Tag: ಕರಣ್ ಜೋಹರ್

  • `ಅರ್ಜುನ್ ರೆಡ್ಡಿ’ ಚಿತ್ರದ ನಂತರ ಕರಣ್ ಜೋಹರ್ ಚಿತ್ರವನ್ನು ವಿಜಯ್ ತಿರಸ್ಕರಿಸಿದ್ದೇಕೆ?

    `ಅರ್ಜುನ್ ರೆಡ್ಡಿ’ ಚಿತ್ರದ ನಂತರ ಕರಣ್ ಜೋಹರ್ ಚಿತ್ರವನ್ನು ವಿಜಯ್ ತಿರಸ್ಕರಿಸಿದ್ದೇಕೆ?

    ಸ್ಟೈ‌ಲೀಶ್ ಸ್ಟಾರ್ ವಿಜಯ್ ದೇವರಕೊಂಡ `ಲೈಗರ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸದ್ದು ಮಾಡುತ್ತಿದ್ದಾರೆ. ಈ ಪ್ರಚಾರದ ವೇಳೆ, ಈ ಹಿಂದೆ ಕರಣ್ ಜೋಹರ್ ಚಿತ್ರವನ್ನು ಕೈಬಿಟ್ಟಿದರ ಬಗ್ಗೆ ವಿಜಯ್ ದೇವರಕೊಂಡ ಮಾತನಾಡಿದ್ದಾರೆ.

    vijaydevarakonda

    ಈಗ ಏಲ್ಲೆಲ್ಲೂ `ಲೈಗರ್ ಸಿನಿಮಾ ಪ್ರಚಾರ ಜೋರಾಗಿದೆ ಸೌಂಡ್ ಮಾಡುತ್ತಿದೆ. ವಿಜಯ್ ದೇವರಕೊಂಡ ವೃತ್ತಿ ಜೀವನದ ನಿರೀಕ್ಷಿತ `ಲೈಗರ್’ ಚಿತ್ರ ಟೀಸರ್, ಟ್ರೆöÊಲರ್, ಪೊಸ್ಟರ್ ಲುಕ್‌ನಿಂದ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಇನ್ನು ಈ ಚಿತ್ರದ ಪ್ರಚಾರ ಕಾರ್ಯ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಈ ವೇಳೆ ಕರಣ್ ಜೋಹರ್ ಸಿನಿಮಾ ಆಫರ್ ಅನ್ನು ಕೈಬಿಟ್ಟ ವಿಚಾರದ ಬಗ್ಗೆ ವಿಜಯ್ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

    `ಅರ್ಜುನ್ ರೆಡ್ಡಿ’ ಚಿತ್ರದ ಸಕ್ಸಸ್ ನಂತರ ಕರಣ್ ಜೋಹರ್ ಕಡೆಯಿಂದ ಬಾಲಿವುಡ್ ಸಿನಿಮಾ ಆಫರ್ ಬಂದಿತ್ತು. ಆದರೆ ಆ ಸಮಯದಲ್ಲಿ ನಾನು ಸಿದ್ಧನಾಗಿರಲಿಲ್ಲ. ಈಗ ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ಇರುವ ಕಾರಣ ಲೈಗರ್ ಚಿತ್ರ ಒಪ್ಪಿಕೊಂಡೆ ಎಂದು ಮಾತನಾಡಿದ್ದಾರೆ. ಇನ್ನು ಲೈಗರ್ ಚಿತ್ರವು ಸ್ಲಂ ಹುಡುಗರ ಕಥೆಯಾಗಿದ್ದು, ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ವಿಜಯ್ ಮಿಂಚಿದ್ದಾರೆ. ಕರಣ್ ಜೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಆಗಸ್ಟ್ ೨೫ಕ್ಕೆ ಲೈಗರ್ ಚಿತ್ರ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ʻರಶ್ಮಿಕಾ ನನ್ನ ಡಾರ್ಲಿಂಗ್ʼ ಎಂದ ವಿಜಯ್ ದೇವರಕೊಂಡ

    ʻರಶ್ಮಿಕಾ ನನ್ನ ಡಾರ್ಲಿಂಗ್ʼ ಎಂದ ವಿಜಯ್ ದೇವರಕೊಂಡ

    ಕ್ಷಿಣ ಭಾರತದ ಸ್ಟಾರ್ ವಿಜಯ್ ದೇವರಕೊಂಡ ಸದ್ಯ ಲೈಗರ್ ಸಿನಿಮಾ ವಿಚಾರವಾಗಿ ಸಖತ್ ಸದ್ದು ಮಾಡ್ತಿದ್ದಾರೆ. ಜತೆಗೆ ಇತ್ತೀಚೆಗಷ್ಟೇ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿ, ಸಾಕಷ್ಟು ವಿಚಾರಗಳ ಬಗ್ಗೆ ವಿಜಯ್ ಮನಬಿಚ್ಚಿ ಮಾತನಾಡಿದ್ದಾರೆ. ಇನ್ನು ವೇಳೆ ರಶ್ಮಿಕಾ ಜತೆಗಿನ ರಿಲೇಶನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ.

    ಟಾಲಿವುಡ್‌ನ ಸಿನಿಮಾಗಳಲ್ಲಿ ಸ್ಟಾರ್ ಜೋಡಿಗಳಾಗಿ ಗುರುತಿಸಿಕೊಂಡಿರುವ ವಿಜಯ್ ಮತ್ತು ರಶ್ಮಿಕಾ ಮಧ್ಯೆ ಎನೋ ಸಂಥಿಂಗ್ ಸಂಥಿಂಗ್ ಇದೆ ಅಂತಾ ಗುಸು ಗುಸು ಸುದ್ದಿಯಾಗುತ್ತಿದೆ. ಇದೇ ಪ್ರಶ್ನೆಯನ್ನ ಕರಣ್ ಜೋಹರ್ ಕೂಡ ವಿಚಾರಿಸಿದ್ದಾರೆ. ಅದಕ್ಕೆ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದು, `ರಶ್ಮಿಕಾ ನನ್ನ ಡಾರ್ಲಿಂಗ್’ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ. ಇದನ್ನೂ ಓದಿ:ಸಿದ್ದು ಮೂಸೆ ವಾಲಾ ಮುಖವನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡ ತಂದೆ

    ನಾನು ರಶ್ಮಿಕಾ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ರಶ್ಮಿಕಾ ನನ್ನ ಡಾರ್ಲಿಂಗ್. ಅವರನ್ನ ನಾನು ತುಂಬಾ ಇಷ್ಟಪಡುತ್ತೇನೆ. ನನಗೆ ರಶ್ಮಿಕಾ ನಿಜವಾಗಿಯೂ ಒಳ್ಳೆಯ ಸ್ನೇಹಿತೆ. ಚಲನಚಿತ್ರಗಳಲ್ಲಿ ಅಭಿನಯಿಸುವಾಗ ನಮ್ಮ ಮಧ್ಯೆ ಉತ್ತಮ ಬಂಧ ಸೃಷ್ಟಿಯಾಯಿತು. ಸಾಮಾನ್ಯವಾಗಿ ಓರ್ವ ಹುಡುಗಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೂ ನಾನು ತುಂಬಾ ಸಮಯ ತೆಗೆದುಕೊಳ್ಳುತ್ತೇನೆ. ಆದರೆ, ಚಿತ್ರೀಕರಣದ ಸಮಯದಲ್ಲಿ ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆಯಿತು ಎಂದಿದ್ದಾರೆ.

    ವಿಜಯ್ ದೇವರಕೊಂಡ ರಿಲೇಷನ್‌ಶಿಪ್ ಸ್ಟೇಟಸ್ ಕೇಳಿದಾಗ, ಒಂದಲ್ಲಾ ಒಂದು ದಿನ ನನಗೆ ಮದುವೆಯಾಗಿ, ಮಕ್ಕಳಾಗುತ್ತದೆ. ಆ ದಿನ ನನ್ನ ಪಾರ್ಟರ್ ಬಗ್ಗೆ ಜೋರಾಗಿ ಹೇಳುತ್ತೇನೆ. ಅಲ್ಲಿಯವರೆಗೂ ನನ್ನನ್ನು ಇಷ್ಟಪಡುವವರಿಗೆ ನಾನು ನೋವು ಕೊಡಬಾರದು. ಎಲ್ಲರೂ ಇಷ್ಟೊಂದು ಪ್ರೀತಿ ಕೊಡುವಾಗ ನಾನು ಇನ್ನೊಬ್ಬರೊಂದಿಗೆ ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಹೇಳಲು ಬಯಸುವುದಿಲ್ಲ ಎಂದು ಮಾತನಾಡಿದ್ದಾರೆ. ಕಡೆಗೂ ತಮ್ಮ ಲವ್ ಲೈಫ್ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎನ್ನಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • ನಯನತಾರಾ ಹೆಸರು ನನ್ನ ಟಾಪ್ ಪಟ್ಟಿಯಲ್ಲಿ ಇರಲಿಲ್ಲ ಎಂದು ಅಚ್ಚರಿ ಮೂಡಿಸಿದ ಕರಣ್ ಜೋಹರ್

    ನಯನತಾರಾ ಹೆಸರು ನನ್ನ ಟಾಪ್ ಪಟ್ಟಿಯಲ್ಲಿ ಇರಲಿಲ್ಲ ಎಂದು ಅಚ್ಚರಿ ಮೂಡಿಸಿದ ಕರಣ್ ಜೋಹರ್

    ರಣ್ ಜೋಹಾರ್ ವಿರುದ್ಧ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿಮಾನಿಗಳು ಗರಂ ಆಗಿದ್ದರು. ಕರಣ್ ಕುರಿತು ಅಭಿಮಾನಿಗಳು ಕೆಟ್ಟದ್ದಾಗಿಯೇ ಕಾಮೆಂಟ್ ಮಾಡುತ್ತಿದ್ದರು. ಕರಣ್ ಜೋಹರ್ ವ್ಯಕ್ತಿತ್ವದ ಬಗ್ಗೆಯೂ ಅವಹೇಳನ ಮಾಡುವಂತಹ ಕೆಲಸಗಳು ನಡೆದವು. ಕಾರಣ, ಕರಣ್ ಜೋಹರ್ ತನ್ನ ಶೋನಲ್ಲಿ ನಯನತಾರಾ ಅವರಿಗೆ ಅವಮಾನ ಮಾಡಿದ್ದಾರೆ ಎನ್ನುವುದಾಗಿತ್ತು.

    ಕರಣ್ ಜೋಹರ್ ಶೋನಲ್ಲಿ ನಯನತಾರಾ ಅವರ ಹೃದಯದ ಗೆಳತಿ ಸಮಂತಾ ಭಾಗಿಯಾಗಿದ್ದರು. ಆಗ ಕರಣ್, ‘ದಕ್ಷಿಣದ ಟಾಪ್ ತಾರೆ ಯಾರು?’ ಎನ್ನುವ ಪ್ರಶ್ನೆಯನ್ನು ಸಮಂತಾಗೆ ಕೇಳುತ್ತಾರೆ. ಕ್ಷಣವೂ ಯೋಚಿಸದೇ ನಯನತಾರಾ ಹೆಸರು ಹೇಳುತ್ತಾರೆ ಸಮಂತಾ. ಆಗ ಕರಣ್, ಇವರ ಹೆಸರು ನನ್ನ ಪಟ್ಟಿಯಲ್ಲಿ ಇಲ್ಲ ಎಂದು ಹೇಳುತ್ತಾರೆ. ಈ ಮಾತೇ ನಯನತಾರಾ ಅಭಿಮಾನಿಗಳನ್ನು ಕೆರಳಿಸಿತ್ತು. ಹಾಗಾಗಿ ಕರಣ್ ಮತ್ತು ಅವರ ಶೋಗಳನ್ನು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದರು. ಇದನ್ನೂ ಓದಿ:ಟೈಗರ್ ಶ್ರಾಫ್ ಪ್ರೀತಿಯ ಬಗ್ಗೆ ಮೌನ ಮುರಿದ ಜಾಕಿ ಶ್ರಾಫ್

    ಈ ವಿವಾದಕ್ಕೆ ಸಂಬಂಧಪಟ್ಟಂತೆ ಕರಣ್ ಸ್ಪಷ್ಟನೆ ನೀಡಿದ್ದು, ನಾನು ನಯನತಾರಾ ಅವರಿಗೆ ಅವಮಾನ ಮಾಡಿಲ್ಲ. ನಾನು ಕೇಳಿದ ಪ್ರಶ್ನೆಗೆ ನನ್ನ ಪಟ್ಟಿಯಲ್ಲಿ ಆ ಉತ್ತರವಿರಲಿಲ್ಲ. ಅಲ್ಲದೇ, ಅವರು ಟಾಪ್ ಅನ್ನುವುದನ್ನು ಯಾವುದೇ ಸಂಸ್ಥೆ ಕೂಡ ಅಧಿಕೃತ ಮಾಡಿರಲಿಲ್ಲ. ಹೀಗಾಗಿ ನಾನು ಹಾಗೆ ಮಾತನಾಡಬೇಕಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ, ನಯನತಾರಾ ಅಭಿಮಾನಿಗಳು ಮಾತ್ರ ಟ್ರೋಲ್ ಮಾಡುವುದನ್ನು ನಿಲ್ಲಿಸಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಸೆಕ್ಸ್ ಲೈಫ್ ಮತ್ತು ಡೇಟಿಂಗ್ ಕುರಿತು ಮಾತನಾಡಿದ ವಿಜಯ್ ದೇವರಕೊಂಡ- ಅನನ್ಯಾ ಪಾಂಡೆ ವಿಡಿಯೋ ವೈರಲ್

    ಸೆಕ್ಸ್ ಲೈಫ್ ಮತ್ತು ಡೇಟಿಂಗ್ ಕುರಿತು ಮಾತನಾಡಿದ ವಿಜಯ್ ದೇವರಕೊಂಡ- ಅನನ್ಯಾ ಪಾಂಡೆ ವಿಡಿಯೋ ವೈರಲ್

    ಬಾಲಿವುಡ್‌ನ ನಂಬರ್ ಒನ್ ಶೋ ಕರಣ್ ಜೋಹರ್ ನಿರೂಪಣೆಯ ಶೋನಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಭಾಗವಹಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಎಪಿಸೋಡ್‌ನ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪ್ರೋಮೋದಲ್ಲಿ `ಲೈಗರ್’ ಜೋಡಿ ತಮ್ಮ ಸೆಕ್ಸ್ ಲೈಫ್ ಮತ್ತು ಡೇಟಿಂಗ್ ಕುರಿತು ಮಾತನಾಡಿದ್ದಾರೆ.

    ಬಿಟೌನ್‌ನ ಫಿಲ್ಮ್ಂ ಮೇಕರ್ ಕರಣ್ ಜೋಹರ್ ಶೋನಲ್ಲಿ ಒಂದಲ್ಲಾ ಒಂದು ಬ್ರೇಕಿಂಗ್ ನ್ಯೂಸ್ ಕೊಡುವುದರ ಮೂಲಕ ಸೌಂಡ್ ಮಾಡ್ತಿದ್ದಾರೆ. ಇದೀಗ ಈ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಭಾಗವಹಿಸಿದ್ದು, ವಿಜಯ್ ಕೊನೆಯ ಬಾರಿ ಸೆಕ್ಸ್ ಮಾಡಿರುವುದರ ಬಗ್ಗೆ ಕರಣ್ ಕೇಳಿದ್ದಾರೆ. ಜತೆಗೆ ಅನನ್ಯಾ ಡೇಟಿಂಗ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಮಾದೇವನಿಗೆ ಸೋನಲ್ ಮೊಂಥೆರೋ ಜೋಡಿ

     

    View this post on Instagram

     

    A post shared by Karan Johar (@karanjohar)

    `ಕಾಫಿ ವಿತ್ ಕರಣ್’ ಹೊಸ ಸೀಸನ್‌ನಲ್ಲಿ, ವಿಜಯ್ ತಮ್ಮ ಕೊನೆಯ ಬಾರಿಯ ಸೆಕ್ಸ್ ಕಾರಿನಲ್ಲಿ ಮಾಡಿದ್ದೇನೆ ಎಂದು ಶೋನಲ್ಲಿ ರಿವೀಲ್ ಮಾಡಿದ್ದಾರೆ. ನಂತರ ಅನನ್ಯಾ ಪಾಂಡೆಗೆ ಆದಿತ್ಯ ರಾವ್ ಕಪೂರ್ ಜತೆಗಿನ ಡೇಟಿಂಗ್ ವಿಚಾರ ಕೇಳಿದ್ದಾರೆ. ವಿಜಯ್ ಮತ್ತು ಅನನ್ಯಾ ಎಪಿಸೋಡ್ ಪ್ರೋಮೋನೇ ಸಖತ್ ವೈರಲ್ ಆಗುತ್ತಿದ್ದು, ಹೆಚ್ಚಿನ ಅಪ್‌ಡೇಟ್‌ಗೆ ಶೋ ಬರುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಅಯ್ಯೋ.. ಸಮಂತಾಗೆ ನಾಗಚೈತನ್ಯ ನೋಡಿದ್ರೆ ಕೊಲ್ಲುವಷ್ಟು ಕೋಪವಿದ್ಯಾ?

    ಅಯ್ಯೋ.. ಸಮಂತಾಗೆ ನಾಗಚೈತನ್ಯ ನೋಡಿದ್ರೆ ಕೊಲ್ಲುವಷ್ಟು ಕೋಪವಿದ್ಯಾ?

    ಟಾಲಿವುಡ್‌ನ ಹಾಟ್ ಟಾಪಿಕ್ ಅಂದ್ರೆ ಸಮಂತಾ ಮತ್ತು ನಾಗಚೈತನ್ಯ ಇಂದಿಗೂ ಈ ಜೋಡಿ ಯಾಕೆ ಬೇರೆಯಾಗಿದ್ದಾರೆ ಎಂಬ ಕಾರಣ ಗೌಪ್ಯವಾಗಿಯೇ ಇದೆ. ಇದೀಗ ಕರಣ್ ಜೋಹರ್ ಶೋವೊಂದರಲ್ಲಿ ಡಿವೋರ್ಸ್ ನಂತರ ನಾಗಚೈತನ್ಯ ಮೇಲೆ ಭಾವನೆ ಹೇಗಿದೆ ಅಂತಾ ಶಾಕಿಂಗ್ ಹೇಳಿಕೆಯನ್ನ ಸಮಂತಾ ನೀಡಿದ್ದಾರೆ.

    ಸಮಂತಾ ಮತ್ತು ನಾಗಚೈತನ್ಯ ಒಬ್ಬರನೊಬ್ಬರು ಪ್ರೀತಿಸಿ, ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದ ಜೋಡಿ ಆದರೆ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ಇಬ್ಬರು ದೂರ ದೂರ ಆದರು. ಸಾಕಷ್ಟು ನೆಗೆಟಿವ್ ಟ್ರೋಲ್‌ಗಳಿಗೆ ಗುರಿಯಾಗಿದ್ದ ಸಮಂತಾಗೆ ಕರಣ್ ಜೋಹರ್ ಶೋನಲ್ಲಿ ಸಮಂತಾ ಖಾಸಗಿ ವಿಚಾರವೊಂದನ್ನು ಕೇಳಿದ್ದಾರೆ. ಪ್ರಸ್ತುತ ನಿಮ್ಮ ಮತ್ತು ನಾಗಚೈತನ್ಯ ನಡುವೆ ರಿಲೇಷನ್ ಹೇಗಿದೆ ಎಂದು ಪ್ರಶ್ನಿಸಿದ್ದಾರೆ.

    ನನ್ನನ್ನು ಮತ್ತು ನಾಗಚೈತನ್ಯ ಅವರನ್ನು ಒಂದೇ ಕೊಠಡಿಗೆ ಹಾಕಿದರೆ, ಆ ಕೋಣೆಯಲ್ಲಿ ಚೂಪಾದ ವಸ್ತುಗಳನ್ನು ಇರದಂತೆ ನೋಡಿಕೊಳ್ಳಿ ಎಂದು ಕರಣ್‌ಗೆ ಉತ್ತರಿಸಿದ್ದಾರೆ. ನಮ್ಮ ನಡುವೆ ಈಗ ಸ್ನೇಹಕ್ಕೆ ಭಾವನೆಗೆ ಜಾಗವಿಲ್ಲ ಅಂತಾ ಪರೋಕ್ಷವಾಗಿ ಸಮಂತಾ ತಿಳಿಸಿದ್ದಾರೆ. ನಾಗಚೈತನ್ಯ ಅವರನ್ನ ಕಂಡ್ರೆ ಸಮಂತಾಗೆ ಕೊಲ್ಲುವಷ್ಟು ಕೋಪವಿದ್ಯಾ ಅಂತಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ಸಮಂತಾ ಅವರನ್ನು ತುಂಬಾ ನೋಯಿಸಿದ ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ಯಾವುದು ಎಂದು ಕರಣ್ ಕೇಳಿದರು. ನಾಗ ಚೈತನ್ಯಗೆ ವಿಚ್ಛೇದನ ನೀಡಲು ೨೫೦ ಕೋಟಿ ರೂಪಾಯಿ ತೆಗೆದುಕೊಂಡಿರುವ ಸುದ್ದಿ ನನಗೆ ತುಂಬಾ ನೋವುಂಟು ಮಾಡಿದೆ ಎಂದು ಸಮಂತಾ ಹೇಳಿದ್ದಾರೆ. ಡಿವೋರ್ಸ್ ಅನೌನ್ಸ್ ಮಾಡಿದಾಗ ಕಷ್ಟ ಆಯ್ತು.. ಖುಷಿಯಿಂದ ನಾವು ಡಿವೋರ್ಸ್ ಪಡೆದಿಲ್ಲ. ನೋವಿನಿಂದಲೇ ದೂರ ಆಗಿದ್ದೇವೆ ಜತೆಗೆ ಈಗ ಮೊದಲಿಗಿಂತಲೂ ಸ್ಟ್ರಾಂಗ್ ಆಗಿದ್ದೇನೆ ಎಂದು ಸಮಂತಾ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಲೈಗರ್’ ಟ್ರೈಲರ್ ರಿಲೀಸ್: ಆ್ಯಕ್ಷನ್ ಅವತಾರದಲ್ಲಿ ಮಿಂಚಿದ ವಿಜಯ್ ದೇವರಕೊಂಡ

