Tag: ಕಬಡ್ಡಿ

  • ಮಂಡ್ಯ| ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಯುವಕ ಹೃದಯಾಘಾತದಿಂದ ಸಾವು

    ಮಂಡ್ಯ| ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಯುವಕ ಹೃದಯಾಘಾತದಿಂದ ಸಾವು

    ಮಂಡ್ಯ/ಉಡುಪಿ: ಹನುಮ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಆಟಗಾರನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ನಾಗಮಂಗಲ ತಾಲೂಕಿನ ಸುಖಧರೆ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯದಲ್ಲಿ ಪಾಲ್ಗೊಂಡಿದ್ದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುಟ್ಲುಪಾಡಿಯ ಪ್ರೀತಂ ಶೆಟ್ಟಿ (24) ಸಾವಿಗೀಡಾದ ಯುವಕ.

    ತಡರಾತ್ರಿ ಆಟದ ವೇಳೆ ಹೃದಯಘಾತವಾಗಿತ್ತು. ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ. ನಾಗಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಸುಖಧರೆ ಗ್ರಾಮದಲ್ಲಿ ಹನುಮ ಜಯಂತಿ ಹಿನ್ನೆಲೆ ಪ್ರೊ ಕಬಡ್ಡಿ ಪಂದ್ಯಾಟ ಏರ್ಪಡಿಸಲಾಗಿತ್ತು. ಬಹುನಿರೀಕ್ಷಿತ ಆಟಗಾರನಾಗಿ ಬಂದಿದ್ದ ಪ್ರೀತಂ ಕಬಡ್ಡಿ ಪಂದ್ಯಾಟ ಮುಗಿಸಿ ರೆಸ್ಟ್‌ನಲ್ಲಿ ಇರುವಾಗ ಹೃದಯಾಘಾತಕ್ಕೊಳಗಾಗಿದ್ದಾರೆ. ಲೀಗ್, ಸೆಮಿ ಎಲ್ಲಾ ಆಟಗಳನ್ನು ಗೆದ್ದುಕೊಂಡು ಬಂದು ಫೈನಲ್ ಆಟ ಒಂದೇ ಬಾಕಿ ಇತ್ತು. ಅಂತಿಮ ಘಟ್ಟ ತಲುಪುವ ಮೊದಲೇ ಪ್ರೀತಮ್ ಇಹಲೋಕ ತ್ಯಜಿಸಿದ್ದಾರೆ.

    ಪ್ರೀತಂ ಪ್ರೊ ಕಬಡ್ಡಿ ಮತ್ತು ಟೀಮ್ ಇಂಡಿಯಾ ಕಬಡ್ಡಿಯಲ್ಲಿ ಆಡಿದ ಹಲವಾರು ಕ್ರೀಡಾಪಟುಗಳ ಜೊತೆ ಕೋರ್ಟ್ ಹಂಚಿಕೊಂಡಿದ್ದರು. ಪಂದ್ಯವೊಂದರಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಮಣೀಂದರ್ ಅವರನ್ನು ಪ್ರೀತಂ ಕ್ಯಾಚ್ ಮಾಡಿದ್ದ ವೀಡಿಯೋ ಹಿಂದೆ ಬಹಳ ವೈರಲ್ ಆಗಿತ್ತು. ದೃಢಕಾಯದ ವ್ಯಕ್ತಿಯಾಗಿದ್ದ ಪ್ರೀತಂಗೆ ಕಬಡ್ಡಿ ನೆಲದಲ್ಲಿ ಬಹಳ ಬೇಡಿಕೆ ಇತ್ತು.

    ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುಟ್ಲುಪಾಡಿ ಗ್ರಾಮದ ನಿವಾಸಿಯಾಗಿರುವ ಪ್ರೀತಂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ. ವಿದೇಶದಲ್ಲಿ ಉದ್ಯೋಗವನ್ನು ಅರಸುತ್ತಿದ್ದು, ಎಲ್ಲಾ ತಯಾರಿ ಮಾಡಿಕೊಂಡಿದ್ದ. ಮೈದಾನದಲ್ಲಿ ಕುಸಿದು ಬಿದ್ದ ಕೂಡಲೇ ಪ್ರೀತಂನನ್ನು ಸ್ಥಳೀಯ ನಾಗಮಂಗಲ ಆಸ್ಪತ್ರೆಗೆ ರವಾನಿಸಲಾಯಿತು. ಅಷ್ಟರಲ್ಲೇ ಆತ ಕೊನೆಯುಸಿರೆಳೆದಿದ್ದ.

  • ಹಿಪ್ಪರಗಿ ಕಬಡ್ಡಿ ವೈಭವ – ಕಣ್ಮನ ಸೆಳೆದ ಅಂತರ್ ರಾಜ್ಯ ಮಹಿಳಾ ಟೂರ್ನಿ

    ಹಿಪ್ಪರಗಿ ಕಬಡ್ಡಿ ವೈಭವ – ಕಣ್ಮನ ಸೆಳೆದ ಅಂತರ್ ರಾಜ್ಯ ಮಹಿಳಾ ಟೂರ್ನಿ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿ (Jamkhandi) ತಾಲ್ಲೂಕಿನ ಹಿಪ್ಪರಗಿಯಲ್ಲಿ (Hippargi) ಶ್ರೀ ಸಂಗಮೇಶ್ವರ ಮಹಾರಾಜರ 93ನೇ ಪುಣ್ಯಸ್ಮರಣೋತ್ಸವ ಸಪ್ತಾಹ ಸಮಾರಂಭ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಹಿಪ್ಪರಗಿ ಕಬಡ್ಡಿ ವೈಭವ- 2ನೇ ಆವೃತ್ತಿಯು ಅಂತರ್ ರಾಜ್ಯ ಮಟ್ಟದ ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು (Kabaddi Tournament) ಹಮ್ಮಿಕೊಳ್ಳಲಾಗಿತ್ತು.

    ಈ ಪಂದ್ಯಾವಳಿಯಲ್ಲಿ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ತಮಿಳನಾಡು,ಆಂಧ್ರಪ್ರದೇಶ,ಕರ್ನಾಟಕ ಸೇರಿದಂತೆ 35 ತಂಡಗಳು ಭಾಗವಹಿಸಿದ್ದವು.

    ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭದ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ (Jogati Manjamma) ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಅವರ ಭವಿಷ್ಯವನ್ನು ಹಾಳು ಮಾಡಬೇಡಿ. ಕಬಡ್ಡಿಯಂತಹ ದೇಶಿಯ ಆಟಗಳನ್ನು ಆಡಿಸಿ ಬಲಿಷ್ಠರನ್ನಾಗಿ ಮಾಡುವುದರ ಜೊತೆಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಬೇಕು ಎಂದು ಹೇಳಿದರು. ಹಿಪ್ಪರಗಿ ಕಬಡ್ಡಿ ವೈಭವ ಅತ್ಯಂತ ಅದ್ದೂರಿಯಾಗಿ ಜರುಗಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಲಗೆ ಕಚ್ಚಿ, ಜೋರು ಗದರಿ ಕೈ ಎತ್ತಿದ ಸಿದ್ದರಾಮಯ್ಯ

    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬಂಡಿಗಣಿ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಅಪ್ಪಾಜಿಯವರು ಹಿಪ್ಪರಗಿ ಗ್ರಾಮದ ಶಕ್ತಿ ಎಂತಹದ್ದು ಎಂದು ಈ ಕಬಡ್ಡಿ ವೈಭವವನ್ನು ನೋಡಿದರೆ ತಿಳಿಯುತ್ತದೆ. ಗಿರಿಮಲೇಶ್ವರರು, ಸಂಗಮನಾಥರು, ಮಾಧವಾನಂದರು, ಶ್ರೀಶೈಲ ಜಗದ್ಗುರುಗಳು ಹುಟ್ಟಿದ ಪುಣ್ಯಭೂಮಿ ಇದು. ಎಲ್ಲರೂ ಒಗಟ್ಟಾಗಿ ಬಾಳಿ ಎಂದು ಹಾರೈಸಿದರು.

    ಸಮಾರಂಭದ ಸಾನಿಧ್ಯವನ್ನು ವಹಿಸಿಕೊಂಡ ಶ್ರೀ ಸ.ಸ.ಪ್ರಭುಜೀ ಮಹಾರಾಜರು, ತರಹದ ದೇಶಿ ಆಟಗಳನ್ನು ಆಡಬೇಕೆಂದು ತಿಳಿಸಿದರು. ಸಮಾರಂಭದ ದಿವ್ಯ ಸಾನಿಧ್ಯವನ್ನ ವಹಿಸಿದ್ದ ಶ್ರೀಶೈಲ ಮಹಾಪೀಠದ ಜಗದ್ಗುರು ಮಹಾಸನ್ನಿಧಿಯವರು, ಈ ಕಬಡ್ಡಿ ವೈಭವ ಆಯೋಜನೆ ಮಾಡುವುದಕ್ಕಷ್ಟೇ ಸೀಮಿತವಾಗದೇ ಅಂತರರಾಜ್ಯ ಮಟ್ಟದಿಂದ ಆಗಮಿಸಿರುವ ಮಹಿಳಾ ತಂಡಗಳಂತೆ ಪ್ಪರಗಿ ಗ್ರಾಮದಿಂದಲೂ ಬಲಿಷ್ಠ ಕಬಡ್ಡಿ ತಂಡ ನಿರ್ಮಾಣವಾಗಬೇಕೆಂದು ಕರೆ ಕೊಡುವುದರ ಜೊತೆಗೆ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯವೆಂದು ತಮ್ಮ ಆಶೀರ್ವಚನ ನೀಡಿದರು.

    2ನೇ ಆವೃತ್ತಿಯಲ್ಲಿ ರತ್ನಗಿರಿ ಪ್ರಥಮ, ಉತ್ತರ ಪ್ರದೇಶ ದ್ವಿತೀಯ, ಸತಾರ ತೃತೀಯ, ಗುಜರಾತ್‌ ಚತುರ್ಥ ಸ್ಥಾನವನ್ನು ಗಳಿಸಿದವು.

     

  • ಪಿಯು ಕಬಡ್ಡಿ ಟೂರ್ನಿ ವೇಳೆ ಜಗಳ: ಮಚ್ಚು ಬೀಸಿದ ಅಪ್ರಾಪ್ತ ವಿದ್ಯಾರ್ಥಿ

    ಪಿಯು ಕಬಡ್ಡಿ ಟೂರ್ನಿ ವೇಳೆ ಜಗಳ: ಮಚ್ಚು ಬೀಸಿದ ಅಪ್ರಾಪ್ತ ವಿದ್ಯಾರ್ಥಿ

    ಹಾಸನ: ಕಬಡ್ಡಿ (Kabaddi) ಪಂದ್ಯದ ವೇಳೆ ಪಿಯು ವಿದ್ಯಾರ್ಥಿಗಳ ನಡುವೆ ಗಲಾಟೆ ಶುರುವಾಗಿ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿ ವಿದ್ಯಾರ್ಥಿಗಳು ಪರಸ್ಪರ ಬಡಿದಾಡಿಕೊಂಡು ಮಚ್ಚು ಬೀಸಿರುವ ಘಟನೆ ಹಾಸನ (Hassan) ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ.ಇದನ್ನೂ ಓದಿ: ಹಾಸನದಲ್ಲಿ ನಕಲಿ ಆಧಾರ್ ತೋರಿಸಿ ಕೆಲಸ ಗಿಟ್ಟಿಸಿಕೊಳ್ಳುವ ಬಾಂಗ್ಲಾ ಅಕ್ರಮ ವಲಸಿಗರು – ತನಿಖೆ ವೇಳೆ ಬೃಹತ್ ಜಾಲ ಬಯಲು

    ಆ.30 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಪಿಯುಸಿ ಕಾಲೇಜುಗಳ ಕ್ರೀಡಾಕೂಟದಲ್ಲಿ ಕಬಡ್ಡಿ ಪಂದ್ಯ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎರಡು ಕಾಲೇಜು ವಿದ್ಯಾರ್ಥಿಗಳ ಗುಂಪಿನ ನಡುವೆ ಜಗಳ ಶುರುವಾಗಿದೆ. ಈ ವೇಳೆ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಮತ್ತೋರ್ವ ಅಪ್ರಾಪ್ತ ವಿದ್ಯಾರ್ಥಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದ ಮಚ್ಚು ತೆಗೆದು ಹಲ್ಲೆಗೆ ಮುಂದಾಗಿದ್ದು, ಕೂದಲೆಳೆ ಅಂತರದಲ್ಲಿ ಅಪ್ರಾಪ್ತ ವಿದ್ಯಾರ್ಥಿ ಪಾರಾಗಿದ್ದಾನೆ.

    ಇದರಿಂದ ಸಿಟ್ಟಿಗೆದ್ದ ಇತರೇ ವಿದ್ಯಾರ್ಥಿಗಳು ಮಚ್ಚು ಬೀಸಿದವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹೊಡೆತ ತಾಳಲಾರದೇ ಅಪ್ರಾಪ್ತ ವಿದ್ಯಾರ್ಥಿ ನೆಲಕ್ಕುರಿಳಿದ್ದಾನೆ ಆದರೂ ಬಿಡದೇ ವಿದ್ಯಾರ್ಥಿಗಳು ಕಾಲಿನಿಂದ ಒದ್ದು ಮನಸ್ಸೋ ಇಚ್ಛೆ ಗೂಸಾ ಕೊಟ್ಟಿದ್ದಾರೆ. ಗಾಯಾಳು ವಿದ್ಯಾರ್ಥಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆ.ಆರ್.ಪುರಂ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಗೂಗಲ್‌, ಆಪಲ್‌ಗೆ ಜಿಯೋ ಠಕ್ಕರ್‌ – ಕ್ಲೌಡ್‌ ಸ್ಟೋರೇಜ್‌ನಲ್ಲೂ ದರ ಸಮರ ಆರಂಭ?

  • ಖೇಲೋ ಇಂಡಿಯಾಗೆ ಆಯ್ಕೆ – ಕ್ರೀಡಾಧಿಕಾರಿ, ವಿದ್ಯಾರ್ಥಿಗಳನ್ನು ಮೆರವಣಿಯೊಂದಿಗೆ ಬರಮಾಡಿಕೊಂಡ ಬೆಳ್ಳಾರೆ ಜನತೆ

    ಖೇಲೋ ಇಂಡಿಯಾಗೆ ಆಯ್ಕೆ – ಕ್ರೀಡಾಧಿಕಾರಿ, ವಿದ್ಯಾರ್ಥಿಗಳನ್ನು ಮೆರವಣಿಯೊಂದಿಗೆ ಬರಮಾಡಿಕೊಂಡ ಬೆಳ್ಳಾರೆ ಜನತೆ

    ಮಂಗಳೂರು: ಖೇಲೋ ಇಂಡಿಯಾ (Khelo India) ರಾಷ್ಟ್ರ ಮಟ್ಟದ ಕಬಡ್ಡಿ (Kabaddi) ಪಂದ್ಯಾಟಕ್ಕೆ ಆಯ್ಕೆಯಾದ ಬೆಳ್ಳಾರೆಯ (Bellare) ಕೆಪಿಎಸ್‌ನ ಇಬ್ಬರು ವಿದ್ಯಾರ್ಥಿಗಳು ಮತ್ತು ಕ್ರೀಡಾಧಿಕಾರಿಯನ್ನು ನಾಗರಿಕರು ಮೆರವಣಿಗೆಯ ಮೂಲಕ ಸಂಸ್ಥೆಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

    ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ (Karnataka) ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ರಾಜ್ಯದ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ ಇವರು ಖೇಲೋ ಇಂಡಿಯಾ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ ಆಗಿದ್ದಾರೆ. ಇವರ ಜೊತೆ ಖೇಲೋ ಇಂಡಿಯಾ ಕ್ರೀಡಾಧಿಕಾರಿಯಾಗಿ ಬೆಳ್ಳಾರೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಆಯ್ಕೆಗೊಂಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ – ಯುಪಿ ಮೂಲದ ಹೊಸ ಆಟಗಾರನಿಗೆ ಚಾನ್ಸ್

    ಸುಳ್ಯ ತಾಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೆಪಿಎಸ್‌ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಖೇಲೋ ಇಂಡಿಯಾಗೆ ಆಯ್ಕೆಯಾಗಿ ಬೆಳ್ಳಾರೆಗೆ ಕೀರ್ತಿ ತಂದಿದ್ದಾರೆ. ಈ ವಿಶೇಷ ಸಾಧನೆಗೆ ಊರಿನ ನಾಗರಿಕರು ತೆಲಂಗಾಣದಿಂದ ಬೆಂಗಳೂರು ಮೂಲಕ ಸುಬ್ರಹ್ಮಣ್ಯ ಮಾರ್ಗವಾಗಿ ಆಗಮಿಸಿದ ಇಬ್ಬರು ಆಟಗಾರರನ್ನು ಮತ್ತು ಕ್ರೀಡಾಧಿಕಾರಿ ಪುಷ್ಪಾವತಿ ಇವರನ್ನು ಬರಮಾಡಿಕೊಂಡು ಸನ್ಮಾನಿಸಿ ಮೆರವಣಿಗೆಯ ಮೂಲಕ ಸಂಸ್ಥೆಗೆ ಬರಮಾಡಿದ್ದಾರೆ.

  • ಕಬಡ್ಡಿಯಲ್ಲಿ ಪಾಯಿಂಟ್‌ಗಾಗಿ ಕಿತ್ತಾಟ, 1 ಗಂಟೆ ಆಟ ಸ್ಥಗಿತ – ಕೊನೆಗೂ ಚಿನ್ನ ಗೆದ್ದ ಭಾರತ

    ಕಬಡ್ಡಿಯಲ್ಲಿ ಪಾಯಿಂಟ್‌ಗಾಗಿ ಕಿತ್ತಾಟ, 1 ಗಂಟೆ ಆಟ ಸ್ಥಗಿತ – ಕೊನೆಗೂ ಚಿನ್ನ ಗೆದ್ದ ಭಾರತ

    ಹ್ಯಾಂಗ್‌ಝೋ: ಹಲವು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಿದ್ದ ಏಷ್ಯನ್‌ ಗೇಮ್ಸ್‌ (Asian Games 2023) ಕಬಡ್ಡಿ ಫೈನಲ್‌ನಲ್ಲಿ (Kabaddi Final) ಇರಾನ್‌ (Iran) ತಂಡವನ್ನು29 -33 ಅಂಕಗಳಿಂದ ಸೋಲಿಸಿ ಭಾರತ ಚಿನ್ನದ ಪದಕವನ್ನು (Gold Medal) ಗೆದ್ದುಕೊಂಡಿದೆ.

    ಈ ಮೂಲಕ ಈ ಕ್ರೀಡಾಕೂಟದ ಮಹಿಳೆಯರ ಮತ್ತು ಪುರುಷರ ಎರಡೂ ಕಬಡ್ಡಿಯಲ್ಲಿ ಭಾರತ (India) ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಇದನ್ನೂ ಓದಿ: Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್‌ ಕಿರೀಟ ಧರಿಸಿದ ಭಾರತ

    https://twitter.com/TheCrickFun/status/1710574840963600783

    ಆಗಿದ್ದೇನು?
    ಎರಡು ತಂಡಗಳು 28 ಅಂಕಗಳಿಸಿದ್ದಾಗ ಭಾರತದ ಪವನ್‌ ಶೆರಾವತ್‌ (Pawan Sehrawat) ರೈಡ್ ಮಾಡುತ್ತಿದ್ದರು. ಡು-ಆರ್‌-ಡೈ ರೈಡ್‌ ವೇಳೆ ಇರಾನ್‌ ಆಟಗಾರನ್ನು ಟಚ್‌ ಮಾಡಲು ಪ್ರಯತ್ನಿಸಿ ವಿಫಲರಾಗಿ ಲಾಬಿ ಗೆರೆಯನ್ನು ಟಚ್‌ ಮಾಡಿದರು. ಈ ವೇಳೆ ಇರಾನಿನ 4 ಆಟಗಾರರು ಲಾಬಿಯಲ್ಲಿ ಪವನ್‌ ಅವರನ್ನು ಹಿಡಿದರು.

    ಪವನ್‌ ಔಟಾದ ಬೆನ್ನಲ್ಲೇ ಇರಾನ್‌ ತಂಡಕ್ಕೆ 1 ಅಂಕವನ್ನು ನೀಡಲಾಯಿತು. ಈ ತೀರ್ಪು ಬಂದ ಕೂಡಲೇ ಭಾರತದ ತಂಡ ಆಟಗಾರರು, ಕೋಚ್‌ ಅಂಪೈರ್‌ ಜೊತೆ ಅಂಕ ನೀಡುವುಂತೆ ಚರ್ಚೆ ನಡೆಸಿದರು.

    ನಂತರ ರಿವ್ಯೂ ನೋಡಿದಾಗ ಪವನ್‌ ಇರಾನ್‌ ಆಟಗಾರರನ್ನು ಟಚ್‌ ಮಾಡದೇ ಇರುವ ವಿಷಯ ದೃಢಪಟ್ಟಿತ್ತು. ರಿವ್ಯೂ ನಂತರ ಭಾರತ ತಂಡಕ್ಕೆ 4 ಅಂಕಗಳನ್ನು ನೀಡಲಾಯಿತು. ಭಾರತಕ್ಕೆ 4 ಅಂಕ ನೀಡಿದ್ದಕ್ಕೆ ಇರಾನ್‌ ತಂಡ ಭಾರೀ ವಿರೋಧ ವ್ಯಕ್ತಪಡಿಸಿತು. ಎರಡು ತಂಡಗಳು ಅಂಕದ ವಿಷಯದ ಬಗ್ಗೆ ವಾದ ಮುಂದುವರಿಸುತ್ತಿದ್ದಂತೆ ಪಂದ್ಯವನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

    ನಿಮಯ ಏನು ಹೇಳುತ್ತೆ?
    ರೈಡರ್‌ ಎದುರಾಳಿ ಆಟಗಾರನನ್ನು ಟಚ್‌ ಮಾಡದೇ ಲಾಬಿಯನ್ನು ಟಚ್‌ ಮಾಡಿದಾಗ ಎದುರಾಳಿ ಆಟಗಾರರು ರೈಡರ್‌ ಅನ್ನು ಹಿಡಿದರೆ ಆಗ ಆ ಎಲ್ಲಾ ಡಿಫೆಂಡರ್‌ಗಳು ಔಟ್‌ ಎಂದು ಅಂತಾರಾಷ್ಟ್ರೀಯ ಕಬಡ್ಡಿಯ ನಿಯಮ ಹೇಳುತ್ತದೆ. ಆದರೆ ಭಾರತದಲ್ಲಿ ನಡೆಯುವ ಪ್ರೊ ಕಬಡ್ಡಿಯಲ್ಲಿ ಈ ನಿಯಮವನ್ನು ಬದಲಾಯಿಸಲಾಯಿಸಲಾಗಿದ್ದು, ಸಂದರ್ಭದಲ್ಲಿ ರೈಡರ್‌ ಮಾತ್ರ ಔಟ್‌ ಎಂದು ಘೋಷಿಸಲಾಗುತ್ತದೆ.

    ಅಂತಾರಾಷ್ಟ್ರೀಯ ಕಬಡ್ಡಿ ನಿಯಮದ ಪ್ರಕಾರ 4 ಮಂದಿಯೂ ಔಟ್‌ ಎಂದು ಭಾರತ ವಾದಿಸಿತ್ತು. ಕೊನೆಗೆ ಯಾವ ತಂಡಕ್ಕೆ ಅಂಕ ನೀಡಬೇಕೆಂದು ಎಂದು ನಿರ್ಧಾರ ತೆಗೆದುಕೊಳ್ಳಲು ಸುಮಾರು ಒಂದು ಗಂಟೆ ಕಾಲ ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಅಂತಿಮವಾಗಿ ವಿಡಿಯೋ ರಿಪ್ಲೈ ನೋಡಿ ರೆಫ್ರಿಗಳು ಚರ್ಚೆ ಮಾಡಿ ಭಾರತಕ್ಕೆ 4 ಅಂಕ ನೀಡಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈಪುರಕ್ಕೆ ಹೋಗಿ ಕೈ ಮುರಿದುಕೊಂಡಿದ್ದೆ – ಕಬಡ್ಡಿ ಆಡಿ ನೆನಪು ಹಂಚಿಕೊಂಡ ಹೊರಟ್ಟಿ

    ಜೈಪುರಕ್ಕೆ ಹೋಗಿ ಕೈ ಮುರಿದುಕೊಂಡಿದ್ದೆ – ಕಬಡ್ಡಿ ಆಡಿ ನೆನಪು ಹಂಚಿಕೊಂಡ ಹೊರಟ್ಟಿ

    ಧಾರವಾಡ: ನಾನು ರಾಷ್ಟ್ರಮಟ್ಟದಲ್ಲಿ ಕಬಡ್ಡಿ (Kabaddi) ಆಟ ಆಡಿದ್ದೇನೆ. ಎರಡು ಬಾರಿ ಯೂನಿವರ್ಸಿಟಿ ಬ್ಲೂ ಆಗಿದ್ದೆ. ಅದರಲ್ಲಿ ಒಂದು ಬಾರಿ ಕಬಡ್ಡಿ ಆಟದಲ್ಲಿ‌ ನಾನು ಜೈಪುರಕ್ಕೆ ಹೋಗಿದ್ದಾಗ ಕೈಮುರಿದುಕೊಂಡು ಬಂದಿದ್ದೆ ಎಂದು ಪರಿಷತ್ ಸಭಾಪತಿ (Vidhan Parishad Chairman) ಬಸವರಾಜ ಹೊರಟ್ಟಿ (Basavaraj Horatti) ಹೇಳಿದರು.

    ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಕಬಡ್ಡಿ ಆಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಾನು ರಾಷ್ಟ್ರಮಟ್ಟದಲ್ಲಿ ಕಬಡ್ಡಿ ಆಡಿದ್ದೇನೆ. 25 ವರ್ಷದ ನಂತರ ಇವತ್ತು ಆಡಿದ್ದು ಬಹಳ ಖುಷಿಯಾಗಿದೆ ಎಂದರು.

    ಪ್ರತಿವರ್ಷ ಶಾಸಕರ ದಿನಾಚರಣೆಯಲ್ಲಿ ನಾವು ಕಬಡ್ಡಿ ಅಡುತ್ತಿದ್ದೆವು. ಆದರೆ ಈಗ ಅದು ಬಂದ್ ಆಗಿದೆ. ಕಬಡ್ಡಿಯಲ್ಲಿ ಸಂಪೂರ್ಣವಾದ ವ್ಯಾಯಾಮ ಸಿಗುತ್ತದೆ. ಎಷ್ಟೋ ವರ್ಷದ ನೆನಪು ಇಂದು ಆಗಿದೆ. ನಾನು ಜೈಪುರಕ್ಕೆ ಹೋಗಿ ಕಬಡ್ಡಿ ಆಡಿ ಕೈ ಮುರಿದುಕೊಂಡು ಬಂದಿದ್ದೆ ಎಂದು ಹಳೆಯ ನೆನಪನ್ನು ಹಂಚಿಕೊಂಡರು. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಒಂದೇ ವಾರದಲ್ಲಿ ಕರ್ನಾಟಕದ ಟ್ಯಾಬ್ಲೋ ರೆಡಿ

    ನಾವು ಚಿಕ್ಕವರಿದ್ದಾಗ ಮಣ್ಣಿನಲ್ಲೇ ಅಡುತ್ತಿದ್ದೆವು. ಆದರೆ ಈಗ ಸುಧಾರಣೆಯಾಗಿದ್ದು, ಶಾಸಕರ ದಿನಾಚರಣೆ ಮಾಡುವಾಗ ರಾಮಕೃಷ್ಣ ಹೆಗಡೆ ಹಾಗೂ ಜೆ ಹೆಚ್ ಪಟೇಲ್ ಇದ್ದಾಗ ಕ್ರೀಡೆ ಇತ್ತು. ಅವಾಗ ಸಿಎಂ ತಂಡ ಹಾಗೂ ಎದುರಾಳಿ ಪ್ರತಿಪಕ್ಷದ ತಂಡದ ನಡುವೆ ಪಂದ್ಯ ಇರುತ್ತಿದ್ದವು. ಕಬಡ್ಡಿ, ರನ್ನಿಂಗ್ ಎಲ್ಲವೂ ಆಗ ಇರುತ್ತಿತ್ತು.‌ ಆದರೆ ಈಗ ರಾಜಕೀಯ ಹೊಲಸು ಆಗಿದ್ದಕ್ಕೆ ಎಲ್ಲವೂ ನಿಂತಿದೆ ಎಂದು ಹೊರಟ್ಟಿ ಹೇಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜಕೀಯ ಜಂಜಾಟದ ನಡುವೆ ಯುವಕರೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ

    ರಾಜಕೀಯ ಜಂಜಾಟದ ನಡುವೆ ಯುವಕರೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ

    ಹಾಸನ: ಅಧಿವೇಶನ, ಬಿಡುವಿಲ್ಲದ ಕಾರ್ಯಕ್ರಮ, ರಾಜಕೀಯ ಜಂಜಾಟದ ನಡುವೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಯುವಕರೊಂದಿಗೆ ಕಬಡ್ಡಿ (Kabaddi) ಆಡಿ ನಲಿದಿದ್ದಾರೆ.

    ಅರಸೀಕೆರೆ ತಾಲೂಕಿನ ತಾಂಡ್ಯ ಗ್ರಾಮ ಹಾಗೂ ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲು ಶಿವಲಿಂಗೇಗೌಡರು ಆಗಮಿಸಿದ್ದರು. ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಶಿವಲಿಂಗೇಗೌಡ ಪಂಚೆಯಲ್ಲಿಯೇ ಎರಡು ಕಡೆ ರೈಡ್ ಮಾಡಿದರು. ಎರಡು ಕಡೆಗಳಲ್ಲೂ ಯುವಕರು ಶಾಸಕರನ್ನು ಟ್ಯಾಕಲ್ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿದ ರೆಡ್ಡಿ

    ಶಾಸಕರು ಕಬಡ್ಡಿ ಆಡಿರುವುದಕ್ಕೆ ಯುವಕರು ಫಿದಾ ಆಗಿ ಶಿಳ್ಳೆ, ಚಪ್ಪಾಳೆ ಹೊಡೆದು ಸಂತಸಪಟ್ಟಿದ್ದಾರೆ. ಬ್ಯುಸಿ ಶೆಡ್ಯೂಲ್ ನಡುವೆ ರಿಲಾಕ್ಸ್ ಮೂಡ್‌ನಲ್ಲಿ ಶಾಸಕ ಕೆಎಂ ಶಿವಲಿಂಗೇಗೌಡ ಆಡುವ ಮೂಲಕ ಇತರ ಶಾಸಕರಿಗಿಂತ ಭಿನ್ನ ಎನಿಸಿಕೊಂಡರು. ಇದನ್ನೂ ಓದಿ: ಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿ : ಸಹೋದರ ಮಹಮ್ಮದ್

    Live Tv
    [brid partner=56869869 player=32851 video=960834 autoplay=true]

