ಲಿ ಕರಣ್ ಮಾತನಾಡ್ತಾ ತನ್ನನ್ನು ವಿಕ್ಕಿ ಕೌಶಲ್ ತಮ್ಮ ಮದುವೆಗೆ ಆಹ್ವಾನಿಸಲಿಲ್ಲ. ಅದು ಯಾಕೆ ಅಂತಾನೇ ಗೊತ್ತಾಗಲಿಲ್ಲ ಎನ್ನುತ್ತಾರೆ. ಆಗ ನಿಹಾರಿಕಾ, ನೀವೇನೂ ಬೇಸರ ಮಾಡಿಕೊಳ್ಳಬೇಡಿ. ನನ್ನ ಮದುವೆಗೆ ಕಂಡಿತಾ ಕರೆಯುತ್ತೇನೆ ಅಂತಾರೆ. ನಿಹಾರಿಕಾ ಹೀಗೆ ಆಹ್ವಾನ ನೀಡುತ್ತಿದ್ದಂತೆಯೇ ನಿಹಾರಿಕಾಳ ಮದುವೆ ಯಾರ ಜೊತೆ ಆಗಬೇಕು ಎಂದು ಚರ್ಚಿಸುತ್ತಾರೆ ಕರಣ್.

    ಮೊದಲು ಪ್ರಭಾಸ್ ಹೆಸರು ಸೂಚಿಸುವ ಕರಣ್, ನೀವು ಪ್ರಭಾಸ್ ಜೊತೆ ಮದುವೆ ಆಗಬಹುದು ಎನ್ನುತ್ತಾರೆ. ಪ್ರಭಾಸ್ ವಯಸ್ಸಲ್ಲಿ ದೊಡ್ಡವರು ಅಂತಾಳೆ. ಹಾಗಾದರೆ, ವಿಜಯ್ ದೇವರಕೊಂಡ (Vijay Devarakonda) ಜೊತೆ ಮದುವೆ ಆಗಬಹುದು. ಅವರು ಸಿಂಗಲ್ ಅನ್ನುತ್ತಾರೆ ಕರಣ್. ತಕ್ಷಣವೇ ವಿಜಯ್ ಮತ್ತು ರಶ್ಮಿಕಾ ಡೇಟಿಂಗ್ ವಿಚಾರ ಬರುತ್ತದೆ. ನನ್ನ ಪ್ರಕಾರ ಅವರಿಬ್ಬರ ಮಧ್ಯೆ ಅಂಥದ್ದೂ ಏನೂ ಇಲ್ಲ. ವಿಜಯ್ ಸಿಂಗಲ್ ಎನ್ನುವುದು ನನಗೆ ಗೊತ್ತು ಎಂದು ಹೇಳುವ ಮೂಲಕ ವಿಜಯ್ ಮತ್ತು ರಶ್ಮಿಕಾ ಲವ್ ಅನ್ನು ಬ್ರೇಕ್ ಅಪ್ ಮಾಡುತ್ತಾರೆ ಕರಣ್.

    Live Tv
    [brid partner=56869869 player=32851 video=960834 autoplay=true]

  • ನಟ ಚಂಕಿ ಪಾಂಡೆಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು: ಪತ್ನಿ ಭಾವನಾ ಬಿಚ್ಚಿಟ್ಟ  ರಹಸ್ಯ

    ನಟ ಚಂಕಿ ಪಾಂಡೆಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು: ಪತ್ನಿ ಭಾವನಾ ಬಿಚ್ಚಿಟ್ಟ ರಹಸ್ಯ

    ಬಾಲಿವುಡ್ ಹೆಸರಾಂತ ನಟ, ಅನನ್ಯ ಪಾಂಡೆ ಅವರ ತಂದೆ ಚಂಕಿ (Chunky Pandey) ಪಾಂಡೆ ಕುರಿತಾಗಿ ಸ್ವತಃ ಪತ್ನಿಯೇ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಪತಿಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು ಎನ್ನುವುದನ್ನು ಬಹಿರಂಗವಾಗಿ ಭಾವನಾ ಪಾಂಡೆ ಹೇಳಿಕೊಂಡಿದ್ದಾರೆ. ಈ ಮಾತು ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಸ್ವತಃ ಮಗಳಿಗೆ ಈ ಮಾತು ಇರಸುಮುರಸು ಉಂಟು ಮಾಡಿದೆ.

    ಕರಣ್ ಜೋಹಾರ್ (Karan Johar) ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾದ್ದ ಭಾವನಾ ಪಾಂಡೆ (Bhavana Pandey), ತನ್ನ ಪತಿಯ ಡೇಟಿಂಗ್ ಕುರಿತಾಗಿಯೂ ಮಾತನಾಡಿದ್ದಾರೆ. ಅಲ್ಲದೇ, ತಮ್ಮ ಗಂಡನಿಗೆ ಸಿನಿಮಾ ರಂಗದ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು. ಅದು ನನಗೂ ಗೊತ್ತಿತ್ತು. ನನಗೆ ಗೊತ್ತಿದೆ ಅಂತ ಚಂಕಿ ಪಾಂಡೆಗೂ ಗೊತ್ತಿತ್ತು ಎಂದು ಹೇಳುವ ಮೂಲಕ ಇನ್ನೂ ಅಚ್ಚರಿ ಮೂಡಿಸಿದ್ದಾರೆ. ನೂರಾರು ಸಿನಿಮಾಗಳ ಮೂಲಕ ಮನ ರಂಜನೆ ನೀಡಿರುವ ಮತ್ತು ಮಗಳನ್ನು ಇದೇ ರಂಗಕ್ಕೆ ಕರೆತಂದಿರುವ ಚಂಕಿ ಬಗ್ಗೆ ಮೊದಲ ಬಾರಿಗೆ ಇಂಥದ್ದೊಂದು ಮಾತು ಕೇಳಿ ಬಂದಿದೆ. ಇದನ್ನೂ ಓದಿ:ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

    ಕಾಫಿ ವಿತ್ ಕರಣ್ (Koffee With Karan) ಶೋನಲ್ಲಿ ಬರೀ ಡೇಟಿಂಗ್, ಸೆಕ್ಸ್, ಅನೈತಿಕ ಸಂಬಂಧ, ಬಾಯ್ ಫ್ರೆಂಡ್ ಹೀಗೆ ಇಂಥದ್ದೇ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈವರೆಗೂ ಬಂದಿರುವಂತಹ ಅತಿಥಿಗಳು, ಯಾವುದಕ್ಕೂ ಮುಜಗರ ಪಟ್ಟುಕೊಳ್ಳದೇ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಅಲ್ಲದೇ, ಇನ್ನೂ ಅನೇಕ ಸಂಗತಿಗಳನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಹಾಗಾಗಿ ಈ ಶೋ ಬಗ್ಗೆ ಎಲ್ಲರಿಗೂ ಕುತೂಹಲ. ಬಾಲಿವುಡ್ ನ ಖ್ಯಾತ ನಟ ನಟಿಯರೆಲ್ಲ ಈ ಶೋಗೆ ಬಂದಿರುವುದು ವಿಶೇಷ.

    ಈ ಹಿಂದೆ ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ (Ananya Pandey) ಕೂಡ ಬಂದಿದ್ದರು. ಅವರು ಅನೇಕ ವಿಷಯಗಳನ್ನು ಖುಲ್ಲಂ ಖುಲ್ಲ ಮಾತನಾಡಿದ್ದರು. ತಮ್ಮ ಮತ್ತು ವಿಜಯ್ ದೇವರಕೊಂಡ ಜೊತೆಗೆ ಖಾಸಗಿ ಸಂಗತಿಗಳನ್ನೂ ಅವರು ಹಂಚಿಕೊಂಡಿದ್ದರು. ಮಗಳ  ಆ ಮಾತುಗಳಿಗೆಲ್ಲ ಚಂಕಿ ಬೆಂಬಲ ವ್ಯಕ್ತ ಪಡಿಸಿದ್ದರು. ಇದೀಗ ಚಂಕಿ ಬಗ್ಗೆಯೇ ಅಂತಹ ಮಾತುಗಳು ಕೇಳಿ ಬಂದಿವೆ. ಅದೂ ಸ್ವತಃ ಪತ್ನಿಯಿಂದಲೇ ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಇಬ್ಬರು ಹುಡುಗರ ಜೊತೆ ಡೇಟ್ ಬೇಡ: ಮಗಳಿಗೆ ಶಾರುಖ್ ಪತ್ನಿಯ ಪಾಠ

    ಇಬ್ಬರು ಹುಡುಗರ ಜೊತೆ ಡೇಟ್ ಬೇಡ: ಮಗಳಿಗೆ ಶಾರುಖ್ ಪತ್ನಿಯ ಪಾಠ

    ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಮತ್ತು ಗೌರಿ ಖಾನ್ (Gauri Khan) ದಂಪತಿಯ ಮುದ್ದಿನ ಮಗಳು ಸುಹಾನಾ ಖಾನ್. ಸಖತ್ ಬೋಲ್ಡ್ ಆಗಿರುವಂತಹ ಹುಡುಗಿ. ಅಪ್ಪ ಅಮ್ಮನ ಬಗ್ಗೆ ಸಿಕ್ಕಾಪಟ್ಟೆ ಗೌರವ ಹೊಂದಿರುವ ಹುಡುಗಿ ಕೂಡ. ಇಂತಹ ಹುಡುಗಿಗೆ ಸ್ವತಃ ಅಮ್ಮನೇ ಡೇಟಿಂಗ್ ಪಾಠ ಮಾಡಿದ್ದಾರೆ. ಅದು ಕರಣ್ ಜೋಹಾರ್ ನಡೆಸಿ ಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಎನ್ನುವುದು ವಿಶೇಷ. ಮಗಳಿಗೆ ಹೀಗೂ ಸಲಹೆ ಕೊಡಬಹುದಾ? ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

    ಕರಣ್ ಜೋಹಾರ್ (Karan Johar) ನಡೆಸಿಕೊಡುವ ಕಾಫಿ ವಿತ್ ಕರಣ ಶೋ ನಲ್ಲಿ ಡೇಟಿಂಗ್, ಲವ್, ಸೆಕ್ಸ್, ಬ್ರೇಕ್ ಅಪ್, ಬಾಯ್ ಫ್ರೆಂಡ್ ಇಂಥದ್ದೇ ವಿಷಯವನ್ನು ಹೆಚ್ಚಾಗಿ ಕೇಳುತ್ತಾರೆ ಕರಣ್. ಯಾವುದೇ ಮುಜುಗರವಿಲ್ಲದೇ ಬಂದಂತಹ ಅತಿಥಿಗಳು ಉತ್ತರ ಕೊಡುತ್ತಾರೆ. ಅಲ್ಲದೇ, ಸ್ವತಃ ಕರಣ್ ಗೂ ಕಾಲೆಳೆಯುವ ಪ್ರಸಂಗಗಳು ಕೂಡ ಎದುರಾಗಿವೆ. ಇಂತಹ ಶೋಗೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಬಂದಿದ್ದರು. ಅವರಿಗೆ ಕರಣ್ ಪ್ರಶ್ನೆಯೊಂದನ್ನು ಕೇಳಿದರು. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಡೇಟಿಂಗ್ (Dating) ವಿಷಯದಲ್ಲಿ ಮಗಳು ಸುಹಾನಿಗೆ (Suhana Khan) ನೀವು ಕೊಡುವ ಸಲಹೆ ಏನು ಅಂತ ಗೌರಿ ಖಾನ್ ಗೆ ಕರಣ್ ಜೋಹಾರ್ ಕೇಳುತ್ತಾರೆ. ತಕ್ಷಣವೇ ಉತ್ತರಿಸುವ ಗೌರಿ ಖಾನ್, ‘ಯಾವುದೇ ಕಾರಣಕ್ಕೂ ಇಬ್ಬರು ಹುಡುಗರೊಂದಿಗೆ ಒಂದೇ ಸಲ ಡೇಟ್ ಮಾಡಬೇಡ’ ಎಂದು ಸಲಹೆ ಕೊಡುತ್ತಾರೆ ಗೌರಿ ಖಾನ್. ಇದನ್ನು ಕೇಳಿದ ನೆಟ್ಟಿಗರು ಗೌರಿ ಖಾನ್ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಡೇಟ್ ಬೇಡ ಎಂದು ಹೇಳುತ್ತಾರೆ ಅಂದುಕೊಂಡಿದ್ದ ಅಭಿಮಾನಿಗಳಿಗೆ ಗೌರಿ ಮಾತು ಅಚ್ಚರಿ ಮೂಡಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಕರಣ್ ಜೋಹಾರ್ ಬಾಳಲ್ಲೂ ಲವ್ ಬ್ರೇಕಪ್: ಇದೇನ್ ಗುರೂ ಹೊಸ ಸುದ್ದಿ ಅಂತಿದೆ ಬಿಟೌನ್

    ಕರಣ್ ಜೋಹಾರ್ ಬಾಳಲ್ಲೂ ಲವ್ ಬ್ರೇಕಪ್: ಇದೇನ್ ಗುರೂ ಹೊಸ ಸುದ್ದಿ ಅಂತಿದೆ ಬಿಟೌನ್

    ಬಾಲಿವುಡ್ ನಲ್ಲಿ ನಡೆಯುವ ಲವ್ (Love), ಬ್ರೇಕ್ ಅಪ್, ಅಫೇರ್ ಇಂತಹ ವಿಷಯಗಳು ಮೊದಲು ತಿಳಿಯುವುದು ಕರಣ್ ಜೋಹಾರ್ (Karan Johar) ಗೆ. ಹಾಗಾಗಿ ಕಾಫಿ ವಿತ್ ಕರಣ್ ಶೋನಲ್ಲಿ (Koffee With Karan) ಬಹುತೇಕ ಇಂತಹ ಪ್ರಶ್ನೆಗಳನ್ನೇ ಅತಿಥಿಗಳಿಗೆ ಕರಣ್ ಕೇಳುತ್ತಾನೆ. ಬಹುತೇಕ ಅವು ನಿಜವೂ ಆಗಿರುವುದರಿಂದ ಅನೇಕ ನಟ ನಟಿಯರು ಅವುಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ತೇಲಿಸಿ ಬಿಟ್ಟಿದ್ದಾರೆ. ಆದರೂ, ಕರಣ್ ಸುದ್ದಿ ಪಕ್ಕಾ ಆಗಿರುತ್ತದೆ.

    ಬಿಟೌನ್ (Bollywood) ಟಾ‍ಪ್ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು ಹೀಗೆ ಅನೇಕರು ಕರಣ್ ಶೋ ಗೆ ಬಂದಿದ್ದಾರೆ. ತಮ್ಮ ಖಾಸಗಿ ಸಂಗತಿಗಳನ್ನು ಬಟಾಬಯಲು ಮಾಡಿಕೊಂಡಿದ್ದಾರೆ. ತಮ್ಮ ಸೆಕ್ಸ್ ಲೈಫ್ ನಿಂದ ಹಿಡಿದು ಮದುವೆ, ಅಫೇರ್, ಡೇಟಿಂಗ್ ಹೀಗೆ ಸೆನ್ಸಾರ್ ಇಲ್ಲದೇ ಮಾತನಾಡಿದ್ದಾರೆ. ಆದರೂ, ಈವರೆಗೂ ಕರಣ್ ವಿಚಾರವನ್ನು ಕೆದಕಲು ಯಾರೂ ಹೋಗಿರಲಿಲ್ಲ. ಅಲ್ಲದೇ, ಕರಣ್ ಜೀವನದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಇದನ್ನೂ ಓದಿ:ಬಿಗ್ ಬಾಸ್ ಟಿವಿ ಸೀಸನ್‌ನಲ್ಲಿ ಮತ್ತೆ ಪ್ರಶಾಂತ್‌ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್‌

    ಮೊನ್ನೆಯಷ್ಟೇ ಕರಣ್ ಶೋ ಗೆ ಅನಿಲ್ ಕಪೂರ್ ಮತ್ತು ವರುಣ್ ಧವನ್ (Varun Dhawan) ಆಗಮಿಸಿದ್ದರು. ಅನಿಲ್ ಕಪೂರ್ ಕೂಡ ಯಾವುದನ್ನೂ ಮುಚ್ಚಿಟ್ಟುಕೊಳ್ಳದೇ ಎಲ್ಲವನ್ನೂ ಮಾತನಾಡಿದರು. ಈ ವಯಸ್ಸಲ್ಲೂ ಹ್ಯಾಂಡ್ ಸಮ್ ಆಗಿ ಕಾಣುವುದರ ಹಿಂದಿನಿ ಸಿಕ್ರೇಟ್ ಏನು ಅಂತ ಅನಿಲ್ ಕಪೂರ್ ಗೆ ಕೇಳಿದಾಗ, ಕ್ಷಣ ಹೊತ್ತೂ ಯೋಚಿಸಿದೇ ಸೆಕ್ಸ್ ಅಂದರು ಅನಿಲ್. ಹಾಗೆಯೇ ವರಣ್ ಧವನ್ ಅವರನ್ನು ಕೇಳಲಾಯಿತು. ಅದರಲ್ಲೂ ವರಣ್ ಬ್ರೇಕ್ ಅಪ್ ಬಗ್ಗೆ ಕರಣ್ ಕೇಳಿ  ತಾವೇ ತಗಲಕ್ಕೊಂಡಿದ್ದಾರೆ.

    ವರಣ್ ಮದುವೆಗೂ ಮುಂಚೆ ಆದ ಲವ್ ಬ್ರೇಕ್ ಅಪ್ (Breakup) ಬಗ್ಗೆ ಕರಣ್ ಕೇಳಿದಾಗ, ನನ್ನದೇನೂ ಸರಿ ನಿಮ್ಮ ಜೀವನದಲ್ಲೂ ಅದು ನಡೆದಿದೆಯಲ್ಲ ಎಂದು ನೇರವಾಗಿಯೇ ಕೇಳಿದರು. ಕರಣ್ ತಪ್ಪಿಸಿಕೊಳ್ಳುವುದಕ್ಕೆ ನೋಡಿದರು, ಆದರೂ ಧವನ್ ಸುಮ್ಮನೆ ಬಿಡಲಿಲ್ಲ. ಕೊನೆಗೂ ತನ್ನ ಜೀವನದಲ್ಲೂ ಲವ್ ಬ್ರೇಕ್ ಅಪ್ ಆಗಿದೆ. ನಾನು ಹೇಗೆ ಅಂತ ನಿನಗೆ ಗೊತ್ತಲ್ಲ. ಈ ವಿಷಯದಲ್ಲಿ ಸಹಕರಿಸು ಎಂದು ಹೇಳಿ ಟಾಪಿಕ್ ಮುಗಿಸಿಬಿಟ್ಟರು ಕರಣ್. ಅಲ್ಲಿಗೆ ಮೊದಲ ಬಾರಿಗೆ ಕರಣ್ ಲವ್ ಬ್ರೇಕ್ ಅಪ್ ವಿಚಾರ ಆಚೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬ್ರಹ್ಮಾಸ್ತ್ರ’ ಕಲೆಕ್ಷನ್ ಎಲ್ಲಾ ಬುರುಡೆ ಎಂದು ಟೀಕೆ ಮಾಡಿದ ನಟಿ ಕಂಗನಾ ರಣಾವತ್

    ‘ಬ್ರಹ್ಮಾಸ್ತ್ರ’ ಕಲೆಕ್ಷನ್ ಎಲ್ಲಾ ಬುರುಡೆ ಎಂದು ಟೀಕೆ ಮಾಡಿದ ನಟಿ ಕಂಗನಾ ರಣಾವತ್

    ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಾಂಬಿನೇಷನ್ ನ ‘ಬ್ರಹ್ಮಾಸ್ತ್ರ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಕಳೆದ ಎರಡು ದಿನಗಳಿಂದ ಚರ್ಚೆ ಆಗುತ್ತಿದೆ. ಸಿನಿಮಾ ರಿಲೀಸ್ ಆಗಿ ಮೊದಲನೇ ದಿನವೇ ನೂರು ಕೋಟಿ ಕ್ಲಬ್ ಗೆ ಸಿನಿಮಾ ಸೇರಿತು ಎಂದು ಹೇಳಲಾಗಿತ್ತು. ಇದೀಗ ಮೂರು ದಿನಗಳ ಒಟ್ಟು ಕಲೆಕ್ಷನ್ 125 ಕೋಟಿ ಎಂದು ವರದಿಯಾಗಿದೆ. ಸಿನಿಮಾ ತಂಡವು ಅಧಿಕೃತ ಮಾಹಿತಿ ಕೊಡದೇ ಇರುವ ಕಾರಣಕ್ಕಾಗಿ ಈ ಕಲೆಕ್ಷನ್ ಸೋಮವಾರಕ್ಕೆ 200 ಕೋಟಿ ತಲುಪಿದೆ.

    ಸಿನಿಮಾದ ನಿರ್ಮಾಪಕ ಕರಣ್ ಜೋಹಾರ್ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ದಾಖಲೆ ರೀತಿಯಲ್ಲಿ  ಆಗಿದೆ. ಮೊದಲ ದಿನವೇ ನೂರು ಕೋಟಿ ಕ್ಲಬ್‍ಗೆ ಸೇರಿದ್ದು ನಿಜ ಎಂದು ಹೇಳಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ವೀಕೆಂಡ್ ನಲ್ಲಿ ಪ್ರೇಕ್ಷಕರು ಸಿನಿಮಾ ಒಪ್ಪಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಹಾಗಾಗು ಶುಕ್ರವಾರ, ಶನಿವಾರ ಮತ್ತು ಭಾನುವಾರದ ಒಟ್ಟು ಕಲೆಕ್ಷನ್ ಅಂದಾಜು 200 ಕೋಟಿ ಎಂದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

     

    ಇದೆಲ್ಲವನ್ನೂ ಬಾಲಿವುಡ್ ನಟಿ ಕಂಗನಾ ರಣಾವತ್ ಅಲ್ಲಗಳೆಯುತ್ತಾರೆ. ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಫೇಕ್, ಅದೊಂದು ಬುರುಡೆ ಪುರಾಣ ಎಂದು ಟೀಕೆ ಮಾಡಿದ್ದಾರೆ. ಸುಖಾಸುಮ್ಮನೆ ಕಲೆಕ್ಷನ್ ಬಗ್ಗೆ ಗಾಸಿಪ್ ಹಬ್ಬಿಸಲಾಗುತ್ತಿದೆ. 350 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ ಎಂದು ಕೇಳಲ್ಪಟ್ಟಿದ್ದೆ. ಈವರೆಗೂ ನೂರೇ ಕೋಟಿ ಬಂದಿದೆ ಎಂದರೂ, ಇನ್ನೂ 250 ಕೋಟಿ ಬರಬೇಕು. ಈಗಲೇ ಸಿನಿಮಾ ಗೆದ್ದಿದೆ ಅಂದು ಹೇಳುವುದಕ್ಕೆ ಆಗುವುದಿಲ್ಲ ಎಂದು ಟೀಕೆ ಮಾಡಿದ್ದಾರೆ.

     

     

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಲ್ಲಿ ಟ್ಯಾಲೆಂಟ್ ಇರುವಂಥ ನಟರೇ ಇಲ್ಲವೆಂದು ಬಿಟೌನ್ ನಲ್ಲಿ ಬೆಂಕಿ ಹಚ್ಚಿದ ಕರಣ್ ಜೋಹಾರ್

    ಬಾಲಿವುಡ್ ನಲ್ಲಿ ಟ್ಯಾಲೆಂಟ್ ಇರುವಂಥ ನಟರೇ ಇಲ್ಲವೆಂದು ಬಿಟೌನ್ ನಲ್ಲಿ ಬೆಂಕಿ ಹಚ್ಚಿದ ಕರಣ್ ಜೋಹಾರ್

    ಬಾಲಿವುಡ್ ಅನೇಕ ಸ್ಟಾರ್ ನಟರಿಗೆ ಸಿನಿಮಾ ಮಾಡಿದ ಹೆಗ್ಗಳಿಕೆ ಕರಣ್ ಜೋಹಾರ್ (Karan Johar) ಅವರದ್ದು. ನಿರ್ದೇಶಕರಾಗಿ, ನಿರ್ಮಾಪಕರಾಗಿ ಬಹುತೇಕ ನಟರಿಗೆ ಕರಣ್ ಸಿನಿಮಾ ಮಾಡಿದ್ದಾರೆ. ಅದರಲ್ಲೂ ಕರಣ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋಗೆ ಬಾರದೇ ಇರುವ  ನಟ ನಟಿಯರೇ ಇಲ್ಲ. ಬಾಲಿವುಡ್ ಬಗ್ಗೆ ಆಳ ಅಗಲ ಗೊತ್ತಿರುವ ಕರಣ್, ಇಡೀ ಬಾಲಿವುಡ್ ತಲೆತಗ್ಗಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ. ಆ ಹೇಳಿಕೆ ಇದೀಗ ಬಾಲಿವುಡ್ ನಲ್ಲಿ ಬೆಂಕಿ ಹಚ್ಚಿದೆ.

    ಖಾಸಗಿ ವಾಹಿನಿಯೊಂದರ ಟಾಕ್ ಶೋನಲ್ಲಿ ಮಾತನಾಡಿರುವ ಕರಣ್ ಜೋಹಾರ್, ಬಾಲಿವುಡ್ (Bollywood,) ನಲ್ಲಿ ಹೇಳಿಕೊಳ್ಳುವಂತಹ ಮತ್ತು ಟ್ಯಾಲೆಂಟ್ (Talent) ಇರುವಂತಹ ನಟ ಯಾರೂ ಇಲ್ಲ ಎಂದು ಹೇಳುವ ಮೂಲಕ ಸ್ವತಃ ನಿರೂಪಕರನ್ನೇ ಬೆಚ್ಚಿ ಬೀಳಿಸಿದ್ದಾರೆ. ಈ ಮೂಲಕ ದಕ್ಷಿಣದ ತಾರೆಯರನ್ನು ಪರೋಕ್ಷವಾಗಿ ಹೊಗಳಿದ್ದಾರೆ. ಅಲ್ಲಿಗೆ ಮತ್ತೊಂದು ಸುತ್ತಿನ ದಕ್ಷಿಣ ಮತ್ತು ಬಾಲಿವುಡ್ ತಾರೆಯರ ವಾರ್ ಶುರುವಾಗುತ್ತಾ ಕಾದು ನೋಡಬೇಕು. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ಆ ಶೋವನ್ನು ರಿತೇಶ್ ದೇಶಮುಖ (Riteish Deshmukh) ನಡೆಸಿಕೊಡುತ್ತಿದ್ದು, ಅತಿಥಿಯಾಗಿ ಕರಣ್ ಜೋಹಾರ್ ಬಂದಿದ್ದರು. ‘ನೀವು ನಟನನ್ನು ಆಯ್ಕೆ ಮಾಡಿಕೊಳ್ಳುವಾಗ ಲುಕ್‍ಗೆ ಆದ್ಯತೆ ಕೊಡುತ್ತೀರಾ? ಅಥವಾ ಮತ್ತೇನಾದರೂ ನೋಡುತ್ತೀರಾ?’ ಎಂದು ಪ್ರಶ್ನೆ ಮಾಡುತ್ತಾರೆ. ಲುಕ್ ಜೊತೆ ಟ್ಯಾಲೆಂಟ್ ಕೂಡ ನೋಡುತ್ತೇನೆ. ಆದರೆ, ಈವರೆಗೂ ನನಗೆ ಟ್ಯಾಲೆಂಟ್ ಸಿಕ್ಕಿಲ್ಲ ಎಂದು ಉತ್ತರಿಸಿದ್ದಾರೆ. ಕರಣ್ ಅವರ ಈ ಉತ್ತರ ಇದೀಗ ಹಲವರ ಕಂಗೆಣ್ಣಿಗೆ ಗುರಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವಿಮಾನದಲ್ಲೇ ರೊಮ್ಯಾನ್ಸ್ ಮಾಡಿದ್ದರಂತೆ ಟೈಗರ್ ಶ್ರಾಫ್:  ಆಕೆ ದಿಶಾ ಪಟಾನಿ ಆಗಿರಲಿಲ್ಲ ಎಂದ ನಟ

    ವಿಮಾನದಲ್ಲೇ ರೊಮ್ಯಾನ್ಸ್ ಮಾಡಿದ್ದರಂತೆ ಟೈಗರ್ ಶ್ರಾಫ್: ಆಕೆ ದಿಶಾ ಪಟಾನಿ ಆಗಿರಲಿಲ್ಲ ಎಂದ ನಟ

    ಬಾಲಿವುಡ್ ಸಿನಿಮಾ ರಂಗದ ಖ್ಯಾತ ನಟ ಟೈಗರ್ ಶ್ರಾಫ್ ಶೋವೊಂದರಲ್ಲಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ತಾವು ವಿಮಾನದಲ್ಲೇ ರೊಮ್ಯಾನ್ಸ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಅವರು, ತಾವು ವಿಮಾನದಲ್ಲಿ ರೊಮ್ಯಾನ್ಸ್ ಮಾಡಿರುವ ವಿಚಾರವನ್ನು ಬಹಿರಂಗ ಪಡಿಸಿದರು.

    ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಡೇಟಿಂಗ್ ಮಾಡುತ್ತಿರುವ ವಿಚಾರ, ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ಅಲ್ಲದೇ, ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎನ್ನುವ ವಿಷಯವೂ ಹರಿದಾಡುತ್ತಿದೆ. ಈ ಜೋಡಿ ಒಟ್ಟಿಗೆ ಹಲವು ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆ. ಹಾಗಾಗಿ ದಿಶಾ ಜೊತೆಯೇ ವಿಮಾನದಲ್ಲಿ ರೊಮ್ಯಾನ್ಸ್ ಮಾಡಿದರಾ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ, ವಿಮಾನದಲ್ಲಿ ಯಾರ ಜೊತೆ ಟೈಗರ್ ರೊಮ್ಯಾನ್ಸ್ ಮಾಡಿದರು ಎನ್ನುವ ಕುರಿತು ಹೇಳಲಿಲ್ಲ. ಇದನ್ನೂ ಓದಿ:ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ

    ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಡೇಟಿಂಗ್ ಕುರಿತಾಗಿಯೂ ಕರಣ್ ಪ್ರಶ್ನೆಗಳನ್ನು ಕೇಳಿದರು. ಆ ಹುಡುಗಿ ಜೊತೆ ಡೇಟಿಂಗ್ ಅಂಥದ್ದು ಏನೂ ಇಲ್ಲ. ದಿಶಾ ನನ್ನ ಬೆಸ್ಟ್ ಫ್ರೆಂಡ್ ಎಂದಷ್ಟೇ ಚುಟುಕಾಗಿ ಉತ್ತರಿಸಿ ಅನುಮಾನ ಮೂಡಿಸಿದರು ಟೈಗರ್. ಕೆಲ ದಿನಗಳ ಹಿಂದೆಯಷ್ಟೇ ಟೈಗರ್ ಮತ್ತು ದಿಶಾ ಇಬ್ಬರೂ ಬೇರೆ ಬೇರೆ ಆಗಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ, ಈ ಕುರಿತು ಟೈಗರ್ ಏನನ್ನೂ ಹೇಳಲು ಇಷ್ಟ ಪಡಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಕರಣ್ ಜೋಹಾರ್ ಶೋಗೆ ಹೋಗೋಕೆ ಸೆಕ್ಸ್, ಬ್ರೇಕಪ್ ಅರ್ಹತೆನಾ:  ನಟಿ ತಾಪ್ಸಿ ಹೇಳಿದ್ದೇನು?

    ಕರಣ್ ಜೋಹಾರ್ ಶೋಗೆ ಹೋಗೋಕೆ ಸೆಕ್ಸ್, ಬ್ರೇಕಪ್ ಅರ್ಹತೆನಾ: ನಟಿ ತಾಪ್ಸಿ ಹೇಳಿದ್ದೇನು?

    ಟಿಟಿಯಲ್ಲಿ ಪ್ರಸಾರವಾಗುತ್ತಿರುವ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಈ ಶೋಗೆ ಬರುವ ಸೆಲೆಬ್ರಿಟಿಗಳು ಒಂದಲ್ಲ ಒಂದು ರೀತಿಯಲ್ಲಿ ಅಚ್ಚರಿಯ ಹೇಳಿಕೆ ನೀಡುತ್ತಿದ್ದಾರೆ. ಅದರಲ್ಲೂ ಅವರ ತೀರಾ ಖಾಸಗಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸೆಕ್ಸ್, ಬ್ರೇಕ್ ಅಪ್, ಫಸ್ಟ್ ನೈಟ್, ಅಫೇರ್ ಸೇರಿದಂತೆ ಇಂತಹ ಖಾಸಗಿ ಸಂಗತಿಗಳನ್ನು ಮುಲಾಜಿಲ್ಲದೇ ಹಂಚಿಕೊಳ್ಳುತ್ತಿದ್ದಾರೆ.

    ಈ ಕಾರಣಕ್ಕಾಗಿಯೇ ಒಂದು ರೀತಿಯಲ್ಲಿ ಕಾಫಿ ವಿತ್ ಕರಣ್ ಶೋ ಮಡಿವಂತರ ಕಾರ್ಯಕ್ರಮವಲ್ಲ ಅನಿಸುವಂತಾಗಿದೆ. ಹೀಗಾಗಿಯೇ ನಟಿ ತಾಪ್ಸಿ ಪನ್ನು ಈ ಶೋ ಬಗ್ಗೆ ಕಾಮೆಂಟ್ ಮಾಡಿದ್ದು , ಈವರೆಗೂ ತಮ್ಮನ್ನು ಆ ಶೋಗೆ ಕರೆಯದೇ ಇರುವ ಕಾರಣವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಣದಿಂದಾಗಿಯೇ ನನ್ನನ್ನು ಕರಣ್ ಮುಂದೆಯೇ ಕರೆಯುವುದಿಲ್ಲ ಎನ್ನುವುದನ್ನು ಈಗಲೇ ಹೇಳಿದ್ದಾರೆ. ಇದನ್ನೂ ಓದಿ:ಪೊಲೀಸ್ ಠಾಣೆ ತಲುಪಿದ ನಿರ್ಮಾಪಕರ ವಲಯದ ಚುನಾವಣೆ ಪ್ರಕ್ರಿಯೆ

    ನನ್ನ ಸೆಕ್ಸ್ ಲೈಫ್ ಚೆನ್ನಾಗಿಲ್ಲ, ಸೆಕ್ಸ್ ಲೈಫ್ ಚೆನ್ನಾಗಿದ್ದವರನ್ನು ಮಾತ್ರ ಕರಣ್ ತಮ್ಮ ಶೋಗೆ ಕರೆಯುತ್ತಾರೆ. ಈ ಕಾರಣದಿಂದಾಗಿಯೇ ಅವರು ನನ್ನನ್ನು ಈವರೆಗೂ ಕರೆದಿಲ್ಲ ಎಂದು ಹೇಳಿದ್ದಾರೆ. ತಾಪ್ಸಿ ಈ ಸ್ಟೇಟ್ ಮೆಂಟ್ ಕೊಡುತ್ತಿದ್ದಂತೆಯೇ ಶೋ ಕುರಿತಾಗಿ ಮತ್ತಷ್ಟು ಕಾಮೆಂಟ್ ಗಳನ್ನು ಅಭಿಮಾನಿಗಳು ಹಾಕಿದ್ದಾರೆ. ಜೀವನದಲ್ಲಿ ಸೆಕ್ಸ್, ದೋಖಾ, ಬ್ರೇಕ್ ಅಪ್ ಬಿಟ್ಟರೆ ಸಂತಸ ಅನ್ನುವುದೇ ಇಲ್ಲವಾ ಎಂದು ಕೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೇರೆಯವರ ಸೆಕ್ಸ್ ಲೈಫ್ ಬಗ್ಗೆ ನಿಮಗೇಕೆ ಅಷ್ಟೊಂದು ಆಸಕ್ತಿ?: ಕರಣ್ ಗೆ ಕಾಲೆಳೆದ ಆಮೀರ್

    ಬೇರೆಯವರ ಸೆಕ್ಸ್ ಲೈಫ್ ಬಗ್ಗೆ ನಿಮಗೇಕೆ ಅಷ್ಟೊಂದು ಆಸಕ್ತಿ?: ಕರಣ್ ಗೆ ಕಾಲೆಳೆದ ಆಮೀರ್

    ಹಿಂದಿಯ ಕಾಫಿ ವಿತ್ ಕರಣ್ ಶೋ ನಲ್ಲಿ ನಿರೂಪಕ ಕರಣ್ ಜೋಹಾರ್ ಬಹುತೇಕವಾಗಿ ಪರ್ಸನಲ್ ಲೈಫ್ ಕುರಿತಾದ, ಅದರಲ್ಲೂ ಬೆಡ್ ರೂಮ್ ವಿಷಯಗಳೇ ಹೆಚ್ಚಾಗಿ ಇರುತ್ತವೆ ಎನ್ನುವ ಆರೋಪವಿದೆ. ಈವರೆಗೂ ಅವರ ಶೋಗೆ ಬಂದಿರುವ ಬಹುತೇಕ ಸಿಲೆಬ್ರಿಟಿಗಳಿಗೆ ತಮ್ಮ ಮೊದಲ ಸೆಕ್ಸ್ ಅನುಭವ, ಫಸ್ಟ್ ನೈಟ್, ಡೇಟಿಂಗ್, ಸೆಕ್ಸ್ ಲೈಫ್ ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ರೀತಿಯ ಪ್ರಶ್ನೆಗಳನ್ನು ಕೇಳಿ ಮುಜಗರಕ್ಕೂ ನೂಕಿದ್ದಾರೆ.

    ಆಲಿಯಾ ಭಟ್, ವಿಜಯ್ ದೇವರಕೊಂಡ, ಅನನ್ಯ ಪಾಂಡೆ, ಸಾರಾ ಅಲಿಖಾನ್ ಸೇರಿದಂತೆ ಹಲವು ತಾರೆಯರು ಇಂತಹ ಪ್ರಶ್ನೆಗಳಿಗೆ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ. ಅದರಲ್ಲೂ ವಿಜಯ್ ದೇವರಕೊಂಡ ಒಂದು ಹೆಜ್ಜೆ ಮುಂದೆ ಹೋಗಿ, ತಾವು ಕಾರಿನಲ್ಲಿ ಸೆಕ್ಸ್ ಮಾಡಿದ್ದಾಗಿ ಹೇಳಿಕೊಂಡು ಅಚ್ಚರಿಗೆ ಕಾರಣರಾಗಿದ್ದರು. ಇಂಥದ್ದೇ ಪ್ರಶ್ನೆಯು ಆಮೀರ್ ಖಾನ್ ಗೆಸ್ಟ್ ಆಗಿ ಹೋದಾಗ ಬಂದಿದೆ. ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಉತ್ತರ ನೀಡಿದ್ದಾರೆ ಆಮೀರ್. ಇದನ್ನೂ ಓದಿ:ವಿವಾದ ಸೃಷ್ಟಿಸಿದ ಪ್ಯಾಡ್ ಮೇಲೆ ಹಿಂದೂ ದೇವರ ಪೋಸ್ಟರ್

    ಸೆಕ್ಸ್ ಜೀವನದ ಬಗ್ಗೆ ಆಮೀರ್ ಗೆ ಪ್ರಶ್ನೆಯೊಂದು ಎದುರಾದಾಗ, ‘ಕರಣ್, ನೀವು ಬೇರೆಯವರ ಸೆಕ್ಸ್ ಲೈಫ್ ಬಗ್ಗೆ ಯಾಕೆ ಇಷ್ಟೊಂದು ಕುತೂಹಲ ಹೊಂದಿದ್ದೀರಿ. ಈ ರೀತಿ ಪ್ರಶ್ನೆಗಳನ್ನು ಕೇಳುತ್ತೀರಲ್ಲ, ನಿಮ್ಮ ತಾಯಿ ನಿಮಗೆ ಏನೂ ಅನ್ನುವುದಿಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ. ಆಮೀರ್ ಈ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ ಕರಣ್.

    Live Tv
    [brid partner=56869869 player=32851 video=960834 autoplay=true]

  • ಕಾಫಿ ವಿತ್ ಕರಣ್ ಶೋಗೆ ಹೋಗದಂತೆ ತಡೆಯುತ್ತಿದ್ದಾರೆ ಯಶ್ ಅಭಿಮಾನಿಗಳು

    ಕಾಫಿ ವಿತ್ ಕರಣ್ ಶೋಗೆ ಹೋಗದಂತೆ ತಡೆಯುತ್ತಿದ್ದಾರೆ ಯಶ್ ಅಭಿಮಾನಿಗಳು

    ಬಿಟೌನ್ ನಲ್ಲಿ ಇದೀಗ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ವಿಷಯವೇ ಹಾಟ್ ಟಾಪಿಕ್. ವಿವಾದ, ಡೇಟಿಂಗ್, ಸೆಕ್ಸ್, ಖಾಸಗಿ ಸಂಗತಿಗಳನ್ನೇ ಬಂಡವಾಳ ಮಾಡಿಕೊಂಡು ಈ ಕಾರ್ಯಕ್ರಮವನ್ನು ನೆಡಿಸಿಕೊಡುತ್ತಿದ್ದಾರಂತೆ ಕರಣ್. ಹಾಗಾಗಿ ಇಂತಹ ಕಾರ್ಯಕ್ರಮಕ್ಕೆ ಯಶ್ ಹೋಗಬಾರದು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

    ಯಶ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಕಾಮೆಂಟ್ ಮಾಡಿದ್ದು, ಯಶ್ ಅವರಿಗೆ ಒಂದು ಘನತೆಯಿದೆ. ಅಲ್ಲದೇ, ಅವರು ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳು ಯಾರಿಗೂ ಸ್ಫೂರ್ತಿ ತುಂಬುವಂಥದ್ದು ಆಗಿರುವುದಿಲ್ಲ. ನಿಮ್ಮಿಂದ ಬೇರೆ ರೀತಿಯ ಉತ್ತರಗಳನ್ನೂ ನಾವು ಬಯಸುವುದಿಲ್ಲ. ಹೀಗಾಗಿ ಆ ಶೋಗೆ ಹೋಗಬೇಡಿ ಎಂದು ಹಲವಾರು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ತಮಿಳಿನ ನಟ ಜಿ.ಎಂ ಕುಮಾರ್ ಆಸ್ಪತ್ರೆಗೆ ದಾಖಲು

    ಪತ್ನಿ ರಾಧಿಕಾ ಜೊತೆ ವಿದೇಶ ಪ್ರವಾಸದಲ್ಲಿರುವ ಯಶ್, ಇದನ್ನು ಎಷ್ಟು ಗಂಭೀರವಾಗಿ ತಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಅಭಿಮಾನಿಗಳಂತೂ ಇಂಥದ್ದೊಂದು ಒತ್ತಡವನ್ನಂತೂ ಹೇರುತ್ತಿದ್ದಾರೆ. ಹಾಗಾಗಿ ಯಶ್ ನಡೆ ಏನಿರಬಹುದು ಎನ್ನುವ ಸಹಜ ಕುತೂಹಲವಂತೂ ಮೂಡಿದೆ. ಈಗಾಗಲೇ ಈ ಶೋನಲ್ಲಿ ಭಾಗಿ ಆಗುವಂತೆ ಯಶ್ ಗೂ ಕೂಡ ಕರೆ ಬಂದಿದೆ ಎನ್ನಲಾಗುತ್ತಿದೆ. ಆದರೆ, ಅವರು ಇನ್ನೂ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎನ್ನುತ್ತಾರೆ ಆಪ್ತರು.

    Live Tv
    [brid partner=56869869 player=32851 video=960834 autoplay=true]