    `ಲೈಗರ್’ ಟ್ರೈಲರ್ ರಿಲೀಸ್: ಆ್ಯಕ್ಷನ್ ಅವತಾರದಲ್ಲಿ ಮಿಂಚಿದ ವಿಜಯ್ ದೇವರಕೊಂಡ

    ಕ್ಷಿಣ ಭಾರತದ ಸ್ಟಾರ್ ನಟ ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷಿತ ಚಿತ್ರ `ಲೈಗರ್’ ಟ್ರೈಲರ್ ರಿಲೀಸ್ ಆಗಿದ್ದು, ಬಾಕ್ಸರ್ ಆಗಿ ಮಿಸ್ಟರ್ ವಿಜಯ್ ದೇವರಕೊಂಡ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲೂ ʻಲೈಗರ್ʼ ಆಗಿ ವಿಜಯ್ ಸಂಚಲನ ಮೂಡಿಸಿದ್ದಾರೆ.

    ವಿಜಯ್ ದೇವರಕೊಂಡ, ಪುರಿ ಜಗನ್ನಾಥ್ ಕಾಂಬಿನೇಷನ್‌ನ ಹೈವೋಲ್ಟೇಜ್ ಕಾಂಬಿನೇಶನ್ `ಲೈಗರ್’ ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸುದ್ದಿ ಮಾಡಿತ್ತು. ಪೋಸ್ಟರ್‌ಗಳಿಂದಲೇ ನಿರೀಕ್ಷೆ ಹೆಚ್ಚಿಸಿದ್ದ `ಲೈಗರ್’ ಟ್ರೈಲರ್ ರಿಲೀಸ್ ಆಗಿ, ಈಗ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ. ಮಾಸ್ ಲುಕ್‌ನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ವಿಜಯ್‌ಗೆ ನಾಯಕಿಯಾಗಿ ಬ್ಯೂಟಿ ಕ್ವೀನ್ ಅನನ್ಯಾ ಪಾಂಡೆ ನಟಿಸಿದ್ದಾರೆ. ʻಲೈಗರ್‌ʼನಲ್ಲಿ ವಿಜಯ್ ರಗಡ್ ಆಗಿ ನಟಿಸಿದ್ದು, ಟ್ರೈಲರ್ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬರುತ್ತಿದ್ದಾರೆ. ಇದನ್ನೂ ಓದಿ:ಸ್ಟಾರ್ ಹೀರೋ ಎದುರು ಖಡಕ್ ವಿಲನ್ ಆಗಿ ಮಿಂಚಲಿದ್ದಾರೆ ಸಮಂತಾ

    ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ʻಲೈಗರ್‌ʼ ಚಿತ್ರ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಬಾಕ್ಸರ್ ಪಾತ್ರದಲ್ಲಿ ವಿಜಯ್ ದೇವರಕೊಂಡ ಅಭಿನಯಿಸಿದ್ದು, ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ ಮತ್ತು ಪುರಿ ಕನೆಕ್ಟ್ಸ್‌ ಬಂಡವಾಳ ಹೂಡಿದ್ದಾರೆ. ವಿಶ್ವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಈ ಚಿತ್ರದಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದು, ರಮ್ಯಾ ಕೃಷ್ಣ ವಿಜಯ್ ದೇವರಕೊಂಡ ತಾಯಿಯಾಗಿ ಅಭಿನಯಿಸಿದ್ದಾರೆ. ಕನ್ನಡದಲ್ಲಿಯೂ ರಿಲೀಸ್ ಆಗ್ತಿರುವ ಲೈಗರ್ ಚಿತ್ರ ಆಗಸ್ಟ್ ೨೫ಕ್ಕೆ ತೆರೆಗೆ ಅಬ್ಬರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕರಣ್‌ ಜೋಹರ್‌ ನಿರ್ಮಾಣದಲ್ಲಿ ಈ ಸ್ಟಾರ್‌ ನಟನಿಗೆ ನಾಯಕಿಯಾದ ರಶ್ಮಿಕಾ ಮಂದಣ್ಣ

    ಕರಣ್‌ ಜೋಹರ್‌ ನಿರ್ಮಾಣದಲ್ಲಿ ಈ ಸ್ಟಾರ್‌ ನಟನಿಗೆ ನಾಯಕಿಯಾದ ರಶ್ಮಿಕಾ ಮಂದಣ್ಣ

    ನ್ನಡತಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಮಿಂಚಿ ರಾರಾಜಿಸಿದ ಮೇಲೆ ಈಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ನಟಿಸಿರುವ ಬಾಲಿವುಡ್ ಚಿತ್ರಗಳೇ ರಿಲೀಸ್ ಆಗಿಲ್ಲ. ಈ ಬೆನ್ನಲ್ಲೇ ಹಿಂದಿ ಬಿಗ್ ಪ್ರಾಜೆಕ್ಟ್‌ವೊಂದು ರಶ್ಮಿಕಾ ಮಂದಣ್ಣಗೆ ಒಲಿದು ಬಂದಿದೆ. ಟೈಗರ್ ಶ್ರಾಫ್‌ಗೆ ಕಿರಿಕ್ ಸುಂದರಿ ರಶ್ಮಿಕಾ ನಾಯಕಿಯಾಗಲಿದ್ದಾರೆ.

    ಧರ್ಮ ಪ್ರೋಡಕ್ಷನ್ಸ್ ಅಡಿಯಲ್ಲಿ ಕರಣ್ ಜೋಹರ್ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾಗೆ ಹೊಸ ಜೋಡಿಯನ್ನ ತೆರೆಯ ಮೇಲೆ ತೋರಿಸುವ ಯೋಚನೆ ಇದ್ದು, ಬಾಲಿವುಡ್‌ನ ಸ್ಟಾರ್ ನಟ ಟೈಗರ್ ಶ್ರಾಫ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರನ್ನ ಆಯ್ಕೆ ಮಾಡಲಾಗಿದೆ. ಆ್ಯಕ್ಷನ್ ಕಥೆ ಜತೆ ಮುದ್ದಾದ ಪ್ರೇಮ ಕಥೆಯನ್ನ ಬೆಳ್ಳಿಪರದೆಯಲ್ಲಿ ತೋರಿಸಲು ಬರಹಗಾರ ಮತ್ತು ನಿರ್ದೇಶಕ ಶಶಾಂಕ್ ಖೈತಾನ್ ರೆಡಿಯಾಗಿದ್ದಾರೆ. ಇದನ್ನೂ ಓದಿ:ಹೆರಿಗೆಯ ವಿಡಿಯೋ ಹಂಚಿಕೊಂಡ ಸಂಜನಾ ಗಲ್ರಾನಿ

    ಯಂಗ್ ಟೈಗರ್ ಶ್ರಾಫ್ ಈ ಬಾರಿ ಸ್ಪೋರ್ಟ್ಸ್ ಕಥೆಯಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಕ್ರಿಡಾಪಟುವಾಗಿ ಟೈಗರ್ ನಟಿಸಲಿದ್ದಾರೆ. ಎಂದೂ ಮಾಡಿರದ ಭಿನ್ನ ಕಥೆ ಪಾತ್ರದ ಮೂಲಕ ಟೈಗರ್ ಮತ್ತು ರಶ್ಮಿಕಾ ರೆಡಿಯಾಗಿದ್ದಾರೆ. ಈ ಹೊಸ ಜೋಡಿಯನ್ನ ಪ್ರೇಕ್ಷಕರು ಮೆಚ್ಚಿಕೊಳ್ತಾರಾ ಅಂತಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಫಿ ವಿತ್ ಕರಣ್ ಶೋದಲ್ಲಿ ಕಾಣಿಸಿಕೊಳ್ಳಲು ಕೋಟಿ ರೂ ಕೇಳಿದ್ರಾ ರಣಬೀರ್ ಕಪೂರ್

    ಕಾಫಿ ವಿತ್ ಕರಣ್ ಶೋದಲ್ಲಿ ಕಾಣಿಸಿಕೊಳ್ಳಲು ಕೋಟಿ ರೂ ಕೇಳಿದ್ರಾ ರಣಬೀರ್ ಕಪೂರ್

    ಬಾಲಿವುಡ್ ನ ಖ್ಯಾತ ನಿರ್ದೇಶಕ, ನಟ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರತಿಯೊಬ್ಬರಿಗೂ ಏನೋ ಒಂದು ರೀತಿಯಲ್ಲಿ ಹಿಂಜರಿಕೆ. ಕಾರಣ, ಕಾಫಿಗೆ ಫಿಲ್ಟರ್ ಇದ್ದರೆ ಕರಣ್ ಗೆ ಈ ಫಿಲ್ಟರ್ ಕಡಿಮೆ. ಹಾಗಾಗಿಯೇ ವೈಯಕ್ತಿಕ ವಿಚಾರಗಳನ್ನೆಲ್ಲ ಅವರು ಕೆದುಕುತ್ತಾ ಹೋಗುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕನಿಷ್ಠ ಮಾನದಂಡ ಒಂದಷ್ಟು ವಿವಾದಿಗಳನ್ನು ಅತಿಥಿಗಳು ಮೈಮೇಲೆ ಹಾಕಿಕೊಂಡರಬೇಕು.

