Tag: ಕನ್ಹಯ್ಯ ಕುಮಾರ್

  • ತುಕುಡೆ ಗ್ಯಾಂಗಿನ ನಾಯಕರ ಸಮಾಧಿ ಮೇಲೆ ಬಿಜೆಪಿ, ಸಂಘ ಬಲವಾಗಿ ಬೆಳೆದಿದೆ: ಸಿ.ಟಿ.ರವಿ

    ತುಕುಡೆ ಗ್ಯಾಂಗಿನ ನಾಯಕರ ಸಮಾಧಿ ಮೇಲೆ ಬಿಜೆಪಿ, ಸಂಘ ಬಲವಾಗಿ ಬೆಳೆದಿದೆ: ಸಿ.ಟಿ.ರವಿ

    ಚಿಕ್ಕಮಗಳೂರು: ತುಕುಡೆ ಗ್ಯಾಂಗಿನ ನಾಯಕರ ತಾತ, ಮುತ್ತಾತಂದಿರು ಈ ರೀತಿ ಹೇಳಿ ಮಣ್ಣಾಗಿದ್ದಾರೆ. ಅವರ ಮಣ್ಣಿನ ಮೇಲೆ ಬಿಜೆಪಿ ಹಾಗೂ ಸಂಘ ಬಲವಾಗಿ ಬೆಳೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಕನ್ಹಯ್ಯ ಕುಮಾರ್ ಬಿಜೆಪಿಯನ್ನು ತುಕ್ಡೆ-ತುಕ್ಡೆ ಮಾಡುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇವರ ತಾತ, ಮುತ್ತಾತರು ಇದೇ ಮಾತು ಹೇಳಿ ಕಳೆದು ಹೋಗಿದ್ದಾರೆ. ಆದರೂ ನಮ್ಮ ಸಂಘ, ಭಾರತೀಯ ಜನತಾ ಪಾರ್ಟಿ ಬಲವಾಗಿ ಬೆಳೆಯುತ್ತಲೇ ಬಂದಿದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    ಕನ್ಹಯ್ಯ ಕುಮಾರ್, ತುಕ್ಡೆ ಗ್ಯಾಂಗಿನ ಒಬ್ಬ ನಾಯಕ. ಹಿಟ್ಟು ಹಳಸಿತ್ತು, ಡ್ಯಾಷ್ ಕಾದಿತ್ತು ಎಂಬ ಗಾದೆ ಮಾತಿದೆ. ಇವತ್ತು ಕಾಂಗ್ರೆಸ್ ಪರಿಸ್ಥಿತಿ ಅದೇ ಆಗಿದೆ. ಕಾಂಗ್ರೆಸ್ ಒಂದರ ಹಿಂದೆ ಒಂದು ಚುನಾವಣೆಯಲ್ಲಿ ಸೋಲುತ್ತಿದೆ. ಆಂತರಿಕ ಪ್ರಜಾಪ್ರಭುತ್ವ ಇಲ್ಲದ ಪಕ್ಷ, ದೇಶಕ್ಕೆ ಏನು ಪ್ರಜಾಪ್ರಭುತ್ವದ ಪಾಠ ಮಾಡುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

    ಯಾವ ಪಕ್ಷ ಆಂತರಿಕ ಪ್ರಜಾಪ್ರಭುತ್ವ ಹೊಂದಿರುತ್ತೋ ಅವರಿಗೆ ಮಾತ್ರ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಇರುತ್ತೆ. ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಲ್ಲಿದೆ? ಅಲ್ಲಿರುವುದು ವಂಶ ಪಾರಂಪರ್ಯ ಪರಿವಾರ ವಾದ. ಒಮ್ಮೆ ಪರಿವಾರ ವಾದ ಬಂದರೆ ಅಲ್ಲಿ ಮಾಲೀಕತ್ವ ಬರುತ್ತೆ. ಇಲ್ಲಿ ಮಾಲೀಕರು ಮತ್ತು ನೌಕರರು ಇರುತ್ತಾರೆ. ಮಾಲೀಕರು ಮತ್ತು ಗುಲಾಮರು ಇರುತ್ತಾರೆ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಡುಗೆ ಎಣ್ಣೆ ಇನ್ನಷ್ಟು ದುಬಾರಿ

    ತುಕುಡೆ ಗ್ಯಾಂಗಿನ ನಾಯಕರಿಗೆ ಗತಿ ಇರಲಿಲ್ಲ. ಚುನಾವಣೆಯಲ್ಲಿ ಸೋತರು, ಮೊದಲು ಕಮ್ಯುನಿಸ್ಟ್ ಪಾರ್ಟಿ ಎಂದು ಇಟ್ಟುಕೊಂಡರು. ಅಲ್ಲಿ ವಿಫಲರಾದರು, ಚುನಾವಣೆಯಲ್ಲಿ ಸೋತರು. ಸೋತ ಮೇಲೆ ಕಾಂಗ್ರೆಸ್ ಗೆ ಹೋಗಿ ಸೇರಿದ್ದಾರೆ. ಇವರ ತಾತ, ಮುತ್ತಾತರು ಈ ರೀತಿ ಮಾತನಾಡಿ ಮಣ್ಣಾಗಿದ್ದಾರೆ. ಭಾರತೀಯ ಜನತಾ ಪಾರ್ಟಿ, ಆರ್.ಎಸ್.ಎಸ್. ಅವರ ಮಣ್ಣಿನ ಮೇಲೆ ಬಲವಾಗಿ ಬೆಳೆದಿದೆ ಎಂದರು.

    ಇದೇ ವೇಳೆ ಮತಾಂತರದ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದ ಅವರು, ಮತಾಂತರ ದೇಶಾಂತರಕ್ಕೆ ಸಮ. ಮತಾಂತರಿಯಾದವನು ತನ್ನ ಸಂಸ್ಕøತಿಯನ್ನು ಬದಲಿಸುತ್ತಾನೆ. ಮುಂದಿನ ದಿನಗಳಲ್ಲಿ ದೇಶಾಂತರದ ಬಗ್ಗೆ ಯೋಚನೆ ಮಾಡುತ್ತಾನೆ. ಎಲ್ಲಿ ಮತಾಂತರದ ಹಾವಳಿ ಜಾಸ್ತಿ ಆಗಿದೆಯೋ, ಅಲ್ಲಿ ನಾವು ಭಾರತೀಯರಲ್ಲ ಎಂಬ ಮನೋಭಾವನೆ ಬೆಳೆಯುತ್ತೆ ಅನ್ನೋದು ಗಾಂಧಿಜೀಯವರ ಮಾತು. ಗಾಂಧಿಜೀಯೇ ಹಾಗೇ ಹೇಳಿದ್ದರು ಅಂದರೆ ಅವರು ಅಪಾಯವನ್ನು ಗ್ರಹಿಸಿದ್ದರು ಎಂದರ್ಥ ಎಂದರು.

    ಮತಾಂತರ ಇಂದು ಹಲವು ರೀತಿಯಲ್ಲಿ ನಡೆಯುತ್ತಿದೆ. ಹಣ, ಆರೋಗ್ಯದ ದುರ್ಬಲತೆ, ಅಸಹಾಯಕತೆ ಹಾಗೂ ಹೆಣ್ಣನ್ನು ತೋರಿಸಿ ಮತಾಂತರ ನಡೆಯುತ್ತಿದೆ. ಈ ಬಗ್ಗೆ ಸಮಾಜ ಯೋಚನೆ ಮಾಡಬೇಕು. ಸರ್ಕಾರ ಏನು ನಿರ್ಣಯ ತೆಗೆದುಕೊಳ್ಳುತ್ತೋ ಕಾದು ನೋಡುತ್ತಿದ್ದೇವೆ. ಮತಾಂತರ ನಿಷೇಧಕ್ಕೆ ಕಠಿಣ ಕ್ರಮ ಕೈಗೊಂಡರೆ ನಮ್ಮ ಸ್ವಾತಗವಿದೆ ಎಂದರು

  • ನವಜೋತ್ ಸಿಂಗ್ ಸಿಧುನಂತೆ ಕನ್ಹಯ್ಯ ಕುಮಾರ್ ಕಾಂಗ್ರೆಸ್ಸನ್ನು ನಾಶ ಮಾಡುತ್ತಾರೆ: ಆರ್​​ಜೆಡಿ

    ನವಜೋತ್ ಸಿಂಗ್ ಸಿಧುನಂತೆ ಕನ್ಹಯ್ಯ ಕುಮಾರ್ ಕಾಂಗ್ರೆಸ್ಸನ್ನು ನಾಶ ಮಾಡುತ್ತಾರೆ: ಆರ್​​ಜೆಡಿ

    ಪಾಟ್ನಾ: ಕನ್ಹಯ್ಯ ಮತ್ತೊಬ್ಬ ಸಿಧು, ಕಾಂಗ್ರೆಸ್ಸನ್ನು ನಾಶ ಮಾಡುತ್ತಾರೆ ಎಂದು ಬಿಹಾರದ ಪ್ರಮುಖ ವಿರೋಧ ಪಕ್ಷವಾದ ಆರ್​​ಜೆಡಿ ( RJD) ಕನ್ಹಯ್ಯ ಕುಮಾರ್ ಕಾಂಗ್ರೆಸ್‍ಗೆ ಸೇರ್ಪಡೆ ಆಗಿದ್ದನ್ನು ಗೇಲಿ ಮಾಡಿದೆ.

    ಜೆಎನ್‍ಯುನ ಮಾಜಿ ವಿದ್ಯಾರ್ಥಿಯು ಇನ್ನೊಬ್ಬ ನವಜೋತ್ ಸಿಂಗ್ ಸಿಧುನಂತೆ ಇದ್ದಾರೆ. ಅವರು ಹಳೆಯ ಪಕ್ಷವನ್ನು ನಾಶಪಡಿಸುತ್ತಾರೆ. ಎಂದು ಆರ್​​ಜೆಡಿ ವಾಗ್ದಾಳಿ ಮಾಡಿದೆ. ಇದೇ ವೇಳೆ  ಕಾಂಗ್ರೆಸ್ ಮುಳುಗುವ ಹಡಗು ಎಂದಿದ್ದನ್ನು ವ್ಯಂಗ್ಯವಾಡಿದ ಹಿರಿಯ ಆರ್ ಜೆಡಿ ನಾಯಕ ಶಿವಾನಂದ್ ತಿವಾರಿ (Shivanand Tiwari), ಕನ್ಹಯ್ಯ ಕುಮಾರ್ ಅವರ ಸೇರ್ಪಡೆಯಿಂದ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದು ಹೇಳಿದರು. ಇದನ್ನೂ ಓದಿಕಾಂಗ್ರೆಸ್ ಇಲ್ಲದೆ ದೇಶ ಉಳಿಯಲು ಸಾಧ್ಯವಿಲ್ಲ: ಕನ್ನಯ್ಯ ಕುಮಾರ್

    ಕಾಂಗ್ರೆಸ್ ದೊಡ್ಡ ಹಡಗು ಅದನ್ನು ಉಳಿಸಬೇಕಾಗಿದೆ ಎಂದು ಕನ್ಹಯ್ಯ ಮಾತನ್ನು ಉಲ್ಲೇಖಿಸಿದ ತಿವಾರಿ, ಪಕ್ಷವನ್ನು ಮತ್ತಷ್ಟು ನಾಶ ಮಾಡುವ ಇನ್ನೊಬ್ಬ ನವಜೋತ್ ಸಿಂಗ್ ಸಿಧುವಿನಂತಿದ್ದಾರೆ ಎಂದು ಹೇಳಿದರು.

    ತೇಜಸ್ವಿ ಯಾದವ್ ನೇತೃತ್ವದ ಪಕ್ಷವನ್ನು ಸಂಪರ್ಕಿಸದೆ ಕುಮಾರ್ ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡಿದ್ದಕ್ಕೆ ಪಕ್ಷವು ಅತೃಪ್ತಿ ಹೊಂದಿದೆ ಎಂದು ಆರ್ ಜೆಡಿ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಆರ್ ಜೆಡಿ ನೇತೃತ್ವದ ವಿರೋಧ ಮೈತ್ರಿಕೂಟದ ಮಹಾಘಟಬಂಧನ್‍ನ ಒಂದು ಭಾಗವಾಗಿದ್ದು, ಅದು 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‍ಡಿಎ ವಿರುದ್ಧ ಹೋರಾಡಿದೆ. ಬಿಹಾರ ಕಾಂಗ್ರೆಸ್ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

  • ಸೆ.28 ರಂದು ಕಾಂಗ್ರೆಸ್ ಸೇರಲಿದ್ದಾರೆ ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್

    ಸೆ.28 ರಂದು ಕಾಂಗ್ರೆಸ್ ಸೇರಲಿದ್ದಾರೆ ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್

    ಅಹ್ಮದಾಬಾದ್: ಗುಜರಾತ್‍ನಲ್ಲಿ ಪಕ್ಷೇತರ ಶಾಸಕರಾಗಿರುವ ಜಿಗ್ನೇಶ್ ಮೇವಾನಿ ಹಾಗೂ ಕಮ್ಯೂನಿಸ್ಟ್ ಪಕ್ಷದ ನಾಯಕ ಕನ್ಹಯ್ಯ ಕುಮಾರ್ ಸೆಪ್ಟೆಂಬರ್ 28ರಂದು ಕಾಂಗ್ರೆಸ್ ಸೇರುತ್ತಿರುವ ಕುರಿತು ಘೋಷಿಸಿದ್ದಾರೆ.

    ಭಗತ್ ಸಿಂಗ್ ಜನ್ಮದಿನಾಚರಣೆಯಂದು ಕಾಂಗ್ರೆಸ್ ಸೇರಲು ಪ್ಲ್ಯಾನ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಿಗ್ನೇಶ್ ಮೇವಾನಿ ಗುಜರಾತ್‍ನ ವಡ್ಗಮ್ ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದಾರೆ. ಜಿಗ್ನೇಶ್ ಕಾಂಗ್ರೆಸ್ ಸೇರುತ್ತಿದ್ದಂತೆ ಗುಜರಾತ್‍ನ ಕಾರ್ಯಾಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್ ಯೋಜಿಸಿದೆ. ಇದನ್ನೂ ಓದಿ: ಭದ್ರತಾ ಮಂಡಳಿ ಜೊತೆ ಎನ್‍ಎಸ್‍ಜಿಯಲ್ಲೂ ಭಾರತ ಇರಬೇಕು: ಬೈಡನ್

    ಕನ್ಹಯ್ಯ ಕುಮಾರ್ ಈ ಹಿಂದೆ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷರಾಗಿದ್ದಾರೆ. ಕನ್ಹಯ್ಯ ಅವರ ಜೊತೆಗೆ ಇನ್ನಷ್ಟು ಎಡಪಂಥೀಯ ನಾಯಕರನ್ನು ಕಾಂಗ್ರೆಸ್‍ಗೆ ಸೇರಿಸುವ ನಿರೀಕ್ಷೆ ಇದೆ.

    ಮುಂದಿನ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಹೊಸ ಯುವ ನಾಯಕರ ಮುಖ ಪರಿಚಯಿಸುವ ಉದ್ದೇಶದಿಂದ ಕಾಂಗ್ರೆಸ್ ಈ ಪ್ರಯೋಗ ಮಾಡುತ್ತಿದೆ. ದೆಹಲಿಯಲ್ಲಿ ನಡೆಯಲಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಹಾರ್ದಿಕ್ ಪಟೇಲ್ ಸಹ ಭಾಗವಹಿಸುತ್ತಿದ್ದಾರೆ.