Tag: ಕಪ್ಪು ಬಣ್ಣ

  • ದೆಹಲಿಯ ಬಾಬರ್ ರಸ್ತೆ ನಾಮಫಲಕಕ್ಕೆ ಕಪ್ಪು ಬಣ್ಣ- ಹೆಸರು ಬದಲಾಯಿಸುವಂತೆ ಹಿಂದೂ ಸೇನೆ ಒತ್ತಾಯ

    ದೆಹಲಿಯ ಬಾಬರ್ ರಸ್ತೆ ನಾಮಫಲಕಕ್ಕೆ ಕಪ್ಪು ಬಣ್ಣ- ಹೆಸರು ಬದಲಾಯಿಸುವಂತೆ ಹಿಂದೂ ಸೇನೆ ಒತ್ತಾಯ

    ನವದೆಹಲಿ: ಸೆಂಟ್ರಲ್ ದೆಹಲಿಯ ಹೈ ಸೆಕ್ಯೂರಿಟಿ ವಲಯದಲ್ಲಿನ ಬಾಬರ್ ರಸ್ತೆಯ ನಾಮಫಲಕಕ್ಕೆ ಹಿಂದೂ ಸೇನೆಯ ಸದಸ್ಯರು ಕಪ್ಪು ಬಣ್ಣ ಬಳಿದಿದ್ದು, ರಸ್ತೆಯ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.

    ದೆಹಲಿಯ ಹೃದಯ ಭಾಗದಲ್ಲಿ ಪ್ರಸಿದ್ಧ ಕೊನಾಟ್‍ನ ಹತ್ತಿರವಿರುವ ರಸ್ತೆಗೆ ಮೊಘಲ್ ರಾಜವಂಶದ ಮೊದಲ ಚಕ್ರವರ್ತಿ ಬಾಬರ್ ಹೆಸರನ್ನು ಇಡಲಾಗಿದೆ. ಇದಕ್ಕೆ ಹಿಂದೂ ಸೇನೆ ಆಕ್ರೋಶ ವ್ಯಕ್ತಪಡಿಸಿದ್ದು, ಸೇನೆಯ ಸದಸ್ಯರು ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ. ಈ ರಸ್ತೆಗೆ ಬಾಬರ್ ಎಂಬ ಹೆಸರ ಬದಲಾಗಿ ಶ್ರೇಷ್ಠ ಭಾರತೀಯ ವ್ಯಕ್ತಿಯ ಹೆಸರಿಡುವಂತೆ ಆಗ್ರಹಿಸಿದ್ದಾರೆ.

    ಹೆಸರು ಬದಲಾವಣೆ ಆಗ್ರಹಿಸಿ ದೆಹಲಿಯ ಮುನ್ಸಿಪಲ್ ಕೌನ್ಸಿಲ್‍ನ ರಸ್ತೆಯ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದೇವೆ ಎಂದು ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಈ ಕುರಿತು ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ರಸ್ತೆಯ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಎನ್‍ಡಿಎಂಸಿಯ ಅಧಿಕಾರಿಗಳು ಸಹ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.

    ಹೆಚ್ಚು ಮರಗಳಿಂದ ಕೂಡಿದ್ದ ರಸ್ತೆಗಳಲ್ಲಿ ಒಂದಾದ ಅಕ್ಬರ್ ರಸ್ತೆಯನ್ನು ಈ ಹಿಂದೆ ಮರುನಾಮಕರಣ ಮಾಡಿ ಸಂಕ್ಷಿಪ್ತಗೊಳಿಸಲಾಗಿತ್ತು. ಅಕ್ಬರ್ ಎಂದಿದ್ದ ನಾಮಫಲಕದ ಮೇಲೆಯೇ ‘ಮಹಾರಾಣಾ ಪ್ರತಾಪ್ ರಸ್ತೆ’ ಎಂದು ಬರೆಯಲಾಗಿತ್ತು. ಹಳದಿ ಹಾಗೂ ಗುಲಾಬಿ ಬಣ್ಣದ ಪೋಸ್ಟರ್‍ನ್ನು ಹಾಕಲಾಗಿತ್ತು. ಪೊಲೀಸ್ ಮೇಲ್ವಿಚಾರಣೆ ನಂತರ ಈ ಪೋಸ್ಟರ್ ಗಳನ್ನು ತೆಗೆದುಹಾಕಲಾಗಿತ್ತು.

    ಬಾಬರ್ ಮಗ ಮೊಘಲ್ ಚಕ್ರವರ್ತಿ ಅಕ್ಬರ್ ಹೆಸರಿನ ಈ ರಸ್ತೆಯಲ್ಲಿ ದೇಶದ ಹಲವು ಉನ್ನತ ರಾಜಕಾರಣಿಗಳ ಮನೆಯಿದ್ದು, ಕಾಂಗ್ರೆಸ್ ಪ್ರಧಾನ ಕಚೇರಿಯೂ ಸಹ ಇದೇ ರಸ್ತೆಯಲ್ಲಿದೆ. 2015ರಲ್ಲಿ ಅಕ್ಬರ್‍ನ ಮೊಮ್ಮಗ ಔರಂಗಜೇಬನ ಹೆಸರಿನ ಮತ್ತೊಂದು ಪ್ರಮುಖ ರಸ್ತೆಯನ್ನು ಹೆಸರನ್ನು ಸಹ ಮರುನಾಮಕರಣ ಮಾಡಲಾಗಿತ್ತು.

