Tag: ಕನ್ನಡ ಧ್ವಜ

  • ಪ್ರತಿಷ್ಠಿತ ಟ್ರಾವೆಲ್ಸ್ ಕಂಪನಿಯಿಂದ ಕನ್ನಡ ಧ್ವಜಕ್ಕೆ ಅವಮಾನ

    ಪ್ರತಿಷ್ಠಿತ ಟ್ರಾವೆಲ್ಸ್ ಕಂಪನಿಯಿಂದ ಕನ್ನಡ ಧ್ವಜಕ್ಕೆ ಅವಮಾನ

    ಬೆಂಗಳೂರು: ರಾಜ್ಯದಲ್ಲಿ ಪ್ರತಿಷ್ಠಿತ ಟ್ರಾವೆಲ್ಸ್ ಕಂಪನಿಯಾದ ‘ಜಬ್ಬಾರ್ ಟ್ರಾವೆಲ್ಸ್’ ತನ್ನ ಬಸ್ಸಿನಲ್ಲಿ ಸ್ಲೀಪರ್ ಕೋಚ್‍ಗಳ ಬೆಡ್‍ಶೀಟ್‍ಗೆ ಕನ್ನಡ ಧ್ವಜಕ್ಕೆ ಹೋಲಿಕೆ ಆಗುವ ಹೊದಿಕೆಯನ್ನು ಹಾಕಿದ್ದು, ಈ ಮೂಲಕ ಕನ್ನಡ ಧ್ವಜಕ್ಕೆ ಅವಮಾನ ಮಾಡಿದೆ.

    ಜಬ್ಬಾರ್ ಟ್ರಾವೆಲ್ಸ್ ನ ಎಲ್ಲಾ ಸ್ಲೀಪರ್ ಕೋಚ್ ಬಸ್‍ಗಳ ಬೆಡ್‍ಶೀಟ್ ಗಳಿಗೆ ಇದೇ ಮಾದರಿಯ ಹೊದಿಕೆ ಬಳಕೆ ಮಾಡಲಾಗಿದ್ದು, ಇದರಲ್ಲಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ ಕೆಲ ಸಾರ್ವಜನಿಕರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ ಟ್ರಾವೆಲ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರಾವೆಲ್ಸ್ ವರ್ತನೆಗೆ ಕನ್ನಡ ಪರ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಕ್ರಮಕೈಗೊಳ್ಳಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಲು ತಿಳಿಸುವುದಾಗಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕನ್ನಡ ಪರ ಹೋರಾಟಗಾರರು, ಟ್ರಾವೆಲ್ಸ್ ಸಂಸ್ಥೆ ಉದ್ದೇಶ ಪೂರ್ವಕವಾಗಿಯೇ ಈ ರೀತಿ ಮಾಡಿದೆಯಾ ಎಂಬುದು ತಿಳಿಯಬೇಕಿದೆ. ಈ ಕುರಿತು ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ. ಕನ್ನಡಿಗರ ಭಾವನೆಗೆ ನೋವಾಗುವಂತೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಬಸ್ಸಿನಲ್ಲಿ ಈ ರೀತಿ ಮಾಡಿರುವ ಕುರಿತು ಪ್ರಯಾಣಿಕರೆ ಮಾಹಿತಿ ನೀಡಿದ್ದು, ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಬೆಡ್ ಮೇಲೆಯೇ ಮಲಗಿ, ತುಳಿದು ಪ್ರಯಾಣಿಸಬೇಕಿದೆ. ಅದ್ದರಿಂದ ಟ್ರಾವೆಲ್ಸ್ ಎಚ್ಚೆತ್ತು ಈ ತಪ್ಪನ್ನು ಬಹುಬೇಗ ತಿದ್ದಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ‘ಜಬ್ಬಾರ್ ಟ್ರಾವೆಲ್ಸ್’ ಸಂಸ್ಥೆ ಬಹುದಿನಗಳಿಂದ ಕರ್ನಾಟಕದಲ್ಲಿ ತನ್ನ ಸೇವೆಯನ್ನು ನೀಡುತ್ತಿದೆ. ಆದರೆ ಈ ಹಿಂದೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ವಾಹನದ ಮೇಲೂ ಕನ್ನಡ ಬಾವುಟ ಮಾದರಿಯ ವಿನ್ಯಾಸ ಮಾಡಿದ್ದು ಉತ್ತಮವಾಗಿ ಕಾಣುತ್ತಿದೆ. ಆದರೆ ಬಸ್ಸಿನ ಒಳಭಾಗದಲ್ಲಿ ಈ ರೀತಿ ವಿನ್ಯಾಸ ಮಾಡಿದೆ. ಈ ಕುರಿತು ಸಂಸ್ಥೆಯ ಮಾಲೀಕರು ಇದುವರೆಗೂ ಯಾವುದೇ ಪ್ರತಿಕ್ರಿಯೆನ್ನು ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಣ್ಣಿನ ಮನೋಬಲ ದೃಢವಾಗಿದ್ದು, ಸಾಮಾಜಿಕ ಮತ್ತು ಆರ್ಥಿಕವಾಗಿ ಈಗ ಬದಲಾಗಿದ್ದಾಳೆ: ಗೀತಾ ಮಹಾದೇವ ಪ್ರಸಾದ್

    ಹೆಣ್ಣಿನ ಮನೋಬಲ ದೃಢವಾಗಿದ್ದು, ಸಾಮಾಜಿಕ ಮತ್ತು ಆರ್ಥಿಕವಾಗಿ ಈಗ ಬದಲಾಗಿದ್ದಾಳೆ: ಗೀತಾ ಮಹಾದೇವ ಪ್ರಸಾದ್

    ಬೆಂಗಳೂರು: ಹೆಣ್ಣಿನ ಮನೋಬಲ ದೃಢವಾಗಿದ್ದು, ಸಾಮಾಜಿಕ ಮತ್ತು ಆರ್ಥಿಕವಾಗಿ ಈಗ ಬದಲಾಗಿದ್ದಾಳೆ ಎಂದು ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆಯ ಸಚಿವೆ ಗೀತಾ ಮಹಾದೇವ ಪ್ರಸಾದ್ ತಿಳಿಸಿದ್ದಾರೆ.

    ಮೈಸೂರು ರಸ್ತೆಯ ರಾಜರಾಜೇಶ್ವರಿ ಗ್ರೂಪ್ ಆಫ್ ಇನ್ಸ್ ಟ್ಯೂಷನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಹಿಂದೆ ಹೆಣ್ಣಿನ ಸಾಧನೆ ಅಡ್ಡಿಯಾಗುತಿತ್ತು. ಆದರೆ ಈಗ ತನ್ನ ಎಲ್ಲ ಸಂಕೋಲೆಗಳಿಂದ ಬಿಡಿಸಿಕೊಂಡು ಸಾಧನೆ ಮಾಡಿದ್ದಾಳೆ ಎಂದು ಹೇಳಿದರು.

    ಪೈಲೆಟ್, ಟ್ರೈನ್ ಡ್ರೈವರ್, ಬಾಹ್ಯಾಕಾಶದಲ್ಲಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಹೆಣ್ಣು ತನ್ನ ಛಾಪನ್ನು ಮೂಡಿಸಿದ್ದಾಳೆ. ಹೆಣ್ಣಿನಿಂದಾಗಿ ಈ ಕುಟುಂಬಗಳು ಬದಲಾಗುತ್ತಿದ್ದು, ಈ ಮೂಲಕ ದೇಶದ ಅಭಿವೃದ್ಧಿಗೆ ನೆರವಾಗುತ್ತಿದ್ದಾಳೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕೆಂಪು ಮತ್ತು ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ನಿಂತುಕೊಳ್ಳುವ ಮೂಲಕ ಕರ್ನಾಟಕ ಧ್ವಜವನ್ನು ನಿರ್ಮಿಸಿದ್ದರು.

  • ಪ್ರತ್ಯೇಕ ಕನ್ನಡ ಧ್ವಜಕ್ಕೆ ಅಂಗೀಕಾರ – ಶೀಘ್ರವೇ ಒಪ್ಪಿಗೆಗಾಗಿ ಕೇಂದ್ರ ಸರ್ಕಾರಕ್ಕೆ

    ಪ್ರತ್ಯೇಕ ಕನ್ನಡ ಧ್ವಜಕ್ಕೆ ಅಂಗೀಕಾರ – ಶೀಘ್ರವೇ ಒಪ್ಪಿಗೆಗಾಗಿ ಕೇಂದ್ರ ಸರ್ಕಾರಕ್ಕೆ

    ಬೆಂಗಳೂರು: ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕು ಅನ್ನೋ ಕೂಗಿಗೆ ಕೊನೆಗೂ ಜಯ ಸಿಕ್ಕಿದೆ. ಸರ್ಕಾರ ಕರ್ನಾಟಕಕ್ಕೆ ನೂತನ ನಾಡಧ್ವಜವನ್ನ ಅಂಗೀಕಾರ ಮಾಡಿದೆ.

