Tag: ಕನ್ನಡದ ಕೋಟ್ಯಧಿಪತಿ

  • ಕನ್ನಡದ ಕೋಟ್ಯಧಿಪತಿಯಲ್ಲಿ ಗೆದ್ದು, ಶಾಲೆಯ ಕಾಂಪೌಂಡ್ ಕಟ್ಟಿಸಲು ಮುಂದಾದ ಬಾಲಕ

    ಕನ್ನಡದ ಕೋಟ್ಯಧಿಪತಿಯಲ್ಲಿ ಗೆದ್ದು, ಶಾಲೆಯ ಕಾಂಪೌಂಡ್ ಕಟ್ಟಿಸಲು ಮುಂದಾದ ಬಾಲಕ

    ಹಾಸನ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಗೆದ್ದ ಹಣದಲ್ಲಿ ಶಾಲೆ ಕಾಂಪೌಂಡ್ ಕಟ್ಟಿಸಲು ಮುಂದಾಗಿ ಹಾಸನದ ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಲ್ಲರ ಮನ ಗೆದ್ದಿದ್ದಾನೆ.

    ಮೈಸೂರು ಜಿಲ್ಲೆಯ ಕೆಡಗ ಗ್ರಾಮದ ಬಾಲಕ ತೇಜಸ್ ಪ್ರಸ್ತುತ ಹಾಸನದ ಕಟ್ಟಾಯ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಕಟ್ಟಾಯದ ಪ್ರೌಢ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯಾಗಿರುವ ತೇಜಸ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ 6,40,000 ರೂ. ಗೆದ್ದಿದ್ದನು. ಈ ಮೂಲಕ ಶಾಲೆ ಹಾಗೂ ಕೆಡಗ ಗ್ರಾಮದ ಘನತೆ ಹೆಚ್ಚಿಸಿದ ತೇಜಸ್‌ಗೆ ಅಭಿನಂದನೆ ಮಹಾಪೂರ ಹರಿದುಬಂದಿತ್ತು. ಆದರೆ ಈಗ ತೇಜಸ್ ತಾನು ಓದುತ್ತಿರುವ ಶಾಲೆಗೆ ಕಾಂಪೌಂಡ್ ಕಟ್ಟಿಸಲು ತನ್ನ ಬಹುಮಾನದ ಹಣದಲ್ಲಿ ಪಾಲುನೀಡಲು ಮುಂದಾಗಿ ಮಾದರಿಯಾಗಿದ್ದಾನೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತೇಜಸ್, ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದು ಖುಷಿಯಾಗಿದೆ. ಅಲ್ಲಿ ಹಣ ಗೆದ್ದಿದ್ದಕ್ಕಿಂತ, ಹಾಟ್ ಸೀಟ್‌ನಲ್ಲಿ ಕೂತು ಆಟವಾಡಿದ್ದು ಹೆಚ್ಚು ಖುಷಿಯಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಜೊತೆ ಕೂತಿದ್ದು ನನಗೆ ಹೆಮ್ಮೆಯಾಗುತ್ತಿದೆ ಎಂದು ತನ್ನ ಖುಷಿಯನ್ನು ಹಂಚಿಕೊಂಡಿದ್ದಾನೆ.

    ನಮ್ಮ ಶಾಲೆಯಲ್ಲಿನ ಎಲ್ಲಾ ಶಿಕ್ಷಕರು ನನಗೆ ಬಹಳ ಪ್ರೋತ್ಸಾಹ ನೀಡಿದ್ದಾರೆ. ನಮ್ಮ ಶಾಲೆಗೆ ಖಾಸಗಿ ವಾಹಿನಿ ಬಂದು ಪರೀಕ್ಷೆ ಮಾಡಿ ಸ್ಪರ್ಧಿಗಳನ್ನು ಕನ್ನಡದ ಕೋಟ್ಯಧಿಪತಿಗೆ ಆಯ್ಕೆ ಮಾಡುತ್ತೇವೆ ಎಂದಿದ್ದರು. ಆಗ ಶಾಲೆಯಲ್ಲಿ ಪರೀಕ್ಷೆ ಮಾಡಿ, ನಮ್ಮ ಮುಖ್ಯೋಪಾಧ್ಯಾಯರು ಶೇಖರ್ ಸಾರ್ ನನ್ನನ್ನು ಆರಿಸಿ ಬೆಂಗಳೂರಿಗೆ ಆಡಿಷನ್‌ಗೆ ಕಳುಹಿಸಿದ್ದರು.

