Tag: ಕನ್ನಂಬಾಡಿ

  • ಕನ್ನಂಬಾಡಿ ಶಿಲಾನ್ಯಾಸಲ್ಲಿ ಟಿಪ್ಪು ಹೆಸರು ಬಂದಿದ್ದು ಹೇಗೆ – ಸಂಶೋಧಕರ ಚಿಕ್ಕರಂಗೇಗೌಡ ಹೇಳಿದ್ದು ಏನು?

    ಕನ್ನಂಬಾಡಿ ಶಿಲಾನ್ಯಾಸಲ್ಲಿ ಟಿಪ್ಪು ಹೆಸರು ಬಂದಿದ್ದು ಹೇಗೆ – ಸಂಶೋಧಕರ ಚಿಕ್ಕರಂಗೇಗೌಡ ಹೇಳಿದ್ದು ಏನು?

    ಬೆಂಗಳೂರು: ಕನ್ನಂಬಾಡಿ (Kannambadi Dam) ಕಟ್ಟಲು ಟಿಪ್ಪು ಸುಲ್ತಾನ್ (Tipu Sultan) ಅಡಿಗಲ್ಲು ಹಾಕಿದ್ದರು ಎಂಬ ಸಚಿವ ಮಹದೇವಪ್ಪ (Mahadevappa) ಹೇಳಿಕೆಗೆ ಇತಿಹಾಸ ತಜ್ಞ, ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ (Talakadu Chikkarangegowda) ಬೇಸರ ವ್ಯಕ್ತಪಡಿಸಿದ್ದಾರೆ.

    ಸಚಿವರ ಅಕ್ಕಪಕ್ಕ ಇದ್ದವರು ಸರಿಯಾದ ಮಾಹಿತಿ ನೀಡಿಲ್ಲ. ಸಚಿವರಿಗೆ ಇತಿಹಾಸದ ಬಗ್ಗೆ ಚೆನ್ನಾಗಿ ಗೊತ್ತಿದೆ. ಕನ್ನಂಬಾಡಿಯ ಸಂಪೂರ್ಣ ಕ್ರೆಡಿಟ್ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲಬೇಕು ಎಂದು ಹೇಳಿದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ (Nalwadi Krishnaraja Wadiyar) ಅಣೆಕಟ್ಟು ಕಟ್ಟಲು ಆರ್ಥಿಕ ಸಮಸ್ಯೆ ಬಂದಾಗ ಅವರ ತಾಯಿ, ಪತ್ನಿ ಒಡೆವೆಗಳನ್ನು ಮಾರಿ ನೀರಾವರಿ ಯೋಜನೆಗೆ ಸಹಕರಿಸಿದ್ದರು ಎಂದು ತಿಳಿಸಿದರು.  ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಸಚಿವ ಮಹದೇವಪ್ಪ

     

    ಶಿಲಾನ್ಯಾಸದಲ್ಲಿ ಟಿಪ್ಪು ಹೆಸರು ಯಾಕೆ ಇದೆ ಅಂದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಕ್ಕಿಂತ ಹಿಂದೆ ಟಿಪ್ಪು ಸುಲ್ತಾಲ್‌ಗೆ ಅಣೆಕಟ್ಟು ಕಟ್ಟುವ ಕನಸಿತ್ತು. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಉದಾರತೆಯಿಂದ ಶಿಲಾನ್ಯಾಸದ ಬೋರ್ಡ್‌ಗೆ ಟಿಪ್ಪು ಹೆಸರು ಹಾಕಿಸಿದ್ದರು. ಇದನ್ನೇ ನೋಡಿ ಕೆಲವರು ಕನ್ನಂಬಾಡಿ ಕಟ್ಟಿಸಿದ್ದು ಟಿಪ್ಪು ಅಂದು ಕೊಂಡಿದ್ದಾರೆ ಎಂದು ವಿವರಣೆ ನೀಡಿದರು.

      

  • ಕನ್ನಂಬಾಡಿ ಕಟ್ಟೆ, ಬೇಬಿ ಬೆಟ್ಟದ ಸರಹದ್ದಿನಲ್ಲಿ ಸ್ಪೋಟಕಗಳು ಪತ್ತೆ

    ಕನ್ನಂಬಾಡಿ ಕಟ್ಟೆ, ಬೇಬಿ ಬೆಟ್ಟದ ಸರಹದ್ದಿನಲ್ಲಿ ಸ್ಪೋಟಕಗಳು ಪತ್ತೆ

    ಮಂಡ್ಯ: ಕನ್ನಂಬಾಡಿ ಕಟ್ಟೆ ಹಾಗೂ ಬೇಬಿ ಬೆಟ್ಟದ ಸರಹದ್ದಿನಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಇದನ್ನೂ ಓದಿ: ವಿಕ್ರಾಂತ್ ರೋಣಗಾಗಿ ಕನ್ನಡ ಕಲಿತ ಜಾಕ್ವೆಲಿನ್

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಬರುವ ಕನ್ನಂಬಾಡಿ ಕಟ್ಟೆ ಹಾಗೂ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ನಡುವೆ ಜಿಲೆಟಿನ್ ಕಡ್ಡಿಗಳು ಸೇರಿದಂತೆ ಇತರೆ ಸ್ಪೋಟಕ ವಸ್ತಗುಳು ಪತ್ತೆಯಾಗಿವೆ. ದನ ಮೇಯಿಸಲು ವ್ಯಕ್ತಿಯೊಬ್ಬ ತೆರಳಿದಾಗ ಈ ಸ್ಫೋಟಕ ವಸ್ತುಗಳಿರುವುದ ಪತ್ತೆಯಾಗಿದೆ. ಇದನ್ನೂ ಓದಿ: ತಲೆ ಕೆಳಗಾಗಿ ಚಿತ್ರ ಬಿಡಿಸುವ ಗಂಗಾವತಿಯ ಯುವ ಕಲಾವಿದ

    ಈ ಸ್ಪೋಟಕಗಳನ್ನು ಕಲ್ಲು ಗಣಿಗಾರಿಕೆಗೆ ಉಪಯೋಗಿಸಲಾಗುತ್ತದೆ. ಒಂದಯ ಕಡೆ ಅಧಿಕಾರಿಗಳು ಹಾಗೂ ಗಣಿ ಮಾಲೀಕರು ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಸ್ಪೋಟಕಗಳು ಬಳಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಈ ಸ್ಪೋಟಕಗಳು ಇಲ್ಲಿ ಹೇಗೆ ಬಂತು ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ. ಕನ್ನಂಬಾಡಿ ಕಟ್ಟೆಯ ಸರಹದ್ದಿನಲ್ಲಿ ಇಂತಹ ಸ್ಫೋಟಕ ವಸ್ತಗಳು ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿವೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮವಹಿಸಬೇಕೆಂದು ಸಾರ್ವಜನಿಕರು ಆಗ್ರಹ ಪಡಿಸುತ್ತಿದ್ದಾರೆ. ಈ ಕುರಿತು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.