    ಗೃಹ ಕಚೇರಿ ಕೃಷ್ಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ನಾಡಧ್ವಜ ಸಮಿತಿ ನೀಡಿದ್ದ ನಾಡಧ್ವಜವನ್ನೆ ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ನೂತನ ನಾಡಧ್ವಜವನ್ನ ಅನಾವರಣಗೊಳಿಸಿದ್ರು. ಹಳದಿ, ಬಿಳಿ ಮಧ್ಯೆ ಕರ್ನಾಟಕ ಸರ್ಕಾರದ ಲಾಂಛನ ಕೆಂಪು ಬಣ್ಣದ ತ್ರಿವರ್ಣ ನಾಡಧ್ವಜವನ್ನ ಸಿಎಂ ಪ್ರದರ್ಶನ ಮಾಡಿದ್ರು.

    ಹಳದಿ ಸಮೃದ್ಧಿಯ ಸಂಕೇತ, ಬಿಳಿ ಶಾಂತಿಯ ಸಂಕೇತ, ಕೆಂಪು ಸ್ವಾಭಿಮಾನ ಹಾಗೂ ಧೈರ್ಯದ ಸಂಕೇತವಾಗಿದೆ. ನಾಡಧ್ವಜ ರಚಿಸಲು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು. ಸಮಿತಿ ರಾಜ್ಯದ ಇತಿಹಾಸ, ಕಾನೂನಿನ ಇತಿಮಿತಿಗಳನ್ನ ಅಧ್ಯಯನ ಮಾಡಿ 3 ಬಣ್ಣಗಳ ಧ್ವಜ ನೀಡಿತ್ತು. ಸರ್ಕಾರ ಇದನ್ನ ಒಪ್ಪಿಕೊಂಡು, ನಾಡಧ್ವಜವಾಗಿ ಅಂಗೀಕಾರ ಮಾಡಿದೆ. ಶೀಘ್ರವೇ ನಾಡಧ್ವಜ ಅಂಗೀಕಾರ ಮಾಡುವಂತೆ ಕೇಂದ್ರಕ್ಕೆ ಕಳಿಸಲಾಗುತ್ತೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ರು.

    ಸಭೆಯಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಪ್ರವೀಣ್ ಶೆಟ್ಟಿ, ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು, ಚಂದ್ರಶೇಖರ ಕಂಬಾರ, ಚಂಪಾ ಸೇರಿದಂತೆ ಹಲವು ಸಾಹಿತಿಗಳು ಭಾಗವಹಿಸಿ ನಾಡಧ್ವಜಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ರು.

  • ಹೊಸ ನಾಡ ಧ್ವಜ ವಿನ್ಯಾಸಕ್ಕೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ

    ಹೊಸ ನಾಡ ಧ್ವಜ ವಿನ್ಯಾಸಕ್ಕೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ

    ಬೆಂಗಳೂರು: ರಾಜ್ಯ ಸರ್ಕಾರದಿಂದ ಹೊಸ ನಾಡ ಧ್ವಜ ವಿನ್ಯಾಸಕ್ಕೆ ಸಿದ್ಧತೆ ನಡೆದಿದ್ದು, ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಸರ್ಕಾರಕ್ಕೆ ಧ್ವಜ ಬದಲಾವಣೆ ಕೆಲಸ ಬೇಕಾಗಿಲ್ಲ. ಹಳೆ ಧ್ವಜಕ್ಕೆ ಮತ್ತೆ ಬಿಳಿ ಬಟ್ಟೆ ಹಾಕಿಸಿ ಗಂಡಭೇರುಂಡ ಚಿಹ್ನೆ ಹಾಕಿದ್ದಾರೆ. ಇದ್ರಿಂದ ಏನು ಪ್ರಯೋಜನ? ಸಮಿತಿಯವರಿಗೆ ತಲೆ ಇಲ್ವಾ ಎಂದು ಪ್ರಶ್ನಿಸಿದ್ರು.