  • ಕಬಡ್ಡಿ ಅಂಗಳಕ್ಕಿಳಿದು ತೊಡೆ ತಟ್ಟಿದ ಶಾಸಕ ಪುಟ್ಟರಾಜು

    ಕಬಡ್ಡಿ ಅಂಗಳಕ್ಕಿಳಿದು ತೊಡೆ ತಟ್ಟಿದ ಶಾಸಕ ಪುಟ್ಟರಾಜು

    ಮಂಡ್ಯ: ಕಬಡ್ಡಿ ಅಂಗಳಕ್ಕಿಳಿದು ಮೇಲುಕೋಟೆ ಶಾಸಕ ಪುಟ್ಟರಾಜು (MLA Puttaraju) ತೊಡೆ ತಟ್ಟಿದ್ದಾರೆ.

    ಹೌದು. ಮೈದಾನಕ್ಕಿಳಿದು ಶಾಸಕರು ಕಬಡ್ಡಿ (Kabaddi) ಆಡಿ ಎಲ್ಲರನ್ನು ಮನರಂಜಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು. ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶಾಸಕರು ಕಬಡ್ಡಿ ಮೈದಾನಕ್ಕಿಳಿದರು. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ

    ಅಲ್ಲದೆ ಯುವಕರೊಂದಿಗೆ ಕಬಡ್ಡಿ ಆಡುವ ಮೂಲಕ ಕ್ರೀಡಾಸ್ಪೂರ್ತಿ ಮೆರೆದರು. ತೊಡೆ ತಟ್ಟಿ ಅಂಗಳಕ್ಕಿಳಿದರೂ ರೇಡ್ ನಲ್ಲಿ ಪಾಯಿಂಟ್ಸ್ ಗಳಿಸಲು ಶಾಸಕರು ವಿಫಲರಾದರು. ಶಾಸಕರ ಕಬಡ್ಡಿ ಆಟಕ್ಕೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಸರಿಯಿತು. ಈ ಮೂಲಕ ಶಾಸಕರು ರಾಜಕೀಯಕ್ಕೂ ಸೈ, ಕಬಡ್ಡಿಗೂ ಸೈ ಎನ್ನುವಂತೆ ಆಟವಾಡಿದರು.

    Live Tv
    [brid partner=56869869 player=32851 video=960834 autoplay=true]

  • ಬಾಲಕಿಯರ ಕಬಡ್ಡಿ ಪಂದ್ಯಾಟಕ್ಕೆ ಟಾಯ್ಲೆಟ್‌ನಲ್ಲಿ ಊಟ ತಯಾರಿ!

    ಬಾಲಕಿಯರ ಕಬಡ್ಡಿ ಪಂದ್ಯಾಟಕ್ಕೆ ಟಾಯ್ಲೆಟ್‌ನಲ್ಲಿ ಊಟ ತಯಾರಿ!

    ಲಕ್ನೋ: ಉತ್ತರಪ್ರದೇಶದ (Uttar Pradesh) ಸಹರಾನ್ ಪುರದಲ್ಲಿ ನಡೆದ ಬಾಲಕಿಯರ (Girls) ಕಬಡ್ಡಿ ಟೂರ್ನಿ (Kabaddi Tournament) ವೇಳೆ ಶೌಚಾಲಯದಲ್ಲಿ (Toilet) ಬೇಯಿಸಿದ ಆಹಾರವನ್ನೇ ಕ್ರೀಡಾಪಟುಗಳಿಗೆ ಬಡಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

    ಶೌಚಾಲಯ ನೆಲದ ಮೇಲೆ ಬೇಯಿಸಿದ ಅನ್ನದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದಂತೆ ವಿವಾದ ಬುಗಿಲೆದ್ದಿದೆ. ಇದನ್ನೂ ಓದಿ: ರಾಕೇಶ್ ‘ಕಿಸ್’ ಕೊಟ್ಟಿದ್ದು ನಿಜ. ಆದರೆ, ಅದು ಅಮ್ಮನ ಮುತ್ತಿನಂತಿತ್ತು: ಸೋನು ಶ್ರೀನಿವಾಸ್ ಗೌಡ

    ಶುಕ್ರವಾರ (ಸೆಪ್ಟೆಂಬರ್ 16) ದಿಂದ ಆರಂಭವಾದ ಮೂರು ದಿನಗಳ ರಾಜ್ಯಮಟ್ಟದ ಅಂಡರ್-17 ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ (Kabaddi Tournament) ಭಾಗವಹಿಸಿದ್ದ ಸುಮಾರು 200 ಕ್ರೀಡಾಪಟುಗಳಿಗೆ ಶೌಚಾಲಯದ ನೆಲದಲ್ಲಿ ಬೇಯಿಸಿದ ಆಹಾರವನ್ನೇ (Food) ನೀಡಲಾಗಿದೆ. ಜೊತೆಗೆ ಒಂದು ಕಾಗದದ ಮೇಲೆ ಪೂರಿಯನ್ನು ಇಡಲಾಗಿತ್ತು. ಅದನ್ನೇ ಆಟಗಾರರಿಗೆ ಬಡಿಸಲಾಗಿದೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.