    ಕೇವಲ ವಿವಾದಗಳು ಮಾತ್ರವಲ್ಲ, ಯಾವುದೇ ಮುಚ್ಚುಮರೆ ಇಲ್ಲದೇ ಮಾತನಾಡಬೇಕು. ಬೆಡ್ ರೂಮ್ ವಿಷಯದಿಂದ ಹಿಡಿದು ತಾವು ಹಾಕುವ ಒಳಉಡುಪುಗಳ ಬಣ್ಣದ ವಿಷಯವನ್ನೂ ಕರಣ್ ಸಡನ್ನಾಗಿ ಮಾತನಾಡುತ್ತಾರೆ. ಅದಕ್ಕೆ ಉತ್ತರಿಸಲೇಬೇಕು. ಹಾಗಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಲಿಬ್ರಿಟಿಗಳು ಒಪ್ಪುವುದಿಲ್ಲ. ಬರಲೇಬೇಕು ಎಂಬ ಒತ್ತಡವಿದ್ದರೆ ಸಂಭಾವನೆಗೆ ಡಿಮಾಂಡ್ ಮಾಡಲಾಗುತ್ತದೆ. ಇಂಥದ್ದೇ ಸಂಭಾವನೆ ಕಾರಣಕ್ಕಾಗಿ ರಣಬೀರ್ ಕಪೂರ್ ಸುದ್ದಿಯಾಗಿದ್ದಾರೆ.  ಇದನ್ನೂ ಓದಿ: ಎನ್.ಎಫ್.ಟಿ (NFT) ಮಾರುಕಟ್ಟೆಗೆ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ

    ಈಗಾಗಲೇ ಹಲವು ಕಂತುಗಳನ್ನು ಚಿತ್ರೀಕರಿಸಿರುವ ಕರಣ್ ಜೋಹಾರ್, ಆಲಿಯಾ ಭಟ್ ಜೊತೆ ರಣಬೀರ್ ಕಪೂರ್ ಅವರನ್ನೂ ಆಹ್ವಾನಿಸಿದ್ದರಂತೆ. ಆದರೆ, ಈ ಕಾರ್ಯಕ್ರಮಕ್ಕೆ ಬರಲು ರಣಬೀರ್ ಒಪ್ಪಿಲ್ಲ. ಬರುವುದಾದರೆ ಕೋಟಿ ಲೆಕ್ಕದಲ್ಲಿ ಸಂಭಾವನೆ ನೀಡಬೇಕು ಎಂದು ಕೇಳಿದ್ದಾರಂತೆ. ಹಾಗಾಗಿಯೇ ರಣಬೀರ್ ಕೈ ಬಿಟ್ಟು ಕೇವಲ ಆಲಿಯಾ ಭಟ್ ಅವರನ್ನಷ್ಟೇ ಕಾರ್ಯಕ್ರಮಕ್ಕೆ ಕರೆಯಿಸಿಕೊಂಡಿದ್ದಾರೆ. ಆ ಎಸಿಸೋಡ್ ಶೂಟಿಂಗ್ ಆಗಿದೆ. ಆಲಿಯಾ ಸಖತ್ ಬೋಲ್ಡ್ ಆಗಿಯೇ ಮಾತನಾಡಿದ್ದಾರೆ ಎನ್ನುವ ಸುದ್ದಿಯಿದೆ.

    Live Tv
    [brid partner=56869869 player=32851 video=960834 autoplay=true]

  • ಕರಣ್ ಜೋಹರ್ ಟೀಮ್ ಸೇರಿಕೊಂಡ ಸಮಂತಾ: ಹೀರೋ ಯಾರು ಗೊತ್ತಾ?

    ಕರಣ್ ಜೋಹರ್ ಟೀಮ್ ಸೇರಿಕೊಂಡ ಸಮಂತಾ: ಹೀರೋ ಯಾರು ಗೊತ್ತಾ?

    ಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ತಮ್ಮ ಫ್ಯಾನ್ಸ್‌ಗೆ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಾಲಿವುಡ್‌ನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲಿದ್ದಾರೆ. ಕರಣ್ ಜೋಹರ್ ಕ್ಯಾಂಪ್‌ಗೆ ʻಪುಷ್ಪʼ ಬ್ಯೂಟಿ ಸಮಂತಾ ಸೇರಿಕೊಂಡಿದ್ದಾರೆ.

    `ದಿ ಫ್ಯಾಮಿಲಿಮೆನ್ 2′, `ಪುಷ್ಪ’ ಸಿನಿಮಾ ಸಕ್ಸಸ್ ನಂತರ ಸಮಂತಾಗೆ ಬಾಲಿವುಡ್ ಬಂಪರ್ ಆರ‍್ಸ್ ಹರಿದು ಬರುತ್ತಿದೆ. ಈಗ ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಸಮಂತಾಗೆ ನಟಿಸಲು ಬುಲಾವ್ ಬಂದಿದೆಯಂತೆ. ಒಂದೊಳ್ಳೆ ಕಥೆಯ ಮೂಲಕ ಕಮಾಲ್ ಮಾಡಲಿದ್ದಾರೆ. ಇನ್ನೊಂದು ಸೂಪರ್ ಗುಡ್ ನ್ಯೂಸ್ ಅಂದ್ರೆ ಬಿಟೌನ್ ಖಿಲಾಡಿ ಅಕ್ಷಯ್ ಕುಮಾರ್‌ಗೆ ನಾಯಕಿಯಾಗಿ ಸಮಂತಾ ಫಿಕ್ಸ್ ಆಗಿದ್ದಾರೆ. ಇದನ್ನೂ ಓದಿ:ಮತ್ತೆ ನಿರ್ದೇಶನದತ್ತ ಮುಖ ಮಾಡಿದ ಅಜಯ್ ದೇವಗನ್

    ಕರಣ್ ನೇತೃತ್ವದಲ್ಲಿ ಅಕ್ಷಯ್ ಕುಮಾರ್ ಮತ್ತು ಸಮಂತಾ ಒಟ್ಟಿಗೆ ತೆರೆಯ ಮೇಲೆ ಮಿಂಚಲಿದ್ದಾರೆ. ಆದರೆ ಇಷ್ಟೇಲ್ಲಾ ಈ ಚಿತ್ರದ ಬಗ್ಗೆ ಚರ್ಚೆ ಆಗುತ್ತಿದ್ದರು. ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇತ್ತೀಚೆಗಷ್ಟೇ ಸಮಂತಾ, ಅಕ್ಷಯ್ ಕಾಫಿ ವಿತ್ ಕರಣ್ ಟಾಕ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ಕೂಡ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸೌತ್ ಸಿನಿಮಾದಲ್ಲಿ ಕ್ರೇಜ್ ಹುಟ್ಟು ಹಾಕಿರೋ ಸಮಂತಾ ಬಾಲಿವುಡ್‌ನಲ್ಲೂ ಗೆಲ್ಲೋ ಕುದುರೆ ಆಗುತ್ತಾರಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದವರ ಲಿಸ್ಟ್ ನಲ್ಲಿ ಕರಣ್ ಜೋಹರ್

    ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದವರ ಲಿಸ್ಟ್ ನಲ್ಲಿ ಕರಣ್ ಜೋಹರ್

    ಬಾಲಿವುಡ್ ನೊಂದಿಗೆ ಭೂಗತ ಜಗತ್ತಿನ ನಂಟಿದೆ ಎಂದು ಹಲವು ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ಬಾಲಿವುಡ್ ನಟ ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಆಗಾಗ್ಗೆ ಅವರು ಜೀವ ಬೆದರಿಕೆ ಹಾಕುತ್ತಲೇ ಇರುತ್ತಾರೆ. ಅನೇಕ ಬಾರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದೂ ಇದೆ. ಇದನ್ನು ಬಗ್ಗು ಬಡಿಯಲು ನಾನಾ ತಂತ್ರಗಳನ್ನು ಪೊಲೀಸ್ ಇಲಾಖೆ ಮಾಡುತ್ತಲೇ ಬಂದಿದೆ. ಆದರೆ, ಇನ್ನೂ ಆ ಬೆದರಿಕೆ ಕರೆಗಳು ನಿಂತಿಲ್ಲ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ  ಸಿಕ್ಕಿದೆ.

    ಇತ್ತೀಚೆಗಷ್ಟೇ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿರುವ ವಿಚಾರ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ಅದರಲ್ಲೂ  ಈ ಬೆದರಿಕೆ ಪತ್ರದ ಹಿಂದೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಮತ್ತು ಆತನ ಗ್ಯಾಂಗ್ ಇದೆ ಎಂದು ಹೇಳಲಾಗಿತ್ತು. ಈ ಗ್ಯಾಂಗ್ ನ ಹಲವು ಸದಸ್ಯರನ್ನು ಈಗಾಗಲೇ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯಲ್ಲಿ ಹಲವು ರೋಚಕ ಮತ್ತು ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಇದನ್ನೂ ಓದಿ: ವೈರಲ್ ಆಯ್ತು ಪರಿಣಿತಿ ಚೋಪ್ರಾ ಸ್ಕೂಬಾ ಡೈವಿಂಗ್ ವಿಡಿಯೋ

    ಸಲ್ಮಾನ್ ಖಾನ್ ಜೀವ ಬೆದರಿಕೆಯ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೋಯಿಯ ಗ್ಯಾಂಗಿನ ಸದಸ್ಯ ಸಿದ್ಧೇಶ‍್ ಕಾಂಬ್ಳೆ ಅನ್ನು ವಶಕ್ಕೆ ಪಡೆದಿರುವ ಪೊಲೀಸ್ ಅಧಿಕಾರಿಗಳು, ಎಲ್ಲ ರೀತಿಯಿಂದಲೂ ಬಾಯಿ ಬಿಡಿಸುತ್ತಿದ್ದಾರೆ. ಹಾಗಾಗಿ ಆತ ಕೆಲವು ವಿಚಾರಗಳನ್ನು ಪೊಲೀಸ್ ರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದೆ. ತಮ್ಮ ಹಿಟ್ ಲಿಸ್ಟ್ ನಲ್ಲಿ ನಿರ್ಮಾಪಕ, ನಿರ್ದೇಶಕ, ನಟ ಕರಣ್ ಜೋಹರ್ ಕೂಡ ಇದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾನೆ.

    ಹಾಲಿವುಡ್ ನಿರ್ಮಾಪಕರಿಗೆ ಜೀವ ಬೆದರಿಕೆ ಹಾಕಿ, ಹಣ ವಸೂಲಿ ಮಾಡಲು ದೊಡ್ಡದೊಂದು ಪಟ್ಟಿಯನ್ನೇ ಸಿದ್ಧ ಪಡಿಸುತ್ತಿದ್ದರಿಂದ ಲಾರೆನ್ಸ್ ಅಂಡ್ ಗ್ಯಾಂಗ್. ಈ ಲಿಸ್ಟ್ ನಲ್ಲಿ ಕರಣ್ ಜೋಹರ್ ಹೆಸರು ಪ್ರಮುಖವಾಗಿ ಇತ್ತು ಎಂದು ಹೇಳಿದ್ದಾರೆ. ಬರೋಬ್ಬರಿ ಐದು ಕೋಟಿಗೂ ಅಧಿಕ ಹಣವನ್ನು ವಸೂಲಿ ಮಾಡಲು ಈ ಗ್ಯಾಂಗ್ ಪ್ಲ್ಯಾನ್ ಮಾಡಲಾಗಿತ್ತಂತೆ.

    Live Tv