    ಸಮಿತಿಯಲ್ಲಿರುವವರಿಗೆ ಎಲ್ಲರಿಗೂ ಸ್ವಪ್ರತಿಷ್ಟೆ. ಸಾಹಿತ್ಯ ಪರಿಷತ್‍ನವರಿಗೆ ಏನೂ ಗೊತ್ತಿಲ್ಲ. ನಾಡಿನ ಜನರ ಮನಸಿನಲ್ಲಿರುವ ಬಾವುಟ ಹಳದಿ ಕೆಂಪು. ನಿಮ್ಮ ಹೊಸ ವಿನ್ಯಾಸ ನಾವು ಒಪ್ಪಿಕೊಳ್ಳಲ್ಲ ಎಂದರು. ಕಮಿಟಿಯಲ್ಲಿ ನಮ್ಮನ್ನು ಹಾಕಬೇಕಾಗಿತ್ತು. ಆದ್ರೆ ನಮ್ಮನ್ನು ಕಮಿಟಿಯಿಂದ ದೂರ ಇಟ್ಟಿದ್ದಾರೆ. ಸರ್ಕಾರ ಹೊಸ ಧ್ವಜ ತಂದ್ರೂ ನಾವು ಬಿಡಲ್ಲ. ಈ ಧ್ವಜ ತಂದ್ರೆ ಕನ್ನಡಿಗರು ದಂಗೆ ಏಳ್ತಾರೆ. ಸಮಿತಿಯವರಿಗೆ ಒಬ್ಬರಿಗೂ ಬುದ್ಧಿಯಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಿಗೆ ಕನ್ನಡ ಧ್ವಜದ ಇತಿಹಾಸ ಗೊತ್ತಿಲ್ಲ ಅಂತ ವಾಗ್ದಾಳಿ ನಡೆಸಿದ್ರು.

  • ಈ ಹೊತ್ತಲ್ಲಿ ಕನ್ನಡ ಧ್ವಜ ವಿವಾದ ಬೇಕಿರಲಿಲ್ಲ- ಸಿಎಂ ನಿರ್ಧಾರಕ್ಕೆ ಉಸ್ತುವಾರಿ ವೇಣುಗೋಪಾಲ್ ಆಕ್ಷೇಪ

    ಈ ಹೊತ್ತಲ್ಲಿ ಕನ್ನಡ ಧ್ವಜ ವಿವಾದ ಬೇಕಿರಲಿಲ್ಲ- ಸಿಎಂ ನಿರ್ಧಾರಕ್ಕೆ ಉಸ್ತುವಾರಿ ವೇಣುಗೋಪಾಲ್ ಆಕ್ಷೇಪ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಭೇಟಿ ಮಾಡಿ ಪ್ರತ್ಯೇಕ ಕನ್ನಡ ಧ್ವಜ ವಿಚಾರದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ಅವರು, ಕನ್ನಡಕ್ಕೆ ಪ್ರತ್ಯೇಕ ಧ್ವಜ ವಿಚಾರವಾಗಿ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಚುನಾವಣಾ ಸಂದರ್ಭದಲ್ಲಿ ಇದು ಅಗತ್ಯ ಇರಲಿಲ್ಲ ಎಂಬ ಹೈಕಮಾಂಡ್ ಅಭಿಪ್ರಾಯವನ್ನ ಸಿಎಂಗೆ ತಿಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಈ ಕುರಿತು ಪಕ್ಷದ ವೇದಿಕೆಯಲ್ಲಿ ನಿರ್ಣಯ ತೆಗೆದುಕೊಳ್ಳೊಣ ಅಂತ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹೇಳಿದ್ದಾರೆ. ಚರ್ಚೆಯ ವೇಳೆ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಭಾಗಿಯಾಗಿದ್ದರು.

