Tag: ಕರಣ್ ಜೋಹರ್

  • ಫಿಲ್ಮ್ ಮೇಕರ್ ಕರಣ್ ಜೋಹರ್ ಇನ್ನೂ ಯಾಕೆ ಮದುವೆಯಾಗಿಲ್ಲ.?

    ಫಿಲ್ಮ್ ಮೇಕರ್ ಕರಣ್ ಜೋಹರ್ ಇನ್ನೂ ಯಾಕೆ ಮದುವೆಯಾಗಿಲ್ಲ.?

    ಬಾಲಿವುಡ್‌ನ ನಿರ್ಮಾಪಕ ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಬಾಲಿವುಡ್‌ನ ತಮ್ಮ ಸ್ನೇಹಿತರಿಗೆಲ್ಲಾ ಕರಣ್ ಜೋಹರ್ ಪಾರ್ಟಿ ಆಯೋಜಿಸಿದ್ದರು. ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದನ್ನು ತಮಗೆ ಜೀವನ ಸಂಗಾತಿ ಇಲ್ಲದಿರುವುದು ದೊಡ್ಡ ವಿಷಾದ ಎಂದು ಸಂದರ್ಶನದಲ್ಲಿ ಕರಣ್ ಜೋಹರ್ ಮಾತನಾಡಿದ್ದಾರೆ.

    ಹಿಂದಿ ಚಿತ್ರರಂಗದ ಫಿಲ್ಮ್ ಮೇಕರ್ ಕರಣ್ ಜೋಹರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ ೫೦ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಇಡೀ ಬಾಲಿವುಡ್‌ಯೇ ಕರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾಥ್ ನೀಡಿದ್ದರು. ಇನ್ನು ವೃತ್ತಿ ಬದುಕಿನ ಮೇಲೆ ಹೆಚ್ಚು ಆಸಕ್ತಿ ಹೊಂದಿರುವ ಕರಣ್ ಜೋಹರ್ ಇತ್ತೀಚೆಗಷ್ಟೇ ಸಂದರ್ಶನವೊಂದನ್ನು ನೀಡಿದ್ದಾರೆ. ತಮ್ಮ ಜೀವನ ಸಂಗಾತಿಯ ಕುರಿತು ಸಂದರ್ಶನದಲ್ಲಿ ಕರಣ್ ಜೋಹರ್ ಮಾತನಾಡಿದ್ದಾರೆ. ಇದನ್ನೂ ಓದಿ: ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದ `ಆರ್‌ಆರ್‌ಆರ್’ ಕಲೆಕ್ಷನ್: 1100 ಕೋಟಿ ಬಾಚಿದ ಚಿತ್ರ

    ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಸ್ವಲ್ಪ ಹೆಚ್ಚು ಗಮನ ಹರಿಸಬೇಕಿತ್ತು ಎಂದೆನಿಸುತ್ತದೆ. ಪರ್ಸನಲ್ ಲೈಫ್ ಬಗ್ಗೆ ನಾನು ಹೆಚ್ಚು ಪ್ರಾಮುಖ್ಯತೆ ಕೊಟ್ಟಿಲ್ಲ. ನಿರ್ಮಾಪಕ ಹಾಗೂ ನಿರ್ದೇಶಕನ ಜವಾಬ್ದಾರಿಗಳು ಹೆಚ್ಚಾಗಿದ್ದ ಕಾರಣ ನನ್ನ ವೈಯಕ್ತಿಕ ಜೀವನಕ್ಕೆ ಹೆಜ್ಜೆ ಪ್ರಾಮುಖ್ಯತೆ ಕೊಡಲಾಗಲಿಲ್ಲ. ಪರ್ಸನಲ್ ಲೈಫ್‌ಗೆ ಸಮಯ ನೀಡದಿರುವುದು ನನ್ನ ಜೀವನದ ದೊಡ್ಡ ವಿಷಾದ. ಈಗ ಎಲ್ಲವೂ ತಡವಾಗಿದೆ. ಈಗ ಜೀವನ ಸಂಗಾತಿಯನ್ನು ಹುಡುಕಲು ಸಮಯ ಮೀರಿದೆ. ನನ್ನ ಜೀವನದಲ್ಲಿ ಆ ಸ್ಥಾನ ಯಾವಾಗಲೂ ಹಾಗೇ ಖಾಲಿ ಇರುತ್ತದೆ. ಇದೇ ನನ್ನ ಜೀವನದ ಆಳವಾದ ವಿಷಾದ ಎಂದು ಸಂದರ್ಶನದಲ್ಲಿ ಕರಣ್ ಜೋಹರ್ ಹೇಳಿದ್ದಾರೆ.

    ಇನ್ನು ಬಾಡಿಗೆ ತಾಯಿಯ ಮೂಲಕ ಕರಣ್ ಜೋಹರ್, ಅವಳಿ ಮಕ್ಕಳನ್ನು ಬರಮಾಡಿಕೊಂಡಿದ್ದರು. ತಮ್ಮ ತಂದೆ ತಾಯಿ ಹೆಸರನ್ನೇ ಆ ಮಕ್ಕಳಿಗೆ ಇಟ್ಟಿದ್ದಾರೆ. ಆ ಮಕ್ಕಳೇ ಇಂದು ಕರಣ್ ಜೋಹರ್ ಪ್ರಪಂಚವಾಗಿದ್ದಾರೆ.

    Live Tv

  • ಕರಣ್ ಜೋಹರ್ ಹುಟ್ಟುಹಬ್ಬಕ್ಕೆ ಬಂದ 55 ಮಂದಿಗೆ ಕೊರೊನಾ ಕಂಟಕ

    ಕರಣ್ ಜೋಹರ್ ಹುಟ್ಟುಹಬ್ಬಕ್ಕೆ ಬಂದ 55 ಮಂದಿಗೆ ಕೊರೊನಾ ಕಂಟಕ

    ಬಾಲಿವುಡ್‌ನ ಹೆಸರಾಂತ ನಿರ್ಮಾಪಕ ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ 50ನೇ ವರ್ಷದ ಹುಟ್ಟು ಹಬ್ಬವನ್ನ ಅದ್ದೂರಿಯಾಗಿ ಆಚರಿಸಿದ್ದರು. ಈಗ ಕರಣ್ ಬರ್ತಡೇಗೆ ಬಂದ ಅತಿಥಿಗಳಿಂದ ಶಾಕಿಂಗ್ ಅಪ್‌ಡೇಟ್ ಸಿಕ್ಕಿದೆ. ಕರಣ್ ಬರ್ತಡೇ ಪಾರ್ಟಿಗೆ ಬಂದ 55 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

    ಹಿಂದಿ ಚಿತ್ರರಂಗದಲ್ಲಿ ನಿರ್ದೇಶಕ, ನಿರೂಪಕ, ಮತ್ತು ನಿರ್ಮಾಪಕನಾಗಿ ಛಾಪೂ ಮೂಡಿಸಿದ ನಟ ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಈ ಬರ್ತಡೇ ಪಾರ್ಟಿಗೆ ಇಡೀ ಬಾಲಿವುಡ್ ಚಿತ್ರರಂಗನೇ ಸಾಕ್ಷಿಯಾಗಿತ್ತು. ಕರಣ್ ಆಹ್ವಾನಕ್ಕೆ ಓಗೊಟ್ಟು ಅನೇಕ ಸೆಲೆಬ್ರಿಟಿಗಳು ಬರ್ತಡೇಗೆ ಹಾಜರ್ ಆಗಿದ್ದರು. ಇದೀಗ ಬರ್ತಡೇ ಪಾರ್ಟಿನೇ ಅನೇಕರಿಗೆ ಕುತ್ತು ತಂದಿದೆ. ಈ ಪೈಕಿ ಅನೇಕ ಸೆಲೆಬ್ರಿಟಿಗಳಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಕುರಿತು ಇನ್ನಷ್ಟೇ ಕರಣ್ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.

    ಪ್ರತಿ ಬಾರಿ ಕರಣ್ ಜೋಹರ್ ಬರ್ತಡೇ ಪಾರ್ಟಿ ಆಯೋಜನೆ ಮಾಡಿದಾಗಲೂ ಒಂದಲ್ಲಾ ಒಂದು ಆರೋಪ ಏದುರಿಸುವ ಕರಣ್, ಈ ಬಾರಿ ಕೊರೊನಾ ಕಳಂಕ ಎದುರಾಗಿದೆ. ಇನ್ನು ಯಶ್ ರಾಜ್ ಸ್ಟುಡಿಯೋದಲ್ಲಿ ಕರಣ್ ಹುಟ್ಟುಹಬ್ಬಕ್ಕೆ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ರಶ್ಮಿಕಾ ಮಂದಣ್ಣ, ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ, ಜಾನ್ವಿ ಕಪೂರ್, ಕತ್ರಿನಾ, ವಿಕ್ಕಿ ಕೌಶಲ್, ರಣ್‌ಬೀರ್ ಕಪೂರ್ ಹೀಗೆ ಬಾಲಿವುಡ್ ದಿಗ್ಗಜರೆಲ್ಲ ಒಟ್ಟುಗೂಡಿದ್ದರು. ಇದನ್ನೂ ಓದಿ: ʻಕೆಜಿಎಫ್‌ 2ʼ 50ನೇ ದಿನದ ಸೆಲೆಬ್ರೇಶನ್‌ನಲ್ಲಿ ಯಶ್‌ ಜೊತೆ ರಾಧಿಕಾ ಕಾಣಿಸಿಕೊಂಡಿದ್ದು ಹೀಗೆ

    ಈಗ ಬರ್ತಡೇ ಪಾರ್ಟಿಗೆ ಬಂದ 55 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಯಾರೆಲ್ಲ ಸೆಲೆಬ್ರಿಟಿಗೆ ಕೊರೊನಾ ಆಗಿದೆ ಎಂಬುದು ತಿಳಿದು ಬಂದಿಲ್ಲ. ಇನ್ನು ಕರಣ್ ಜೋಹರ್ ಕೊರೊನಾ ಕಂಟಕ ಕಳಂಕದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

  • ಕರಣ್ ಜೋಹರ್ ಬರ್ತ್‌ಡೇ ಪಾರ್ಟಿಯಲ್ಲಿ ಸಿನಿ ತಾರೆಯರ ದಂಡು

    ಕರಣ್ ಜೋಹರ್ ಬರ್ತ್‌ಡೇ ಪಾರ್ಟಿಯಲ್ಲಿ ಸಿನಿ ತಾರೆಯರ ದಂಡು

    ಬಾಲಿವುಡ್‌ನ ಪ್ರತಿಭಾವಂತ ನಿರ್ಮಾಪಕ ಕರಣ್ ಜೋಹರ್ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಕರಣ್ ಹುಟ್ಟುಹಬ್ಬದ ಸಂಭ್ರಮಕ್ಕೆ ಇಡೀ ಚಿತ್ರರಂಗವೇ ಸಾಕ್ಷಿಯಾಗಿದೆ. ಪಾರ್ಟಿಗೆ ಆಗಮಿಸಿ ನಿರ್ಮಾಪಕ ಕರಣ್‌ಗೆ ಶುಭಹಾರೈಸಿದ್ದಾರೆ. ಯಾರೆಲ್ಲ ತಾರೆಯರು ಬರ್ತ್‌ಡೇ ಸಂಭ್ರಮಕ್ಕೆ ಸಾಕ್ಷಿಯಾದರು.. ಇಲ್ಲಿದೆ ಡಿಟೈಲ್ಸ್

    ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ ಹಿಂದಿ ಚಿತ್ರರಂಗಕ್ಕೆ ಕೊಟ್ಟಿರೋ ಕೊಡುಗೆ ಅಪಾರ. ಇನ್ನು ಮೇ 25ರಂದು 50ನೇ ವರ್ಷಕ್ಕೆ ಕರಣ್ ಜೋಹರ್ ಕಾಲಿಟ್ಟಿದ್ದಾರೆ.