    ಔರಂಗಜೇಬ್ ರಸ್ತೆಗೆ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬುಲ್ ಕಲಾಂ ಹೆರಸನ್ನು ಮರುನಾಮಕರಣ ಮಾಡಲಾಗಿತ್ತು. ಇದರ ಮುಂದಿನ ವರ್ಷ ಪ್ರಧಾನ ಮಂತ್ರಿ ರಸ್ತೆ, ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ ಮಾರ್ಗ ಎಂದು ಬದಲಾಯಿಸಲಾಗಿತ್ತು.

  • ಸಿಎಂಗೆ ಕಪ್ಪು ಬಣ್ಣದ ಮೇಲ್ಯಾಕೆ ಅಷ್ಟೊಂದು ಪ್ರೀತಿ: ಇಲ್ಲಿದೆ ಬ್ಲ್ಯಾಕ್ ಕಲರ್ ಲವ್ ಸ್ಟೋರಿ

    ಸಿಎಂಗೆ ಕಪ್ಪು ಬಣ್ಣದ ಮೇಲ್ಯಾಕೆ ಅಷ್ಟೊಂದು ಪ್ರೀತಿ: ಇಲ್ಲಿದೆ ಬ್ಲ್ಯಾಕ್ ಕಲರ್ ಲವ್ ಸ್ಟೋರಿ

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರಿಗೆ ಈಗ ಕಪ್ಪು ಬಣ್ಣದ ವ್ಯಾಮೋಹ ಹಿಡಿದಿದೆ. ಕಪ್ಪು ಬಣ್ಣದ ಕಾರನ್ನು ಬಳಸುತ್ತಿರುವ ಸಿಎಂ ಈಗ ಕಪ್ಪು ಬಣ್ಣ ಖಾಸಗಿ ವಿಮಾನವನ್ನು ಬಳಸುತ್ತಿದ್ದಾರೆ.

    ಹೌದು. ಸಾಧಾರಣವಾಗಿ ಜನ ಪ್ರತಿನಿಧಿಗಳು ಬಿಳಿ ಬಣ್ಣವನ್ನು ಇಷ್ಟ ಪಡುತ್ತಾರೆ. ಆದರೆ ಸಿಎಂ ಕಪ್ಪು ಬಣ್ಣದ ರೇಂಜ್ ರೋವರ್ ಕಾರು, ಖಾಸಗಿ ವಿಮಾನವನ್ನು ಬಳಸುತ್ತಿದ್ದು ದೂರದ ಭೇಟಿ ವೇಳೆ ಈ ವಿಮಾನದ ಮೂಲಕವೇ ಸಂಚರಿಸುತ್ತಿದ್ದಾರೆ.

    ಶನಿಗೆ ಇಷ್ಟವಾದ ಬಣ್ಣ ಕಪ್ಪು ಆಗಿದ್ದು, ಈಗ ಎಚ್‍ಡಿಕೆಯ ಮಿಥುನ ರಾಶಿಯ ಏಳನೇ ಮನೆಯಲ್ಲಿ ಶನಿ ಇದ್ದಾನೆ. ಮುಂದಿನ ವರ್ಷ ಶನಿ ಎಂಟನೇ ಮನೆಗೆ ಹೋಗುತ್ತಾನೆ. ಆ ಸಂದರ್ಭದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಹೆಚ್ಚಿರುತ್ತವೆ. ಹೀಗಾಗಿ ಪ್ರಯಾಣದ ವೇಳೆ ಶನಿಗೆ ಇಷ್ಟವಾದ ಕಪ್ಪು ಬಣ್ಣದ ವಾಹನವನ್ನು ಆರಿಸುವಂತೆ ಸಿಎಂಗೆ ಜ್ಯೋತಿಷಿ ಒಬ್ಬರು ಸಲಹೆ ನೀಡಿದ್ದಾರೆ.

    ಕಪ್ಪು ಬಣ್ಣದ ವಾಹನ ಬಳಸಿದರೆ ಬೇರೆಯವರ ದೃಷ್ಟಿ ಬೀಳುವುದಿಲ್ಲ. ಕಪ್ಪು ಬಣ್ಣದಿಂದ ಮನಸ್ಸು ಸ್ಥಿಮಿತದಲ್ಲಿರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ನಂಬಿಕೆಗಳಿಗೆ ಕಟ್ಟು ಬಿದ್ದು ಎಚ್‍ಡಿಕೆ ಕಪ್ಪು ಬಣ್ಣದ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಕಪ್ಪು ಬಣ್ಣ ಅಪಾಯಕಾರಿ:
    ಕಪ್ಪು ಬಣ್ಣದ ವಿಮಾನಗಳನ್ನ ಬಳಸುವುದು ಅಪಾಯಕಾರಿ. ಕಪ್ಪು ಬಣ್ಣದ ವಿಮಾನಗಳು ಬಿಸಿಯನ್ನ ತಡೆದು ಹಿಡಿಯುವುದರಿಂದ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಕಪ್ಪು ಬಣ್ಣದ ವಿಮಾನಗಳು ಬಳಕೆಗೆ ಸೂಕ್ತವಲ್ಲ. ಕಪ್ಪು ಬಣ್ಣದ ವಿಮಾನಗಳಿಗೆ ಹಕ್ಕಿಗಳು ಡಿಕ್ಕಿ ಹೊಡೆಯೋ ಸಾಧ್ಯತೆನೂ ಹೆಚ್ಚು. ಹೀಗಾಗಿ ಬೇರೆ ಬಣ್ಣವನ್ನ ವಿಮಾನಗಳಿಗೆ ಬಳಸಿದರೂ ಶೇ.40 ರಷ್ಟು ಬಿಳಿ ಬಣ್ಣ ಇರಲೇಬೇಕು ಎಂದು ಅಮೆರಿಕದ ಫೆಡರೇಶನ್ ಆಫ್ ಏವಿಯೇಷನ್ ಎಚ್ಚರಿಕೆಯನ್ನು ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv