Tag: ಕನ್ವರ್

  • ವಾಹನಕ್ಕೆ ಹೈಟೆನ್ಷನ್ ತಂತಿ ತಗುಲಿ 5 ಕನ್ವರ್ ಯಾತ್ರಿಗಳು ಸಾವು

    ವಾಹನಕ್ಕೆ ಹೈಟೆನ್ಷನ್ ತಂತಿ ತಗುಲಿ 5 ಕನ್ವರ್ ಯಾತ್ರಿಗಳು ಸಾವು

    ಲಕ್ನೋ: ಕನ್ವರ್ ಯಾತ್ರಿಗಳನ್ನು (Kanwariya Pilgrims) ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಹೈಟೆನ್ಷನ್ ತಂತಿ ತಗುಲಿದ ಪರಿಣಾಮ 5 ಯಾತ್ರಾರ್ಥಿಗಳು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ (Uttar Pradesh) ಭಾವನ್‌ಪುರದಲ್ಲಿ ನಡೆದಿದೆ.

    ಯಾತ್ರಾರ್ಥಿಗಳು ಕನ್ವರ್ ಯಾತ್ರೆ ಮುಗಿಸಿ, ಪವಿತ್ರ ಜಲವನ್ನು ಸಂಗ್ರಹಿಸಿ ಹರಿದ್ವಾರಕ್ಕೆ ಹಿಂತಿರುಗುತ್ತಿದ್ದ ಸಂದರ್ಭ ದುರ್ಘಟನೆ ನಡೆದಿದೆ. ಅಪಘಾತದಿಂದ ಆಕ್ರೋಶಗೊಂಡ ಇತರ ಕನ್ವರ್ ಯಾತ್ರಿಗಳು ರಸ್ತೆ ತಡೆದು ಗಲಾಟೆ ನಡೆಸಿದ್ದಾರೆ. ವಿದ್ಯುತ್ ಇಲಾಖೆ ಅಧಿಕಾರಿಗಳ ನಿರ್‌ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

    ಕನ್ವರ್ ಯಾತ್ರಿಗಳು ಶನಿವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ತಮ್ಮ ಗ್ರಾಮಕ್ಕೆ ವಾಪಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಹೈಟೆನ್ಷನ್ ತಂತಿ ತಗುಲಿದ ಪರಿಣಾಮ ದುರ್ಘಟನೆ ನಡೆದಿದೆ. ಗಾಯಗೊಂಡ ಎಲ್ಲಾ ಯಾತ್ರಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವೇಳೆ ಐವರು ಸಾವನ್ನಪ್ಪಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ರೂಪಾಯಿ, ದಿರ್ಹಾಮ್‌ ವ್ಯವಹಾರಕ್ಕೆ ಭಾರತ, ಯುಎಇ ಒಪ್ಪಿಗೆ

    ಘಟನೆ ಬಳಿ ಗ್ರಾಮಸ್ಥರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯುವತಿ ವಿಚಾರಕ್ಕೆ ಯುವಕರ ಮಧ್ಯೆ ಕಿರಿಕ್- ಎಣ್ಣೆ ಏಟಲ್ಲಿ ಗೆಳೆಯನ ತಲೆ ಒಡೆದ್ರು!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂಬರೀಶ್ ನೆಚ್ಚಿನ ಶ್ವಾನ ‘ಬುಲ್ ಬುಲ್’ ಕೂಡ ನಿಧನ: ‘ಕನ್ವರ್’ ಹುಡುಕಿಕೊಂಡು ಹೊರಟ ಬುಲ್ ಬುಲ್