    ನಾನು ಬಸವನಗುಡಿಗೆ ಹೋಗಿ ಆಡಿಷನ್‌ನಲ್ಲಿ ಭಾಗವಹಿಸಿದೆ. ಅಲ್ಲಿ ಮೊದಲು ನಮಗೆ ಪರೀಕ್ಷೆ ಕೊಟ್ಟರು. ಬಳಿಕ 20 ನಿಮಿಷ ಮಾತನಾಡಲು ಹೇಳಿದರು. ನಂತರ 150 ಮಂದಿಯಲ್ಲಿ 6 ಜನರನ್ನು ಆಯ್ಕೆ ಮಾಡಿದರು. ಅವರಲ್ಲಿ ನಾನು ಒಬ್ಬನಾಗಿದ್ದೆ. ಅಲ್ಲಿಂದ ನಾಗರಬಾವಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋದೆ. ಆ ರೀತಿ ಕಾರ್ಯಕ್ರಮವನ್ನು ನಾನು ಎಂದೂ ನೋಡಿರಲಿಲ್ಲ. ಅಲ್ಲಿ ವೇದಿಕೆ, ಶೋ ನೋಡಿ ತೊಂಬಾ ಖುಷಿಯಾಯ್ತು ಎಂದು ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ.

    ತಂದೆ ತಾಯಿಗೆ ನಾನು ಕನ್ನಡದ ಕೋಟ್ಯಧಿಪತಿಯಲ್ಲಿ ಗೆದ್ದಿದ್ದು ಸಂತೋಷವಾಗಿದೆ. ಆದರೆ ದುಡ್ಡು ಗೆದ್ದಿದ್ದೀಯಾ ಅಂತ ಗರ್ವ ಪಡಬೇಡ, ಓದುವುದರ ಬಗ್ಗೆ ಗಮನಕೊಡು ಎಂದು ಹೇಳಿದ್ದಾರೆ. ನನ್ನ ಸ್ನೇಹಿತರು ಕೂಡ ತುಂಬಾ ಖುಷಿಪಟ್ಟಿದ್ದಾರೆ. ಪ್ರತಿ ವರ್ಷ ನಮ್ಮ ಶಾಲೆಯಲ್ಲಿ ಪರಿಸರ ದಿನದಂದು ಅತಿಥಿಗಳನ್ನು ಕರೆಸಿ ಕಾರ್ಯಕ್ರಮ ಮಾಡುತ್ತಾರೆ. ಆಗ ಎಲ್ಲರೂ ಸೇರಿ ಶಾಲೆಯ ಸುತ್ತ ಗಿಡಗಳನ್ನು ನೆಡುತ್ತೇವೆ. ಆದರೆ ದನಕರುಗಳು ಗಿಡಗಳನ್ನು ತಿಂದು ಹಾಳು ಮಾಡುತ್ತೆ. ಈ ಬಾರಿ ಬಾದಾಮಿ ಗಿಡ ನೆಟ್ಟಿದ್ದೇವು, ಒಂದೂ ಉಳಿದಿಲ್ಲ. ಆದರೆ ಕಾಂಪೌಂಡ್ ಕಟ್ಟಿದರೆ ಗಿಡಗಳು ಉಳಿಯುತ್ತೆ. ಹೀಗಾಗಿ ಶಾಲೆಗೆ ಕಾಂಪೌಂಡ್ ಕಟ್ಟಿಸಲು ಸಹಾಯ ಮಾಡುತ್ತಿದ್ದೇನೆ ಎಂದು ತೇಜಸ್ ತಿಳಿಸಿದ್ದಾನೆ.

  • ಕನ್ನಡದ ಕೋಟ್ಯಧಿಪತಿ ನಡೆಸಲು ಕಾರಣ ಬಿಚ್ಚಿಟ್ಟ ಪವರ್ ಸ್ಟಾರ್

    ಕನ್ನಡದ ಕೋಟ್ಯಧಿಪತಿ ನಡೆಸಲು ಕಾರಣ ಬಿಚ್ಚಿಟ್ಟ ಪವರ್ ಸ್ಟಾರ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕನ್ನಡದ ಕೋಟ್ಯಧಿಪತಿ ನಡೆಸಲು ಕಾರಣವೇನು ಎಂಬುದರ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

    ಇದೇ ಶನಿವಾರದಿಂದ ಮತ್ತೊಮ್ಮೆ ವೀಕೆಂಡ್ ಮಸ್ತಿಯನ್ನು ಹೆಚ್ಚಿಸಲು ಪುನೀತ್ ರಾಜ್‍ಕುಮಾರ್ ಕನ್ನಡದ ಕೋಟ್ಯಧಿಪತಿ ಶೋಗೆ ವಾಪಸ್ ಆಗಿದ್ದಾರೆ. ಕೋಟ್ಯಧಿಪತಿ ಶೋ ಈಗ ಮತ್ತೆ ಪುನೀತ್ ಅವರ ಕೈ ಸೇರಿದ್ದು, ಹೊಸ ಹುರುಪಿನೊಂದಿಗೆ ಕಾರ್ಯಕ್ರಮ ನಡೆಸಿಕೊಡಲು ಸಿದ್ಧರಾಗಿದ್ದಾರೆ. ಸಿದ್ಧಾರ್ಥ್ ಬಾಸಾ ನನಗೆ ಈ ಕಾರ್ಯಕ್ರಮಕ್ಕೆ ಸ್ಫೂರ್ತಿ ನೀಡಿದ್ದಾರೆ. ನಾನು ಚಿಕ್ಕವಯಸ್ಸಿನಲ್ಲಿ ಇದ್ದಾಗ ಅವರು ಕ್ವಿಝ್ ಮಾಡುತ್ತಿದ್ದರು. ಅವರನ್ನು ನೋಡಿ ನಾನು ಬೆಳೆದಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ ಎಂದು ಪುನೀತ್ ಹೇಳಿದ್ದಾರೆ.

    ಅಮಿತಾಬ್ ಬಚ್ಚನ್ ರಂತಹ ದಿಗ್ಗಜ ನಟರು ನಡೆಸಿಕೊಟ್ಟ ಕಾರ್ಯಕ್ರಮವನ್ನು ನಾನು ಹೇಗೆ ಮಾಡೋದು ಎಂಬ ಭಯ ನನ್ನ ಕಾಡಿತ್ತು. ಆದರೆ ನನ್ನ ತಾಯಿ ನನಗೆ ಮೊದಲ ಧೈರ್ಯ ನೀಡಿದ್ದರು. ನಿನ್ನಿಂದ ಇದು ಸಾಧ್ಯ ಎಂದು ಮೊದಲು ನನ್ನ ತಾಯಿ ನನಗೆ ಹೇಳಿದರು. ಆ ನಂತರ ನನ್ನ ಸಹೋದರರಾದ ಶಿವಣ್ಣ ಹಾಗೂ ರಾಘಣ್ಣ ಕೂಡ ನನಗೆ ಧೈರ್ಯ ತುಂಬಿದರು. ಅಲ್ಲದೆ ರಾಘಣ್ಣ ಈ ಕಾರ್ಯಕ್ರಮದಲ್ಲೂ ನನ್ನ ಜೊತೆ ಇರ್ತಾರೆ ಎಂದು ಪುನೀತ್ ನೆನೆಪು ಮೆಲುಕು ಹಾಕಿದರು.

    ಈ ಕಾರ್ಯಕ್ರಮದ ಬಗ್ಗೆ ತುಂಬಾ ಕ್ಯೂರೆಸ್ ಆಗಿರುವ ಪುನೀತ್, ಒಬ್ಬ ಆ್ಯಂಕರ್ ಆಗಿ ಯಾವ ಆ್ಯಂಕರ್ ಇಷ್ಟ ಎಂಬ ಮಾತನ್ನು ಹಂಚಿಕೊಂಡಿದ್ದಾರೆ. ರಮೇಶ್ ಅರವಿಂದ್, ಸುದೀಪ್, ಅಕುಲ್ ಬಾಲಾಜಿ, ಅನುಶ್ರೀ, ಸೃಜನ್ ಎಲ್ಲರೂ ಒಳ್ಳೆಯ ಆ್ಯಂಕರ್ ಗಳೇ ಆಗಿದ್ದಾರೆ. ನಾನು ಸುಮಾರು ಕಾರ್ಯಕ್ರಮಗಳನ್ನು ನೋಡುತ್ತೇನೆ. ಬಹಳಷ್ಟು ಆ್ಯಂಕರ್ ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಳ್ಳುತ್ತಾರೆ ಎಂದು ಪುನೀತ್ ತಿಳಿಸಿದ್ದಾರೆ.

  • ಯಶ್, ಗಣೇಶ್ ಬಳಿಕ ಕೋಟ್ಯಧಿಪತಿಗೆ ಮತ್ತೊಬ್ಬ ಸ್ಯಾಂಡಲ್‍ವುಡ್ ಸ್ಟಾರ್

    ಯಶ್, ಗಣೇಶ್ ಬಳಿಕ ಕೋಟ್ಯಧಿಪತಿಗೆ ಮತ್ತೊಬ್ಬ ಸ್ಯಾಂಡಲ್‍ವುಡ್ ಸ್ಟಾರ್

    ಬೆಂಗಳೂರು: ಕನ್ನಡದ ಕೋಟ್ಯಧಿಪತಿ ಶೋಗೆ ಈಗಾಗಲೇ ಸ್ಯಾಂಡಲ್ ವುಡ್ ನಾಯಕರಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಬಂದು ಆಟವಾಡಿ ಹಣ ಗೆದ್ದು ಹೋಗಿದ್ದಾರೆ. ಈಗ ಮೂರನೇ ನಟನಾಗಿ ರಕ್ಷಿತ್ ಶೆಟ್ಟಿ ಆಗಮಿಸುತ್ತಿದ್ದಾರೆ.

    `ಕನ್ನಡದ ಕೋಟ್ಯಧಿಪತಿ’ 3ನೇ ಆವೃತ್ತಿಯಲ್ಲಿ ಸೆಲೆಬ್ರಿಟಿಗಳಿಗಿಂತ ಜನಸಾಮಾನ್ಯರಿಗೆ ಹೆಚ್ಚು ಅವಕಾಶ ಮಾಡಿಕೊಡಲಾಗಿತ್ತಿದೆ. ಇಲ್ಲಿಯವರೆಗೂ ಈ ಶೋನಲ್ಲಿ ಯಶ್ ಮತ್ತು ಗಣೇಶ್ ಕೇವಲ ಇಬ್ಬರು ನಟರು ಮಾತ್ರ ಭಾಗವಹಿಸಿದ್ದಾರೆ.

    `ಕನ್ನಡದ ಕೋಟ್ಯಧಿಪತಿ’ ಶೋ ಆರಂಭವಾಗಿ 50 ಸಂಚಿಕೆಯನ್ನು ಪೂರೈಸುತ್ತಿದೆ. ಆದ್ದರಿಂದ ಈ ವಿಶೇಷ ಸಂದರ್ಭದಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಸ್ಪರ್ಧಿಯಾಗಿ ಶೋಗೆ ಬರಲಿದ್ದಾರೆ. ಈಗಾಗಲೇ ಕನ್ನಡದ ಕೋಟ್ಯಧಿಪತಿ ಶೋಗೆ ರಕ್ಷಿತ್ ಶೆಟ್ಟಿ ಸ್ಪರ್ಧಿಯಾಗಿ ಬಂದಿರುವ ಪ್ರೋಮೋ ಪ್ರಸಾರವಾಗುತ್ತಿದೆ. ಆದ್ದರಿಂದ ಈ ಸಂಚಿಕೆ ವಾರತ್ಯಂದಲ್ಲಿ ಪ್ರಸಾರವಾಗಬಹುದು.

    ಈ ಹಿಂದೆ ಕನ್ನಡದ ಕೋಟ್ಯಧಿಪತಿಗೆ ಮೊದಲು ಗಣೇಶ್ ಬಂದು 12.5 ಲಕ್ಷ ರೂ. ಗೆದ್ದಿದ್ದರು. ನಂತರ ಯಶ್ ಬಂದು 25 ಲಕ್ಷ ರೂ. ಗೆದ್ದುಕೊಂಡು ಹೋಗಿದ್ದರು. ಈ ಶೋ ಖಾಸಗಿ ವಾಹಿನಿಯಲ್ಲಿ ವಾರದ 5 ದಿನಗಳು ಮಾತ್ರ ಒಂದು ಗಂಟೆಯ ಸಮಯ ಪ್ರಸಾರವಾಗುತ್ತದೆ. ನಟ ರಮೇಶ್ ಅರವಿಂದ್ ಈ ಶೋ ನಿರೂಪಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ಅಜ್ಜಿ ಆಗೋದು ಯಾವಾಗ: ತಾಯಿ ಕೇಳಿದ ಪ್ರಶ್ನೆಗೆ ನಕ್ಕು ಉತ್ತರ ಕೊಟ್ಟ ಯಶ್

    ನಾನು ಅಜ್ಜಿ ಆಗೋದು ಯಾವಾಗ: ತಾಯಿ ಕೇಳಿದ ಪ್ರಶ್ನೆಗೆ ನಕ್ಕು ಉತ್ತರ ಕೊಟ್ಟ ಯಶ್

    ಬೆಂಗಳೂರು: ನಾನು ಅಜ್ಜಿ ಆಗೋದು ಯಾವಾಗ ಎಂದು ತಾಯಿ ಕೇಳಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್ `ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಶೀಘ್ರದಲ್ಲೇ ಎಂದು ನಕ್ಕು ಉತ್ತರ ಕೊಟ್ಟಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಟ ರಮೇಶ್ ಅರವಿಂದ್ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿಗೆ ಅತಿಥಿಯಾಗಿ ಯಶ್ ಆಗಮಿಸಿದ್ದರು. ಈ ಶೋನಲ್ಲಿ ಯಶ್ ಉತ್ತಮವಾಗಿ ಆಟವಾಡಿ ಕೊನೆಗೆ 25 ಲಕ್ಷ ರೂ. ಹಣವನ್ನು ಗೆದ್ದುಕೊಂಡು ಹೋಗಿದ್ದಾರೆ. ಆದರೆ ಯಶ್ ಅವರ ಆಟಕ್ಕಿಂತ ಈ ಕಾರ್ಯಕ್ರಮದಲ್ಲಿ ಅವರು ತಾಯಿ ಕೇಳಿದ ಪ್ರಶ್ನೆಯೇ ಎಲ್ಲರ ಗಮನವನ್ನು ಸೆಳೆದಿದೆ.

    ಈ ಕಾರ್ಯಕ್ರಮದಲ್ಲಿ ಆಟದ ಮಧ್ಯೆ ಯಶ್ ಅವರಿಗೆ ಅವರ ಕುಟುಂಬದವರು ವಿಡಿಯೋ ಕಾಲ್ ಮೂಲಕ ಒಂದೊಂದು ಪ್ರಶ್ನೆ ಕೇಳುತ್ತಿದ್ದರು. ಮೊದಲು ಅವರ ತಂದೆ ಪ್ರಶ್ನೆ ಕೇಳಿದ್ದರು. ಅವರ ತಂದೆ ಕೇಳಿದ ಪ್ರಶ್ನೆ ಉತ್ತರ ಕೊಟ್ಟರು. ಬಳಿಕ ಅವರ ತಾಯಿ ಪುಷ್ಪಾ ಅವರು ವಿಡಿಯೋ ಕಾಲ್ ಮಾಡಿ “ನಾನು ತಾಯಿಯಾಗಿ ಅಲ್ಲದೇ ಒಬ್ಬ ಅಭಿಮಾನಿಯಾಗಿ ಕೇಳ್ತಿದ್ದೀನಿ. ನಾನು ಅಜ್ಜಿ ಆಗೋದು ಯಾವಾಗ?” ಎಂದು ಪ್ರಶ್ನೆ ಕೇಳಿದ್ದಾರೆ.

    ಅಮ್ಮನ ಪ್ರಶ್ನೆಗೆ ಯಶ್ ಮೊದಲು ನಕ್ಕು ಬಳಿಕ ಉತ್ತರಿಸಿದ್ದಾರೆ. ನಾನು ಮತ್ತು ರಾಧಿಕಾ ಇಬ್ಬರು ಏಳು ವರ್ಷ ರಿಲೇಷನ್ ಶಿಪ್ ನಲ್ಲಿ ಇದ್ವಿ. ಆಗ ಇಬ್ಬರು ಕಲಾವಿದರಾಗಿದ್ದು, ಸಾರ್ವಜನಿಕವಾಗಿ ಎಲ್ಲಿಯೂ ಓಡಾಡೋಕೆ ಸಾಧ್ಯವಾಗಿಲ್ಲ. ಇಬ್ಬರಿಗೂ ಗೌರವ-ಘನತೆ ಕಾಪಾಡಿಕೊಳ್ಳಬೇಕು ಎಂಬುದು ಮನಸ್ಸಲ್ಲಿತ್ತು. ಆದ್ದರಿಂದ ನಾವು ನಮ್ಮ ಮನೆಯವರ ಜೊತೆ ಇರುತ್ತಿದ್ವಿ. ಮದುವೆಯಾದ ಮೇಲೆ ಎಲ್ಲ ಕಡೆ ಸುತ್ತಾಡೋಣ ಅಂದಕೊಂಡಿದ್ವಿ. ಆದ್ದರಿಂದ ಎರಡು ವರ್ಷ ಮಕ್ಕಳು ಬೇಡ ಎಂದು ನಿರ್ಧಾರ ಮಾಡಿದ್ವಿ. ಈಗ ಮದುವೆ ಆಗಿ ಒಂದುವರೆ ವರ್ಷ ಆಗಿದೆ. ಈಗ ಮನೆಯಲ್ಲಿ, ಸಂಬಂಧಿಕರು ಒತ್ತಡ ಹಾಕುತ್ತಿದ್ದಾರೆ. ನಾನು ಈ ಬಗ್ಗೆ ಎಲ್ಲಿಯೂ ಚರ್ಚೆ ಮಾಡಲು ಇಷ್ಟ ಪಡುವುದಿಲ್ಲ. ನಮ್ಮ ಅಮ್ಮ ಮನೆಯಲ್ಲಿ ಈ ಪ್ರಶ್ನೆ ಕೇಳಿದ್ದರೆ ರೇಗಾಡುತ್ತಿದ್ದೆ. ಸರಿಯಾದ ಜಾಗದಲ್ಲಿಯೇ ಕೇಳಿದ್ದಾರೆ. ಆದಷ್ಟೂ ಬೇಗ ಆಗುತ್ತದೆ. ಸದ್ಯಕ್ಕೆ ಇಷ್ಟೇ ಹೇಳೋದು ಎಂದು ಯಶ್ ಉತ್ತರಿಸಿದ್ದಾರೆ.

    ಯಶ್ ಮತ್ತು ರಾಧಿಕಾ ಮದುವೆ ಆಗಿ ಒಂದೂವರೆ ವರ್ಷ ಆಗಿದೆ. 2016ರ ಡಿಸೆಂಬರ್ 9 ರಂದು ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.