    ಆಫ್‌ ಸೆಂಚುರಿ ಭಾರಿಸಿರೋ ಕರಣ್ ಬರ್ತಡೇಯನ್ನ ಅದ್ದೂರಿಯಾಗಿ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಆಚರಿಸಲಾಯ್ತು. ಒಂದ್ ಕಡೆ ಕರಣ್ ಹುಟ್ಟುಹಬ್ಬ ಅನ್ನೋ ಖುಷಿಯಾಗಿದ್ರೆ, ಬರ್ತ್‌ಡೇಗೆ ಮತ್ತಷ್ಟು ಹೊಳಪು ತುಂಬಲು ಬಾಲಿವುಡ್ ಮತ್ತು ಸೌತ್ ಸಿನಿರಂಗದ ತಾರೆಯರೆಲ್ಲ ಜೊತೆಯಾಗಿದ್ದೆ ಮತ್ತೊಂದು ವಿಶೇಷ. ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಗೆ ಸಲ್ಮಾನ್ ಖಾನ್,ಕರೀನಾ ಮತ್ತು ಸೈಫ್ ಆಲಿಖಾನ್, ವಿಕ್ಕಿ ಮತ್ತು ಕತ್ರಿನಾ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ, ಟೈಗರ್ ಶ್ರಾಫ್, ಸಿದ್ಧಾರ್ಥ್ ಮತ್ತು ಪ್ರಿಯಾಂಕಾ ಚೋಪ್ರಾ, ವರುಣ್ ಧವನ್, ಕಿಯಾರಾ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್, ರಣ್‌ಬೀರ್ ಕಪೂರ್ ಮತ್ತು ನೀತು ಕಪೂರ್ ಹೀಗೆ ಸಾಕಷ್ಟು ಸ್ಟಾರ್ಸ್ ಈ ಪಾರ್ಟಿಗೆ ಭಾಗವಹಿಸಿದ್ದರು.

    ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

  • ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ವಿಜಯ್ ದೇವರಕೊಂಡ-ರಶ್ಮಿಕಾ

    ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ವಿಜಯ್ ದೇವರಕೊಂಡ-ರಶ್ಮಿಕಾ

    ಬಾಲಿವುಡ್‌ನ ಹೆಸರಾಂತ ನಿರ್ಮಾಪಕ ಕರಣ್ ಜೋಹರ್ ಇಂದು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದೇ ಖುಷಿಯಲ್ಲಿ ಸಂಜೆ ಆಯೋಜಿಸಿರುವ ಕರಣ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಲ್ಲ ಚಿತ್ರರಂಗದ ಕಲಾವಿದರು ಒಟ್ಟಾಗಲಿದ್ದಾರೆ. ಅಷ್ಟೇ ಅಲ್ಲ, ಈ ಇವೆಂಟ್‌ಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಕೂಡ ಭಾಗವಹಿಸುತ್ತಿದ್ದಾರೆ.

    ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ ೫೦ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಕರಣ್ ಜೋಹರ್ ಹುಟ್ಟುಹಬ್ಬಕ್ಕೆ ಬಾಲಿವುಡ್ ಮಂದಿಗೆ ಮಾತ್ರವಲ್ಲ ನ್ಯಾಷನಲ್ ಸ್ಟಾರ್ ಯಶ್ ಸೇರಿದಂತೆ ಪರಭಾಷೆಯ ಸ್ಟಾರ್ ಕಲಾವಿದರಿಗೆ ಬರ್ತಡೇ ಆಮಂತ್ರಣವಿದೆ. ಇದೀಗ ವಿಜಯ್ ದೇವಕೊಂಡ ಮತ್ತು ರಶ್ಮಿಕಾ ಅಭಿಮಾನಿಗಳು ಖುಷಿಪಡುವಂತಹ ಸುದ್ದಿ ಸಿಕ್ಕಿದೆ. ಕರಣ್ ಹುಟ್ಟುಹಬ್ಬಕ್ಕೆ ʻಗೀತ ಗೋವಿಂದಂʼ ಜೋಡಿ ಕೂಡ ಸಾಥ್ ಕೊಡಲಿದ್ದಾರೆ.

    ಕರಣ್ ಜೋಹರ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಯಶ್ ರಾಜ್ ಸ್ಟುಡಿಯೋದಲ್ಲಿ ಅದ್ದೂರಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಇದೀಗ `ಖುಷಿ’ ಚಿತ್ರದ ಶೂಟಿಂಗ್ ಮುಗಿಸಿ, ಮುಂಬೈಗೆ ಬಂದಿರುವ ವಿಜಯ್ ಬಂದಿದ್ದಾರೆ. ಸಂಜೆ ನಂತರ ಬರ್ತಡೇ ಪಾರ್ಟಿಯಲ್ಲಿ ವಿಜಯ್ ಮತ್ತು ರಶ್ಮಿಕಾ ಕೂಡ ಭಾಗಿಯಾಗ್ತಿದ್ದಾರೆ. ಜೊತೆ ಲೈಗರ್ ನಟಿ ಅನನ್ಯ ಪಾಂಡೆ ಮತ್ತು ನಿರ್ಮಾಪಕಿ ಚಾರ್ಮಿ ಕೂಡ ಇರಲಿದ್ದಾರೆ. ಇದನ್ನೂ ಓದಿ: ಕಂಬಳ ಕುರಿತಾಗಿ ಕನ್ನಡದಲ್ಲಿ ಮತ್ತೊಂದು ಸಿನಿಮಾ: ಒಂದಕ್ಕೆ ರಿಷಭ್ ಮತ್ತೊಂದಕ್ಕೆ ರಾಜೇಂದ್ರ ಸಿಂಗ್ ಬಾಬು ಡೈರೆಕ್ಟರ್

    ನಿರ್ಮಾಪಕ ಕರಣ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಲ್ಲ ಸ್ಟಾರ್ ನಟ ನಟಿಯರ ದಂಡೇ ಇರಲಿದೆ. ಯಾರೆಲ್ಲ ಬರಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.

  • ದಕ್ಷಿಣದ ಸಿನಿಮಾಗಳಿಗೆ ಭೇಷ್ ಎಂದ ನಿರ್ದೇಶಕ ಕರಣ್ ಜೋಹರ್

    ದಕ್ಷಿಣದ ಸಿನಿಮಾಗಳಿಗೆ ಭೇಷ್ ಎಂದ ನಿರ್ದೇಶಕ ಕರಣ್ ಜೋಹರ್

    ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಕ್ಷಿಣದ ಸಿನಿಮಾಗಳು ಸಕ್ಸಸ್ ಕಾಣುತ್ತಿದೆ. ಕೆಲ ಬಾಲಿವುಡ್ ಸ್ಟಾರ್ಸ್ ಅಸಮಾಧಾನ ಹೊರಹಾಕಿದ್ದರೆ, ಇನ್ನು ಕೆಲವರು ಸೌತ್ ಚಿತ್ರಗಳನ್ನ ನೋಡಿ ಮೆಚ್ಚಿಕೊಂಡಿದ್ದರು. ಈಗ ನಿರ್ದೇಶಕ ಕರಣ್ ಜೋಹರ್ ದಕ್ಷಿಣದ ಸಿನಿಮಾಗಳನ್ನು ಹಾಡಿ ಹೊಗಳಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ ದಕ್ಷಿಣದ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹಿಂದಿ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸೌತ್ ಚಿತ್ರಗಳ ಗೆಲುವಿಗೆ ಕೆಲ ಬಾಲಿವುಡ್ ಮಂದಿ ಅಸಮಾಧಾನ ಹೊರ ಹಾಕಿದರೆ, ಇನ್ನು ಕೆಲವರು ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಬಾಲಿವುಡ್ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ ಸೌತ್ ಸಿನಿಮಾಗಳನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ, ಕಥೆ, ಸಿನಿಮಾ ಕ್ವ್ಯಾಲಿಟಿ ಬಗ್ಗೆ ಭೇಷ್ ಎಂದಿದ್ದಾರೆ.

    ಕೆಜಿಎಫ್ 2, ಪುಷ್ಪ, ಆರ್‌ಆರ್‌ಆರ್ ಚಿತ್ರಗಳು ಗೆಲ್ಲಲು ನಿರ್ದೇಶಕರ ಪಾತ್ರ ದೊಡ್ಡದಿದೆ. ಈ ಸಿನಿಮಾಗಳು ಭಾರತೀಯ ಸಿನಿಮಾಗಳೇ ಆಗಿರುವುದರಿಂದ ನಮಗೆ ಹೆಮ್ಮೆ ಎನಿಸುತ್ತದೆ. ನಮ್ಮ ಭಾರತೀಯ ಚಿತ್ರರಂಗದಲ್ಲಿ ಪ್ರಶಾಂತ್‌ನೀಲ್,ಸುಕುಮಾರ್, ರಾಜಮೌಳಿ ಅಂತಹ ಟ್ಯಾಲೆಂಟೆಡ್ ನಿರ್ದೇಶಕರು ನಮ್ಮಲ್ಲಿದ್ದಾರೆ ಎನ್ನುವುದೇ ಖುಷಿ ಎಂದಿದ್ದಾರೆ. ಇನ್ನು ಹಿಂದಿಯ `ಭೂಲ್ ಭುಲಯ್ಯಾ 2′ ಚಿತ್ರ ಇದೀಗ ತೆರೆಕಂಡಿದ್ದು, ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಅಖಾಡಕ್ಕೆ ರಾಕ್ ಲೈನ್ ವೆಂಕಟೇಶ್ : ಉಲ್ಟಾ ಆದ ಲೆಕ್ಕಾಚಾರ

    ಯಾವ ಭಾಷೆಯಲ್ಲಿ ಸಿನಿಮಾ ನಿರ್ಮಾಣವಾದ್ದರೂ, ಅದು ಭಾರತೀಯ ಚಿತ್ರದ ಭಾಗವೇ ಆಗಿದೆ ಎಂದು ಅಕ್ಷಯ್ ಕುಮಾರ್ ಹೇಳಿಕೆಯನ್ನು ಕರಣ್ ಜೋಹರ್ ಸಮರ್ಥಿಸಿಕೊಂಡಿದ್ದಾರೆ.

  • ಆತಂಕದಿಂದ ಲಗೇಜ್ ತೆಗೆದುಕೊಂಡು ಎಲ್ಲಿಗೆ ಓಡಿದರು ಆಲಿಯಾ ಭಟ್

    ಆತಂಕದಿಂದ ಲಗೇಜ್ ತೆಗೆದುಕೊಂಡು ಎಲ್ಲಿಗೆ ಓಡಿದರು ಆಲಿಯಾ ಭಟ್

    ಬಾಲಿವುಡ್ ಲವ್‌ಬರ್ಡ್ಸ್ ರಣಬೀರ್‌ ಕಪೂರ್ ಮತ್ತು ಆಲಿಯಾ ಭಟ್ ಏ.೧೪ರಂದು ಮದುವೆಯಾಗಿ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟಿದ್ದಾರೆ. ಮದುವೆಯಾಗಿ ಎರಡೇ ದಿನಕ್ಕೆ ಈ ಜೋಡಿ ತಮ್ಮ ವೃತ್ತಿಜೀವನದ ಕಡೆ ಗಮನ ಹರಿಸಿದ್ದಾರೆ. ಪ್ರಸ್ತುತ ಆಲಿಯಾ ಅವರು ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಈ ನಟಿಯ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಆಲಿಯಾ ವಿಮಾನ ನಿಲ್ದಾಣದಲ್ಲಿ ತುಂಬ ಗಾಬರಿಯಿಂದ ಓಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಆಲಿಯಾ, ಟ್ರಾಲಿಯಲ್ಲಿ ಲಗೇಜ್ ಹಾಕಿಕೊಂಡು ಓಡುತ್ತಿರುವ ದೃಶ್ಯ ಸೆರೆಯಾಗಿದೆ. ವೀಡಿಯೋ ನೋಡಿದ ಅಭಿಮಾನಿಗಳು, ಏನಾಯಿತು? ಅವರೇನಾದರೂ ಫ್ಲೈಟ್ ಮಿಸ್ ಮಾಡಿಕೊಂಡ್ರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಸಿನಿಮಾದಲ್ಲಿ ಶಿವರಾಜ್ ಕುಮಾರ್: ಏನಿದು ಭರ್ಜರಿ ಕಾಂಬಿನೇಷನ್?