    ಈ ಆರೋಪ ತಳ್ಳಿಹಾಕಿರುವ ಕ್ರೀಡಾಧಿಕಾರಿ ಅನಿಮೇಶ್ ಸಕ್ಸೇನಾ ಅವರು, ಇದು ಆಧಾರ ರಹಿತ ಆರೋಪ ಎಂದು ಹೇಳಿದ್ದಾರೆ. ಇದನ್ನೂ ಓದಿ: ಖಾತೆಗಳನ್ನು ಖಾಲಿ ಉಳಿಸಿಕೊಂಡು ಕಾಲಹರಣ ಮಾಡೋ ಬದ್ಲು, ಸಚಿವ ಸ್ಥಾನ ನೀಡಿ: ಬಿಜೆಪಿ MLC

    ಇಲ್ಲಿ ಆಟಗಾರರಿಗೆ ನೀಡಲಾಗುವ ಆಹಾರವು ಉತ್ತಮ ಗುಣಮಟ್ಟದ್ದಾಗಿದೆ. ಅಕ್ಕಿ, ದಾಲ್, ಸಬ್ಜಿ ಸೇರಿದಂತೆ ಎಲ್ಲ ರೀತಿಯ ಆಹಾರವನ್ನು ಈಜುಕೊಳದ (Swimming Pool) ಬಳಿಯೇ ಸಾಂಪ್ರದಾಯಿಕ ಇಟ್ಟಿಗೆ ಒಲೆಯಲ್ಲಿ ದೊಡ್ಡ ಪಾತ್ರೆಗಳಲ್ಲಿ ಸಿದ್ಧಪಡಿಸಿ ಕೊಡಲಾಗಿದೆ. ಸ್ಥಳದ ಕೊರತೆಯಿದ್ದರಿಂದಾಗಿ ಕ್ರೀಡಾಂಗಣದ ಪೂಲ್ ಬಳಿಯೇ ಅಡುಗೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಕೆಲ ಆಟಗಾರರು ಕ್ರೀಡಾಂಗಣದ ಅಧಿಕಾರಿಗಳ ಮುಂದೆ ವಿಷಯ ಪ್ರಸ್ತಾಪಿಸಿದ ಬಳಿಕ ಅನಿಮೇಶ್ ಸಕ್ಸೇನಾ ಅಡುಗೆಯವರಿಗೆ ಛೀಮಾರಿ ಹಾಕಿದ್ದು, ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅತ್ತ ರಣರೋಚಕ ಕಬಡ್ಡಿ ಫೈನಲ್ ಪಂದ್ಯಾಟ – ಇತ್ತ ಕಟ್ಟಿಗೆ ಹಿಡಿದು ಯುವಕರ ಬಡಿದಾಟ

    ಅತ್ತ ರಣರೋಚಕ ಕಬಡ್ಡಿ ಫೈನಲ್ ಪಂದ್ಯಾಟ – ಇತ್ತ ಕಟ್ಟಿಗೆ ಹಿಡಿದು ಯುವಕರ ಬಡಿದಾಟ

    ಬೆಳಗಾವಿ: ಕಬಡ್ಡಿ ಆಡುತ್ತಿದ್ದ ಎರಡು ತಂಡಗಳ ಬೆಂಬಲಿಗರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಕೈಗೆ ಸಿಕ್ಕ ಕಟ್ಟಿಗೆಗಳಿಂದ ಯುವಕರು ಬಡಿದಾಡಿಕೊಂಡ ಘಟನೆ ರಾಮದುರ್ಗ ತಾಲೂಕಿನ ಚಂದರಗಿ ಗ್ರಾಮದಲ್ಲಿ ನಡೆದಿದೆ.

    ಜಿಲ್ಲೆಯ ರಾಮದುರ್ಗ ತಾಲೂಕಿನ ಚಂದರಗಿ ಕ್ರೀಡಾ ಶಾಲೆಯ ಆವರಣದಲ್ಲಿ ವಲಯಮಟ್ಟದ ಕ್ರೀಡಾ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಚಂದರಗಿ ಹಾಗೂ ಕಟಕೋಳ ಶಾಲೆಯ ವಿದ್ಯಾರ್ಥಿಗಳ ತಂಡಗಳ ನಡುವೆ ಕಬಡ್ಡಿ ಫೈನಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಯುವಕರ ಗುಂಪುಗಳ ನಡುವೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ ಬಡಿಗೆ ಹಿಡಿದು ಬಡಿದಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

    ಈ ವೇಳೆ ಕೈಗೆ ಸಿಕ್ಕ ಸಿಕ್ಕ ಕಟ್ಟಿಗೆ ಹಿಡಿದು ಎರಡು ಗ್ರಾಮಗಳ ಯುವಕರ ಬಡಿದಾಟ ನೋಡಿದ ಸ್ಥಳೀಯರು ಶಾಲಾ ವಿದ್ಯಾರ್ಥಿಗಳು ಎದ್ದು ಬಿದ್ದು ಓಡಿಹೋಗಿದ್ದಾರೆ. ಸ್ಥಳಕ್ಕೆ ಕಟಕೋಳ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ಮಧುಮಗ ಎಸ್ಕೇಪ್ – ಲಗ್ನಪತ್ರಿಕೆ, ಮದುವೆ ಸೀರೆ ಹಿಡಿದು ಠಾಣೆ ಮೆಟ್ಟಿಲೇರಿದ ವಧು

    Live Tv
    [brid partner=56869869 player=32851 video=960834 autoplay=true]