    ಸಿದ್ದರಾಮಯ್ಯ ಸರ್ಕಾರದ ಈ ನಿರ್ಧಾರ ಪ್ರಕಟವಾದ ಬಳಿಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ವಿಶೇಷವಾಗಿ ಕಾಂಗ್ರೆಸ್ ಹಿರಿಯ ನಾಯಕ ಪ್ರದೀಪ್ ಭಟ್ಟಾಚಾರ್ಯ ಅವರು ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

    ಭಾರೀ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ರೂಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ 9 ಜನರ ಕಮಿಟಿಯನ್ನ ರಚಿಸಿ ಆದೇಶ ಹೊರಡಿಸಿತ್ತು. ನಾಡ ಧ್ವಜ ರೂಪಿಸುವ ಕಮಿಟಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುತ್ತಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಗೃಹ ಇಲಾಖೆ,ಕಾನೂನು ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ. ಇದರ ಜೊತೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು- ಹಾಗೂ ಹಂಪಿ ಕನ್ನಡ ವಿವಿ ಕುಲಸಚಿವರು ಸದಸ್ಯರಾಗಿರುತ್ತಾರೆ. ಉಳಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿತ್ತು.

    ಇದನ್ನೂ ಓದಿ: ಪ್ರತ್ಯೇಕ ಧ್ವಜದ ಬಗ್ಗೆ ಕಾನೂನು ಪಂಡಿತರು ಏನ್ ಹೇಳ್ತಾರೆ, ಡಿವಿಎಸ್ ಹೊರಡಿಸಿದ್ದ ಸುತ್ತೋಲೆ ಏನಾಯ್ತು?

    ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ನಟ ಜಗ್ಗೇಶ್ ವಾಗ್ದಾಳಿ

  • ಯಾರನ್ನು ಕೇಳಿ ಧ್ವಜ ವಿನ್ಯಾಸಕ್ಕೆ ಮುಂದಾಗಿದ್ದೀರಿ: ರಾಜ್ಯ ಸರ್ಕಾರದ ವಿರುದ್ಧ ವಾಟಾಳ್ ಗರಂ

    ಯಾರನ್ನು ಕೇಳಿ ಧ್ವಜ ವಿನ್ಯಾಸಕ್ಕೆ ಮುಂದಾಗಿದ್ದೀರಿ: ರಾಜ್ಯ ಸರ್ಕಾರದ ವಿರುದ್ಧ ವಾಟಾಳ್ ಗರಂ

    ಬೆಂಗಳೂರು: ಒಂದು ಭಾವುಟ ಇರುವಾಗ, ಪಾಟೀಲ್ ಪುಟ್ಟಪ್ಪ ಹೇಳಿದ್ದಾರೆ ಎನ್ನುವ ಕಾರಣಕ್ಕೆ ಧ್ವಜ ವಿನ್ಯಾಸಕ್ಕೆ ಯಾರನ್ನು ಕೇಳಿ ಮುಂದಾಗಿದ್ದೀರಿ ಎಂದು ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಸುದ್ದಿಗೋಷ್ಠಿಯನ್ನು ಆಯೋಜಿಸಿ ಮಾತನಾಡಿದ ಅವರು, ನಾನು ರಾಮಮೂರ್ತಿ ಸೇರಿ ಬಾವುಟ ಮೊದಲು ಹಾರಿಸಿದ್ದೇವೆ. ಹಳದಿ, ಕೆಂಪು ಬಣ್ಣದ ಧ್ವಜಕ್ಕೆ ನಾನು ಮತ್ತು ರಾಮಮೂರ್ತಿ ಕಾರಣ. ನಾನು ಹೋರಾಟಗಾರನಾಗಿದ್ದು, ನನ್ನ ಒಂದು ಮಾತನ್ನು ಕೇಳಿಲ್ಲ ಎಂದು ಪ್ರಶ್ನಿಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮೊದಲು ಯಾವ ಬಾವುಟ ವಿನ್ಯಾಸ ಮಾಡೋದಕ್ಕೆ ಹೊರಟಿದ್ದೀರಿ?. ಅದು ಯಾವ ಬಣ್ಣ, ಸಮಿತಿಯ ಅಜೆಂಡಾ ಏನು ಎನ್ನುವುದನ್ನು ಮೊದಲು ಬಹಿರಂಗಪಡಿಸಿ. ಸಾಹಿತಿಗಳು ಯಾರೂ ಬೇಕಾಗಿಲ್ಲ. ಈ ಇತಿಹಾಸ ಯಾವ ಸಾಹಿತಿಗಳಿಗೂ ಗೊತ್ತಿಲ್ಲ, ಯಾವ ಕಾರಣಕ್ಕೂ ಬಾವುಟದ ಒಂದು ಗೆರೆಯನ್ನು ಬದಲಾಯಿಸಲು ಬಿಡಲ್ಲ. ಮೊದಲು ನೇಮಿಸಿದ ಸಮಿತಿಯನ್ನು ರದ್ದು ಮಾಡಿ ಎಂದು ಅವರು ಹೇಳಿದರು.