    ಆದರೆ ಅಸಲಿ ಕಹಾನಿ ಬೇರೆಯೇ ಇದೆ. ಆಲಿಯಾ ಗಾಬರಿಯಿಂದ ವಿಮಾನ ನಿಲ್ದಾಣಕ್ಕೆ ಓಡಿ ಬರುವುದು ಸಿನಿಮಾದ ದೃಶ್ಯ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಶೂಟಿಂಗ್ ವೇಳೆ ತೆಗೆದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ಇದು ಸಖತ್ ವೈರಲ್ ಆಗಿದೆ. ಈ ವೀಡಿಯೋಗೆ ಅಭಿಮಾನಿಗಳು ಫುಲ್ ಪ್ರತಿಕ್ರಿಯೆ ಕೊಡುತ್ತಿದ್ದಾರೆ.

    ಆಲಿಯಾಗೆ ಸಿನಿರಂಗದಲ್ಲಿ ಬೇಡಿಕೆ ಹೆಚ್ಚು. ‘RRR’ ಸಿನಿಮಾ ಗೆದ್ದ ಮೇಲೆ ಆಲಿಯಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ರಣವೀರ್ ಜೊತೆ ಈ ನಟಿ  2 ನೇ ಬಾರಿಗೆ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಕುತುಹಲ ಮೂಡಿಸಿದೆ. ಅಲ್ಲದೇ ಈ ಸಿನಿಮಾದಲ್ಲಿ ಕರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ಎಲ್ಲಕಡೆ ಹಬ್ಬಿದೆ. ಈ ಸಿನಿಮಾದಲ್ಲಿ ಬಾಲಿವುಡ್ ಬಾದ್‌ಷಾ, ಸೂಪರ್ ಹಿಟ್ ಜೋಡಿ ಶಾರೂಖ್ ಮತ್ತು ಕಾಜೋಲ್ ಸಹ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದನ್ನೂ ಓದಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಈ ಎಲ್ಲ ಕಾರಣಗಳಿಂದ ಸಿನಿಮಾ ಬಗ್ಗೆ ಎಲ್ಲರಲ್ಲಿಯೂ ಕುತೂಹಲ ಹೆಚ್ಚಾಗುವಂತೆ ಮಾಡುತ್ತಿದೆ.

  • ಹಳದಿ ಶೆರ್ವಾನಿ ಹಾಕಿಕೊಂಡು ಆಲಿಯಾ-ರಣಬೀರ್ ಅರಿಶಿಣ ಶಾಸ್ತ್ರಕ್ಕೆ ಹೊರಟ ಕರಣ್ ಜೋಹರ್

    ಹಳದಿ ಶೆರ್ವಾನಿ ಹಾಕಿಕೊಂಡು ಆಲಿಯಾ-ರಣಬೀರ್ ಅರಿಶಿಣ ಶಾಸ್ತ್ರಕ್ಕೆ ಹೊರಟ ಕರಣ್ ಜೋಹರ್

    ಬಾಲಿವುಡ್ ಲವ್‌ಬರ್ಡ್ಸ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಬಗ್ಗೆ ಹಲವು ಗೊಂದಲಗಳು ಕೇಳಿ ಬರುತ್ತಿದೆ. ಈ ಜೋಡಿ ಮದುವೆ ಏಪ್ರಿಲ್ 14(ನಾಳೆ) ನಡೆಯಲಾಗುತ್ತೆ ಎಂದು ಕೇಳಿಬರುತ್ತಿತ್ತು. ಆದರೆ ಮದುವೆ ದಿನಾಂಕ ಮುಂದೆ ಹೋಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿತ್ತು. ಆದರೆ ಇದು ನಿಜವೇ ಎಂಬುದರ ಬಗ್ಗೆ ಬಿ’ಟೌನ್‍ನಲ್ಲಿ ಸಂಶಯ ಎದ್ದು ಕಾಣಿಸುತ್ತಿದೆ. ಈ ನಡುವೆ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮ ನಿವಾಸದಿಂದ ಹಳದಿ ಬಣ್ಣದ ಬಟ್ಟೆ ಹಾಕಿಕೊಂಡು ಅರಿಶಿಣ ಶಾಸ್ತ್ರಕ್ಕೆ ಹೋಗಿರುವುದು ಕ್ಯಾಮರಾ ಕಣ್ಣಿಗೆ ಬಿದ್ದಿದೆ.

    ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂಬೈನ ಬಾಂದ್ರಾದಲ್ಲಿರುವ ಕಪೂರ್ ನಿವಾಸದಲ್ಲಿ ಈ ಲವ್‌ಬರ್ಡ್ಸ್ ವಿವಾಹವಾಗಲಿದ್ದಾರೆ. ಈ ಸುದ್ದಿ ತಮ್ಮ ನೆಚ್ಚಿನ ನಟ-ನಟಿ ಬಾಯಲ್ಲಿ ಕೇಳಬೇಕು ಎಂದು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಮದುವೆಯ ಸಂಭ್ರಮಗಳು ಇಂದಿನಿಂದ ಪ್ರಾರಂಭವಾಗಿದ್ದು, ಭಟ್ ಮತ್ತು ಕಪೂರ್ ಕುಟುಂಬಗಳು ಪ್ರಸ್ತುತ ಮೆಹೆಂದಿ ಶಾಸ್ತ್ರಕ್ಕೆ ಸಜ್ಜಾಗುತ್ತಿವೆ. ಈ ಸಮಾರಂಭಕ್ಕೆ ಎರಡು ಕುಟುಂಬದ ಆತ್ಮೀಯರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಗೆ ದುಬಾರಿ ಕಾರು ಕೊಡಿಸಿದ್ದು ಯಾರು? ವೀಡಿಯೋ ಸಮೇತ ಸಾಕ್ಷಿ ಇದೆ

    ಸಮಾರಂಭದ ಮೊದಲು, ನೀತು ಕಪೂರ್, ರಿದ್ಧಿಮಾ ಕಪೂರ್ ಸಾಹ್ನಿ, ಅವರ ಮಗಳು, ಆಧಾರ್ ಜೈನ್, ಅರ್ಮಾನ್ ಜೈನ್, ಅನಿಸಾ, ಅಯಾನ್ ಮುಖರ್ಜಿ, ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್ ಮತ್ತು ಭಟ್ ಕುಟುಂಬ ಆಗಮಿಸಿದ್ದು ಕಂಡುಬಂದಿತು. ಈಗ, ಕರಣ್ ಜೋಹರ್ ಅವರು ರಣಬೀರ್ ಮತ್ತು ಆಲಿಯಾ ಅವರ ಮೆಹಂದಿ ಸಮಾರಂಭಕ್ಕೆ ಆಗಮಿಸುತ್ತಿದ್ದಂತೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಕರಣ್ ಸಂಭ್ರಮಾಚರಣೆಗಾಗಿ ಹಳದಿ ಶೆರ್ವಾನಿಯನ್ನು ಧರಿಸಿಕೊಂಡು ತಮ್ಮ ಮನೆಯಿಂದ ಹೊರಟಿದ್ದಾರೆ.

    ಆಲಿಯಾಗೆ ಕರಣ್ ಬಹಳ ಆಪ್ತರಾಗಿದ್ದು, ಅವರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿದ್ದಾರೆ. ಕರಣ್ ಅವರನ್ನು ಆಲಿಯಾ ತನ್ನ ಮಾರ್ಗದರ್ಶಕ ಎಂದು ಪರಿಗಣಿಸುತ್ತಾರೆ. ಇದನ್ನೂ ಓದಿ: ಗರ್ಭಿಣಿ ಮಹಿಳೆಯ ಮೊದಲ ಕೆಲಸದ ರಹಸ್ಯ ಬಿಚ್ಚಿಟ್ಟ ನಟಿ ಪ್ರಣಿತಾ

    ಏಪ್ರಿಲ್ 17 ರಂದು ಈ ಲವ್‌ಬರ್ಡ್ಸ್ ಅದ್ದೂರಿ ಆರತಕ್ಷತೆಯನ್ನು ಮುಂಬೈನ ತಾಜ್ ಮಹಲ್ ಅರಮನೆಯಲ್ಲಿ ಆಯೋಜಿಸಲಿದ್ದಾರೆ. ಈ ಸಂಭ್ರಮಕ್ಕೆ ಶಾರುಖ್ ಖಾನ್, ರಾಣಿ ಮುಖರ್ಜಿ, ಹೃತಿಕ್ ರೋಷನ್, ಕರಣ್ ಜೋಹರ್, ಅಯನ್ ಮುಖರ್ಜಿ ಮುಂತಾದ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಣಬೀರ್ ಮತ್ತು ಆಲಿಯಾ ತಮ್ಮ ಮದುವೆಯ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ವರದಿಗಳಲ್ಲಿ ಹೇಳಲಾಗುತ್ತಿದೆ. ಈ ಸುದ್ದಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  • ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಭಾಷೆಗಳಲ್ಲಿ ಮಿಂಚುತ್ತಿದ್ದು, ಇವರು ಮಾಡಿದ ಆಲ್ಮೂಸ್ಟ್ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. ಅಭಿಮಾನಿಗಳು ರಶ್ಮಿಕಾ ಅವರನ್ನು ಲಕ್ಕಿ ಸ್ಟಾರ್ ಎಂದು ಕರೆಯುತ್ತಿದ್ದಾರೆ. ಈಗ ರಶ್ಮಿಕಾ ಬಾಲಿವುಡ್ನಲ್ಲಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಅವರ ಎರಡು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಈ ನಡುವೆಯೇ ಮೆಗಾ ಪ್ರಾಜೆಕ್ಟ್‌ಗೆ ಈ ತಾರೆ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿದೆ.

    ರಶ್ಮಿಕಾ ಬಾಲಿವುಡ್ ‘ಮಿಷನ್ ಮಜ್ನು’ ಶೂಟಿಂಗ್ ಪೂರ್ತಿ ಮುಗಿದಿದ್ದು, ರಿಲೀಸ್ಗೆ ರೆಡಿ ಇದೆ. ಬಾಲಿವುಡ್‌ಗೆ 2ನೇ ಸಿನಿಮಾ ‘ಗುಡ್ ಬೈ’ ಕೂಡ ಶೂಟಿಂಗ್ ಮುಗಿದು, ಇನ್ನಷ್ಟೇ ಅದು ತೆರೆಗೆ ಬರಬೇಕಿದೆ. ಈ ವೇಳೆಯೇ ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಮತ್ತು ರಣಬೀರ್ ಕಪೂರ್ ಕಾಂಬಿನೇಷನ್‌ನಲ್ಲಿ ‘ಅನಿಮಲ್’ ಸಿನಿಮಾ ಮೂಡಿಬರಲಿದ್ದು ಈ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಈ ಸಿನಿಮಾಗೆ ಮೊದಲು ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ನಾಯಕಿ ಎಂಬ ಸುದ್ದಿಯಿತ್ತು. ಆದರೆ ಅವರು ಸಿನಿಮಾದಿಂದ ಹೊರಬಂದಿದ್ದಾರೆ ಎಂಬ ಮಾಹಿತಿಯಿದೆ. ಆ ಪಾತ್ರವನ್ನು ರಶ್ಮಿಕಾ ನಿರ್ವಹಿಸುತ್ತಾರಂತೆ. ಈ ಸಿನಿಮಾಗೆ ಇವರೇ ಹೀರೋಯಿನ್ ಎಂದು ಅಧಿಕೃತವಾಗಿ ಘೋಷಣೆಯಾದರೆ ರಣಬೀರ್ ಅವರಿಗೆ ರಶ್ಮಿಕಾ ಪತ್ನಿಯಾಗಿ ನಟಿಸಲಿದ್ದಾರೆ. ಈ ಸುದ್ದಿ ರಶ್ಮಿಕಾ ಅಭಿಮಾನಿಗಳಿಗೆ ಫುಲ್ ಟ್ರೀಟ್ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