    ಅಂಬರೀಶ್ ನೆಚ್ಚಿನ ಶ್ವಾನ ‘ಬುಲ್ ಬುಲ್’ ಕೂಡ ನಿಧನ: ‘ಕನ್ವರ್’ ಹುಡುಕಿಕೊಂಡು ಹೊರಟ ಬುಲ್ ಬುಲ್

    ರೆಬಲ್ ಸ್ಟಾರ್ ಅಂಬರೀಶ್ (Ambarish) ಅವರಿಗೆ ಶ್ವಾನಗಳನ್ನು ಕಂಡರೆ ಬಲು ಪ್ರೀತಿ. ಹಾಗಾಗಿ ದೇಶ ವಿದೇಶಗಳಿಂದ ನಾಯಿಗಳನ್ನು (Dog) ತಂದು ಸಾಕುತ್ತಿದ್ದಾರೆ. ಅದರಲ್ಲೂ ಅವರಿಗೆ ಕನ್ವರ್ (Kanwar) ಮತ್ತು ಬುಲ್ ಬುಲ್ ಅಂದರೆ ಹೆಚ್ಚು ಪ್ರಾಣ. ತಾವು ಸಾಕಿದ ಎರಡು ನಾಯಿಗಳಿಗೆ ಅವರು ಕನ್ವರ್ ಮತ್ತು ಬುಲ್ ಬುಲ್ ಎಂದು ಹೆಸರಿಟ್ಟಿದ್ದರು. ಯಾವಾಗಲೂ ಈ ಎರಡೂ ಶ್ವಾನಗಳು ಅಂಬಿ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು. ಇದನ್ನೂ ಓದಿ:ಸಾನ್ಯ ಶೆಟ್ಟಿ ಎಂದು ಕರೆದರೆ ನನಗಿಷ್ಟ: ಸಾನ್ಯ ಅಯ್ಯರ್

    ಅಂಬರೀಶ್ ನಿಧನರಾದಾಗ ಕನ್ವರ್ ಹೆಸರಿನ ಶ್ವಾನ ಊಟವನ್ನೇ ಬಿಟ್ಟಿತ್ತು. ತನ್ನ ಸಾಕಿದಾತ ಇನ್ನಿಲ್ಲ ಎನ್ನುವುದನ್ನು ಅದರಿಂದ ಅರಗಿಸಿಕೊಳ್ಳಲು ಆಗಲಿಲ್ಲ. ಅಂಬರೀಶ್ ನಿಧನದ ದಿನ ಕನ್ವರ್ ಕೂಡ ಕಣ್ಣೀರಿಟ್ಟಿತ್ತು. ಊಟ ಬಿಟ್ಟು ಮಂಕಾಗಿತ್ತು. ಹಾಗಾಗಿ ಅದು ತುಂಬಾ ದಿನ ಬದುಕುಳಿಯಲಿಲ್ಲ. ಊಟ ಬಿಟ್ಟು, ಸರಿಯಾಗಿ ನಿದ್ದೆ ಕೂಡ ಮಾಡದೇ ಬಳಲಿ 24 ಮೇ 2021ರಲ್ಲಿ ಅಂಬಿ ಹುಡುಕಿಕೊಂಡು ಹೊರಟೇ ಬಿಟ್ಟಿತ್ತು. ಹಾಗಾಗಿ ಅಂಬಿ ಮನೆಯಲ್ಲಿ ಬುಲ್ ಬುಲ್ (Bull Bull) ಒಂಟಿಯಾಗಿತ್ತು.

    ಇದೀಗ ಬುಲ್ ಬುಲ್ ಕೂಡ ನಿಧನ ಹೊಂದಿದೆ. ಹೀಗಾಗಿ ಅಂಬರೀಶ್ ಅವರ ನೆಚ್ಚಿನ ಎರಡೂ ಶ್ವಾನಗಳು ತನ್ನ ಮಾಲೀಕನನ್ನು ಹುಡುಕಿಕೊಂಡು ಹೋಗಿದಂತಾಗಿದೆ. ನಿನ್ನೆ ಬುಲ್ ಬುಲ್ ನಿಧನ (Death) ಹೊಂದಿದ್ದು, ತಮ್ಮ ತೋಟದಲ್ಲಿ ಅವುಗಳ ಅಂತ್ಯ ಸಂಸ್ಕಾರ ಮಾಡಲು ಸುಮಲತಾ ಅಂಬರೀಶ್ (Sumalta Ambarish) ಮತ್ತು ಅಭಿಷೇಕ್ ಅಂಬರೀಶ್ (Abhishek) ನಿರ್ಧರಿಸಿದ್ದಾರೆ. ಅಲ್ಲದೇ, ಎರಡೂ ಶ್ವಾನಗಳನ್ನು ಕಳೆದುಕೊಂಡಿರುವ ಅಂಬಿ ಮನೆಯಲ್ಲಿ ನೀರವ ಮೌನ ಆವರಿಸಿದೆ.

    Live Tv
    [brid partner=56869869 player=32851 video=960834 autoplay=true]