    ರಾಷ್ಟ್ರ ಧ್ವಜಕ್ಕೆ ವಿರೋಧವಿಲ್ಲ. ಆದರೆ ಇದು ಕನ್ನಡಿಗರ ಧ್ವಜ, ಜುಲೈ 29 ರಂದು ಕನ್ನಡ ಭಾವುಟ ಸಮ್ಮೇಳನ ಹಾಗೂ ರಾಜ್ಯಾದ್ಯಂತ ಕನ್ನಡ ಧ್ವಜದ ಬೃಹತ್ ಮರವಣಿಗೆ ಮಾಡಲಿದ್ದೇವೆ. ಬಾವುಟದ ವಿಚಾರದಲ್ಲಿ ಕನ್ನಡಿಗರನ್ನು ತಡೆಯಬೇಡಿ ಎಂದು ಅವರು ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷದವರಲ್ಲಿ ಕೇಳಿಕೊಂಡರು.

    ಬಿಜೆಪಿಯವರಿಗೆ ಧ್ವಜದ ಬಗ್ಗೆ ಮಾತಾನಾಡಲು ಯಾವುದೇ ನೈತಿಕತೆ ಇಲ್ಲ. ಬಿಜೆಪಿಯವರಿಗೆ ತಾಕತ್ತು ಇದ್ದರೆ ಮಹದಾಯಿ ವಿಚಾರ ನೋಡಿಕೊಳ್ಳಲಿ. ಧ್ವಜದ ವಿಚಾರ ಮಾತನಾಡುವುದು ಬೇಡ ಎಂದು ವಾಟಾಳ್ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ಪ್ರತ್ಯೇಕ ನಾಡ ಧ್ವಜ ಚರ್ಚೆ: ಕಾಂಗ್ರೆಸ್, ಬಿಜೆಪಿ ಹೇಳಿದ್ದೇನು? ಡಿವಿಎಸ್ ಹೊರಡಿಸಿದ ಸುತ್ತೋಲೆ ಏನಾಯ್ತು?

  • ರಾಜ್ಯ ಸರ್ಕಾರದ ವಿರುದ್ಧ ನಟ ಜಗ್ಗೇಶ್ ವಾಗ್ದಾಳಿ

    ರಾಜ್ಯ ಸರ್ಕಾರದ ವಿರುದ್ಧ ನಟ ಜಗ್ಗೇಶ್ ವಾಗ್ದಾಳಿ

    ಬೆಂಗಳೂರು: ಬಾವುಟದ ವಿಷಯ ಎಳೆದು ತಂದು ಕನ್ನಡಿಗರಿಗೆ ಕೇಂದ್ರದ ಮೇಲೆ ಕೋಪತರಿಸಲು ರಾಜ್ಯಸರ್ಕಾರ ಮುಂದಾಗುತ್ತಿದೆ ಎಂದು ನಟ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ.

    ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ರೂಪಿಸಲು ರಾಜ್ಯ ಸರ್ಕಾರ ಮುಂದಾಗುತ್ತಿರುವುದನ್ನು ವಿರೋಧಿಸಿ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಟ್ವೀಟ್ ಮಾಡಿರೋ ನವರಸ ನಾಯಕ, ಇದು ಚುನಾವಣೆ ಹತ್ತಿರವಿರಬೇಕಾದರೆ ನಡೆಯುವ ವ್ಯೂಹ. ತಮ್ಮ ಸರ್ಕಾರದ ಹುಳುಕು ಮುಚ್ಚಲು ಹಾಗೂ ಜನರ ಗಮನ ಬೇರೆಡೆ ಸೆಳೆಯಲು ಬಾವುಟದ ಭಾವನೆಯನ್ನು ಬಳಸುತ್ತಿದ್ದಾರೆ. ಇದು ಚಾಣಕ್ಯ ತಂತ್ರದ ರಾಜಕೀಯ ದಾಳ ಅಂತ ಕಿಡಿಕಾರಿದ್ದಾರೆ.