    ರಶ್ಮಿಕಾಗೆ ಹಿಂದಿಯ ದೊಡ್ಡ ಬ್ಯಾನರ್ ಆದ ಕರಣ್ ಜೋಹರ್ ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಇತ್ತೀಚೆಗಷ್ಟೇ ರಶ್ಮಿಕಾ ಅವರು ಕರಣ್ ಜೋಹರ್ ಆಫೀಸ್‌ಗೆ ಭೇಟಿ ಕೊಟ್ಟಿದ್ದು, ಬಾಲಿವುಡ್ ಸ್ಟಾರ್ ನಟರ ಜೊತೆ ಈ ನಟಿ ತೆರೆಹಂಚಿಕೊಳ್ಳುತ್ತಾರೆ ಎಂಬ ಸುದ್ದಿಯೂ ಇದೆ. ತಮಿಳು, ತೆಲುಗಿನಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲೂ ಕನ್ನಡದ ಹುಡುಗಿ ಮಿಂಚುತ್ತಿದ್ದಾರೆ. ಇದನ್ನೂ ಓದಿ: ಡಿಂಪಲ್ ಕ್ವೀನ್‍ಗೆ ಮೋಹಕತಾರೆಯ ಮೆಚ್ಚುಗೆ ಕಾಮೆಂಟ್ – ಅಭಿಮಾನಿಗಳು ಖುಷ್ 

  • ತಂದೆಯನ್ನು ನೆನೆದು ಭಾವುಕರಾಗಿ ಕರಣ್ ಜೋಹರ್ ಪೋಸ್ಟ್

    ತಂದೆಯನ್ನು ನೆನೆದು ಭಾವುಕರಾಗಿ ಕರಣ್ ಜೋಹರ್ ಪೋಸ್ಟ್

    ಮುಂಬೈ: ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಂದೆಯನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಭಾವುಕರಾಗಿದ್ದಾರೆ.

    ಕರಣ್ ಇನ್‍ಸ್ಟಾಗ್ರಾಮ್ ನಲ್ಲಿ, ನೀವು ನನ್ನನ್ನು ಬಿಟ್ಟು ಹೋಗಿ ತುಂಬಾ ವರ್ಷಗಳಾಗಿದೆ. ಆದರೂ ಸಹ ಅಪ್ಪ ನೀವು ನಿನ್ನೆ ನನ್ನ ಜೊತೆಯಲ್ಲಿ ಇದ್ದ ರೀತಿ ಇದೆ. ನಾನು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೂ ಅವರು ಮಾರ್ಗದರ್ಶನ ನೀಡುತ್ತಿದ್ದರು. ಯಶ್ ಜೋಹರ್ ಫೌಂಡೇಶನ್ ಈಗ ಸ್ಥಾಪನೆಯಾಗಿದೆ. ಅದರಿಂದ ನಮ್ಮ ಸುತ್ತಮುತ್ತ ಒಳ್ಳೆಯ ರೀತಿ ಬದಲಾಗುತ್ತೆ ಎಂದು ನಾನು ನಂಬಿದ್ದೇನೆ. ಅದು ಅಲ್ಲದೇ ನನ್ನ ಅಪ್ಪ ಎಲ್ಲಿಯೂ ಹೋಗಿಲ್ಲ. ಅವರು ಇಲ್ಲೇ ಇದ್ದಾರೆ. ನನ್ನನ್ನು ಬೆಂಬಲಿಸುವ ಹಲವು ರೂಪದಲ್ಲಿ ಇದ್ದಾರೆ. ಅವರ ಸ್ವಭಾವ ನಡತೆ ಮತ್ತು ದಯಾ ಗುಣ ಹಲವರಿಗೆ ಸ್ಫೂರ್ತಿ ನೀಡಿದೆ ಅದರಲ್ಲಿ ನನ್ನನ್ನು ತುಂಬಾ ಪ್ರಭಾವಿಸಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಲ್ಲುನನ್ನು ಮೀರಿಸಲು ಡ್ಯಾನ್ಸ್ ಕ್ಲಾಸ್‍ಗೆ ಹೋಗ್ತಿದ್ದಾರೆ ರಶ್ಮಿಕಾ!

     

    View this post on Instagram

     

    A post shared by Karan Johar (@karanjohar)

    ಈ ಮೌಲ್ಯಗಳನ್ನು ನಮ್ಮ ಪರಂಪರೆಯಾಗಿ ಮುಂದುವರಿಸಲು ಮತ್ತು ಅದನ್ನು ನನ್ನ ಮಕ್ಕಳಿಗೂ ಕಲಿಸಲು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಪ್ರತಿದಿನವೂ ನಿಮ್ಮ ಶಕ್ತಿ, ನಿಮ್ಮ ಪ್ರೀತಿ ಮತ್ತು ನಿಮ್ಮ ವಾತ್ಸಲ್ಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ

    ಯಶ್ ಜೋಹರ್ ಕೂಡ ದೂಡ್ಡ ನಿರ್ಮಾಪಕರಾಗಿದ್ದು, ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ 2004 ಯಶ್ ಜೋಹರ್ ಸಾವನ್ನಪ್ಪಿದರು. ನಂತರ ಕರಣ್ ಅವರ ತಂದೆಯ ಧರ್ಮ  ಪ್ರೋಡಕ್ಷನ್ಸ್ ಅನ್ನು ವಹಿಸಿಕೊಂಡರು. ಪ್ರಸ್ತುತ ಬಾಲಿವುಡ್ ನಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ಹಲವು ಸ್ಟಾರ್‍ಗಳಿಗೆ ಗಾಡ್ ಫಾದರ್ ಸಹ ಆಗಿದ್ದಾರೆ.

  • ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿಲ್ಲ- ಎನ್‍ಸಿಬಿಗೆ ಕರಣ್ ಜೋಹರ್ ಸ್ಪಷ್ಟನೆ

    ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿಲ್ಲ- ಎನ್‍ಸಿಬಿಗೆ ಕರಣ್ ಜೋಹರ್ ಸ್ಪಷ್ಟನೆ

    ಮುಂಬೈ: ಕಳೆದ ವರ್ಷ ನಮ್ಮ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿಲ್ಲ ಎಂದು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಎನ್‍ಸಿಬಿಗೆ ಸ್ಪಷ್ಟಪಡಿಸಿದ್ದಾರೆ.

    ಎನ್‍ಸಿಬಿ ನೀಡಿದ್ದ ನೋಟಿಸ್‍ಗೆ ಉತ್ತರಿಸಿರುವ ಕರಣ್ ಜೋಹರ್, ಕಳೆದ ವರ್ಷ ನಮ್ಮ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಎನ್‍ಸಿಬಿ ಮೂಲಗಳನ್ನು ಆಧರಿಸಿ ವರದಿ ಮಾಡಲಾಗಿದೆ.

     

    View this post on Instagram

     

    A post shared by Karan Johar (@karanjohar)

    ಕಳೆದ ವರ್ಷ ಕರಣ್ ಜೋಹರ್ ತಮ್ಮ ಮನೆಯಲ್ಲಿ ಮಾಡಿದ್ದ ಪಾರ್ಟಿ ವಿಡಿಯೋ ವೈರಲ್ ಆಗಿದ್ದು, ಈ ಕುರಿತು ಎನ್‍ಸಿಬಿ ಪ್ರಶ್ನಿಸಿದೆ. ಈ ಫಾರ್ಟಿಯಲ್ಲಿ ಬಾಲಿವುಡ್‍ನ ಹಲವು ನಟರು ಭಾಗಿಯಾಗಿದ್ದರು. ಪಾರ್ಟಿ ಕುರಿತು ವಿವರಿಸುವಂತೆ ಎನ್‍ಸಿಬಿ ನೀಡಿದ್ದ ನೋಟಿಸ್‍ಗೆ ಕರಣ್ ಜೋಹರ್ ಶುಕ್ರವಾರ ಉತ್ತರಿಸಿದ್ದಾರೆ. ಈ ವೇಳೆ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಎನ್‍ಸಿಬಿ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ಈ ಕುರಿತು ಪ್ರತಿಕ್ರಿಯಿಸಿದ್ದು, ಉತ್ತರದ ಕುರಿತು ಪರಿಶೀಲಿಸುತ್ತಿದ್ದೇವೆ. ಕರಣ್ ಜೋಹರ್ ಅವರು ತಮ್ಮ ವಕೀಲರ ಮೂಲಕ ಬರವಣಿಗೆಯಲ್ಲಿನ ಉತ್ತರವನ್ನು ದಕ್ಷಿಣ ಮುಂಬೈನ ಕಚೇರಿಗೆ ಕಳುಹಿಸಿದ್ದಾರೆ.

    ಶಿರೋಮಣಿ ಅಕಾಲಿ ದಳದ ನಾಯಕ ಮಂಜೀಂದ್ರ ಸಿಂಗ್ ಸಿರ್ಸಾ ಎನ್‍ಸಿಬಿಗೆ ವಿಡಿಯೋ ಕಳುಹಿಸಿ ದೂರು ದಾಖಲಿಸಿದ್ದರು. ವಿಡಿಯೋ ಕುರಿತು ಕಳೆದ ವರ್ಷ ಆಗಸ್ಟ್‍ನಲ್ಲಿ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ. ಆದರೆ ಯಾವುದೇ ತನಿಖೆ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು. ಬಳಿಕ ಎನ್‍ಸಿಬಿಯ ಮುಂಬೈ ವಿಭಾಗೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಕರಣ್ ಜೋಹರ್ ಈ ಕುರಿತು ಸಾರ್ವಜನಿಕವಾಗಿ ಪ್ರತಿಕ್ರಿಯಿಸಿ, ನಮ್ಮ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಲಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದು ದುರುದ್ದೇಶಪೂರಿತವಾಗಿದೆ. ಅಪಪ್ರಚಾರ ಹಾಗೂ ದುರುದ್ದೇಶಪೂರಿತ ಹೇಳಿಕೆಗಳು, ವರದಿಗಳು ಹಾಗೂ ಸುದ್ದಿಗಳ ಮೂಲಕ ಅನವಶ್ಯಕವಾಗಿ ನನ್ನ ಮೇಲೆ ಆರೋಪ ಹೊರಿಸಲಾಗುತ್ತಿದೆ. ನ್ನ ಕುಟುಂಬ, ಸಹೋದ್ಯೋಗಿಗಳು ಹಾಗೂ ಧರ್ಮಾ ಪ್ರೊಡಕ್ಷನ್ಸ್ ಕುರಿತು ದ್ವೇಷ, ತಿರಸ್ಕಾರ ಹಾಗೂ ಅಪಹಾಸ್ಯ ಮಾಡಲಾಗುತ್ತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದ್ದರು.

    ನಾನು ಮತ್ತೊಮ್ಮೆ ಖಚಿತಪಡಿಸುತ್ತೇನೆ ಡ್ರಗ್ಸ್ ಸೇವಿಸಿಲ್ಲ. ಅಲ್ಲದೆ ನಾನು ಡ್ರಗ್ಸ್ ಸೇವನೆಯನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಕರಣ್ ಜೋಹರ್ ತಿಳಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಎನ್‍ಸಿಬಿ ಡ್ರಗ್ಸ್ ಕುರಿತು ತನಿಖೆ ಆರಂಭಿಸಿದ್ದು, ಈಗಾಗಲೇ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ, ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಹಲವರ ವಿಚಾರಣೆ ನಡೆಸಿದೆ.