Tag: ಕಡುಬು

  • ನಾಗರ ಪಂಚಮಿಗೆ ಉತ್ತರ ಕರ್ನಾಟಕದ ಸ್ಪೆಷಲ್‌ ಬೇಯಿಸಿದ ಹೂರಣ ಕಡುಬು ಮಾಡಿ

    ನಾಗರ ಪಂಚಮಿಗೆ ಉತ್ತರ ಕರ್ನಾಟಕದ ಸ್ಪೆಷಲ್‌ ಬೇಯಿಸಿದ ಹೂರಣ ಕಡುಬು ಮಾಡಿ

    ತ್ತರ ಕರ್ನಾಟಕದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ನಾಗರ ಪಂಚಮಿಯೂ ಒಂದು. ಶ್ರಾವಣದ ಜೊತೆಗೆ ನಾಗರಪಂಚಮಿ ಬರುವುದರಿಂದ ಅದರ ಕಳೆ ಇನ್ನಷ್ಟು ಹೆಚ್ಚುತ್ತದೆ.

    ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಬೀದರ್‌, ಕಲಬುರಗಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ನಾಗರ ಪಂಚಮಿಯಂದು ಬೇಯಿಸಿದ ಹೂರಣದ ಕಡುಬು ಮಾಡುವುದು ವಿಶೇಷ. ಇದನ್ನು ದೇವರಿಗೆ ನೈವೇದ್ಯವಾಗಿಯೂ ಅರ್ಪಿಸುತ್ತಾರೆ.

    ಬೇಕಾಗುವ ಪದಾರ್ಥಗಳು:
    ಗೋಧಿ ಹಿಟ್ಟು
    ಕಡಲೆ ಬೆಳೆ
    ಬೆಲ್ಲ
    ಮೆಕ್ಕೆ ಜೋಳದ ಎಲೆ
    ಉಪ್ಪು (ರುಚಿಗೆ ತಕ್ಕಷ್ಟು)

    ಮಾಡುವ ವಿಧಾನ:
    ಮೊದಲಿಗೆ ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಮೆತ್ತಗೆ ಆಗುವವರೆಗೂ ಬೇಯಿಸಿಕೊಳ್ಳಬೇಕು. ಬಳಿಕ ಅದರ ರುಚಿಗನುಸಾರವಾಗಿ ಬೆಲ್ಲವನ್ನು ಹಾಕಿಕೊಳ್ಳಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಬೇಕು. ಅದರ ಮೇಲೆ ಸ್ಟೀಲ್‌ ರಂಧ್ರದ ಜರಡಿಯನ್ನು ಇಟ್ಟುಕೊಂಡು ಅದಕ್ಕೆ ಮೆಕ್ಕೆಜೋಳದ ಎಲೆಯನ್ನು ಹಾಕಿಕೊಳ್ಳಬೇಕು.

    ಬಳಿಕ ಕಡುಬು ಮಾಡುವ ಆಕಾರದಲ್ಲಿ ಚಪಾತಿಯನ್ನು ಮಾಡಿಕೊಂಡು ಅದಕ್ಕೆ ಹೂರಣ ತುಂಬಿಕೊಳ್ಳಬೇಕು. ಬಳಿಕ ಖರ್ಜಿಕಾಯಿ ರೀತಿಯಲ್ಲಿ ಮಾಡಿಕೊಳ್ಳಬೇಕು. ಕೊನೆಗೆ ಪಾತ್ರೆಯಲ್ಲಿಟ್ಟ ನೀರು ಕುದಿಯಲು ಆರಂಭಿಸಿದಾಗ ಮೆಕ್ಕೆಜೋಳದ ಎಲೆ ಮೇಲೆ ಮಾಡಿದ ಕಡುಬು ಹಾಕಿಕೊಂಡು ಅದರ ಮೇಲೆ ಮುಚ್ಚಳ ಮುಚ್ಚಿಕೊಳ್ಳಬೇಕು. 5 ರಿಂದ 9 ನಿಮಿಷದ ಒಳಗೆ ಕಡುಬು ತಯಾರಾಗಿರುತ್ತದೆ.

    ಕಡುಬು ತುಪ್ಪಿನ ಜೊತೆ ಸವಿಯಲು ಚೆನ್ನಾಗಿರುತ್ತದೆ.

  • ಬಿಸಿಬಿಸಿಯಾಗಿ ಅಕ್ಕಿ ಕಡುಬು ಮಾಡಿ ಸವಿಯಿರಿ

    ಬಿಸಿಬಿಸಿಯಾಗಿ ಅಕ್ಕಿ ಕಡುಬು ಮಾಡಿ ಸವಿಯಿರಿ

    ಮುಖ್ಯವಾಗಿ ಕರಾವಳಿ ಭಾಗ ಹಾಗೂ ಮಲೆನಾಡು ಪ್ರದೇಶದಲ್ಲಿ ಈ ಅಕ್ಕಿ ಕಡುಬು ಅತ್ಯಂತ ಫೇಮಸ್. ಪುಂಡಿ, ಉಂಡಿ ಎಂತಲೂ ಕರೆಯಲಾಗುವ ಈ ತಿಂಡಿ ಚಟ್ನಿಯೊಂದಿಗೆ ಸವಿದರೆ ಬೆಳಗ್ಗಿನ ಉಪಾಹಾರಕ್ಕೂ, ನಾನ್‌ವೆಜ್ ಸಾರಿನೊಂದಿಗೆ ಬಾಡೂಟಕ್ಕೂ ಹೊಂದಿಕೆಯಾಗುತ್ತದೆ. ರುಚಿಕರವಾದ ಅಕ್ಕಿ ಕಡುಬು (Rice Ball) ಮಾಡುವ ವಿಧಾನ ಇಲ್ಲಿದೆ. ನೀವೂ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಅಕ್ಕಿ – 2 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – 4 ಕಪ್
    ತುರಿದ ತೆಂಗಿನಕಾಯಿ – ಅರ್ಧ ಕಪ್
    ಜೀರಿಗೆ – 1 ಟೀಸ್ಪೂನ್ ಇದನ್ನೂ ಓದಿ: ಗೋವಾ ಶೈಲಿಯ ಸಿಹಿಯಾದ ಸೂರ್ನೊಲಿ ದೋಸೆ ಟ್ರೈ ಮಾಡಿದ್ದೀರಾ?

    * ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ಬಸಿದು, ಬಿಸಿಲಿನಲ್ಲಿ ಒಣಗಿಸಿಟ್ಟುಕೊಳ್ಳಬೇಕು.
    * ಅಕ್ಕಿಯಲ್ಲಿ ನೀರಿನಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ, ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
    * ಈಗ ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
    * ನೀರು ಸ್ವಲ್ಪ ಬಿಸಿಯಾದ ಬಳಿಕ ಅದಕ್ಕೆ ತೆಂಗಿನ ತುರಿ, ಉಪ್ಪು ಮತ್ತು ಜೀರಿಗೆ ಹಾಕಿ ಕಲಸಿಕೊಳ್ಳಿ.
    * ನೀರು ಕುದಿಯಲು ಬಂದಂತೆ ಪುಡಿ ಮಾಡಿದ ಅಕ್ಕಿಯನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ ಕಲಸಿಕೊಳ್ಳಿ.
    * ಅಕ್ಕಿ ಬೆಂದು, ಉಂಡೆ ಕಟ್ಟುವ ಹದಕ್ಕೆ ಬಂದಮೇಲೆ ಗ್ಯಾಸ್ ಅನ್ನು ಆಫ್ ಮಾಡಿಕೊಳ್ಳಿ.
    * ಹಿಟ್ಟು ಬಿಸಿಯಿರುವಾಗಲೇ ಕಡುಬು ಗಾತ್ರಕ್ಕೆ ಉಂಡೆಗಳನ್ನಾಗಿ ಕಟ್ಟಿಕೊಳ್ಳಿ.
    * ಇದೀಗ ಸ್ಟೀಮರ್‌ನಲ್ಲಿ ಉಂಡೆಗಳನ್ನಿಟ್ಟು, 15-20 ನಿಮಿಷಗಳ ವರೆಗೆ ಬೇಯಿಸಿ.
    * ಇದೀಗ ಅಕ್ಕಿ ಕಡುಬು ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಹೀಗೆ ಮಾಡಿ ಆರೋಗ್ಯಕರ ಹೆಸರು ಬೇಳೆ ದೋಸೆ

    Live Tv
    [brid partner=56869869 player=32851 video=960834 autoplay=true]

  • ಕಾಲಿನಿಂದಲೇ ಕಡುಬು ತಯಾರಿಸಿದ ಬಂಟ್ವಾಳದ ಕೌಶಿಕ್

    ಕಾಲಿನಿಂದಲೇ ಕಡುಬು ತಯಾರಿಸಿದ ಬಂಟ್ವಾಳದ ಕೌಶಿಕ್

    ಮಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಕಾಲಿನಲ್ಲೇ ಬರೆದು ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ವಿದ್ಯಾರ್ಥಿ ಇದೀಗ ಮತ್ತೆ ಸುದ್ದಿಯಾಗಿದ್ದಾನೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೌಶಿಕ್ ಗಣೇಶ ಚತುರ್ಥಿ ದಿನ ತುಳುನಾಡಿನ ವಿಶಿಷ್ಟ ಮತ್ತು ಪ್ರಸಿದ್ಧ ತಿಂಡಿಯಾದ ಕೊಟ್ಟಿಗೆ (ಕಡುಬು) ತಯಾರಿಸಲು ಹಲಸಿನ ಮರದ ಎಲೆಯನ್ನು ಮನೆಯಲ್ಲಿ ತನ್ನ ಕಾಲ ಸಹಾಯದಿಂದಲೇ ಕಟ್ಟಿದ್ದಾನೆ. ಇದೀಗ ಈತನ ಪರಿಶ್ರಮದ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

    ಈತ ಪ್ರತಿ ವರ್ಷ ಅಷ್ಟಮಿ ಹಾಗೂ ಗಣೇಶ ಚತುರ್ಥಿಗೆ ಇದೇ ರೀತಿ ಕಡುಬು ಕಟ್ಟಿತ್ತಿದ್ದ. ಈ ಬಾರಿ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ತನ್ನ ಕಾಲಿನ ಮೂಲಕವೇ ಬರೆದು, ರಾಜ್ಯಾದ್ಯಂತ ಎಲ್ಲರ ಗಮನ ಸೆಳೆದಿದ್ದು ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೌಶಿಕ್ ನನ್ನು ಮನೆಗೆ ಬಂದು ಭೇಟಿ ಮಾಡಿ ಪ್ರಶಂಸಿದ್ದರು. ಮಾತ್ರವಲ್ಲ ಪ್ರಥಮ ಶ್ರೇಣಿಯಲ್ಲಿ ಎಸ್‍ಎಸ್‍ಎಲ್‍ಸಿ ಪಾಸ್ ಆಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದ.

    ಇದೀಗ ಕಾಲಿನಿಂದಲೇ ಕಡುಬು ತಯಾರಿಸಿಯೂ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾನೆ.ಸಾಂಸ್ಕೃತಿಕ, ಕ್ರೀಡೆಗಳಲ್ಲೂ ಮುಂದಿರುವ ಕೌಶಿಕ್ ಎಲ್ಲರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದಾನೆ.